ಶೃಂಗೇರಿ ದೇವಾಲಯ-ಅಮೇರಿಕಾದಲ್ಲಿ
ಅಮೇರಿಕಾದ ಪ್ರವಾಸದಲ್ಲಿದ್ದಾಗ
ಫಿಲಡೆಲ್ಫಿಯಾದಲ್ಲಿರುವ ನನ್ನ ಸಣ್ಣ ಮಗನ ಮನೆಯಲ್ಲಿದ್ದೆ. ಆ ಪರಿಸರದಲ್ಲಿದ್ದ
ನನ್ನ ಮಗನ
ಗೆಳೆಯರೂ ನನಗೂ
ಗೆಳೆಯರಾಗಿದ್ದರು. ನಮ್ಮಿಬ್ಬರನ್ನು ಅಲ್ಲಿದ್ದವರೆಲ್ಲ ಅಂಕ್ಲ್ ಎಂದೂ ನನ್ನವಳನ್ನು ಆಂಟೀ ಎಂದು ತುಂಬ ಹಚ್ಚಿಕೊಂಡಿದ್ದರು. ಅದರಲ್ಲೂ ಕೆಲವರು ಅವರ ಸ್ವಂತ ಮನೆಯ ಹಿರಿಯರಂತೆಯೇ ಗೌರವಿಸುತ್ತಿದ್ದರು.ಕನ್ನಡಿಗರಾದುದರಿಂದ ನಮಗೂ ಅವರ ಒಡನಾಟದಿಂದ ಊರನ್ನೇ ಮರೆತುಹೋದಂತಿತ್ತು. ಅವರಲ್ಲಿ ಒಬ್ಬರು ಬೆಂಗಳೂರಿನವರೊಬ್ಬರು ಎರಡು ವರ್ಷ ಪ್ರಾಯದ ತಮ್ಮ ಮಗನಿಗೆ ಧಾರ್ಮಿಕ ವಿಧಿಯಂತೆ ಚೌಲ ಕರ್ಮವನ್ನು ಮಾಡಿಸಬೇಕಿತ್ತು.
ಎರಡು ತಿಂಗಳ ಹಿಂದೆ ಊರಿಗೆ ಹೋಗಿದ್ದರೂ ಸರಿಯಾದ ಮುಹೂರ್ತ ಸಿಗದೆ ಊರಿನಲ್ಲಿ ಕಾರ್ಯಕ್ರಮ ನೆರವೇರಿಸಲಾಗಿರಲಿಲ್ಲ. ಇಲ್ಲಿಗೆ ಬಂದ ಮೇಲೆ ಅವರ ಹಿರಿಯರು ಮುಹೂರ್ತ ನೋಡಿ ಜೂನ್ ಒಂದನೇ ತಾರೀಕಿಗೆ ಯೋಗ್ಯ ಮುಹೂರ್ತವಿದೆಯೆಂದಿದ್ದರಂತೆ.
ಇಲ್ಲಿ ಅಂತಹ
ಕಾರ್ಯಕ್ರಮಗಳನ್ನು ೭೦ ಮೈಲು ದೂರದ ಶೃಂಗೇರಿ ದೇವಾಲಯದಲ್ಲಿ ಮಾಡಿಸುತ್ತಾರೆ ಎಂಬುದನ್ನು ತಿಳಿದ ಅವರು ದೇವಾಲಯಕ್ಕೆ ಹೋಗಿದಿನ ಗೊತ್ತು ಮಾಡಿ ಒಂದನೇ ತಾರೀಕು ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಬರುತ್ತೇವೆ ಎಂದು ಹೇಳಿ ಪೂಜೆಗೆ ಬೇಕಾದ ಸಾಧನಗಳ ಪಟ್ಟಿಯನ್ನು ಪುರೋಹಿತರಿಂದ ಮಾಡಿಸಿಕೊಂಡು ಬಂದಿದ್ದರು.
ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗುವಾಗ ಗುರು ಹಿರಿಯರನ್ನು ನಮಸ್ಕರಿಸಿ ಆಶೀರ್ವಾದ ಪಡೆಯುವುದು ಹಿಂದೂ ಸಂಪ್ರದಾಯ.
ಕೆಲವರು ಊರು
ದೇಶವನ್ನು ಬಿಟ್ಟು ಕೆಲಸಕ್ಕಾಗಿ ದೂರ ಬಂದಿದ್ದರೂ ಧಾರ್ಮಿಕ ಕಟ್ಟಳೆಗಳನ್ನು, ಸಂಪ್ರದಾಯವನ್ನು ಬಿಟ್ಟುಕೊಡುವುದಿಲ್ಲ. ಮುಂದಿನ ಪೀಳಿಗೆಗೆ ಇದು ಅಗತ್ಯವೂ ಹೌದು.
ಹಾಗೆ ಪುರೋಹಿತರು ಹಿರಿಯರನ್ನು
ಕರಕೊಂಡು ಬರಬೇಕೆಂದು ಹೇಳಿದ್ದಕ್ಕೆ
ಇಲ್ಲಿ ಅವರ
ಹಿರಿಯರು ಯಾರೂ
ಇಲ್ಲ. ಹಿರಿಯರ ಸ್ಥಾನದಲ್ಲಿ
ನೀವು ನಮ್ಮೊಂದಿಗೆ ಬರಬೇಕೆಂದು
ಕೇಳಿಕೊಂಡಾಗ ಒಪ್ಪಿದುದರಲ್ಲಿ ನಮ್ಮ ಸ್ವಾರ್ಥವೂ ಇತ್ತು. ಅಮಗೊಮ್ಮೆ ದೂರದ ದೇವಾಲಯಕ್ಕೆ ಹೋಗುವ ಪುಕ್ಕಟೆ ಅನುಕೂಲ ಸಿಕ್ಕಿತಲ್ಲ ಎಂದು ಸಂತೋಷದಿಂದ ಒಪ್ಪಿಕೊಂಡೆವು. ಮಗ ಸೊಸೆ ಕೆಲಸಕ್ಕೆ ಹೋದರೆ ಮನೆಯಲ್ಲಿ ನಾವಿಬ್ಬರೇ
ಇರುವುದಲ್ಲವೇ? ಒಂದು
ದಿನದ ತಿರುಗಾಟವು ನಮ್ಮನ್ನು
ನಿದ್ದೆ ಬರುವವನಿಗೆ ಹಾಸಿಗೆಗೆ
ದೂಡಿದಂತಾಯಿತು.ಐದಾರು ತಿಂಗಳ ಹಿಂದೊಮ್ಮೆ ಇದೇ ದೇವಾಲಯಕ್ಕೆ ಮಗ ಕರಕೊಂಡು ಹೋಗಿದ್ದ. ಈ ಪರಿಸರದ ಕನ್ನಡಿಗರು ಇದೇ ದೇವಾಲಯದಲ್ಲಿಯೇ ಚೌತಿ ಹಬ್ಬವನ್ನು ಆಚರಿಸಿದ್ದರು
ಅಂದು ಮಾತ್ರ ರಾತ್ರಿಯಾಗಿತ್ತು. ದೇವಾಲಯದ ಒಳಗೇನೋ ನೋಡಿದ್ದೆವು.ರಾತ್ರೆ ಅಲ್ಲಿಯೇ
ನಮ್ಮ ಊಟವೂ
ಅಲ್ಲೇ ಆಗಿತ್ತು.
ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ಅವರ ಮನೆಯಿಂದ ಹೊರಡುವುದೆಂದೂ,ಮಗ ನಮ್ಮನ್ನು
ಅವರ ಮನೆಗೆ ಬಿಟ್ಟು,ಮತ್ತೆ ಓಫೀಸಿಗೆ
ಹೋಗುವುದೆಂದೂ ನಮ್ಮ ಏರ್ಪಾಡಾಗಿತ್ತು. ಇಬ್ಬರು ಮಕ್ಕಳೂ ಸೇರಿ ಅವರು ನಾಲ್ಕು ಜನ.
ಇನ್ನೊಬ್ಬರು
ಅವರಗೆಳೆಯರ
ವಾಹನದಲ್ಲಿ
ನಾವು
ಹೋಗುವುದು.
ಒಟ್ಟಿಗೆ
೭
ಜನ
ಮೊದಲೆ
ನಿರ್ಣಯಿಸಿದಂತೆ ೮ ಗಂಟೆಗೆ ಹೊರಟೆವು.
ಎರಡು
ಗಂಟೆ
ದಾರಿ.
ಹತ್ತು
ಗಂಟೆಗೆ
ಅಲ್ಲಿ
ತಲಪಿದವರು ಮೊದಲು ದೇವರ ದರ್ಶನಕ್ಕೆ ಹೋದೆವು.
ಈ ಶೃಂಗೇರಿ
ದೇವಾಲಯವನ್ನು ನೋಡಿದಾಗ ಮಲೆನಾಡಿನ ಸೊಬಗಿನ
ಐಸಿರಿ....ಶೃಂಗೇರಿ
ಎಂಬೊಂದು
ಹಾಡಿನ
ನೆನಪಾಗುತ್ತದೆ.ಟೊರೊಂಟೋದಲ್ಲಿಯೂ
ಶೃಂಗೇರಿ
ಮಠದಿಂದ
ಬರುವ
ಪುರೋಹಿತರೇ ಪೂಜೆ ಮಾಡುತ್ತಾರೆ.
ಆ
ಪ್ರದೇಶದ
ಭಾರತೀಯರೂ ಇಲ್ಲಿಯ ದೇವಾಲಯವನ್ನು ಆಗಾಗ ಸಂದರ್ಶಿಸುತ್ತ ಇರುತ್ತಾರೆ ಆಗಾಗ ವಿಧ ವಿಧದ ಕಾರ್ಯಕ್ರಮಗಳು ಹಬ್ಬ ಹರಿದಿನಗಳಂದು ಅಲ್ಲಿ ನಡೆಯುತ್ತದೆ.
ಆದರೆ
ಇಲ್ಲ್ಯ
ವಿಶೇಷವೆಂದರೆ ಭಾರತದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಶಂಕರಾಚಾರ್ಯರಿಂದ
ಸ್ಥಾಪಿತವಾದ ಶೃಂಗೇರಿ ಚತುರಾಮ್ನಾಯ
ಪೀಠವು ಹೇಗೆ
ಶ್ರದ್ಧಾಳುಗಳಿಂದ ಭಜಕ ಮಹಾ ಜನಗಳಿಂದ ಸಂದರ್ಶಿಸಲ್ಪಡುವುದೋ
ಹಾಗೆ ಇಲ್ಲಿಯೂ ಅಮೇರಿಕಾದಲ್ಲಿರುವ
ಭಾರತೀಯರು ಬರುತ್ತಿರುತ್ತಾರಂತೆ.
ದೇವಾಲಯ ಕೂಡಾ
ಎತ್ತರೆತ್ತರವಾಗಿ ಬೆಳೆದ ಮರಗಳಿಂದ
ಕೂಡಿದ ಗೊಂಡಾರಣ್ಯ ಎಂದೇ ಹೇಳಬಹುದು.ಹೀಗೆ ಕಾಡಿನ ಮಧ್ಯದಲ್ಲಿದೆ.
ಆರಂಭವಾಗಿ ಹದಿನೈದು ವರ್ಷಗಳಾದುವಂತೆ. ಆರಂಭಕ್ಕೆ ಇದ್ದ ದೇವಾಲಯ ಇರುವಂತೆಯೇ ಈಗ ಹೊಸ ದೇವಾಲಯ ಭಾರತೀಯ ವಾಸ್ತು ಕ್ರಮದಂತೆ ನಾಲ್ಕು ವರ್ಷಗಳಿಂದ ಇಲ್ಲಿ ಬಂದ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಅನುಕೂಲವಾಗಿ, ಇಲ್ಲಿಯ ಭಾವುಕ ಜನಕ್ಕೆ ಶಾರದಾಂಬೆಯ ಸೇವೆ ಮಾಡಲು ಎಡೆ ಮಾಡಿ ಕೊಟ್ಟಿದೆ.
ಒಮ್ಮೆ ಇಲ್ಲಿಗೆ ಬಂದವರು ಇಲ್ಲಿಯ ಪ್ರಶಾಂತ ವಾತಾವರಣಕ್ಕೆ ಮಾರು ಹೋಗಿರುತ್ತಾರೆ.
ಆಗಾಗ ಬರುತ್ತಿದ್ದರೆ ಮನಸ್ಸಿಗೆ ನೆಮ್ಮದಿಯಾಗುತ್ತದೆ ಎನ್ನುತ್ತಾರೆ ಇಲ್ಲಿಗೆ ಬಂದವರುಸ್ವಲ್ಪ ಎತ್ತರದಲ್ಲಿರುವುದರಿಂದ ಜನರನ್ನು ಕೂಗಿ ಕರೆಯುತ್ತದೆ
ಈ ಮಂದಿರ!
ಎರಡೂ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ಹಳೆಯ ದೇವಾಲಯದಲ್ಲಿ. ಬಂದವರಿಗೆ ಊಟ ಸಿಗುವುದು ಹಳೆಯ ಕಟ್ಟಡದಲ್ಲಿ.
ಹೊಸ ದೇವಾಲಯದ ಒಳಗೆ ಹೋಗುವಾಗಲೇ ಒಂದು ಬದಿಯಲ್ಲಿ ಓಫೀಸ್ .ಇನ್ನೊಂದು ಬದಿಯಲ್ಲಿ ಶೌಚಾಲಯ.ಒಂದು ಮೂಲೆಯ ಕೋಣೆಯಲ್ಲಿ ಪಾದ ರಕ್ಷೆಗಳನ್ನಿಡುವ
ಜಾಗ. ಚಳಿಗಾಲದಲ್ಲಿ ಇದೇ ಕೋಣೆಯಲ್ಲಿ ನಮ್ಮ ಜರ್ಕಿನ್.ಸ್ವೆಟ್ಟರ್ ಗಳನ್ನಿಡುವುದಕ್ಕೆ
ಜಾಗವಿದೆ. ಇಲ್ಲೆಲ್ಲ ಯಾವುದೇ ಧಾರ್ಮಿಕ ಸ್ಥಳಗಳಾಗಲಿ ಅಂಗಡಿಗಳಾಗಲಿ ಶೌಚಾಲಯವಿರಲೇ ಬೇಕು.
ಪರಿಸರ ಮಾಲಿನ್ಯ ನಿಯಂತ್ರಣದಲ್ಲಿ
ಸರಕಾರ ಮುನ್ನೆಚ್ಚರಿಕೆ ವಹಿಸಿ ವ್ಯವಸ್ಥೆಯಿದ್ದರೆ ಮಾತ್ರ ಕಟ್ಟಡಕ್ಕೆ ಒಪ್ಪಿಗೆ ಕೊಡುತ್ತದೆ.ಒಳಗೆ ಹೋದರೆ ಪ್ರಧಾನ ದೇವತೆ ಶಾರದಾಂಭಾ ನಡುವೆಯಿದ್ದಾಳೆ
.ಒಂದು ಬದಿಯಲ್ಲಿ ಶಂಕರಾಚಾರ್ಯರ ವಿಗ್ರಹ.
ಇನ್ನೊಂದು ಬದಿಯಲ್ಲಿ ಚಂದ್ರ ಮೌಳೀಶ್ವರನ ಗುಡಿ.. ತೆಂಕು ಬದಿಯಲ್ಲಿ ಗಣಪತಿ,
ಬಡಗು ಬದಿಯಲ್ಲಿ ಆಂಜನೇಯ ,ಈಶಾನ್ಯ ಮೂಲೆಯಲ್ಲಿ ನವಗ್ರಹಗಳ ಬಿಂಬಗಳು ಹೀಗೆ ಭಾರತೀಯ ಶೈಲಿಯಲ್ಲೇ ರಚನೆಯಿತ್ತು. ಮೊದಲ್ಲು ದೇವರ ದರ್ಶನ ವಾಗಿ ಓಫೀಸಿಗೆ ಹೋದಾಗ ಕಾರ್ಯಕ್ರಮದ ಬಗ್ಗೆ ದೇವಸ್ಥಾನದ ಲೆಕ್ಕದ ಹಣ ಕೊಟ್ಟು ರಸೀದಿ ಮಾಡಿಕೊಂಡ ಮೇಲೆ ಹಳೆ ದೇವಾಲಯದ ಕಟ್ಟಡದ ಕಡೆಗೆ ಹೋದೆವು. ಕಾಲ್ನಡೆಯಿಂದ ಹೋದರೆ ೩೦೦ ಮೀಟರ್ ದೂರನಡೆಯಬೇಕು.
ಧಾರ್ಮಿಕ ಕಾರ್ಯಕ್ರಮಗಳನ್ನು ಅಲ್ಲಿಯೇ ನಡೆಸುವರೆಂದು ನಮ್ಮನ್ನು ಅಲ್ಲಿ ಹೋಗಲು ಹೇಳಿದರು.
ಹಳೆ ಮಂದಿರವೂ ಚೆನ್ನಾಗಿದೆ.
ಅಲ್ಲಿ ಒಳಗೆ
ಮಾಳಿಗೆಯಲ್ಲಿ ಮೂರು ವಿಗ್ರಹಗಳಿವೆ. ಶಾರದಾಂಬಾ ಮಧ್ಯದಲ್ಲಿದ್ದರೆ,ಒಂದುಬದಿಯಲ್ಲಿ ಚಂದ್ರಮೌಳೀಶ್ವರ,ಇನ್ನೊಂದು ಬದಿಯಲ್ಲಿ ಗಣಪತಿಯ ವಿಗ್ರಹ ಸ್ವಲ್ಪ ಆಚೆಗೆ ಶಂಕರಾಚಾರ್ಯ್ರ ವಿಗ್ರಹ. ಬೇರೆ ಬೇರೆ ಗುಡಿಗಳಿಲ್ಲ.
ಕಟ್ಟಡದ ಒಂದು
ಭಾಗದಲ್ಲಿ ವಿಶಾಲವ್ದ ಊಟದ ಹಾಲ್.ಅಡಿಗೆ ಹಾಲಿನ ಪಕ್ಕದಲ್ಲಿ ನಿತ್ಯದ ಲೆಕ್ಕದ ಟದ ಕೋಣೆ,
ಹೀಗಿದೆ ರಚನೆ.
ಶೌಚಾಲಯಗಳೂ ಇವೆ.
ಪುರೋಹಿತರು ನಮ್ಮನ್ನು ಕಾಯುತ್ತಿದ್ದರು. ದೇವರ ಮುಂದೆ ಪ್ರಾರ್ಥನೆ ಯಾಗಿ ಫಲ ಸಮರ್ಪಣೆಯಾಯಿತು. ಹಿರಿಯರ ಸ್ಥಾನದಲ್ಲಿ ನಮ್ಮಿಬ್ಬರಿಗೆ ನಮಸ್ಕರಿಸಿ ಆಶೀರ್ವಾದವಾಯಿತು.
ಮತ್ತೆ ವಿಧಿಯಂತೆ ನಾಂದಿ ಪುಣ್ಯಾಹ,ಚೌಲ ಹೋಮ ಮುಗಿದು ಮಗುವಿನ ಕೂದಲಿಗೆ ಕತ್ತರಿಯಿಟ್ಟಾಯಿತು. ಪುರೋಹಿತರು ಶೃಂಗೇರಿಯವರೇ ಆಗಿದ್ದುದರಿಂದ ಎಲ್ಲ ವಿಧಿಯಂತೆ ಕರ್ಮ ಕ್ರಿಯೆಗಳು ಯಥಾ ಸಾಂಗವಾಗಿ ನಡೆದಿತ್ತು. ಮತ್ತೆ ಭೋಜನಾಲಯದಲ್ಲಿ ನಾವು ಒಟ್ಟು ೧೧ ಮಂದಿಗೆ ಹಬ್ಬದೂಟ.
ಗಸಗಸೆ ಪಾಯಸ,
ಗುಲಾಬ್ ಜಾಮೂನ್ ಸ್ವೀಟ್ ನ ಲೆಕ್ಕದ್ದು, ಪಲ್ಯ
ಸಾರು,ಸಾಂಬಾರ್ ಎಲ್ಲ
ರುಚಿ ರುಚಿಯಾಗಿತ್ತು. ಊರಿನಲ್ಲೇ ಸಮಾರಂಭವೊಂದಕ್ಕೆ ಹೋಗಿ ಉಂಡ
ಅನುಭವ.ಊಟವಾದ
ಮೇಲೆ ನಮಗೇನು ಕೆಲಸವಿದೆ. ಒಂದೂವರೆ ಗಂಟೆಗೆಲ್ಲ
ಅಲ್ಲಿಂದ
ಹೊರಟೆವು.ಅಂತೂ ಗೆಳೆಯರೊಬ್ಬರ
ಕೃಪೆಯಿಂದ
ಶಾರದಾಂಬೆಯನ್ನು ಮತ್ತೊಮ್ಮೆ ನೋಡಿದ
ತೃಪ್ತಿ ಸಂತೋಷಗಳಿಂದ
ಹೊರಟೆವು. ದಾರಿಯಲ್ಲಿ ಒಂದು ಆರ್ಷೇಯ
ಗುರುಕುಲವಿದೆ, ಅಲ್ಲಿ ಪುಕ್ಕಟೆ ಚಾ ಕುಡಿದು ಹೋಗುವ
ಎಂದರು ಆ ಗೆಳೆಯರು.ಅದೂ ಸರಿ ಒಮ್ಮೆ ಬಂದುದರಲ್ಲಿ ಎರಡು ಪ್ರವಾಸೀ ಸ್ಥಳಗಳನ್ನು ನೋಡುವ
ಭಾಗ್ಯ
ನಮ್ಮದೆಂದು ಸಂತೋಷ
ಪಟ್ಟೆವು.
ಒಂದು ಹತ್ತು ಮೈಲಿನಷ್ಟು ದೂರದಲ್ಲಿತ್ತು ಈ ಆಶ್ರಮ. ಸುತ್ತು ಮುತ್ತಲೂ ಹತ್ತಾರು ಕೋಟೇಜುಗಳು.ಅಲ್ಲಿಗೆ ಬಂದವರು ನಾಲ್ಕಾರು ದಿವಸ
ಬೇಕಿದ್ದರೂ ನಿಲ್ಲಬಹುದು.ಎಲ್ಲ
ವ್ಯವಸ್ಥೆಯಿದೆ.ದಕ್ಷಿಣಾಮೂರ್ತಿಯ
ದೇಗುಲದ
ಒಳಗೆ ಧ್ಯಾನ ನಿರತರಾಗಲು, ಪ್ರಾಣಾಯಾಮ,
ಯೋಗಾಸನಗಳನ್ನು ಮಾಡಲು ತುಂಬಾ ಜಾಗವಿದೆ. ಮಾನಸಿಕ
ನೆಮ್ಮದಿಗಾಗಿ ಧ್ಯಾನ
ನಿರತರಾಗಿರಲು ಪ್ರಶಾಂತ
ವಾತವರಣ ನಮ್ಮೂರಿನಂತೆ ಮೈಕಾಸುರನ
ಹಾವಳಿ, ಅಥವಾ ಇತರ ಯಾವುದೇ ಶಬ್ದ
ಮಾಲಿನ್ಯಗಳಿಲ್ಲ.
ಧ್ಯಾನಕ್ಕೆ ಯೋಗ್ಯ
ಜಾಗ.ಇನ್ನೋದು ಬದಿಯಲ್ಲಿ ಭೋಜನಶಾಲೆ. ಬಂದವರಿಗೆಲ್ಲಾ ಅನ್ನ
ದಾನವಿದೆಯಂತೆ. ದೇವರ
ದರ್ಶನವಾದ
ಮೇಲೆ ಈಚೆಗೆ ಬರುವಾಗ
ನಮ್ಮನ್ನು ಊಟಕ್ಕೆ ಕರೆದರು. ಊಟ ಬೇಡ ಸ್ವಲ್ಪ
ಕಾಫಿ ಕುಡಿಯುತ್ತೇವೆ ಎಂದು ನಾವೇ ಡಿಕೋಕ್ಷನಿನಿಂದ
ಕಾಫಿ ತಯಾರಿಸಿ ಕುಡಿದೆವು. ತಿನ್ನಲು ಬಿಸ್ಕೆಟ್ ಇತ್ತು. ಒಂದು ಕಡೆ ನೈವೇದ್ಯವಾದ
ಹಣ್ಣುಗಳ
ರಾಶಿಯಿತ್ತು. ಬಂದವರು ಪ್ರಸಾದವೆಂದು ತೆಗೆದುಕೊಳ್ಳುತ್ತಿದ್ದರು. ದಾನಿಗಳು ಕೊಡುವ
ಕೊಡುಗೆಯಿಂದಲೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆಯೆಂದು ಅಲ್ಲಿದ್ದವರೂ ಹೇಳಿದರು. ನಮ್ಮೂರಿನಂತೆ ತಟ್ಟೆಗೆ ಎಷ್ಟು ಹಣ ಬೀಳುತ್ತದೆಯೆಂದು ನೋಡುವುದಿಲ್ಲ. ವಾರದ
ಕೊನೆಗೆ ಹೆಚ್ಚಿನವರು ಬರುವರಂತೆ. ಆಗಾಗ
ಇಂತಹ ಶಿಬಿರಗಳಿಗೆ ಶಿಬಿರಾರ್ಥಿಗಳು ಬರುವರಂತೆ. ಧ್ಯಾನದ,
ಯೋಗದ ಶಿಬಿರಗಳನ್ನು ನಡೆಸುವರಂತೆ . ಅಲ್ಲಿಯ
ಸ್ವಾಮಿಗಳು,ಅಥವಾ ಕೆಲವು ಮೇಧಾವಿಗಳು ಪ್ರವಚನ
ಕೊಡುವರಂತೆ.ಅಂತೂ ನಮಗೆ ದಕ್ಷಿಣಾಮೂರ್ತಿಯನ್ನೂ ನೊಡಿ ಬರುವ
ಸುಯೋಗ
ಒದಗಿ ಬಂದಿತ್ತು. ಭಾಗ್ಯವಶಾತ್ ಒದಗಿದ
ಸಂದರ್ಭದಿಂದ
ಪುಳಕಿತರಾಗಿ ಮನೆಗೆ ಹಿಂತಿರುಗಿದೆವು.
No comments:
Post a Comment