Saturday, April 6, 2013

ಮರ್ಕಟಸ್ಯ ಸುರಾಪಾನಂ, ಮಧ್ಯೇ ವೃಶ್ಚಿಕ ದಂಶನಂ"

                                  "ಮರ್ಕಟಸ್ಯ ಸುರಾಪಾನಂ, ಮಧ್ಯೇ ವೃಶ್ಚಿಕ ದಂಶನಂ"
ಮದಲೇ ಮರ್ಕಟ, ಮಂಗನ ಬುದ್ಧಿ ಅದು ಬಿಡನ್ನೆ! ಸಾಮಾನ್ಯವಾಗಿ  ಮಕ್ಕಳ ಬಗ್ಗೆ ಹೇಳುವಗ "ಮಂಗ ಬುದ್ಧಿ" ಹೇಳಿ ಕೊಂಡಾಟಕ್ಕೂ ಆಗಿಕ್ಕು. ಅಥವಾ ನಿಜಕ್ಕೂ ಹಾಂಗಿಪ್ಪ ಮಕ್ಕಳು ಇದ್ದವು. ಏನಾದರೂ ಪಿಕಲಾಟೆ ಮಾಡದ್ರೆ ಅವಕ್ಕೆ ಹೊತ್ತು ಹೋಗ. ಮಂಗನ ಬುದ್ಧಿ ಹೇಳುವದು ಮುಖ್ಯವಾಗಿ ಎಂತಗೆ ಕೇಳಿದರೆ, ಮರಂದ ಮರಕ್ಕೆ  ಗೆಲ್ಲಿಂದ ಗೆಲ್ಲಿಗೆ ಲಾಗ ಹಾಯ್ಕೊಂಡೇ ಇಪ್ಪದು. ಒಂದೇ ಕಡೆ ನಿಲ್ಲವನ್ನೆ! !ಆಹಾರ ಹುಡುಕ್ಯೊಂಡೂ ಆಗಿಕ್ಕು.ಅಲ್ಲದ್ದರೇ ತೋಟಕ್ಕೆ ಮಂಗಂಗಳ ಗುಂಪು ಲಗ್ಗೆ ಹಾಕಿದರೆ ತೆಂಗಿನ ಮರಂಗಳಲ್ಲಿದ್ದ ಬೊಂಡ ಎಲ್ಲ ಖಾಲಿ ಅಕ್ಕು.ಕಾಡಿನ ಕರೆಲ್ಲಿಪ್ಪ ತೋಟಂಗಳ ಕಾವದು ತುಂಬ ಕಷ್ಟ ಅಪ್ಪನ್ನೆ!ಕೆಲವು ಜನ ನಾಯಿಗಳ ಸಾಂಕುತ್ತವು. ಆದರೆ ನಾಯಿಗೊ ಕೆಳಂದ ಬೊಬ್ಬೆ ಹಾಕಿದರೆ ಮಂಗಗೊಕ್ಕೆ ಗಣ್ಯವೇ ಆವುತ್ತಿಲ್ಲೆ
ಬಾಳಿಕೆಲ್ಲಿ  ಆನು ಸಣ್ಣಾಗಿಪ್ಪಗ ಮಂಗಂಗಳ ಹಾವಳಿ ಜೋರಿತ್ತು. ಒಂದರಿ ಎಂಗಳ ಮೂಲೆಗೆ ದಾಳಿ ಮಾಡಿದರೆ ವಾರಗಟ್ಟಳೆ ನಿಂಗು. ನಿಂಬದೆಲ್ಲಿ! ತೋಟದ ನಡುಕ್ಕೆ  ಬಯಲಿಲ್ಲಿ ಮೇಲಂದ ಕೆಳವರೆಗೆ ನೋಡಿದರೆ ಎರಡು ನಾಗ ಬನ! ದೊಡ್ಡ ದೊಡ್ಡ ಮಂಗೊ ವನಲ್ಲಿತ್ತು ತುಂಬ ಎತ್ತರಕ್ಕೆ ಬೆಳದ್ದರ,ವನದ ಮರ ಆದ ಕಾರಣ ಕಡಿವಲೆ ಆಗಲ್ಲದೋ! ಆ ಮರಂಗಳಲ್ಲಿ ಅವರ ವಾಸ!. ಬೊಂಡ, ಬಾಳೆಕಾಯಿ ಎಂತದೂ ಅಕ್ಕು!ದಾಳಿ ಮುಗುಶಿ ಹೋಪಗ ಎಲ್ಲ ಖಾಲಿ.
ಮಂಗಂಗಳ ಕೊಲ್ಲಲೂ ಕಾನೂನು ಅಡ್ಡಿ ಇದ್ದನ್ನೆ! ವನ್ಯ ಮೃಗಂಗಳ ಕೊಲ್ಲಲಾಗ ಹೇಳುವದು ಪ್ರಾಣಿ ದಯಾಪರರ  ಪ್ರಯತ್ನ ಒಳ್ಳೆದೇ! ಆದರೆ ಬೆಳೆ ನಾಶ ಮಾಡುವದಕ್ಕೆ ಪರಿಹಾರ ಎಂತರ!ಏಳೆಂಟು ಮನೆಗಳ ಪೈಕಿ ಒಂದು ಮನೆಲ್ಲಿ ಕೇಪಿನ ಬೆಡಿ ಇತ್ತು. ಅಪರೂಪಕ್ಕೊಂದರಿ ಅದರ ಶಬ್ದ ಮಾಡುವದು. ಹೆದರಿ ಓಡಿ ಹೋವುತ್ತವು.
ಹಾಂಗೆ ಯಾವಾಗಳೂ ಬೆಡಿ ಕೊಡುತ್ತವೋ?ಒಂದರಿ ಆನೂ ತಂದಿತ್ತಿದ್ದೆ.ಏನೋ ಧೈರ್ಯ ಮಾಡಿ ಹೊಟ್ಟುಸಿದ್ದು ಒಂದು ಮಂಗನ ಬೀಳುಸಿತ್ತು. ಆ ಸರ್ತಿ ಎಂಗಳ ತೋಟಲ್ಲಿ ವಾಸ ಇದ್ದದು ಎರಡೇ ಮಂಗಂಗೊ .ಒಂದು ವಾರ ಕಳುದ ಮತತೆಯೂ ಉಪದ್ರ ತಡೆಯದ್ದೆ ಬೆಡಿ ಬಿಟ್ಟದು. ಅಂಬಗಳೆ ಮರಂಗೊ ಎಲ್ಲ ಖಾಲಿ ಆಯಿದು. ಮರದಿನ ನೋಡೆಕ್ಕು ಮತ್ತೊಂದು ಮಂಗನ ಚೀರಾಟವೂ ಹೆಚ್ಚಿತ್ತು. ಮತ್ತೆ ಉಪದ್ರವೂ ಜೋರಾತು.ಅದಕ್ಕೆ ಮದಲೆ ಎಂಗೊ ಕೋಲಿನ ಹಿಡುದೋ, ಕೊತ್ತಳಿಂಕೆಯ ಬೆಡಿಯ ಹಾಂಗೆ ಮಾಡಿಯೋ ನೋಡಿದ್ದೆಯೊ.ಈ ಸರ್ತಿ ಪ್ರಯೋಜನ ಆಯಿದಿಲ್ಲೆ.ಅಂತೂ ವನದ ಮರಂಗೊ ಅವಕ್ಕೆ ವಾಸ ಸ್ಥಾನ!ಕಡಿವಲೆ ನಿವೃತ್ತಿ ಇಲ್ಲೆ. ಬೇರೆ ಬೇರೆ ಜೋಯಿಸಕ್ಕಳ ಕೈಲಿ ಕೇಳಿ ಆಯಿದು. ಕಡಿವಲೆಡಿಯ ಹೇಳಿಯೇ ಕಂಡಿದು.
       ಮತ್ತೆ ಕೆಲವು ವರ್ಷ ಕಳುದ ಮೇಲೆ ಒಬ್ಬ ಎನಗೆ ಧೈರ್ಯ ಹೇಳಿದ. ಅವನೇ ನಿಂದು ಪ್ರಾರ್ಥನೆ ಮಾಡಿ" ನಿನಗೆ ಒಂದು ಕಟ್ಟೆ ಮಾಡಿ ಕೊಡುತ್ತೆಯೋ" ಹೇಳಿ ನಾಗನ ಕಲ್ಲುಗಳ ಅಂಬಗಳೇ ಜಲಾಧಿವಾಸ ಮಾಡಿ ಆಗಿತ್ತು. ಮತ್ತೆ ಎಂಗಳೇ ಹೇಳಿದರೆ ಮಕ್ಕಳೂ ಆನುದೇ ಕಡುದ ಕಲ್ಲುಗಳ ತಂದು ಮಣ್ಣಿಂದಲೇ ಕಟ್ಟೆ ಕಟ್ಟಿ ಜೀರ್ಣೋದ್ಧಾರ ಮಾಡಿ ಮತ್ತೆ ಕಲ್ಲುಗಳ ಸ್ಥಾಪನೆ ಮಾಡಿ ಆಯಿದು. ಮತ್ತೆ ಮಂಗಂಗಳ ಉಪದ್ರ ಇತ್ತಿಲ್ಲೆ.
              ಅಂತೂ ಅತ್ಲಾಗಿ ಇತ್ಲಾಗಿ ಗೆಲ್ಲಿಂದ ಗೆಲ್ಲಿಂಗೆ ಹಾರ್ಯೊಂಡಿಪ್ಪ ಮಂಗನ ಚಟದ ಹಾಂಗೆ ನಮ್ಮ ಮನಸ್ಸೂ ಚಂಚಲವಾಗಿದ್ದರೆ ಅಂಬಗಂಬಗ ಯೋಚನೆ ಬದಲಾಯ್ಸಿಗೊಂಡಿಕ್ಕು.  ಮಂಗಂಗೆ ಕುಡಿವಲೆ ರಜ ಸುರೆ ಹೇಳಿದರೆ ಮದ್ಯ ಕುಡಿಶಿ ಅಪ್ಪಗ ಒಟ್ಟಿಂಗೆ ಅದೇ ಮಂಗಂಗೆ ಅಕಸ್ಮಾತ್ ಒಂದು ಚೇಳು ಕಚ್ಚಿತ್ತು ಹೇಳಿ ಗ್ರೇಶುವೊ. ಎಂತಕ್ಕು?. ಅದರ ಹಾರಾಟ  ಜೋರಕ್ಕು. ಅಮಲೇರಿದ ಸಮಯಲ್ಲಿ ಕೊಂಬಚ್ಚೇಳು ಕಚ್ಚಿದರೆ ಅಂಬಗ ಅದರ ಅವಸ್ಥೆ ಕೇಳೆಡ. ಆ ಊರು, ಈ ಊರು  ಪಾವೂರು ಪಣಂಬೂರು ಎಲ್ಲ ಕಾಂಬಲೆ ಶುರುವಾಗಿ ಹಾರಾಟ ಚೀರಾಟ ಜೋರಕ್ಕನ್ನೆ! ಅದರನ್ನೇ ಇಲ್ಲಿ ಮೇಲೆ ಹೇಳಿದ ವಾಕ್ಯಲ್ಲಿ ಹೇಳಿದ್ದು.ಮದಲೇ ಮಂಗ ಬುದ್ಧಿ! ಶ್ರೀರಾಮ ಅಯೋಧ್ಯೆಗೆ ಬಂದ ಮೇಲೆ ಕಪಿ ಸಇನ್ಯಕಕೆಲ್ಲ ಭೋಜನ ಕೂಟ ವ್ಯವಸ್ಥೆ ಮಾಡಿದ್ದು, ಬಳುಸುಲೆ ಸುರು ಮಾಡುವಗ ಬಳುಸಿದ್ದ  ಮೆಡಿ ಉಪ್ಪಿನ ಕಾಯಿಲ್ಲಿದ್ದ ಕೋಗಿಲೆಯ ಒಂದು ಮಂಗ ಹಾರುಸಿದ್ದು, ಬೇರೆ ಮಂಗಂಗೊ ನೋಡಿ ಅವುದೇ ಮುಂದುವರುಸಿದ್ದು, ಮಂಗಂಗಳೇ ಇನ್ನೂ ಎತ್ತರಕ್ಕೆ ಹಾರುಲೆ  ಹೆರಟದು ಎಲಲ ಗೊಂತಿದ್ದನ್ನೆ! ಸುಗ್ರೀವ ಬಂದು ನಿಂದ ಮೇಲೆ ಗಲಾಟೆ ನಿಂದದು ಎಲ್ಲ ಹಳೆ ಪುರಾಣಂಗೊ! ಠೊಪ್ಪಿ ವ್ಯಾಪಾರಿಯ ಕತೆಯೂ ಗೊಂತಿದ್ದನ್ನೆ! ಈಗಳೂ  ಮಂಗನ ಕಂಢರೆ ಮಕ್ಕಳೂ ಸುಮ್ಮನೆ ಕೂರುತ್ತವಿಲಲೆ ಏನಾದರೊಂದು ಕುಸೃಟಿ ಮಾಡುಗು! ಮಂಗಂಗಳೂ ಕೆಣಕ್ಕಿದರೆ ಬಿಡವನ್ನೆ.ಮಂಗಂಗಳ ಉಪವಾಸ,ಬೆಣ್ಣೆ ಪಾಲು ಮಾಡಿದ್ದು ಗೊಂತಿಲ್ಲದ್ದೋರು ಆರೂ ಇಲ್ಲೆ!
       ಅಲ್ಪಂಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲ್ಲಿ  ಕೊಡೆ ಹಿಡುಕ್ಕೊಂಗಡೊ.ಇಲ್ಲಿ ಐಶ್ವರ್ಯ ಮದಂದ ಅವ ಕೊಡೆ ಹಿಡುದು ನಡಗು ಹೇಳುವದು ತಾತ್ಪರ್ಯ! ಮದಲಾಣ  ರಾಜರು, ಶ್ರೀಮಂತರು,ಒಟ್ಟಾರೆ ಅವರ ಶ್ರೀಮಂತಿಕೆಯ ತೋರುಸುಲೆ ಹೀಂಗೆ ಮಾಡ್ಯೊಂಡಿತ್ತಿದ್ದವಡೊ.ಈಗ ಶ್ರೀಮಂತರೇ ಹಳೆವ್ ಕೊಡೆ ಹಿಡುಕ್ಕೊಂಡು ಹೋಪದು! ಒಳ್ಳೆ ಕೊಡೆ ಹಿಡಿವಲೆ ಆಶೆ ಇದ್ದರೂ ಪೈಸೆ ಕೊಡುಲೆ ಆಶೆ ಆವುತ್ತು ಹೇಳಿ ಕಾಣುತ್ತು. ಅಂತೂ ಶ್ರೀಮಂತಿಕೆಯ ಒಂದು ಮಾನದಂಡ ಕೊಡೆಯೂ ಆವುತ್ತು. ಹಗಲಾದರೆ ಹೆರ ಹೋಪಗ ಬೆಶುಲಿಂಗೆ ಕೊಡೆ ಬೇಕಪ್ಪ! ಮಳೆಗೆ ಹಿಡಿವಲೆ ಬೇಕನ್ನೆ.ಆದರೆ ಹಗಲಾದರೂ ಇರುಳಾದರೂ ಅವು ಮನೆ ಹೆರಡೆಕ್ಕಾದರೆ ಹಿಂದಂದ ಮುಂದಂದ ಜನಂಗೊ. ಹಗಲು ದೀವಟಿಗೆ ಎಲ್ಲ ಇದ್ದರೆ ಎಲ್ಲೋರು ಅವು ಹೋಪದರ ಬಪ್ಪದರ ನೋಡುತ್ತವನ್ನೆ! ಹಾಂಗೆ ಅವರ ಗೌರವವೂ ಹೆಚ್ಚುತ್ತು.ಇದೆಲ್ಲ ಶ್ರೀಮಂತಿಕೆಯ ಪ್ರದರ್ಶನ!. ಒಟ್ಟಿಂಗೆ ಬಪ್ಪೋವುದೇ ಬಿಟ್ಟಿ ಊಟ ತಿಂದೊಂಡಿಪ್ಪೋವು. ಆ ವೈಭವ ಇಂದು ಜನಂಗೊಕ್ಕೆ ಮರದು ಹೋಯಿದು.
     ಮೇಲೆ ಹೇಳಿದ ಗಾದೆ ಇಲ್ಲಿ ಅನ್ವಯ ಅಪ್ಪದು ಇಂದು ಅಧಿಕಾರಲ್ಲಿಪ್ಪೋವಕ್ಕೆ!ಮದಲೇ  ಅಧಿಕಾರದ ಮದ! ಅದರೊಟ್ಟಿಂಗೆ ಜನರ ಮುಂದೆ ಬಾಯಿಗೆ ಬಂದ ಹಾಂಗೆ ಬಡಾಯಿ ಕೊಚ್ಚಿಗೊಂಡು, "ಆನು ಹಾಂಗೆ ಮಾಡಿದೆ, ಹೀಂಗೆ ಮಾಡಿದ್ದೆ" ಹೇಳಿ ಲೊಟ್ಟೆ ಹೇಳುವದು. ಒಟ್ಟಿಂಗೆ ಅಧಿಕಾರದ ಹೆಸರಿಲ್ಲಿ ಸಂಪಾದನೆ ಮಾಡಿದ ಹೇರಳ ದ್ರವ್ಯವ ನಾಯಿಗೊಕ್ಕೆ ಕಾಯಿಹೋಳು ಹಾಕಿದ ಹಾಂಗೆ ಒಂದಂಶವ ಹಂಚಿ ಅಧಿಕಾರ ಸಿಕ್ಕಿದ ಮೇಲೆ ಹತ್ತರಷ್ಟು ಸಂಪಾದ ಮಾಡಿಗೊಂಬದು. ಏನಾದರೂ ಬಾಯಿ ಒಡದೋರ ಬಾಯಿ ಮುಚ್ಚುಸುಲೆ ಕೊಲೆ ಮಾಡಿಸಿದರೂ ಕೇಸಿನ ಮುಚ್ಚಿ ಹಾಕುವದು! ಇಂದ್ರಾಣ ಹೊಲಸು ರಾಜಕೀಯ. ಸುಮ್ಮನೆ ಕೂದರೆ ಮತ್ತೂ ಹೆಚ್ಚುವದು. ಕೇಳುವೋರಿಲ್ಲದ್ದೆ ಅಪ್ಪದು.
            ಮನ್ನೆಯಾಣ ಪೇಪರಿಲ್ಲಿ ನೋಡಿದೆ. ರಾಷ್ಟ್ರೀಯ ಹೆದ್ದಾರಿಲ್ಲಿ ಅಪಘಾತಂದಾಗಿ ಮರಣ! ಆಕಸ್ಮಿಕ ಆದರೆ ಕ್ಷಮೆ ಇರಳಿ. ಆದರೆ "ಡೋಂಟ್ ಕೇರ್ ಹೇಳುವ ಹಾಂಗೆ ಸ್ಪರ್ಧಾತ್ಮಕವಾಗಿ ,ಮುಂದಾಣ ವಾಹನ ಹಿಂದೆ ಹಾಕುಲೆ,ಅಥವಾ ಇನ್ನಾವುದೋ ಕಳ್ಲ ಸಾಗಣೆಯ ಲೆಕ್ಕಲ್ಲಿ ವಾಹನ ಓಡುಸುವಗ ಗೊಂತಿಲ್ಲದ್ದೆ ಆದ ತಪ್ಪಾದರೆ ಅಲ್ಲಿ ವಾಹನ ನಿಲ್ಲುಸೆಕ್ಕು. ಅದಲ್ಲ ಪರಾರಿ ಅಪ್ಪದು!ಬಿದ್ದು ಸತ್ತೋರು ತನ್ನಂತೆಯೇ ಮನುಷ್ಯರು ಹೇಳುತ್ತ ಭಾವನೆ ಇದ್ದರೆ,ಸಂಬಂಧ ಪಟ್ಟ ತನಿಖಾಧಿಕಾರಿಗೊ ಬಪ್ಪನ್ನಾರ ಅಲ್ಲಿ ನಿಲ್ಲೆಕ್ಕು. ಆದರೆ ಹಾಂಗಿಲ್ಲೆ.
                ಏನು ಎತ್ತ ಹೇಳಿ ಗೊಂತಾದ ಅಪಘಾತವನ್ನೂ ಮುಚ್ಚಿ ಹಾಕುಲೆ, ಕೇಸಿಂದ ತಪ್ಪುಸಿಗೊಂಬಲೆ  ಅವಕಾಶ ಮಾಡಿ ಕೊಡುತ್ತವು ಕಾನೂನು ಪಂಡಿತಕ್ಕೊ!ಎಲ್ಲೋರಿಂಗೂ ಬೇಕಾದ್ದು ಪೈಸೆ! ಹಣ ಕಂಡರೆ ಸತ್ತ ಹೆಣವಾದರೂ ಬಾಯಿ ಬಿಡುಗಡೊ!ಪುಡಾರಿಗೊ ಹೇಳಿದ್ದರ ಕೇಳದ್ದ ಅಧಿಕಾರಿಗೊ ಮರದಿನ ಗೊಂತಿಲ್ಲದ್ದ ಊರಿಂಗೆ ವರ್ಗ ಆಗಿ ಬಿಡಾರ ಕಟ್ಟೆಕ್ಕಾವುತ್ತು ಹೇಳಿ ಹೆದರಿ ಕಾನೂನು ಪಾಲಕರೋ,ನ್ಯಾಯಕ್ಕೆ ತೀರ್ಪು ಕೊಡುವೋರೋ ಹೆರಟರೆ ಕಾನೂನಿಂಗೆ ಬೆಲೆ ಎಲ್ಲಿದ್ದು?
     ಮಂತ್ರಿಗಳೇ ಅನ್ಯಾಯ ಅತ್ಯಾಚಾರ ಮಾಡಿದ್ದರ ಕೇಳುವೋರಾರು! ನ್ಯಾಯಕ್ಕೆ ಬೆಲೆ ಎಲ್ಲಿದ್ದು? ಬೇಲಿಯೇ ಹೊಲವ ಮೆಯ್ದರೆ ಬೇಲಿ ಹಾಕುವದೆಂತಕೆ? ಅಧಿಕಾರದ ಮದ ಇಷ್ಟೆಲ್ಲ ಮಾಡುವದರನ್ನೇ ಇಲ್ಲಿ ಮದಲೇ ಬೇಕಾದ ಹಾಂಗೆ ಪಾರ್ಟಿ ಬದಲುಸಿಗೊಂಡು,ಕಾರ್ಯವಾಸಿ ಕತ್ತೆ ಕಾಲು ಹಿಡಿವ ವಿಭಾಗ ಎಂದು ವರೆಗೆ ಇದ್ದೋ ನಮ್ಮ ಪ್ರಜಾ ಪ್ರಭುತ್ವ ನವಗಂಟಿದ ಕಳಂಕ ಹೇಳಿಯೇ ಹೇಳೆಕ್ಕಷ್ಟೆ.ಈಗ ಕೇಂದ್ರಲ್ಲಿಪ್ಪೋರು ಹಲವು ಹಗರಣಂಗಳಲ್ಲಿ ಸಿಕ್ಕಿ ಬಿದ್ದಿದವು! ಮುಚ್ಚಿ ಹಾಕುಲೆ ತನಿಖೆ ಹೇಳಿಗೊಂಡು ಹೆರಟವು. ಕಮ್ಚಿ ಬಿದ್ದರೂ ಮೂಗು ಮೇಲೆ ಅವರದ್ದು!
ಒಬ್ಬ ಇಬ್ಬ ಯೋಚನೆ ಮಾಡುವ ವಿಷಯ ಅಲ್ಲ. ಅಣ್ಣಾ ಹಜಾರೆಯಾಂಗಿಪ್ಪೋರೇ ಮುಂದೆ ಹೋದೋರು ಕರೆಂಗೆ ನಿಂಬಲೂ ಜನ ಬೆಂಬಲ ಇಲ್ಲದ್ದೆ ಅಲ್ಲದೋ? ಇಲ್ಲದ್ದ ಉಸಾಬರಿ ಎನಗೆಂತಗೆ ಹೇಳಿ ದೂರ ನಿಂಬ ಕಾರಣವೇ ಪುಚ್ಚೆಯ ಕೊರಳಿಂಗೆ ಆರೂ ಗಂಟೆ ಕಟ್ಟುಲೆಡಿಗಾಯಿದಿಲ್ಲೆ. ಒಗ್ಗಟ್ಟಿದ್ದರೆ ಸಾಧುಸಲೆಡಿಯದ್ದದು ಯಾವದೂ ಇಲ್ಲೆ. ಅಂದುದೇ ಗಾಂಧಿ ಅಜ್ಜ ಮುಂದೆ  ನಿಂದು ಸ್ವಾತಂತ್ರ್ಯ ದೊರಕಿಸಿ ಕೊಟ್ಟ ಹಾಂಗೆ ಹೋಯೆಕ್ಕಾರೆ ದೃಢ ನಿರ್ಧಾರದ ಮುಂದಾಳುಗೊ ಮುಂದೆ ನಿಂದರೆ ಎಲ್ಲ ಸರಿ ಹೋಕು ಹೇಳಿ ಕಾಣುತ್ತು. ಯಾವುದಕ್ಕೂ ಕಾಲ ಕೂಡಿ ಬರೆವ್ಕ್ಕು ಹೇಳುವದು ಖಂಡಿತ! ಅದಕ್ಕೂ ದೈವಸಹಾಯ ಬೇಕು. ಈ ವಿಷಯಲ್ಲಿ ಆ ದೇವರನ್ನೇ ಎಲ್ಲೋರಿಂಗು ಸದ್ಬುದ್ಧಿ ಕೊಡು ಹೇಳಿ ಕೇಳಿಗೊಳ್ಳೆಕಷ್ಟೆ!

ಕಣ್ಣು

ಕಣ್ಣು
ದೇಹದ ಪಂಚೇಂದ್ರಿಯಂಗಳಲ್ಲಿ ಕಣ್ಣು ಮುಖ್ಯವಾದ್ದು ಹೇಳುವದು ಎಲ್ಲೋರಿಂಗೂ ಗೊಂತಿಪ್ಪ ಸಂಗತಿ. ಕೆಲವು ಜನ ಹುಟ್ಟಿಂದಲೇ ಕುರುಡರಾದರೆ, ಕೆಲವು ಜನ ಕಾರಣಾಂತರಂಗಳಿಂದ ಕುರುಡರಪ್ಪದೂ ಇದ್ದು. ದೃಷ್ಟಿ ದೋಷಂದ ಕನ್ನಡಕ ಉಪಯೋಗುಸೆಕ್ಕಾಗಿಯೂ ಬತ್ತು.ಅಂತೂ ಪ್ರಕೃತಿವಿಶೇಷಂಗಳ ನೋಡೆಕ್ಕಾರೆ ಕಣ್ಣು ಬೇಕು. ಜನ್ಮತಃ ದೃಷ್ಟಿ ಕಳಕ್ಕೊಂಡೋನು, ಬದುಕ್ಕಿನುದ್ದಕ್ಕೂ ಕುರುಡನಾಗಿಯೇ ಇರೆಕ್ಕಾವುತ್ತು. ಹಿಂದಾಣೋರು, ಜಾತಕ ನಂಬಿಗೊಂಡಿದ್ದೋವು ಗ್ರಹ ದೋಷ ಹೇಳಿಯೋ, ಪೂರ್ವಜನ್ಮದ ದೋಷ ಹೇಳಿಯೋ ನಂಬಿಗೊಂಡು ಅಂತೆ ಬಂದದರ ಅನುಭವಿಸ್ಯೊಂಡು ಕಷ್ಟ ಪಟ್ಟಿತ್ತಿದ್ದವಡೊ. ಈಗ ದೋಷ ಹೋಗಲಾಡುಸುಲೆ ಬೇರೆ ಕಣ್ಣುಗಳ ಕೂರುಸಿಯೋ ಅಥವಾ ಅದೂ ಎಡಿಯದ್ದರೆ ಕುರುಡರಿಂಗೂ ಲೋಕ ಜ್ಞಾನ ಅರಡಿವಲೆ ಕುರುಡರ ಶಾಲೆಲ್ಲಿ ಕಲಿವ ಏರ್ಪಾಡು ಮಾಡ್ಯೊಂಡೋ ಒದ್ದಾಡಿಗೊಂಡಿತ್ತಿದ್ದವು. ಈಗ ಕಣ್ಣು ದಾನ ಮಾಡುವ ಕ್ರಮ ಸುರು ಮಾಡಿದ್ದವು. ಕೆಲವು ಜನ ಸಾವಂದ ಮದಲೇ "ಎನ್ನ ಕಣ್ಣಿನ ದೃಷ್ಟಿ ಕಳಕ್ಕೊಂಡೋರಿನ್ಗೆ ದಾನ ಮಾಡಿದ್ದೆ"ಹೇಳಿ ಇಚ್ಛಾಪತ್ರ ಬರವದೂ ಇದ್ದು. ಸತ್ತ ಕೂಡಲೇ ಅವರ ಕಣ್ಣಿನ ತೆಗದು ಕಣ್ಣಿಲ್ಲದ್ದೋವಕ್ಕೆ ಒದಗುಸಿ  ಕಸಿ ಮಾದಿದರೆ ಅವರ ಬದುಕಿನ ಒಳುದ ಸಮಯಲ್ಲಿ  ಲೋಕವ ನೋಡಿ ತಿಳಿವ ಸಾಮರ್ಥ್ಯ ಪಡಕ್ಕೊಳ್ಳುತ್ತವಡೊ.ಅಂತೂ ಎಲ್ಲಕ್ಕೂ ವಿಧಿಯನ್ನೇ ದೂರುಗೊಂಡು ಆರೂ ಕೂರುತ್ತವಿಲ್ಲೆ. ಎಡಿಗಾದಷ್ಟು ಜೀವನದ ಸವಿಯ ಅನುಭವುಸುಲೆ ಇಪ್ಪ ದಾರಿ ಹುಡುಕ್ಕುತಾ ಇದ್ದವು. ಅದರಲ್ಲಿ ಜಯ ಗಳುಸಿದ್ದವು ಕೂಡಾ.
    ಲೋಕದ ಕಣ್ಣು ಹೇಳಿ ನಾವು ದಿನಾ ಕಾಂಬ ಸೂರ್ಯನ ಹೇಳುತ್ತವು. ಕಣ್ಣಿದ್ದೋರಿಂಗೂ ಕಾಣೆಕ್ಕಾರೆ ಬೆಣ್ಚಿ ಬೇಕನ್ನೆ! ಬೆಣಚ್ಚಿ ಇಲ್ಲದ್ದೆ ಎಂತರನ್ನೂ ನೋಡುಲೆಡಿಯ! ಕರೆಂಟ್  ಕೂಡ ಪ್ರಕೃತಿಂದಲೇ ನಮ್ಮ ಹಿಂದಾಣೋರು ಹುಡುಕ್ಕಿದ ವಿಜ್ಞಾನ! ಇದ್ದೆಲ್ಲ ಕತ್ತಲೆಲ್ಲಿ ಇಪ್ಪದರ ಬೆಣಚ್ಚಿಗೆ ತಂದು ತೋರುಸುವದು ಹೇಳಿದರೆ ಕಾಂಬ ಹಾಂಗೆ ಮಾಡುವದು!. ಮದಾಲು ಅಬ್ಬೆ, ಮತ್ತೆ ಗುರು ಲೋಕ ಜ್ಞಾನ,ವಿದ್ಯೆ ಎಲ್ಲ ಹೇಳಿಕೊಟ್ಟು, ಪ್ರಕೃತಿಯ ಬಗ್ಗೆ ಅರಡಿವ ಹಾಂಗೆ ಮಾಡುತ್ತವು. ಮತ್ತೆ "ಪಾದಂ ಸಬ್ರಹ್ಮಚಾರಿಣಃ ಹೇಳಿಯೋ ಮತ್ತೆ ಗ್ರಂಥ ಪಠಣಂದಲೋ, ಸ್ವಂತ ತಿಳುಕ್ಕೊಂಡೋ ಪ್ರಪಂಚ ಜ್ಞಾನ ಅರಿವಾವ್ತು.ಎಲ್ಲ ಒಂದೇ ಸರ್ತಿ ಅರದು ನೀರು ಕುಡಿವಲೆಡಿಗೊ! ಹಾಂಗೆ ಸಹಜವಾಗಿ ಕಣ್ಣಿದ್ದರೂ ವಿಷಯ ತಿಳುಕ್ಕೊಳ್ಳೆಕ್ಕಾದರೆ ಬೇರೆಯೋರ ಸಹಾಯ ಬೇಕಾಗಿ ಬತ್ತು. ಎಲ್ಲ  ಜ್ಞಾನಂಗಳನ್ನೂ ಪಡಕ್ಕೊಂಡು ಸರ್ವಜ್ಞ ಹೇಳಿ ಆಗೆಡದ್ದರೂ, ನಮ್ಮ ಬದುಕ್ಕಿನ ಖರ್ಚಿಗೆ ತಕ್ಕ ಕಲ್ತೊಂಡರೆ ಎಲ್ಲೋರೊಟ್ಟಿಂಗೆ "ಗೋವಿಂದ" ಹೇಳ್ಲಕ್ಕಲ್ಲದೋ?
            ಕೆಮಿಲ್ಲಿ ಕೇಳಿದ್ದರನ್ನೂ ಕಣ್ಣು ನೋಡೆಕ್ಕು. ನೋಡಿದ ಮೇಲೆಯೇ ಸತ್ಯ ಗೊಂತಪ್ಪದು! ಹೇಳೆಕ್ಕಾರೂ ನೋಡ್ಯೊಂಡೆ ಹೇಳುವದಲ್ಲದೋ? ಮಾತ್ತೂ ಖಂಡಿತ ಮಾಡ್ಯೊಂಬಲೆ ಮುಟ್ಟಿ ನೋಡೆಕ್ಕಾವುತ್ತು.ನೋಡ್ಡೆಕ್ಕಾರೂ ಮೂಗಿನ ಸಹಾಯವೂ ಬೇಕು.ಕಣ್ಣು ಕಾಣದ್ದದರ ಮೂಗು ಹೇಳುಗು! ಪರಿಮಳ ಮೂಗಿಂಗೆ ಬಡುದರೆ ಅದರ ಹುಡುಕ್ಯೊಂಡು ನಾವು ಹೋವುತ್ತು.ಒಳುದ ನಾಲ್ಕು ಇಂದ್ರಿಯಂಗಳ ಸಹಾಯಂದಲೇ ಆವುತ್ತು ನಮಗೆ ಪೂರ್ಣ ಜ್ಞಾನ ಸಿಕ್ಕುವದು.ಅಂಗಂಗೊ ಬೇರೆ ಬೇರೆ ಆದರೂ ಒಂದಕ್ಕೊಂದು ಅನುಕೂಲವಾಗಿದ್ದರೆ ಪೂರ್ಣ ತಿಳುವಳಿಕೆ ಸಿಕ್ಕುಗು! ಕೆಮಿ ಕೇಳ್ಯೊಂಡಿಪ್ಪ ಸಂಗೀತದ ಕಡೆಂಗೆ ನೋಡಿದರೆ ಹಾಡುವ ಮನುಷ್ಯನ ನೋಡುಲಕ್ಕು.ಕೇಳುತ್ತಾ ಇದ್ದರೂ ನೋಡದ್ದರೆ ಆರು ಹಾಡಿದ್ದು ಹೇಳಿ ಗೊಂತಕ್ಕೊ!ಕೇಳುಲೂ ನೋಡುಲೂ ವ್ಯವಧಾನವೂ ಬೇಕು.ಗಮನ ಎಲ್ಯೋ ಇದ್ದರೆ ಕೇಳುಲೂ ಎಡಿಯ. ಕೇಳಿದ್ದು, ನೋಡಿದ್ದು ಎಂತರ ಹೇಳಿಯೂ ಅರಡಿಯ. ಹಾಂಗಾದರೆ ಎಲ್ಲಕ್ಕೂ ಮುಖ್ಯ ಗಮನ ಹೇಳಿ ಆವುತ್ತು. ಡಾನ್ಸ್ ನೋಡ್ಯೊಂಡಿದ್ದರೂ ಗಮನ ಇಲ್ಲದ್ದರೆ ಆರು ಡಾನ್ಸ್ ಮಾಡುವದು, ಶಾಸ್ತ್ರೀಯ ನೃತ್ಯವೋ ಅಲ್ಲದೋ ಹೇಳುಲೂ ಎಡಿಯ. ಅಂಬಗ ಪಂಚೇಂದ್ರಿಯ<ಗಳ ಸಹಾಯಂದ ನಮ್ಮ ಮನಸ್ಸು ಪೂರ್ಣ ಚಿತ್ರವ ನೋಡಿಗೊಂಡರೆ ಅದು ಮನಸ್ಸಿಲ್ಲಿ ನೆಲೆ ನಿಲ್ಲುತ್ತು.ಹಾಂಗೆ ಮನಸ್ಸಿಲ್ಲಿ ಒಳಿಯೆಕ್ಕಾದರೆ ನಮ್ಮ ಗಮನವೂ ಬೇಕನ್ನೆ!
  ಕಣ್ಣಿಂದ ನೋಡುವದರಲ್ಲಿಯೂ ಅನೇಕ ವಿಧಾನಂಗಳ ಹೇಳಿದ್ದವು. ಉದಾಹರಣಗೆ ಪಕ್ಷಿನೋಟ-ಆಕಾಶಲ್ಲಿ ಹಾರಿ ಆಯಾಸ ಅಪ್ಪಗ ಒಂದು ಮರದ ಗೆಲ್ಲಿಲ್ಲಿಯೋ ಅಥವಾ ಇನ್ನೆಲ್ಲಿಯೋ ವಿಶ್ರಾಂತಿಗಾಗಿ ಕೂರುತ್ತು ಹಕ್ಕಿ.ಬಚ್ಚೆಲ್ಲು ಹೋಗಿ ಅಲ್ಲಿಂದ ಹೆರಡುಲಪ್ಪಗ ಒಂದರಿ ಕೊರಳಿನ ಸುತ್ತಲೂ ತಿರುಗಿಸಿ ಎಲ್ಲಾಕಡೆಂಗುದೇ ನೋಡುತ್ತು ಆ ಹಕ್ಕಿ! ಇನ್ನೆಲ್ಲಿಗೆ ಯಾವ ದಾರಿಲ್ಲಿ ಹೋಪಲಕ್ಕು ಹೇಳಿಯೋ ಏನೋ ಕೊರಳಿ ತಿರುಗಿಸಿ ನೋಡುವದರ ತಿಳುದೋವು ಪಕ್ಷಿ ನೋಟ ಹೇಳುತ್ತವು. ನಾವುದೇ ಜೀವನದ ಒಂದು ಘಟ್ಟಲ್ಲಿ, ಒದಗಿದ ಸೋಲು-ಸಾಲಂಗಳ ಗ್ರೇಶ್ಯೊಂಡು ಇನ್ನು ಮುಂದೆ ಹೇಂಗೆ ಹೋಪಲಕ್ಕು ಹೇಳಿ ಯೋಚನೆ ಮಾಡುವದರ ಹೀಂಗೆ ಹೇಳುಲಕ್ಕದೋ.ಬದುಕ್ಕಿನ ಏಳು ಬೀಳುಗಳ ಗಮನುಸಿ ಎಡವಿದಲ್ಲಿ ದಾರಿ ತಪ್ಪಿದಲ್ಲಿ,ಹೇಂಗೆ ಸರಿ ಮಾಡಿಗೊಂಬಲಕ್ಕು ಹೇಳುವದರ ಯೋಚುಸಿಗೊಂಡರೆ ಸರಿ ದಾರಿ ಸಿಕ್ಕುಗು ಹೇಳಿ ಯೋಚನೆ ಮಾಡುತ್ತವು.
     ಇನ್ನು, ಕಣ್ಣಾಡುಸುವದು, ಕಣ್ಣೋಡುಸುವದು, ಕಣ್ಣು ಹಾಕುವದು ಕಣ್ಣು ಕೀಳುವದು,ಕಣ್ಣು ನೆಡುವದು- ಹೀಂಗೆಲ್ಲ ನುಡಿಗಟ್ಟುಗಳ ಹಿಂದಾಣೋರು ಹೇಳಿದ್ದವು.ಆನು ಆಚಿಕೆ ಕೂದು ಅಡಕ್ಕೆ ಸೊಲುಕ್ಕೊಂಡಿಪ್ಪಗ ಹಪ್ಪಳ ಒಣಗುಸುಲೆ ಹಾಕಿಗೊಂಡಿದ್ದ  ಹೆಂಡತಿ ಹೇಳುಗು "ಇದಾ ರಜ ಇಲ್ಲಿಗೂ ಕಣ್ಣು ಹಾಕಿಗೊಳ್ಳಿ"ಹೇಳಿ. ಕಾಕೆ ಬಾರದ್ದ ಹಾಂಗೆ ನೋಡ್ಯೊಳ್ಳೀ ಹೇಳುವದು ಸೂಚ್ಯಾರ್ಥ." ಅಲ್ಲಿ ಮಗ ಪಾಠ ಓದುತ್ತಾ ಇದ್ದ. ರಜ ಕೆಮಿ ಕೊಟ್ಟೊಳ್ಳೀ" ಹೇಳಿದರೆ ಕೇಳಿಗೊಂಡರೆ ಅವ ತಪ್ಪಿದಲ್ಲಿ ತಿದ್ದಿಗೊಳ್ಳಿ ಹೇಳುವದೇ ಅಲ್ಲದೋ ಸೂಚ್ಯಾರ್ಥ.ದೊಡ್ಡ ಸಭೆಲ್ಲಿ ತುಂಬ ಜನ ಇಪ್ಪಗ ಆರೆಲ್ಲ ಬಯಿಂದವು ಹೇಳಿ ಗೊಂತಾಯೆಕ್ಕಾದರೆ ಪಕ್ಷಿನೋಟವೂ ಬೇಕು. ಸುತ್ತಲೂ ಕಣ್ಣುತಿರುಗುಸಿ ನೋಡೆಕ್ಕು.ಒಳ್ಳೆ ಹೂಗು,ಹಣ್ಣು ಕಂಡರೆ, ಮರಲ್ಲಿ ಮಾವಿನ ಮೆಡಿಯೋ ಹೂಗೋ ಕಂಡರೆ  ಕಣ್ಣು ತಿರುಗುಸಿ ನೋಡಿದರೆ ಕಾಣುತ್ತು. ಕಂಡರೆ ಮತ್ತೆ ಆ ಮರದ ಒಡೆಕ್ಕಾರನತ್ರೆ ಹೇಳುಲಕ್ಕು" ನಿನ್ನ ಮರಕ್ಕೆ ಆನು ಕಣ್ಣು ಹಾಕಿದ್ದೆ.ಮೆಡಿ ಕೊಯ್ವಗ ಎನ್ನ ಮರೆಯೆಡ ಹೇಳುಲಕ್ಕು.ಮಗಂಗೋ, ತಮ್ಮಂಗೋ ಕೂಸಿನ ಹುಡುಕ್ಯೊಂಡಿಪ್ಪೋರು ದೊಡ್ಡ ಅನಪತ್ಯಕ್ಕೆ ಹೋದರೆ ಬಂದೋರ ಪೈಕಿಲ್ಲಿ ಕೆಲವರ ನೋಡಿ ಕಣ್ಣು ಹಾಕುವದು ಹೇಳಿರೆ ನೋಡಿ ಅವರತ್ರೆ ಮಾತು ಮುಂದುವರುಸುವ ಯೋಚನೆ ಮಾಡುವದು.ಅಂಗ್ಡಿಗೆ ಹೋದರೆ ಮದಲೆಲ್ಲ ಅಂದು ಬೇಕಾದ ಸಾಮಾನು ಅಲ್ಲದ್ದೆ ಬೇರೆ ಸಾಮಾನುಗೊಕ್ಕೂ ಕಣ್ಣು ಹಾಕುವದು ಮಾಂತ್ರ ಅಲ್ಲ ಪೈಸೆ ಇದ್ದರೆ ತೆಕ್ಕೊಂಬದು, ಅಥವಾ " ಆನು ನಾಳೆ ಬತ್ತೆ ,ಈ ಸಾಮಾನು ಎನಗೆ ಬೇಕು, ಬೇರಾರಿಂಗೂ ಕೊಟ್ಟಿಕ್ಕೆಡ " ಹೇಳಿಕ್ಕಿ ಬಪ್ಪದು.
 ಕೆಲವು ಜನ ಹೇಳುವದಿದ್ದು,"ಕಣ್ಣಾರೆ ಕಂಡರೂ ಪರಾಂಬರುಸಿ ನೋಡೆಕ್ಕು" ಹೇಳಿ. ಆರೋ ಎಂತದೋ ಹೇಳಿದವು ಹೇಳಿ ಕೇಳಿದ ಕೂಡ್ಳೇ ವಿಮರ್ಶೆ ಇಲ್ಲದ್ದೆ ಜಗಳ ಮಾಡುವದು,ದುಡುಕ್ಕಿ   ಯೋಚನೆ ಇಲ್ಲದ್ದೆ ಒಂದರಿ ಕೊಯ್ಕೊಂಡ ಮೂಗು ಮತ್ತೆ ಚೆಗುರುಗೊ?  ಅಂದು ಶ್ರೀರಾಮ ಲಕ್ಷ್ಮಣಂಗೆ ಮೂಗು ಕೊಯ್ವಲೆ ಹೇಳಿದ್ದು ಶೂರ್ಪನಖಿಯ ಮಾನಭಂಗ ಮಾಡಿದರಾದರು ಸುಮ್ಮನೆ ಹೋಕೋ ಹೇಳುವ ಆಶೆಂದ ಹೇಳಿ ಕಾಣುತ್ತು. ಮತ್ತೆ ಹೆಣ್ಣೊಂದರ ಕೊಲ್ಲುವದೂ ತಪ್ಪಲ್ಲದೋ! ಅಪಮಾನ ಮಾಡಿ ಕಳುಸಿದರೆ ಸಾಕು ಹೇಳಿ ಆಗಿಕ್ಕು.ಆದರೆ ಮೂಗಿದ್ದವಂಗೆ ಇದ್ದರೆ ಮಾಂತ್ರ ಅಡೊ "ನಾಚಿಕೆ, ಮಾನ ಮರ್ಯಾದೆ" ಹೇಳಿ ಇಪ್ಪದು,.ಮೂಗು ಕೊಯ್ದೂ ಪ್ರಯೋಜನ ಆದ್ದು ಹೇಂಗೆ? ಆ ಮೂಗಿನ ರಾವಣಂಗೆ ತೋರುಸಿದ ಕಾರಣ ರಾಮಾಯಣ ಮುಂದುವರುತ್ತಲ್ಲದೋ!
        ಕಣ್ಣಿನ ಶುದ್ದಿ ಹೇಳುಲೆ ಹೆರಟದು ದಾರಿ ತಪ್ಪಿತ್ತೋ! ಕಣ್ಣು ನೋಡ್ಳಿಪ್ಪದು. ನೋಟಂಗಳಲ್ಲಿಯೂ ಹಲವಾರು ನಮೂನೆ ಇಲ್ಲೆಯೋ? ಓರೆ ನೋಟ, ತೀಕ್ಷ್ಣ ನೋಟ, ಬೆರಗು  ಕಣ್ಣಿಂದ ನೋಡುವದು, ಬಿಟ್ಟ ಕಣ್ಣಿಂದ ನೋಡುವದು, ನೋಟಲ್ಲಿಯೇ ಮೈಮರವದು ಹೀಂಗೆ ಇನ್ನೂ ಅನೇಕ ಕ್ರಮಂಗಳ ಎಲ್ಲೋರೂ ನೋಡಿ ಅನುಭವಿದ್ದಿಕ್ಕು. ಸಣ್ಣ ಮಕ್ಕಳ ಕಣ್ಣೋಟ ಶಿವನ ಕೈಯಲಗು ಹೊಳೆದಂಗೆ ಹೇಳಿ ಜಾನಪದಕಾರ ಹೇಳಿದ್ದಲ್ಲದೋ?ನೆಟ್ಟ ನೋಟಲ್ಲಿ ನೋಡುಲೆ ಶುರುಮಾಡಿದರೆ ಮೈಮರವದಿದ್ದು. ನೋಡುವ ದೃಷ್ಟಿ ಹೇಳುತ್ತವಲ್ಲದೋ? ದೃಶ್ಯಂಗಳ  ಒಂದರಿ ನೋಡಿದರೆ ಎಡೆಮರವಾಗಿದ್ದದು ಮತ್ತೊಂದರಿ ನೋಡುವಗ ನೆಂಪಾವುತ್ತು. ಇನ್ನು ಕಾಮದ ಕಣ್ಣು, ಕಾಮಲೆ ಕಣ್ಣು ಹೇಳಿ ಕಣ್ಣಿದ್ದೋವು ಕಣ್ಣಿನ ದುರುಪಯೋಗ ಮಾಡಿ ತೊಂದರೆ ಕೊಡುವ ವಿಚಾರವೇ ಮುಂದುವರುದು ಅತ್ಯಾಚಾರ, ಅನಾಚಾರಕ್ಕೆ ಕವಲು ಹೋಪದು!
         ಕಣ್ಣಿದ್ದೋವಂಗೆ  ನೋಡುವದಲ್ಲಿಯೂ ಆಸೆಗಣ್ಣಿಂದ ನೋಡುವದು ಇದ್ದಲ್ಲದೋ! ಕಂಡದು ಕುಡೆಗೆ ಹೋಗ ಹೇಳುತ್ತವು. ಕಂಡದು ಬೇಕು ಹೇಳುವ ಆಸೆ ಹುಟ್ಟುಸುತ್ತು. ಸಿಕ್ಕದ್ದರೆ ಸಿಕ್ಕುಲಿಪ್ಪ ಉಪಾಯ ಹುಡುಕ್ಕುತ್ತು. ಮನಸ್ಸು. ಹೀಂಗೆ ಮುಂದುವರುದೇ ಅಲ್ಲದೋ ಕಳ್ಳತನ, ದರೋಡೆ ಎಲ್ಲ ನಡವದು! ಕಣ್ಣಿಲ್ಲದ್ದೋರಿಂಗೆ ಕಾಣುತ್ತಿಲ್ಲೆ ಹೇಳುವ ಚಿಂತೆ ಆದರೆ ಇದ್ದೋರಿಂಗೆ ಕಂಡದರ ಪಡೆಯೆಕ್ಕು ಹೇಳುವ ಆಸೆ ಹುಟ್ಟುಸುಗಡೊ!, ಅದಕ್ಕೆ ಬಸವಣ್ಣ ಹೇಳಿದ್ದಡೊ ಎನ್ನ ಕುರುಡನ ಮಾಡು ಹೇಳಿ. ಆಡೆಕ್ಕು ಹೇಳಿಯೇ ಇಲ್ಲೆ. ಕೆಲವು ಜನಕ್ಕೆ ಬೇರೆಯೋರ ಕಷ್ಟ ಗೊಂತಾವುತ್ತಿಲ್ಲೆ. ಇಲ್ಲಿ ಕಣ್ಣಿದ್ದೂ ಕುರುಡರಾವುತ್ತವು. ಗುರ್ತ ಇದ್ದೋವುದೇ ಇವನ ಕಣ್ಣಿಂದ ತಪ್ಪುಸಿಗೊಂಬಲೆ, ನೋಡಿಯೂ ನೋಡದ್ದೋರ ಹಾಂಗೆ ಕಣ್ಣು ತಿರುಗಿಸಿಗೊಂಡು, ಇನ್ನೊಂದು ದಾರಿಲ್ಲಿ ಹೋಪದು ಗೊಂತಿದ್ದನ್ನೆ. ಇನ್ನು ಕೆಲವು ಜನ ಎಂತರನ್ನೋ ಜಾನಿಸ್ಯೊಂಡು ಹೋಪಗ ಕಂಡರೂ ಗೊ<ತಾವುತ್ತೂ ಇಲ್ಲೆ. ಅಂಬಗ ನಿಜವಾಗಿ ಕಂಡರೆ ಮಾತಾಡುಸುವೋರೂ  ಈ ಅಪರಾಧಕ್ಕೊಳ ಆವುತ್ತವು. ರಜ ಒರಗೆಕ್ಕು ಹೇಳುವದರನ್ನೂ ರಜ ಕಣ್ಣು ಮುಚ್ಚೆಕ್ಕು ಹೇಳುತ್ತವು. ಒರಕ್ಕು ಬಯಿಂದಿಲ್ಲೆ ಹೇಳುವದರ ಪರ್ಯಾಯವಾಗಿ " ಶಿವಾ ಹೇಳಿ ಕಣ್ಣು ಮುಚ್ಚಿದ್ದಿಲ್ಲೆ ಹೇಳುವದಿದ್ದನ್ನೆ! ನೋಡಿದ ವಸ್ತು ಬೇಕು ತನಗೆ ಹೇಳುವದರ ಗುರ್ತ ತಪ್ಪಿ ಹೋಗದ್ದ ಹಾಂಗೆ ಸುಣ್ಣದ ಬೊಟ್ಟು ಹಾಕಿ ಮಡಗಿದ್ದೆ ಹೇಳುತ್ತವು.
                         ಇನ್ನು ದೇವರೆಗಳ ಮುದ್ದಣ ಕವಿ ಹೇಳಿದ್ದು ಬಿಡುಗಣ್ಣರು ಹೇಳಿದ್ದು ನೆಂಪಾತು. ಅನಿಮಿಷರು ಹೇಳಿದ್ದದರ ಕಣ್ಣು ಮುಚ್ಚದ್ದೋರು ಹೇಳುವ ಅರ್ಥ ಬಪ್ಪ ಹಾಂಗೆ ಬಿಡುಗಣ್ನರು ಹೇಳಿತ್ತಿದ್ದ.ಕೆಲವು ಜೀವಿಗೊಕ್ಕೆ, ಮನುಷ್ಯರಲ್ಲಿಯೂ ಇರುಳು ಮಾಂತ್ರ ಕಣ್ಣು ಕಾಂಬೋವು ಇದ್ದವಲ್ಲದೋ?ಬಾವಲಿಗೊ ಇರುಳು ಮಾಂತ್ರ ಹಾರಾಡುಗಷ್ಟೆ!."ಹೆಗ್ಳನ ಬೆಣಚ್ಚಿಲ್ಲಿ ಬಿಟ್ಟ ಹಾಂಗೆ" ಒಂದು ಗಾದೆಯೇ ಇದ್ದನ್ನೆ. ಅವಕ್ಕುದೆ ಇರುಳು ಮಾಂತ್ರ ಕಾಂಬದಡೊ. ಹಳದಿ ರೋಗ ಹೇಳಿ ಇದ್ದಡೊ .ಅವಕ್ಕೆ ಕಾಂಬದೆಲ್ಲ ಅರಿಶಿನ ಕಾಂಗಡೊ.ಕಾಣುತ್ತ ಕಣ್ಣು ಸರಿ ಇದ್ದರೆ ಎಲ್ಲೋರಿಂಗೂ ಕಾಂಬ ಹಾಂಗೆ ಸರಿಯಾಗಿ ಕಾಣೆಕ್ಕನ್ನೆ.
                     ಇನ್ನು ಗೃಧ್ರ ದೃಷ್ಟಿ ಹೇಳಿದ್ದಡೊ. ಹದ್ದಿನಕಣ್ಣು ಹೇಳಿದರೆ ತುಂಬ ಎತ್ತರಕ್ಕೆ ಹಾರಿಗೊಂಡಿಪ್ಪ ಹದ್ದಿಂಗೆ ಕೆಳ ತಿರಿಕ್ಕೊಂಡಿಪ ಅದರ ಆಹಾರ ಅಲ್ಲಿಂದಲೇ ಕಾಂಬಲೆ ಸಿಕ್ಕಿ ಸೀದಾ ಕೆಳ ಇಳುದು ಬಾಯಿ ಹಾಕುವದಡೊ.ಹಾಂಗೆ ನಮ್ಮಲ್ಲಿಯೂ ಕೆಲವು ಜನರ ಸೂಕ್ಷ್ಮ ದೃಷ್ಟಿ  ಅವರ ಕಾರ್ಯ ಸಾಧನೆಗೆ ಉಪಯೋಗ ಆವುತ್ತಡೊ.ಪೋಲೀಸುಗೊಕ್ಕೆ ಈ ಕಣ್ಣು ಉಪಯೋಗ ಅಕ್ಕು.ಆದರೆ ಭ್ರಷ್ಟಾಚಾರಲ್ಲಿ ಮುಳುಗಿದೋವಕ್ಕೆ ಲಂಚ ಹೆಚ್ಚು ವಸೂಲು ಮಾಡುಲೆ ಉಪಯೋಗ ಆವುತ್ತು. ಖರ್ಚು ಮಾಡುವದರಲ್ಲಿಯೂ ಕೆಲವು ಜನಕ್ಕೆ ಸೂಕ್ಷ್ಮ ದೃಷ್ಟಿ ಇರುತ್ತು. ಕೈಕೆಳ ಕೆಲಸ ಮಾಡುವೋರ ಕಳ್ಳತನ(ಕೆಲಸಲ್ಲಿ) ಗೊಂತಾಯೆಕ್ಕಾರೆ ದೃಷ್ಟಿ ಸೂಕ್ಷ್ಮ ಇದ್ದರೆ ಒಳ್ಳೆದಲ್ಲದೋ? ದೂರ ದೃಷ್ಟಿ ಇದ್ದರೆ ಮಾಂತ್ರ ಮುಂದಾಣ ಚಿಂತೆ ಮಾಡುಲೆಡಿಗು!
ಇನ್ನು ದೃಷ್ಟಿ ತಾಗುವದು ಹೇಳುವದಿದ್ದು. ಅವನ ನಾಲಗೆಲ್ಲಿ ಮಜ ಇದ್ದು ಹೇಳಿ ಕಾಣುತ್ತು. ಹೇಳಿದ್ದು ಹೇಳಿದ ಹಾಂಗೆ ಆವುತ್ತು,ಹೇಳುತ್ತವು. ಮದಲು ಅಂಥೋರ ಬರುಸಿ ಬಂಡೆಕಲ್ಲುಗಳ ಒಡೆಶಿದ್ದವು ಹೇಳಿ ಹೆರಿಯೋರು ಹೇಳಿದ್ದು ಕೇಳಿದ್ದೆ. ಒಬ್ಬ ಎಂತಾರು ಕಂಡರೆ ಎಂತಾರು ಹೇಳದ್ರೆ ಅವಂಗೆ ತೃಪ್ತಿ ಇಲ್ಲೆ. ಅವ ಹತ್ತರಾಣ ಮನೆಗೆ ಹೋದ್ದು ಆ ಮನೆಲ್ಲಿ ಎಮ್ಮೆ ಕರಕ್ಕೊಂಡಿಪ್ಪ ಹೊತ್ತಾಗಿತ್ತಡೊ. ಇವ  ಫಕ್ಕನೆ  "ಎಮ್ಮೆಯ ಎಲ್ಲಿಂದ ತಂದೆ ಮಾರಾಯ? ಒಳ್ಳೆ ಹಾಲಿಪ್ಪ ಜಾತಿ ಹೇಳಿ ಕಾಣುತ್ತು" ಹೇಳಿದಡೊ. ಆ ಮನೆಯೋನಿಂಗೆ ಇವಂಗೆ ಹೀಂಗೆ ಏನಾದರೂ ಹೇಳುವ ಅಭ್ಯಾಸ ಇದ್ದು. ಹೇಳಿದರೆ ಹಾಂಗೆ ಆವುತ್ತು ಹೇಳಿ ಗೊಂತಿದ್ದ ಕಾರಣ ಇವ ಕೈ ಹಿಡುದು ಎಮ್ಮೆ ಹತ್ತರಂಗೆ ಕರಕೊಂಡು ಹೋಗಿ ಎಮ್ಮೆಯ ಮುಟ್ಟುಸಿದಡೊ. ಬೇರೊಂದು ಕಡೆಲ್ಲಿ ಹಾಂಗೆ ಹೇಳಿ ಮರದಿನ ಕರವಲೇ ಕೊಟ್ಟಿದಿಲ್ಲೆ ಹೇಳುವ ಶುದ್ದಿ ಕೇಳಿ ಹಾಂಗೆ ಮಾಡಿದ್ದಡೊ.ಅಂತೂ ಕಂಡದರ ಬಗ್ಗೆ ಏನಾದರೂ ಹೇಳುವ ಅಭ್ಯಾಸ ಇದ್ದರೆ ಕೆಲವೊಂದರಿ ಸೋತು ಹೋವುತ್ತು. ಮೆಳ್ಳೆ ಗಣ್ಣು ಕೋಸು ಕಣ್ಣು, ಕೇರೆ ಕಣ್ಣು, ಪುಚ್ಚೆಕಣ್ಣು ಹೀಂಗೆ ಕಣ್ಣಿನ ವೈವಿಧ್ಯವ ನಾವು ಗುರುತಿಸಿದ್ದು!
                          ಕೆಲವು ಜನ ಕಣ್ಣಿದ್ದೂ ಕುರುಡರ ಹಾಂಗೆ ನೋಡಿದರೂ ನೋಡದ್ದೋರ ಹಾಂಗಿಪ್ಪೋರೂ ಇದ್ದವಲ್ಲದೋ?ಶ್ರೀಮಂತರಿಂಗೆ ಬಡವರ  ಪಾಪದೋರ ಕಂಡರೆ ಸಸಾರ!ಹೊಟ್ಟೆ ಕಿಚ್ಚಿನೋರಿಂಗುದೆ ಬೇರೆಯೋರ ಅಭಿವೃದ್ಧಿ ಕಾಂಬಗ  ಹೊಟ್ಟೆ ಉರಿತ್ತಡೊ! ಮತ್ತೆ ಕೆಲವು ಜನ ಬದುಕ್ಕಿಪ್ಪಗಳೇ ಒಳ್ಳೊಳ್ಳೆ ರಮಣೀಯ ಜಾಗಗೊಕ್ಕೆ, ತೀರ್ಥಕ್ಷೇತ್ರಂಗೊಕ್ಕೆ ಹೋಪಲೆ ಇಷ್ಟ ಪಡುತ್ತವು. ಜೀವನಲ್ಲಿ ಅದೊಂದು ಬಾಕಿ ಅಪ್ಪದು ಬೇಡ ಹೇಳಿ, ಬೇರೆಯೋರ ಒತ್ತಾಯಕ್ಕೆ ಹೋಪೋರೂ ಇದ್ದವಲ್ಲದೋ!
          ಒಳಗಣ್ಣು ಹೇಳುವದಿದ್ದಲ್ಲದೋ! ಅದು ಮನಸ್ಸಿನ ಹೇಳುವದಲ್ಲದೋ? ಹುಟ್ಟಿಂದಲೇ ಕುರುಡರಾದೋರಿಂಗೆ ಒಳುದ ಇಂದ್ರಿಯಂಗೊ ತುಂಬಾ ಸೂಕ್ಷ್ಮ ಇರುತ್ತಡೊ. ಕೈಲ್ಲಿ ಮುಟ್ಟಿಯೇ ಅಕ್ಷರ ಓದುವೋರು ಇದ್ದವಲ್ಲದೋ!(ಬ್ರೈಲ್ ಲಿಪಿ) ಮತ್ತೆ ಕುರುಡನೂ ಕುಂಟನೂ ಬಹಳ ಹಿಂದೆ ಕಾಶೀ ಯಾತ್ರೆ ಮಾಡಿದ್ದವಡೊ. ಕುರುಡನ ಹೆಗಲ್ಲಿ ಕೂದ ಕುಂಟ ದಾರಿ ಹೇಳಿ ನಡಕ್ಕೊಂಡೇ ಹೋಯಿದವಡ. ಅಂತೂ  ದೇವರು ಕೊಟ್ಟ ಜನ್ಮಲ್ಲಿ ಜೀವನ ಯಾತ್ರೆಯ ಫಲಪ್ರದವಾಗಿ ಆರಿಂಗೂ ತೊಂದರೆಯಿಲ್ಲದ್ದೆ ಮುಗಿಶುವೋನೇ ಜಾಣ! ದೇವರ ಕಡೆಗಣ್ಣಿನ ನೋಟ - ಕರುಣಾದೃಷ್ಟಿ ನಮ್ಮ ಮೇಲಿದ್ದರೆ ಅವ ಕೊಟ್ಟ ಕಣ್ಣುಗಳ ಸಾರ್ಥಕತೆ ಆದ ಹಾಂಗೇ ಅಲ್ಲದೋ!

ಬಯಕೆ ನೂರಾದರೆ

                                                               ಬಯಕೆ ನೂರಾದರೆ
ನಾವು ಆಶಾಜೀವಿಗೊ ಆಗಿರೆಕ್ಕು,ನಿಜ.ಜೀವನಲ್ಲಿ ನವಗೆ ನಿರಾಶೆ ಹುಟ್ಟುಲಾಗ.ಏನನ್ನಾದರೂ ಸಾಧುಸೆಕ್ಕು,ಹತ್ತು ಜನರೊಟ್ಟಿಂಗೆ ನಾವುದೇ ಸೇರೆಕ್ಕು:ಹಿತವಾಗಿ ಮಿತವಾಗಿ ಸುಖವ ಅನುಭವುಸೆಕ್ಕು ಹೇಳುವ ಆಶೆ ತಪ್ಪಲ್ಲ. ಯಾವುದೂ ಬೇಡ ಹೇಳುವ ಮನೋಭಾವ ಬಂದರೆ ವೈರಾಗ್ಯ ಹೇಳುತ್ತವು. ನಾವು ಎಂತಗೆ ಹುಟ್ಟಿದ್ದು, ನಮ್ಮಂದ ಈ ಲೋಕಕ್ಕೆ ಎಂತ ಆಯೆಕ್ಕಪ್ಪ ಹೇಳುವ ಜಿಜ್ಞಾಸೆ ನಮ್ಮ ಇದರ ಎಲ್ಲ ಯೋಚನೆ ಮಾಡುಸುತ್ತು. ಈ ಪ್ರಪಂಚಂದ ,ಪ್ರಕೃತಿಂದ ತುಂಬ ತುಂಬ ಉಪಕಾರ ಹೊಂದುತ್ತು! ಅಮ್ಮ ಅಪ್ಪ  ಇವರ ಸಹಾಯಂದ ಪ್ರಪಂಚ ನೋಡುಲೆಡಿಗಾತು. ಮೊದಲ ಉಪಕಾರ ಅವರಿಂದಾದರೆ, ಮತ್ತೆ ಮನೆಯ ಇತರ ಜನಂಗೊ. ಎಲ್ಲೋರ ಸಹಾಯಂದ ಹೇರಾಣ ಜನಂಗಳ ಸಂಪರ್ಕ ಸಿಕ್ಕುತ್ತು. ಅವರೆಲ್ಲ ಒಡನಾಟಂದ ಲೋಕ ಜ್ಞಾನ ಸಿಕ್ಕುತ್ತು. ಆ ವರೆಗೆ ಎಲ್ಲೋರಿಂದಲೂ ಉಪಕಾರ ಹೊಂದಿದ ಮೇಲೆ ನಾವು ಎಲ್ಲೋರ ಹಾಂಗೆ ಸಾಮಾನ್ಯ ಮನುಷ್ಯರಾವುತ್ತು. ಸಮಾಜ ನವಗೆ ಕೊಟ್ಟ ಸಹಾಯವ ಬೇರೆಯೋರಿಂಗೆ ನಾವುದೇ ಹಂಚಿಗೊಂಡರೆ ನಾವುದೆ ಸಮಾಜಕ್ಕೆ ಉಪಕಾರ ಮಾಡಿದ ಹಾಂಗಾವುತ್ತು. ಹಲವು ವ್ಯಕ್ತಿಗಳಿಂದಲೇ ಒಂದು ಸಮಾಜ ಬೆಳವದಲ್ಲದೋ!
       ಸಾಮಾನ್ಯವಾಗಿ ಹೆಚ್ಚಿನೋರುದೇ ಬೇರೆಯೋರ ಸಹಾಯಂದ ನಡವಲೆ ಕಲ್ತ ಮೇಲೆ ನವಗೇ ನಡವಲೆಡಿತ್ತು. ಎಡಿಯೆಕ್ಕುಸ್ವಾವಲಂಬಿಗೊ ಆವುತ್ತು.ಹೆರಿಯೋರಿಂದ ಬಂದ  ಕೃಷಿ ತೋಟ ಹೀಂಗೆಲ್ಲ ಇದ್ದರೆ ಹೆರಿಯೋರ ಮಾರ್ಗದರ್ಶನಲ್ಲಿ ಅದರ ಮುಂದುವರುಸುವದು ಸಾಧಾರಣ ಎಲ್ಲೋರೂ ನಡಕ್ಕೊಂಬ ಪದ್ಧತಿ.ಬದುಕ್ಕಿಲಿಪ್ಪ ದಾರಿಮಾಂತ್ರ ಅಲ್ಲ ಬದುಕ್ಕು ಸುಗಮ ಅಪ್ಪಲ್ಲೆ, ಐಷಾರಾಮಿ ಜೀವನ ನಡೆಶುಲೆ ನಮ್ಮ ಮನಸ್ಸು ಮಾಡುತ್ತು. ಹೆರ ಪ್ರಪಂಚಲ್ಲಿ ಬದುಕ್ಕುಲೆ ಅನೇಕ ದಾರಿಗೊ ಇದ್ದು. ಉದ್ಯೋಗ ಸಿಕ್ಕೆಕ್ಕಾರೆವ್ ಪೇಟಗೆ ಹೋಯೆಕ್ಕು. ಹಳ್ಳಿಲ್ಲಿದ್ದೋರು ಒಂದರಿ ಪೇಟಗೆ ಹೋದರೆ ಮತ್ತೆ ಹಳ್ಳಿಗೆ ಬಪ್ಪಲೆ ಇಷ್ಟ ಪಡುತ್ತವಿಲ್ಲೆ. ಬೆವರು ಸುರಿಸಿ ದುಡಿಯೆಡ ಪೈಸೆ ಕೊಟ್ಟರೆ ಎಲ್ಲ ಸಿಕ್ಕುತ್ತು. ಒಂದು ಆಶೆ ಪೂರೈಸಿ ಅಪ್ಪಗ ಹುಚ್ಚು ಕುದುರೆಯ ಹಾಂಗೆ ಮನಸ್ಸು ಇನ್ನೊಂದು, ಮತ್ತೊಂದು ಹೀಂಗೆ ತುಂಬಾ ಬಯಸಿದ್ದರ ಎಲ್ಲ ಪಡೆವಲೆ ಸದಾ ಹಂಬಲುಸುತ್ತು.ಆಸೆ ಕುದುರೆ ಬೆನ್ನೇರಿ ಹೋಪಲೆ ಶುರುಮಾಡಿದರೆ ಅದಕ್ಕೆ ಲಂಗು ಲಗಾಮು ಇಲ್ಲೆ!ಪುರಾಣ ಇತಿಹಾಸಂಗೊ ನವಗೆ ಪಾಠ ಹೇಳಿದ್ದು.
        ಜೀವನ ಸಾಗುಸುಲೆ ತಕ್ಕಷ್ಟು ಸಿಕ್ಕಿದ ಮೇಲೆ ನಾ:ಳಂಗಾಣ ನೆಂಪು ಬತ್ತು. ಹಾಂಗೆ ಕೂಡೂ ಹಾಕುಲೆ ಹೆರಡುತ್ತು. ಸರಿ ದಾರಿಲ್ಲಿ  ಆಸೆ ನೆರವೇರದ್ದರೆ ಅಡ್ಡ ದಾರಿಯ ಹುಡುಕ್ಕುತ್ತು. ಇದೇ ಯೋಚನೆಲ್ಲಿ ನಮ್ಮ ಸುತ್ತು ಮುತ್ತಲಿನ ಸಮಾಜವ ಮರೆತ್ತು.ಊಟಕ್ಕೂ ಗತಿಯಿಲ್ಲದ್ದೋರಿಂಗೆ ಸಹಾಯ ಮಾಡುಲೆ,ಏನಾದರೂ ಸಾಮಾಜಿಕ ಆವಶ್ಯಕತೆಗೊಕ್ಕೆ ಸಹಾಯ ಮಾಡುಲೆ,ಸ್ವಯಂಸೇವಕರಾಗಿ ದುಡಿವಲೆ ಆಸ್ಪದ ಇದ್ದರೂ ಮರದು ನಮ್ಮ ಹಂಬಲ ಮುಂದುವರುಸುವಗ ಸಮಾಜಕ್ಕೆ ನಾವೇನೂ ಕೊಡುತ್ತಿಲ್ಲೆ,ಋಣ ಬಾಕಿ ಆವುತ್ತು.  ಹಿಂದಾಣೊರು ಹೇಳಿತ್ತಿದ್ದವು. ಇದ್ದಪ್ಪಗ ತನ್ನಲ್ಲಿದ್ದು ಎಲ್ಲೋರ ಎದುರಂದಲೇ ಮನಸೇಚ್ಛೆ ತಿಂಬಲಾಗ ಹೇಳಿ ಮಾಂತ್ರ ಅಲ್ಲ ಕೊಡುಲೆ ಮನಸ್ಸಿಲ್ಲದ್ದರೆ ಅವು ಕಾಣದ್ದ ಹಾಂಗೆ ತಿನ್ನು ಹೇಳಿ. ಅದರಿಂದಲೇ ಕಳ್ಳ ಹಣ ತುಂಬಿದ್ದಾಗಿರೆಕ್ಕು!ತನ್ನಲ್ಲಿಪ್ಪದರ ಇನ್ನೊಬ್ಬರಿಂಗೆ ಕೊಟ್ಟು ತಿಂಬದರಿಂದ ನವಗಪ್ಪ ತೃಪ್ತಿಯ ಯೋಚನೆ ಮಾಡಿದರೆ ಆರಿಂಗೂ ಕೊಟ್ಟು ತಿಂಬಲೆ ಮನಸ್ಸಕ್ಕು. ಗಾಂಧಿ ತವ ಹೇಳುತ್ತವು. ಅಪರಿಗ್ರಹ! ಅಂದಂದಿಂಗೆ ಬೇಕಾದ್ದರ ಅಂದಂದೇ ತಂದು ಹಿತವಾಗಿ ಮಿತವಾಗಿ ತಿಂದರೆ ಬಪ್ಪದು ತೃಪ್ತಿ ಸಂತೋಷ! ಮಿತಿಮೀರಿ ಮೂಗಿನವರೆಗೆ ತಿಂದರೆ ಅಜೀರ್ಣವೂ ಅಕ್ಕು. ಒಂದು ರೀತಿಯ ಆತ್ಮ ವಂಚನೆಯೂ ಆದ ಹಾಂಗೆ!ದೈವ ನಿರ್ಮಿತ ಪ್ರಕೃತಿಲ್ಲಿ ಸಿಕ್ಕುವ, ನಾವು ಬೆಳೆವ ಆಹಾರ ಪದಾರ್ಥಂಗೊ ಪ್ರಕೃತಿ ನವಗೆ ಕೊಡುವ ಸಾಲ!
ಮಾತೃ ಋಣ,ಪಿತೃ ಋಣ, ದೈವ ಋಣ ಹೀಂಗೆ ನಮ್ಮ ಬದುಕ್ಕಿಲ್ಲಿ ನಾವು ಋಣಕ್ಕೆ ಪಾತ್ರರಾವುತ್ತು. ಭೂಮಿಲ್ಲಿ ಸಿಕ್ಕುವ ಉತ್ಪತ್ತಿಯ್ತೂ ದೇವರು ನವಗೆ ಕೊಡುವ ಸಾಲ. ಅದಕ್ಕೆ ನಮ್ಮಷ್ಟೆ ಹಕ್ಕುದಾರರು ಎಲ್ಲೋರು!ನಾವು ತಿಂಬಗ ಉಪವಾಸ ಇಪ್ಪ ಇನ್ನೊಂದು ವಿಭಾಗವ ಮರದರೆ ದೇವರ ಮರದ ಹಾಂಗೆ ಆವುತ್ತಿಲ್ಲೆಯೋ! ಒಂದೇ ಮನೆಲ್ಲಿಪ್ಪೋರು ಒಬ್ಬಕ್ಕೊಬ್ಬ ಹಂಚಿ ತಿಂದುಗೊಂಬದರ ಬದಲು ಮಾಡಿ ಮಡಗಿದ್ದರ ಮದಲು ಆನು ತಿಂದುಗೊಳ್ತೆ ಹೇಳಿ ಎಲ್ಲೋರೂ ಬಂದು ಮುಗಿಶಿಕ್ಕಿ ಹೋಪಗ ಮತ್ತೆ ಬಂದೋರಿಂಗೆ ಉಪವಾಸ!.ನಮ್ಮ ಹಾಂಗೆ ಎಲ್ಲೋರೂ ಇದಕ್ಕೆ ಭಾಗಿಗೊ ಹೇಳಿ ಉಂಡು ತಿಂದು ಒಂದು ಮನೆಲ್ಲಿ ನಾವು ಮಾಡಡದೋ? ಹಾಂಗೆ ಎಲ್ಲೋರೂ ಗ್ರೇಶಿದರೆ ಲೋಕಲ್ಲಿ ಬಡತನ ಹೇಳುವದು ಒಳಿಯ!
   ಎನ್ನ ಮನೆ, ಎನ್ನ ಮಕ್ಕೊ, ಎನ್ನ ಕುಟುಂಬ ಹೀಂಗೆ ಹೆಜ್ಜೆಯಾಗಿ ಸ್ವಾರ್ಥವ ಸಾಧುಸುವದರಿಂದ ದಿಕ್ಕಿಲ್ಲದ್ದೋರು ಉಪವಾಸ ಇರೆಕ್ಕಾವುತ್ತು. ಎನ್ನ ಹಾಂಗೆ ಎಲ್ಲೋರೂ ಹೇಳುವ ಯೋಚನೆ ಎಲ್ಲೋರು ಮಾಡ್ಯೊಂಡರೆ ಇಲ್ಲದ್ದೋರ ವಿಭಾಗವೇ ಇಲ್ಲದ್ದೆ ಆಗದೋ?ಎನ್ನದು ಎಂಗಳದ್ದು ಹೇಳುವದು ಮನೆಯೊಳ ಮಾಂತ್ರ ಅಲ್ಲ ದೇಶ ಮಾಂತ್ರ ದೇಶ ವ್ಯಾಪ್ಯಿಯಾಗಿ ಬೆಳದರೆ ಲೋಕಲ್ಲಿ ಸುಖಶಾಂತಿ ನೆಲಸುಗು ಹೇಳಿ ಕಾಣುತ್ತು. ಷಡ್ವೈರಿಗಳಲ್ಲಿ ಒಂದೇ ಹಂತಲ್ಲಿ ಎಲ್ಲವನ್ನೂ ಒಂದೇಸರ್ತಿ ಬಿಡುಲೆ ಎಡಿಯದ್ದರೂ ಹಂತ ಹಂತವಾಗಿನಮ್ಮ ಹಿಡಿತಲ್ಲಿ ಮಡಿಕ್ಕೊಂಡರೆ ಎಲ್ಲ ಸರಿಯಕ್ಕು ಹೇಳಿ ಕಾಣುತ್ತು. ಮೊದಲು ನಾವು,ಮತ್ತೆ ಮನೆಯೋರು,ಊರೋರು ಇಡೀ ಸಮಾಜ ಹೀಂಗೆ ದೇಶ ವಿಶ್ವ ವ್ಯಾಪ್ತಿಯಾಗಿ ಷಡ್ವೈರಿಗಳ ಗೆದ್ದುಗೊಂಡರೆ ವಿಶ್ವ ಭ್ರಾತೃತ್ವ ಬೆಳೆಶ್ಯೊಂಡರೆ, ಜೀವನ ಸಾರ್ಥಕ ಅಕ್ಕು, ನಮ್ಮ ಮತ್ತೆ ಮತ್ತೆ ಜನ್ಮ, ಮರಿಜನ್ಮ ಹೀಂಗೆ ಒದ್ದಾಡುವ ಕಷ್ಟವೂ ಕಡಮ್ಮೆ ಅಕ್ಕು!
       ಒಂದಕ್ಕೊಂದು ಪೂರಕವಾಗಿ ಆಸೆ,( ಕಾಮ) ಬಯಸಿದ್ದು ಸಿಕ್ಕದ್ದರೆ ಕ್ರೋಧ, ದುಃಖ,ಸಿಕ್ಕಿದರೆ ಅದರ ಮೇಲೆ ಮೋಹ,ಬೇರೊಬ್ಬ ಅದಕ್ಕಿಂತ ವಿಶೇಷವಾದ್ದರ ಪಡದರೆ ಮತ್ಸರ,ಎನ್ನತ್ರೆ ಇದ್ದು ಹೇಳುವ ಮದ,ಆರಿಂಗು ಕೊಡೆ,ಹೇಳಿ ಲೋಭ,ಹೀಂಗೆ ಒಂದಕ್ಕೊಂದು ಸಂಕೋಲೆಯ ಹಾಂಗೆ ನಮ್ಮ ನೆಮ್ಮದಿಯ ದೂರ ಮಾಡುತ್ತು.ಇದ್ದದರ ರಕ್ಷಣೆಗಾಗಿ ಕಾವಲು! ಒರಕ್ಕಿಲ್ಲೆ!ಒಂದೊಂದು ರೋಗ ರುಜಿನ ಬಂದೊದಗುತ್ತು, ಹಾಂಗೆ ಆಸೆ ಕೈಗೂಡುಸುಲೆ ಬೇಕಾಗಿ ಅದರ ಹಿಂದೆ ಹೋಗಿ,ಆರೋಗ್ಯವೂ ನೆಮ್ಮದಿಯೂ ಇಲ್ಲದ್ದಾವುತ್ತು. ನಾಳೆಯಾಣ ಚಿಂತೆ ಬೇಕು. ಬೇಡ ಹೇಳಿ ಅಲ್ಲ.ಅದಕ್ಕಾಗಿ ಇಡೀ ವರ್ಷಕ್ಕೆ ಬೇಕಾದ್ದರ ತಂದು ಮಡಗುಲೆ ಹೆರಟರೆ, ಹಾಂಗೆ ದಾಸ್ತಾನು ಮಾಡಿದ್ದು ಎಲಿ ಹೆಗ್ಳಂಗಳ ಪಾಲಾಗಿಯೋ, ಅಥವಾ ಹಾಳಗಿಯೋ ಹೋದರೆ ಕದ್ದು ಹೋದರೆ, ಆರಿಂಗೂ ಇಲ್ಲದ್ದೆ ಅಕ್ಕನ್ನೆ! ಏನೋ ಆಸೆಂದ ತುಂಬಾ ಬೆಲೆ ಬಾಳುವ ಚಿನ್ನವ ಮನೆಲ್ಲಿ ಮಡಗುಲೆ ಹೆದರಿ ಬೇಂಕಿಲ್ಲಿ ಮಡಗುವದು.ಅಕಸ್ಮಾತ್ ಮನೆಗೆ ತಂದದು ಗೊಂತಾಗಿ ಸುಲಭ ಸಂಪಾದನೆಗೆ ಹೆರಡುವ ಕಳ್ಳರ ಪಾಲಪ್ಪದು,ಎಲ್ಲ ನಿತ್ಯ ನಡಕ್ಕೊಂಡಿದ್ದರೂ ಕೂಡಿ ಹಾಕುವ ಹುಚ್ಚು ಬಿಟ್ಟು ಹೋವುತ್ತಿಲ್ಲೆ.ಅವಕ್ಕೂ ನಮ್ಮತ್ರೆ ಹೆಚ್ಚಿಪ್ಪದು ಕಾಂಬಗ ಆಸ್ವ್ ಆವುತ್ತನ್ನೆ!ಅಂಬಗ ಎಲ್ಲವೂ ಆಸೆಯ ಬೆನ್ನುಹತ್ತಿದರೆ ಒದಗುವ ಹಾನಿಗೊ ದುರಂತಂಗೊ.ಕೂಡಿ ಹಾಕಿದ್ದು ಇಲ್ಲದ್ದಪ್ಪಗ ಬೇಜಾರು ಅಪ್ಪದು ಸಹಜ. ಅದರ ಮತ್ತೆ ಪಡವಲೆ ತಲೆ ಖರ್ಚು. ಮಿತವಾಗಿದ್ದರೆ ಆರೂ ಕಣ್ಣು ಹಾಕಲಿದ್ದೋ? ನಾವು ಮಾಂತ್ರ ವಿಶ್ವ ಮಾನವ ಜನಾಂಗವೇ ಬುದ್ಧಿ ಜೀವಿಗೊ ಎನಿಸಿದೋರೇ ಆಸೆಯ ಬೆನ್ನು ಹತ್ತಿಯೇ ಸೋತದು! ಸೋಲುವದು.ಆದರೂ ಬುದ್ಧಿ ಬಯಿಂದಿಲ್ಲೆ.
  ಜೀವನಲ್ಲಿ ನಿರಾಶೆಯಿರೆಕ್ಕು ಹೇಳಿ ಹೇಳುತ್ತಿಲ್ಲೆ. ಹೆಚ್ಚೆಚ್ಚು ಪಡವ ದುರಾಸೆ ಇಪ್ಪಲಾಗ ಹೇಳಿ ಅಭಿಪ್ರಾಯ. ಒಬ್ಬ ಪಡದ ಹೇಳಿ ಅಪ್ಪಗ ಅವಂದ ಹೆಚ್ಚು ಆನು ಹೊಂದೆಕ್ಕು ಹೇಳುವ ಆಸೆ ಹೊಟ್ಟೆ ಕಿಚ್ಚಿಂಗೆ ದಾರಿ ಮಾಡುತ್ತಿಲ್ಲೆಯೋ?ಇನ್ನೂ, ಮತ್ತೂ ಹೆಚ್ಚು ಪಡೆಯೆಕ್ಕು ಹೇಳಿ ಎಲ್ಲೋರೂ ಗ್ರೇಶಿದರೆ ಒಬ್ಬಕ್ಕೊಬ್ಬಂಗೆ ಸ್ಪರ್ಧೆ ಉಂಟಾವುತ್ತಿಲ್ಲೆಯೋ? ಎಲ್ಲೋರೂ ಸ್ವಾರ್ಥವನ್ನೇ ಗ್ರೇಶಿದರೆ ಲೋಕಹಿತವ ಬಯಸುವೋರು ಆರು?ನಮ್ಮಲ್ಲಿ ವಿಶಾಲ ಭಾವನೆ ಹುಟ್ಟುವದು ಯಾವಾಗ?ಹೃದಯ ವೈಶಾಲ್ಯ ಬಪ್ಪದು ಹೇಂಗೆ? ಹೀಂಗೇ ಮುಂದುವರುದರೆ ಮುಂದಾಣ ಜನಾಂಗವು ಇದನ್ನೇ ಜೀವನದ ಧ್ಯೇಯವಾಗಿ ತೆಕ್ಕೊಂಗನ್ನೆ!ಹನಿಕೂಡಿದರೆ ಹಳ್ಳ ಹೇಳುತ್ತವು. ಎಲ್ಲೋರೂ ಹೃದಯ ವಿಶಾಲತೆಂದ ತನ್ನ ಹಿತದೊಟ್ಟಿಂಗೆ ಲೀಕ ಹಿತವನ್ನೂ ಯೋಚನೆ ಮಾಡಿದರೆ ಆ ಮಟ್ಟಿಂಗೆ ಪ್ರಯತ್ನ ಮಾಡಿದರೆ ಕಾರ್ಯ ಸಾಧನೆ ಅಕ್ಕು ಹೇಳಿ ಕಾಣುತ್ತು.
             ವಿಶಾಲ ಸಮುದ್ರಲ್ಲೇ "ಎನ್ನದು, ತನ್ನದು" ಹೇಳಿ ಹಕ್ಕು ಸ್ಥಾಪನೆಗೆ ಹೊರಟು ಪ್ರಪಂಚವೇ ಅಲ್ಲೋಲ ಕಳ್ಳೊಲ! ಎಲ್ಲ ಗತಾನುಗತಿಕ!ದೈವೇಚ್ಛೆಯೇ ಹಾಂಗೋ ಎಂತದೋ!ಬೇಡನಾಗಿದ್ದೋನ ರಾಮಾಯಣ ಬರವ ಹಾಂಗೆ ಮಾಡಿದ್ದೂ ಅವನೆ. ದಾರಿಲ್ಲಿ ಹೋಪಲೆ ಮಾಡಿದ್ದು ದಾರಿ ತೋರುಸಿದ್ದು ಎಲ್ಲ ಅವನೇ!ಜ್ಞಾನುಗೊ ಒಂದು ಹಾದಿಲ್ಲಿ ಹೋದರೆ,ಬುದ್ಧಿಜೀವಿಗೊ ಹೇಳುವೋರು ಎಂಗೊ ನಡವಾ ದಾರಿಯೇ ಸರಿಯಾದ್ದು ಹೇಳಿ ಮುಂದರಿದು ಸಿಕ್ಕಿ ಬಿದ್ದರೆ, "ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು "ಹೇಳಿ ಅಕ್ಕು.ಬಂದ ದಾರಿ ಸರಿಯಾಯಿದಿಲ್ಲೆ ಹೇಳಿ ತಿದ್ದಿಗೊಂಡರೆ ಮತ್ತೆ ಪಶ್ಚಾತ್ತಾಪ ಪಡೆಕ್ಕಾಗ!ನೂರೊಂದು ಬಯಕೆಯ ಬೆನ್ನು ಹಿಡುದು ಕಡೆಂಗೆ ನಮ್ಮ ಬಯಕೆ ನುಚ್ಚು ನೂರಪ್ಪದಕ್ಕೆ ಮದಲು ಎಚ್ಚತ್ತುಗೊಂಡರೆ "ಲೋಕಾಸಮಸ್ತಾ ಸುಖಿನೋ ಭವಂತಿ" ಹೇಳಿ ಆಗದೋ!