Monday, June 18, 2012

ಹೊಟ್ಟೆ ಪುರಾಣ!

                   

                        ಹೊಟ್ಟೆ
            ಹೊಟ್ಟೆಯ ಸುದ್ದಿ ತೆಗೆವಗಳೇ ಮದಲು ನೆಂಪಪ್ಪದು ಹೊಟ್ಟೆಯ ದೇವರು ಗಣಪ್ಪನ! ಅವಂಗೆ ಮದಲು ಕೈಮುಗುದು ಸುರು ಮಾಡುತ್ತೆ ಹೊಟ್ಟೆ ಸುದ್ದಿಯ. ದೇವರಕ್ಕಳ ಪೈಕಿ ಹೊಟ್ಟೆ ಕಾಂಬದು ಅವಂಗೊಬ್ಬಂಗೇ. ಅವನ ಹೊಟ್ಟೆಯ ಕತೆ ಗೊಂತಿದ್ದನ್ನೇ! ಚೌತಿ ದಿನ ಎಲ್ಲೋಡಿಕ್ಕೂ ಕೊಟ್ಟದರ ತಿಂದು ಹೊಟ್ಟೆ ದೊಡ್ಡ ಆದ್ದು;  ನಡಕ್ಕೋಂಡು ಗೆದ್ದೆ ಹುಣಿಲ್ಲಿ ಹೋಪಗ ಬಿದ್ದದು; ಬಿದ್ದು ಹೊಟ್ಟೆ ಒಡದ್ದು; ಚಂದ್ರ ನೋಡಿ ನೆಗೆ ಮಾಡಿದ್ದು, ಚಂದ್ರಂಗೆ ಶಾಪ ಕೊಟ್ಟದು; ಹೊಟ್ಟೆ ಒಡದ್ದಕ್ಕೆ ಹಾವಿನ ಸೊಂಟಕ್ಕೆ ಸುತ್ಯೊಂಡದು ಹಿಂದೆ ನಡೆದ ಕತೆಯಡೊ. ನಿಜವೋ ಹೇಂಗೆ ಗೊಂತಿಲ್ಲೆ. ಅಂತೂ ಅವನ ಹೊಟ್ಟೆ ದೊಡ್ಡ ಇಪ್ಪ ಕಾರಣವೋ ಎಂತದೋ, ಲಂಬೋದರ ಹೇಳುತ್ತವು. ಆನು ಬರವ ಈ ಸುದ್ದಿಗೆ ಯಾವ ವಿಘ್ನವೂ ಆಗದ್ದ ಹಾಂಗೆ ಅವನೇ ನೋಡಿಗೊಳ್ಳೆಕ್ಕು ಹೇಳಿ  ಬೇಡುಗೊಳ್ಳುತ್ತೆ. .ಎನ್ನ ಹೊಟ್ತೆ ದೊಡ್ಡ ಇದ್ದ ಕಾರಣ ಅಲ್ಲ. ಈಗ ಹೊಟ್ಟೆಯ ಸುದ್ದಿ ತೆಗದ್ದು. ದಾಸರ ಪದಲ್ಲಿ ಹೇಳುತ್ತಲ್ಲದೋ? "ಎಲ್ಲಾರು ಮಾಡುವುದು ಹೊಟ್ಟೆಗಾಗಿ,ತುತ್ತು ಹಿಟ್ಟಿಗಾಗಿ'" ಲೋಕದ ಎಲ್ಲ ಜನಂಗಳುದೆ ಮಾಡುವ ಎಲ್ಲ ಕೆಲಸಂಗಳು ಈ ಹೊಟ್ಟೆಯ ತುಂಬುಸುಲೇ ಅಲ್ಲದೋ? ಗಣಪತಿಯ ದಿನಿಗೇಳಿ ಎಲ್ಲೋರು ಕೊಟ್ಟ ಹಾಂಗೆ  ನಮಗೆಲ್ಲ ಈ ಹೊಟ್ಟೆ ತುಂಬುಸಲೆ ಸಿಕ್ಕಿದರೆ ಆರೂ ಕೆಲಸವೂ ಮಾಡದ್ದೆ ಸುಮ್ಮನೆ ಆರಾಮವಾಗಿ ಕೂರುತ್ತಿತ್ತವು. ಮದಲೊಂದರಿ ಹೊಟ್ಟೆಯ ಪಕ್ಷ ಹೇಳಿ ಒಂದು ಪಕ್ಷ ಇತ್ತಡೊ. ಎಲ್ಲೋರಿಂಗು ಹೊಟ್ಟೆಯ ಬಗ್ಗೆ ಗೊಂತಿದ್ದರುದೆ ಆರುದೆ ಆ ಪಕ್ಷಕ್ಕೆ ಸೇರದ್ದೆ ಓಟಿ ಕೊಡದ್ದೆ ಈಗ ಅ ಪಕ್ಷದ ಹೆಸರೇ ಇಲ್ಲೆ. ಎಲ್ಲ ಜೀವಿಗೊಕ್ಕು ಬದುಕ್ಕೆಕ್ಕಾರೆ ಈ ಹೊಟ್ಟೆ ತುಂಬುಸಿಗೊಳ್ಳೆಕ್ಕು. ಅದರ ತುಂಬುಸುಲೆ ಜನಂಗೊ ಯಾವ ಕೆಲಸ ಮಾಡುಲೂ ಹೇಸುತ್ತವಿಲ್ಲೆ. ಹೇಳುವದು ಎಂತ ಮಾಡಲಿ ಸುಮ್ಮನಿಪ್ಪಲೆ ಹೊಟ್ಟೆ ಬಿಡೆಕ್ಕನ್ನೆ ಹೇಳಿಗೊಳ್ಳುತ್ತವು. ದೂರಿಂಗೆ ಮಾಂತ್ರ ಹೊಟ್ಟೆ. ಈ ಹೊಟ್ಟೆ ತುಂಬುಸಿದರೇ ನಮ್ಮ ರಥ ನಡವದು. ಅನ್ಯಾಯ ಅಧರ್ಮ ಮಾಡುವೋರು ಹೇಳುವದು ಮಾಂತ್ರ ಹೊಟ್ಟೆಯನ್ನೇ ದೂರ್ಯೊಂಡು. ಹೊಟ್ಟೆ ಎಲ್ಲೋರಿಂಗು ಇದ್ದರುದೆ, ಬೇಕಾದರುದೆ ಈ ಹೊಟ್ಟೆ ತುಂಬುಸುಲೆ ಜನಂಗೊ ಬೇಡದ್ದ ಕೆಲಸವನ್ನೂ ಮಾಡ್ಯೊಳ್ಳುತ್ತವು. ಇನ್ನೊಬ್ಬಂಗೆ ತೊಂದರೆ ಕೊಡದ್ದೆ ಎಂತ ಬೇಕಾರು ಮಾಡಲಿ. ಈಗ ನಡವದು ಸಮಾಜಕ್ಕೇ ದ್ರೋಹ. ನಮ್ಮ ಹೊತ್ತಿಪ್ಪ ಭೂಮಾತೆಗೂ ಅನ್ಯಾಯ! ಅಬ್ಬೆಯ ಹೊಟ್ಟೆಯನ್ನೇ ಬಗದು ಅದಿರು ಬೇರೆ ದೇಶಕ್ಕೆ ಕಳುಸಿ ಸಂಪತ್ತು ಹೆಚ್ಚಿಸ್ಯೊಂಬದು, ಮಾತೃ ದ್ರೋಹ ಹೇಳುವದು ಅವಕ್ಕೆ ಗೊಂತಿಲ್ಲೆ! ಈಗಂಗೆ ಸರಿ ಇನ್ನು ಎಷ್ಟು ವರ್ಷ ಹೀಂಗೆ ಗರ್ಪಿ ತೆಗೆವಲಕ್ಕು? ಮತ್ತಾಣೋರಿಂಗೆ  ಅವು ಗರ್ಪಿ ತೆಗವಲೆ ಎಲ್ಲಿಗೆ ಹೋಯೆಕ್ಕು? ಈ ಯೋಚನೆ ಜನಂಗೊಕ್ಕೆ ಇಲ್ಲೆ. ಇಂದು ಕಳುದ್ದು ಎನ್ನ ದಿನ. ನಾಳಂಗೆ ಹೇಂಗೋ ಎಂತದೋ ಯೋಚನೆ ಇಲ್ಲೆ.
                            ಕೆಲವು ಜನ ಹುಟ್ಟುವಗಳೇ ಆಗರ್ಭ ಶ್ರೀಮಂತರಾಗಿದ್ದರೆ ಹೊಟ್ಟೆ ತುಂಬುಸುಲೆ ಯೋಚನೆ ಇಲ್ಲೆ. ಕೂದು ತಿಂದರೂ ಮುಗಿಯದ್ದಷ್ಟು ಇರ್ತು! ಆದರೆ ಬಡವರಾಗಿ ಹುಟ್ಟಿದೋರು ತಿಂಬಲೆ,ಹೊಟ್ಟೆ ತುಂಬುಸುಲೆ ಕಷ್ಟ. ಇದ್ದೋವು ದಿನಾ ದೋಸೆ ಅದು ಇದು ಹೇಳಿ ಬಗೆ ಬಗೆ ತಿಂಡಿಗಳ ಅಬ್ಬೆ ಮಾಡಿಕೊಟ್ಟರೆ ತಿಂದೊಂಡು ಹಾರಿಗೊಂಡು ಇಪ್ಪಲಕ್ಕು. ಈ ಮಕ್ಕಳ ಹೊಟ್ತೆ ತುಂಬುಸುಲೆ ನಾಳಂಗೆ ಎಲ್ಲಿಗೆ ಹೋಪದು? ಆರ ಕೈಕಾಲು ಹಿಡಿವದು ಹೇಳಿ ಯೋಚನೆ ಮಾಡೆಕ್ಕಾದ ಪರಿಸ್ಥಿತಿ ಬಡವರಿಂಗೆ. ಹಳ್ಲಿಗಳಲ್ಲಿ ಅಲ್ಲಿ ಅಲ್ಲಿ ಜಂಬ್ರಂಗೊಕ್ಕೇಲ್ಲ ಹೋದರೆ ಹೊಟ್ಟೆಲ್ಲಿ ಹಿಡ್ಡಿತ್ತಷ್ಟು ತಿಂಬದು.ಮರದಿನ ಎಲ್ಲಿಯೂ ಸಿಕ್ಕದ್ದರೆ ಉಪವಾಸ! ಹೀಂಗಾದರೆಅವು ಎಂತ ಮಾಡೆಕ್ಕು? ಇದರಿಂದಲೇ ಹೇಳಿ ಕಾಣುತ್ತು "ಬೊಳ್ಳದ ಮನಂತಾನಿ ಬೊಟ್ಟೊ" ಹೇಳುವ ಗಾದೆ ಹುಟ್ಟಿದ್ದು.ದೇವರು ಸೃಷ್ಟಿ ಮಾಡುವಗಲೇ ಈ ವ್ಯತ್ಯಾಸ ಮಾಡಿದ್ದು ಹೇಳುತ್ತವು. ಆದರೆ ನಮ್ಮ ಹತ್ತರೆ ಹೆಚ್ಚು ಇಪ್ಪಗ ಇಲ್ಲದ್ದೋರಿಂಗೆ ರಜ ರಜ ಕೊಟ್ಟರೆ ಅವಕ್ಕೂ ಚಿಂತೆ ಇಲ್ಲೆ. ಅವುದೇ ಕಲ್ತು ಮುಂದೆ ಬಕ್ಕು.ಮತ್ತೆಂತಾದರು ಉದ್ಯೋಗ ಮಾಡ್ಯೊಂಡು ಇಪ್ಪಲಕ್ಕು. ಆದರೆ ಹಂಚಿ ತಿಂಬ ಬುದ್ಧಿ ಮನುಷ್ಯಂಗೆ ಬತ್ತಿಲ್ಲೆ ಏಕೆ?ಆನು ವಿದೇಶಲ್ಲಿಪ್ಪಗ ಅಲ್ಲಿ ಕೆಲಸ ಮಾಡ್ಯೊಂದು ಇಪ್ಪ ಮಕ್ಕೊ ಅವರ ಮಕ್ಕಳತ್ರೆ ಹೇಳುವದು ಕೇಳಿದ್ದೆ. "ಪರಸ್ಪರ ಹಂಚಿಗೊಳ್ಳಿ" ಹೇಳಿ ಮಕ್ಕಳ ಒಪ್ಪುಸುವದು ಹಾಂಗೆ ಒಬ್ಬನತ್ರೆ ಇಪ್ಪ ಆಟದ ಸಾಮಾನು ಇನ್ನೊಬ್ಬಂಗೆ ಕೊಡುವದು, ಅವನತ್ರೆ ಇಪ್ಪದರ ಮತ್ತೊಬ್ಬಂಗೆ ಕೊಡುವದು ಹೀಂಗೆಲ್ಲ ಹೊಂದಿಸಿಗೊಳ್ಳುತ್ತವು. ಅವಕ್ಕೆ ಸಣ್ಣಾದಿಪ್ಪಗ ಶಾಲೆಲ್ಲಿಯೂ ಇದರನ್ನೇ ಹೇಳಿಕೊಡುತ್ತವಡೊ. ತಿಂಡಿಯನ್ನೂ ಹಾಂಗೆ ಹಂಚಿಗೊಳ್ಳುತ್ತವು. ಹೀಂಗೆ ಮಾಡ್ಯೊಂಡರೆ ಜಗಳ ಬತ್ತಿಲ್ಲೆ. ಒಂದೇ ಸೈಕಲ್ ಇಪ್ಪದು ಒಂದು ಮನೆಲ್ಲಿ ಹೇಳಿ ಆದರೆ ಒಬ್ಬ ಹತ್ತು ಮಿನಿಟ್ ಮೆಟ್ಟಿ ಆದಮೇಲೆ ಇನ್ನೊಬ್ಬ ಹೇಳಿ ಮನೆಲ್ಲೇ ಇಪ್ಪ ಮಕ್ಕಳೆ ಒಪ್ಪಂದಲ್ಲಿ ಸರಿ ಮಾಡಿಗೊಂಡರೆ ಚರ್ಚೆ ಬಪ್ಪಲಿಲ್ಲೆ. ಮನೆಲ್ಲಿಪ್ಪ ಎಲ್ಲೋರಿಂಗು ಬೇರೆ ಬೇರೆ ತೆಗೆಯಕ್ಕಾದ ಅಗತ್ಯವು ಇಲ್ಲೆ. ಮನೆಲ್ಲೇ ಹೀಂಗೆ ಅಭ್ಯಾಸ ಮಾಡ್ಯೊಂಡರೆ ಆ ಊರಿಲ್ಲಿ, ದೇಶಲ್ಲಿಯೇ ಎಲ್ಲೋರು ಹೊಂದಿ ಬಾಳುಲಕ್ಕು. ದೇವರು ಭೇದ ಮಾಡಿದ ಹೇಳುವದಕ್ಕೆ ಬದಲು ದೇವರು ಕೊಟ್ಟದರ ಹೀಂಗೆ ಹಂಚ್ಯೊಂಡರೆ ಸರಿ ಅಕ್ಕಲ್ಲದೋ? ಅದಲ್ಲ ಇದು ಎನಗೆ ಇಪ್ಪದು. ಎನ್ನ ಅಧಿಕಾರ,ಇಲ್ಲಿ ಆನು ಹೇಳಿದ ಹಾಂಗೆ ಎಲ್ಲೋರು ಕೇಳೆಕ್ಕು. ಈ ಮಾತುಗೊ ಬಂದರೆ ತನ್ನಷ್ಟಕ್ಕೇ ಜಗಳ, ಮತ್ಸರ,ಕೋಪ ಹೀಂಗೆಲ್ಲ ಷಡ್ವೈರಿಗಳ ಒಡನಾಟ ಬತ್ತು. ಇಡೀ ಲೋಕಲ್ಲೇ ಘರ್ಷಣೆ ಉಂಟಾವುತ್ತು.
    ಮೇಲಾಟ,,ಸ್ಪರ್ಧೆ ಎಲ್ಲ ಬಪ್ಪದು ಆನು- ಹೇಳುವ ಅಹಂಕಾರಂದ ಹೇಳಿ ಎನ್ನ ಅಭಿಪ್ರಾಯ. ಹೊಟ್ಟೆ ಇದ್ದು ಹೇಳಿ ಹೆಚ್ಚು ತುಂಬುಸುಲೆ ಹೋದರೆ ಅದಕ್ಕೆ ಇನ್ನು ಸಾಕು ಹೇಳಿ ತೋರುಗೋ? ಮದಲೊಂದು ಮನುಷ್ಯ ಹಡಗು ತುಂಬುಸುಲೆ ಹೋತಡೊ.ಇನ್ನೊಂದು ಮನುಷ್ಯ ಹೊಟ್ಟೆ ತುಂಬುಸುಲೆ ಹೋತಡೊ.ಹಡಗು ತುಂಬುಸುಲೆ ಹೋದ್ದು ಹನಿಯ ದಿನ ಅಪ್ಪಗ ಬಂತಡೊ ಆದರೆ ಹೊಟ್ಟೆ ತುಂಬುಸುಲೆ ಹೋದ್ದು, ಅದಕ್ಕೆ ತುಂಬುಸಿದ ಹಾಂಗ ಖಾಲಿ ಆವುತ್ತಾ ಇದ್ದದರಿಂದ ತುಂಬುಸಿಯೇ ಆಗದ್ದೆ ಇನ್ನೂತುಂಬುಸಿಗೊಂಡೇಇದ್ದಡೋ. ಒಂದು ಮಾತು ಕೇಳಿದ್ದೆ.ತಿಂದಂಗೆ ಕೊದಿ ಹೆಚ್ಚು. ಉಂಡವಂಗೆ ಹಶು ಹೆಚ್ಚು ಹೇಳಿ. ಉಣ್ಣದ್ದೇ ಇದ್ದರುದೆ ಒಂದೆರಡು ದಿನ ಹಶು ಕಟ್ಟಿಗೊಂಡು ಇಪ್ಪಲೆಡಿಗಲ್ಲದೊ. ಹಾಂಗೆ ದಿನಗಟ್ಟಲೆ ಬರೇ ನೀರು ಕುಡುಕ್ಕೊಂಡೂ ಇಪ್ಪಲೆಡಿಗು.
ಹೊಟ್ಟೆ ಸರಿ ಇದ್ದರೆ ಮಾಂತ್ರ ಅದರ ತುಂಬುಸುವ ಯೋಚನೆ ಅದುವೇ ಸರಿಯಿಲ್ಲದ್ದರೆ ಕಷ್ಟ ಅಲ್ಲದೋ? ಊ(ಟ) ಮ(ಮಲಗುವುದು) ಹೇ(ಶೋಧನೆ) ಈ ಮೂರೂ ಸರಿಯಿದ್ದರೆ ಅವ ಆರೋಗ್ಯವಂತ ಹೇಳಿ ಲೆಕ್ಕಡೊ. ನಾಲಗ್ಗೇ ರುಚಿಯಿಲ್ಲದ್ದೆಯೋ ಅಥವಾ ಹೊಟ್ಟೆಲ್ಲಿ ಗೇಸ್ ತುಂಬಿಯೋ ಉಂಬದೇ ಬೇಡ ಹೇಳಿ ತೋರಿದರೆ ಆರೋಗ್ಯ ಸರಿಯಿದ್ದು ಹೇಳಿ ಆತೋ? ಮತ್ತೆ ಮನುಗಿದರೆ ಒರಕ್ಕೇ ಬತ್ತಿಲ್ಲೆ ಹೇಳುವದು, ಏನಾದರೂ ಚಿಂತೆ ತುಂಬ್ಯೊಂಡಿಪ್ಪಗ ಒರಕ್ಕು ಬತ್ತೋ? ಹಾಂಗಾದರೂ ಆರೋಗ್ಯ ಕೈಕೊಟ್ಟ ಹಾಂಗೆ. ಮತ್ತೆ ತಿಂದದು ಜೀರ್ಣ ಆಗಿ ತ್ಯಾಜ್ಯ ಹೆರ ಹೋಗದ್ದರೆ, ಮಲ ಬದ್ಧತೆ, ಮೂಲವ್ಯಾಧಿ, ಹೀಂಗೆ ಮಲ ರೋಗಂಗಳುದೇ ಬಂದರೆ ಕಷ್ಟ! ತಿಂದದು ಜೀರ್ಣ ಆವುತ್ತು, ಒರಕ್ಕು ಸರಿಯಾಗಿ ಇದ್ದು, ಶೋಧನೆ ಸರಿಯಿದ್ದು ಹೇಳಿ ಆದರೆ ಅವನ ಆರೋಗ್ಯ ಸರಿಯಿದ್ದು ಹೇಳಿ ಅಲ್ಲದೋ?ಧಾರಾಳ ಶ್ರೀಮಂತ ಆಗಿದ್ದರು ಆರೋಗ್ಯ ಸರಿಯಿಲ್ಲದ್ದರೆ ಹೇಂಗೆ?  ಶರೀರ ಹೇಳುವದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಂಗೆಲ್ಲ ರೋಗಂಗಳ ಗೂಡಾದರೆ ಮನುಷ್ಯನ ಮನಸ್ಸೇ ಚಿಂತೆಯ ಮನೆಯಾವುತ್ತು. ಹಾಂಗಾದರೆ ಇದೆಲ್ಲ ಹೊಟ್ಟೆಯ ದೋಷಂಗಳಿಂದಲೇ ಬಪ್ಪದಲ್ಲದೋ? ಹೊಟ್ಟೆ ಸರಿ ಇದ್ದರೆ ಅವ ಸರಿ ಇದ್ದ ಹೇಳಿ ಲೆಕ್ಕ. ಇಂದು ಹುಟ್ಟಿದ ಹಿಳ್ಳೆಯೇ ಆಗಲಿ ಹಶು ಅಪ್ಪಗ ಅದಕ್ಕೆ ತಡಕ್ಕೊಂಬಲೆಡಿತ್ತೊ? ರಟ್ಟಿ ರಟ್ಟಿ ಕೂಗುತ್ತು. ಹೊತ್ತು ಹೊತ್ತಿಂಗೆ ಹಾಲು ಕೊಟ್ಟರೆ ಒರಗ್ಯೊಂಡೋ ಮತ್ತೆ ದಿನ ಹೋದ ಹಾಂಗೆ ಆಡ್ಯೊಂಡೋ ಇರುತ್ತು. ಇಡೀ ಶರೀರದ ಆರೋಗ್ಯ ನಿಯಂತ್ರಣ ಇಪ್ಪದು ಹೊಟ್ಟೆಲ್ಲಿ. ರುಚಿ ಆತು ಹೇಳಿ ಲೆಕ್ಕಂದ ಹೆಚ್ಚು ತಿಂದರೆ ಜೀರ್ಣ ಆವುತ್ತೋ? ಹೊತ್ತು ತಪ್ಪುಸಿ ಉಂಡು ತಿಂದು ಮಾಡಿದರೂ ಹಶು ಕೆಡುತ್ತು. ಅಂಬಗ ಹೊಟ್ಟೆಯ ಸರಿ ನೋಡ್ಯೊಂಡರೆ ಎಲ್ಲ ಸರಿ ಆವುತ್ತು. ಅದಕ್ಕೇ ಹಿಂದಾಣೋರು ಒಂದು ಗಾದೆ ಮಾಡಿದ್ದವಲ್ಲದೋ?"ಊಟ ಬಲ್ಲವಂಗೆ ರೋಗವಿಲ್ಲ, ಮತ್ತೆ ಮಾತು ಬಲವಂಗೆ ಜಗಳವಿಲ್ಲ" ಹಾಂಗೆ ನಮ್ಮ ಆರೋಗ್ಯ ನಮ್ಮ ಕೈಲ್ಲಿಯೇ ಇದ್ದು.
                    ಎಲ್ಲೋರು ಶರೀರ ಶಾಸ್ತ್ರ ಓದಿದೋವೇ ಇಪ್ಪದು ಈಗ. ತಿಂದ ಆಹಾರ ಹೊಟ್ಟೆಗೆ ಎತ್ತಿದ ಮೇಲೆ ಎಂತಾವುತ್ತು?ಎಷ್ಟು ಹೊತ್ತು ಅಲ್ಲಿ ಇರುತ್ತು.ಮತ್ತೆ ಮುಂದೆ ಎಲ್ಲಿಗೆ ಹೊವುತ್ತು? ಹೇಳುವದೆಲ್ಲ ಕಲಿವಗಳೇ ಗೊಂತಾವುತ್ತು.ಯಾವುದೇ ಒಂದು ಯಂತ್ರದ ಶಬ್ದ ವ್ಯತ್ಯಾಸಂದಲೇ ಅದು ಇಲ್ಲಿಯೇ ಹಾಳಯಿದು. ಅದಕ್ಕೆ ಈ ಒಂದು ಭಾಗ ತಂದು ಹಾಕಿದರೆ ಸರಿ ಆವುತ್ತು ಹೇಳಿದ ಹಾಂಗೆ.ಹೊಟ್ಟೆಲ್ಲಿಯೂ ಅಪ್ಪ ತಾತ್ಕಾಲಿಕ ವ್ಯತ್ಯಾಸ ತಿಳುಕ್ಕೊಂಡರೆ ಅದಕ್ಕೆ ಅಲ್ಲಲ್ಲಿಗಿಪ್ಪ ಮದ್ದುಗಳ ತೆಕ್ಕೊಂಡರೆ ರೋಗ ಮುಂದುವರಿತ್ತಿಲ್ಲೆ. ಮುಳ್ಳು ತಾಗಿದ ಕೂಡಲೇ ಅದರ ತೆಗದು ಕಾಸಿ ಮಡಿಗಿದರೆ ಅದರಷ್ಟಕ್ಕೆ ಬೇನೇ ಸಾಯುತ್ತು.ಗುಣ ಆವುತ್ತು. ಮುಳ್ಳು ಮಡಗಿ ಮದ್ದು ಕಿಟ್ಟಿದರೆ ಬೇನೆ ಹೋಕೋ? ಈಗ ಐಗಾಡಿಗ ತಿಂದುಗೊಂಡೆ ಇಪ್ಪೋರು ಇದ್ದವು. ಅದಕ್ಕೆ ಹೇಳುತ್ತವು ಗಾಣ ಹಾಕುವದು ಹೇಳಿ. ಃಆಂಗೆ ಗಾಣ ಹಾಕಿಗೊಂಡೆ ಇದ್ದರೆ ನಮ್ಮ ಹೊಟ್ಟೆಯೊಳದಿಕ್ಕಿಪ್ಪ ಯಂತ್ರಕ್ಕೆ ವಿರಾಮವೇ ಇಲ್ಲದ್ದೆ ಆವುತ್ತು. ಅಂಬಗ ಅದುದೇ ಸ್ಟ್ರೈಕ್ ಮಾಡುತ್ತು.ಕೂಡ್ಲೇ ನಮಗೆ ಗೊಂತಾಗದ್ದರೂ ಕೆಲವು ದಿನಲ್ಲಿ ಜ್ವರವೋ,ಅಜೀರ್ಣವೋ ಶುರುವಾಗಿ ಅದೊಂದು ರೋಗವೇ ಆವುತ್ತು.ಹಾಂಗೆ ಅಪ್ಪಲಾಗ ಹೇಳಿಯೇ ಹಿಂದಾಣೋರು ಉಪವಾಸ ಶುರು ಮಾಡಿದವು ನಿಜಕ್ಕಾದರೂ ಇಡೀ ದಿನ ಏಕಾದಶಿಯ ಹಾಂಗೆ ಉಪವಾಸ ಮಾಡಿದರೆ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕಿ ಮತ್ತೆ ಅವರ ಕೆಲಸಲ್ಲಿ ಚುರುಕಾವುತ್ತವು. "ಲಂಘನಂ ಪರಮೌಷಧಂ" ಹೇಳಿರೆ ಹಾರುವದು ಅಲ್ಲ. ಉಪವಾಸ ಕೂಪದು ಹೇಳಿ. ಇಂಗ್ಲಿಷಿಲ್ಲಿ ಹೇಳುತ್ತರೆ ರಿಫ್ರೆಶ್ ಅಪ್ಪದು ಉಪವಾಸ ಇದ್ದರೆ.ಚಾಂದ್ರಾಯಣ ವ್ರತ ಹೇಳಿ ಇದ್ದಡೊ. ಹದಿನೈದು ದಿನ ದಿನಾಗಳುದೇ ತಿಂಬ ಆಹಾರ ರಜ ರಜವೇ ಕಡಮ್ಮೆ ಮಾಡ್ಯೊಂಡು ಹೇಳಿರೆ ಪಾಡ್ಯಕ್ಕೆ ಸುರು ಮಾಡಿದರೆ,ಅಮಾವಾಸ್ಯೆಗೆ ಪೂರ್ತಿ ನಿರಾಹಾರ. ಮತ್ತೆ ರಜ ರಜವೇ ತಿಂಬದರ ಹೆಚ್ಚಿಸಿಗೊಂಡುಹುಣ್ಣಮೆಗಪ್ಪಗ ಹೊಟ್ಟೆ ತುಂಬ ಉಂಬದು.ಅಂಬಗ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕುತ್ತು.ಕೆಲಸ ಸರಿ ಮಾಡುತ್ತವು. ಆರೋಗ್ಯ ಸರಿ ಇರುತ್ತು. ಈಗ ನಾವು ಉಪವಾಸ ಮಾಡುವದಾದರೆ, ಅಕ್ಕಿಯ ಆಹಾರ ತಿಂಬಲಾಗ, ಗೋಧಿದು ಹೊಟ್ತೆ ತುಂಬ ತಿಂಬಲಕ್ಕು ಹೇಳಿ ಮಾಡುತ್ತು. ಪ್ರಯೋಜನ ಇದ್ದೋ? ಉಪವಾಸ ಹೇಳಿರೆ ನಿಜವಾಗಿಯೂ ದೇವರ ಹತ್ತರೆ ಮನೆಲ್ಲೇ ಇಪ್ಪದು. ಎಲ್ಲೆಲ್ಲಿಯಾರೂ ತಿರಿಕ್ಕೊಂಡು ಸಿಕ್ಕಿದ್ದರ ಎಲ್ಲ ತಿಂದರೆ ಉಪವಾಸ ಆವುತ್ತೋ? ನಾವು ಉಂಬದು ಹೇಳಿರೆ ಅದು ಒಂದು ಯಜ್ಞ! ದೇಹಲ್ಲಿಪ್ಪ ಪಂಚ ಪ್ರಾಣಂಗೊಕ್ಕೆ ಪ್ರಾಣಾಹುತಿ ಕೊಡೆಕ್ಕು. ಮತ್ತೆ ಊಟ ಸುರು! ಪ್ರಾಣಯ ಸ್ವಾಹಾ, ಅಪಾನಾಯ ಸ್ವಾಹಾ,ವ್ಯಾನಾಯಸ್ವಾಹಾ,ಉದಾನಯಸ್ವಾಹಾ,ಸಮಾನಾಯಸ್ವಾಹಾ ಹೇಳಿ ಆಹುತಿ ಕೊಟ್ಟ ಮೇಲೆ ಊಟ ಸುರು.ಊಟದ ನಡುಕೆ ಹಾಳು ಹರಟೆ ಮಾತಾಡುವದು, ಅಲ್ಲಿ ಇಲ್ಲಿ ನಡಕ್ಕೊಂಡು ತಿಂಬದು ಎಲ್ಲ ನಾಗರಿಕರಾಗಿಪ್ಪ ನಾವು ಮಾಡಲಾಗ. ಹಾಂಗೆ ಮಾಡಿದರೆ ಪ್ರಾಣಿಗೊಕ್ಕೂ ನಮಗೂ ವ್ಯತ್ಯಾಸ ಇದ್ದೋ?
    ಜನಂಗೊ ಈ ಹೊಟ್ಟೆಗೆ ದೂರು ಹಾಕಿ ಮಾಡುವ ಅನರ್ಥ ಸಾಮಾನ್ಯವೋ? ರಾಶಿ ರಾಶಿ ಕೂಡಿ ಹಾಕುವದು,ಮಕ್ಕೊ ಮರಿಮಕ್ಕೊ ಕೂದು ತಿನ್ನೆಕ್ಕು ಹೇಳಿ ಅಡ್ಡ ದಾರಿಲ್ಲಿ ಸಂಪಾದನೆ ಮಾಡಿ ಮತ್ತೆ ಭ್ರಷ್ಟಾಚಾರ ತುಂಬಿತ್ತಪ್ಪ ಹೇಳಿ ಹೇಳುವದು..ಅಂತೂ ಅನ್ಯಾಯ ಅಧರ್ಮಕ್ಕೆ ಆರೋ ಹೊಣೆ.ತಾನು ಸರಿಯಿದ್ದೇ ಹೇಳುವದು ಎಲ್ಲ ಈ ಹೊಟ್ಟಗೆ ಬೇಕಾಗಿಯೇ ಅಲ್ಲದೋ? ಉಸಿರು ನಿಂದ ಮೇಲೆ ಹೊಟ್ಟೆ ಆರಿಂಗೆ ಬೇಕು? ಗಾಂಧೀಜಿ ಹೇಳಿದ ಹಾಂಗೆ ಅಪರಿಗ್ರಹ ಪಾಲಿಸಿದರೆ ಕೂಡಿ ಹಾಕುವ ಅಭ್ಯಾಸ ರಜ ಕಡಮ್ಮೆ ಮಾಡಿದರೆ ಲೋಕ ಒಳ್ಳೆದಕ್ಕೋ ಏನೋ?ಹೊಟ್ಟೆಯ ಬಗ್ಗೆ ಹೇಳುವಗ ಕೆಲವು ಜನ ಸಿಕಿ ಸಿಕ್ಕಿದ ಕಾಟ್ಮ್ಕೋಟಿಯ ಅಡಿಗಾಡಿಗ ತಿಂದೋಡು ಹೊಟ್ಟೆ ಬೆಳೆಸಿಗೊಳ್ಳುತ್ತವು. ಅದು ಬಿಡೆಕ್ಕು. ಹೊಟ್ಟೆಗೂ ವ್ಯಾಯಾಮ ಬೇಕು. ಇಡೀ ನಮ್ಮ ರಥ ನಡವದೇ ಹೊಟ್ಟೆಂದಾಗಿ . ಹೊಟ್ಟೆಯ ಮಟ್ಟಿಂಗೆ ಜಾಗ್ರತೆ ಎಷ್ಟು ತೆಕ್ಕೊಂಡರು ಸಾಲ. ಹೊಟ್ಟೆ ನಮಗೆ ಹೊರೆಯಲ್ಲ. ಹೊರೆಯಾಗದ್ದ ಹಾಂಗೆ ಹತೋಟಿಲ್ಲಿ ಮಡಿಕ್ಕೊಳ್ಳೆಕ್ಕು. ಕೆಲವು ಜನರ ಹೊಟ್ಟೆ ಆನು ವಿದೇಶಲ್ಲಿ ನೋಡಿದ್ದು.ಅವು ಹೊಟ್ಟೆ ನೆಗ್ಗಿಗೊಂಡು ನಡವಲೇ ಇಲ್ಲೆ. ಎಲ್ಲೋರೂ ವಾಹನಲ್ಲೇ ಹೋಪದಾದರೂ ಎಲ್ಯಾರು ನಡೆಕ್ಕಾರೆ ಬಪ್ಪ ಒದ್ದಾಟ ದೇವರಿಂಗೇ ಪ್ರೀತಿ! ಈ ಹೊಟ್ಟೆ ಬಗ್ಗೆ ಬರದ ಲೇಖನವೂ  ಆ ಹೊಟ್ಟೆ ಗಣಪ್ಪಜ್ಜಂಗೇ ಅರ್ಪಿತ!

                                


                   
        ಹೊಟ್ಟೆ (ಮುಂದುವರುದ್ದು)!
                           
           
   
                            ಹೊಟ್ಟೆ ಮುಂದುವರುದ್ದು ಹೇಳಿರೆ ತಪ್ಪು ಅರ್ಥ ಗ್ರೇಶೆಡಿ.ಹೊಟ್ಟೆಯ ಕುರಿತಾದ ಲೇಖನ ಮುಂದುವರುದ್ದು ಹೇಳಿ. ಹೊಟ್ಟೆ ದೊಡ್ಡ ಅಕ್ಕಷ್ಟೆ ಹೊರತು ಮುಂದುವರಿವಲೆ ಸಾಧ್ಯ ಇದ್ದೋ ನಿಂಗಳೇ ಹೇಳಿ.ಹೊಟ್ಟೆಯ ವಿಷಯಲ್ಲಿ ಬರದಷ್ಟೂ ಮುಗಿಯ. ಕೇಳಿದ್ದೀರೋ? ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಹೇಳುತ್ತವು. ಎಂತಗೆ?ಭೀಮನ ಹೊಟ್ಟೆ ದೊಡ್ಡ ಇದ್ದು. ಅವನ ಹೊಟ್ಟೆ ತುಂಬುಸುಲೆ ಏಕಚಕ್ರಪುರಲ್ಲಿಪ್ಪಗ ತುಂಬ ಕಷ್ಟ ಆಗಿತ್ತಡೊ.ದಿನಾ ಬೇಡಿತಂದ ಆಹಾರವ ಎರಡು ಪಾಲು ಮಾಡಿ ಒಂದು ಪಾಲು ಭೀಮಂಗೇ ಕೊಟ್ಟು ಒಳುದ್ದರ ಒಳುದೋರು ತಿಂದುಗೊಂಡಿತ್ತವಡೊ. ಊರಿನ ಲೆಕ್ಕದ ಬಲಿಯ ಗಾಡಿಲ್ಲಿ ತುಂಬುಸಿಗೊಂಡು ಬಕಾಸುರಂಗೆ ಕೊಡುಲೆ ತೆಕ್ಕೊಂಡು ಹೋಪಗ ಕೊದಿ ತಡೆಯದ್ದ ತಿಂಬಲೆ ಸುರುಮಾಡಿದೋನು, ತಿಂದಡೋ,ತಿಂದಡೋ ಎಷ್ಟು?ಗಾಡಿಲ್ಲಿದ್ದದು ಎಲ್ಲ ಮುಗುತ್ತಡೊ.ಎಷ್ಟೊ ಲೆಕ್ಕ ಹೇಳುತ್ತವು ಕುಟ್ತುಗಲ್ಲಿದ್ದದರ ಎಲ್ಲ ತಿಂದುಗೊಂಡಿಪ್ಪಗ ದೂರಂದ ನೋಡಿದ ರಾಕ್ಷಸ ಹಶು ತಡೆಯದ್ದೆ ಬೊಬ್ಬೆ ಹಾಕಿತ್ತಡೊ.ಬೇಗ ಬಾ ಹೇಳಿತ್ತಡೊ.ಅಂಬಗ ಭೀಮ ನಿಲ್ಲು ಮಾರಾಯ ಇನ್ನು ರಜ ಪಾತ್ರೆಲ್ಲಿ ಹಿಡುಕ್ಕೊಂಡಿದ್ದು ಅದರ ಮುಗುಸೀತೆ. ಮತ್ತೆ ನಿನ್ನತ್ರೆ ಮಾತಾಡುತ್ತೆ ಹೇಳಿದಡೊ.ಅಂಬಗ ಗ್ರೇಶುಲಕ್ಕು ಎಷ್ಟು ದೊಡ್ಡ ಭಿಮನ ಹೊಟ್ಟೆ ಹೇಳಿ. ಅವಂಗೆ ಬೇಡಿ ತಂದದು ಕಾಸಿನ ಮಜ್ಜಿಗೆಯೇ ಅಲ್ಲದೋ? ಮದಲೊಂದು ಹಡಗು ತುಂಬುಸುಲೆ ಹೋದ್ದು ತುಂಬುಸಿಕ್ಕಿ ಬಯಿಂದಡೊ. ಹೊಟ್ಟೆ ತುಂಬುಸುಲೆ ಹೋದ್ದು ಬಯಿಂದಿಲ್ಲೆಡೊ.ಏಕೆ ಕೇಳಿ. ತುಂಬುಸಿದ ಹಾಂಗೆ ಖಾಲಿ ಆವುತ್ತು. ಮತ್ತೆ ತಿಉಂಬುಸೆಕ್ಕು. ಎಲ್ಲಿ ವರೆಗೆ? ಜೀವ ಇಪ್ಪಲ್ಲಿ ವರೆಗೆ. ಆಮ್ಬಗ ತಿಳುದೋರು  ಜ್ಞಾನಿಗೊ  ಹೇಳುತ್ತವು ಬದುಕ್ಕುಲೆ ತಕ್ಕ ತಿನ್ನೆಕ್ಕು ಹೇಳಿ.ಮೃಷ್ಟಾನ್ನ ತಿಂದರುದೇ ಬರೇ ತೆಳಿ ಕುಡುದರುದೇ ಹೊಟ್ಟೆ ತುಂಬುತ್ತು. ಹೊಟ್ಟೆ ಅದರ ಕೇಳುತ್ತಿಲ್ಲೆ. ಎಂತಕೆ ಎನಗೆ ಒಳ್ಳೆ ಊಟ ಕೊಟ್ಟಿದಿಲ್ಲೆ ಹೇಳಿ ಕೇಳುತ್ತೋ? ಒಟ್ಟಾರೆ ಪಸುಂಬೆ ತುಂಬಿದರೆ ಸಾಕು ಅಲ್ಲದೋ?ಅಂಬಗ ನಿಂಗೊ ಕೇಳುವಿ. ಪ್ರಾಣಿಗೊ ಹೊಟ್ತೆ ತುಂಬುಸಿಗೊಳ್ಳುತ್ತ  ಹಾಂಗೆ ನಾವು ತುಂಬುಸುವುದೋ!ಅಲ್ಲಲ್ಲ. ಅಂಬಗ ಬೇಶಿದ್ದರ ತುಂಬುಸಲೂ ಅಕ್ಕು. ನಿನ್ನೆಯಾಣದ್ದೋ,ಮನ್ನೆಯಾಣದ್ದೋ ಹಳಸಿದ್ದರನ್ನೋ ಕೊಳದ ಹಣ್ನನ್ನೋ ತಿಂದರುದೆ ಹೊಟ್ತೆ ತುಂಬುತ್ತು. ಆದರೆ ಈಗ ಫ್ರಿಜಿಲ್ಲಿ ಮಡಗಿದ್ದು ನಾಳೆಯೂ ತಿಂತಿಲ್ಲೆಯೋ ಕೇಳುವಿ. ಪದ್ಮಾಸನ ಹಾಕಿ ಕೂದು ಉಂಬದು ಕ್ರಮ ಪ್ರಕಾರ ಉಂಬದು ಮರ್ಯಾದಿ. ಆದರೆ ನಿತ್ಯಕ್ಕೂ ನಿಂದೊಂಡೋ,ಅತ್ಲಾಗಿ ಇತ್ಲಾಗಿ ನಡಕ್ಕೊಂಡೊ ಅದು ಉಂಬದಲ್ಲ. ಎಂತಾದರೂ ತಿಂಬದು ಹೇಳಿ ಎನ್ನ ಅಭಿಪ್ರಾಯ.ಹೊಟ್ತೆ ತುಂಬುಸುವದೇ.ತಾಳ್ಮೆಂದ ಕೂದುಗೊಂಡು ಭೋಜನ ಕಾಲೇ ಆ ದೇವರ ಮನಸ್ಸಿಲ್ಲೇ ಗ್ರೇಶ್ಯೊಂಡು ಮಾಡುವ ಊಟ ಅದು ಕ್ರಮದ ಊಟ ಹೇಳಿ ಎನ್ನ ಅನಿಸಿಕೆ. ಏನಾದರೂ ಬೇರೆ ಯೋಚನೆಲ್ಲಿ ನೀರು ಕುಡಿವಗ ತೆರಂಬು ಹೋವುತ್ತಿಲ್ಲೆಯೋ? ನಿಂಗಳೇ ಹೇಳಿ.ನಮ್ಮ ಕ್ರಮ ನೋಡಿ ನಮ್ಮ ಮಕ್ಕೊ ಕಲಿತ್ತವು. ಇನ್ನೂ ರಜ ದೂರ ಹೊವುತ್ತವು. ಆಲದ ಮರ ಅಜ್ಜ ನೆಟ್ಟದು ಹೇಳಿ ಸುತ್ತ ಬಪ್ಪದು ಬೇಡ. ಆಲದ ಮರಲ್ಲಿ ತ್ರಿಮೂರ್ತಿಗಳೇ ವಾಸವಾಗಿದ್ದವು ಹೇಳಿ ಗ್ರೇಶ್ಯೊಂಡು ಭಕ್ತಿಂದ ಸುತ್ತ ಬಂದರೆ ರಜ ಹೊತ್ತಾದರು ನಮ್ಮ ಬೇರೆ ಯೋಚನೆಗೆ ಕಡಿವಾಣ ಹಾಕಿದ ಹಾಂಗೇ ಅಲ್ಲದೋ?ಒಬ್ಬ ಊಟ ಆತೋ ಹೇಳಿ ಕೇಳಿದ್ದಕ್ಕೆ ಮುಂಡಾಸು ಮೂವತ್ತು ಮೊಳ ಹೇಳಿದರೆ ಅಕ್ಕೋ? ಊಟ ಮಾಡುವಗ ಬೇರೆ ಯೋಚನೆ ಬಂದರೆ ಉತ್ತರ ಯದ್ವಾ ತದ್ವಾ ಆವುತ್ತು. ಊಟವನ್ನೂ ಸಮಯ ತಪ್ಪಿ ಮಾಡುವದು ಹೇಳಿದರೆ ಒಟ್ಟಾರೆ ಹೊಟ್ಟೆ ತುಂಬುಸಿಗೊಂಬದೇ ಅಲ್ಲದೋ? ಈಗ ಮೇಜಿ ಮೇಲೆ ಕುರ್ಚಿಲ್ಲಿ ಕೂದು ಉಂಬಗಳೂ ಅಷ್ಟೆ ಹೊಟ್ಟೆ ಉದ್ದಿಗೊಂಡು ಏಳೆಡ. ನೆಲಕ್ಕೆ ಕೂದು ಅಪ್ಪಗ ಏಳುಲೂ ಕಷ್ಟ ಹೇಳಿ ಬಕ್ಕು. ಆದರೆ ಆರೋಗ್ಯವಂತ ಆದರೆ ಅವಂಗೆ ಯೋಗಾಸನ  ಗೊಂತಿದ್ದವಂಗೆ ಕಷ್ಟ ಆಗ ಹೇಳಿ ತೋರುತ್ತು. ಪ್ರಾಯ ಆದ ಮೇಲೂ ಚುರುಕಾಗಿ ಇಪ್ಪೋವು ಎಷ್ಟೋ ಜನ ಇದ್ದವು. ಎಲ್ಲ ಅಭ್ಯಾಸ ಬಲ!
            ಸ್ವಾಭಾವಿಕವಗಿ ರಜ ಹೊಟ್ತೆ ದೊಡ್ದ ಇದ್ದರೂ ಅವಕ್ಕೆ ತಿಂಬಲೆ ಹೆಚ್ಚು ಬೇಕಾವುತ್ತಿಲ್ಲೆ. ಮಾಂತ್ರ ಅಲ್ಲ ಅವು ವೇಷ ಹಾಕಿ ಕೊಣಿವಗ ಮಜ ಇತ್ತು. ತಿಂಬ ಶುದ್ದು ಹೇಳುವಗ ಒಂದು ಹಳೆ ಶುದ್ದಿ ನೆಂಪಾತು.ಎಂಗಳ ಊರಿಲ್ಲಿ ಕಪ್ಪಲು ಹೇಳಿ ಒಂದು ಮನುಷ್ಯ ಇತ್ತು. ಎಲ್ಲಿ ಊಟ ಇದ್ದರೂ ದಿನಿಗೇಳಿದರೆ ಬಕ್ಕು. ತಿಂಬ ವಿಷಯಲ್ಲಿ ಅದಕ್ಕೆ ನಾಚಿಕೆ ಇಲ್ಲೆ. ಆ ಮನುಷ್ಯ ಬಂದರೆ ಪುಳ್ಳರುಗೊಕ್ಕೆಲ್ಲ ತಮಾಶೆ.ಊಟಕ್ಕೆ ಕೂದರೆ ಅಶನ,ಸಾಂಬಾರು ಬೇಕಾದಷ್ಟು ತಿಂದಿಕ್ಕಿ,ಮತ್ತೆ ಪಾಯಸ,ಒಂದು ಕವಂಗ ತಂದರೆ ಸಾಲ!ಹಸರು ಪಾಯಸ ಆಯೆಕ್ಕು. ಸರಿಯಾಗಿ ಸೀವು ಇರೆಕ್ಕು. ಎರಡು ಕವಂಗ ತುಂಬ ಆದರೂ ಮುಗಿಗು.ಆದರೆ ಅಲ್ಲಿಂದ ಎದ್ದು ಒಂದು ಕಡೆಲ್ಲಿ ಬಿದ್ದರೆ ಅದಕ್ಕೆ ಲೋಕ ಇಲ್ಲದ್ದ ಒರಕ್ಕು. ಏನಾದರೂ ಹೇಳಿದರೂ ಬೇಜಾರು ಇಲ್ಲೆ.ಈಗಳೋ ಒಂದು ಕವಂಗ ಇನ್ನೂರು ಜನ ಸೇರಿದ ಒಂದು ಹಂತಿಗೆ ಸಾಕು. ತಿಂಬೋತೂ ಇಲ್ಲೆ. ಎಲ್ಲ ಕೇಲಿದರೆ ಎನಗೆ ರಜ ಶುಗರ್ ಇದ್ದು ಹೇಳುತ್ತವು.ಆದರೆ ಹಿಂದಾಣೋರು ಹೆಚ್ಚು ಉಂಬೋರು ಇದ್ದರೂ ಕೆಲಸವು ಮಾಡುಗು.ಈಗಾಣೊವಕ್ಕೆ ಎದ್ದು ಸುತ್ತ ಬಪ್ಪದೇ ಕಷ್ಟ೧ ಒಂದು ಮೈಲು ನಡೆಯಕ್ಕಾರೂ ವಾಹನ ಬೇಕು.ಅದರೆ ನಾವು ಮಕ್ಕೊಗೆ ಪ್ರೀತಿಂದ ಐಸ್ಕೇಂಡಿಯೋ ಬೇರೆ ಕಾಟಂಕೋಟಿಯೋ ತಿಂದುಗೊಳ್ಳಲಿ ಪೈಸೆ ಕೊಟ್ಟರೆ ಅವು ತಿಂದರೂ ಹೊಟ್ಟೆ ಹಾಳಾವುತ್ತಲ್ಲದೋ?ವಸ್ತುಗೊ ಹಾಳಗದ್ದ ಹಾಂಗೆ ಉಪಯೋಗಿಸಿದ ಐಸುದೆ ಅವಕ್ಕೆ ಕಮ್ಮಿಗೆ ಸಿಕ್ಕಿದರೆ ಅದಕ್ಕೆ ಬಣ್ಣ ಹಾಕಿ ಮಾರುತ್ತವಡೊ. ತಿಂದರೆ ಹೊಟ್ಟೆ ಹಾಳವುತ್ತಿಲ್ಲೆಯೋ/ ನಾವುದೆ ಹೋಟೆಲಿಲ್ಲಿ ನಿವೃತ್ತಿ ಇಲ್ಲದ್ದಕ್ಕೆ ಉಣ್ಣೆಕ್ಕಷ್ಟೆ ಹೊರತು ನಿತ್ಯ ಉಂಡರೆ ಹೊಟ್ತೆ ಹಾಳಾವುತ್ತು. ಸೋಡದ ಹೊಡಿಯೋ ಎಲ್ಲ ಉಪಯೋಗುಸುತ್ತವಡೊ.ಬೇರೆ ಕುರು ಕುರು ತಿಂಡಿ ತಿಂಬಲೆ ಕೊಡುವದೂ ಹಾಂಗೆ .ಆನೊಂದು ಮಾಗಜಿನ್ ಓದಿತ್ತಿದ್ದೆ. ದನಗಳ ಚರ್ಬಿಯೂ ಕಮ್ಮಿಗೆ ಸಿಕ್ಕುತ್ತಡೊ.ಅದರಲ್ಲಿಯೂ ಹೊರಿತ್ತವಡೊ.ಒಟ್ಟಾರೆ ಆರೋಗ್ಯ ಹಾಳು. ಮತ್ತೆ ಡಾಕ್ಟ್ರಕ್ಕೊಗೆ ಗಿರಾಕಿ ಬೇಕನ್ನೆ. ಅವು ಕಲ್ತದಕ್ಕೆ ಸಾರ್ಥಕ ಆಯೆಕ್ಕನ್ನೆ. ಅಂತೂ ನಮ್ಮ ಸಂಪಾದನೆಲ್ಲಿ ಎಲ್ಲೋರಿಂಗೂ ಹೀಂಗೆ ಪಾಲು ಕೊಟ್ಟರೂ ಗೇಸ್ ಟ್ರಬ್ಲ್ ಹಾಂಗೇ ಮುಂದುವರಿತ್ತು. ಆನು ಡಾಕ್ಟ್ರಕ್ಕಳ ವಿರೋಧಿ ಅಲ್ಲ! ಹೊಟ್ಟೆಯ ಸಾಂಕುಲೆ ಹೋಗಿ ಮತ್ತೆ ಚಿಂತೆಗೆ ಬೀಳೆಕ್ಕನ್ನೇ ಹೇಳಿ. ಎಂಗೊ ಸಣ್ಣಾದಿಪ್ಪಗ ಹೊಟ್ಟೆ ಹುಳುವಿಂಗೆ ಮದ್ದು ತೆಕ್ಕೊಂಬದಿತ್ತು. ಸಿಕ್ಕಿದ್ದೆಲ್ಲ ತಿಂದು ಜೀರ್ಣ ಆಗದ್ದರೆ ಹುಳು ತುಂಬುತ್ತು. ಮತ್ತೆ ಮದ್ದು ತೆಕ್ಕೊಳ್ಳೆಕ್ಕು. ಒಳ್ಳೆ ಆಹಾರವನ್ನೇ ತೆಕ್ಕೊಂಡರೆ  ಮಕ್ಕೊಗೆ ನಾವು  ಬೇರೆ ತಂದು ಕೊಡುವ ಬೂಸ್ಟ್ ಕೋಂಪ್ಲೇನ್ ಹೀಂಗೆ ತಂದು ಕೊಡೆಕ್ಕಾಗ ಹೇಳಿ ಕಾಣುತ್ತು.
                ಮತ್ತೆ ಕೆಲವು ಜನ ತಿಂಬದರ ಬಗ್ಗೆ ಹೇಳುತ್ತವು "ಅವ ಮೂಗಿನವರೆಗೆ ತಿಂದರೆ ಜೀರ್ಣ ಅಪ್ಪದು ಹೇಂಗೆ? ಕೇಳುತ್ತವು.ಮೂಗಿನ ವರೆಗೆ ತಿಂಬದು ಹೇಂಗೆ ಎನಗೆ ಗೊಂತಿಲ್ಲೆ. ಆದರೆ ಎನ್ನ ಲೆಕ್ಕಲ್ಲಿ ಹೀಂಗೆ ಕಾಣುತ್ತು. ಮೂಗಿನ ಮೂಲಕ ನಾವು ಉಸಿರಾಡುವದು. ಉಸಿರಾಟ ಸರಿಯಿರೆಕ್ಕಲ್ಲದೋ? ಉಸಿರು ತೆಕ್ಕೊಂಬದು,ಬಿಡುವದು ಉಛ್ವಾಸ,ನಿಶ್ವಾಸ ನಡವದು ಮೂಗಿನ ಮೂಲಕ ಆದರೂ ಬಾಯಿಂದ ಮುಂದೆ ಹೋಪದು ಶ್ವಾಸ ಕೋಶಕ್ಕೆ ತಿರುಗುವ ದಾರಿ ವರೆಗೆ ಒಂದೇ ದಾರಿಲ್ಲೇ ಅಲ್ಲದೋ?ಹೊಟ್ಟೆ ತುಂಬಿ ಉಸಿರು ಬಿಡುಲೇ ಕಷ್ಟ ಆದರೆ ಹೇಂಗಕ್ಕು? ಹೊಟ್ಟೆಗೆ ಆಹಾರ ಎತ್ತಿದ ಮೇಲೆಯೂತಿಮ್ದದು ಜೀರ್ಣ ಆಯೆಕ್ಕಾದರೆ ಹೊಟ್ಟೆಯೊಳದಿಕ್ಕೆ ಅದರ ಹೊಟ್ತೆಲ್ಲಿದ್ದ ಆಮ್ಲಂಗಳೊಂದಿಗೆ ಮಿಶ್ರ ಆಯೆಕ್ಕಲ್ಲದೋ? ಅಲ್ಲಿ ತಿರುಗುಲೆ ಜಾಗೆ ಇಲ್ಲದ್ದರೆ ಜೀರ್ಣ ಅಪ್ಪದು ಹೇಂಗೆ? ಅದಕ್ಕೆ ಹಾಂಗೆ ಡಮ್ಮುಕಟ್ಟುವ ಹಾಂಗೆ ತಿಂಬಲಾಗ ಹೇಳಿ ಹಿಂದಾಣೋರು ಹೇಳುಗಷ್ಟೆ.ಎನ್ನ ಲೆಕ್ಕಲ್ಲಿ ಈ ಉಸಿರಾಟ ಪ್ರಕ್ರಿಯೆ ಸರಿಯಾಗಿ ನಡೆಯೆಕ್ಕಾರೆ ಹೊಟ್ಟೆಯ ಸಹಾಯ ಬೇಕು.ಉಸಿರು ಹೆರ ಬಿಡುವಗ ಹೊಟ್ಟೆ ಒತ್ತಿಗೊಳ್ಳೆಕ್ಕಾವುತ್ತು. ಹೊಟ್ಟೆ ತುಂಬಿಗೊಂಡು ಇದ್ದರೆ ಉಸಿರಾಟಕ್ಕೆ ಕಷ್ಟ ಅಕ್ಕು. ಅದಕ್ಕೆ ಹಿಂದಾಣೋರು ಹೇಳಿಗೊಂಡಿದ್ದದು ಇನ್ನೂ ಒಂದು ದೋಸೆ ತಿಂಬಲೆಡಿಗು ಹೇಳಿ ತೋರುವಗಲೇ ತಿಂಬದರ ನಿಲ್ಲುಸೆಕ್ಕು.ಹಾಂಗೆ ಹದ ಹಾಳಿತ ತಿಳುದು ಉಂಡಿ ತಿಂದು ರಜ ವ್ಯಾಯಮವೂ ಮಾಡಿಗೊಂಡಿದ್ದರೆ ಹೊಟ್ಟೆ ನಮ್ಮ ಹತೋಟಿಲ್ಲಿಕ್ಕು ಹೇಳಿ ಎನ್ನ ಅಭಿಪ್ರಾಯ.
            ಮತ್ತೆ ಕೆಲವು ಜನ ಹೇಳುವದಿದ್ದು."ಎಲ್ಲ ಹೊಟ್ಟೆಲ್ಲಿ ಹಾಕಿಗೊಂಡು ಕ್ಷಮಿಸೆಕ್ಕು" ಹೇಳಿ.ಎಂತರ ಇಲ್ಲಿ ಹೊಟ್ಟೆಲ್ಲಿ ಹಾಕೆಕ್ಕಾದ್ದು? ಏನಾದರೂ ಎನ್ನಂದ ತಪ್ಪಾಗಿದ್ದರೆ  ಅದರ ಕ್ಷಮಿಸಿ ತಪ್ಪಿನ ಮನ್ನಿಸೆಕ್ಕು ಹೇಳಿ.ಅಂಬಗ ಈ ಕ್ಷಮೆ ಹೇಳುವದು ಹೊಟ್ಟೆಯೊಳ ಇದ್ದೋ? ಇಲ್ಲಿ ಹೊಟ್ಟೆ ಹೇಳುವದು ಹೃದಯ ಮನಸ್ಸು ಅಲ್ಲದೋ? ಹೊಟ್ಟೆಲ್ಲಿ ಕರುಳು ಇದ್ದು. ಕರುಳ ಪಾಶ ಹೇಳುತ್ತವು. ಅಬ್ಬೆಗೆ ಮಕ್ಕಳತ್ರೆ ಇಪ್ಪ ಪಾಶವನ್ನೇ ಕರುಳ ಪಾಶ ಹೇಳಿ ಇಲ್ಲ್ ಹೇಳುವದು.ಅವಂಗೆ ಆನು ಒಳ್ಲೆದಪ್ಪದು ಇಷ್ಟ ಇಲ್ಲೆ ಹೇಳುತ್ತವು. ಅದರ ಹೊಟ್ಟೆ ಕಿಚ್ಚು ಹೇಳುತ್ತವು.ಇದುದೇ ಹೊಟ್ಟೆಲ್ಲಿಪ್ಪದಲ್ಲ. ಅವನ ಹೊಟ್ಟೆ ತುಂಬ ಕೇಡೇ ತುಂಬಿದ್ದು. ಹಾಂಗೆ ಅವ ಡೊಳ್ಳೊಟ್ಟೆ ಎದ್ದು ಕಾಣುತ್ತು ಹೇಳುತ್ತವು. ಎಲ್ಲ ಮನಸ್ಸು ಕಂಡ ಹಾಂಗೆ ಹೇಳುವದಷ್ಟೆ ಹೊರತು ಹೊಟ್ಟಗೂ ಇದು ಯಾವುದಕ್ಕೂ ಸಂಬಂಧ ಇದ್ದೋ? ಒಬ್ಬ ಬೈವಗ ಸುಮ್ಮನೆ ಕೇಳಿಗೊಂಡಿದ್ದು ಎಂತಾದರೂ ಬಾಯಿ ಒಡದರೆ ಅದಾ ಅವನ ಹೊಟ್ಟೆಲ್ಲಿಪ್ಪದೆಲ್ಲ ಹೆರ ಬತ್ತದಾ ಹೇಳುತ್ತವು.ಎಲ್ಲದಕ್ಕೂ ಎಂತ ಹೇಳಿದರು ಹೊಟ್ಟೆ ಮಾತಾಡುತ್ತಿಲ್ಲೆ. ಮೌನವಾಗಿರುತ್ತು. ಹೊಟ್ಟೆ ಕೆಟ್ಟರೆ ಮಾಂತ್ರ ಕೇಳುವದೇ ಬೇಡ! ಕೆಡದ್ದ ಹಾಂಗೆ ನೋಡ್ಯೊಳ್ಲೆಕ್ಕಾದ್ದು ನಮ್ಮ ಕರ್ತವ್ಯ! ಮತ್ತೆ ಒಬ್ಬನ ನಾವು ಬ್ರಹ್ಮಾಂಡೋದರ ಹೇಳುತ್ತಲ್ಲದೋ? ಇಡೀ ಲೋಕಂಗಳೇ ಅವನ ಹೊಟ್ಟೆಯೊಳದಿಕ್ಕೆ ಇದ್ದಡೋ? ಅದರೂ ಅವನ ಹೊಟ್ಟೆ ದೊಡ್ಡ ಇಲ್ಲೆ.ಆದರೂ ಅವನ ಭಕ್ತಿಂದ ನಂಬಿದರೆ ನಾವು ಮಾಡಿದ ತಪ್ಪುಗಳ ಎಲ್ಲ ಹೊಟ್ಟೆಲ್ಲಿ ಹಾಕಿಗೊಂಡು ನಮ್ಮ ಕ್ಷಮಿಸುತ್ತಡೋ? ಅವನನ್ನೇ ಕೇಳಿಗೊಂಬೋ  ಎಂಗೊಗೆಲ್ಲ ಒಳ್ಳೆದೇಮಾಡಪ್ಪ ನಿನ್ನನ್ನೇ ನಂಬಿದ್ದೆಯೋ ಹೇಳಿ ಕೇಳಿಗೊಂಡು ಹದಕ್ಕೆ ತಿಂದುಗೊಂಡು ಆರೋಗ್ಯವಾಗಿ ಇಪ್ಪೊ. ಅಂತೂ ಈ ಹೊಟ್ಟೆಗೆ ತುಂಬುಸುಲೆ ಆಹಾರ ಮಾಂತ್ರ ಅಲ್ಲ ಬೇರೆ ವಿಷಯಂಗಳೂ ಇದ್ದು ಹೇಳಿ ಆತು.ಭಲೇ ಹೊಟ್ಟೆ.ನಿನಗೆ ನೀನೇ ಸಮ! ಇಷ್ಟಕ್ಕೇ ಮುಗುದ್ದಿಲ್ಲೆ. ಹೊಟ್ಟೆ ಬಾಯಿ ಕಟ್ಟಿಗೊಂಡು ಮಕ್ಕಳ ಸಾಂಕುವೋರೂ ಇದ್ದವನ್ನೇ.ಮಕ್ಕೊಗೆ ಕೇಳಿದ್ದರ ತಿಂಬಲೆ ಕೊಟ್ಟಿಕ್ಕಿ ಉಪಾಸ ಇಪ್ಪ ಅಬ್ಬೆಕ್ಕಳೂ ಇದ್ದವನ್ನೆ.ಅವರ ತ್ಯಾಗ ದೊಡ್ಡದು. ಅವು ತಿಂಬದು ಎಲ್ಲೋರಿಂಗೂ ಆದಮೇಲೆ. ಅ ಹೊತ್ತಿಂಗೆ ಮದಲೆ ತಿಂದಾದ ಮಕ್ಕೊ ಅಲ್ಲಿಗೆ ಓಂಗ್ಯೊಂಡು ಹೋದರೆ ಅವರ ಪಾಲಿಂದ ಮಕ್ಕೊಗೂ ಕೊಡುತ್ತವನ್ನೆ.ಅವಕ್ಕೆ ಬೇಡ ಹೇಳಿ ಅಲ್ಲ. ಅವಕ್ಕೂ ತಿಂಬಲೆ ಆಶೆ ಇದ್ದು. ಆದರೆ ಮಕ್ಕೊಗೆ ತಿಂಬಲೆ ಕೊಡುವ ಆಶೆಯೂ ಇದ್ದು. ಅದರಲ್ಲಿ ಮಕ್ಕೊಗೆ ಕೊಡುವ ದೊಡ್ಡ ಮನಸ್ಸೇ ಹೆಚ್ಚು! ಹಾಂಗಾಗಿ ಅಬ್ಬೆಕ್ಕಳ ತ್ಯಾಗ ದ್ಒಡ್ಡದಲ್ಲದೋ?ಇನ್ನು ಕೆಲವು ಜನ ಇದ್ದವಡೊ. ಮಕ್ಕಳ ಕದ್ದೊಂಡು ಹೋಗಿ ಕೈಕಾಲು ಎಲ್ಲ ಊನ ಮಾಡಿ ಮಾರ್ಗದ ಕರೆಲ್ಲಿ ಬೇಡುಲೆ ಮನುಶಿಕ್ಕಿ ಹೋಪದು. ಅದು ಹೊಟ್ಟೆ ಪಾಡಿಂಗಲ್ಲ. ಅದು ಹಂಕಾರಂದ ಜನಂಗಳ ಮೋಸ ಮಾಡಿ ಪೈಸೆ ಮಾಡುಲಿಪ್ಪ ಬುದ್ಧಿವಂತಿಕೆ. ಆದರೆ ಅ ಮಕ್ಕಳ ನೋಡುವಗ ಪಾಪನೆ ಕಾಣುತ್ತು. ಪೈಸೆಗೆ ಬೇಕಾಗಿ ಮನುಷ್ಯ ಎಂತದೂ ಮಾಡುತ್ತ.ವಲ್ಲದೋ? ಅಂಥವಕ್ಕೆ ನಾಳೆಯಾಣ ಯೋಚನೆ ಇಲ್ಲೆ. ಎಲ್ಲ ಅವನ ಲೀಲೆಗೊ. ಅವಂಗೇ ಗೊಂತು ಎಲ್ಲ. ನಾವು ಚಿಂತೆ ಮಾಡಿ ಪ್ರಯೋಜನ ಇದ್ದೋ? ಮಾಡಿದ್ದುಣ್ಣೋ ಮಹರಾಯ ಹೇಳಿ. ಅವು ಅವು ಮಾಡಿದ್ದರ ಅವವು ತಿಂತವು. ಅಷ್ಟಕ್ಕೇ ಬಿಡುವೊ. ಲೋಕದ ಡೊಂಕಿನ ತಿದ್ದಲೆಡಿಗೋ? ಎಲ್ಲಿ ಓರೆ ಕೋರೆಗೊ ಇದ್ದೊ ಅದರೆಲ್ಲ ಲೋಕ ಸೃಷ್ಟಿ ಮಾಡಿದೋನೇ ಸರಿಮಾಡಲಿ

                       
   

              

No comments:

Post a Comment