ಕೈಬೆರಳುಗೊ
ಮನುಷ್ಯಂಗೆ ಹೆಚ್ಚು ಉಪಯೋಗ ಅಪ್ಪ ಕೈ ಬೆರಳುಗಳ ಬಗ್ಗೆ ಎನಗೆ ಗೊಂತಿಪ್ಪ ಇನ್ನೂ ಕೆಲವು ವಿಶಯಂಗಳ ಹೇಳಿದರೆ ಬೇಜಾರಾಗ ಹೇಳಿ ಗ್ರೇಶಿಗೊಳ್ಲುತ್ತೆ. ನಮ್ಮ ಪೂರ್ವಜರು ಅಪ್ಪ ಮಂಗಂಗೊಕ್ಕೆಕೈಲ್ಲಿ ಬೆರಳುಗೊ ಇದ್ದರೂ ನಮ್ಮ ಹಾಂಗೆ ಉಪಯೋಗ ಇರುತ್ತಿಲ್ಲೆ.ಕೆಲವು ಕೈಲ್ಲಿಯೋ, ಕಾಲಿಲ್ಲಿಯೋಆರಾರು ಬೆರಳುಗಳೂ ಇಪ್ಪದಿದ್ದು. ಆರು ಬೆರಳುಗೊ ಒಳ್ಳೆ ಲಕ್ಷಣಡೊಚಂದ್ರಹಾಸಂಗೆ ಕಾಲ್ಲಿ ಆರು ಬೆರಳು ಇದ್ದತ್ತಡೊ.ಸಾಲದ್ದಕ್ಕೆ ಮೂಲಾ ನಕ್ಷತ್ರದ ಕೆಟ್ತ ಅಂಶಲ್ಲಿ ಅವ ಹುಟ್ಟಿದ್ದಾದರೂ ರಾಜನೇ ಆಯಿದಡಾ. ಬೆರಳಿನ ಕಾರಣವೋ ಗೊಂತಿಲ್ಲೆ.ಆದರೆ ಆರನೇ ಬೆರಳು ಉಪಯೋಗಕ್ಕೆ ಸಿಕ್ಕುತ್ತಿಲ್ಲೆ.ಲೆಕ್ಕಕ್ಕೆ ಮಾಂತ್ರ ಆರು ಬೆರಳು.ನಮ್ಮಲ್ಲಿ ಕೆಲವು ಜನರ ಬಗ್ಗೆ ನಾವು ಹೇಳಿಗೊಂಬದು ಇದ್ದು ಅಲ್ಲದೋ "ಅವ ಲೆಕ್ಕಕ್ಕೆ ಮಾಂತ್ರ ಹೇಳಿ. ಆಟಲ್ಲಿ ಹೇಳುವ ಕ್ರಮ ಇದ್ದು ಲೆಕ್ಕ ಭರ್ತಿಗಾದರೂ ಬಂದು ಸೇರು ಹೇಳಿ. ಒಳುದ ಬೆರಳುಗೊಕ್ಕೂ ಆರನೆಯ ಬೆರಳಿಂಗೂ ಸಂಪರ್ಕವೇ ಇಲ್ಲೆ. ಹೆಬ್ಬಟೆ ಬೆರಳಿನ ಬುಡಂದ ಹೆರಟರೆಸಣ್ಣಕ್ಕೆ ಬೆರಳಿನ ಹಾಂಗೆ ಇಕ್ಕು. ಏಳು ಬೆರಳಿನೋವೂ ಇದ್ದವಡೊ. ಬೆರಳಿನ ಲೆಕ್ಕಂದ ಹೆಚ್ಚು ಬೆರಳುಗಳ ಉಪಯೋಗದ ಬಗ್ಗೆ ತಿಳಿಯೆಕ್ಕಲ್ಲದೋ?
ಪ್ರತಿಯೊಂದು ಬೆರಳಿಂಗೂ ಒಂದೊಂದು ಸಂಜ್ಞೆಗೊ ಇರುತ್ತು.ಕೈ ಭಾಷೆ ಹೇಳುತ್ತವನ್ನೆ! ನಾವು ಕೆಲವು ಜನ ಒಟ್ಟಿಂಗೆ ಇಪ್ಪಗ ನಮಗೆ ಬೇಕಾದೋರಿಂಗೆ ಮಾತ್ರ ಅರ್ಥ ಅಪ್ಪ ಹಾಂಗೆ ಕೈ ಭಾಷೆ, ಕಣ್ಣು ಭಾಷೆ ಮಾಡುವದಿದ್ದಲ್ಲದೋ?. ಆದರೆ ಈ ಭಾಷೆಗೂ ಒಂದು ಅರ್ಥ ಇರುತ್ತು. ಹಾಂಗೆ ಕಿಂಕಿಣಿ ಬೆರಳಿನ ಮಾಂತ್ರ ಸರ್ತ ಮಾಡಿ ಒಳುದ್ದರ ಮಡುಸಿಗೊಂಡಿದ್ದರೆ, ನೆಂಪಾತನ್ನೆ! ಮಾಷ್ಟ್ರಕ್ಕಳ ಮಂಕಾಡುಸಿ ಹೆರ ಹೋಯೆಕ್ಕಾರೆ ಮಕ್ಕೊಗಿಪ್ಪ ಒಂದು ಉಪಾಯವೇ....ಸಾರ್ ಒಂದಕ್ಕೆ! ಹೇಂಗಿಪ್ಪ ಸ್ಟ್ರಿಕ್ಟ್ ಮಾಷ್ಟ್ರನೂ ಸರಿ ಹೋಗು ಹೇಳೆಡದೋ? ಕಳುಸದ್ದರೆ ಮತ್ತೆ ಮಾಷ್ಟ್ರನ ಕೊರಳಿಂಗೇ ಸುತ್ತುಗು ಕ್ಲೀನ್ ಮಾಡ್ತ ಕೆಲಸ. ಒಟ್ಟಿಂಗೆ ಪವಿತ್ರ ಬೆರಳಿನ ಸೇರುಸಿ ಹಿಡುದರೆ, ಕೇಳೆಡ ಅವಂಗೆ ಹೊಟ್ಟೆ ಸರಿ ಮಾಡೆಕ್ಕು ಹೇಳಿಯೇ ಅರ್ಥ ಅಲ್ಲದೋ? ಕೈಮುಷ್ಟಿ ಹಿಡುದು ಹೆಬ್ಬೆರಳಿನ ಮಾಂತ್ರ ನೆಗ್ಗಿ ಹಿಡಿದರೆ...ಒಂದರ್ಥ.ಹೆಬ್ಬೆರಳಿನ ಅಲ್ಲಿಗೇ ಆಡುಸಿಗೊಂಡು ಇಡೀ ಮುಷ್ಟಿಯ ಆಡುಸಿಗೊಡರೆ ತನ್ನನ್ನೂ ಎಂತ ಮಾಡುಲೆಡಿಯ ಹೇಳಿಯೂ ಆವುತ್ತು. ಮತ್ತೆ ಕೈಮುಷ್ಟಿ ಹಿಡುಕ್ಕೊಂಡು, ಎದಿರೆ ಇದ್ದೋರತ್ರೆ ಎಂತ, ಏನು? ನೀನು ಆರು ಹಿಂಗೆಲ್ಲ ಅರ್ಥ ಮಾಡ್ಯೊಂಬಲಕ್ಕು.ಕೈ ಮೊಗಚ್ಚಿ ಹಿಡುಕ್ಕೊಂಡು ಎಲ್ಲ ಬೆರಳುಗಳ ಸಹಾಯಂದ ಅಥವಾ ಎದುರಿಪ್ಪೋನ ತಾತ್ಸಾರ ಭಾವನೆಂದ ಕೋಲು ಬೆರಳು ಮಾತ್ರ ಉಪಯೋಗುಸಿ ಇಲ್ಲಿಂದ ಎದ್ದು ಹೋಗು ಹೇಳುತ್ತವನ್ನೆ. ಎರಡು ಕೈದೂ ಕೋಲು ಬೆರಲುಗಳ ಜೋಡುಸ್ಯೋಂಡು ಹೇಳಿರೆ, ಅವು ಇಬ್ರೂ ರಾಝಿಲ್ಲಿದ್ದವು ಹೇಳಿಯೋ,ಒಟ್ಟಾಯೆಕ್ಕು ಹೇಳಿಯೋ,ಅವರ ಇಬ್ರನ್ನೂ ಒಟ್ಟು ಮಾಡಿ ಹೇಳಿಯೋ ಅರ್ಥ ಬತ್ತು. ನೀನು ಏಳು, ನೀನು ಕೂರು ಹೇಳುವುದಕ್ಕೆ ಕೋಲು ಬೆರಳನ್ನೇ ಉಪಯೋಗುಸುತ್ತವು. ಇಲ್ಲಿಂದ ಎದ್ದು ಹೋಗು ಹೇಳುವದೂ ಆ ಕೆಲಸ ಮಾಡೆಡ ಹೇಳುವದಕ್ಕೂ ಕೋಲು ಬೆರಳೇ ಬೇಕು. ಕೋಲು ಬೆರಳಿನ ಕುತ್ತ ಮಾಡ್ಯೊಂಡು ಕೈ ತಿರುಗಿಸ್ಯೊಂಡು ಮತ್ತೆ ಮುಷ್ಟಿ ಹಿಡುದು ಆಡುಸಿದರೆ ಈ ಊರಿಂಗೆಲ್ಲ ಆರು ಯಜಮಾನ, ಈ ಜಾಗ್ಗೆಲ್ಲ ಆರು ಯಜಮಾನ ಹೇಳಿ ಎಲ್ಲ ಅರ್ಥ ಬತ್ತನ್ನೆ? ಮತ್ತೆ ಕಿಂಕಿಣಿ ಬೆರಳು ಬೀಗಿದರೆ ಎಷ್ಟು ಬೀಗ್ಗು ಹೇಳುವ ಮಾತು ಎದುರಾಣೋನ ಹಿಯಾಳುಸಿ ಹೇಳುವ ಮಾತು. ಕೋಲು ಬೆರಳುಗಳ ಕೊಳಿಕ್ಕೆ ಹಾಕಿದ ಹಾಂಗೆ ಮಾಡಿದರೆ ಅವು ಇಬ್ರೂ ಕೋಪ, ವಿರೋಧಿಗೋ ಹೇಳಿ ಅರ್ಥ: ಅವರ ಒಂದು ಮಾಡೆಕ್ಕು ಹೇಳುಲೆ ಪುನಃಕೋಲು ಬೆರಳುಗಳ ಜೋಡುಸಿ ಹೇಳುವದೆಲ್ಲ ಚಲಾವಣೆಲ್ಲಿಪ್ಪ ಕೋಡ್ ಸಂಜ್ಞೆಗೊ. ನಡು ಬೆರಳಿಂಗೆ ಬಂದರೆ ಉದ್ದವೂ ತೋರವುದೆ ಇದ್ದಲ್ಲದೋ? ಅವು ಇಬ್ರೂ ಒಂದೇ ಹೇಳೆಕ್ಕಾರೂ, ಇಬ್ರು ಇದ್ದವು ಹೇಳುವಗಳೂ ಕೋಲುಬೆರಳು ನಡುಬೆರಳು ಸೇರುಸುತ್ತವು. ಎನಗೆ ಎರಡು ಬೇಕು ಹೇಳುವಗಳೂ ಇದೆರಡು ಬೆರಳು ಜೋಡುಸಿ ಹೇಳುತ್ತು.ಅದರ ಕತ್ತರುಸಿ ಹಾಕು ಹೇಳುವದು ಆ ಎರಡು ಬೆರಳುಗಳನ್ನೇ ಹತ್ತರೆ ದೂರ ಮಾಡ್ಯೊಂಡು.ಇನ್ನು ಕೋಲು ಬೆರಳಿಂಗೆ ಮತ್ತೆ ನಡು ಬೆರಳಿಂಗೆ ತನ್ನ ಶ್ರೀಮಂತಿಕೆ ತೋರುಸಿಗೊಂಬಲೆ ಉಂಗಿಲು ಹಾಕಿಗೊಂಡು ಅದು ಎಲ್ಲೋರಿಂಗೂ ಕಾಂಬ ಹಾಂಗೆ ತೋರುಸ್ಯೊಂಡಿರುತ್ತವು. ಉಂಗುರಬೆರಳು ಹೇಳುವದು ಪವಿತ್ರ ಬೆರಳು ಆದರೂ ನಾಲ್ಕು ಬೆರಂಗೂ ಉಂಗುರ ಹಾಕಿಗೊಂಡೋರು ಇದ್ದವನ್ನೆ. ಎಂತಾರು ಕಾರ್ಯಕ್ರಮಕ್ಕೆ ಆರು ಮುಖ್ಯಸ್ಥ ಕೇಳುವಗ ಕೇಳುತ್ತವನ್ನೆ ಇದಕ್ಕೆ ಆರ ಕೈಗೆ ಉಂಗಿಲು ಹಾಕಿದ್ದು ಹೇಳಿ.
ಪಂಚ ಪಾಂಡವರಲ್ಲಿ,ಧರ್ಮರಾಯ ಧರ್ಮ ಧರ್ಮ ಹೇಳ್ಯೊಂಡು ಮುಂದೆ ಹೋಪೋನು. ಅವನ ಬೆಂಬಲಕ್ಕೆ ಒಳುದ ನಾಲ್ಕು ಜನ ಅಲ್ಲದೋ? ಕೈಲಿ ಆರಿಂಗಾದರೂ ಬಡಿವಗ ಈ ನಾಲ್ಕು ಬೆರಳು ಮಾಂತ್ರ ನೆಗವದಡೋ. ಹೆಬ್ಬೆರಳು ಒಟ್ಟಿಂಗೆ ಇದ್ದು ಹೇಳಿ ಅಲ್ಲದ್ದೆ ಅದಕ್ಕೆ ಕೆಲಸ ಇಲ್ಲೆ. ಅದರೆ ಹೇಳುವದು ಮಾಂತ್ರ ಐದು ಬೆರಳೂ ನೆಗದ್ದು ಹೇಳಿ.ಹಾಂಗೆ ಯುದ್ಧವ ಎಲ್ಲೋರು ಸೇರಿ ಗೆದ್ದವು ಹೇಳ್ತವನ್ನೆ! ಈ ಐದು ಬೆರಳುಗಳನ್ನೂ ಜೋಡುಸ್ಯೊಂಡು ನೋಡುತ್ತವು ಕೆಲವು ಜನ. ಎಂತಕೆ? ಜೋಡುಸುವಗ ಎಡೆ ಕಾಂಬಲಾಗಡೊ.ಎಡೆಲ್ಲಿ ಜಾಗ ಇದ್ದರೆ ಅವನ ಕಈ ಯಾವಾಗಲೂ ಖಾಲಿಯಾಗಿಕ್ಕು. ಅವನ ಕೈಲ್ಲಿ ಪೈಸೆ ನಿಲ್ಲ ಹೇಳಿ ಹೇಳುತ್ತವು. ಇದು ಸಾಮುದ್ರಿಕದೋರ ಮಾತು. ಭೀಮ ಜರಾಸಂಧನೊಟ್ಟಿಂಗೆ ಯುದ್ಧ ಮಾಡುವಗ ಆರೂ ಸೋಲುತ್ತವಿಲ್ಲೆ,ಆರೂ ಗೆದ್ದದೂ ಇಲ್ಲೆ.ಭೀಮ ಜರಾಸಂಧನ ಶರೀರವ ಸಿಗುದು ಇಡುಕ್ಕಿದರೂ ಅದು ಮತ್ತೆ ಜೋಡ್ಯೊಂಡಿತ್ತಡೊ. ಭೀಮಂಗೆ ಬಚ್ಚಿತ್ತು. ಎಂತ ಮಾಡುವದು ಹೇಳಿ ತೋರದ್ದೆ ಅಲ್ಲಿ ಇಲ್ಲಿ ನೋಡ್ಯೊಂಡಿಪ್ಪದಿ ಕೃಷ್ಣಂಗೆ ಗೊಂತಾತು. ಅವ ಎಲೆ ತಿಂದೊಂಡಿತ್ತಿದ್ದಡೋ. ಆ ಎಲೆಯ ಹರುದು ಕಡೆ ಕೊಡಿ ತಿರುಗುಸಿ ಇಡುಕ್ಕಿದಡೊ.ಭೀಮಂಗೆ ಗೊಂತಾತು ಕೃಷ್ಣನ ಸೂಚನೆ. ಕೂಡ್ಳೇಜರಾಸಂಧನ ಶರೀರವ ಸಿಗುದು ತಲೆ ಕಾಲು ತಿರುಗಿಸಿ ಇಡುಕ್ಕಿದಡೋ. ಮತ್ತೆ ಅವನ ದೇಹ ಜೋಡದ್ದೆ ಜರಾಸಂಧ ಸತ್ತೇ ಹೋದಡೊ.
ಇನ್ನು ಮೃದಂಗ,ಮದ್ದಳೆ ಬಡಿವಗ ಕೈಬೆರಳುಗಳ ಉಪಯೋಗವೇ ಬೇಕಾದ್ದಲ್ಲದೋ?ಪೆಟ್ಟಿನ ಉರುಳಿಕೆ ಬೆರಳುಗಳ ಚಮತ್ಕಾರ! ಬೇರೆ ಬೇರೆ ತಾಳಂಗೊಕ್ಕೆ ಬೇರೆ ಬೇರೆ ಬೆರಳುಗಳ ಉಪಯೋಗ ಅವುತ್ತು.ಚೆಂಡೆ ಬಾರುಸುವಗಳೂ ಕೋಲು ಹಿಡಿಯೆಕ್ಕಾರೆ ಬೆರಳುಗಳ ಸಹಾಯ ಬೇಕು. ಕೈಯ ಮೇಲಾಣ ಭಾಗವ ಹನುಸದ್ದೆ ಚೆಂಡೆ ಬಡಿತ್ತವನ್ನೆ. ತಾಳವಾದ್ಯಂಗಳ ಹಾಂಗೆ ಫಿಡ್ಳು,ಕೊಳಲು,ಹಾರ್ಮೋನಿಯಂ, ಗಂಜ್ರ, ನಾಗಸ್ವರ ಯಾವದೇ ಅಗಲಿ ಬೆರಳುಗಳ ಸಾಮರ್ಥ್ಯವೇ ಮುಖ್ಯ ಅಲ್ಲದೋ? ಕೊಳಲಿಂಗೆ ಎರಡು ಕೈದೂ ಆರು ಬೆರಳಿನ ಸಹಾಯ ಬೇಕು. ಕೈಯ ಮತ್ತೆ ಕಾಲಿನ ಬೆರಳುಗಳ ಕೊಡಿಲ್ಲಿ ಶಂಖ, ಚಕ್ರದ ಗುರುತುಗೊ ಇರುತ್ತು ಹೇಳುತ್ತವು. ಹತ್ತು ಬೆರಳುಗಲಲ್ಲಿಯೂ ಶಂಖವೇ ಇದ್ದದಾದರೆ ಅವ ಸನ್ಯಾಸಿ ಹೇಳುತ್ತವು ಸಾಮುದ್ರಿಕ ಬಲ್ಲೋರು.ಎರಡು ಚಕ್ರ ಆದರೆ ಅವ ಧನವಲ್ಲಭ ಅಡೊ.ನಾಲ್ಕು ಚಕ್ರ ಇದ್ದರೆ ಮಹಾ ಪಂಡಿತ ಹೇಳಿ ಹೇಳುತ್ತವು ನಿಜವೊ ಲೊಟ್ಟೆಯೊ ಗೊಂತಿಲ್ಲೆ. ಟೈಪ್ ಮಾಡೆಕ್ಕಾರೆ, ಕಂಪ್ಯೂಟರಿಲ್ಲಿ ಕೆಲಸ ಮಾಡೆಕ್ಕಾರೆ ಬೆತ್ರಳುಗಳ ಸಹಾಯ ಎಷ್ಟಿದ್ದು ಹೇಳುವದರ ಆನು ಹೇಳಿದರೆ ಸರಿ ಆವುತ್ತಿಲ್ಲೆ. ಅದಲ್ಲಿ ಪಳಗಿದೋರು ಹೇಳೆಕ್ಕು.ಮತ್ತೆ ರೆಕೋರ್ಡ್ ರಿಜಿಸ್ತ್ರಿ ಆಯೆಕ್ಕಾರೆ ಚುಂಡೊಪ್ಪು ಬೇಕನ್ನೆ!. ಅಮೇರಿಕಲ್ಲಿ ಎಲ್ಲ ಗ್ರೀನ್ ಕಾರ್ಡಿನ ಕೇಳುವಗ ಫಿಂಗರ್ ಪ್ರಿಂಟ್ ನೋಡುತ್ತವು. ನಮ್ಮಲ್ಲಿಯೂ ಬೇಕು. ಮತ್ತೆ ಹೆಬ್ಬೆರಳಿನ ನಿಜವಾದ ಪ್ರಯೋಜನ ತಿಳುದಿದ್ದ ದ್ರೋಣ ಏಕಲವ್ಯ ಬೆರಳು ಕೇಳಿದ್ದು ಗೊಂತಿದ್ದನ್ನೆ. ಅಂತೂ ಬೆರಳಿನ ಸಾಮರ್ಥ್ಯ ಕುಮಾರವ್ಯಾಸ ತಿಳುದೇ ಭಾರತ ಓದುವೋರಿಂಗೆ ಗೊಂತಪ್ಪ ಹಾಂಗೆ ಒಂದು ಸನ್ನಿವೇಶ ಹೇಳಿದ್ದ. ಬಕಾಸುರಂಗೆ ತಿಂಬಲೆ ಹೇಳಿ ಗಾಡಿಲ್ಲಿ ಅನ್ನ ಕೋಂಡೋದ್ದು ಭೀಮ ಅಲ್ಲದೋ? ತುಂಬಾ ದಿನಂದ ಅರೆಹೊಟ್ಟೆ ಉಂಡುಗೊಂಡಿದ್ದೋನಿಂಗೆ ಕೊದಿ ತಡೆಯ.ಗುಡ್ಡೆಗೆ ಎತ್ತುವಂದ ಮದಲೇ ಗಾಡಿಲ್ಲಿದ್ದ ಬಲಿ ಎಲ್ಲ ಖಾಲಿ ಆಗಿತ್ತು. ಬಕಾಸುರಂಗೆ ಹಶು ತಡೆತ್ತಿಲ್ಲೆ. ಕೋಪ ತಡೆಯದ್ದೆ ಭೀಮ ಇದ್ದಲ್ಲಿಂಗೆ ಬಂದು ಒಂದು ಗುದ್ದಿತ್ತಡೊ.ಅಂಬಗ ಭೀಮ ಹೇಳಿದಡೊ.ನಿಲ್ಲು ಮಾರಾಯ. ಇನ್ನೂ ಪಾತ್ರೆಯ ತಳಲ್ಲಿ ರಜ ಹಿಡುಕ್ಕೊಂಡಿದ್ದು.ಅದರ ತಿಂದಿಕ್ಕಿ ನಿನ್ನ ಮಾತಾಡುಸುತ್ತೆ. ಅಷ್ಟರ ವರೆಗೆ ಸುಮ್ಮನೆ ಕೂರು ಹೇಳಿದಡ ಬೆರಳಿಲ್ಲಿ ಏಡಿಸುತ್ತ! ಬೊಗಸೆ ತುಂಬುಸೆಕ್ಕಾರೆ ಬೆರಳುಗಳ ಜೋಡುಸೆಕ್ಕು. ಎರಡೂ ಕೈಗಳಲ್ಲಿ ಹಿಡುಕ್ಕೊಳ್ಳೆಕ್ಕಾರೆ ಬೆರಳುಗಳ ದೂರ ದೂರ ಮಾಡ್ಯೊಳ್ಳೆಕ್ಕು.ಎಲ್ಲಕ್ಕೂ ಬೇಕಪ್ಪದು ಕೈ ಬೆರಳುಗೊ. ದೂರಲ್ಲಿಪ್ಪೋನ ದಿನಿಗೇಳೆಕ್ಕಾರೂ, ಅಲ್ಲೇ ನಿಲ್ಲು ಹೇಳುಲೂ ಕೈಭಾಷೆ ಮಾಡಿತ್ತವನ್ನೇ? ಬೆರಳುಗಳೇ ಇಲ್ಲದ್ದೋರೂೆಲ್ಲೋರಿಂಗು ಇಪ್ಪ ಹಾಂಗೆ ಇಲ್ಲದೆ ನಾಲ್ಕೋ ಮೂರೋ ಬೆರಳು ಇಪ್ಪೋರೂ ಇದ್ದವು. ಕಾಲಿನ ಬೆರಳುಗಳೂ ಕೈಬೆರಳೇ ಇಲ್ಲದ್ದೋರಿಂಗೆ ಉಪಯೋಗ ಆವುತ್ತಲ್ಲದೋ? ಮತ್ತೆ ಕಾಲಿನ ಹೆಬ್ಬೆರಳಿಲ್ಲಿ ಪ್ರೇಮ ಸಂಕೇತ ನೆಲಲ್ಲಿ ಬರವದು ಇದ್ದನ್ನೇ! ಬೆರಳಿನ ಭಾಷೆ ಬೇರೆಯೇ ಇದ್ದಲ್ಲದೋ?
Wednesday, June 27, 2012
Monday, June 25, 2012
ಭಾಷೆ ಬದುಕಿನ ಜೀವಾಳ
ಭಾಷೆ ಬದುಕಿನ ಜೀವಾಳ
ಮನಸ್ಸಿನ ಭಾವನೆಯ ತಿಳಿಸಲು ಬೇಕೊಂದು ಭಾಷೆ! ಅದು ಮೂಕಭಾಷೆಯೂ ಆಗಬಹುದು. ಅಥವಾ ಆಡು ಭಾಷೆಯೂ ಆಗಬಹುದು. ಆಡಿದರೆ ಕೇಳಬೇಕು. ಕಿವಿಯೇ ಕೇಳಿಸದವನಿಗೆ ಭಾಷೆ ಯಾವುದು? ಅಥವಾ ಮಾತೂ ಆಡಲಾರದವ ತನ್ನ ಭಾವನೆಯನ್ನು ಹೇಗೆ ತಿಳಿಸಬೇಕು? ಈಗ ಇಂತಹ ಕಿವುಡ ಮೂಕರಿಗೊಂದು ಭಾಷೆ ಬೇಕಲ್ಲವೇ? ಅದುವೇ ಮೂಕಭಾಷೆ. ಕುರುಡರಾದರೋ ಕಿವಿಯಿಂದ ಕೇಳಬಹುದು ಬಾಯಿಂದ ಆಡಬಹುದು. ಭಾಷೆಯನ್ನೂ ಅವರು ಕೇಳಿ ಕಲಿಯಬಹುದು. ಆದರೆ ಕುರುಡರೋ ಅವರಿಗೆ ಕೇಳಿ ಕಲಿತ ಪದಗಳನ್ನು ಓದಲೋ ಬರೆಯಲೋ ಆಗುವುದಿಲ್ಲ. ಅಭಿನಯಪೂರ್ವಕ ತಿಳಿಸಲೂ ಸಾಧ್ಯವಿಲ್ಲ. ಆಗ ಅವರಿಗೆ ಸ್ಪರ್ಶ ಜ್ಞಾನ ಸೂಕ್ಷ್ಮವಾಗಿರುವುದರಿಂದ ಕೈಯಿಂದ ಮುಟ್ಟಿಯೇ ಅಕ್ಷರಗಳನ್ನು ಕಲಿಯಬೇಕು. ಅದು ಕುರುಡರ ಭಾಷೆಯಾಯಿತು. ಈಗ ಮುಂದುವರಿದ ತಂತ್ರಜ್ಞಾನವೂ ಕುರುಡರಿಗೆ ಲಭ್ಯವಿದೆ. ಕಲಿಯಲು ಮನಸ್ಸು ಬೇಕು ಅವರಿಗೆ. ಮನಸ್ಸಿದ್ದರೆ ಮಾರ್ಗ ಎಂದು ಹೇಳುವುದು ಇದನ್ನೇ. ಸಂಘಜೀವಿಯಾದ ಮನುಷ್ಯನಿಗೆ ಸಾಮಾಜಿಕ ಸಂಪರ್ಕ ಬೇಕಾದರೆ ಭಾಷೆಯ ಅಗತ್ಯವಿದೆ. ಹಿಂದಿನ ಕಾಲದಲ್ಲಾದರೆ ಗಾಂಧಾರಿಯಂಥವರು ಗಂಡ ಕುರುಡನಾಗಿದ್ದಕ್ಕೆ ತನ್ನ ಕಣ್ಣಿಗೇ ಬಟ್ಟೆ ಕಟ್ಟಿಕೊಂಡ ಉದಾಹರಣೆಗಳಿವೆಯಾದರೂ ಆ ಕಾಲದಲ್ಲಿ ಇಂದಿನಂತೆ ಸಾಮಾಜಿಕ ಸಂಪರ್ಕ ಕಡಿಮೆ. ಗಾಂಧಾರಿಗೆ ಅರಮನೆಯೊಳಗೆ ಆಳು ಕಾಳುಗಳು ಅವಳ ಆವಶ್ಯಕತೆ ಪೂರೈಸುತ್ತಿದ್ದ ಕಾರಣ ಕುರುಡಳಂತೆ ಇರಲು ಅನುಕೂಲವಾಗಿತ್ತು. ಈಗಿನ ಮಿತ ಕುಟುಂಬದಲ್ಲಿ ಸಾಮಾಜಿಕ ಸಂಪರ್ಕ ಸಿಗಬೇಕಾದರೆ ಅವರು ಹೊರಜಗತ್ತಿಗೆ ಬರಲೇ ಬೇಕು. ಮನೆಯೊಳಗೇ ಇದ್ದರೆ ತನ್ನ ಆವಶ್ಯಕತೆಗಳನ್ನು ತಿಳಿದು ಸಹಾಯ ಮಾಡುವವರಿದ್ದರೆ,ತೊಂದರೆಯಿಲ್ಲ. ಆದರೆ ಬಡವರಿಗೆ ಮನೆಯೊಳಗೇ ಇರಲು ಸಾಧ್ಯವಾಗಲಾರದು. ಹಿಂದೆ ಒಂದು ಗಾದೆಯಿತ್ತು. ‘ಊರಿಗೆ ಬಂದವಳು ನೀರಿಗೆ ಬಾರದಿರುವಳೇ?’ ಆಗ ಊರುಕೇರಿಗಳಲ್ಲಿ ಸಾರ್ವಜನಿಕ ಬಾವಿಗಳೋ ಕೆರೆಗಳೋ ಜನರಿಗೆ ಸ್ನಾನ ಮಾಡಲು,ಕುಡಿಯುವ ನೀರು ತರಲು ಉಪಯೋಗವಾಗುತ್ತಿದ್ದವು. ಅತಿಥಿಗಳಾಗಿ ಬಂದವರೂ ನೀರಿಗೆ, ಸ್ನಾನ ಬಟ್ಟೆ ಒಗೆಯಲು ಊರ ಕೆರೆಗೆ ಬರಲೇಬೇಕು. ಮನೆಗೆ ಒಂದೊಂದು ಕೆರೆ ಬಾವಿಗಳಿಲ್ಲ. ಅದಕ್ಕೆ ಊರಿಗೆ ಹೊಸತಾಗಿ ಯಾರಾದರೂ ಹೊಸಬಳು ಬಂದಿದ್ದರೆ ಅವರು ಯಾರು ಎಲ್ಲಿಂದ ಬಂದವರು? ಎಂಬೆಲ್ಲ ವಿವರಗಳನ್ನು ತಿಳಿದೇ ತಿಳಿಯುತ್ತಾರೆ. ತಿಳಿದ ಮತ್ತೆ ಗೆಳೆತನ, ಒಗೆತನ ಬೆಳೆಸಲು ನೋಡುತ್ತಾರೆ. ಬೇರೆ ಭಾಷೆ ಮಾತಾಡುವವರಾದರೆ ಆ ಭಾಷೆ ಕಲಿತು ಅವರ ಸ್ನೇಹ ಬೆಳೆಸಲು ಅಥವಾ ಸಂಬಂಧ ಬೆಳೆಸಲು ನೋಡುತ್ತಾರೆ. ಅದನ್ನೇ ಊರಿಗೆ ಬಂದವರು ಯಾರು? ಎಲ್ಲಿಂದ ಬಂದರು ಎಂಬ ವಿವರ ಮರುದಿನ ಹುಡುಗರ ಪಾಳಯದಲ್ಲಿ ಪ್ರಚಾರವಾಗುತ್ತದೆ.
ನಮ್ಮ ಪರಿಸರದ ಭಾಷೆಯನ್ನು ನಾವು ಕಲಿಯದಿದ್ದರೆ,ಅಕ್ಕ ಪಕ್ಕದವರು ಹೊಂದಿ ಬಾಳುವುದು ಹೇಗೆ?ಪ್ರಾದೇಶಿಕ ಭಾಷೆಯ ಅಗತ್ಯ ಬರುತ್ತದೆ.. ಹೊಸಬರ ಪರಿಚಯ ಮಾಡಿಕೊಳ್ಳಲು ಅವರೊಡನೆ ಸಂಪರ್ಕ ಬೆಳೆಸಲು ಅವರ ಭಾಷೆಯನ್ನೇ ಕಲಿತು ಬಿಟ್ಟರೆ ಸುಲಭವಾಗುವುದಲ್ಲವೇ?ನಾವು ಮನೆಯವರೊಡನೆ ಮಾತಾಡುವಾಗ ಉಪಯೋಗಿಸುವುದು ಮಾತೃಭಾಷೆಯಾಗಿರುತ್ತದೆ. ಅಂದರೆ ತಾಯಿಯಿಂದ ಕಲಿತ ಭಾಷೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಭಾಷೆ ಆಡುತ್ತಾರೆ. ಅದು ಪ್ರಾದೇಶಿಕ ಭಾಷೆಯೆನ್ನಿಸುವುದು. ಮನೆಗೆ ಬರುವ ಅನ್ಯರೊಡನೆ ಸಂಪರ್ಕಕ್ಕೆ ಇನ್ನೊಂದು ಭಾಷೆ ಬೇಕಾಗಬಹುದು. ಮನೆಯಲ್ಲಿ ಯಾರಾದರೂ ಕಿವುಡರೋ, ಮೂಕರೋ ಇದ್ದರೆ ಅವರೊಡನೆ ಅವರಿಗರ್ಥವಾಗುವಂತೆ ಅವರದೇ ಭಾಷೆಯಲ್ಲಿ ಮಾತಾಡಬೇಕಾಗುವುದು.ಆಗ ತಾನೆ ಮಾತಾಡತೊಡಗುವ ಮಕ್ಕಳೊಡನೆ ಆಡುವ ಭಾಷೆ ಅಂದರೆ ಅವರ ತೊದಲ್ನುಡಿ ಅವರಿಗೆ ತಿಳಿಯುವಂತೆ ಮಾತಾಡಬೇಕು. ಮಾತಾಡುವ ಶೈಲಿಯೋ, ರೀತಿಯೋ ವ್ಯತ್ಯಾಸವಿರಬೇಕು. ಕಿರಿಯರೊಡನೆ ಸಲುಗೆಯಿಂದ ಮಾತಾಡಿದರೆ ಹಿರಿಯರೊಡನೆ ಗೌರವದಿಂದ ಮಾತಾಡುವುದು,ಗೆಳೆಯರೊಡನೆ ಸಲುಗೆಯಿಂದ ಮಾತಾಡುವುದು ಹೀಗೆಲ್ಲಾ ಭಾಷೆಯಲ್ಲಿಯೂ ಪ್ರಭೇದಗಳಿವೆ.ಸಭೆಯಲ್ಲಿ ಮಾತಾಡುವಾಗ, ಕುಳಿತ ಕೇಳುಗರಿಗೆ ಇನ್ನಷ್ಟು ಕೇಳುವ ಎಂದು ತೋರುವಂತಿರಬೇಕು. ಹಾಸ್ಯಭರಿತ ಮಾತುಗಳು ಕೆಲವರಿಗೆ ಇಷ್ಟವಾದರೆ ಕೆಲವರಿಗೆ ರಸಭರಿತ ಮಾತುಗಳು ಇಷ್ಟವಾಗುತ್ತವೆ. ನಾವು ಮಾತಾಡುತ್ತಿರುವಂತೆ ಮುಖ ತಿರುಗಿಸಿ ಒಮ್ಮೆ ಇವ ಇಲ್ಲಿಂದ ಹೋಗಲಿ ಎನ್ನುವ ಮುಖಭಾವ ನಮ್ಮಿದಿರಿಗಿದ್ದವನಲ್ಲಿ ಕಂಡರೆ ಮಾತು ಅವನಿಗೆ ಇಷ್ಟವಿಲ್ಲ ಎಂದಂತಲ್ಲವೇ? ಭಾಷಣದ ಮಧ್ಯೆ ಕೈಚಪ್ಪಾಳೆ ಹೊಡೆಯುವುದೂ ಇದೆ ಕೆಲವರಿಗೆ. ನಿನ್ನ ಭಾಷಣ ಸಾಕುಬಾಯಿ ಮುಚ್ಚಿ ಕುಳಿತುಕೋ ಎಂಬ ಭಾವದಲ್ಲಾದರೆ ಮಾತು ನಿಲ್ಲಿಸಿ ಕುಳಿತುಕೊಳ್ಳುವುದೇ ಲೇಸು. ಯಕ್ಷಗಾನ ಅರ್ಥಗಾರಿಕೆಯಲ್ಲಿಯೂ ಪಾತ್ರ ಗೌರವವನ್ನುಳಿಸಿಕೊಂಡು ಕೇಳುಗರ ಮನ ರಂಜಿಸುವಂತಿದ್ದರೆ ಖುಶಿಯಾಗಿ ಕೈಚಪ್ಪಾಳೆ ಯಿಂದ ಸ್ವಾಗತಿಸುತ್ತಾರೆ. ನವರಸಭರಿತ ಹಾವಭಾವಗಳಿಂದ ಅಭಿನಯಪೂರ್ವಕ ಮಾತುಗಾರಿಕೆಯಿಂದ ಶ್ರೋತೃಗಳು ಮೆಚ್ಚಿ ಕೊಂಡಾಡುತ್ತಾರೆ.
Tuesday, June 19, 2012
ಮಾತು ಬಲ್ಲವರು
ಮಾತು ಬಲ್ಲವರು
ಬಾಳಿಕೆ ಸುಬ್ಬಣ್ಣ ಭಟ್, ನಿವೃತ್ತ ಪ್ರಧ್ಯಾಪಕ, ಮ೦ಗಳೂರು.
"ಮಾತಿನಿಂ ಹಗೆ ಕೆಳೆಯು" ಎಂದು ಸರ್ವಜ್ಞ ಕವಿ ಹೇಳುತ್ತಾ "ಲೋಕದೊಳು ಮಾತೆ ಮಾಣಿಕ್ಯ" ಎಂದು ಬಣ್ಣಿಸಿದ್ದು ಗೊತ್ತಿದೆಯಷ್ಟೆ! "ಮಾತು ಬಲ್ಲವಗೆ ಜಗಳವಿಲ್ಲ" ಎಂದೂ ಹೇಳಿದ್ದಾರೆ ಬಲ್ಲವರು. ಮಾತಿನ ಮಹಾತ್ಮೆಯನ್ನು ಅಥವಾ ಚಮತ್ಕಾರವನ್ನು ಕವಿ ಪುಂಗವರನೇಕರ ಬರಹಗಳಿಂದ ತಿಳಿಯಬಹುದು. ಕೇಳುವವರಿಗೆ ಹಿತ ಮಿತವಾಗಿ, ಜಗಳ ಬಾರದಂತೆ ತೂಕದ ಮಾತುಗಳನ್ನು ಆಡಬೇಕು. "ಮೌನ ಬಂಗಾರ -ಮಾತು ಬೆಳ್ಳಿ" ಎಂಬುದೂ ಒಂದು ಗಾದೆ ಮಾತೇ ಅಲ್ಲವೇ? ಗಾದೆಯ ಮಾತು ವೇದಕ್ಕೆ ಸಮಾನವಂತೆ! ಮಾತಿನ ಮಹತ್ವ ಬಲ್ಲವನು "ತಾನು ತುಂಬಾ ತಿಳಿದವನು" ಎಂಬುದನ್ನು ತೋರಿಸಿ ಕೊಡುವುದಕ್ಕಾಗಿ ಹೆಚ್ಚು ಹೆಚ್ಚು ಮಾತನಾಡಿಕೊಂಡು ಹೋಗುವುದಿಲ್ಲ. ಬೇಕಾದಲ್ಲಿ ಮಾತ್ರ, ತನ್ನ ತಿಳುವಳಿಕೆಯನ್ನು ತನ್ನನ್ನು ಕೇಳಿದರೆ ಮಾತ್ರ ಹೇಳುತ್ತಾನೆ. ತುಂಬಿದ ಸಭೆಯಲ್ಲಿ, ಕೆಲವರು ತಾನು ಬುದ್ಧಿವಂತನೆಂದು ತೋರಿಸಿ ಕೊಡಲು ಮಾತಿನ ಹೊಳೆಯನ್ನು ಹರಿಸಿ ಬಿಡುತ್ತಾರೆ. ಮಾತು ಎಲ್ಲಿಂದ ಆರಂಭವಾಯಿತು, ಎಲ್ಲಿ ನಿಲ್ಲಿಸಬೇಕು, ತನ್ನ ಮಾತನ್ನು ಯಾರಾದರೂ ಕೇಳುತ್ತಾರೋ ಇಲ್ಲವೋ ಎಂಬುದರ ಪರಿವೆ ಅವರಿಗಿರುವುದಿಲ್ಲ. ಒಮ್ಮೆ ಬಾಯಿಯಿಂದ ಆಡಿದ ಮಾತನ್ನು ಮತ್ತೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಬಿದ್ದ ಮುತ್ತನ್ನಾದರೂ ಹುಡುಕಿ ತೆಗೆಯಬಹುದು ಅದಕ್ಕೇ "ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು" ಎನ್ನುತ್ತಾರೆ. ಆದರೆ ಆಡಿದ ಮಾತನ್ನು ಹಿಂದಕ್ಕೆ ಪಡೆಯುವುದು ಸಮಂಜಸವೇ? ಅದಕ್ಕೆ ಮಾತು ಆಡುವಾಗ ತೂಕದ ಮಾತುಗಳನ್ನೇ ಯೋಚಿಸಿ ಮಾತಾಡಬೇಕು. ಕೆಲವೊಮ್ಮೆ "ಮಾತು ಆಡಿ ಕೆಟ್ಟ" ಎಂದಾಗಬಾರದಲ್ಲವೇ?. ನಮ್ಮ ವ್ಯಕ್ತಿತ್ವವನ್ನು ಒರೆಗೆ ಹಚ್ಚಲು ಮಾತು ಅಳತೆಗೋಲಾಗುವುದು. ಮೌನವಾಗಿದ್ದರೆ, ನಮ್ಮನ್ನು ಕೆಲವರು ಮಾತಿಗೆ ಕರೆಯುವುದಿದೆ. ಆಗ ನಮ್ಮ ಮಾತನ್ನು ಹರಿಯಬಿಟ್ಟರೆ ನಾವು ಪರಸ್ಪರ ಗೆಳೆಯರಾಗಬಹುದು. ನಮ್ಮ ಮಾತಿಗೆ ಬೆಲೆಯಿದ್ದಲ್ಲಿ ಮಾತ್ರ ನಾವು ಮಾತಾಡಬೇಕು.
ಭಾಷಣಕಾರರು ಕೆಲವರು ಸಭಿಕರ ಅಭಿರುಚಿಗನುಸರಿಸಿ ಹಿತಮಿತವಾಗಿ ಅಲ್ಲಲ್ಲಿಗೆ ಬೇಕಾದಷ್ಟೇ ಹೇಳಿ ಮುಗಿಸಿಬಿಡುತ್ತಾರೆ. ಇನ್ನು ಕೆಲವರು ತಮ್ಮ ವಾಕ್ಪ್ರೌಢಿಮೆಯನ್ನು ತೋರಿಸಿಕೊಡಲು ತುಂಬ ತುಂಬಾ ಮಾತಾಡುತ್ತಾ ಸಭಿಕರಿಗೆ ಬೇಸರ ತರಿಸುವಷ್ಟು ಮಾತಾಡುತ್ತಾರೆ. ಮತ್ತೆ ಕೆಲವರು ಸಭಿಕರ ತಾಳ್ಮೆಯನ್ನು ಪರೀಕ್ಷಿಸುವಂತೆ ಏನೇನೋ ಹೇಳುತ್ತಾ, ಮಾತುಗಳನ್ನು ಮುಂದುವರಿಸುತ್ತಾರೆ. ಆ ಸಭೆಯಲ್ಲಿ ಹೇಳಬೇಕಾದ ವಿಷಯ ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತದೆ ಕೆಲವರ ಮಾತಿನ ಪ್ರವಾಹ. ಹೇಳಬೇಕೆನಿಸಿದುದನ್ನು ಕಾಗದದಲ್ಲಿ ಯಾರಿಂದಲೋ ಬರೆಯಿಸಿ ತಂದವರು, ಅದನ್ನು ಓದಿ ಹೇಳುವುದಕ್ಕೂ ಆಗದೆ ಚಡಪಡಿಸುವುದೂ ಇದೆ. ಸಭೆಯಲ್ಲಿ ಕುಳಿತವರು ಕೇಳಿ ಸಾಕಾಗಿ ಬೇಸರದಿಂದ ಎದ್ದು ಹೋಗತೊಡಗಿದರೂ ಕೆಲವರು ಭಾಷಣ ನಿಲ್ಲಿಸುವುದಿಲ್ಲ. ಹಾಸ್ಯ ರಸದ ಹೊನಲನ್ನೇ ಹರಿಯ ಬಿಟ್ಟಿದ್ದೇವೆಂದು ಹೆಮ್ಮೆ ಬೇರೆ! ಕೆಲವರು ಅವರಿಗೇ ನಗೆ ತಡೆಯಲಾರದೆ ಒದ್ದಾಡುವುದೂ ಇದೆ. ಸಭಿಕರ ಅಭಿರುಚಿಯನ್ನು ಗಮನಿಸಿ ಹಿತ ಮಿತವಾಗಿ ಮುಖ್ಯ ವಿಷಯಕ್ಕೆ ಚ್ಯುತಿ ಬಾರದಂತೆ ಮಾತಾಡಿದರೆ ಕೇಳುವವರಿಗೆ ಖುಶಿ. ಅವರಿಗೆ ಮಧ್ಯೆ ಎದ್ದು ಹೋಗಲೂ ಮನಸ್ಸು ಬರಲಾರದು. ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಮಾತಾಡಿದ್ದರೆ ಒಳ್ಳೆಯದಿತ್ತು ಎನ್ನಿಸುವಂತಿದ್ದರೆ ಅಂತಹ ಮಾತಿಗೆ ಮುತ್ತಿನ ಬೆಲೆ! ಸಭೆಯಲ್ಲಿ ಎಷ್ಟು ಭಾಷಣಕಾರರು ಮಾತಾಡಲಿದ್ದಾರೆ? ಅವರಿಗೆ ಮಾತಾಡಲು ನಿಗದಿ ಪಡಿಸಿದ ಸಮಯವೆಷ್ಟು? ಎಂಬುದನ್ನು ತಿಳಿದು ಇದ್ದ ಸಮಯಾವಕಾಶವನ್ನು ಹಂಚಿಕೊಂಡು ಸಭಾ ಮರ್ಯಾದೆಯನ್ನು ಉಳಿಸಿಕೊಂಡರೆ ಅದು ಸಭ್ಯತೆ!
ಭಾಷಣಕಾರರು ಮಾತಾಡುತ್ತಿರುವಂತೆ, ಸಭೆಯಲ್ಲಿ ಕುಳಿತು ತಮ್ಮ ಬಾಯಿ ಚಪಲಕ್ಕೆ ಹತ್ತಿರದಲ್ಲಿದ್ದವರೊಡನೆ ಮಾತಾಡಿದರೆ ಸಭ್ಯತೆ, ಶಿಷ್ಟಾಚಾರ ತಪ್ಪಿದಂತಾಗುವುದು. ಮಾತ್ರವಲ್ಲ ಶಿಸ್ತುಭಂಗ ಮಾಡಿದಂತೂ ಆಗುವುದು. ಕೆಲವರಿಗೆ ಯಾರಲ್ಲಿ ಹೇಗೆ ಮಾತಾಡಬೇಕು, ಎಷ್ಟು ಮಾತಾಡಬಹುದು ಎಂಬ ಯೋಚನೆಯೂ ಇರುವುದಿಲ್ಲ. ಮೇಲಧಿಕಾರಿಗಳೊಂದಿಗೆ, ಹಿರಿಯರೊಂದಿಗೆ, ಗೌರವಾನ್ವಿತರೊಂದಿಗೆ ಹೀಗೆ ಮಾತಿನ ತರ-ತಮಗಳಿರುವುದಿಲ್ಲವೇ? ಕಿರಿಯರೊಂದಿಗೆ, ಆಪ್ತರೊಂದಿಗೆ, ಗೆಳೆಯ ಗೆಳತಿಯರೊಂದಿಗೆ - ಹೀಗೆ ಮಾತಿನ ರೀತಿಯಲ್ಲಿ ವ್ಯತ್ಯಾಸಗಳಿರುವಿರುವುದಿಲ್ಲವೇ? ಚಿಕ್ಕ ಮಕ್ಕಳೊಂದಿಗೆ ಮಾತಾಡುವಾಗ ಅವರಿಗೆ ಅರ್ಥವಾಗುವಂತೆ ನಾವೂ ಮಕ್ಕಳಾಗಿ ಮಾತಾಡಬೇಕು. ಇತರರಿಂದ ನಾವು ಏನನ್ನು ಬಯಸುತ್ತೇವೆಯೋ ಅದನ್ನು ಮೊದಲು ನಾವು ಅವರಿಗೆ ಕೊಟ್ಟರೆ, ಅವರಿಂದ ಹಿಂದಕ್ಕೆ ಪಡೆಯಬಹುದಂತೆ! ಅವರನ್ನು ನಾವು ಗೌರವಿಸಿದರೆ ಅವರೂ ನಮ್ಮನ್ನು ಗೌರವಿಸುತ್ತಾರೆ. ಅದನ್ನೇ ಕೊಟ್ಟು ಪಡೆಯುವುದು ಎನ್ನುತ್ತಾರೆ. ಸಮಾಜವನ್ನು ನಾವು ಗೌರವಿಸಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ.
ಒಮ್ಮೆ ನಾನು ದಾರಿಯಲ್ಲಿ ನಡೆದು ಬರುತ್ತಿದ್ದಾಗ ಒಂದು ಹೋಟೆಲಿನೊಳಗೆ ಒಬ್ಬ ತನ್ನ ಮಾತಿನ ಝರಿಯನ್ನು ಹರಿಯಬಿಡುತ್ತಿದ್ದುದನ್ನು ಕೇಳಿದ್ದೇನೆ. ಅವನೊಂದು ಹಲಸಿನ ಮರದಲ್ಲಿದ್ದ ಕಾಯಿಗಳನ್ನು ವರ್ಣಿಸುತ್ತಾ " ಮರದಲ್ಲಿದ್ದ ಎಲೆಗಳನ್ನಾದರೂ ಎಣಿಸಬಹುದು. ಆದರೆ ಮರದಲ್ಲಿರುವ ಕಾಯಿಗಳನ್ನು ಎಣಿಸಲು ಸಾಧ್ಯವಿಲ್ಲ" ಎನ್ನುತ್ತಿದ್ದ. ಅತಿಶಯೋಕ್ತಿ ಅಲಂಕಾರಕ್ಕೆ ಒಂದು ಉದಾಹರಣೆ ಸಿಕ್ಕಿತು. ಅವನೇನು ಕವಿಯೂ ಅಲ್ಲ ವಿದ್ಯಾವಂತನೂ ಅಲ್ಲ. ಆದರೆ ಮಾತುಗಾರಿಕೆಯ ರೀತಿ ಅಮೋಘವಾದುದು. ಆದರೆ ಮತ್ತೊಮ್ಮೆ ಅಂತಹ ಮಾತುಗಳನ್ನು ಅವನಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಕೆಲವರಿಗೆ ನೆರೆ ಹೊರೆಯವರನ್ನು ಬಂಧುಗಳನ್ನು ದೂರುವುದಕ್ಕೆ, ತಮಾಷೆ ಮಾಡುವುದಕ್ಕೆ ಇಂತಹ ಅಡ್ಡೆಗಳು, ಮಾತಿನ ಕಟ್ಟೆಗಳಿರುತ್ತವೆ. ಬೆಳಿಗ್ಗೆ, ಸಂಜೆ ತಿರುಗಾಡಿಕೊಂಡು, ಹೀಗೆ ಹೋಗುತ್ತಾ ಸಿಕ್ಕವರೊಡನೆ ತಮ್ಮ ಮಾತಿನ ಚಪಲ ತೀರಿಸಿಕೊಳ್ಳುತ್ತಾರೆ .ಮಂತ್ರಿಗಳು, ರಾಜಕೀಯ ಧುರೀಣರು ಯಾರೋ ಬರೆದು ಕೊಟ್ಟ ಮಾತುಗಳನ್ನು ಸರಿಯಾಗಿ ಉಚ್ಚರಿಸುವುದಕ್ಕೆ ಆಗದಿದ್ದರೂ ಕಷ್ಟದಿಂದ ಓದಿ ಮುಗಿಸಿ ಧನ್ಯರಾಗುವವರೂ ಇದ್ದಾರೆ. ಕೆಲವರು ಮಧ್ಯೆ ಹಾಸ್ಯದ ಚಟಾಕಿ ಹಾರಿಸಿ ಜನರ ಗಮನ ತಮ್ಮೆಡೆಗೆ ತರುವುದೂ ಇದೆ. ಎಲ್ಲವೂ ಮಾತಿನ ಚಮತ್ಕಾರ!
ನಮ್ಮಲ್ಲಿಗೆ ಯಾರಾದರೂ ಆಗಂತುಕರು, ಗೆಳೆಯರು, ಬಂಧುಗಳು ಬಂದರೆ ಅವರನ್ನು ಮರ್ಯಾದೆಯಿಂದ ಮಾತಾಡಿಸಬೇಕು. ಅಲ್ಲದಿದ್ದರೆ ಬಂದವರಿಗೆ ಅವಮಾನ ಮಾಡಿದಂತಲ್ಲವೇ? ನಾವೂ ಅವರ ಮನೆಗೆ ಹೋದಾಗ ಹಾಗೆ ಅವಮಾನಿಸಿದರೆ ನಮಗೂ ಬೇಸರವಾಗದೇ? ಅತಿಥಿ, ಆಗಂತುಕರಾದರೂ, ಅವರನ್ನು ಗೌರವದಿಂದ ಕಂಡರೆ ನಮಗೆ ಯಾವ ಕೊರತೆಯೂ ಇಲ್ಲ. ನಮ್ಮ ಮನೆಗೆ ಬಂದವರನ್ನು ಅವರ ಕ್ಷೇಮ ವಿಚಾರಣೆ, ಬನ್ನಿರಿ, ಕುಳ್ಳಿರಿ, ಬಾಯಾರಿಕೆ ಬೇಕೇ? ಎಂದರೆ ನಮ್ಮ ಗೌರವ ಹೆಚ್ಚಾದೀತೇ ಹೊರತು ಕಡಿಮೆಯಾಗಲಾರದು. ಮಹನೀಯರೊಬ್ಬರು, ದಾರಿಯಲ್ಲಿ ಯಾರನ್ನು ಕಂಡರೂ "ಬನ್ನಿ ಮನೆಗೆ ಹೋಗುವ, ಬಾಯಾರಿಕೆಯಾದರೂ ಕುಡಿದು ಬರಬಹುದಲ್ಲ" ಎಂದು ಒತ್ತಾಯಿಸಿ ಕರಕೊಂಡು ಹೋದರು. ಮನೆಯ ಒಳಗೆ ತಲಪಿದೊಡನೆ ಒಂದು ಚಾಪೆ ಹಾಕಿ ಕುಳ್ಳಿರಲು ಹೇಳಿ ಮನೆಯೊಳಗೆ ಹೋದವರು, ಎಷ್ಟು ಹೊತ್ತಾದರೂ ಮತ್ತೆ ಕಾಣಿಸದೆ ಮರೆಯಾಗಿದ್ದರು. ಆ ವ್ಯಕ್ತಿ ಮತ್ತೊಮ್ಮೆ ಕಂಡಾಗಲೂ ಹಾಗೆ ಕರೆದಿದ್ದರೂ ನಾನು ಮತ್ತೆ ಹೋಗಲಿಲ್ಲ. ನಮ್ಮ ಗೆಳೆಯರು, ಬಂಧುಗಳು ದಾರಿಯಲ್ಲಿ ಕಂಡಾಗಲೂ ಒಬ್ಬರಿಗೊಬ್ಬರು ಮಾತಾಡಿಸದಿದ್ದರೆ ಬೇಸರವಾಗುತ್ತದೆ. ಕೆಲವರು ಎಲ್ಲಿಯೋ ನೋಡಿಕೊಂಡು ಮಾತಾಡಿಸುವುದು, ಮನಸ್ಸಿಲ್ಲದ ಮನಸ್ಸಿನಿಂದ ಎಂದು ಬೇರೆ ಹೇಳಬೇಕಾಗಿಲ್ಲ.
"ಮಾತು ನಮ್ಮ ವ್ಯಕ್ತಿತ್ವವನ್ನು ಅಳೆಯುವ ಅಳತೆಗೋಲು" ಎಂದರೆ ಅತಿಶಯೋಕ್ತಿಯಲ್ಲ. ಗೆಳೆತನವೂ ಸಮಾನ ಅಭಿರುಚಿಯುಳ್ಳವರೊಳಗೇ ಮುಂದುವರಿಯುತ್ತದೆ ಎಂಬುದು ಖಂಡಿತ! ಉದ್ಯೋಗಕ್ಕಾಗಿ ಅಪೇಕ್ಷೆ ಪಟ್ಟಾಗ ಇಂಟರ್ವ್ಯೂ ಸಮಯದಲ್ಲಿ ವ್ಯಕ್ತಿತ್ವಕ್ಕೆ ಪ್ರಾಶಸ್ತ್ಯವಿರುವುದು. ಗಂಡನ್ನು ಆರಿಸುವಾಗಲೂ, ಹುಡುಗಿಯನ್ನು ಆಯ್ಕೆ ಮಾಡುವಾಗಲೂ ನಮ್ಮ ಮಾತಿನಲ್ಲಿ ಕಂಡು ಬರುವ ನಯ- ವಿನಯಕ್ಕೇ ಬೆಲೆ ಬರುತ್ತದೆ. ಒಂದು ಮನೆಯಲ್ಲಿ ಹಿರಿಯರ ಚಾಳಿಯನ್ನು ಕಿರಿಯರು ಅನುಸರಿಸುವರಂತೆ! ಅದಕ್ಕೆ ಅವನು ಯಾರ ಮಗ? ಅವಳು ಯಾರ ಮಗಳು? ಎಂದು ಮನೆತನದ ಬುಡಕ್ಕೇ ಬರುತ್ತಾರೆ. "ಮಾತು ಕುಲಗೆಡಿಸಿತು" ಎಂದು ಹೇಳುತ್ತಾರೆ. ಹಿರಿಯರ ಬುಡಕ್ಕೇ ಬರುತ್ತದೆ ನಮ್ಮ ನಡತೆ! ಅಂತೂ ಎಲ್ಲವೂ ಮಾತಿನ ಮರ್ಮ ಹೊಂದಿಕೊಂಡು ನಮ್ಮ ಜಾತಕ ಇದೆಯೆಂದಾಯಿತು. ಅದಕ್ಕೇ ಮಾತು ಆಡುವುದಕ್ಕೆ ಮೊದಲು ಚೆನ್ನಾಗಿ ಚಿಂತಿಸಿ ಹಿತ ಮಿತವಾಗಿ ಆಡಿದರೆ ಮತ್ತೆ ಮಾತಿನ ಮುತ್ತನ್ನು ಹೆಕ್ಕಿ ತೆಗೆಯುವ ಕಷ್ಟವಿಲ್ಲ. ಮಾತಿಗೆ ಮರುಳಾಗಿ ಸೋತು ಹೋಗುವುದು ಸಾಮಾನ್ಯ. ಮುಂಚಿತವಾಗಿ ಚಿಂತಿಸಿದರೆ ಮತ್ತೆ ದುಃಖಿಸುವುದು ಬೇಡವಲ್ಲವೇ? ಒಬ್ಬನಿಗೆ ಒಮ್ಮೆ ಮಾತು ಒಮ್ಮೆ ಕೊಟ್ಟ ಮೇಲೆ ಮಾತಿನಂತೆ ನಡೆಯಬೇಕು. ತಪ್ಪಿದರೆ ನಮ್ಮ ಮಾತಿಗೆ ಬೆಲೆಯಿಲ್ಲವಾಗುತ್ತದೆ. ಹಿಂದೆ ಭೀಷ್ಮ ತಂದೆಗೆ ಕೊಟ್ಟ ಮಾತಿನಂತೆ ಆಜನ್ಮ ಬ್ರಹ್ಮಚಾರಿಯಾದ! ಶ್ರೀ ರಾಮ ತಂದೆಯು ಕೊಟ್ಟ ಮಾತಿನಂತೆ ವನವಾಸಕ್ಕೆ ಹೋದ. ಇದು ಪುರಾಣ ಕತೆಯಾದರೂ ಭಾರತೀಯರಿಗೆ ಆದರ್ಶವಲ್ಲವೇ? ಹಿರಿಯರ ಆದರ್ಶವೂ ನಮಗೆ ದಾರಿದೀಪವಲ್ಲವೇ? ಈಗಿನ ವಚನಭ್ರಷ್ಟ ರಾಜಕಾರಣಿಗಳಿಗೆ ಇಂದಿಗೂ ತಮ್ಮ ಮಾತುಗಾರಿಕೆಯ ವರಸೆಯಿಂದ ಜನರನ್ನು ಮತ್ತೆ ಮತ್ತೆ ವಂಚಿಸುವುದೇ ಅವರ ಜೀವನದ ಗುರಿಯಾಗಿಸಿಕೊಂಡಿದ್ದಾರೆಂದು ತೋರುತ್ತದೆ. ದಾನಶೂರ ಕರ್ಣ ಕೊಟ್ಟ ಮಾತಿನಿಂದಲೇ ಕೊನೆಯುಸಿರೆಳೆದನಲ್ಲವೇ!
ಇನ್ನು ಕೆಲವರಿಗೆ ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದಕ್ಕೆ ಮಾತು ಸಹಾಯಕವಾಗುತ್ತದೆ. ಮಾತಿನ ಧಾಟಿಯಿಂದ ಎಂಥವರನ್ನೂ ಬುಟ್ಟಿಗೆ ಹಾಕಿಕೊಳ್ಳುವ ಚಾಣಾಕ್ಷತೆ ಎಲ್ಲರಿಗೂ ಲಭಿಸುವುದಿಲ್ಲ. "ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ". ಆದರೆ ಅಂತಹ ಬಲ್ಲವರು ತನ್ನ ಬಲುಹ ಬರಿದೆ ತೋರಗೊಡುವುದಿಲ್ಲ. ಬಲ್ಲಿದರೆಂಬುದು ಅವರ ಮಾತುಗಳಿಂದಷ್ಟೆ ಗೊತ್ತಾಗುವುದು. ಬರಿಯ ಬೊಗಳೆ ಬಲುಹ ತೋರುವುದಿಲ್ಲ. ಅವರಿಗೆ ತಾನು ಬಲ್ಲೆನೆಂಬುದನ್ನು ಪ್ರದರ್ಶಿಸಬೇಕೆಂಬ ಆಸೆಯೂ ಇಲ್ಲ. ಮಾತಿನಿಂದಲೇ ಕೆಲವರು ಎಷ್ಟು ಬಲ್ಲವರೆಂಬುದನ್ನು ತೋರಿಸಿ ಕೊಡುವುದಿಲ್ಲವೇ? ಯಕ್ಷಗಾನದ ಅರ್ಥಗಾರಿಕೆಯಲ್ಲಿ ತಮ್ಮ ವಾಕ್ಸಾಮರ್ಥ್ಯವನ್ನು ಪ್ರೌಢಿಮೆಯನ್ನು ತೋರಗೊಡಲು ಮಾತಿನ ಸರಪಳಿಯನ್ನೇ ಬಿಟ್ಟು ಬಿಡುತ್ತಾರೆ. ಪಾತ್ರ ಗೌರವ ಅವರಿಗೆ ಬೇಕಾಗುವುದಿಲ್ಲ. ಇನ್ನು ಕೆಲವರು ಚಿಕ್ಕ ಮಾತಿನಿಂದಲೇ ಪಾತ್ರಕ್ಕೆ ಕೊರತೆಯಾಗದಂತೆ ಎದುರಾಳಿಗಳನ್ನು ಮಾತಿನ ಚಾಟಿಯಿಂದ ಬಾಯಿ ಮುಚ್ಚಿಸುತ್ತಾರೆ. ಎಲ್ಲವೂ ಅಲ್ಲಲ್ಲಿಗೆ ತಕ್ಕಂತೆ ಇದ್ದರೆ ಚೆನ್ನ! ಇನ್ನೊಬ್ಬರಿಗೆ ನೋವಾಗದಂತೆ, ಬೆಣ್ಣೆಯಲ್ಲಿ ಕೂದಲೆಳೆದಂತೆ ನಯವಾಗಿ ಮಾತಾಡುವ ಮಾತಿನ ಕೈಚಳಕ ತೋರಿಸುವ ಮಾತುಗಳು ಜನರಂಜನೆಗೆ ಪಾತ್ರವಾದೀತಲ್ಲವೇ? ಇನ್ನು ಕೆಲವರ ಮಾತು ಸಮಯಾಬಾಧಿತವಾಗಿ ಮುಂದಿನ ಪೀಳಿಗೆಗೆ ದಾರಿ ದೀಪಗಳಾಗಿವೆಯೆಂಬುದು ನಿತ್ಯಸತ್ಯ!
ಬಾಳಿಕೆ ಸುಬ್ಬಣ್ಣ ಭಟ್, ನಿವೃತ್ತ ಪ್ರಧ್ಯಾಪಕ, ಮ೦ಗಳೂರು.
"ಮಾತಿನಿಂ ಹಗೆ ಕೆಳೆಯು" ಎಂದು ಸರ್ವಜ್ಞ ಕವಿ ಹೇಳುತ್ತಾ "ಲೋಕದೊಳು ಮಾತೆ ಮಾಣಿಕ್ಯ" ಎಂದು ಬಣ್ಣಿಸಿದ್ದು ಗೊತ್ತಿದೆಯಷ್ಟೆ! "ಮಾತು ಬಲ್ಲವಗೆ ಜಗಳವಿಲ್ಲ" ಎಂದೂ ಹೇಳಿದ್ದಾರೆ ಬಲ್ಲವರು. ಮಾತಿನ ಮಹಾತ್ಮೆಯನ್ನು ಅಥವಾ ಚಮತ್ಕಾರವನ್ನು ಕವಿ ಪುಂಗವರನೇಕರ ಬರಹಗಳಿಂದ ತಿಳಿಯಬಹುದು. ಕೇಳುವವರಿಗೆ ಹಿತ ಮಿತವಾಗಿ, ಜಗಳ ಬಾರದಂತೆ ತೂಕದ ಮಾತುಗಳನ್ನು ಆಡಬೇಕು. "ಮೌನ ಬಂಗಾರ -ಮಾತು ಬೆಳ್ಳಿ" ಎಂಬುದೂ ಒಂದು ಗಾದೆ ಮಾತೇ ಅಲ್ಲವೇ? ಗಾದೆಯ ಮಾತು ವೇದಕ್ಕೆ ಸಮಾನವಂತೆ! ಮಾತಿನ ಮಹತ್ವ ಬಲ್ಲವನು "ತಾನು ತುಂಬಾ ತಿಳಿದವನು" ಎಂಬುದನ್ನು ತೋರಿಸಿ ಕೊಡುವುದಕ್ಕಾಗಿ ಹೆಚ್ಚು ಹೆಚ್ಚು ಮಾತನಾಡಿಕೊಂಡು ಹೋಗುವುದಿಲ್ಲ. ಬೇಕಾದಲ್ಲಿ ಮಾತ್ರ, ತನ್ನ ತಿಳುವಳಿಕೆಯನ್ನು ತನ್ನನ್ನು ಕೇಳಿದರೆ ಮಾತ್ರ ಹೇಳುತ್ತಾನೆ. ತುಂಬಿದ ಸಭೆಯಲ್ಲಿ, ಕೆಲವರು ತಾನು ಬುದ್ಧಿವಂತನೆಂದು ತೋರಿಸಿ ಕೊಡಲು ಮಾತಿನ ಹೊಳೆಯನ್ನು ಹರಿಸಿ ಬಿಡುತ್ತಾರೆ. ಮಾತು ಎಲ್ಲಿಂದ ಆರಂಭವಾಯಿತು, ಎಲ್ಲಿ ನಿಲ್ಲಿಸಬೇಕು, ತನ್ನ ಮಾತನ್ನು ಯಾರಾದರೂ ಕೇಳುತ್ತಾರೋ ಇಲ್ಲವೋ ಎಂಬುದರ ಪರಿವೆ ಅವರಿಗಿರುವುದಿಲ್ಲ. ಒಮ್ಮೆ ಬಾಯಿಯಿಂದ ಆಡಿದ ಮಾತನ್ನು ಮತ್ತೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಬಿದ್ದ ಮುತ್ತನ್ನಾದರೂ ಹುಡುಕಿ ತೆಗೆಯಬಹುದು ಅದಕ್ಕೇ "ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು" ಎನ್ನುತ್ತಾರೆ. ಆದರೆ ಆಡಿದ ಮಾತನ್ನು ಹಿಂದಕ್ಕೆ ಪಡೆಯುವುದು ಸಮಂಜಸವೇ? ಅದಕ್ಕೆ ಮಾತು ಆಡುವಾಗ ತೂಕದ ಮಾತುಗಳನ್ನೇ ಯೋಚಿಸಿ ಮಾತಾಡಬೇಕು. ಕೆಲವೊಮ್ಮೆ "ಮಾತು ಆಡಿ ಕೆಟ್ಟ" ಎಂದಾಗಬಾರದಲ್ಲವೇ?. ನಮ್ಮ ವ್ಯಕ್ತಿತ್ವವನ್ನು ಒರೆಗೆ ಹಚ್ಚಲು ಮಾತು ಅಳತೆಗೋಲಾಗುವುದು. ಮೌನವಾಗಿದ್ದರೆ, ನಮ್ಮನ್ನು ಕೆಲವರು ಮಾತಿಗೆ ಕರೆಯುವುದಿದೆ. ಆಗ ನಮ್ಮ ಮಾತನ್ನು ಹರಿಯಬಿಟ್ಟರೆ ನಾವು ಪರಸ್ಪರ ಗೆಳೆಯರಾಗಬಹುದು. ನಮ್ಮ ಮಾತಿಗೆ ಬೆಲೆಯಿದ್ದಲ್ಲಿ ಮಾತ್ರ ನಾವು ಮಾತಾಡಬೇಕು.
ಭಾಷಣಕಾರರು ಕೆಲವರು ಸಭಿಕರ ಅಭಿರುಚಿಗನುಸರಿಸಿ ಹಿತಮಿತವಾಗಿ ಅಲ್ಲಲ್ಲಿಗೆ ಬೇಕಾದಷ್ಟೇ ಹೇಳಿ ಮುಗಿಸಿಬಿಡುತ್ತಾರೆ. ಇನ್ನು ಕೆಲವರು ತಮ್ಮ ವಾಕ್ಪ್ರೌಢಿಮೆಯನ್ನು ತೋರಿಸಿಕೊಡಲು ತುಂಬ ತುಂಬಾ ಮಾತಾಡುತ್ತಾ ಸಭಿಕರಿಗೆ ಬೇಸರ ತರಿಸುವಷ್ಟು ಮಾತಾಡುತ್ತಾರೆ. ಮತ್ತೆ ಕೆಲವರು ಸಭಿಕರ ತಾಳ್ಮೆಯನ್ನು ಪರೀಕ್ಷಿಸುವಂತೆ ಏನೇನೋ ಹೇಳುತ್ತಾ, ಮಾತುಗಳನ್ನು ಮುಂದುವರಿಸುತ್ತಾರೆ. ಆ ಸಭೆಯಲ್ಲಿ ಹೇಳಬೇಕಾದ ವಿಷಯ ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತದೆ ಕೆಲವರ ಮಾತಿನ ಪ್ರವಾಹ. ಹೇಳಬೇಕೆನಿಸಿದುದನ್ನು ಕಾಗದದಲ್ಲಿ ಯಾರಿಂದಲೋ ಬರೆಯಿಸಿ ತಂದವರು, ಅದನ್ನು ಓದಿ ಹೇಳುವುದಕ್ಕೂ ಆಗದೆ ಚಡಪಡಿಸುವುದೂ ಇದೆ. ಸಭೆಯಲ್ಲಿ ಕುಳಿತವರು ಕೇಳಿ ಸಾಕಾಗಿ ಬೇಸರದಿಂದ ಎದ್ದು ಹೋಗತೊಡಗಿದರೂ ಕೆಲವರು ಭಾಷಣ ನಿಲ್ಲಿಸುವುದಿಲ್ಲ. ಹಾಸ್ಯ ರಸದ ಹೊನಲನ್ನೇ ಹರಿಯ ಬಿಟ್ಟಿದ್ದೇವೆಂದು ಹೆಮ್ಮೆ ಬೇರೆ! ಕೆಲವರು ಅವರಿಗೇ ನಗೆ ತಡೆಯಲಾರದೆ ಒದ್ದಾಡುವುದೂ ಇದೆ. ಸಭಿಕರ ಅಭಿರುಚಿಯನ್ನು ಗಮನಿಸಿ ಹಿತ ಮಿತವಾಗಿ ಮುಖ್ಯ ವಿಷಯಕ್ಕೆ ಚ್ಯುತಿ ಬಾರದಂತೆ ಮಾತಾಡಿದರೆ ಕೇಳುವವರಿಗೆ ಖುಶಿ. ಅವರಿಗೆ ಮಧ್ಯೆ ಎದ್ದು ಹೋಗಲೂ ಮನಸ್ಸು ಬರಲಾರದು. ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಮಾತಾಡಿದ್ದರೆ ಒಳ್ಳೆಯದಿತ್ತು ಎನ್ನಿಸುವಂತಿದ್ದರೆ ಅಂತಹ ಮಾತಿಗೆ ಮುತ್ತಿನ ಬೆಲೆ! ಸಭೆಯಲ್ಲಿ ಎಷ್ಟು ಭಾಷಣಕಾರರು ಮಾತಾಡಲಿದ್ದಾರೆ? ಅವರಿಗೆ ಮಾತಾಡಲು ನಿಗದಿ ಪಡಿಸಿದ ಸಮಯವೆಷ್ಟು? ಎಂಬುದನ್ನು ತಿಳಿದು ಇದ್ದ ಸಮಯಾವಕಾಶವನ್ನು ಹಂಚಿಕೊಂಡು ಸಭಾ ಮರ್ಯಾದೆಯನ್ನು ಉಳಿಸಿಕೊಂಡರೆ ಅದು ಸಭ್ಯತೆ!
ಭಾಷಣಕಾರರು ಮಾತಾಡುತ್ತಿರುವಂತೆ, ಸಭೆಯಲ್ಲಿ ಕುಳಿತು ತಮ್ಮ ಬಾಯಿ ಚಪಲಕ್ಕೆ ಹತ್ತಿರದಲ್ಲಿದ್ದವರೊಡನೆ ಮಾತಾಡಿದರೆ ಸಭ್ಯತೆ, ಶಿಷ್ಟಾಚಾರ ತಪ್ಪಿದಂತಾಗುವುದು. ಮಾತ್ರವಲ್ಲ ಶಿಸ್ತುಭಂಗ ಮಾಡಿದಂತೂ ಆಗುವುದು. ಕೆಲವರಿಗೆ ಯಾರಲ್ಲಿ ಹೇಗೆ ಮಾತಾಡಬೇಕು, ಎಷ್ಟು ಮಾತಾಡಬಹುದು ಎಂಬ ಯೋಚನೆಯೂ ಇರುವುದಿಲ್ಲ. ಮೇಲಧಿಕಾರಿಗಳೊಂದಿಗೆ, ಹಿರಿಯರೊಂದಿಗೆ, ಗೌರವಾನ್ವಿತರೊಂದಿಗೆ ಹೀಗೆ ಮಾತಿನ ತರ-ತಮಗಳಿರುವುದಿಲ್ಲವೇ? ಕಿರಿಯರೊಂದಿಗೆ, ಆಪ್ತರೊಂದಿಗೆ, ಗೆಳೆಯ ಗೆಳತಿಯರೊಂದಿಗೆ - ಹೀಗೆ ಮಾತಿನ ರೀತಿಯಲ್ಲಿ ವ್ಯತ್ಯಾಸಗಳಿರುವಿರುವುದಿಲ್ಲವೇ? ಚಿಕ್ಕ ಮಕ್ಕಳೊಂದಿಗೆ ಮಾತಾಡುವಾಗ ಅವರಿಗೆ ಅರ್ಥವಾಗುವಂತೆ ನಾವೂ ಮಕ್ಕಳಾಗಿ ಮಾತಾಡಬೇಕು. ಇತರರಿಂದ ನಾವು ಏನನ್ನು ಬಯಸುತ್ತೇವೆಯೋ ಅದನ್ನು ಮೊದಲು ನಾವು ಅವರಿಗೆ ಕೊಟ್ಟರೆ, ಅವರಿಂದ ಹಿಂದಕ್ಕೆ ಪಡೆಯಬಹುದಂತೆ! ಅವರನ್ನು ನಾವು ಗೌರವಿಸಿದರೆ ಅವರೂ ನಮ್ಮನ್ನು ಗೌರವಿಸುತ್ತಾರೆ. ಅದನ್ನೇ ಕೊಟ್ಟು ಪಡೆಯುವುದು ಎನ್ನುತ್ತಾರೆ. ಸಮಾಜವನ್ನು ನಾವು ಗೌರವಿಸಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ.
ಒಮ್ಮೆ ನಾನು ದಾರಿಯಲ್ಲಿ ನಡೆದು ಬರುತ್ತಿದ್ದಾಗ ಒಂದು ಹೋಟೆಲಿನೊಳಗೆ ಒಬ್ಬ ತನ್ನ ಮಾತಿನ ಝರಿಯನ್ನು ಹರಿಯಬಿಡುತ್ತಿದ್ದುದನ್ನು ಕೇಳಿದ್ದೇನೆ. ಅವನೊಂದು ಹಲಸಿನ ಮರದಲ್ಲಿದ್ದ ಕಾಯಿಗಳನ್ನು ವರ್ಣಿಸುತ್ತಾ " ಮರದಲ್ಲಿದ್ದ ಎಲೆಗಳನ್ನಾದರೂ ಎಣಿಸಬಹುದು. ಆದರೆ ಮರದಲ್ಲಿರುವ ಕಾಯಿಗಳನ್ನು ಎಣಿಸಲು ಸಾಧ್ಯವಿಲ್ಲ" ಎನ್ನುತ್ತಿದ್ದ. ಅತಿಶಯೋಕ್ತಿ ಅಲಂಕಾರಕ್ಕೆ ಒಂದು ಉದಾಹರಣೆ ಸಿಕ್ಕಿತು. ಅವನೇನು ಕವಿಯೂ ಅಲ್ಲ ವಿದ್ಯಾವಂತನೂ ಅಲ್ಲ. ಆದರೆ ಮಾತುಗಾರಿಕೆಯ ರೀತಿ ಅಮೋಘವಾದುದು. ಆದರೆ ಮತ್ತೊಮ್ಮೆ ಅಂತಹ ಮಾತುಗಳನ್ನು ಅವನಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಕೆಲವರಿಗೆ ನೆರೆ ಹೊರೆಯವರನ್ನು ಬಂಧುಗಳನ್ನು ದೂರುವುದಕ್ಕೆ, ತಮಾಷೆ ಮಾಡುವುದಕ್ಕೆ ಇಂತಹ ಅಡ್ಡೆಗಳು, ಮಾತಿನ ಕಟ್ಟೆಗಳಿರುತ್ತವೆ. ಬೆಳಿಗ್ಗೆ, ಸಂಜೆ ತಿರುಗಾಡಿಕೊಂಡು, ಹೀಗೆ ಹೋಗುತ್ತಾ ಸಿಕ್ಕವರೊಡನೆ ತಮ್ಮ ಮಾತಿನ ಚಪಲ ತೀರಿಸಿಕೊಳ್ಳುತ್ತಾರೆ .ಮಂತ್ರಿಗಳು, ರಾಜಕೀಯ ಧುರೀಣರು ಯಾರೋ ಬರೆದು ಕೊಟ್ಟ ಮಾತುಗಳನ್ನು ಸರಿಯಾಗಿ ಉಚ್ಚರಿಸುವುದಕ್ಕೆ ಆಗದಿದ್ದರೂ ಕಷ್ಟದಿಂದ ಓದಿ ಮುಗಿಸಿ ಧನ್ಯರಾಗುವವರೂ ಇದ್ದಾರೆ. ಕೆಲವರು ಮಧ್ಯೆ ಹಾಸ್ಯದ ಚಟಾಕಿ ಹಾರಿಸಿ ಜನರ ಗಮನ ತಮ್ಮೆಡೆಗೆ ತರುವುದೂ ಇದೆ. ಎಲ್ಲವೂ ಮಾತಿನ ಚಮತ್ಕಾರ!
ನಮ್ಮಲ್ಲಿಗೆ ಯಾರಾದರೂ ಆಗಂತುಕರು, ಗೆಳೆಯರು, ಬಂಧುಗಳು ಬಂದರೆ ಅವರನ್ನು ಮರ್ಯಾದೆಯಿಂದ ಮಾತಾಡಿಸಬೇಕು. ಅಲ್ಲದಿದ್ದರೆ ಬಂದವರಿಗೆ ಅವಮಾನ ಮಾಡಿದಂತಲ್ಲವೇ? ನಾವೂ ಅವರ ಮನೆಗೆ ಹೋದಾಗ ಹಾಗೆ ಅವಮಾನಿಸಿದರೆ ನಮಗೂ ಬೇಸರವಾಗದೇ? ಅತಿಥಿ, ಆಗಂತುಕರಾದರೂ, ಅವರನ್ನು ಗೌರವದಿಂದ ಕಂಡರೆ ನಮಗೆ ಯಾವ ಕೊರತೆಯೂ ಇಲ್ಲ. ನಮ್ಮ ಮನೆಗೆ ಬಂದವರನ್ನು ಅವರ ಕ್ಷೇಮ ವಿಚಾರಣೆ, ಬನ್ನಿರಿ, ಕುಳ್ಳಿರಿ, ಬಾಯಾರಿಕೆ ಬೇಕೇ? ಎಂದರೆ ನಮ್ಮ ಗೌರವ ಹೆಚ್ಚಾದೀತೇ ಹೊರತು ಕಡಿಮೆಯಾಗಲಾರದು. ಮಹನೀಯರೊಬ್ಬರು, ದಾರಿಯಲ್ಲಿ ಯಾರನ್ನು ಕಂಡರೂ "ಬನ್ನಿ ಮನೆಗೆ ಹೋಗುವ, ಬಾಯಾರಿಕೆಯಾದರೂ ಕುಡಿದು ಬರಬಹುದಲ್ಲ" ಎಂದು ಒತ್ತಾಯಿಸಿ ಕರಕೊಂಡು ಹೋದರು. ಮನೆಯ ಒಳಗೆ ತಲಪಿದೊಡನೆ ಒಂದು ಚಾಪೆ ಹಾಕಿ ಕುಳ್ಳಿರಲು ಹೇಳಿ ಮನೆಯೊಳಗೆ ಹೋದವರು, ಎಷ್ಟು ಹೊತ್ತಾದರೂ ಮತ್ತೆ ಕಾಣಿಸದೆ ಮರೆಯಾಗಿದ್ದರು. ಆ ವ್ಯಕ್ತಿ ಮತ್ತೊಮ್ಮೆ ಕಂಡಾಗಲೂ ಹಾಗೆ ಕರೆದಿದ್ದರೂ ನಾನು ಮತ್ತೆ ಹೋಗಲಿಲ್ಲ. ನಮ್ಮ ಗೆಳೆಯರು, ಬಂಧುಗಳು ದಾರಿಯಲ್ಲಿ ಕಂಡಾಗಲೂ ಒಬ್ಬರಿಗೊಬ್ಬರು ಮಾತಾಡಿಸದಿದ್ದರೆ ಬೇಸರವಾಗುತ್ತದೆ. ಕೆಲವರು ಎಲ್ಲಿಯೋ ನೋಡಿಕೊಂಡು ಮಾತಾಡಿಸುವುದು, ಮನಸ್ಸಿಲ್ಲದ ಮನಸ್ಸಿನಿಂದ ಎಂದು ಬೇರೆ ಹೇಳಬೇಕಾಗಿಲ್ಲ.
"ಮಾತು ನಮ್ಮ ವ್ಯಕ್ತಿತ್ವವನ್ನು ಅಳೆಯುವ ಅಳತೆಗೋಲು" ಎಂದರೆ ಅತಿಶಯೋಕ್ತಿಯಲ್ಲ. ಗೆಳೆತನವೂ ಸಮಾನ ಅಭಿರುಚಿಯುಳ್ಳವರೊಳಗೇ ಮುಂದುವರಿಯುತ್ತದೆ ಎಂಬುದು ಖಂಡಿತ! ಉದ್ಯೋಗಕ್ಕಾಗಿ ಅಪೇಕ್ಷೆ ಪಟ್ಟಾಗ ಇಂಟರ್ವ್ಯೂ ಸಮಯದಲ್ಲಿ ವ್ಯಕ್ತಿತ್ವಕ್ಕೆ ಪ್ರಾಶಸ್ತ್ಯವಿರುವುದು. ಗಂಡನ್ನು ಆರಿಸುವಾಗಲೂ, ಹುಡುಗಿಯನ್ನು ಆಯ್ಕೆ ಮಾಡುವಾಗಲೂ ನಮ್ಮ ಮಾತಿನಲ್ಲಿ ಕಂಡು ಬರುವ ನಯ- ವಿನಯಕ್ಕೇ ಬೆಲೆ ಬರುತ್ತದೆ. ಒಂದು ಮನೆಯಲ್ಲಿ ಹಿರಿಯರ ಚಾಳಿಯನ್ನು ಕಿರಿಯರು ಅನುಸರಿಸುವರಂತೆ! ಅದಕ್ಕೆ ಅವನು ಯಾರ ಮಗ? ಅವಳು ಯಾರ ಮಗಳು? ಎಂದು ಮನೆತನದ ಬುಡಕ್ಕೇ ಬರುತ್ತಾರೆ. "ಮಾತು ಕುಲಗೆಡಿಸಿತು" ಎಂದು ಹೇಳುತ್ತಾರೆ. ಹಿರಿಯರ ಬುಡಕ್ಕೇ ಬರುತ್ತದೆ ನಮ್ಮ ನಡತೆ! ಅಂತೂ ಎಲ್ಲವೂ ಮಾತಿನ ಮರ್ಮ ಹೊಂದಿಕೊಂಡು ನಮ್ಮ ಜಾತಕ ಇದೆಯೆಂದಾಯಿತು. ಅದಕ್ಕೇ ಮಾತು ಆಡುವುದಕ್ಕೆ ಮೊದಲು ಚೆನ್ನಾಗಿ ಚಿಂತಿಸಿ ಹಿತ ಮಿತವಾಗಿ ಆಡಿದರೆ ಮತ್ತೆ ಮಾತಿನ ಮುತ್ತನ್ನು ಹೆಕ್ಕಿ ತೆಗೆಯುವ ಕಷ್ಟವಿಲ್ಲ. ಮಾತಿಗೆ ಮರುಳಾಗಿ ಸೋತು ಹೋಗುವುದು ಸಾಮಾನ್ಯ. ಮುಂಚಿತವಾಗಿ ಚಿಂತಿಸಿದರೆ ಮತ್ತೆ ದುಃಖಿಸುವುದು ಬೇಡವಲ್ಲವೇ? ಒಬ್ಬನಿಗೆ ಒಮ್ಮೆ ಮಾತು ಒಮ್ಮೆ ಕೊಟ್ಟ ಮೇಲೆ ಮಾತಿನಂತೆ ನಡೆಯಬೇಕು. ತಪ್ಪಿದರೆ ನಮ್ಮ ಮಾತಿಗೆ ಬೆಲೆಯಿಲ್ಲವಾಗುತ್ತದೆ. ಹಿಂದೆ ಭೀಷ್ಮ ತಂದೆಗೆ ಕೊಟ್ಟ ಮಾತಿನಂತೆ ಆಜನ್ಮ ಬ್ರಹ್ಮಚಾರಿಯಾದ! ಶ್ರೀ ರಾಮ ತಂದೆಯು ಕೊಟ್ಟ ಮಾತಿನಂತೆ ವನವಾಸಕ್ಕೆ ಹೋದ. ಇದು ಪುರಾಣ ಕತೆಯಾದರೂ ಭಾರತೀಯರಿಗೆ ಆದರ್ಶವಲ್ಲವೇ? ಹಿರಿಯರ ಆದರ್ಶವೂ ನಮಗೆ ದಾರಿದೀಪವಲ್ಲವೇ? ಈಗಿನ ವಚನಭ್ರಷ್ಟ ರಾಜಕಾರಣಿಗಳಿಗೆ ಇಂದಿಗೂ ತಮ್ಮ ಮಾತುಗಾರಿಕೆಯ ವರಸೆಯಿಂದ ಜನರನ್ನು ಮತ್ತೆ ಮತ್ತೆ ವಂಚಿಸುವುದೇ ಅವರ ಜೀವನದ ಗುರಿಯಾಗಿಸಿಕೊಂಡಿದ್ದಾರೆಂದು ತೋರುತ್ತದೆ. ದಾನಶೂರ ಕರ್ಣ ಕೊಟ್ಟ ಮಾತಿನಿಂದಲೇ ಕೊನೆಯುಸಿರೆಳೆದನಲ್ಲವೇ!
ಇನ್ನು ಕೆಲವರಿಗೆ ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದಕ್ಕೆ ಮಾತು ಸಹಾಯಕವಾಗುತ್ತದೆ. ಮಾತಿನ ಧಾಟಿಯಿಂದ ಎಂಥವರನ್ನೂ ಬುಟ್ಟಿಗೆ ಹಾಕಿಕೊಳ್ಳುವ ಚಾಣಾಕ್ಷತೆ ಎಲ್ಲರಿಗೂ ಲಭಿಸುವುದಿಲ್ಲ. "ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ". ಆದರೆ ಅಂತಹ ಬಲ್ಲವರು ತನ್ನ ಬಲುಹ ಬರಿದೆ ತೋರಗೊಡುವುದಿಲ್ಲ. ಬಲ್ಲಿದರೆಂಬುದು ಅವರ ಮಾತುಗಳಿಂದಷ್ಟೆ ಗೊತ್ತಾಗುವುದು. ಬರಿಯ ಬೊಗಳೆ ಬಲುಹ ತೋರುವುದಿಲ್ಲ. ಅವರಿಗೆ ತಾನು ಬಲ್ಲೆನೆಂಬುದನ್ನು ಪ್ರದರ್ಶಿಸಬೇಕೆಂಬ ಆಸೆಯೂ ಇಲ್ಲ. ಮಾತಿನಿಂದಲೇ ಕೆಲವರು ಎಷ್ಟು ಬಲ್ಲವರೆಂಬುದನ್ನು ತೋರಿಸಿ ಕೊಡುವುದಿಲ್ಲವೇ? ಯಕ್ಷಗಾನದ ಅರ್ಥಗಾರಿಕೆಯಲ್ಲಿ ತಮ್ಮ ವಾಕ್ಸಾಮರ್ಥ್ಯವನ್ನು ಪ್ರೌಢಿಮೆಯನ್ನು ತೋರಗೊಡಲು ಮಾತಿನ ಸರಪಳಿಯನ್ನೇ ಬಿಟ್ಟು ಬಿಡುತ್ತಾರೆ. ಪಾತ್ರ ಗೌರವ ಅವರಿಗೆ ಬೇಕಾಗುವುದಿಲ್ಲ. ಇನ್ನು ಕೆಲವರು ಚಿಕ್ಕ ಮಾತಿನಿಂದಲೇ ಪಾತ್ರಕ್ಕೆ ಕೊರತೆಯಾಗದಂತೆ ಎದುರಾಳಿಗಳನ್ನು ಮಾತಿನ ಚಾಟಿಯಿಂದ ಬಾಯಿ ಮುಚ್ಚಿಸುತ್ತಾರೆ. ಎಲ್ಲವೂ ಅಲ್ಲಲ್ಲಿಗೆ ತಕ್ಕಂತೆ ಇದ್ದರೆ ಚೆನ್ನ! ಇನ್ನೊಬ್ಬರಿಗೆ ನೋವಾಗದಂತೆ, ಬೆಣ್ಣೆಯಲ್ಲಿ ಕೂದಲೆಳೆದಂತೆ ನಯವಾಗಿ ಮಾತಾಡುವ ಮಾತಿನ ಕೈಚಳಕ ತೋರಿಸುವ ಮಾತುಗಳು ಜನರಂಜನೆಗೆ ಪಾತ್ರವಾದೀತಲ್ಲವೇ? ಇನ್ನು ಕೆಲವರ ಮಾತು ಸಮಯಾಬಾಧಿತವಾಗಿ ಮುಂದಿನ ಪೀಳಿಗೆಗೆ ದಾರಿ ದೀಪಗಳಾಗಿವೆಯೆಂಬುದು ನಿತ್ಯಸತ್ಯ!
Monday, June 18, 2012
ಹೊಟ್ಟೆ ಪುರಾಣ!
ಹೊಟ್ಟೆ
ಹೊಟ್ಟೆಯ ಸುದ್ದಿ ತೆಗೆವಗಳೇ ಮದಲು ನೆಂಪಪ್ಪದು ಹೊಟ್ಟೆಯ ದೇವರು ಗಣಪ್ಪನ! ಅವಂಗೆ ಮದಲು ಕೈಮುಗುದು ಸುರು ಮಾಡುತ್ತೆ ಹೊಟ್ಟೆ ಸುದ್ದಿಯ. ದೇವರಕ್ಕಳ ಪೈಕಿ ಹೊಟ್ಟೆ ಕಾಂಬದು ಅವಂಗೊಬ್ಬಂಗೇ. ಅವನ ಹೊಟ್ಟೆಯ ಕತೆ ಗೊಂತಿದ್ದನ್ನೇ! ಚೌತಿ ದಿನ ಎಲ್ಲೋಡಿಕ್ಕೂ ಕೊಟ್ಟದರ ತಿಂದು ಹೊಟ್ಟೆ ದೊಡ್ಡ ಆದ್ದು; ನಡಕ್ಕೋಂಡು ಗೆದ್ದೆ ಹುಣಿಲ್ಲಿ ಹೋಪಗ ಬಿದ್ದದು; ಬಿದ್ದು ಹೊಟ್ಟೆ ಒಡದ್ದು; ಚಂದ್ರ ನೋಡಿ ನೆಗೆ ಮಾಡಿದ್ದು, ಚಂದ್ರಂಗೆ ಶಾಪ ಕೊಟ್ಟದು; ಹೊಟ್ಟೆ ಒಡದ್ದಕ್ಕೆ ಹಾವಿನ ಸೊಂಟಕ್ಕೆ ಸುತ್ಯೊಂಡದು ಹಿಂದೆ ನಡೆದ ಕತೆಯಡೊ. ನಿಜವೋ ಹೇಂಗೆ ಗೊಂತಿಲ್ಲೆ. ಅಂತೂ ಅವನ ಹೊಟ್ಟೆ ದೊಡ್ಡ ಇಪ್ಪ ಕಾರಣವೋ ಎಂತದೋ, ಲಂಬೋದರ ಹೇಳುತ್ತವು. ಆನು ಬರವ ಈ ಸುದ್ದಿಗೆ ಯಾವ ವಿಘ್ನವೂ ಆಗದ್ದ ಹಾಂಗೆ ಅವನೇ ನೋಡಿಗೊಳ್ಳೆಕ್ಕು ಹೇಳಿ ಬೇಡುಗೊಳ್ಳುತ್ತೆ. .ಎನ್ನ ಹೊಟ್ತೆ ದೊಡ್ಡ ಇದ್ದ ಕಾರಣ ಅಲ್ಲ. ಈಗ ಹೊಟ್ಟೆಯ ಸುದ್ದಿ ತೆಗದ್ದು. ದಾಸರ ಪದಲ್ಲಿ ಹೇಳುತ್ತಲ್ಲದೋ? "ಎಲ್ಲಾರು ಮಾಡುವುದು ಹೊಟ್ಟೆಗಾಗಿ,ತುತ್ತು ಹಿಟ್ಟಿಗಾಗಿ'" ಲೋಕದ ಎಲ್ಲ ಜನಂಗಳುದೆ ಮಾಡುವ ಎಲ್ಲ ಕೆಲಸಂಗಳು ಈ ಹೊಟ್ಟೆಯ ತುಂಬುಸುಲೇ ಅಲ್ಲದೋ? ಗಣಪತಿಯ ದಿನಿಗೇಳಿ ಎಲ್ಲೋರು ಕೊಟ್ಟ ಹಾಂಗೆ ನಮಗೆಲ್ಲ ಈ ಹೊಟ್ಟೆ ತುಂಬುಸಲೆ ಸಿಕ್ಕಿದರೆ ಆರೂ ಕೆಲಸವೂ ಮಾಡದ್ದೆ ಸುಮ್ಮನೆ ಆರಾಮವಾಗಿ ಕೂರುತ್ತಿತ್ತವು. ಮದಲೊಂದರಿ ಹೊಟ್ಟೆಯ ಪಕ್ಷ ಹೇಳಿ ಒಂದು ಪಕ್ಷ ಇತ್ತಡೊ. ಎಲ್ಲೋರಿಂಗು ಹೊಟ್ಟೆಯ ಬಗ್ಗೆ ಗೊಂತಿದ್ದರುದೆ ಆರುದೆ ಆ ಪಕ್ಷಕ್ಕೆ ಸೇರದ್ದೆ ಓಟಿ ಕೊಡದ್ದೆ ಈಗ ಅ ಪಕ್ಷದ ಹೆಸರೇ ಇಲ್ಲೆ. ಎಲ್ಲ ಜೀವಿಗೊಕ್ಕು ಬದುಕ್ಕೆಕ್ಕಾರೆ ಈ ಹೊಟ್ಟೆ ತುಂಬುಸಿಗೊಳ್ಳೆಕ್ಕು. ಅದರ ತುಂಬುಸುಲೆ ಜನಂಗೊ ಯಾವ ಕೆಲಸ ಮಾಡುಲೂ ಹೇಸುತ್ತವಿಲ್ಲೆ. ಹೇಳುವದು ಎಂತ ಮಾಡಲಿ ಸುಮ್ಮನಿಪ್ಪಲೆ ಹೊಟ್ಟೆ ಬಿಡೆಕ್ಕನ್ನೆ ಹೇಳಿಗೊಳ್ಳುತ್ತವು. ದೂರಿಂಗೆ ಮಾಂತ್ರ ಹೊಟ್ಟೆ. ಈ ಹೊಟ್ಟೆ ತುಂಬುಸಿದರೇ ನಮ್ಮ ರಥ ನಡವದು. ಅನ್ಯಾಯ ಅಧರ್ಮ ಮಾಡುವೋರು ಹೇಳುವದು ಮಾಂತ್ರ ಹೊಟ್ಟೆಯನ್ನೇ ದೂರ್ಯೊಂಡು. ಹೊಟ್ಟೆ ಎಲ್ಲೋರಿಂಗು ಇದ್ದರುದೆ, ಬೇಕಾದರುದೆ ಈ ಹೊಟ್ಟೆ ತುಂಬುಸುಲೆ ಜನಂಗೊ ಬೇಡದ್ದ ಕೆಲಸವನ್ನೂ ಮಾಡ್ಯೊಳ್ಳುತ್ತವು. ಇನ್ನೊಬ್ಬಂಗೆ ತೊಂದರೆ ಕೊಡದ್ದೆ ಎಂತ ಬೇಕಾರು ಮಾಡಲಿ. ಈಗ ನಡವದು ಸಮಾಜಕ್ಕೇ ದ್ರೋಹ. ನಮ್ಮ ಹೊತ್ತಿಪ್ಪ ಭೂಮಾತೆಗೂ ಅನ್ಯಾಯ! ಅಬ್ಬೆಯ ಹೊಟ್ಟೆಯನ್ನೇ ಬಗದು ಅದಿರು ಬೇರೆ ದೇಶಕ್ಕೆ ಕಳುಸಿ ಸಂಪತ್ತು ಹೆಚ್ಚಿಸ್ಯೊಂಬದು, ಮಾತೃ ದ್ರೋಹ ಹೇಳುವದು ಅವಕ್ಕೆ ಗೊಂತಿಲ್ಲೆ! ಈಗಂಗೆ ಸರಿ ಇನ್ನು ಎಷ್ಟು ವರ್ಷ ಹೀಂಗೆ ಗರ್ಪಿ ತೆಗೆವಲಕ್ಕು? ಮತ್ತಾಣೋರಿಂಗೆ ಅವು ಗರ್ಪಿ ತೆಗವಲೆ ಎಲ್ಲಿಗೆ ಹೋಯೆಕ್ಕು? ಈ ಯೋಚನೆ ಜನಂಗೊಕ್ಕೆ ಇಲ್ಲೆ. ಇಂದು ಕಳುದ್ದು ಎನ್ನ ದಿನ. ನಾಳಂಗೆ ಹೇಂಗೋ ಎಂತದೋ ಯೋಚನೆ ಇಲ್ಲೆ.
ಕೆಲವು ಜನ ಹುಟ್ಟುವಗಳೇ ಆಗರ್ಭ ಶ್ರೀಮಂತರಾಗಿದ್ದರೆ ಹೊಟ್ಟೆ ತುಂಬುಸುಲೆ ಯೋಚನೆ ಇಲ್ಲೆ. ಕೂದು ತಿಂದರೂ ಮುಗಿಯದ್ದಷ್ಟು ಇರ್ತು! ಆದರೆ ಬಡವರಾಗಿ ಹುಟ್ಟಿದೋರು ತಿಂಬಲೆ,ಹೊಟ್ಟೆ ತುಂಬುಸುಲೆ ಕಷ್ಟ. ಇದ್ದೋವು ದಿನಾ ದೋಸೆ ಅದು ಇದು ಹೇಳಿ ಬಗೆ ಬಗೆ ತಿಂಡಿಗಳ ಅಬ್ಬೆ ಮಾಡಿಕೊಟ್ಟರೆ ತಿಂದೊಂಡು ಹಾರಿಗೊಂಡು ಇಪ್ಪಲಕ್ಕು. ಈ ಮಕ್ಕಳ ಹೊಟ್ತೆ ತುಂಬುಸುಲೆ ನಾಳಂಗೆ ಎಲ್ಲಿಗೆ ಹೋಪದು? ಆರ ಕೈಕಾಲು ಹಿಡಿವದು ಹೇಳಿ ಯೋಚನೆ ಮಾಡೆಕ್ಕಾದ ಪರಿಸ್ಥಿತಿ ಬಡವರಿಂಗೆ. ಹಳ್ಲಿಗಳಲ್ಲಿ ಅಲ್ಲಿ ಅಲ್ಲಿ ಜಂಬ್ರಂಗೊಕ್ಕೇಲ್ಲ ಹೋದರೆ ಹೊಟ್ಟೆಲ್ಲಿ ಹಿಡ್ಡಿತ್ತಷ್ಟು ತಿಂಬದು.ಮರದಿನ ಎಲ್ಲಿಯೂ ಸಿಕ್ಕದ್ದರೆ ಉಪವಾಸ! ಹೀಂಗಾದರೆಅವು ಎಂತ ಮಾಡೆಕ್ಕು? ಇದರಿಂದಲೇ ಹೇಳಿ ಕಾಣುತ್ತು "ಬೊಳ್ಳದ ಮನಂತಾನಿ ಬೊಟ್ಟೊ" ಹೇಳುವ ಗಾದೆ ಹುಟ್ಟಿದ್ದು.ದೇವರು ಸೃಷ್ಟಿ ಮಾಡುವಗಲೇ ಈ ವ್ಯತ್ಯಾಸ ಮಾಡಿದ್ದು ಹೇಳುತ್ತವು. ಆದರೆ ನಮ್ಮ ಹತ್ತರೆ ಹೆಚ್ಚು ಇಪ್ಪಗ ಇಲ್ಲದ್ದೋರಿಂಗೆ ರಜ ರಜ ಕೊಟ್ಟರೆ ಅವಕ್ಕೂ ಚಿಂತೆ ಇಲ್ಲೆ. ಅವುದೇ ಕಲ್ತು ಮುಂದೆ ಬಕ್ಕು.ಮತ್ತೆಂತಾದರು ಉದ್ಯೋಗ ಮಾಡ್ಯೊಂಡು ಇಪ್ಪಲಕ್ಕು. ಆದರೆ ಹಂಚಿ ತಿಂಬ ಬುದ್ಧಿ ಮನುಷ್ಯಂಗೆ ಬತ್ತಿಲ್ಲೆ ಏಕೆ?ಆನು ವಿದೇಶಲ್ಲಿಪ್ಪಗ ಅಲ್ಲಿ ಕೆಲಸ ಮಾಡ್ಯೊಂದು ಇಪ್ಪ ಮಕ್ಕೊ ಅವರ ಮಕ್ಕಳತ್ರೆ ಹೇಳುವದು ಕೇಳಿದ್ದೆ. "ಪರಸ್ಪರ ಹಂಚಿಗೊಳ್ಳಿ" ಹೇಳಿ ಮಕ್ಕಳ ಒಪ್ಪುಸುವದು ಹಾಂಗೆ ಒಬ್ಬನತ್ರೆ ಇಪ್ಪ ಆಟದ ಸಾಮಾನು ಇನ್ನೊಬ್ಬಂಗೆ ಕೊಡುವದು, ಅವನತ್ರೆ ಇಪ್ಪದರ ಮತ್ತೊಬ್ಬಂಗೆ ಕೊಡುವದು ಹೀಂಗೆಲ್ಲ ಹೊಂದಿಸಿಗೊಳ್ಳುತ್ತವು. ಅವಕ್ಕೆ ಸಣ್ಣಾದಿಪ್ಪಗ ಶಾಲೆಲ್ಲಿಯೂ ಇದರನ್ನೇ ಹೇಳಿಕೊಡುತ್ತವಡೊ. ತಿಂಡಿಯನ್ನೂ ಹಾಂಗೆ ಹಂಚಿಗೊಳ್ಳುತ್ತವು. ಹೀಂಗೆ ಮಾಡ್ಯೊಂಡರೆ ಜಗಳ ಬತ್ತಿಲ್ಲೆ. ಒಂದೇ ಸೈಕಲ್ ಇಪ್ಪದು ಒಂದು ಮನೆಲ್ಲಿ ಹೇಳಿ ಆದರೆ ಒಬ್ಬ ಹತ್ತು ಮಿನಿಟ್ ಮೆಟ್ಟಿ ಆದಮೇಲೆ ಇನ್ನೊಬ್ಬ ಹೇಳಿ ಮನೆಲ್ಲೇ ಇಪ್ಪ ಮಕ್ಕಳೆ ಒಪ್ಪಂದಲ್ಲಿ ಸರಿ ಮಾಡಿಗೊಂಡರೆ ಚರ್ಚೆ ಬಪ್ಪಲಿಲ್ಲೆ. ಮನೆಲ್ಲಿಪ್ಪ ಎಲ್ಲೋರಿಂಗು ಬೇರೆ ಬೇರೆ ತೆಗೆಯಕ್ಕಾದ ಅಗತ್ಯವು ಇಲ್ಲೆ. ಮನೆಲ್ಲೇ ಹೀಂಗೆ ಅಭ್ಯಾಸ ಮಾಡ್ಯೊಂಡರೆ ಆ ಊರಿಲ್ಲಿ, ದೇಶಲ್ಲಿಯೇ ಎಲ್ಲೋರು ಹೊಂದಿ ಬಾಳುಲಕ್ಕು. ದೇವರು ಭೇದ ಮಾಡಿದ ಹೇಳುವದಕ್ಕೆ ಬದಲು ದೇವರು ಕೊಟ್ಟದರ ಹೀಂಗೆ ಹಂಚ್ಯೊಂಡರೆ ಸರಿ ಅಕ್ಕಲ್ಲದೋ? ಅದಲ್ಲ ಇದು ಎನಗೆ ಇಪ್ಪದು. ಎನ್ನ ಅಧಿಕಾರ,ಇಲ್ಲಿ ಆನು ಹೇಳಿದ ಹಾಂಗೆ ಎಲ್ಲೋರು ಕೇಳೆಕ್ಕು. ಈ ಮಾತುಗೊ ಬಂದರೆ ತನ್ನಷ್ಟಕ್ಕೇ ಜಗಳ, ಮತ್ಸರ,ಕೋಪ ಹೀಂಗೆಲ್ಲ ಷಡ್ವೈರಿಗಳ ಒಡನಾಟ ಬತ್ತು. ಇಡೀ ಲೋಕಲ್ಲೇ ಘರ್ಷಣೆ ಉಂಟಾವುತ್ತು.
ಮೇಲಾಟ,,ಸ್ಪರ್ಧೆ ಎಲ್ಲ ಬಪ್ಪದು ಆನು- ಹೇಳುವ ಅಹಂಕಾರಂದ ಹೇಳಿ ಎನ್ನ ಅಭಿಪ್ರಾಯ. ಹೊಟ್ಟೆ ಇದ್ದು ಹೇಳಿ ಹೆಚ್ಚು ತುಂಬುಸುಲೆ ಹೋದರೆ ಅದಕ್ಕೆ ಇನ್ನು ಸಾಕು ಹೇಳಿ ತೋರುಗೋ? ಮದಲೊಂದು ಮನುಷ್ಯ ಹಡಗು ತುಂಬುಸುಲೆ ಹೋತಡೊ.ಇನ್ನೊಂದು ಮನುಷ್ಯ ಹೊಟ್ಟೆ ತುಂಬುಸುಲೆ ಹೋತಡೊ.ಹಡಗು ತುಂಬುಸುಲೆ ಹೋದ್ದು ಹನಿಯ ದಿನ ಅಪ್ಪಗ ಬಂತಡೊ ಆದರೆ ಹೊಟ್ಟೆ ತುಂಬುಸುಲೆ ಹೋದ್ದು, ಅದಕ್ಕೆ ತುಂಬುಸಿದ ಹಾಂಗ ಖಾಲಿ ಆವುತ್ತಾ ಇದ್ದದರಿಂದ ತುಂಬುಸಿಯೇ ಆಗದ್ದೆ ಇನ್ನೂತುಂಬುಸಿಗೊಂಡೇಇದ್ದಡೋ. ಒಂದು ಮಾತು ಕೇಳಿದ್ದೆ.ತಿಂದಂಗೆ ಕೊದಿ ಹೆಚ್ಚು. ಉಂಡವಂಗೆ ಹಶು ಹೆಚ್ಚು ಹೇಳಿ. ಉಣ್ಣದ್ದೇ ಇದ್ದರುದೆ ಒಂದೆರಡು ದಿನ ಹಶು ಕಟ್ಟಿಗೊಂಡು ಇಪ್ಪಲೆಡಿಗಲ್ಲದೊ. ಹಾಂಗೆ ದಿನಗಟ್ಟಲೆ ಬರೇ ನೀರು ಕುಡುಕ್ಕೊಂಡೂ ಇಪ್ಪಲೆಡಿಗು.
ಹೊಟ್ಟೆ ಸರಿ ಇದ್ದರೆ ಮಾಂತ್ರ ಅದರ ತುಂಬುಸುವ ಯೋಚನೆ ಅದುವೇ ಸರಿಯಿಲ್ಲದ್ದರೆ ಕಷ್ಟ ಅಲ್ಲದೋ? ಊ(ಟ) ಮ(ಮಲಗುವುದು) ಹೇ(ಶೋಧನೆ) ಈ ಮೂರೂ ಸರಿಯಿದ್ದರೆ ಅವ ಆರೋಗ್ಯವಂತ ಹೇಳಿ ಲೆಕ್ಕಡೊ. ನಾಲಗ್ಗೇ ರುಚಿಯಿಲ್ಲದ್ದೆಯೋ ಅಥವಾ ಹೊಟ್ಟೆಲ್ಲಿ ಗೇಸ್ ತುಂಬಿಯೋ ಉಂಬದೇ ಬೇಡ ಹೇಳಿ ತೋರಿದರೆ ಆರೋಗ್ಯ ಸರಿಯಿದ್ದು ಹೇಳಿ ಆತೋ? ಮತ್ತೆ ಮನುಗಿದರೆ ಒರಕ್ಕೇ ಬತ್ತಿಲ್ಲೆ ಹೇಳುವದು, ಏನಾದರೂ ಚಿಂತೆ ತುಂಬ್ಯೊಂಡಿಪ್ಪಗ ಒರಕ್ಕು ಬತ್ತೋ? ಹಾಂಗಾದರೂ ಆರೋಗ್ಯ ಕೈಕೊಟ್ಟ ಹಾಂಗೆ. ಮತ್ತೆ ತಿಂದದು ಜೀರ್ಣ ಆಗಿ ತ್ಯಾಜ್ಯ ಹೆರ ಹೋಗದ್ದರೆ, ಮಲ ಬದ್ಧತೆ, ಮೂಲವ್ಯಾಧಿ, ಹೀಂಗೆ ಮಲ ರೋಗಂಗಳುದೇ ಬಂದರೆ ಕಷ್ಟ! ತಿಂದದು ಜೀರ್ಣ ಆವುತ್ತು, ಒರಕ್ಕು ಸರಿಯಾಗಿ ಇದ್ದು, ಶೋಧನೆ ಸರಿಯಿದ್ದು ಹೇಳಿ ಆದರೆ ಅವನ ಆರೋಗ್ಯ ಸರಿಯಿದ್ದು ಹೇಳಿ ಅಲ್ಲದೋ?ಧಾರಾಳ ಶ್ರೀಮಂತ ಆಗಿದ್ದರು ಆರೋಗ್ಯ ಸರಿಯಿಲ್ಲದ್ದರೆ ಹೇಂಗೆ? ಶರೀರ ಹೇಳುವದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಂಗೆಲ್ಲ ರೋಗಂಗಳ ಗೂಡಾದರೆ ಮನುಷ್ಯನ ಮನಸ್ಸೇ ಚಿಂತೆಯ ಮನೆಯಾವುತ್ತು. ಹಾಂಗಾದರೆ ಇದೆಲ್ಲ ಹೊಟ್ಟೆಯ ದೋಷಂಗಳಿಂದಲೇ ಬಪ್ಪದಲ್ಲದೋ? ಹೊಟ್ಟೆ ಸರಿ ಇದ್ದರೆ ಅವ ಸರಿ ಇದ್ದ ಹೇಳಿ ಲೆಕ್ಕ. ಇಂದು ಹುಟ್ಟಿದ ಹಿಳ್ಳೆಯೇ ಆಗಲಿ ಹಶು ಅಪ್ಪಗ ಅದಕ್ಕೆ ತಡಕ್ಕೊಂಬಲೆಡಿತ್ತೊ? ರಟ್ಟಿ ರಟ್ಟಿ ಕೂಗುತ್ತು. ಹೊತ್ತು ಹೊತ್ತಿಂಗೆ ಹಾಲು ಕೊಟ್ಟರೆ ಒರಗ್ಯೊಂಡೋ ಮತ್ತೆ ದಿನ ಹೋದ ಹಾಂಗೆ ಆಡ್ಯೊಂಡೋ ಇರುತ್ತು. ಇಡೀ ಶರೀರದ ಆರೋಗ್ಯ ನಿಯಂತ್ರಣ ಇಪ್ಪದು ಹೊಟ್ಟೆಲ್ಲಿ. ರುಚಿ ಆತು ಹೇಳಿ ಲೆಕ್ಕಂದ ಹೆಚ್ಚು ತಿಂದರೆ ಜೀರ್ಣ ಆವುತ್ತೋ? ಹೊತ್ತು ತಪ್ಪುಸಿ ಉಂಡು ತಿಂದು ಮಾಡಿದರೂ ಹಶು ಕೆಡುತ್ತು. ಅಂಬಗ ಹೊಟ್ಟೆಯ ಸರಿ ನೋಡ್ಯೊಂಡರೆ ಎಲ್ಲ ಸರಿ ಆವುತ್ತು. ಅದಕ್ಕೇ ಹಿಂದಾಣೋರು ಒಂದು ಗಾದೆ ಮಾಡಿದ್ದವಲ್ಲದೋ?"ಊಟ ಬಲ್ಲವಂಗೆ ರೋಗವಿಲ್ಲ, ಮತ್ತೆ ಮಾತು ಬಲವಂಗೆ ಜಗಳವಿಲ್ಲ" ಹಾಂಗೆ ನಮ್ಮ ಆರೋಗ್ಯ ನಮ್ಮ ಕೈಲ್ಲಿಯೇ ಇದ್ದು.
ಎಲ್ಲೋರು ಶರೀರ ಶಾಸ್ತ್ರ ಓದಿದೋವೇ ಇಪ್ಪದು ಈಗ. ತಿಂದ ಆಹಾರ ಹೊಟ್ಟೆಗೆ ಎತ್ತಿದ ಮೇಲೆ ಎಂತಾವುತ್ತು?ಎಷ್ಟು ಹೊತ್ತು ಅಲ್ಲಿ ಇರುತ್ತು.ಮತ್ತೆ ಮುಂದೆ ಎಲ್ಲಿಗೆ ಹೊವುತ್ತು? ಹೇಳುವದೆಲ್ಲ ಕಲಿವಗಳೇ ಗೊಂತಾವುತ್ತು.ಯಾವುದೇ ಒಂದು ಯಂತ್ರದ ಶಬ್ದ ವ್ಯತ್ಯಾಸಂದಲೇ ಅದು ಇಲ್ಲಿಯೇ ಹಾಳಯಿದು. ಅದಕ್ಕೆ ಈ ಒಂದು ಭಾಗ ತಂದು ಹಾಕಿದರೆ ಸರಿ ಆವುತ್ತು ಹೇಳಿದ ಹಾಂಗೆ.ಹೊಟ್ಟೆಲ್ಲಿಯೂ ಅಪ್ಪ ತಾತ್ಕಾಲಿಕ ವ್ಯತ್ಯಾಸ ತಿಳುಕ್ಕೊಂಡರೆ ಅದಕ್ಕೆ ಅಲ್ಲಲ್ಲಿಗಿಪ್ಪ ಮದ್ದುಗಳ ತೆಕ್ಕೊಂಡರೆ ರೋಗ ಮುಂದುವರಿತ್ತಿಲ್ಲೆ. ಮುಳ್ಳು ತಾಗಿದ ಕೂಡಲೇ ಅದರ ತೆಗದು ಕಾಸಿ ಮಡಿಗಿದರೆ ಅದರಷ್ಟಕ್ಕೆ ಬೇನೇ ಸಾಯುತ್ತು.ಗುಣ ಆವುತ್ತು. ಮುಳ್ಳು ಮಡಗಿ ಮದ್ದು ಕಿಟ್ಟಿದರೆ ಬೇನೆ ಹೋಕೋ? ಈಗ ಐಗಾಡಿಗ ತಿಂದುಗೊಂಡೆ ಇಪ್ಪೋರು ಇದ್ದವು. ಅದಕ್ಕೆ ಹೇಳುತ್ತವು ಗಾಣ ಹಾಕುವದು ಹೇಳಿ. ಃಆಂಗೆ ಗಾಣ ಹಾಕಿಗೊಂಡೆ ಇದ್ದರೆ ನಮ್ಮ ಹೊಟ್ಟೆಯೊಳದಿಕ್ಕಿಪ್ಪ ಯಂತ್ರಕ್ಕೆ ವಿರಾಮವೇ ಇಲ್ಲದ್ದೆ ಆವುತ್ತು. ಅಂಬಗ ಅದುದೇ ಸ್ಟ್ರೈಕ್ ಮಾಡುತ್ತು.ಕೂಡ್ಲೇ ನಮಗೆ ಗೊಂತಾಗದ್ದರೂ ಕೆಲವು ದಿನಲ್ಲಿ ಜ್ವರವೋ,ಅಜೀರ್ಣವೋ ಶುರುವಾಗಿ ಅದೊಂದು ರೋಗವೇ ಆವುತ್ತು.ಹಾಂಗೆ ಅಪ್ಪಲಾಗ ಹೇಳಿಯೇ ಹಿಂದಾಣೋರು ಉಪವಾಸ ಶುರು ಮಾಡಿದವು ನಿಜಕ್ಕಾದರೂ ಇಡೀ ದಿನ ಏಕಾದಶಿಯ ಹಾಂಗೆ ಉಪವಾಸ ಮಾಡಿದರೆ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕಿ ಮತ್ತೆ ಅವರ ಕೆಲಸಲ್ಲಿ ಚುರುಕಾವುತ್ತವು. "ಲಂಘನಂ ಪರಮೌಷಧಂ" ಹೇಳಿರೆ ಹಾರುವದು ಅಲ್ಲ. ಉಪವಾಸ ಕೂಪದು ಹೇಳಿ. ಇಂಗ್ಲಿಷಿಲ್ಲಿ ಹೇಳುತ್ತರೆ ರಿಫ್ರೆಶ್ ಅಪ್ಪದು ಉಪವಾಸ ಇದ್ದರೆ.ಚಾಂದ್ರಾಯಣ ವ್ರತ ಹೇಳಿ ಇದ್ದಡೊ. ಹದಿನೈದು ದಿನ ದಿನಾಗಳುದೇ ತಿಂಬ ಆಹಾರ ರಜ ರಜವೇ ಕಡಮ್ಮೆ ಮಾಡ್ಯೊಂಡು ಹೇಳಿರೆ ಪಾಡ್ಯಕ್ಕೆ ಸುರು ಮಾಡಿದರೆ,ಅಮಾವಾಸ್ಯೆಗೆ ಪೂರ್ತಿ ನಿರಾಹಾರ. ಮತ್ತೆ ರಜ ರಜವೇ ತಿಂಬದರ ಹೆಚ್ಚಿಸಿಗೊಂಡುಹುಣ್ಣಮೆಗಪ್ಪಗ ಹೊಟ್ಟೆ ತುಂಬ ಉಂಬದು.ಅಂಬಗ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕುತ್ತು.ಕೆಲಸ ಸರಿ ಮಾಡುತ್ತವು. ಆರೋಗ್ಯ ಸರಿ ಇರುತ್ತು. ಈಗ ನಾವು ಉಪವಾಸ ಮಾಡುವದಾದರೆ, ಅಕ್ಕಿಯ ಆಹಾರ ತಿಂಬಲಾಗ, ಗೋಧಿದು ಹೊಟ್ತೆ ತುಂಬ ತಿಂಬಲಕ್ಕು ಹೇಳಿ ಮಾಡುತ್ತು. ಪ್ರಯೋಜನ ಇದ್ದೋ? ಉಪವಾಸ ಹೇಳಿರೆ ನಿಜವಾಗಿಯೂ ದೇವರ ಹತ್ತರೆ ಮನೆಲ್ಲೇ ಇಪ್ಪದು. ಎಲ್ಲೆಲ್ಲಿಯಾರೂ ತಿರಿಕ್ಕೊಂಡು ಸಿಕ್ಕಿದ್ದರ ಎಲ್ಲ ತಿಂದರೆ ಉಪವಾಸ ಆವುತ್ತೋ? ನಾವು ಉಂಬದು ಹೇಳಿರೆ ಅದು ಒಂದು ಯಜ್ಞ! ದೇಹಲ್ಲಿಪ್ಪ ಪಂಚ ಪ್ರಾಣಂಗೊಕ್ಕೆ ಪ್ರಾಣಾಹುತಿ ಕೊಡೆಕ್ಕು. ಮತ್ತೆ ಊಟ ಸುರು! ಪ್ರಾಣಯ ಸ್ವಾಹಾ, ಅಪಾನಾಯ ಸ್ವಾಹಾ,ವ್ಯಾನಾಯಸ್ವಾಹಾ,ಉದಾನಯಸ್ವಾಹಾ,ಸಮಾನಾಯಸ್ವಾಹಾ ಹೇಳಿ ಆಹುತಿ ಕೊಟ್ಟ ಮೇಲೆ ಊಟ ಸುರು.ಊಟದ ನಡುಕೆ ಹಾಳು ಹರಟೆ ಮಾತಾಡುವದು, ಅಲ್ಲಿ ಇಲ್ಲಿ ನಡಕ್ಕೊಂಡು ತಿಂಬದು ಎಲ್ಲ ನಾಗರಿಕರಾಗಿಪ್ಪ ನಾವು ಮಾಡಲಾಗ. ಹಾಂಗೆ ಮಾಡಿದರೆ ಪ್ರಾಣಿಗೊಕ್ಕೂ ನಮಗೂ ವ್ಯತ್ಯಾಸ ಇದ್ದೋ?
ಜನಂಗೊ ಈ ಹೊಟ್ಟೆಗೆ ದೂರು ಹಾಕಿ ಮಾಡುವ ಅನರ್ಥ ಸಾಮಾನ್ಯವೋ? ರಾಶಿ ರಾಶಿ ಕೂಡಿ ಹಾಕುವದು,ಮಕ್ಕೊ ಮರಿಮಕ್ಕೊ ಕೂದು ತಿನ್ನೆಕ್ಕು ಹೇಳಿ ಅಡ್ಡ ದಾರಿಲ್ಲಿ ಸಂಪಾದನೆ ಮಾಡಿ ಮತ್ತೆ ಭ್ರಷ್ಟಾಚಾರ ತುಂಬಿತ್ತಪ್ಪ ಹೇಳಿ ಹೇಳುವದು..ಅಂತೂ ಅನ್ಯಾಯ ಅಧರ್ಮಕ್ಕೆ ಆರೋ ಹೊಣೆ.ತಾನು ಸರಿಯಿದ್ದೇ ಹೇಳುವದು ಎಲ್ಲ ಈ ಹೊಟ್ಟಗೆ ಬೇಕಾಗಿಯೇ ಅಲ್ಲದೋ? ಉಸಿರು ನಿಂದ ಮೇಲೆ ಹೊಟ್ಟೆ ಆರಿಂಗೆ ಬೇಕು? ಗಾಂಧೀಜಿ ಹೇಳಿದ ಹಾಂಗೆ ಅಪರಿಗ್ರಹ ಪಾಲಿಸಿದರೆ ಕೂಡಿ ಹಾಕುವ ಅಭ್ಯಾಸ ರಜ ಕಡಮ್ಮೆ ಮಾಡಿದರೆ ಲೋಕ ಒಳ್ಳೆದಕ್ಕೋ ಏನೋ?ಹೊಟ್ಟೆಯ ಬಗ್ಗೆ ಹೇಳುವಗ ಕೆಲವು ಜನ ಸಿಕಿ ಸಿಕ್ಕಿದ ಕಾಟ್ಮ್ಕೋಟಿಯ ಅಡಿಗಾಡಿಗ ತಿಂದೋಡು ಹೊಟ್ಟೆ ಬೆಳೆಸಿಗೊಳ್ಳುತ್ತವು. ಅದು ಬಿಡೆಕ್ಕು. ಹೊಟ್ಟೆಗೂ ವ್ಯಾಯಾಮ ಬೇಕು. ಇಡೀ ನಮ್ಮ ರಥ ನಡವದೇ ಹೊಟ್ಟೆಂದಾಗಿ . ಹೊಟ್ಟೆಯ ಮಟ್ಟಿಂಗೆ ಜಾಗ್ರತೆ ಎಷ್ಟು ತೆಕ್ಕೊಂಡರು ಸಾಲ. ಹೊಟ್ಟೆ ನಮಗೆ ಹೊರೆಯಲ್ಲ. ಹೊರೆಯಾಗದ್ದ ಹಾಂಗೆ ಹತೋಟಿಲ್ಲಿ ಮಡಿಕ್ಕೊಳ್ಳೆಕ್ಕು. ಕೆಲವು ಜನರ ಹೊಟ್ಟೆ ಆನು ವಿದೇಶಲ್ಲಿ ನೋಡಿದ್ದು.ಅವು ಹೊಟ್ಟೆ ನೆಗ್ಗಿಗೊಂಡು ನಡವಲೇ ಇಲ್ಲೆ. ಎಲ್ಲೋರೂ ವಾಹನಲ್ಲೇ ಹೋಪದಾದರೂ ಎಲ್ಯಾರು ನಡೆಕ್ಕಾರೆ ಬಪ್ಪ ಒದ್ದಾಟ ದೇವರಿಂಗೇ ಪ್ರೀತಿ! ಈ ಹೊಟ್ಟೆ ಬಗ್ಗೆ ಬರದ ಲೇಖನವೂ ಆ ಹೊಟ್ಟೆ ಗಣಪ್ಪಜ್ಜಂಗೇ ಅರ್ಪಿತ!
ಹೊಟ್ಟೆ (ಮುಂದುವರುದ್ದು)!
ಹೊಟ್ಟೆ ಮುಂದುವರುದ್ದು ಹೇಳಿರೆ ತಪ್ಪು ಅರ್ಥ ಗ್ರೇಶೆಡಿ.ಹೊಟ್ಟೆಯ ಕುರಿತಾದ ಲೇಖನ ಮುಂದುವರುದ್ದು ಹೇಳಿ. ಹೊಟ್ಟೆ ದೊಡ್ಡ ಅಕ್ಕಷ್ಟೆ ಹೊರತು ಮುಂದುವರಿವಲೆ ಸಾಧ್ಯ ಇದ್ದೋ ನಿಂಗಳೇ ಹೇಳಿ.ಹೊಟ್ಟೆಯ ವಿಷಯಲ್ಲಿ ಬರದಷ್ಟೂ ಮುಗಿಯ. ಕೇಳಿದ್ದೀರೋ? ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಹೇಳುತ್ತವು. ಎಂತಗೆ?ಭೀಮನ ಹೊಟ್ಟೆ ದೊಡ್ಡ ಇದ್ದು. ಅವನ ಹೊಟ್ಟೆ ತುಂಬುಸುಲೆ ಏಕಚಕ್ರಪುರಲ್ಲಿಪ್ಪಗ ತುಂಬ ಕಷ್ಟ ಆಗಿತ್ತಡೊ.ದಿನಾ ಬೇಡಿತಂದ ಆಹಾರವ ಎರಡು ಪಾಲು ಮಾಡಿ ಒಂದು ಪಾಲು ಭೀಮಂಗೇ ಕೊಟ್ಟು ಒಳುದ್ದರ ಒಳುದೋರು ತಿಂದುಗೊಂಡಿತ್ತವಡೊ. ಊರಿನ ಲೆಕ್ಕದ ಬಲಿಯ ಗಾಡಿಲ್ಲಿ ತುಂಬುಸಿಗೊಂಡು ಬಕಾಸುರಂಗೆ ಕೊಡುಲೆ ತೆಕ್ಕೊಂಡು ಹೋಪಗ ಕೊದಿ ತಡೆಯದ್ದ ತಿಂಬಲೆ ಸುರುಮಾಡಿದೋನು, ತಿಂದಡೋ,ತಿಂದಡೋ ಎಷ್ಟು?ಗಾಡಿಲ್ಲಿದ್ದದು ಎಲ್ಲ ಮುಗುತ್ತಡೊ.ಎಷ್ಟೊ ಲೆಕ್ಕ ಹೇಳುತ್ತವು ಕುಟ್ತುಗಲ್ಲಿದ್ದದರ ಎಲ್ಲ ತಿಂದುಗೊಂಡಿಪ್ಪಗ ದೂರಂದ ನೋಡಿದ ರಾಕ್ಷಸ ಹಶು ತಡೆಯದ್ದೆ ಬೊಬ್ಬೆ ಹಾಕಿತ್ತಡೊ.ಬೇಗ ಬಾ ಹೇಳಿತ್ತಡೊ.ಅಂಬಗ ಭೀಮ ನಿಲ್ಲು ಮಾರಾಯ ಇನ್ನು ರಜ ಪಾತ್ರೆಲ್ಲಿ ಹಿಡುಕ್ಕೊಂಡಿದ್ದು ಅದರ ಮುಗುಸೀತೆ. ಮತ್ತೆ ನಿನ್ನತ್ರೆ ಮಾತಾಡುತ್ತೆ ಹೇಳಿದಡೊ.ಅಂಬಗ ಗ್ರೇಶುಲಕ್ಕು ಎಷ್ಟು ದೊಡ್ಡ ಭಿಮನ ಹೊಟ್ಟೆ ಹೇಳಿ. ಅವಂಗೆ ಬೇಡಿ ತಂದದು ಕಾಸಿನ ಮಜ್ಜಿಗೆಯೇ ಅಲ್ಲದೋ? ಮದಲೊಂದು ಹಡಗು ತುಂಬುಸುಲೆ ಹೋದ್ದು ತುಂಬುಸಿಕ್ಕಿ ಬಯಿಂದಡೊ. ಹೊಟ್ಟೆ ತುಂಬುಸುಲೆ ಹೋದ್ದು ಬಯಿಂದಿಲ್ಲೆಡೊ.ಏಕೆ ಕೇಳಿ. ತುಂಬುಸಿದ ಹಾಂಗೆ ಖಾಲಿ ಆವುತ್ತು. ಮತ್ತೆ ತಿಉಂಬುಸೆಕ್ಕು. ಎಲ್ಲಿ ವರೆಗೆ? ಜೀವ ಇಪ್ಪಲ್ಲಿ ವರೆಗೆ. ಆಮ್ಬಗ ತಿಳುದೋರು ಜ್ಞಾನಿಗೊ ಹೇಳುತ್ತವು ಬದುಕ್ಕುಲೆ ತಕ್ಕ ತಿನ್ನೆಕ್ಕು ಹೇಳಿ.ಮೃಷ್ಟಾನ್ನ ತಿಂದರುದೇ ಬರೇ ತೆಳಿ ಕುಡುದರುದೇ ಹೊಟ್ಟೆ ತುಂಬುತ್ತು. ಹೊಟ್ಟೆ ಅದರ ಕೇಳುತ್ತಿಲ್ಲೆ. ಎಂತಕೆ ಎನಗೆ ಒಳ್ಳೆ ಊಟ ಕೊಟ್ಟಿದಿಲ್ಲೆ ಹೇಳಿ ಕೇಳುತ್ತೋ? ಒಟ್ಟಾರೆ ಪಸುಂಬೆ ತುಂಬಿದರೆ ಸಾಕು ಅಲ್ಲದೋ?ಅಂಬಗ ನಿಂಗೊ ಕೇಳುವಿ. ಪ್ರಾಣಿಗೊ ಹೊಟ್ತೆ ತುಂಬುಸಿಗೊಳ್ಳುತ್ತ ಹಾಂಗೆ ನಾವು ತುಂಬುಸುವುದೋ!ಅಲ್ಲಲ್ಲ. ಅಂಬಗ ಬೇಶಿದ್ದರ ತುಂಬುಸಲೂ ಅಕ್ಕು. ನಿನ್ನೆಯಾಣದ್ದೋ,ಮನ್ನೆಯಾಣದ್ದೋ ಹಳಸಿದ್ದರನ್ನೋ ಕೊಳದ ಹಣ್ನನ್ನೋ ತಿಂದರುದೆ ಹೊಟ್ತೆ ತುಂಬುತ್ತು. ಆದರೆ ಈಗ ಫ್ರಿಜಿಲ್ಲಿ ಮಡಗಿದ್ದು ನಾಳೆಯೂ ತಿಂತಿಲ್ಲೆಯೋ ಕೇಳುವಿ. ಪದ್ಮಾಸನ ಹಾಕಿ ಕೂದು ಉಂಬದು ಕ್ರಮ ಪ್ರಕಾರ ಉಂಬದು ಮರ್ಯಾದಿ. ಆದರೆ ನಿತ್ಯಕ್ಕೂ ನಿಂದೊಂಡೋ,ಅತ್ಲಾಗಿ ಇತ್ಲಾಗಿ ನಡಕ್ಕೊಂಡೊ ಅದು ಉಂಬದಲ್ಲ. ಎಂತಾದರೂ ತಿಂಬದು ಹೇಳಿ ಎನ್ನ ಅಭಿಪ್ರಾಯ.ಹೊಟ್ತೆ ತುಂಬುಸುವದೇ.ತಾಳ್ಮೆಂದ ಕೂದುಗೊಂಡು ಭೋಜನ ಕಾಲೇ ಆ ದೇವರ ಮನಸ್ಸಿಲ್ಲೇ ಗ್ರೇಶ್ಯೊಂಡು ಮಾಡುವ ಊಟ ಅದು ಕ್ರಮದ ಊಟ ಹೇಳಿ ಎನ್ನ ಅನಿಸಿಕೆ. ಏನಾದರೂ ಬೇರೆ ಯೋಚನೆಲ್ಲಿ ನೀರು ಕುಡಿವಗ ತೆರಂಬು ಹೋವುತ್ತಿಲ್ಲೆಯೋ? ನಿಂಗಳೇ ಹೇಳಿ.ನಮ್ಮ ಕ್ರಮ ನೋಡಿ ನಮ್ಮ ಮಕ್ಕೊ ಕಲಿತ್ತವು. ಇನ್ನೂ ರಜ ದೂರ ಹೊವುತ್ತವು. ಆಲದ ಮರ ಅಜ್ಜ ನೆಟ್ಟದು ಹೇಳಿ ಸುತ್ತ ಬಪ್ಪದು ಬೇಡ. ಆಲದ ಮರಲ್ಲಿ ತ್ರಿಮೂರ್ತಿಗಳೇ ವಾಸವಾಗಿದ್ದವು ಹೇಳಿ ಗ್ರೇಶ್ಯೊಂಡು ಭಕ್ತಿಂದ ಸುತ್ತ ಬಂದರೆ ರಜ ಹೊತ್ತಾದರು ನಮ್ಮ ಬೇರೆ ಯೋಚನೆಗೆ ಕಡಿವಾಣ ಹಾಕಿದ ಹಾಂಗೇ ಅಲ್ಲದೋ?ಒಬ್ಬ ಊಟ ಆತೋ ಹೇಳಿ ಕೇಳಿದ್ದಕ್ಕೆ ಮುಂಡಾಸು ಮೂವತ್ತು ಮೊಳ ಹೇಳಿದರೆ ಅಕ್ಕೋ? ಊಟ ಮಾಡುವಗ ಬೇರೆ ಯೋಚನೆ ಬಂದರೆ ಉತ್ತರ ಯದ್ವಾ ತದ್ವಾ ಆವುತ್ತು. ಊಟವನ್ನೂ ಸಮಯ ತಪ್ಪಿ ಮಾಡುವದು ಹೇಳಿದರೆ ಒಟ್ಟಾರೆ ಹೊಟ್ಟೆ ತುಂಬುಸಿಗೊಂಬದೇ ಅಲ್ಲದೋ? ಈಗ ಮೇಜಿ ಮೇಲೆ ಕುರ್ಚಿಲ್ಲಿ ಕೂದು ಉಂಬಗಳೂ ಅಷ್ಟೆ ಹೊಟ್ಟೆ ಉದ್ದಿಗೊಂಡು ಏಳೆಡ. ನೆಲಕ್ಕೆ ಕೂದು ಅಪ್ಪಗ ಏಳುಲೂ ಕಷ್ಟ ಹೇಳಿ ಬಕ್ಕು. ಆದರೆ ಆರೋಗ್ಯವಂತ ಆದರೆ ಅವಂಗೆ ಯೋಗಾಸನ ಗೊಂತಿದ್ದವಂಗೆ ಕಷ್ಟ ಆಗ ಹೇಳಿ ತೋರುತ್ತು. ಪ್ರಾಯ ಆದ ಮೇಲೂ ಚುರುಕಾಗಿ ಇಪ್ಪೋವು ಎಷ್ಟೋ ಜನ ಇದ್ದವು. ಎಲ್ಲ ಅಭ್ಯಾಸ ಬಲ!
ಸ್ವಾಭಾವಿಕವಗಿ ರಜ ಹೊಟ್ತೆ ದೊಡ್ದ ಇದ್ದರೂ ಅವಕ್ಕೆ ತಿಂಬಲೆ ಹೆಚ್ಚು ಬೇಕಾವುತ್ತಿಲ್ಲೆ. ಮಾಂತ್ರ ಅಲ್ಲ ಅವು ವೇಷ ಹಾಕಿ ಕೊಣಿವಗ ಮಜ ಇತ್ತು. ತಿಂಬ ಶುದ್ದು ಹೇಳುವಗ ಒಂದು ಹಳೆ ಶುದ್ದಿ ನೆಂಪಾತು.ಎಂಗಳ ಊರಿಲ್ಲಿ ಕಪ್ಪಲು ಹೇಳಿ ಒಂದು ಮನುಷ್ಯ ಇತ್ತು. ಎಲ್ಲಿ ಊಟ ಇದ್ದರೂ ದಿನಿಗೇಳಿದರೆ ಬಕ್ಕು. ತಿಂಬ ವಿಷಯಲ್ಲಿ ಅದಕ್ಕೆ ನಾಚಿಕೆ ಇಲ್ಲೆ. ಆ ಮನುಷ್ಯ ಬಂದರೆ ಪುಳ್ಳರುಗೊಕ್ಕೆಲ್ಲ ತಮಾಶೆ.ಊಟಕ್ಕೆ ಕೂದರೆ ಅಶನ,ಸಾಂಬಾರು ಬೇಕಾದಷ್ಟು ತಿಂದಿಕ್ಕಿ,ಮತ್ತೆ ಪಾಯಸ,ಒಂದು ಕವಂಗ ತಂದರೆ ಸಾಲ!ಹಸರು ಪಾಯಸ ಆಯೆಕ್ಕು. ಸರಿಯಾಗಿ ಸೀವು ಇರೆಕ್ಕು. ಎರಡು ಕವಂಗ ತುಂಬ ಆದರೂ ಮುಗಿಗು.ಆದರೆ ಅಲ್ಲಿಂದ ಎದ್ದು ಒಂದು ಕಡೆಲ್ಲಿ ಬಿದ್ದರೆ ಅದಕ್ಕೆ ಲೋಕ ಇಲ್ಲದ್ದ ಒರಕ್ಕು. ಏನಾದರೂ ಹೇಳಿದರೂ ಬೇಜಾರು ಇಲ್ಲೆ.ಈಗಳೋ ಒಂದು ಕವಂಗ ಇನ್ನೂರು ಜನ ಸೇರಿದ ಒಂದು ಹಂತಿಗೆ ಸಾಕು. ತಿಂಬೋತೂ ಇಲ್ಲೆ. ಎಲ್ಲ ಕೇಲಿದರೆ ಎನಗೆ ರಜ ಶುಗರ್ ಇದ್ದು ಹೇಳುತ್ತವು.ಆದರೆ ಹಿಂದಾಣೋರು ಹೆಚ್ಚು ಉಂಬೋರು ಇದ್ದರೂ ಕೆಲಸವು ಮಾಡುಗು.ಈಗಾಣೊವಕ್ಕೆ ಎದ್ದು ಸುತ್ತ ಬಪ್ಪದೇ ಕಷ್ಟ೧ ಒಂದು ಮೈಲು ನಡೆಯಕ್ಕಾರೂ ವಾಹನ ಬೇಕು.ಅದರೆ ನಾವು ಮಕ್ಕೊಗೆ ಪ್ರೀತಿಂದ ಐಸ್ಕೇಂಡಿಯೋ ಬೇರೆ ಕಾಟಂಕೋಟಿಯೋ ತಿಂದುಗೊಳ್ಳಲಿ ಪೈಸೆ ಕೊಟ್ಟರೆ ಅವು ತಿಂದರೂ ಹೊಟ್ಟೆ ಹಾಳಾವುತ್ತಲ್ಲದೋ?ವಸ್ತುಗೊ ಹಾಳಗದ್ದ ಹಾಂಗೆ ಉಪಯೋಗಿಸಿದ ಐಸುದೆ ಅವಕ್ಕೆ ಕಮ್ಮಿಗೆ ಸಿಕ್ಕಿದರೆ ಅದಕ್ಕೆ ಬಣ್ಣ ಹಾಕಿ ಮಾರುತ್ತವಡೊ. ತಿಂದರೆ ಹೊಟ್ಟೆ ಹಾಳವುತ್ತಿಲ್ಲೆಯೋ/ ನಾವುದೆ ಹೋಟೆಲಿಲ್ಲಿ ನಿವೃತ್ತಿ ಇಲ್ಲದ್ದಕ್ಕೆ ಉಣ್ಣೆಕ್ಕಷ್ಟೆ ಹೊರತು ನಿತ್ಯ ಉಂಡರೆ ಹೊಟ್ತೆ ಹಾಳಾವುತ್ತು. ಸೋಡದ ಹೊಡಿಯೋ ಎಲ್ಲ ಉಪಯೋಗುಸುತ್ತವಡೊ.ಬೇರೆ ಕುರು ಕುರು ತಿಂಡಿ ತಿಂಬಲೆ ಕೊಡುವದೂ ಹಾಂಗೆ .ಆನೊಂದು ಮಾಗಜಿನ್ ಓದಿತ್ತಿದ್ದೆ. ದನಗಳ ಚರ್ಬಿಯೂ ಕಮ್ಮಿಗೆ ಸಿಕ್ಕುತ್ತಡೊ.ಅದರಲ್ಲಿಯೂ ಹೊರಿತ್ತವಡೊ.ಒಟ್ಟಾರೆ ಆರೋಗ್ಯ ಹಾಳು. ಮತ್ತೆ ಡಾಕ್ಟ್ರಕ್ಕೊಗೆ ಗಿರಾಕಿ ಬೇಕನ್ನೆ. ಅವು ಕಲ್ತದಕ್ಕೆ ಸಾರ್ಥಕ ಆಯೆಕ್ಕನ್ನೆ. ಅಂತೂ ನಮ್ಮ ಸಂಪಾದನೆಲ್ಲಿ ಎಲ್ಲೋರಿಂಗೂ ಹೀಂಗೆ ಪಾಲು ಕೊಟ್ಟರೂ ಗೇಸ್ ಟ್ರಬ್ಲ್ ಹಾಂಗೇ ಮುಂದುವರಿತ್ತು. ಆನು ಡಾಕ್ಟ್ರಕ್ಕಳ ವಿರೋಧಿ ಅಲ್ಲ! ಹೊಟ್ಟೆಯ ಸಾಂಕುಲೆ ಹೋಗಿ ಮತ್ತೆ ಚಿಂತೆಗೆ ಬೀಳೆಕ್ಕನ್ನೇ ಹೇಳಿ. ಎಂಗೊ ಸಣ್ಣಾದಿಪ್ಪಗ ಹೊಟ್ಟೆ ಹುಳುವಿಂಗೆ ಮದ್ದು ತೆಕ್ಕೊಂಬದಿತ್ತು. ಸಿಕ್ಕಿದ್ದೆಲ್ಲ ತಿಂದು ಜೀರ್ಣ ಆಗದ್ದರೆ ಹುಳು ತುಂಬುತ್ತು. ಮತ್ತೆ ಮದ್ದು ತೆಕ್ಕೊಳ್ಳೆಕ್ಕು. ಒಳ್ಳೆ ಆಹಾರವನ್ನೇ ತೆಕ್ಕೊಂಡರೆ ಮಕ್ಕೊಗೆ ನಾವು ಬೇರೆ ತಂದು ಕೊಡುವ ಬೂಸ್ಟ್ ಕೋಂಪ್ಲೇನ್ ಹೀಂಗೆ ತಂದು ಕೊಡೆಕ್ಕಾಗ ಹೇಳಿ ಕಾಣುತ್ತು.
ಮತ್ತೆ ಕೆಲವು ಜನ ತಿಂಬದರ ಬಗ್ಗೆ ಹೇಳುತ್ತವು "ಅವ ಮೂಗಿನವರೆಗೆ ತಿಂದರೆ ಜೀರ್ಣ ಅಪ್ಪದು ಹೇಂಗೆ? ಕೇಳುತ್ತವು.ಮೂಗಿನ ವರೆಗೆ ತಿಂಬದು ಹೇಂಗೆ ಎನಗೆ ಗೊಂತಿಲ್ಲೆ. ಆದರೆ ಎನ್ನ ಲೆಕ್ಕಲ್ಲಿ ಹೀಂಗೆ ಕಾಣುತ್ತು. ಮೂಗಿನ ಮೂಲಕ ನಾವು ಉಸಿರಾಡುವದು. ಉಸಿರಾಟ ಸರಿಯಿರೆಕ್ಕಲ್ಲದೋ? ಉಸಿರು ತೆಕ್ಕೊಂಬದು,ಬಿಡುವದು ಉಛ್ವಾಸ,ನಿಶ್ವಾಸ ನಡವದು ಮೂಗಿನ ಮೂಲಕ ಆದರೂ ಬಾಯಿಂದ ಮುಂದೆ ಹೋಪದು ಶ್ವಾಸ ಕೋಶಕ್ಕೆ ತಿರುಗುವ ದಾರಿ ವರೆಗೆ ಒಂದೇ ದಾರಿಲ್ಲೇ ಅಲ್ಲದೋ?ಹೊಟ್ಟೆ ತುಂಬಿ ಉಸಿರು ಬಿಡುಲೇ ಕಷ್ಟ ಆದರೆ ಹೇಂಗಕ್ಕು? ಹೊಟ್ಟೆಗೆ ಆಹಾರ ಎತ್ತಿದ ಮೇಲೆಯೂತಿಮ್ದದು ಜೀರ್ಣ ಆಯೆಕ್ಕಾದರೆ ಹೊಟ್ಟೆಯೊಳದಿಕ್ಕೆ ಅದರ ಹೊಟ್ತೆಲ್ಲಿದ್ದ ಆಮ್ಲಂಗಳೊಂದಿಗೆ ಮಿಶ್ರ ಆಯೆಕ್ಕಲ್ಲದೋ? ಅಲ್ಲಿ ತಿರುಗುಲೆ ಜಾಗೆ ಇಲ್ಲದ್ದರೆ ಜೀರ್ಣ ಅಪ್ಪದು ಹೇಂಗೆ? ಅದಕ್ಕೆ ಹಾಂಗೆ ಡಮ್ಮುಕಟ್ಟುವ ಹಾಂಗೆ ತಿಂಬಲಾಗ ಹೇಳಿ ಹಿಂದಾಣೋರು ಹೇಳುಗಷ್ಟೆ.ಎನ್ನ ಲೆಕ್ಕಲ್ಲಿ ಈ ಉಸಿರಾಟ ಪ್ರಕ್ರಿಯೆ ಸರಿಯಾಗಿ ನಡೆಯೆಕ್ಕಾರೆ ಹೊಟ್ಟೆಯ ಸಹಾಯ ಬೇಕು.ಉಸಿರು ಹೆರ ಬಿಡುವಗ ಹೊಟ್ಟೆ ಒತ್ತಿಗೊಳ್ಳೆಕ್ಕಾವುತ್ತು. ಹೊಟ್ಟೆ ತುಂಬಿಗೊಂಡು ಇದ್ದರೆ ಉಸಿರಾಟಕ್ಕೆ ಕಷ್ಟ ಅಕ್ಕು. ಅದಕ್ಕೆ ಹಿಂದಾಣೋರು ಹೇಳಿಗೊಂಡಿದ್ದದು ಇನ್ನೂ ಒಂದು ದೋಸೆ ತಿಂಬಲೆಡಿಗು ಹೇಳಿ ತೋರುವಗಲೇ ತಿಂಬದರ ನಿಲ್ಲುಸೆಕ್ಕು.ಹಾಂಗೆ ಹದ ಹಾಳಿತ ತಿಳುದು ಉಂಡಿ ತಿಂದು ರಜ ವ್ಯಾಯಮವೂ ಮಾಡಿಗೊಂಡಿದ್ದರೆ ಹೊಟ್ಟೆ ನಮ್ಮ ಹತೋಟಿಲ್ಲಿಕ್ಕು ಹೇಳಿ ಎನ್ನ ಅಭಿಪ್ರಾಯ.
ಮತ್ತೆ ಕೆಲವು ಜನ ಹೇಳುವದಿದ್ದು."ಎಲ್ಲ ಹೊಟ್ಟೆಲ್ಲಿ ಹಾಕಿಗೊಂಡು ಕ್ಷಮಿಸೆಕ್ಕು" ಹೇಳಿ.ಎಂತರ ಇಲ್ಲಿ ಹೊಟ್ಟೆಲ್ಲಿ ಹಾಕೆಕ್ಕಾದ್ದು? ಏನಾದರೂ ಎನ್ನಂದ ತಪ್ಪಾಗಿದ್ದರೆ ಅದರ ಕ್ಷಮಿಸಿ ತಪ್ಪಿನ ಮನ್ನಿಸೆಕ್ಕು ಹೇಳಿ.ಅಂಬಗ ಈ ಕ್ಷಮೆ ಹೇಳುವದು ಹೊಟ್ಟೆಯೊಳ ಇದ್ದೋ? ಇಲ್ಲಿ ಹೊಟ್ಟೆ ಹೇಳುವದು ಹೃದಯ ಮನಸ್ಸು ಅಲ್ಲದೋ? ಹೊಟ್ಟೆಲ್ಲಿ ಕರುಳು ಇದ್ದು. ಕರುಳ ಪಾಶ ಹೇಳುತ್ತವು. ಅಬ್ಬೆಗೆ ಮಕ್ಕಳತ್ರೆ ಇಪ್ಪ ಪಾಶವನ್ನೇ ಕರುಳ ಪಾಶ ಹೇಳಿ ಇಲ್ಲ್ ಹೇಳುವದು.ಅವಂಗೆ ಆನು ಒಳ್ಲೆದಪ್ಪದು ಇಷ್ಟ ಇಲ್ಲೆ ಹೇಳುತ್ತವು. ಅದರ ಹೊಟ್ಟೆ ಕಿಚ್ಚು ಹೇಳುತ್ತವು.ಇದುದೇ ಹೊಟ್ಟೆಲ್ಲಿಪ್ಪದಲ್ಲ. ಅವನ ಹೊಟ್ಟೆ ತುಂಬ ಕೇಡೇ ತುಂಬಿದ್ದು. ಹಾಂಗೆ ಅವ ಡೊಳ್ಳೊಟ್ಟೆ ಎದ್ದು ಕಾಣುತ್ತು ಹೇಳುತ್ತವು. ಎಲ್ಲ ಮನಸ್ಸು ಕಂಡ ಹಾಂಗೆ ಹೇಳುವದಷ್ಟೆ ಹೊರತು ಹೊಟ್ಟಗೂ ಇದು ಯಾವುದಕ್ಕೂ ಸಂಬಂಧ ಇದ್ದೋ? ಒಬ್ಬ ಬೈವಗ ಸುಮ್ಮನೆ ಕೇಳಿಗೊಂಡಿದ್ದು ಎಂತಾದರೂ ಬಾಯಿ ಒಡದರೆ ಅದಾ ಅವನ ಹೊಟ್ಟೆಲ್ಲಿಪ್ಪದೆಲ್ಲ ಹೆರ ಬತ್ತದಾ ಹೇಳುತ್ತವು.ಎಲ್ಲದಕ್ಕೂ ಎಂತ ಹೇಳಿದರು ಹೊಟ್ಟೆ ಮಾತಾಡುತ್ತಿಲ್ಲೆ. ಮೌನವಾಗಿರುತ್ತು. ಹೊಟ್ಟೆ ಕೆಟ್ಟರೆ ಮಾಂತ್ರ ಕೇಳುವದೇ ಬೇಡ! ಕೆಡದ್ದ ಹಾಂಗೆ ನೋಡ್ಯೊಳ್ಲೆಕ್ಕಾದ್ದು ನಮ್ಮ ಕರ್ತವ್ಯ! ಮತ್ತೆ ಒಬ್ಬನ ನಾವು ಬ್ರಹ್ಮಾಂಡೋದರ ಹೇಳುತ್ತಲ್ಲದೋ? ಇಡೀ ಲೋಕಂಗಳೇ ಅವನ ಹೊಟ್ಟೆಯೊಳದಿಕ್ಕೆ ಇದ್ದಡೋ? ಅದರೂ ಅವನ ಹೊಟ್ಟೆ ದೊಡ್ಡ ಇಲ್ಲೆ.ಆದರೂ ಅವನ ಭಕ್ತಿಂದ ನಂಬಿದರೆ ನಾವು ಮಾಡಿದ ತಪ್ಪುಗಳ ಎಲ್ಲ ಹೊಟ್ಟೆಲ್ಲಿ ಹಾಕಿಗೊಂಡು ನಮ್ಮ ಕ್ಷಮಿಸುತ್ತಡೋ? ಅವನನ್ನೇ ಕೇಳಿಗೊಂಬೋ ಎಂಗೊಗೆಲ್ಲ ಒಳ್ಳೆದೇಮಾಡಪ್ಪ ನಿನ್ನನ್ನೇ ನಂಬಿದ್ದೆಯೋ ಹೇಳಿ ಕೇಳಿಗೊಂಡು ಹದಕ್ಕೆ ತಿಂದುಗೊಂಡು ಆರೋಗ್ಯವಾಗಿ ಇಪ್ಪೊ. ಅಂತೂ ಈ ಹೊಟ್ಟೆಗೆ ತುಂಬುಸುಲೆ ಆಹಾರ ಮಾಂತ್ರ ಅಲ್ಲ ಬೇರೆ ವಿಷಯಂಗಳೂ ಇದ್ದು ಹೇಳಿ ಆತು.ಭಲೇ ಹೊಟ್ಟೆ.ನಿನಗೆ ನೀನೇ ಸಮ! ಇಷ್ಟಕ್ಕೇ ಮುಗುದ್ದಿಲ್ಲೆ. ಹೊಟ್ಟೆ ಬಾಯಿ ಕಟ್ಟಿಗೊಂಡು ಮಕ್ಕಳ ಸಾಂಕುವೋರೂ ಇದ್ದವನ್ನೇ.ಮಕ್ಕೊಗೆ ಕೇಳಿದ್ದರ ತಿಂಬಲೆ ಕೊಟ್ಟಿಕ್ಕಿ ಉಪಾಸ ಇಪ್ಪ ಅಬ್ಬೆಕ್ಕಳೂ ಇದ್ದವನ್ನೆ.ಅವರ ತ್ಯಾಗ ದೊಡ್ಡದು. ಅವು ತಿಂಬದು ಎಲ್ಲೋರಿಂಗೂ ಆದಮೇಲೆ. ಅ ಹೊತ್ತಿಂಗೆ ಮದಲೆ ತಿಂದಾದ ಮಕ್ಕೊ ಅಲ್ಲಿಗೆ ಓಂಗ್ಯೊಂಡು ಹೋದರೆ ಅವರ ಪಾಲಿಂದ ಮಕ್ಕೊಗೂ ಕೊಡುತ್ತವನ್ನೆ.ಅವಕ್ಕೆ ಬೇಡ ಹೇಳಿ ಅಲ್ಲ. ಅವಕ್ಕೂ ತಿಂಬಲೆ ಆಶೆ ಇದ್ದು. ಆದರೆ ಮಕ್ಕೊಗೆ ತಿಂಬಲೆ ಕೊಡುವ ಆಶೆಯೂ ಇದ್ದು. ಅದರಲ್ಲಿ ಮಕ್ಕೊಗೆ ಕೊಡುವ ದೊಡ್ಡ ಮನಸ್ಸೇ ಹೆಚ್ಚು! ಹಾಂಗಾಗಿ ಅಬ್ಬೆಕ್ಕಳ ತ್ಯಾಗ ದ್ಒಡ್ಡದಲ್ಲದೋ?ಇನ್ನು ಕೆಲವು ಜನ ಇದ್ದವಡೊ. ಮಕ್ಕಳ ಕದ್ದೊಂಡು ಹೋಗಿ ಕೈಕಾಲು ಎಲ್ಲ ಊನ ಮಾಡಿ ಮಾರ್ಗದ ಕರೆಲ್ಲಿ ಬೇಡುಲೆ ಮನುಶಿಕ್ಕಿ ಹೋಪದು. ಅದು ಹೊಟ್ಟೆ ಪಾಡಿಂಗಲ್ಲ. ಅದು ಹಂಕಾರಂದ ಜನಂಗಳ ಮೋಸ ಮಾಡಿ ಪೈಸೆ ಮಾಡುಲಿಪ್ಪ ಬುದ್ಧಿವಂತಿಕೆ. ಆದರೆ ಅ ಮಕ್ಕಳ ನೋಡುವಗ ಪಾಪನೆ ಕಾಣುತ್ತು. ಪೈಸೆಗೆ ಬೇಕಾಗಿ ಮನುಷ್ಯ ಎಂತದೂ ಮಾಡುತ್ತ.ವಲ್ಲದೋ? ಅಂಥವಕ್ಕೆ ನಾಳೆಯಾಣ ಯೋಚನೆ ಇಲ್ಲೆ. ಎಲ್ಲ ಅವನ ಲೀಲೆಗೊ. ಅವಂಗೇ ಗೊಂತು ಎಲ್ಲ. ನಾವು ಚಿಂತೆ ಮಾಡಿ ಪ್ರಯೋಜನ ಇದ್ದೋ? ಮಾಡಿದ್ದುಣ್ಣೋ ಮಹರಾಯ ಹೇಳಿ. ಅವು ಅವು ಮಾಡಿದ್ದರ ಅವವು ತಿಂತವು. ಅಷ್ಟಕ್ಕೇ ಬಿಡುವೊ. ಲೋಕದ ಡೊಂಕಿನ ತಿದ್ದಲೆಡಿಗೋ? ಎಲ್ಲಿ ಓರೆ ಕೋರೆಗೊ ಇದ್ದೊ ಅದರೆಲ್ಲ ಲೋಕ ಸೃಷ್ಟಿ ಮಾಡಿದೋನೇ ಸರಿಮಾಡಲಿ
Sunday, June 17, 2012
ಹೊಟ್ಟೆ
ಹೊಟ್ಟೆ
ಹೊಟ್ಟೆಯ ಸುದ್ದಿ ತೆಗೆವಗಳೇ ಮದಲು ನೆಂಪಪ್ಪದು ಹೊಟ್ಟೆಯ ದೇವರು ಗಣಪ್ಪನ! ಅವಂಗೆ ಮದಲು ಕೈಮುಗುದು ಸುರು ಮಾಡುತ್ತೆ ಹೊಟ್ಟೆ ಸುದ್ದಿಯ. ದೇವರಕ್ಕಳ ಪೈಕಿ ಹೊಟ್ಟೆ ಕಾಂಬದು ಅವಂಗೊಬ್ಬಂಗೇ. ಅವನ ಹೊಟ್ಟೆಯ ಕತೆ ಗೊಂತಿದ್ದನ್ನೇ! ಚೌತಿ ದಿನ ಎಲ್ಲೋಡಿಕ್ಕೂ ಕೊಟ್ಟದರ ತಿಂದು ಹೊಟ್ಟೆ ದೊಡ್ಡ ಆದ್ದು; ನಡಕ್ಕೋಂಡು ಗೆದ್ದೆ ಹುಣಿಲ್ಲಿ ಹೋಪಗ ಬಿದ್ದದು; ಬಿದ್ದು ಹೊಟ್ಟೆ ಒಡದ್ದು; ಚಂದ್ರ ನೋಡಿ ನೆಗೆ ಮಾಡಿದ್ದು, ಚಂದ್ರಂಗೆ ಶಾಪ ಕೊಟ್ಟದು; ಹೊಟ್ಟೆ ಒಡದ್ದಕ್ಕೆ ಹಾವಿನ ಸೊಂಟಕ್ಕೆ ಸುತ್ಯೊಂಡದು ಹಿಂದೆ ನಡೆದ ಕತೆಯಡೊ. ನಿಜವೋ ಹೇಂಗೆ ಗೊಂತಿಲ್ಲೆ. ಅಂತೂ ಅವನ ಹೊಟ್ಟೆ ದೊಡ್ಡ ಇಪ್ಪ ಕಾರಣವೋ ಎಂತದೋ, ಲಂಬೋದರ ಹೇಳುತ್ತವು. ಆನು ಬರವ ಈ ಸುದ್ದಿಗೆ ಯಾವ ವಿಘ್ನವೂ ಆಗದ್ದ ಹಾಂಗೆ ಅವನೇ ನೋಡಿಗೊಳ್ಳೆಕ್ಕು ಹೇಳಿ ಬೇಡುಗೊಳ್ಳುತ್ತೆ. .ಎನ್ನ ಹೊಟ್ತೆ ದೊಡ್ಡ ಇದ್ದ ಕಾರಣ ಅಲ್ಲ. ಈಗ ಹೊಟ್ಟೆಯ ಸುದ್ದಿ ತೆಗದ್ದು. ದಾಸರ ಪದಲ್ಲಿ ಹೇಳುತ್ತಲ್ಲದೋ? "ಎಲ್ಲಾರು ಮಾಡುವುದು ಹೊಟ್ಟೆಗಾಗಿ,ತುತ್ತು ಹಿಟ್ಟಿಗಾಗಿ'" ಲೋಕದ ಎಲ್ಲ ಜನಂಗಳುದೆ ಮಾಡುವ ಎಲ್ಲ ಕೆಲಸಂಗಳು ಈ ಹೊಟ್ಟೆಯ ತುಂಬುಸುಲೇ ಅಲ್ಲದೋ? ಗಣಪತಿಯ ದಿನಿಗೇಳಿ ಎಲ್ಲೋರು ಕೊಟ್ಟ ಹಾಂಗೆ ನಮಗೆಲ್ಲ ಈ ಹೊಟ್ಟೆ ತುಂಬುಸಲೆ ಸಿಕ್ಕಿದರೆ ಆರೂ ಕೆಲಸವೂ ಮಾಡದ್ದೆ ಸುಮ್ಮನೆ ಆರಾಮವಾಗಿ ಕೂರುತ್ತಿತ್ತವು. ಮದಲೊಂದರಿ ಹೊಟ್ಟೆಯ ಪಕ್ಷ ಹೇಳಿ ಒಂದು ಪಕ್ಷ ಇತ್ತಡೊ. ಎಲ್ಲೋರಿಂಗು ಹೊಟ್ಟೆಯ ಬಗ್ಗೆ ಗೊಂತಿದ್ದರುದೆ ಆರುದೆ ಆ ಪಕ್ಷಕ್ಕೆ ಸೇರದ್ದೆ ಓಟಿ ಕೊಡದ್ದೆ ಈಗ ಅ ಪಕ್ಷದ ಹೆಸರೇ ಇಲ್ಲೆ. ಎಲ್ಲ ಜೀವಿಗೊಕ್ಕು ಬದುಕ್ಕೆಕ್ಕಾರೆ ಈ ಹೊಟ್ಟೆ ತುಂಬುಸಿಗೊಳ್ಳೆಕ್ಕು. ಅದರ ತುಂಬುಸುಲೆ ಜನಂಗೊ ಯಾವ ಕೆಲಸ ಮಾಡುಲೂ ಹೇಸುತ್ತವಿಲ್ಲೆ. ಹೇಳುವದು ಎಂತ ಮಾಡಲಿ ಸುಮ್ಮನಿಪ್ಪಲೆ ಹೊಟ್ಟೆ ಬಿಡೆಕ್ಕನ್ನೆ ಹೇಳಿಗೊಳ್ಳುತ್ತವು. ದೂರಿಂಗೆ ಮಾಂತ್ರ ಹೊಟ್ಟೆ. ಈ ಹೊಟ್ಟೆ ತುಂಬುಸಿದರೇ ನಮ್ಮ ರಥ ನಡವದು. ಅನ್ಯಾಯ ಅಧರ್ಮ ಮಾಡುವೋರು ಹೇಳುವದು ಮಾಂತ್ರ ಹೊಟ್ಟೆಯನ್ನೇ ದೂರ್ಯೊಂಡು. ಹೊಟ್ಟೆ ಎಲ್ಲೋರಿಂಗು ಇದ್ದರುದೆ, ಬೇಕಾದರುದೆ ಈ ಹೊಟ್ಟೆ ತುಂಬುಸುಲೆ ಜನಂಗೊ ಬೇಡದ್ದ ಕೆಲಸವನ್ನೂ ಮಾಡ್ಯೊಳ್ಳುತ್ತವು. ಇನ್ನೊಬ್ಬಂಗೆ ತೊಂದರೆ ಕೊಡದ್ದೆ ಎಂತ ಬೇಕಾರು ಮಾಡಲಿ. ಈಗ ನಡವದು ಸಮಾಜಕ್ಕೇ ದ್ರೋಹ. ನಮ್ಮ ಹೊತ್ತಿಪ್ಪ ಭೂಮಾತೆಗೂ ಅನ್ಯಾಯ! ಅಬ್ಬೆಯ ಹೊಟ್ಟೆಯನ್ನೇ ಬಗದು ಅದಿರು ಬೇರೆ ದೇಶಕ್ಕೆ ಕಳುಸಿ ಸಂಪತ್ತು ಹೆಚ್ಚಿಸ್ಯೊಂಬದು, ಮಾತೃ ದ್ರೋಹ ಹೇಳುವದು ಅವಕ್ಕೆ ಗೊಂತಿಲ್ಲೆ! ಈಗಂಗೆ ಸರಿ ಇನ್ನು ಎಷ್ಟು ವರ್ಷ ಹೀಂಗೆ ಗರ್ಪಿ ತೆಗೆವಲಕ್ಕು? ಮತ್ತಾಣೋರಿಂಗೆ ಅವು ಗರ್ಪಿ ತೆಗವಲೆ ಎಲ್ಲಿಗೆ ಹೋಯೆಕ್ಕು? ಈ ಯೋಚನೆ ಜನಂಗೊಕ್ಕೆ ಇಲ್ಲೆ. ಇಂದು ಕಳುದ್ದು ಎನ್ನ ದಿನ. ನಾಳಂಗೆ ಹೇಂಗೋ ಎಂತದೋ ಯೋಚನೆ ಇಲ್ಲೆ.
ಕೆಲವು ಜನ ಹುಟ್ಟುವಗಳೇ ಆಗರ್ಭ ಶ್ರೀಮಂತರಾಗಿದ್ದರೆ ಹೊಟ್ಟೆ ತುಂಬುಸುಲೆ ಯೋಚನೆ ಇಲ್ಲೆ. ಕೂದು ತಿಂದರೂ ಮುಗಿಯದ್ದಷ್ಟು ಇರ್ತು! ಆದರೆ ಬಡವರಾಗಿ ಹುಟ್ಟಿದೋರು ತಿಂಬಲೆ,ಹೊಟ್ಟೆ ತುಂಬುಸುಲೆ ಕಷ್ಟ. ಇದ್ದೋವು ದಿನಾ ದೋಸೆ ಅದು ಇದು ಹೇಳಿ ಬಗೆ ಬಗೆ ತಿಂಡಿಗಳ ಅಬ್ಬೆ ಮಾಡಿಕೊಟ್ಟರೆ ತಿಂದೊಂಡು ಹಾರಿಗೊಂಡು ಇಪ್ಪಲಕ್ಕು. ಈ ಮಕ್ಕಳ ಹೊಟ್ತೆ ತುಂಬುಸುಲೆ ನಾಳಂಗೆ ಎಲ್ಲಿಗೆ ಹೋಪದು? ಆರ ಕೈಕಾಲು ಹಿಡಿವದು ಹೇಳಿ ಯೋಚನೆ ಮಾಡೆಕ್ಕಾದ ಪರಿಸ್ಥಿತಿ ಬಡವರಿಂಗೆ. ಹಳ್ಲಿಗಳಲ್ಲಿ ಅಲ್ಲಿ ಅಲ್ಲಿ ಜಂಬ್ರಂಗೊಕ್ಕೇಲ್ಲ ಹೋದರೆ ಹೊಟ್ಟೆಲ್ಲಿ ಹಿಡ್ಡಿತ್ತಷ್ಟು ತಿಂಬದು.ಮರದಿನ ಎಲ್ಲಿಯೂ ಸಿಕ್ಕದ್ದರೆ ಉಪವಾಸ! ಹೀಂಗಾದರೆಅವು ಎಂತ ಮಾಡೆಕ್ಕು? ಇದರಿಂದಲೇ ಹೇಳಿ ಕಾಣುತ್ತು "ಬೊಳ್ಳದ ಮನಂತಾನಿ ಬೊಟ್ಟೊ" ಹೇಳುವ ಗಾದೆ ಹುಟ್ಟಿದ್ದು.ದೇವರು ಸೃಷ್ಟಿ ಮಾಡುವಗಲೇ ಈ ವ್ಯತ್ಯಾಸ ಮಾಡಿದ್ದು ಹೇಳುತ್ತವು. ಆದರೆ ನಮ್ಮ ಹತ್ತರೆ ಹೆಚ್ಚು ಇಪ್ಪಗ ಇಲ್ಲದ್ದೋರಿಂಗೆ ರಜ ರಜ ಕೊಟ್ಟರೆ ಅವಕ್ಕೂ ಚಿಂತೆ ಇಲ್ಲೆ. ಅವುದೇ ಕಲ್ತು ಮುಂದೆ ಬಕ್ಕು.ಮತ್ತೆಂತಾದರು ಉದ್ಯೋಗ ಮಾಡ್ಯೊಂಡು ಇಪ್ಪಲಕ್ಕು. ಆದರೆ ಹಂಚಿ ತಿಂಬ ಬುದ್ಧಿ ಮನುಷ್ಯಂಗೆ ಬತ್ತಿಲ್ಲೆ ಏಕೆ?ಆನು ವಿದೇಶಲ್ಲಿಪ್ಪಗ ಅಲ್ಲಿ ಕೆಲಸ ಮಾಡ್ಯೊಂದು ಇಪ್ಪ ಮಕ್ಕೊ ಅವರ ಮಕ್ಕಳತ್ರೆ ಹೇಳುವದು ಕೇಳಿದ್ದೆ. "ಪರಸ್ಪರ ಹಂಚಿಗೊಳ್ಳಿ" ಹೇಳಿ ಮಕ್ಕಳ ಒಪ್ಪುಸುವದು ಹಾಂಗೆ ಒಬ್ಬನತ್ರೆ ಇಪ್ಪ ಆಟದ ಸಾಮಾನು ಇನ್ನೊಬ್ಬಂಗೆ ಕೊಡುವದು, ಅವನತ್ರೆ ಇಪ್ಪದರ ಮತ್ತೊಬ್ಬಂಗೆ ಕೊಡುವದು ಹೀಂಗೆಲ್ಲ ಹೊಂದಿಸಿಗೊಳ್ಳುತ್ತವು. ಅವಕ್ಕೆ ಸಣ್ಣಾದಿಪ್ಪಗ ಶಾಲೆಲ್ಲಿಯೂ ಇದರನ್ನೇ ಹೇಳಿಕೊಡುತ್ತವಡೊ. ತಿಂಡಿಯನ್ನೂ ಹಾಂಗೆ ಹಂಚಿಗೊಳ್ಳುತ್ತವು. ಹೀಂಗೆ ಮಾಡ್ಯೊಂಡರೆ ಜಗಳ ಬತ್ತಿಲ್ಲೆ. ಒಂದೇ ಸೈಕಲ್ ಇಪ್ಪದು ಒಂದು ಮನೆಲ್ಲಿ ಹೇಳಿ ಆದರೆ ಒಬ್ಬ ಹತ್ತು ಮಿನಿಟ್ ಮೆಟ್ಟಿ ಆದಮೇಲೆ ಇನ್ನೊಬ್ಬ ಹೇಳಿ ಮನೆಲ್ಲೇ ಇಪ್ಪ ಮಕ್ಕಳೆ ಒಪ್ಪಂದಲ್ಲಿ ಸರಿ ಮಾಡಿಗೊಂಡರೆ ಚರ್ಚೆ ಬಪ್ಪಲಿಲ್ಲೆ. ಮನೆಲ್ಲಿಪ್ಪ ಎಲ್ಲೋರಿಂಗು ಬೇರೆ ಬೇರೆ ತೆಗೆಯಕ್ಕಾದ ಅಗತ್ಯವು ಇಲ್ಲೆ. ಮನೆಲ್ಲೇ ಹೀಂಗೆ ಅಭ್ಯಾಸ ಮಾಡ್ಯೊಂಡರೆ ಆ ಊರಿಲ್ಲಿ, ದೇಶಲ್ಲಿಯೇ ಎಲ್ಲೋರು ಹೊಂದಿ ಬಾಳುಲಕ್ಕು. ದೇವರು ಭೇದ ಮಾಡಿದ ಹೇಳುವದಕ್ಕೆ ಬದಲು ದೇವರು ಕೊಟ್ಟದರ ಹೀಂಗೆ ಹಂಚ್ಯೊಂಡರೆ ಸರಿ ಅಕ್ಕಲ್ಲದೋ? ಅದಲ್ಲ ಇದು ಎನಗೆ ಇಪ್ಪದು. ಎನ್ನ ಅಧಿಕಾರ,ಇಲ್ಲಿ ಆನು ಹೇಳಿದ ಹಾಂಗೆ ಎಲ್ಲೋರು ಕೇಳೆಕ್ಕು. ಈ ಮಾತುಗೊ ಬಂದರೆ ತನ್ನಷ್ಟಕ್ಕೇ ಜಗಳ, ಮತ್ಸರ,ಕೋಪ ಹೀಂಗೆಲ್ಲ ಷಡ್ವೈರಿಗಳ ಒಡನಾಟ ಬತ್ತು. ಇಡೀ ಲೋಕಲ್ಲೇ ಘರ್ಷಣೆ ಉಂಟಾವುತ್ತು.
ಮೇಲಾಟ,,ಸ್ಪರ್ಧೆ ಎಲ್ಲ ಬಪ್ಪದು ಆನು- ಹೇಳುವ ಅಹಂಕಾರಂದ ಹೇಳಿ ಎನ್ನ ಅಭಿಪ್ರಾಯ. ಹೊಟ್ಟೆ ಇದ್ದು ಹೇಳಿ ಹೆಚ್ಚು ತುಂಬುಸುಲೆ ಹೋದರೆ ಅದಕ್ಕೆ ಇನ್ನು ಸಾಕು ಹೇಳಿ ತೋರುಗೋ? ಮದಲೊಂದು ಮನುಷ್ಯ ಹಡಗು ತುಂಬುಸುಲೆ ಹೋತಡೊ.ಇನ್ನೊಂದು ಮನುಷ್ಯ ಹೊಟ್ಟೆ ತುಂಬುಸುಲೆ ಹೋತಡೊ.ಹಡಗು ತುಂಬುಸುಲೆ ಹೋದ್ದು ಹನಿಯ ದಿನ ಅಪ್ಪಗ ಬಂತಡೊ ಆದರೆ ಹೊಟ್ಟೆ ತುಂಬುಸುಲೆ ಹೋದ್ದು, ಅದಕ್ಕೆ ತುಂಬುಸಿದ ಹಾಂಗ ಖಾಲಿ ಆವುತ್ತಾ ಇದ್ದದರಿಂದ ತುಂಬುಸಿಯೇ ಆಗದ್ದೆ ಇನ್ನೂತುಂಬುಸಿಗೊಂಡೇಇದ್ದಡೋ. ಒಂದು ಮಾತು ಕೇಳಿದ್ದೆ.ತಿಂದಂಗೆ ಕೊದಿ ಹೆಚ್ಚು. ಉಂಡವಂಗೆ ಹಶು ಹೆಚ್ಚು ಹೇಳಿ. ಉಣ್ಣದ್ದೇ ಇದ್ದರುದೆ ಒಂದೆರಡು ದಿನ ಹಶು ಕಟ್ಟಿಗೊಂಡು ಇಪ್ಪಲೆಡಿಗಲ್ಲದೊ. ಹಾಂಗೆ ದಿನಗಟ್ಟಲೆ ಬರೇ ನೀರು ಕುಡುಕ್ಕೊಂಡೂ ಇಪ್ಪಲೆಡಿಗು.
ಹೊಟ್ಟೆ ಸರಿ ಇದ್ದರೆ ಮಾಂತ್ರ ಅದರ ತುಂಬುಸುವ ಯೋಚನೆ ಅದುವೇ ಸರಿಯಿಲ್ಲದ್ದರೆ ಕಷ್ಟ ಅಲ್ಲದೋ? ಊ(ಟ) ಮ(ಮಲಗುವುದು) ಹೇ(ಶೋಧನೆ) ಈ ಮೂರೂ ಸರಿಯಿದ್ದರೆ ಅವ ಆರೋಗ್ಯವಂತ ಹೇಳಿ ಲೆಕ್ಕಡೊ. ನಾಲಗ್ಗೇ ರುಚಿಯಿಲ್ಲದ್ದೆಯೋ ಅಥವಾ ಹೊಟ್ಟೆಲ್ಲಿ ಗೇಸ್ ತುಂಬಿಯೋ ಉಂಬದೇ ಬೇಡ ಹೇಳಿ ತೋರಿದರೆ ಆರೋಗ್ಯ ಸರಿಯಿದ್ದು ಹೇಳಿ ಆತೋ? ಮತ್ತೆ ಮನುಗಿದರೆ ಒರಕ್ಕೇ ಬತ್ತಿಲ್ಲೆ ಹೇಳುವದು, ಏನಾದರೂ ಚಿಂತೆ ತುಂಬ್ಯೊಂಡಿಪ್ಪಗ ಒರಕ್ಕು ಬತ್ತೋ? ಹಾಂಗಾದರೂ ಆರೋಗ್ಯ ಕೈಕೊಟ್ಟ ಹಾಂಗೆ. ಮತ್ತೆ ತಿಂದದು ಜೀರ್ಣ ಆಗಿ ತ್ಯಾಜ್ಯ ಹೆರ ಹೋಗದ್ದರೆ, ಮಲ ಬದ್ಧತೆ, ಮೂಲವ್ಯಾಧಿ, ಹೀಂಗೆ ಮಲ ರೋಗಂಗಳುದೇ ಬಂದರೆ ಕಷ್ಟ! ತಿಂದದು ಜೀರ್ಣ ಆವುತ್ತು, ಒರಕ್ಕು ಸರಿಯಾಗಿ ಇದ್ದು, ಶೋಧನೆ ಸರಿಯಿದ್ದು ಹೇಳಿ ಆದರೆ ಅವನ ಆರೋಗ್ಯ ಸರಿಯಿದ್ದು ಹೇಳಿ ಅಲ್ಲದೋ?ಧಾರಾಳ ಶ್ರೀಮಂತ ಆಗಿದ್ದರು ಆರೋಗ್ಯ ಸರಿಯಿಲ್ಲದ್ದರೆ ಹೇಂಗೆ? ಶರೀರ ಹೇಳುವದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಂಗೆಲ್ಲ ರೋಗಂಗಳ ಗೂಡಾದರೆ ಮನುಷ್ಯನ ಮನಸ್ಸೇ ಚಿಂತೆಯ ಮನೆಯಾವುತ್ತು. ಹಾಂಗಾದರೆ ಇದೆಲ್ಲ ಹೊಟ್ಟೆಯ ದೋಷಂಗಳಿಂದಲೇ ಬಪ್ಪದಲ್ಲದೋ? ಹೊಟ್ಟೆ ಸರಿ ಇದ್ದರೆ ಅವ ಸರಿ ಇದ್ದ ಹೇಳಿ ಲೆಕ್ಕ. ಇಂದು ಹುಟ್ಟಿದ ಹಿಳ್ಳೆಯೇ ಆಗಲಿ ಹಶು ಅಪ್ಪಗ ಅದಕ್ಕೆ ತಡಕ್ಕೊಂಬಲೆಡಿತ್ತೊ? ರಟ್ಟಿ ರಟ್ಟಿ ಕೂಗುತ್ತು. ಹೊತ್ತು ಹೊತ್ತಿಂಗೆ ಹಾಲು ಕೊಟ್ಟರೆ ಒರಗ್ಯೊಂಡೋ ಮತ್ತೆ ದಿನ ಹೋದ ಹಾಂಗೆ ಆಡ್ಯೊಂಡೋ ಇರುತ್ತು. ಇಡೀ ಶರೀರದ ಆರೋಗ್ಯ ನಿಯಂತ್ರಣ ಇಪ್ಪದು ಹೊಟ್ಟೆಲ್ಲಿ. ರುಚಿ ಆತು ಹೇಳಿ ಲೆಕ್ಕಂದ ಹೆಚ್ಚು ತಿಂದರೆ ಜೀರ್ಣ ಆವುತ್ತೋ? ಹೊತ್ತು ತಪ್ಪುಸಿ ಉಂಡು ತಿಂದು ಮಾಡಿದರೂ ಹಶು ಕೆಡುತ್ತು. ಅಂಬಗ ಹೊಟ್ಟೆಯ ಸರಿ ನೋಡ್ಯೊಂಡರೆ ಎಲ್ಲ ಸರಿ ಆವುತ್ತು. ಅದಕ್ಕೇ ಹಿಂದಾಣೋರು ಒಂದು ಗಾದೆ ಮಾಡಿದ್ದವಲ್ಲದೋ?"ಊಟ ಬಲ್ಲವಂಗೆ ರೋಗವಿಲ್ಲ, ಮತ್ತೆ ಮಾತು ಬಲವಂಗೆ ಜಗಳವಿಲ್ಲ" ಹಾಂಗೆ ನಮ್ಮ ಆರೋಗ್ಯ ನಮ್ಮ ಕೈಲ್ಲಿಯೇ ಇದ್ದು.
ಎಲ್ಲೋರು ಶರೀರ ಶಾಸ್ತ್ರ ಓದಿದೋವೇ ಇಪ್ಪದು ಈಗ. ತಿಂದ ಆಹಾರ ಹೊಟ್ಟೆಗೆ ಎತ್ತಿದ ಮೇಲೆ ಎಂತಾವುತ್ತು?ಎಷ್ಟು ಹೊತ್ತು ಅಲ್ಲಿ ಇರುತ್ತು.ಮತ್ತೆ ಮುಂದೆ ಎಲ್ಲಿಗೆ ಹೊವುತ್ತು? ಹೇಳುವದೆಲ್ಲ ಕಲಿವಗಳೇ ಗೊಂತಾವುತ್ತು.ಯಾವುದೇ ಒಂದು ಯಂತ್ರದ ಶಬ್ದ ವ್ಯತ್ಯಾಸಂದಲೇ ಅದು ಇಲ್ಲಿಯೇ ಹಾಳಯಿದು. ಅದಕ್ಕೆ ಈ ಒಂದು ಭಾಗ ತಂದು ಹಾಕಿದರೆ ಸರಿ ಆವುತ್ತು ಹೇಳಿದ ಹಾಂಗೆ.ಹೊಟ್ಟೆಲ್ಲಿಯೂ ಅಪ್ಪ ತಾತ್ಕಾಲಿಕ ವ್ಯತ್ಯಾಸ ತಿಳುಕ್ಕೊಂಡರೆ ಅದಕ್ಕೆ ಅಲ್ಲಲ್ಲಿಗಿಪ್ಪ ಮದ್ದುಗಳ ತೆಕ್ಕೊಂಡರೆ ರೋಗ ಮುಂದುವರಿತ್ತಿಲ್ಲೆ. ಮುಳ್ಳು ತಾಗಿದ ಕೂಡಲೇ ಅದರ ತೆಗದು ಕಾಸಿ ಮಡಿಗಿದರೆ ಅದರಷ್ಟಕ್ಕೆ ಬೇನೇ ಸಾಯುತ್ತು.ಗುಣ ಆವುತ್ತು. ಮುಳ್ಳು ಮಡಗಿ ಮದ್ದು ಕಿಟ್ಟಿದರೆ ಬೇನೆ ಹೋಕೋ? ಈಗ ಐಗಾಡಿಗ ತಿಂದುಗೊಂಡೆ ಇಪ್ಪೋರು ಇದ್ದವು. ಅದಕ್ಕೆ ಹೇಳುತ್ತವು ಗಾಣ ಹಾಕುವದು ಹೇಳಿ. ಃಆಂಗೆ ಗಾಣ ಹಾಕಿಗೊಂಡೆ ಇದ್ದರೆ ನಮ್ಮ ಹೊಟ್ಟೆಯೊಳದಿಕ್ಕಿಪ್ಪ ಯಂತ್ರಕ್ಕೆ ವಿರಾಮವೇ ಇಲ್ಲದ್ದೆ ಆವುತ್ತು. ಅಂಬಗ ಅದುದೇ ಸ್ಟ್ರೈಕ್ ಮಾಡುತ್ತು.ಕೂಡ್ಲೇ ನಮಗೆ ಗೊಂತಾಗದ್ದರೂ ಕೆಲವು ದಿನಲ್ಲಿ ಜ್ವರವೋ,ಅಜೀರ್ಣವೋ ಶುರುವಾಗಿ ಅದೊಂದು ರೋಗವೇ ಆವುತ್ತು.ಹಾಂಗೆ ಅಪ್ಪಲಾಗ ಹೇಳಿಯೇ ಹಿಂದಾಣೋರು ಉಪವಾಸ ಶುರು ಮಾಡಿದವು ನಿಜಕ್ಕಾದರೂ ಇಡೀ ದಿನ ಏಕಾದಶಿಯ ಹಾಂಗೆ ಉಪವಾಸ ಮಾಡಿದರೆ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕಿ ಮತ್ತೆ ಅವರ ಕೆಲಸಲ್ಲಿ ಚುರುಕಾವುತ್ತವು. "ಲಂಘನಂ ಪರಮೌಷಧಂ" ಹೇಳಿರೆ ಹಾರುವದು ಅಲ್ಲ. ಉಪವಾಸ ಕೂಪದು ಹೇಳಿ. ಇಂಗ್ಲಿಷಿಲ್ಲಿ ಹೇಳುತ್ತರೆ ರಿಫ್ರೆಶ್ ಅಪ್ಪದು ಉಪವಾಸ ಇದ್ದರೆ.ಚಾಂದ್ರಾಯಣ ವ್ರತ ಹೇಳಿ ಇದ್ದಡೊ. ಹದಿನೈದು ದಿನ ದಿನಾಗಳುದೇ ತಿಂಬ ಆಹಾರ ರಜ ರಜವೇ ಕಡಮ್ಮೆ ಮಾಡ್ಯೊಂಡು ಹೇಳಿರೆ ಪಾಡ್ಯಕ್ಕೆ ಸುರು ಮಾಡಿದರೆ,ಅಮಾವಾಸ್ಯೆಗೆ ಪೂರ್ತಿ ನಿರಾಹಾರ. ಮತ್ತೆ ರಜ ರಜವೇ ತಿಂಬದರ ಹೆಚ್ಚಿಸಿಗೊಂಡುಹುಣ್ಣಮೆಗಪ್ಪಗ ಹೊಟ್ಟೆ ತುಂಬ ಉಂಬದು.ಅಂಬಗ ಜೀರ್ಣಾಂಗಂಗೊಕ್ಕೆ ರಜ ವಿಶ್ರಾಂತಿ ಸಿಕ್ಕುತ್ತು.ಕೆಲಸ ಸರಿ ಮಾಡುತ್ತವು. ಆರೋಗ್ಯ ಸರಿ ಇರುತ್ತು. ಈಗ ನಾವು ಉಪವಾಸ ಮಾಡುವದಾದರೆ, ಅಕ್ಕಿಯ ಆಹಾರ ತಿಂಬಲಾಗ, ಗೋಧಿದು ಹೊಟ್ತೆ ತುಂಬ ತಿಂಬಲಕ್ಕು ಹೇಳಿ ಮಾಡುತ್ತು. ಪ್ರಯೋಜನ ಇದ್ದೋ? ಉಪವಾಸ ಹೇಳಿರೆ ನಿಜವಾಗಿಯೂ ದೇವರ ಹತ್ತರೆ ಮನೆಲ್ಲೇ ಇಪ್ಪದು. ಎಲ್ಲೆಲ್ಲಿಯಾರೂ ತಿರಿಕ್ಕೊಂಡು ಸಿಕ್ಕಿದ್ದರ ಎಲ್ಲ ತಿಂದರೆ ಉಪವಾಸ ಆವುತ್ತೋ? ನಾವು ಉಂಬದು ಹೇಳಿರೆ ಅದು ಒಂದು ಯಜ್ಞ! ದೇಹಲ್ಲಿಪ್ಪ ಪಂಚ ಪ್ರಾಣಂಗೊಕ್ಕೆ ಪ್ರಾಣಾಹುತಿ ಕೊಡೆಕ್ಕು. ಮತ್ತೆ ಊಟ ಸುರು! ಪ್ರಾಣಯ ಸ್ವಾಹಾ, ಅಪಾನಾಯ ಸ್ವಾಹಾ,ವ್ಯಾನಾಯಸ್ವಾಹಾ,ಉದಾನಯಸ್ವಾಹಾ,ಸಮಾನಾಯಸ್ವಾಹಾ ಹೇಳಿ ಆಹುತಿ ಕೊಟ್ಟ ಮೇಲೆ ಊಟ ಸುರು.ಊಟದ ನಡುಕೆ ಹಾಳು ಹರಟೆ ಮಾತಾಡುವದು, ಅಲ್ಲಿ ಇಲ್ಲಿ ನಡಕ್ಕೊಂಡು ತಿಂಬದು ಎಲ್ಲ ನಾಗರಿಕರಾಗಿಪ್ಪ ನಾವು ಮಾಡಲಾಗ. ಹಾಂಗೆ ಮಾಡಿದರೆ ಪ್ರಾಣಿಗೊಕ್ಕೂ ನಮಗೂ ವ್ಯತ್ಯಾಸ ಇದ್ದೋ?
ಜನಂಗೊ ಈ ಹೊಟ್ಟೆಗೆ ದೂರು ಹಾಕಿ ಮಾಡುವ ಅನರ್ಥ ಸಾಮಾನ್ಯವೋ? ರಾಶಿ ರಾಶಿ ಕೂಡಿ ಹಾಕುವದು,ಮಕ್ಕೊ ಮರಿಮಕ್ಕೊ ಕೂದು ತಿನ್ನೆಕ್ಕು ಹೇಳಿ ಅಡ್ಡ ದಾರಿಲ್ಲಿ ಸಂಪಾದನೆ ಮಾಡಿ ಮತ್ತೆ ಭ್ರಷ್ಟಾಚಾರ ತುಂಬಿತ್ತಪ್ಪ ಹೇಳಿ ಹೇಳುವದು..ಅಂತೂ ಅನ್ಯಾಯ ಅಧರ್ಮಕ್ಕೆ ಆರೋ ಹೊಣೆ.ತಾನು ಸರಿಯಿದ್ದೇ ಹೇಳುವದು ಎಲ್ಲ ಈ ಹೊಟ್ಟಗೆ ಬೇಕಾಗಿಯೇ ಅಲ್ಲದೋ? ಉಸಿರು ನಿಂದ ಮೇಲೆ ಹೊಟ್ಟೆ ಆರಿಂಗೆ ಬೇಕು? ಗಾಂಧೀಜಿ ಹೇಳಿದ ಹಾಂಗೆ ಅಪರಿಗ್ರಹ ಪಾಲಿಸಿದರೆ ಕೂಡಿ ಹಾಕುವ ಅಭ್ಯಾಸ ರಜ ಕಡಮ್ಮೆ ಮಾಡಿದರೆ ಲೋಕ ಒಳ್ಳೆದಕ್ಕೋ ಏನೋ?ಹೊಟ್ಟೆಯ ಬಗ್ಗೆ ಹೇಳುವಗ ಕೆಲವು ಜನ ಸಿಕಿ ಸಿಕ್ಕಿದ ಕಾಟ್ಮ್ಕೋಟಿಯ ಅಡಿಗಾಡಿಗ ತಿಂದೋಡು ಹೊಟ್ಟೆ ಬೆಳೆಸಿಗೊಳ್ಳುತ್ತವು. ಅದು ಬಿಡೆಕ್ಕು. ಹೊಟ್ಟೆಗೂ ವ್ಯಾಯಾಮ ಬೇಕು. ಇಡೀ ನಮ್ಮ ರಥ ನಡವದೇ ಹೊಟ್ಟೆಂದಾಗಿ . ಹೊಟ್ಟೆಯ ಮಟ್ಟಿಂಗೆ ಜಾಗ್ರತೆ ಎಷ್ಟು ತೆಕ್ಕೊಂಡರು ಸಾಲ. ಹೊಟ್ಟೆ ನಮಗೆ ಹೊರೆಯಲ್ಲ. ಹೊರೆಯಾಗದ್ದ ಹಾಂಗೆ ಹತೋಟಿಲ್ಲಿ ಮಡಿಕ್ಕೊಳ್ಳೆಕ್ಕು. ಕೆಲವು ಜನರ ಹೊಟ್ಟೆ ಆನು ವಿದೇಶಲ್ಲಿ ನೋಡಿದ್ದು.ಅವು ಹೊಟ್ಟೆ ನೆಗ್ಗಿಗೊಂಡು ನಡವಲೇ ಇಲ್ಲೆ.ಎಲ್ಲೋರೂ ವಾಹನಲ್ಲೇ ಹೋಪದಾದರೂ ಎಲ್ಯಾರು ನಡೆಕ್ಕಾರೆ ಬಪ್ಪ ಒದ್ದಾಟ ದೇವರಿಂಗೇ ಪ್ರೀತಿ! ಈ ಹೊಟ್ಟೆ ಬಗ್ಗೆ ಬರದ ಲೇಖನವೂ ಆ ಹೊಟ್ಟೆ ಗಣಪ್ಪಜ್ಜಂಗೇ ಅರ್ಪಿತ!
Saturday, June 16, 2012
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
·
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಮಾನವನ ಕಣ್ಣು ತಾನು ಕಂಡ ದೃಶ್ಯಗಳ ಗುಣ ವಿಭಾಗ ಮಾಡುತ್ತದೆ. ಕಣ್ಣಿಗೆ ರಮ್ಯ ನೋಟಗಳೇ ಇಷ್ಟವಾಗಿರುತ್ತವೆ. ಕಣ್ಣಿಗೆ ನುಣ್ಣಗೆ ಕಾಣುವುದು ಎಂದರೆ ಸುಂದರವಾಗಿ ಕಂಡು ಮನಸ್ಸಿಗೆ ಆನಂದವುಂಟು ಮಾಡುವುದು. ಕರ್ಕಶವಾಗಿ ಕಂಡುದನ್ನು ಮತ್ತೊಮ್ಮೆ ನೋಡಲೂ ಮನಸ್ಸು ಇಷ್ಟಪಡುವುದಿಲ್ಲ. ಬಣ್ಣಗಳಲ್ಲಿಯೂ ಕೆಲವು ಬಣ್ಣಗಳು ಇಷ್ಟವಾಗುವುದಿಲ್ಲ ತಾನೆ! ಹತ್ತಿರದ ಪ್ರೇಕ್ಷಣೀಯ ಸ್ಥಳಗಳಿಗೆ ನಾವು ಮತ್ತೊಮ್ಮೆ ಹೋಗಿ ನೋಡಲು ಬಯಸುವುದಿಲ್ಲ. ಯಾವಾಗಲು ನೋಡುತ್ತಿರುವ ನೋಟಗಳು ಮನಸ್ಸಿಗೆ ಹಬ್ಬವುಂಟುಮಾಡುವುದಿಲ್ಲವಷ್ಟೆ. ನೋಡಿ ನೋಡಿ ಬೇಸತ್ತಿರುತ್ತೇವೆ. ಯಾರೋ ಹೇಳಿದ್ದನ್ನು ಕೇಳಿ, ಅಥವಾ ಅಲ್ಲಿಯ ಪ್ರಕಟಣೆಗಳನ್ನು ನೋಡಿ ಒಮ್ಮೆ ಹೋಗಿ ನೋಡಿಬಿಡುವ ಎಂಬ ಆಸೆ ಸಹಜವೇ ಆಗಿರುತ್ತದೆ. ಜಗಿದದ್ದನ್ನೇ ಮತ್ತೆ ಜಗಿದರೆ ರುಚಿಯಿರುವುದಿಲ್ಲ!ಪ್ರಾಣಿಗಳಲ್ಲಿಯೂ ಹುಲ್ಲು ಮೇಯುವ ಹಸು ನೋಡುವುದು ಮುಂದಕ್ಕೆ ಇರುವ ಹುಲ್ಲು ಇನ್ನೂ ಹೆಚ್ಚು ಹಸುರಾಗಿದೆಯೆಂದೋ ಸುಂದರವಾಗಿದೆಯೆಂದೋ. ಧಾರಾಳವಿದೆ ಬೇಗ ಹೊಟ್ಟೆ ತುಂಬಿಸಿಕೊಳ್ಳಬಹುದೆಂದೋ ಹೀಗೆಲ್ಲ ಯೋಚಿಸಿಕೊಂಡು ಮುಂದು ಮುಂದಕ್ಕೆ ಹೋಗುತ್ತಿರುತ್ತದೆ. ನಮಗೂ ಹೊಸತರಲ್ಲಿ ಸ್ವಾಭಾವಿಕವಾಗಿ ಆಸಕ್ತಿಯಿರುತ್ತದೆ. ಮನೆ ಹತ್ತಿರವಿರುವ ಗುಡ್ಡ ನಮಗೆ ಚೆನ್ನಾಗಿ ಕಾಣಿಸುವುದಿಲ್ಲ. ದೂರದಲ್ಲಿರುವ ಬೆಟ್ಟಗಳೇ ಹೆಚ್ಚು ಸುಂದರವೆಂಬ ತೀರ್ಮಾನಕ್ಕೆ ಬರುತ್ತೇವೆ. ಹಿತ್ತಿಲ ಗಿಡವಾದರೋ ನಮಗೆ ಔಷಧಿಯಲ್ಲ. ಅದು ಒಂದು ಔಷಧಿಯೆನ್ನುವುದನ್ನು ವೈದ್ಯರೇ ಹೇಳಬೇಕು. ಅಂದರೆ ಇಂತಹ ಸಾಮಾನ್ಯ ಗಿಡ ಮೂಲಿಕೆಗಳ ಬಗ್ಗೆ ನಮಗೇನೂ ಗೊತ್ತಿರುವುದಿಲ್ಲ. ಅದನ್ನು ತಿಳಿಯುವ ಕುತೂಹಲವು ನಮಗಿಲ್ಲ. ಅಲ್ಲೆಲ್ಲೋ ಒಂದು ಮಹೌಷಧವಿದೆ ಎಂದು ಅದನ್ನು ತರಲು ಸೀದಾ ಮದ್ದಿನ ಅಂಗಡಿಗೇ ಹೋಗುತ್ತೇವೆ. ವನಸ್ಪತಿಗಳ ಪರಿಚಯ ಯಾರಿಗೂ ಇರುವುದಿಲ್ಲ. ಅಂಗಡಿಯವನು ಕೊಡುವ ಔಷಧಿ ನೋಡಿ ಮತ್ತೆ ಇದು ನಮ್ಮ ತೋಟದಲ್ಲಿಯೇ ಇದೆಯಲ್ಲ ಎಂದುಕೊಳ್ಳುತ್ತಾನೆ. ಅಥವಾ ಆ ಔಷಧಿ ವೈದ್ಯ ಹೇಳಿದರೇನೇ ಸಮಾಧಾನ! ಗೊತ್ತಿರುವ ಬೇರೆ ಯಾರು ಹೇಳಿದರೂ ಕೇಳುವ ಸಹನೆಯಿಲ್ಲ. ಈಗ ಇಂಟರ್ರ್ನೆಟ್ ನಲ್ಲಿ ಔಷಧಿಗಳ ಬಗ್ಗೆಯೂ ವಿವರ ಕೊಡುತ್ತಾರೆ. ಅದರಲ್ಲಿ ಕಂಡರೆ ಅದು ವೇದವಾಕ್ಯ. ಉಳಿದವರು ಹೇಳಿದರೂ ಕೇಳುವವರಿಲ್ಲ. ಅದಕ್ಕೇ ಶಂಖದಿಂದ ಬಂದರೇ ತೀರ್ಥವೆಂಬ ಮಾತು ಹುಟ್ಟಿಕೊಂಡಿದೆ. ಯಾವುದೋ ನದಿಯಲ್ಲಿ ತೀರ್ಥ ಮೀಯಲು ಯಾರೂ ಹೋಗುವುದಿಲ್ಲ. ಆದರೆ ಅದು ಹೆಚ್ಚು ಜನ ಸ್ನಾನ ಮಾಡಿ ಪುಣ್ಯ ಗಳಿಸುತ್ತಾರೆ ಎಂದು ಜನಜನಿತವಾಗಿರಬೇಕು. ಗಂಗ ನದಿಯ ನೀರು ಮಾತ್ರ ಪವಿತ್ರ ಉಳಿದೆಲ್ಲ ನದೀ ನೀರಿಗೆ ಪ್ರಾಶಸ್ತ್ಯವಿಲ್ಲ. ಯಾವ ನೀರಿನಲ್ಲಿ ಸ್ನಾನ ಮಾಡಿದರೂ ಮೈಯ ಕೊಳೆ ಹೋಗುವುದಿಲ್ಲವೇ? ಎಲ್ಲ ಮನಸ್ಸಿನಲ್ಲಿಯೇ ಮಹಾದೇವನಿದ್ದಾನೆ ಎಂಬ ಮಾತೇ ಸತ್ಯವಲ್ಲವೇ? ಶ್ರದ್ಧಾಭಕ್ತಿಗಳೇ ಬೇಕಿರುವುದು ಎಂಬುದನ್ನು ತಿಳಿದುಕೊಳ್ಳುವುದಿಲ್ಲ. "ಒಳಗೆ ಶೃಂಗಾರ ಹೊರಗೆ ಗೋಳಿಸೊಪ್ಪು" ಆಗುವ ಸಾಧ್ಯತೆಯೂ ಇದೆಯಷ್ಟೆ!
ನಮ್ಮ ಕಣ್ಣುಗಳಿಗೆ ಯಾವಾಗಲೂ ಗೋಚರವಾಗುವ ವಸ್ತುಗಳೋ ,ದೃಶ್ಯಗಳೋ ನಮಗೆ ವಿಶೇಷವೆನಿಸುವುದಿಲ್ಲ. ಅಂದರೆ ಯಾವಾಗಲೂ ಕಾಣುತ್ತಿದ್ದೇವಲ್ಲ, ಅದು ವಿಶೇಷವಲ್ಲ. ದೂರದಲ್ಲಿರುವ ವಸ್ತುಗಳೇ ನಮಗೆ ಆಸಕ್ತಿಯನ್ನು ಹುಟ್ಟಿಸುತ್ತವೆ. ಮನೆಯಲ್ಲಿಯೇ ದೇವರ ಕೋಣೆಯಿದೆ. ಅಲ್ಲಿ ಕುಳಿತು ಹುಚ್ಚು ಕುದುರೆಯಂತಿರುವ ಮನಸ್ಸನ್ನು ಏಕಾಗ್ರಗೊಳಿಸಿ ಒಂದರ್ಧ ಗಂಟೆಯೋ ಕುಳಿತುಕೊಂಡರೆ ಸ್ವಲ್ಪ ನೆಮ್ಮದಿ ಸಿಗಬಹುದು. ಎಲ್ಲೆಲ್ಲಿಯೋ ಮರ್ಕಟನಂತೆ ಹಾರುವ ಮನಸ್ಸಿನ ಹತೋಟಿ ಯಿದ್ದರೆ ಹಲವು ಹಂಬಲಿಸುವ ಯೋಚನೆಗಳು ಬರಲಾರವು. ಪತ್ರಿಕೆಯಲ್ಲೋ ಅಥವಾ ಟಿ ವಿ ಯಲ್ಲೋ ಅದರ ಬಗ್ಗೆ ವಿಶೇಷ ವರದಿಗಳು ಬಂದರೆ ಆಶ್ಚರ್ಯವಾಗುತ್ತದೆ. ಒಮ್ಮೆ ಹೋಗಿ ನೋಡಬೇಕು ಎನ್ನಿಸುತ್ತದೆ. ಎಲ್ಲ ಬರುವುದು ಮಾಧ್ಯಮಗಳ ಪ್ರಚಾರದಿಂದ. ಯಾವುದೊ ಒಂದು ದೇವಸ್ಥಾನದ ದೇವರಿಗೆ ಹರಸಿಕೊಂಡರೆ ನೆನೆಸಿದ ಕಾರ್ಯಗಳೆಲ್ಲವು ಕೈಗೂಡುತ್ತವೆ ಎಂದೊಡನೆ ಜನ ಮುಗಿಬಿದ್ದು ಹೋಗುತ್ತಾರೆ. ಒಬ್ಬ ಮಂತ್ರವಾದಿ ಅಥವಾ ಜೋಯಿಸನ ಬಗ್ಗೆ ಸುದ್ದಿ ಹರಡಿಬಿಟ್ಟರೆ ಎಲ್ಲರೂ ಆ ಕಡೆಗೆ ಮುಖ ಮಾಡುತ್ತಾರೆ. ಎಲ್ಲರಿಗೂ ಸುಲಭೋಪಾಯಗಳೇ ಬೇಕು. ಸುಲಭದಲ್ಲಿ ಶ್ರೀಮಂತನಾಗಬೇಕು. ದೊಡ್ಡ ಮನೆ ಕಟ್ಟಿಸಬೇಕು. ತುಂಬ ಆಸ್ತಿ ಇರಬೇಕು ಎಂಬೆಲ್ಲ ಹಂಬಲಗಳು ಮಾನವನನ್ನು ಯಾವಾಗಲೂ ಕಾಡುತ್ತವೆ. ಆಸೆಗೆ ಮಿತಿಯಿರುವುದಿಲ್ಲ. ಇದ್ದುದರಲ್ಲಿ ತೃಪ್ತಿ ಪಡುವ ಗುಣವಿದ್ದರೆ ಅವನ ಬಾಳು ನೆಮ್ಮದಿಯಿಂದಿರಬಹುದು. ಬಯಸಿದ್ದು ಸಿಕ್ಕದಿದ್ದರೆ ದುಃಖವಾಗುತ್ತದೆ. ಮತ್ತೊಮ್ಮೆ ಪ್ರಯತ್ನಿಸಿ ಪಡೆಯಬೇಕೆಂಬಾಸೆ ಹೆಚ್ಚುತ್ತದೆ. ಆಗ ಬಾಳು ಯವಾಗಲೂ ಚಿಂತೆಯಿಂದ ಕೂಡಿರುತ್ತದೆ. ಎಂದೋ ಒಂದು ದಿನ ಕೊನೆಗೊಳ್ಳಬೇಕಾದ ಬದಿಕಿಗಾಗಿ ಜೀವನವಿಡೀ ಚಿಂತಾಭರಿತರಾಗಿದ್ದರೆ ಅಂತಹ ಚಿಂತೆಗೆ ಕೊನೆಯಿದೆಯೇ? ಬದುಕು ಒಂದು ಸವಾಲಲ್ಲ. ಈಸಬೇಕು ಈಸಿ ಜೈಸಬೇಕು. ಎಲ್ಲವನ್ನೂ ನಡೆಸುವವನೊಬ್ಬನಿದ್ದಾನೆ ಎಂಬ ವೇದಾಂತಿಗಳ ಮಾತು ಸತ್ಯವಲ್ಲವೇ! ಹರಕೆಯ ಕುರಿಗಳಂತಿರುವ ನಾವು ಮೂರು ದಿನದ ಬಾಳಿಗಾಗಿ ಪರಸ್ಪರ ಪೈಪೋಟಿ ನಡೆಸುವುದು ಸರಿಯೇ? ನಾಟಕ ನಟರಂತೆ ಅಭಿನಯ ಮುಗಿದು ಹೊರಗೆ ಬಂದಾಗ ಯಾವುದೇ ವೈರವೋ ದ್ವೇಷವೋ ಇರಬಾರದಲ್ಲವೇ?
ಹಿಂದಿನವರ ಮಾತು ಹೀಗಿದೆ. ಕಾಶಿಗೆ ಹೋದರೆ ಕಾಸಿಗೆ ಒಂದು ಕುದುರೆ ಸಿಗುವುದಂತೆ! ಕಾಶಿಗೆ ಹೋಗಲೂ ಸಮಯ ಬೇಕು ಒಂದು ಕುದುರೆ ತರುವುದಕ್ಕಾಗಿ ಕಾಶಿಗೆ ಹೋಗಿ ಬರುವುದಕ್ಕೂ ಖರ್ಚು ತುಂಬಾ ಆಗಬಹುದು.ಮಾತ್ರವಲ್ಲ ಕೆಲವು ಪ್ರಾಣಿಗಳು ಆ ಪ್ರದೇಶದ ಹವೆಗೆ ಮಾತ್ರ ಒಗ್ಗುತ್ತವೆ. ಹೊಸ ಊರಿನ ಹವೆಯೋ ಪರಿಸರವೋ ಅದಕ್ಕೆ ಹಿಡಿಸದಿದ್ದರೆ ಅದಕ್ಕೂ ತಾನೇನನ್ನೋ ಕಳೆದಿಕೊಂಡೆನೆಂಬ ಬೇಸರದಿಂದ ಕೊನೆಗೆ ಸಾಯಲೂ ಬಹುದು. ಕಾಶಿಯ ಕುದುರೆ ಅಲ್ಲಿಗೇ ಸರಿ. ಇಲ್ಲಿಗೆ ಇಲ್ಲಿಯ ಕುದುರೆಗಳೇ ಬೇಕಲ್ಲವೇ?ದೂರದ ಹಿಮಲಯವನ್ನು ಒಮ್ಮೆ ಹೋಗಿ ನೋಡಿ ಬಂದರೆ, ಅದರ ಎತ್ತರ ಬಿತ್ತರಗಳಿಗೆ ಬೆರಗಾಗಿ ಈಚೆ ಬರುತ್ತೇವಷ್ಟೆ!ಅಲ್ಲಿಯೇ ನಿಲ್ಲುವುದಿಲ್ಲ. ಏನೋ ಕಣ್ಣಿನ ಪಾಪ ಕಳೆಯಲು ಒಮ್ಮೆ ಹೋಗಿ ನೋಡಿ ಬಂದರಾಯಿತು. ನಮ್ಮ ದೇಶದ ವಿಜ್ಞಾನಿಯನ್ನು ಕವಿಗಳನ್ನು ಗುರುತಿಸಲು ನೋಬೆಲ್ ಪ್ರಶಸ್ತಿ ಬೇಕಯಿತು. ಮತ್ತೆ ನಮ್ಮವರೇ ಹೆಮ್ಮೆಯಿಂದ ಅವರು ನಮ್ಮ ದೇಶದವರು ಎಂದು ಹೇಳಿಕೊಂಡರು. ಅಮೇರಿಕಾದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ಬಂದ ಮೇಲೆ ವಿವೇಕಾನಂದರ ಹೆಸರು ನಮ್ಮ ಆದರ್ಶವಾಯಿತು.ಅಂದರೆ ನಮ್ಮ ಜನರ ಹಿರಿಮೆ ಗರಿಮೆಗಳನ್ನು ಗುರುತಿಸಬೇಕಾದ ನಾವು ಮತ್ತೆ ಎಚ್ಚರಗೊಂಡೆವು. ಆದರೆ ವೇದ ಪುರಾಣಗಳನ್ನು ನೋಡಲು ನಮಗೆ ವ್ಯವಧಾನವಿಲ್ಲ. ಕನ್ನಡದ ಶಬ್ದ ಕೋಶ ರಚಿಸಿದ್ದು ವಿದೇಶೀಯರೊಬ್ಬರು. ಆಗ ಅಧಿಕಾರದಲ್ಲಿದ್ದ ಬ್ರಿಟಿಷರ ಮತ ಪ್ರಚಾರಕ್ಕೆ ಅವರಿಗೆ ಕನ್ನಡ ಭಾಷೆ ಕಲಿಯ ಬೇಕಾಯಿತು. ಇಲ್ಲಿ ಊರ್ವಶಿಯ ಶಾಪ ಅರ್ಜುನನಿಗೆ ಭೀಷ್ಮನೆದುರು ನಿಲ್ಲಲು, ಅಜ್ಞಾತ ವಸದಲ್ಲಿ ಬೃಹನ್ನಳೆಯಾಗಿ ನಾಟ್ಯ ಕಲಿಸಲು ಪ್ರಯೋಜನವಾಗಿತ್ತಲ್ಲವೇ?ನಮ್ಮ ಪೂರ್ವಜರಿಂದ ಬಂದ ಬಳುವಳಿಗಳೇ ಬೇಕಷ್ಟಿರುವಾಗ ದೂರದ ಬೆಟ್ಟಗಳ ಕಡೆಗೆ ಬೆಟ್ಟು ಮಾಡುವುದೂ ಮೂರ್ಖತನವಾದರೂ ಗುಣಕ್ಕೆ ಮತ್ಸರವಿದೆಯೇ? ಸರ್ವಜ್ಞರಾಗಬೇಕಾದರೆ ಆತ ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ ಎಂಬಂತೆ ಎಲ್ಲವೂ ನಮ್ಮ ಜ್ಞಾನಾರ್ಜನೆಗೆ ಸಹಾಯಕವಲ್ಲವೇ?
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಮಾನವನ ಕಣ್ಣು ತಾನು ಕಂಡ ದೃಶ್ಯಗಳ ಗುಣ ವಿಭಾಗ ಮಾಡುತ್ತದೆ. ಕಣ್ಣಿಗೆ ರಮ್ಯ ನೋಟಗಳೇ ಇಷ್ಟವಾಗಿರುತ್ತವೆ. ಕಣ್ಣಿಗೆ ನುಣ್ಣಗೆ ಕಾಣುವುದು ಎಂದರೆ ಸುಂದರವಾಗಿ ಕಂಡು ಮನಸ್ಸಿಗೆ ಆನಂದವುಂಟು ಮಾಡುವುದು. ಕರ್ಕಶವಾಗಿ ಕಂಡುದನ್ನು ಮತ್ತೊಮ್ಮೆ ನೋಡಲೂ ಮನಸ್ಸು ಇಷ್ಟಪಡುವುದಿಲ್ಲ. ಬಣ್ಣಗಳಲ್ಲಿಯೂ ಕೆಲವು ಬಣ್ಣಗಳು ಇಷ್ಟವಾಗುವುದಿಲ್ಲ ತಾನೆ! ಹತ್ತಿರದ ಪ್ರೇಕ್ಷಣೀಯ ಸ್ಥಳಗಳಿಗೆ ನಾವು ಮತ್ತೊಮ್ಮೆ ಹೋಗಿ ನೋಡಲು ಬಯಸುವುದಿಲ್ಲ. ಯಾವಾಗಲು ನೋಡುತ್ತಿರುವ ನೋಟಗಳು ಮನಸ್ಸಿಗೆ ಹಬ್ಬವುಂಟುಮಾಡುವುದಿಲ್ಲವಷ್ಟೆ. ನೋಡಿ ನೋಡಿ ಬೇಸತ್ತಿರುತ್ತೇವೆ. ಯಾರೋ ಹೇಳಿದ್ದನ್ನು ಕೇಳಿ, ಅಥವಾ ಅಲ್ಲಿಯ ಪ್ರಕಟಣೆಗಳನ್ನು ನೋಡಿ ಒಮ್ಮೆ ಹೋಗಿ ನೋಡಿಬಿಡುವ ಎಂಬ ಆಸೆ ಸಹಜವೇ ಆಗಿರುತ್ತದೆ. ಜಗಿದದ್ದನ್ನೇ ಮತ್ತೆ ಜಗಿದರೆ ರುಚಿಯಿರುವುದಿಲ್ಲ!ಪ್ರಾಣಿಗಳಲ್ಲಿಯೂ ಹುಲ್ಲು ಮೇಯುವ ಹಸು ನೋಡುವುದು ಮುಂದಕ್ಕೆ ಇರುವ ಹುಲ್ಲು ಇನ್ನೂ ಹೆಚ್ಚು ಹಸುರಾಗಿದೆಯೆಂದೋ ಸುಂದರವಾಗಿದೆಯೆಂದೋ. ಧಾರಾಳವಿದೆ ಬೇಗ ಹೊಟ್ಟೆ ತುಂಬಿಸಿಕೊಳ್ಳಬಹುದೆಂದೋ ಹೀಗೆಲ್ಲ ಯೋಚಿಸಿಕೊಂಡು ಮುಂದು ಮುಂದಕ್ಕೆ ಹೋಗುತ್ತಿರುತ್ತದೆ. ನಮಗೂ ಹೊಸತರಲ್ಲಿ ಸ್ವಾಭಾವಿಕವಾಗಿ ಆಸಕ್ತಿಯಿರುತ್ತದೆ. ಮನೆ ಹತ್ತಿರವಿರುವ ಗುಡ್ಡ ನಮಗೆ ಚೆನ್ನಾಗಿ ಕಾಣಿಸುವುದಿಲ್ಲ. ದೂರದಲ್ಲಿರುವ ಬೆಟ್ಟಗಳೇ ಹೆಚ್ಚು ಸುಂದರವೆಂಬ ತೀರ್ಮಾನಕ್ಕೆ ಬರುತ್ತೇವೆ. ಹಿತ್ತಿಲ ಗಿಡವಾದರೋ ನಮಗೆ ಔಷಧಿಯಲ್ಲ. ಅದು ಒಂದು ಔಷಧಿಯೆನ್ನುವುದನ್ನು ವೈದ್ಯರೇ ಹೇಳಬೇಕು. ಅಂದರೆ ಇಂತಹ ಸಾಮಾನ್ಯ ಗಿಡ ಮೂಲಿಕೆಗಳ ಬಗ್ಗೆ ನಮಗೇನೂ ಗೊತ್ತಿರುವುದಿಲ್ಲ. ಅದನ್ನು ತಿಳಿಯುವ ಕುತೂಹಲವು ನಮಗಿಲ್ಲ. ಅಲ್ಲೆಲ್ಲೋ ಒಂದು ಮಹೌಷಧವಿದೆ ಎಂದು ಅದನ್ನು ತರಲು ಸೀದಾ ಮದ್ದಿನ ಅಂಗಡಿಗೇ ಹೋಗುತ್ತೇವೆ. ವನಸ್ಪತಿಗಳ ಪರಿಚಯ ಯಾರಿಗೂ ಇರುವುದಿಲ್ಲ. ಅಂಗಡಿಯವನು ಕೊಡುವ ಔಷಧಿ ನೋಡಿ ಮತ್ತೆ ಇದು ನಮ್ಮ ತೋಟದಲ್ಲಿಯೇ ಇದೆಯಲ್ಲ ಎಂದುಕೊಳ್ಳುತ್ತಾನೆ. ಅಥವಾ ಆ ಔಷಧಿ ವೈದ್ಯ ಹೇಳಿದರೇನೇ ಸಮಾಧಾನ! ಗೊತ್ತಿರುವ ಬೇರೆ ಯಾರು ಹೇಳಿದರೂ ಕೇಳುವ ಸಹನೆಯಿಲ್ಲ. ಈಗ ಇಂಟರ್ರ್ನೆಟ್ ನಲ್ಲಿ ಔಷಧಿಗಳ ಬಗ್ಗೆಯೂ ವಿವರ ಕೊಡುತ್ತಾರೆ. ಅದರಲ್ಲಿ ಕಂಡರೆ ಅದು ವೇದವಾಕ್ಯ. ಉಳಿದವರು ಹೇಳಿದರೂ ಕೇಳುವವರಿಲ್ಲ. ಅದಕ್ಕೇ ಶಂಖದಿಂದ ಬಂದರೇ ತೀರ್ಥವೆಂಬ ಮಾತು ಹುಟ್ಟಿಕೊಂಡಿದೆ. ಯಾವುದೋ ನದಿಯಲ್ಲಿ ತೀರ್ಥ ಮೀಯಲು ಯಾರೂ ಹೋಗುವುದಿಲ್ಲ. ಆದರೆ ಅದು ಹೆಚ್ಚು ಜನ ಸ್ನಾನ ಮಾಡಿ ಪುಣ್ಯ ಗಳಿಸುತ್ತಾರೆ ಎಂದು ಜನಜನಿತವಾಗಿರಬೇಕು. ಗಂಗ ನದಿಯ ನೀರು ಮಾತ್ರ ಪವಿತ್ರ ಉಳಿದೆಲ್ಲ ನದೀ ನೀರಿಗೆ ಪ್ರಾಶಸ್ತ್ಯವಿಲ್ಲ. ಯಾವ ನೀರಿನಲ್ಲಿ ಸ್ನಾನ ಮಾಡಿದರೂ ಮೈಯ ಕೊಳೆ ಹೋಗುವುದಿಲ್ಲವೇ? ಎಲ್ಲ ಮನಸ್ಸಿನಲ್ಲಿಯೇ ಮಹಾದೇವನಿದ್ದಾನೆ ಎಂಬ ಮಾತೇ ಸತ್ಯವಲ್ಲವೇ? ಶ್ರದ್ಧಾಭಕ್ತಿಗಳೇ ಬೇಕಿರುವುದು ಎಂಬುದನ್ನು ತಿಳಿದುಕೊಳ್ಳುವುದಿಲ್ಲ. "ಒಳಗೆ ಶೃಂಗಾರ ಹೊರಗೆ ಗೋಳಿಸೊಪ್ಪು" ಆಗುವ ಸಾಧ್ಯತೆಯೂ ಇದೆಯಷ್ಟೆ!
ನಮ್ಮ ಕಣ್ಣುಗಳಿಗೆ ಯಾವಾಗಲೂ ಗೋಚರವಾಗುವ ವಸ್ತುಗಳೋ ,ದೃಶ್ಯಗಳೋ ನಮಗೆ ವಿಶೇಷವೆನಿಸುವುದಿಲ್ಲ. ಅಂದರೆ ಯಾವಾಗಲೂ ಕಾಣುತ್ತಿದ್ದೇವಲ್ಲ, ಅದು ವಿಶೇಷವಲ್ಲ. ದೂರದಲ್ಲಿರುವ ವಸ್ತುಗಳೇ ನಮಗೆ ಆಸಕ್ತಿಯನ್ನು ಹುಟ್ಟಿಸುತ್ತವೆ. ಮನೆಯಲ್ಲಿಯೇ ದೇವರ ಕೋಣೆಯಿದೆ. ಅಲ್ಲಿ ಕುಳಿತು ಹುಚ್ಚು ಕುದುರೆಯಂತಿರುವ ಮನಸ್ಸನ್ನು ಏಕಾಗ್ರಗೊಳಿಸಿ ಒಂದರ್ಧ ಗಂಟೆಯೋ ಕುಳಿತುಕೊಂಡರೆ ಸ್ವಲ್ಪ ನೆಮ್ಮದಿ ಸಿಗಬಹುದು. ಎಲ್ಲೆಲ್ಲಿಯೋ ಮರ್ಕಟನಂತೆ ಹಾರುವ ಮನಸ್ಸಿನ ಹತೋಟಿ ಯಿದ್ದರೆ ಹಲವು ಹಂಬಲಿಸುವ ಯೋಚನೆಗಳು ಬರಲಾರವು. ಪತ್ರಿಕೆಯಲ್ಲೋ ಅಥವಾ ಟಿ ವಿ ಯಲ್ಲೋ ಅದರ ಬಗ್ಗೆ ವಿಶೇಷ ವರದಿಗಳು ಬಂದರೆ ಆಶ್ಚರ್ಯವಾಗುತ್ತದೆ. ಒಮ್ಮೆ ಹೋಗಿ ನೋಡಬೇಕು ಎನ್ನಿಸುತ್ತದೆ. ಎಲ್ಲ ಬರುವುದು ಮಾಧ್ಯಮಗಳ ಪ್ರಚಾರದಿಂದ. ಯಾವುದೊ ಒಂದು ದೇವಸ್ಥಾನದ ದೇವರಿಗೆ ಹರಸಿಕೊಂಡರೆ ನೆನೆಸಿದ ಕಾರ್ಯಗಳೆಲ್ಲವು ಕೈಗೂಡುತ್ತವೆ ಎಂದೊಡನೆ ಜನ ಮುಗಿಬಿದ್ದು ಹೋಗುತ್ತಾರೆ. ಒಬ್ಬ ಮಂತ್ರವಾದಿ ಅಥವಾ ಜೋಯಿಸನ ಬಗ್ಗೆ ಸುದ್ದಿ ಹರಡಿಬಿಟ್ಟರೆ ಎಲ್ಲರೂ ಆ ಕಡೆಗೆ ಮುಖ ಮಾಡುತ್ತಾರೆ. ಎಲ್ಲರಿಗೂ ಸುಲಭೋಪಾಯಗಳೇ ಬೇಕು. ಸುಲಭದಲ್ಲಿ ಶ್ರೀಮಂತನಾಗಬೇಕು. ದೊಡ್ಡ ಮನೆ ಕಟ್ಟಿಸಬೇಕು. ತುಂಬ ಆಸ್ತಿ ಇರಬೇಕು ಎಂಬೆಲ್ಲ ಹಂಬಲಗಳು ಮಾನವನನ್ನು ಯಾವಾಗಲೂ ಕಾಡುತ್ತವೆ. ಆಸೆಗೆ ಮಿತಿಯಿರುವುದಿಲ್ಲ. ಇದ್ದುದರಲ್ಲಿ ತೃಪ್ತಿ ಪಡುವ ಗುಣವಿದ್ದರೆ ಅವನ ಬಾಳು ನೆಮ್ಮದಿಯಿಂದಿರಬಹುದು. ಬಯಸಿದ್ದು ಸಿಕ್ಕದಿದ್ದರೆ ದುಃಖವಾಗುತ್ತದೆ. ಮತ್ತೊಮ್ಮೆ ಪ್ರಯತ್ನಿಸಿ ಪಡೆಯಬೇಕೆಂಬಾಸೆ ಹೆಚ್ಚುತ್ತದೆ. ಆಗ ಬಾಳು ಯವಾಗಲೂ ಚಿಂತೆಯಿಂದ ಕೂಡಿರುತ್ತದೆ. ಎಂದೋ ಒಂದು ದಿನ ಕೊನೆಗೊಳ್ಳಬೇಕಾದ ಬದಿಕಿಗಾಗಿ ಜೀವನವಿಡೀ ಚಿಂತಾಭರಿತರಾಗಿದ್ದರೆ ಅಂತಹ ಚಿಂತೆಗೆ ಕೊನೆಯಿದೆಯೇ? ಬದುಕು ಒಂದು ಸವಾಲಲ್ಲ. ಈಸಬೇಕು ಈಸಿ ಜೈಸಬೇಕು. ಎಲ್ಲವನ್ನೂ ನಡೆಸುವವನೊಬ್ಬನಿದ್ದಾನೆ ಎಂಬ ವೇದಾಂತಿಗಳ ಮಾತು ಸತ್ಯವಲ್ಲವೇ! ಹರಕೆಯ ಕುರಿಗಳಂತಿರುವ ನಾವು ಮೂರು ದಿನದ ಬಾಳಿಗಾಗಿ ಪರಸ್ಪರ ಪೈಪೋಟಿ ನಡೆಸುವುದು ಸರಿಯೇ? ನಾಟಕ ನಟರಂತೆ ಅಭಿನಯ ಮುಗಿದು ಹೊರಗೆ ಬಂದಾಗ ಯಾವುದೇ ವೈರವೋ ದ್ವೇಷವೋ ಇರಬಾರದಲ್ಲವೇ?
ಹಿಂದಿನವರ ಮಾತು ಹೀಗಿದೆ. ಕಾಶಿಗೆ ಹೋದರೆ ಕಾಸಿಗೆ ಒಂದು ಕುದುರೆ ಸಿಗುವುದಂತೆ! ಕಾಶಿಗೆ ಹೋಗಲೂ ಸಮಯ ಬೇಕು ಒಂದು ಕುದುರೆ ತರುವುದಕ್ಕಾಗಿ ಕಾಶಿಗೆ ಹೋಗಿ ಬರುವುದಕ್ಕೂ ಖರ್ಚು ತುಂಬಾ ಆಗಬಹುದು.ಮಾತ್ರವಲ್ಲ ಕೆಲವು ಪ್ರಾಣಿಗಳು ಆ ಪ್ರದೇಶದ ಹವೆಗೆ ಮಾತ್ರ ಒಗ್ಗುತ್ತವೆ. ಹೊಸ ಊರಿನ ಹವೆಯೋ ಪರಿಸರವೋ ಅದಕ್ಕೆ ಹಿಡಿಸದಿದ್ದರೆ ಅದಕ್ಕೂ ತಾನೇನನ್ನೋ ಕಳೆದಿಕೊಂಡೆನೆಂಬ ಬೇಸರದಿಂದ ಕೊನೆಗೆ ಸಾಯಲೂ ಬಹುದು. ಕಾಶಿಯ ಕುದುರೆ ಅಲ್ಲಿಗೇ ಸರಿ. ಇಲ್ಲಿಗೆ ಇಲ್ಲಿಯ ಕುದುರೆಗಳೇ ಬೇಕಲ್ಲವೇ?ದೂರದ ಹಿಮಲಯವನ್ನು ಒಮ್ಮೆ ಹೋಗಿ ನೋಡಿ ಬಂದರೆ, ಅದರ ಎತ್ತರ ಬಿತ್ತರಗಳಿಗೆ ಬೆರಗಾಗಿ ಈಚೆ ಬರುತ್ತೇವಷ್ಟೆ!ಅಲ್ಲಿಯೇ ನಿಲ್ಲುವುದಿಲ್ಲ. ಏನೋ ಕಣ್ಣಿನ ಪಾಪ ಕಳೆಯಲು ಒಮ್ಮೆ ಹೋಗಿ ನೋಡಿ ಬಂದರಾಯಿತು. ನಮ್ಮ ದೇಶದ ವಿಜ್ಞಾನಿಯನ್ನು ಕವಿಗಳನ್ನು ಗುರುತಿಸಲು ನೋಬೆಲ್ ಪ್ರಶಸ್ತಿ ಬೇಕಯಿತು. ಮತ್ತೆ ನಮ್ಮವರೇ ಹೆಮ್ಮೆಯಿಂದ ಅವರು ನಮ್ಮ ದೇಶದವರು ಎಂದು ಹೇಳಿಕೊಂಡರು. ಅಮೇರಿಕಾದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ಬಂದ ಮೇಲೆ ವಿವೇಕಾನಂದರ ಹೆಸರು ನಮ್ಮ ಆದರ್ಶವಾಯಿತು.ಅಂದರೆ ನಮ್ಮ ಜನರ ಹಿರಿಮೆ ಗರಿಮೆಗಳನ್ನು ಗುರುತಿಸಬೇಕಾದ ನಾವು ಮತ್ತೆ ಎಚ್ಚರಗೊಂಡೆವು. ಆದರೆ ವೇದ ಪುರಾಣಗಳನ್ನು ನೋಡಲು ನಮಗೆ ವ್ಯವಧಾನವಿಲ್ಲ. ಕನ್ನಡದ ಶಬ್ದ ಕೋಶ ರಚಿಸಿದ್ದು ವಿದೇಶೀಯರೊಬ್ಬರು. ಆಗ ಅಧಿಕಾರದಲ್ಲಿದ್ದ ಬ್ರಿಟಿಷರ ಮತ ಪ್ರಚಾರಕ್ಕೆ ಅವರಿಗೆ ಕನ್ನಡ ಭಾಷೆ ಕಲಿಯ ಬೇಕಾಯಿತು. ಇಲ್ಲಿ ಊರ್ವಶಿಯ ಶಾಪ ಅರ್ಜುನನಿಗೆ ಭೀಷ್ಮನೆದುರು ನಿಲ್ಲಲು, ಅಜ್ಞಾತ ವಸದಲ್ಲಿ ಬೃಹನ್ನಳೆಯಾಗಿ ನಾಟ್ಯ ಕಲಿಸಲು ಪ್ರಯೋಜನವಾಗಿತ್ತಲ್ಲವೇ?ನಮ್ಮ ಪೂರ್ವಜರಿಂದ ಬಂದ ಬಳುವಳಿಗಳೇ ಬೇಕಷ್ಟಿರುವಾಗ ದೂರದ ಬೆಟ್ಟಗಳ ಕಡೆಗೆ ಬೆಟ್ಟು ಮಾಡುವುದೂ ಮೂರ್ಖತನವಾದರೂ ಗುಣಕ್ಕೆ ಮತ್ಸರವಿದೆಯೇ? ಸರ್ವಜ್ಞರಾಗಬೇಕಾದರೆ ಆತ ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ ಎಂಬಂತೆ ಎಲ್ಲವೂ ನಮ್ಮ ಜ್ಞಾನಾರ್ಜನೆಗೆ ಸಹಾಯಕವಲ್ಲವೇ?
Tuesday, June 12, 2012
ಉಂಡಾಡಿ ಭಟ್ಟ
ಉಂಡಾಡಿ ಭಟ್ಟ
ಉಂಡಾಡಿ ಭಟ್ಟನ ಮೇಲೆ ಕೊಂಡಾಟ ಹೆಚ್ಚಾಗಿ
ಅವನ ಗುಣ ಕೊಂಡಾಡಿದರೆ ಕೋಪ ಬಕ್ಕು ಹೆಚ್ಚಾಗಿ
ಮೊಂಡಾಟ ಹೆಚ್ಚಾಗಿ ಬಡಿವಲೆ ಬಕ್ಕು ಕೋಪಂದಾಗಿ
ಪೈಸೆ ಕೊಟ್ಟರೆ ರಾಜಿ ಮಾಡ್ಯೊಂಡು ಹತ್ತರೆ ಬಕ್ಕು ಹೆಚ್ಚಾಗಿ
ಸಣ್ಣ ಸಣ್ಣ ಮಕ್ಕಳ ಕಂಡರೆ ಓಡ್ಯೊಂಡು ಬಕ್ಕು ಹತ್ತರಾಗಿ
ಪ್ರೀತಿ ಮಾಡ್ಯೊಂಡು ಅಪ್ಪ್ಯೊಂಡು ಹೇಳುಗು ಖುಶಿಯಾಗಿ
ಎಲ್ಯೆಲ್ಲಿ ಊಟ ಇದ್ದರು ಅವಂಗೆ ಶುದ್ದಿ ಸಿಕ್ಕುಗು ಮೇಲಾಗಿ
ಕಂಡೋರತ್ರೆಲ್ಲ ಕೇಳೋಂಡಿಕ್ಕು ಹೋಪಲೆ ಎಲ್ಯಾಗಿ
ಬಂದೋರತ್ರೆ ನಾಳೆಯ ಬಗ್ಗೆ ಕೇಳ್ಯೊಂಡಿಕ್ಕು ಮುಂದಾಗಿ
ಬಂದೋರ ಎಲ್ಲ ಮಾತಾಡ್ಸುತ್ತ ಪರಿಚಯವಿಕ್ಕು ಮೊದಲಾಗಿ
ಎಲ್ಲೋರನ್ನು ಮಾತಾಡ್ಸುಗು ಕಷ್ಟ ಸುಖ ಕೇಳ್ಯೊಂಡು
ಮೊದಲೇ ಅವ ನಮಸ್ಕಾರ ಹೇಳ್ಯೊಂಡು ಬಕ್ಕು
ಮತ್ತೆ ಅವಂಗೇ ನಮಸ್ಕಾರ ಮೊದಲೆ ಹೇಳುತ್ತವು
ಹಾಂಗೆ ಎಲ್ಲೋರಿಂಗೂ ಅವನ ಗುರ್ತವೇ ಇಕ್ಕು
ಊಟಕ್ಕೆ ಬರೆಕು ಹೇಳಿ ಹೇಳಿಕೆಹೇಳ್ಸ್ಯೊಂಡಿಕ್ಕು
ಬಂದರೆ ಸುಧರಿಕೆಯಾಗಿ ಬಳುಸಲೂ ಬಕ್ಕುಊಟಕ್ಕೆ
ಬಂದರೆ ಆರಿಂಗು ಬೇಜಾರಾಗ ಸೇರ್ಸೊಂಗು ಕೂಟಕ್ಕೆ
ಬಯ್ದರೂ ಕೋಪ ಬಾರ ಕೂಡ್ಯೊಂಗು ಎಲ್ಲ ಬಗೆ ಆಟಕ್ಕೆ
ಕಂಡರೆ ಮಾಣಿ ಉಂಡರೆ ಗೋಣಿ ಹತ್ತುಗು ಏಣಿ
ಅಂಡಲೆಯುತಿಕ್ಕು ಉಂಬಲೆ ಎಲ್ಲಾ ಓಣಿ ಓಣಿ
ಊರೆಲ್ಲ ಮನೆ ಅವಂಗೆ ಬೇರಿಲ್ಲೆ ಮನೆ
ಹೋಯ್ಕೊಂಡಿಕ್ಕು ದಿನವೆಲ್ಲ ಮನೆ ಮನೆ
ಎಲ್ಲೋರು ಸೇರಿ ಅವಂಗೊಂದು ಕೂಸಿನ ಹುಡುಕಿ
ಮದುವೆ ಮಾಡಿಕ್ಕುಲೆ ಹೆರಟೇ ಬಿಟ್ಟವು
ಮದುವೆಯಾದರೆ ಸಾಕೊ ಅವು ಇಪ್ಪಲೊಂದು
ಮನೆಯನ್ನೂ ಹುಡುಕಿ ಒಕ್ಕಲೂ ಮಾಡಿದವು
ಮನೆ ಹೊಕ್ಕ ರಜ ಹೊತ್ತಿಂಗೆ ಹೋಗಿತ್ತಿದ್ದವು
ಹತ್ರಾಣ ಮನೆಲಿ ಇಬ್ರುದೆ ಒಟ್ಟಿಂಗೆ ಕೂದು
ತಿಥಿ ಊಟವೇ ಉಂಡುಗೊಂಡಿತ್ತಿದ್ದವು
ಓಟೆಲ್ಲಿ ಹಾಕಿ ಸರ್ತ ಮಾಡಿದರೂ ನಾಯಿ
ಬಾಲ ಡೊಂಕು ಡೊಂಕೇ ಆಗಿಕ್ಕು ಅಲ್ಲದೋ?
ಇನ್ನೂ ಹೇಳಿದರೆ ಕತೆ ಕೇಳುವೋರಿರವು
ಕೇಳಿಗೊಂಡಿದ್ದುದಕ್ಕೆ ನಿಂಗೊಗೆಲ್ಲ ಥೇಂಕ್ಸ್
ಮಾವಿನ ಕಾಯಿ
ಮಾವಿನ ಕಾಯಿ
ಡಿಸೆಂಬರ್ ಬರೆಕ್ಕಾರೇ ಹೆಮ್ಮಕ್ಕೊ ಕೇಳುತ್ತವು
ನಿಂಗಳ ಮರ ಹೂಗು ಹೋಯಿದೋ ಹೇಂಗೆ?
ಜನವರಿ ಬಂದರೆ ಕೇಳೆಡ ಅವರ ಗಡಿಬಿಡಿ
ಕಂಡೋರತ್ರೆಲ್ಲ ಕೇಳುಗು ಮೆಡಿ ಸಿಕ್ಕುಗೋ ಹೇಳಿ
ಒಂದು ಸೇರು ಮೆಡಿಯಾದರೂ ಸಿಕ್ಕಿರೆ ಅವಕ್ಕೆ ಖುಶಿ
ಪೇಟೆಗೆ ಹೋವುತ್ತರೆ ನೆಂಪು ಮಾಡುಗು ಸಂತೆಲ್ಲಿ ಕೇಳುಲೆ
ನಮ್ಮದೆ ಮರಲ್ಲಿದ್ದರೆ ಕೇಳೆಡ ಅವರ ಸಂಭ್ರಮ
ಆದರೆ ಕೊಯ್ಯೆಕ್ಕಾರೆ ಬೇಕು ಮರ ಹತ್ತುವ ಆಳುಗೊ
ಕಾಂಬಲೆ ಸಿಕ್ಕಿದ ಆಳುಗಳತ್ರೆಲ್ಲ ಕೇಳುಗು
ಮೆಡಿ ದೊಡ್ಡದಪ್ಪಂದ ಮದಲೆ ಬುಕ್ ಮಾಡುತ್ತವು
ಆಳುಗಳತ್ತರೆ ಕೊಯ್ವಲೆಡಿಗೋ ಹೇಳಿ
ಕೊಯ್ದಾದ ಮೇಲೆ ಮೆಣಸು ಸಾಸಮೆ ತರೆಕು ಹೇಳಿ
ಗಿರ್ಗಾಣ ಕೊಡುತ್ತವು ಅಂಗ್ಡಿಗೆ ಹೋಪಗ
ಮೆಣಸು ಒಣಗುಸಿ ಹೊಡಿ ಮಾಡುಸೆಕ್ಕು
ಸಾಸಮೆ ಅರಿಶಿ ಒಣಗುಸಿ ಹೊಡಿ ಮಾಡೆಕ್ಕು
ಅವರ ಗೌಜಿಯೋ ಗೌಜಿ ಮನೆಯೋರತ್ರೆ
ಮಕ್ಕಳತ್ರೆ ಮಾತಾಡುಲೇ ಪುರುಸೊತ್ತಿಲ್ಲೆ,
ಆಚೆಮನೆ ಅಕ್ಕನತ್ತರೆ ಶುದ್ದಿ ಮಾತಾಡುವದು
ಅಕ್ಕಂಗೆ ಮೆಣಸು ತಂದದೋ ಹೊಡಿಯೇ ತಂದದೋ?
ಅಕ್ಕಂದ ಮದಲೆ ಉಪ್ಪಿನಕಾಯಿ ಹಾಕೆಕ್ಕು ಹೇಳಿ
ಸೊಕ್ಕು ಬೇರೆ ಈಚೆ ಮನೆ ಅಕ್ಕಂಗೆ
ಸಮಯಕ್ಕೆ ಆಳುಗೊ ಬಾರದ್ರೆ ಮತ್ತೆ ಗಡಿಬಿಡಿ
ಹೋಗಿ ದಿನಗೇಳದ್ದಕ್ಕೆ ಮತ್ತೆ ಸಿಡಿಮಿಡಿ
ನಮಗೆ ಮಾಂತ್ರ ಕೊಯ್ದಾಗದ್ದೆ ಮಾವಿನ ಮಿಡಿ
ನಿತ್ಯ ಸಿಕ್ಕುಗು ಬೈಗಳ ಮುಡಿ ಮುಡಿ
ನಾವೇ ಮರ ಹತ್ತಿ ಕೊಯ್ದರೆ ಸಿಕ್ಕುಗು ನಮಗೆ
ಅವರ ಹೊಗಳಿಕೆಯ ಮಾತು ಅಡಿಗಡಿ
ಕಾಯಿ ಬೆಳದರೆ ಮತ್ತೆ ಕೆತ್ತಿ ಉಪ್ಪಿನ ಕಾಯಿ
ಹಸಿ ಕೆತ್ತೆ ಬೇರೆ ಬೇಯಿಸಿದ ಕೆತ್ತೆ ಬೇರೆ,
ಇಡಿಕಾಯಿಯೂ ಇದ್ದು, ತಿಂಬಲೆ ಕೊಶಿ ಅವುತ್ತು,
ಕೆತ್ತೆ ತಿಂದು ನೀರು ಕುಡುದರೆ ಹೊಟ್ಟೆ ತುಂಬುಗು,
ಕೆಪ್ಪಟೆ ಕೆತ್ತೆ ಎರಡು ತುಂಡು ಮಾಡೆಕ್ಕು,
ಕರೆ ಕೆತ್ತೆ ಹಾಂಗೇ ಇದ್ದರೆ ಸಾಕು
ಗೊರಟು ಮಾಂತ್ರ ಆರಿಂಗು ಬೇಡ
ಕೋಗಿಲೆ ತಿಂಬಲೆ ತುಂಬ ಕೊಶಿ
ಮಿಡಿ ತಿಂದರು ಅಕ್ಕು, ಮಜ್ಜಿಗೆ ಕೂಡುಸಿ ಉಂಡರೆ
ಬೇರೆ ಬೆಂದಿ ಗಿಂದಿ ಒಂದುದೆ ಬೇಡ,ಅದಕ್ಕೆ ಹೆಮ್ಮಕ್ಕೊ
ಊಟಕ್ಕಿಲ್ಲದ್ದ ಉಪ್ಪಿಕಾಯಿ ಹೇಳುತ್ತವು
ಹೊತ್ತಿಂಗೆ ಬಂದರೆ ಊಟ ಯಾವಾಗಳೊ ಬಂದರೆ
ಎಂತಗೆ ಊಟ ಕೊಡೆಕ್ಕು?ಅಪ್ಪೆ ಮಿಡಿ ಈಗ
ಸಿಕ್ಕುವದೆ ಕಷ್ಟ ಆದರೆ ಅದರ ರುಚಿ ಅದಕ್ಕೇ ಸರಿ
ಹಣ್ಣಿನ ರಸಾಯನ ಗ್ರೇಶುವಗ ಜೊಲ್ಲು ಸುರಿ
ಕಾಟು ಹಣ್ಣಿನ ಸಾಸಮೆ ಇದ್ದರೆ ಉಂಬಗ ಸುರಿ
ಹಣ್ಣಿ ಕಾಲ ಮುಗುದರೆ ತಿಂಬಲಕ್ಕು ಮಾಂಬ್ಳ
ಅಂತು ಮಾವಿನ ಮರಂದ ಸಂತೋಷದ ಚೊರಿ
ಡಿಸೆಂಬರ್ ಬರೆಕ್ಕಾರೇ ಹೆಮ್ಮಕ್ಕೊ ಕೇಳುತ್ತವು
ನಿಂಗಳ ಮರ ಹೂಗು ಹೋಯಿದೋ ಹೇಂಗೆ?
ಜನವರಿ ಬಂದರೆ ಕೇಳೆಡ ಅವರ ಗಡಿಬಿಡಿ
ಕಂಡೋರತ್ರೆಲ್ಲ ಕೇಳುಗು ಮೆಡಿ ಸಿಕ್ಕುಗೋ ಹೇಳಿ
ಒಂದು ಸೇರು ಮೆಡಿಯಾದರೂ ಸಿಕ್ಕಿರೆ ಅವಕ್ಕೆ ಖುಶಿ
ಪೇಟೆಗೆ ಹೋವುತ್ತರೆ ನೆಂಪು ಮಾಡುಗು ಸಂತೆಲ್ಲಿ ಕೇಳುಲೆ
ನಮ್ಮದೆ ಮರಲ್ಲಿದ್ದರೆ ಕೇಳೆಡ ಅವರ ಸಂಭ್ರಮ
ಆದರೆ ಕೊಯ್ಯೆಕ್ಕಾರೆ ಬೇಕು ಮರ ಹತ್ತುವ ಆಳುಗೊ
ಕಾಂಬಲೆ ಸಿಕ್ಕಿದ ಆಳುಗಳತ್ರೆಲ್ಲ ಕೇಳುಗು
ಮೆಡಿ ದೊಡ್ಡದಪ್ಪಂದ ಮದಲೆ ಬುಕ್ ಮಾಡುತ್ತವು
ಆಳುಗಳತ್ತರೆ ಕೊಯ್ವಲೆಡಿಗೋ ಹೇಳಿ
ಕೊಯ್ದಾದ ಮೇಲೆ ಮೆಣಸು ಸಾಸಮೆ ತರೆಕು ಹೇಳಿ
ಗಿರ್ಗಾಣ ಕೊಡುತ್ತವು ಅಂಗ್ಡಿಗೆ ಹೋಪಗ
ಮೆಣಸು ಒಣಗುಸಿ ಹೊಡಿ ಮಾಡುಸೆಕ್ಕು
ಸಾಸಮೆ ಅರಿಶಿ ಒಣಗುಸಿ ಹೊಡಿ ಮಾಡೆಕ್ಕು
ಅವರ ಗೌಜಿಯೋ ಗೌಜಿ ಮನೆಯೋರತ್ರೆ
ಮಕ್ಕಳತ್ರೆ ಮಾತಾಡುಲೇ ಪುರುಸೊತ್ತಿಲ್ಲೆ,
ಆಚೆಮನೆ ಅಕ್ಕನತ್ತರೆ ಶುದ್ದಿ ಮಾತಾಡುವದು
ಅಕ್ಕಂಗೆ ಮೆಣಸು ತಂದದೋ ಹೊಡಿಯೇ ತಂದದೋ?
ಅಕ್ಕಂದ ಮದಲೆ ಉಪ್ಪಿನಕಾಯಿ ಹಾಕೆಕ್ಕು ಹೇಳಿ
ಸೊಕ್ಕು ಬೇರೆ ಈಚೆ ಮನೆ ಅಕ್ಕಂಗೆ
ಸಮಯಕ್ಕೆ ಆಳುಗೊ ಬಾರದ್ರೆ ಮತ್ತೆ ಗಡಿಬಿಡಿ
ಹೋಗಿ ದಿನಗೇಳದ್ದಕ್ಕೆ ಮತ್ತೆ ಸಿಡಿಮಿಡಿ
ನಮಗೆ ಮಾಂತ್ರ ಕೊಯ್ದಾಗದ್ದೆ ಮಾವಿನ ಮಿಡಿ
ನಿತ್ಯ ಸಿಕ್ಕುಗು ಬೈಗಳ ಮುಡಿ ಮುಡಿ
ನಾವೇ ಮರ ಹತ್ತಿ ಕೊಯ್ದರೆ ಸಿಕ್ಕುಗು ನಮಗೆ
ಅವರ ಹೊಗಳಿಕೆಯ ಮಾತು ಅಡಿಗಡಿ
ಕಾಯಿ ಬೆಳದರೆ ಮತ್ತೆ ಕೆತ್ತಿ ಉಪ್ಪಿನ ಕಾಯಿ
ಹಸಿ ಕೆತ್ತೆ ಬೇರೆ ಬೇಯಿಸಿದ ಕೆತ್ತೆ ಬೇರೆ,
ಇಡಿಕಾಯಿಯೂ ಇದ್ದು, ತಿಂಬಲೆ ಕೊಶಿ ಅವುತ್ತು,
ಕೆತ್ತೆ ತಿಂದು ನೀರು ಕುಡುದರೆ ಹೊಟ್ಟೆ ತುಂಬುಗು,
ಕೆಪ್ಪಟೆ ಕೆತ್ತೆ ಎರಡು ತುಂಡು ಮಾಡೆಕ್ಕು,
ಕರೆ ಕೆತ್ತೆ ಹಾಂಗೇ ಇದ್ದರೆ ಸಾಕು
ಗೊರಟು ಮಾಂತ್ರ ಆರಿಂಗು ಬೇಡ
ಕೋಗಿಲೆ ತಿಂಬಲೆ ತುಂಬ ಕೊಶಿ
ಮಿಡಿ ತಿಂದರು ಅಕ್ಕು, ಮಜ್ಜಿಗೆ ಕೂಡುಸಿ ಉಂಡರೆ
ಬೇರೆ ಬೆಂದಿ ಗಿಂದಿ ಒಂದುದೆ ಬೇಡ,ಅದಕ್ಕೆ ಹೆಮ್ಮಕ್ಕೊ
ಊಟಕ್ಕಿಲ್ಲದ್ದ ಉಪ್ಪಿಕಾಯಿ ಹೇಳುತ್ತವು
ಹೊತ್ತಿಂಗೆ ಬಂದರೆ ಊಟ ಯಾವಾಗಳೊ ಬಂದರೆ
ಎಂತಗೆ ಊಟ ಕೊಡೆಕ್ಕು?ಅಪ್ಪೆ ಮಿಡಿ ಈಗ
ಸಿಕ್ಕುವದೆ ಕಷ್ಟ ಆದರೆ ಅದರ ರುಚಿ ಅದಕ್ಕೇ ಸರಿ
ಹಣ್ಣಿನ ರಸಾಯನ ಗ್ರೇಶುವಗ ಜೊಲ್ಲು ಸುರಿ
ಕಾಟು ಹಣ್ಣಿನ ಸಾಸಮೆ ಇದ್ದರೆ ಉಂಬಗ ಸುರಿ
ಹಣ್ಣಿ ಕಾಲ ಮುಗುದರೆ ತಿಂಬಲಕ್ಕು ಮಾಂಬ್ಳ
ಅಂತು ಮಾವಿನ ಮರಂದ ಸಂತೋಷದ ಚೊರಿ
ಹಲಸಿನ ಹಣ್ಣು
ಹಲಸಿನ ಹಣ್ಣು
ರುಚಿ ರುಚಿಯಾದ ಹಲಸಿನ ಹಣ್ಣು
ಮರದ ಮೇಲೆ ನಮ್ಮ ಕಣ್ಣು
ಬೆಳದು ಹಣ್ಣಾದರೆ ಮಾತ್ರ
ಅದರ ಪಾಯಸ ಉಣ್ಣು
ಕೊಟ್ಟಿಗೆ ಮಾಡಿದರೆ ಮಾತ್ರ ಕೇಳೆಡ ಅದರ ರುಚಿ
ಮುರುದು ತಿಂದಷ್ಟು ಸಾಲ ನಾಲಗ್ಗೆ ಅದರ ರುಚಿ
ಗೆಣಸಲೆಯಾದರೆ ಕೊಟ್ಟಿಗೆ ಬೇಡ ಅದು ಮತ್ತೂ ರುಚಿ
ಮೂಗಿನ ವರೆಗೆ ತಿಂದರೂ ಹೋಗ ಅದರ ರುಚಿ.
ಹಲಸಿನ ದೋಸೆ ಜೇನು ಕೂಡಿ ತಿಂಬಲೆ ಆಸೆ
ಹಸ್ಸಿ ಮಾಡ್ಯೊಂಡಿತ್ತು ಆಚೆ ಮನೆ ಕೂಸೆ
ಕಾಯಿ ಮಾಂತ್ರ ಬೆಳೆದರೆ ಮಾಂತ್ರ ದೋಸೆ
ರುಚಿ ರುಚಿಯಾಗಿ ತಿಂದು ಎಳವಲಕ್ಕು ಮೀಸೆ
ಕಾಯಿ ಸೊಳೆ ಒಣಗುಸಿದರೂ ಮಳೆಗಾಲಕ್ಕೆ ಅಕ್ಕು
ಬೊದುಲ್ಲೆ ಹಾಕಿ ಕಡೆದರುದೆ ದೋಸೆ ಮಾಡಲಕ್ಕು
ರುಚಿ ಮಾಂತ್ರ ಹಲಸಿನ ಕಾಯಿ ದೋಸೆದೇ ಇಕ್ಕು
ಹಲಸಿನ ಕಾಯಿ ಸಿಕ್ಕದ್ದಿಪ್ಪಗ ರುಚಿ ರುಚು ಅಕ್ಕು
ಹಸಿ ಸೊಳೆ ಸಿಗುದು ಹೊರುದರದುವೇ ಕುರ್ ಕುರೇ
ಸೊಳೆ ಬೇಶಿ ಕಡೆದರೆ ಮಾಡುಲಕ್ಕು ಹಪ್ಪಳ
ಒಣಗಿ ಸಿಕ್ಕಿದರೆ ಮಳೆಗಾಲಲ್ಲಿ ಹೊರುದು ತಿಂಬಲಕ್ಕು
ಉಪ್ಪು ಮೆಣಸು ಸೇರಿಸಿದರೆ ಅದರ ಹಿಟ್ಟಿಂಗೆ
ಊಟಕ್ಕೆ ಉಪ್ಯೋಗವಕ್ಕು ಕೂಡುಸುಲೆ ಒಟ್ಟಿಂಗೆ
ಹಣ್ಣಿನ ತಿಂದು ಬೊಡುದು ಮಾಡಿದವಡೊ ಪೆರಟಿ
ಪೆರಟಿ ಕಾಸುಲೆ ಬಕ್ಕೆ ತುಳುವ ಭೇದ ಇಲ್ಲೆಡೊ
ಒಟ್ಟಿಂಗೆ ಕಾಸಿ ಮಡುಗಿದರೆ ಮಳೆಗಾಲಲ್ಲಿ ತಿಂಬಲಕ್ಕು
ಪೆರಟಿ ಪಾಯಸ ಪೆರಟಿ ದೋಸೆ,ಪೆರಟಿ ಮುಳ್ಕ
ಸಾಂತಾಣಿ ತಿಂಬಲೆ ಮಳೆಗಾಲ ಬರೆಕಡೊ
ಬೇಳೇ ಹೋಳಿಗೆ ತಿಂಬಲೆ ರುಚಿರುಚಿ
ಅದ್ದಿಟ್ಟಿಲ್ಲಿ ಹಾಕಿ ಬೇಶಿದರೆ ಕೂಡ ಸಾಕು
ಬೇಳೆ ಸೌತೆ ಬೆಂದಿ ಮಳೆಗಾಲದ ಸುಲಭ ತರಕಾರಿ.
ಉಪ್ಪಿಲ್ಲಿ ಹಾಕಿದ ಸೊಳೆ ತೆಗವದು ಮಳೆಗಾಲಲ್ಲಿ
ಸೊಳೆ ಬೆಂದಿ ಉಪ್ಪು ಬಿಡುಸಿ ಮಾಡೆಕ್ಕು
ಉಂಡ್ಳಕಾಳು ಮಾಡ್ಲೆ ಕಷ್ಟ ಇದ್ದರೂ
ಕೂದು ತಿಂಬಲೆ ಎಲ್ಲೋರಿಂಗೂ ಖುಶಿ
ರುಚಿ ರುಚಿಯಾದ ಹಲಸಿನ ಹಣ್ಣು
ಮರದ ಮೇಲೆ ನಮ್ಮ ಕಣ್ಣು
ಬೆಳದು ಹಣ್ಣಾದರೆ ಮಾತ್ರ
ಅದರ ಪಾಯಸ ಉಣ್ಣು
ಕೊಟ್ಟಿಗೆ ಮಾಡಿದರೆ ಮಾತ್ರ ಕೇಳೆಡ ಅದರ ರುಚಿ
ಮುರುದು ತಿಂದಷ್ಟು ಸಾಲ ನಾಲಗ್ಗೆ ಅದರ ರುಚಿ
ಗೆಣಸಲೆಯಾದರೆ ಕೊಟ್ಟಿಗೆ ಬೇಡ ಅದು ಮತ್ತೂ ರುಚಿ
ಮೂಗಿನ ವರೆಗೆ ತಿಂದರೂ ಹೋಗ ಅದರ ರುಚಿ.
ಹಲಸಿನ ದೋಸೆ ಜೇನು ಕೂಡಿ ತಿಂಬಲೆ ಆಸೆ
ಹಸ್ಸಿ ಮಾಡ್ಯೊಂಡಿತ್ತು ಆಚೆ ಮನೆ ಕೂಸೆ
ಕಾಯಿ ಮಾಂತ್ರ ಬೆಳೆದರೆ ಮಾಂತ್ರ ದೋಸೆ
ರುಚಿ ರುಚಿಯಾಗಿ ತಿಂದು ಎಳವಲಕ್ಕು ಮೀಸೆ
ಕಾಯಿ ಸೊಳೆ ಒಣಗುಸಿದರೂ ಮಳೆಗಾಲಕ್ಕೆ ಅಕ್ಕು
ಬೊದುಲ್ಲೆ ಹಾಕಿ ಕಡೆದರುದೆ ದೋಸೆ ಮಾಡಲಕ್ಕು
ರುಚಿ ಮಾಂತ್ರ ಹಲಸಿನ ಕಾಯಿ ದೋಸೆದೇ ಇಕ್ಕು
ಹಲಸಿನ ಕಾಯಿ ಸಿಕ್ಕದ್ದಿಪ್ಪಗ ರುಚಿ ರುಚು ಅಕ್ಕು
ಹಸಿ ಸೊಳೆ ಸಿಗುದು ಹೊರುದರದುವೇ ಕುರ್ ಕುರೇ
ಸೊಳೆ ಬೇಶಿ ಕಡೆದರೆ ಮಾಡುಲಕ್ಕು ಹಪ್ಪಳ
ಒಣಗಿ ಸಿಕ್ಕಿದರೆ ಮಳೆಗಾಲಲ್ಲಿ ಹೊರುದು ತಿಂಬಲಕ್ಕು
ಉಪ್ಪು ಮೆಣಸು ಸೇರಿಸಿದರೆ ಅದರ ಹಿಟ್ಟಿಂಗೆ
ಊಟಕ್ಕೆ ಉಪ್ಯೋಗವಕ್ಕು ಕೂಡುಸುಲೆ ಒಟ್ಟಿಂಗೆ
ಹಣ್ಣಿನ ತಿಂದು ಬೊಡುದು ಮಾಡಿದವಡೊ ಪೆರಟಿ
ಪೆರಟಿ ಕಾಸುಲೆ ಬಕ್ಕೆ ತುಳುವ ಭೇದ ಇಲ್ಲೆಡೊ
ಒಟ್ಟಿಂಗೆ ಕಾಸಿ ಮಡುಗಿದರೆ ಮಳೆಗಾಲಲ್ಲಿ ತಿಂಬಲಕ್ಕು
ಪೆರಟಿ ಪಾಯಸ ಪೆರಟಿ ದೋಸೆ,ಪೆರಟಿ ಮುಳ್ಕ
ಸಾಂತಾಣಿ ತಿಂಬಲೆ ಮಳೆಗಾಲ ಬರೆಕಡೊ
ಬೇಳೇ ಹೋಳಿಗೆ ತಿಂಬಲೆ ರುಚಿರುಚಿ
ಅದ್ದಿಟ್ಟಿಲ್ಲಿ ಹಾಕಿ ಬೇಶಿದರೆ ಕೂಡ ಸಾಕು
ಬೇಳೆ ಸೌತೆ ಬೆಂದಿ ಮಳೆಗಾಲದ ಸುಲಭ ತರಕಾರಿ.
ಉಪ್ಪಿಲ್ಲಿ ಹಾಕಿದ ಸೊಳೆ ತೆಗವದು ಮಳೆಗಾಲಲ್ಲಿ
ಸೊಳೆ ಬೆಂದಿ ಉಪ್ಪು ಬಿಡುಸಿ ಮಾಡೆಕ್ಕು
ಉಂಡ್ಳಕಾಳು ಮಾಡ್ಲೆ ಕಷ್ಟ ಇದ್ದರೂ
ಕೂದು ತಿಂಬಲೆ ಎಲ್ಲೋರಿಂಗೂ ಖುಶಿ
ಅಮೇರಿಕದಲ್ಲಿ ಕನ್ನಡಿಗರು ಆಚರಿಸಿದ ಯುಗಾದಿ
CªÉÄÃjPÁzÀ°è PÀ£ÀßrUÀgÀÄ DZÀj¹zÀ 0iÀÄÄUÁ¢
«zÉñÀUÀ¼À°è GzÉÆåÃUÀ ºÀÄqÀÄQPÉÆAqÀÄ ºÉÆÃzÀªÀgÀÄ
¨ÉÃgÉ zÉñÀUÀ¼À°è GzÉÆåÃUÀ VnÖ¹ ªÀi0iÀiÁðzɬÄAzÀ §zÀÄPÀÄ ¸ÁV¸ÀÄwÛzÁÝgÉ. £ÀªÀÄä
¸ÀtÚ ªÀÄUÀ£ÀÆ CªÉÄÃjPÁzÀ
¦ü®qÉ°á0iÀiÁzÀ°è ¸ÀéAvÀ ªÀÄ£É ªÀiÁrPÉÆAqzÀÄÝzÀjAzÀ £ÁªÀÇ ¦ü®qÉ°á0iÀiÁPÉÌ
§A¢zÉݪÀÅ.ºÁUÉ £ÀªÀÄUÉE°è0iÀÄ d£ÀgÀÄ DZÀj¹zÀ 0iÀÄÄUÁ¢0iÀÄ£ÀÄß £ÉÆÃqÀ®Ä
¸ÁzsÀåªÁ¬ÄvÀÄ. E°è0iÀÄ MAzÀÄ «±ÉõÀªÉAzÀgÉ £ÀªÀÄä zÉñÀzÀ°èzÀÝAvÉ eÁvÀåwÃvÀ JA§
£ÁªÀÄ ¥sÀ®PÀ EvÀgÀ zÉñÀUÀ¼À°è PÁtĪÀÅ¢®è. CªÀgÀªÀgÀ zsÀªÀiÁðZÀgÀuÉUÀ¼À£ÀÄß
DZÀj¸ÀĪÀÅzÀPÉÌ E°è ¤§ðAzsÀUÀ½®è. zsÁ«ÄðPÀ ºÀ§âUÀ¼À£ÀÄß MmÁÖV ¸ÉÃj
DZÀj¸ÀĪÀÅzÀPÉÌ ¸ÀgÀPÁgÀzÉÆÝà E°è0iÀÄ d£ÀvÉ0iÀÄzÉÆÝà «gÉÆÃzsÀ
PÁtĪÀÅ¢®è.UÀuÉñÀ ZÀvÀÄyð, 0iÀÄÄUÁ¢ ªÉÆzÀ¯ÁzÀ ºÀ§âUÀ¼À£ÀÄß ¸ÀܽÃ0iÀÄgÉ®è
MlÄÖUÀÆr DZÀj¸ÀÄvÁÛgÉ. ªÀiÁvÀȨsÁµÉ0iÀÄ£ÀÄß E°è §AzÀªÀgÀÄ ªÀÄgÉw®è. PÀ£ÀßrUÀgÀÄ
ºÉaÑgÀĪÀ ¥ÀæzÉñÀUÀ¼À°è £ÀªÀ
ªÀµÁðZÀgÀuÉ0iÀÄ£ÀÄß «dÈA¨sÀuɬÄAzÀ DZÀj¸ÀĪÀÅzÀ£ÀÄß £ÉÆÃqÀĪÀ ¨sÁUÀå E°èUÉ
¸ÀAzÀ±Àð£ÀPÁÌV §AzÀ £ÀªÀÄUÉÆzÀVvÀÄ. J¦æ¯ï 28£Éà vÁjÃQ£ÀAzÀÄ £Á«gÀĪÀ ªÀÄ£É0iÀÄ
¸À«ÄÃ¥ÀªÉà F ¸ÀªÀiÁgÀA¨sÀ £ÀqɬÄvÀÄ.¸ÀªÀiÁgÀA¨sÀ MAzÀÄ ±Á¯É0iÀÄ°è
£ÀqɸÀĪÀÅzÉAzÀÄ ªÀåªÀ¸ÉÜ0iÀiÁVvÀÄÛ. »ÃUÉ MAzÀÄ PÀ£ÀßqÀ ¸ÀAWÀªÀ£ÀÄß PÀnÖPÉÆAqÀÄ
E¢ÃUÀ §gÉà LzÀÄ ªÀµÀð ªÀiÁvÀæªÁVvÁÛzÀgÀÆ F ªÀµÀð E£ÀÆßgÀPÀÆÌ ºÉZÀÄÑ d£À
¸ÉÃjzÀÝgÀÄ. ªÀiÁvÀæªÀ®è Cwy PÀ¯Á«zÀgÁV ¹º PÀ» ZÀAzÀÄæ §¼ÀUÀªÀ£ÀÆß
PÀgɹPÉÆArzÀÄÝzÀjAzÀ CzÀPÉÆÌAzÀÄ PÀ¼É §A¢vÀÄÛ. £ÀªÀÄÆäj¤AzÀ §AzgÀĪÀ PÀ£ÀßqÀ
§¼ÀUÀªÀ£ÀÄß £ÉÆÃqÀĪÀ D¸ÀQÛ d£ÀjVvÀÄÛ.
¨sÁUÀªÀ»¸ÀĪÀ PÀÄlÄA§zÀªÀgÀÄ
MAzÀµÀÄÖ ¥ÀæªÉñÀ zsÀ£À ªÀÄvÀÄÛ ¸ÀAWÀzÀ ¸ÀzÀ¸ÀåvÀ£ÀPÉÌAzÀÄ 25 qÁ®gï
PÉÆqÀ¨ÉÃQvÀÄÛ. CªÀgÀªÀgÀ ªÀÄ£É0iÀÄ°è vÀ0iÀiÁj¹zÀ ¥ÀzÁxÀðUÀ¼À£ÀÄß ªÀÄzsÁåºÀßzÀ
HlPÉÌAzÀÄ vÀgÀ¨ÉÃQvÀÄÛ. MAzÀƪÀgÉ WÀAmÉUÉ J®ègÀÆ ¸ÉÃjzÀÝgÀÄ. ªÉÆzÀ®Ä HlzÀ
ªÀåªÀ¸ÉÜ. HlzÀ ¥ÉnÖUÉUÀ¼À°è C£Àß,ªÉƸÀgÀ£Àß,¥À®å,¸ÁA¨Ágï ZÀ¥Áw
ªÉÆzÀ¯ÁzÀªÀÅUÀ¼À£ÀÄß vÀÄA©¹ mÉÆÃPÀ£ï vÉÆÃj¸zÀªÀjUÉ Hl PÉÆqÀÄwÛzÀÝgÀÄ. ªÀÄPÀ̽UÉ
¦¸ÁÓ ¨ÉÃgÉ EvÀÄÛ.JgÀqÀÄ UÀAmÉUɯÁè Hl ªÀÄÄV¬ÄvÀÄ. ¹» PÀ» ZÀAzÀÄæ §¼ÀUÀzÀ°è
CªÀgÀÄ,CªÀgÀ ªÀÄqÀ¢ VÃvÁ, ªÀÄUÀ¼ÀÄ »vÀ, ²æãÁxï PÀ±Àå¥ï, ªÀÄvÉÛ 0iÀÄA 0iÀĸï
ªÀÄÆwð »ÃUÉ LzÀÄ d£ÀjzÀÝgÀÄ. £ÀÆå eɹð0iÀÄ°è PÁ0iÀÄðPÀæªÀÄ ªÀÄÄV¹ E°èUÉ
§A¢zÀÝgÀÄ. CªÀgÀÄ JgÀqÀÄ wAUÀ¼ÀÄ CªÉÄÃjPÀzÀ°è0iÉÄà EzÀÄÝ,««zsÀ PÁ0iÀÄðPÀæªÀÄUÀ¼À°è
¥À®ÄUÉƼÀÄîªÀÅzÀ®èzÉ,ZÀAzÀÄægÀªÀgÀ ¨ÉÆA¨Ámï HlzÀ ¥ÁPÀzÀ «±ÉõÀ
PÁ0iÀÄðPÀæªÀÄUÀ¼À£ÀÄß ¹Ãj0iÀįï UÀ¼ÁVºÀ«ÄäPÉÆArzÀÝgÀÄ.CªÀgÀÄ §AzÀÄzÀÄ
¸ÀªÉÄäüÀ£ÀPÉÆÌAzÀÄ PÀ¼É0iÉÄÃjvÀÄÛ.Hl ªÀÄÄVzÀÄ ªÀÄÆgÀÄ UÀAmÉUÉ ªÀÄPÀ̼À
zÉÆqÀتÀgÀ qÁ£ïì UÀ¼ÀÄ,ºÁqÀÄUÀ¼ÀÄ,£ÁlPÀUÀ¼ÀÄ DgÀA¨sÀªÁzÀĪÀÅ.
¥ÀÅgÀAzÀgÀ
zÁ¸ÀgÀ PÀvÉ0iÀÄ£ÀÄß DzsÀj¹,MAzÀÄ ¸ÀÄAzÀgÀªÁzÀ £ÀÈvÀå gÀÆ¥ÀPÀªÀ£ÀÄߧºÀ¼À ZÉ£ÁßV
Dr vÉÆÃj¹zÀgÀÄ. PÀ£Àßrw0iÉÆçâgÀÄ E°è
¸ÀAVÃvÀ qÁ£ïì UÀ¼À£ÀÄß ªÀÄPÀ̽UÉ PÀ°¸ÀÄwÛzÁÝgÉ. CªÀgÉà ¸ÀévÀB C©ü£À¬Ä¹ ¤ævÀå
gÀÆ¥ÀPÀªÀ£ÀÄß ,£Á®ÄÌ ªÀiÁ«ÄÝ ¸ÀtÚ ªÀÄPÀ̼ÀÄ,ªÀÄvÀÄÛ DgÀÄ ªÀÄA¢ zÉÆqÀتÀgÀÄ
EzÀgÀ°è ¨sÁUÀªÀ»¹zÀÄÝ §ºÀ¼À PÉ®ªÀÅ
ºÁqÀÄUÀ½UÉ ªÀÄ£ÉÆÃdÕªÁV C©ü£À¬Ä¹ ¥ÉæÃPÀëPÀgÀ£ÀÄß gÀAf¹zÀgÀÄ. gÁªÀÄ JA§ÄªÀ
JgÀqÀPÀëgÀzÀ ªÀÄ»ªÉÄ0iÀÄ JA§ ºÁrUÉE§âgÀÄ ¨sÀQÛ ¥ÀÅgÀ¸ÀìgÀªÁV C©ü£À¬ÄzÀgÀÄ.
vÁgÀPÀÌ ©A¢UÉ £Áªï ¤ÃjUÉ ºÉÆÃUÀĪÀ JAzÀÄ ºÉüÀÄwÛzÁÝUÀ ¸À¨sɬÄAzÀ JzÀÄÝ
CªÀgÉÆA¢UÉ PÀÄtÂ0iÀÄĪÀÅzÉÆà JAzÀÄ 0iÉÆÃa¹gÀ¨ÉÃPÀÄ.ªÀÄvÉÛ gÀAUÀ£ÀÄ gÀAUÀ
¥ÀæªÉñÀ ªÀiÁr,ºÁ« vÀ¯É0iÀÄ ªÉÄÃ¯É PÀÄtÂzÀÄzÀ£Éßà £ÉÆÃqÀÄwÛzÉÝêÉÇà JA§AvÉ
DrzÀ£ÉÆà gÀAUÀ ºÁqÀ£ÀÄß ¥ÀÇwð0iÀiÁV
C©ü£À¬Ä¹zÀgÀÄ.
10£É0iÀÄ vÀgÀUÀw0iÀÄ°è ¨Á¯É0iÉƧâ¼ÀÄ, ªÀÄÄzÀÄÝ vÁgÉÆà JA§ ºÁqÀÄ, ªÀÄvÀÄÛ ¯Á°¹zÀ¼ÀÄ
ªÀÄUÀ£À JA§ ºÁqÀ£ÀÄß E£ÉÆߧâ¼ÀÄ ºÀÄqÀÄV »ÃUÉ gÀ¹PÀgÀ ªÀÄ£À gÀAf¹zÀgÀÄ.E£ÀÄß ‘ZÀAzÀæ ZÀÆqÀ ²ªÀ ±ÀAPÀgÀ’ ºÁrUÉ ªÀÄvÀÄÛ PÉÆ£ÉUÉ
¨sÁUÀåzÀ ®Që÷ä ¨ÁgÀªÀÄä JA§ ºÁrUÉ MlÄÖ ºÀvÀÄÛ ªÀÄA¢ ¨Á¯É0iÀÄgÀÄ »ÃUÉ §AzÀªÀgÀ
ªÉÄʪÀÄ£À ¥ÀżÀQvÀUÉƼÀÄîªÀAvÉ gÀAf¹zÀgÀÄ. E£ÀÄß PÉ®ªÀgÀÄ EA¥ÁV ºÁqÀĪÀÅzÀgÀ
ªÀÄÆ®PÀ ¥ÉæÃPÀëPÀgÀ ªÀÄ£À ¸ÀÆgÉUÉÆAqÀgÀÄ. aPÀÌ ªÀÄPÀ̽AzÀ MAzÀÄ avÀæ VÃvÉUÉ
ªÀÄÄzÁÝV PÀÄtÂ0iÀÄĪÀÅzÀgÀ ªÀÄÆ®PÀ zÉÆqÀتÀjUÉ £ÁªÉãÀÆ ©nÖ®è JA§AvÉ
£Àwð¹zÀgÀÄ.
MAzÀÄ ®WÀÄ
ºÁ¸Àå £ÁlPÀ PÉ®ªÀÅ 0iÀÄĪÀ UɼÉ0iÀÄjAzÀ C©ü£À¬Ä¸À®ànÖvÀÄ. EAf¤Ã0iÀÄgï M§â L n
¥ÁPïð ªÀiÁqÀĪÀÅzÉAzÀÄ ºÉÆgÀlÄ EzÀÝ PÀȶ ¨sÀÄ«Ä0iÀÄ£ÀÄß ªÀiÁj PÉÊ ¸ÀÄlÄÖPÉÆAqÀ
¸ÀAUÀw0iÀÄ£ÁßzsÀj¹ ¸ÀÄAzÀgÀªÁV ªÀÄ£À ªÀÄÄlÄÖªÀAvÉ C©ü£À¬Ä¹zÀgÀÄ.
ªÀÄzsÀåzÀ¯ÉÆèªÉÄä
«gÁªÀÄ«vÀÄÛ. EµÁÖUÀĪÁUÀ¯Éà PÀvÀÛ¯É0iÀiÁVzÀÄÝ ºÉÆgÀUÉ §AzÁUÀ¯Éà UÉÆvÁÛ¬ÄvÀÄ. «gÁªÀÄ
ªÉüÉ0iÀÄ°è,£ÀªÀÄUÉ PÁ¦ü, ZÁ ¹QÌvÀÄ. ªÀÄzsÀåAvÀgÀ «gÁªÀÄ ªÉÃ¼É ªÀÄÄVzÀÄ
CwyUÀ¼ÁV §AzÀ ¹» PÀ» ZÀAzÀÄæ §¼ÀUÀ¢AzÀ PÁ0iÀÄðPÀæªÀÄ DgÀA¨sÀªÁ¬ÄvÀÄ. ªÉÆzÀ°UÉ
ZÀAzÀÄæ vÀªÀÄä ªÉÆzÀ® ¨sÁµÀtzÀ°è CªÀgÉ®ègÀ ¥ÀjZÀ0iÀÄ ºÉýzÀgÀÄ. ºÁ¸Àå ¯ÉÃRPÀgÀÆ
vÀªÀÄä ªÀiÁv£AzÀ gÀ¹PÀgÀ d£À ªÀiÁ£À¸ÀªÀ£ÀÄß ¸ÀÆgÉUÉÆAqÀ 0iÀÄA 0iÀÄ¸ï ªÀÄÆwð0iÀĪÀ vÀªÀÄä ¨ÉÃAPï
GzÉÆåÃUÀ PÁ®zÀ°è ºÀ½î d£ÀgÀ MqÀ£ÁlzÀ°è ¥ÀqÉzÀ C£ÀĨsÀªÀªÀ£ÀÄß ºÁ¸ÀåªÀÄ0iÀĪÁV
«ªÀj¹zÀÄÝ ¸ÉÃjzÀªÀgÀÄ ºÉÆmÉÖ ºÀÄuÁÚUÀĪÀAvÉ £ÀUÀ®Ä PÁgÀtªÁ¬ÄvÀÄ. ¯ÉÃRPÀgÀÄ
C£ÉÃPÀ ºÁ¸Àå §gÀºÀUÀ¼ÀļÀî LªÀvÀÛPÀÆÌ ºÉZÀÄÑ ¥ÀŸÀÛPÀUÀ¼À£ÀÄß. r « rUÀ¼À£ÀÄß ©qÀÄUÀqÉUÉƽ¹zÁÝgÉ
JA§ÄzÀ£ÀÄß ºÉýzÀgÀÄ. n « ¹Ãj0iÀÄ®UÀ¼UÀÆ ¸ÀA¨sÁµÀuÉ §gÉ¢zÁÝgÀAvÉ. ZÀAzÀÄæ
GvÀÛªÀÄ ¥ÁPÀ ¤¥ÀÅt£ÀÆ ºËzÀÄ.CªÀgÀ ¨ÉÆA¨Ámï ¨sÉÆÃd£À PÁ0iÀÄðPÀæªÀÄ n « 0iÀÄ°è
DUÁUÀ §gÀÄwÛgÀÄvÀÛzÉ.¸ÀĪÀtð n « UÉ EAvÀºÀ gÀ¸À¥ÁPÀUÀ¼À£ÀÄß gÀa¸ÀĪÀ
zÀȱÀåUÀ¼À£ÀÄß ¸ÉgÉ »r0iÀÄĪÀÅzÀPÁÌV0iÉÄà CªÀgÀÄ §A¢zÀÝgÀÄ.PÀ£ÀßqÀ
¹£ÉªÀiÁUÀ¼À°è0iÀÄÆ ZÀAzÀÄæ C©ü£À¬Ä¹zÁÝgÉ. ZÀAzÀÄæ, CªÀgÀ ªÀÄqÀ¢ ¥Á¥À
¥ÁAqÀÄ«£ÀAvÀºÀ CzÀÄãvÀ ºÁ¸Àå ¯ÉÆÃPÀªÀ£Éßà ¸Àȶֹ d£ÀjUÉ £ÀUÀÄ«£À ºÀ§â ªÀ£ÉßÃ
PÉÆlÖªÀgÀÄ. E£ÉÆߧâgÀÄ ²æãÁxÀ PÀ±Àå¥ï PÀÆqÀ ¹Ãj0iÀÄ®UÀ¼À°è C©ü£À¬ÄzÀÝ®èzÉ,
¤zÉðñÀ£À PÉÆlÖªÀgÀÄ MAzÀÄ ºÁr¤zÀ £ÀªÀÄä£ÀÄß gÀAf¹zÀgÀÄ.
ªÀÄvÉÛ MAzÀÄ
®WÀÄ ºÁ¸Àå £ÁlPÀ CªÀgÉ®èjAzÀ C©ü£À¬Ä¸À®ànÖvÀÄ.ZÀAzÀÄæ M§â GzÉÆåÃUÀ¸ÀÛ
,ºÉAqÀw0iÀÄ d£Àä ¢£ÁZÀgÀuÉUÉ gÀd ¨ÉÃQvÀÄÛ. ¨ÉÆÃ¸ï £À°è K£ÉÆà ªÀÄqÀ¢0iÀÄ PÁ®Ä
ªÀÄÄjzÀÄ ºÉÆÃVzÉ0iÉÄAzÀÄ ¸ÀļÀÄè ºÉý gÀeÉ ¥ÀqÉ¢zÀÝ. gÀħÄâUÀÄAqÀÄ ©zÀÄÝ GAmÁzÀ
UÁ0iÀiÁ¼ÀĪÀ£ÀÄß £ÉÆÃqÀ®Ä ¨ÉÆøï ZÀAzÀÄæ«£À ªÀÄ£ÉUÉ §AzÀzÀÄÝ. CUÀgÀ§wÛ ªÀiÁjPÉÆAqÀÄ
§AzÀªÀ¼À£Éßà vÀ£Àß ªÀÄqÀ¢0iÉÄAzÀÄ ºÉýzÀ
ZÀAzÀÄæ ¹QÌ ©zÀÝzÀÄÝ EzÉ®è ºÁ¸Àå¨sÀjvÀªÁV C©ü£À¬Ä¹ ¥ÉæÃPÀëPÀgÀ£ÀÄß £ÀUÉUÀqÀ®°è
vÉð¹zÀgÀÄ. PÀqÉUÉ Cwy PÀ¯Á«zÀjUÉ ¸ÁPÀµÀÄÖ zsÀ£ÀåªÁzÀ ¸ÀªÀÄ¥ÀðuÉ0iÀiÁ¬ÄvÀÄ. E°è0iÀÄ
PÀ£ÀßrUÀgÀ ¥ÀgÀªÁV QgÀÄPÁtÂPÉ PÉÆqÀ¯Á¬ÄvÀÄ. §AzÀªÀgÀÆ C©üªÀiÁ£À¢AzÀ E°è0iÀÄ
PÀ£ÀßrUÀgÀ MUÀÎlÖ£ÀÄß, MmÁÖV »ÃUÉ «dÈA¨sÀuɬÄAzÀ »ÃUÉ ºÀ§â ºÀj¢£ÀUÀ¼À£ÀÄß
DZÀj¸ÀĪÀ ªÀÄÆ®PÀ ªÀÄÄA¢£À d£ÁAUÀPÉÌ £ÀªÀÄä zÉòÃ0iÀÄ ºÀ§âUÀ¼À PÀÄjvÀÄ,PÀ£ÀßqÀ
¸ÁgÀ¸ÀévÀ ¯ÉÆÃPÀzÀ zsÀÄæªÀ vÁgÉ0iÀÄAwgÀĪÀ ¥ÀÅgÀAzÀgÀ zÁ¸ÀgÀAvÀºÀ PÀª
¥ÀÅAUÀªÀgÀ ¸ÀägÀuÉ0iÀÄ£ÀÄß ªÀiÁrPÉƼÀÄîwÛgÀĪÀÅzÀPÉÌ ºÉªÉÄä ¥ÀqÀÄvÁÛ £Ár£À
£ÀÄr0iÀÄ£ÁßqÀÄwÛgÀĪÀ E°è0iÀiªÀgÀ£ÀÄß £ÉÆÃr ºÉªÉÄä¬ÄAzÀ
¥ÀżÀQvÀgÁzÀgÀÄ.«zÉñÀªÉÇAzÀgÀ°è ªÀiÁvÀȨsÁµÉ0iÀÄ ¸ÉÆUÀqÀÄ ªÀÄÄAzÀĪÀj0iÀÄÄwÛgÀĪÀÅzÀÄ,
J°è0iÉÄ EgÀÄ, PÀ£ÀßrUÀ£ÁVgÀÄ JA§ PÀ£ÀßqÀ PÀ«ªÁtÂ0iÀÄ£ÀÄß ¸ÁxÀðPÀUÉƽ¹PÉÆArgÀĪÀ
E°è0iÀÄ 0iÀÄĪÀPÀgÀ ¸ÁºÀ¸ÀªÀÅ £ÀªÀÄä£ÀÄß ¨ÉgÀUÀÄUÉƽ¹vÀÄ.
Sunday, June 10, 2012
ಪುಟಾಣಿಗಳ ಹಬ್ಬ
ಪುಟಾಣಿಗಳ ಹಬ್ಬ
ಪಾಶ್ಚಿಮಾತ್ಯ ದೇಶಗಳಲ್ಲಿ ಚಿಕ್ಕ ಮಕ್ಕಳ ಬಗ್ಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಾರೆ. ಮನೆಗಳಲ್ಲಂತೂ ಶಾಲೆಗೆ ಹೋಗತೊಡಗಿದ ಮೇಲೆಯೂ ಮಕ್ಕಳಿಗೆ ಅಪ್ಪನೋ ಅಮ್ಮನೋ ಊಟ ಮಾಡಿಸುವುದು ಸಾಮಾನ್ಯವಾಗಿದೆ. ನಮ್ಮಲ್ಲಿ ಕೈತುತ್ತು ಎನ್ನುವ ರೀತಿಯಲ್ಲಿ ಬಟ್ಟಲಿನಲ್ಲಿ ಅನ್ನ ಸಾಂಬಾರು ತರಕರಿ ಎಲ್ಲ ಬೆರಸಿ ಚಮಚದಲ್ಲಿ ಅದೂ ಅವರನ್ನು ಓಲೈಸುತ್ತಾ ತಿನ್ನಿಸಬೇಕು. ಏನಾದರೂ ಮೂವಿಗಳನ್ನು ನೋಡಿಕೊಂಡೋ ಅಥವಾ ಬೇರೇನಾದರೂ ಆಟವಾಡಿಕೊಂಡೋ ತಿನ್ನಿಸಿದರೆ ಅವರಿಗೆ ಗೊತ್ತಿಲ್ಲದೇ ಹೊಟ್ಟೆ ತುಂಬುತ್ತದೆ. ಅಂತೂ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಾರೆ.ಮತ್ತೇ ಮನೆಯಲ್ಲಿ ಒಂದು ಟೋಯ್ ರೂಮ್ ಇರುತ್ತದೆ. ಅದರೊಳಗೆ ತುಂಬಾ ಆಟದ ಸಾಮಾನುಗಳು. ಪ್ರತಿ ಸಲ ಅಂಗಡಿಗೆ ಹೋದಾಗಲೂ ಏನಾದರೂ ಟೋಯ್ ಗಳನ್ನು ಖರೀದಿಸುವುದೋ, ಗಿಫ್ಟ್ ರೂಪದಲ್ಲಿ ಸಿಕ್ಕಿದ್ದೋ ವಿವಿಧ ತರದ ಪಜ್ಲುಗಳು ದೊರಕಿದ್ದನ್ನು ಮಕ್ಕಳು ಚುರುಕಾಗಿ ಜೋಡಿಸುತ್ತಾರೆ. ಆಡಿದ ಮೇಲೆ ಅಲ್ಲಲ್ಲಿ ಬಿಸಾಕಿ ಹೋಗುವುದು ಸಾಮಾನ್ಯ. ದೊಡ್ಡವರು ಅವುಗಳನ್ನು ಎತ್ತಿಡಬೇಕು. ಆದರೆ ಮಕ್ಕಳು ತುಂಬಾ ಚುರುಕಾಗಿರುತ್ತಾರೆ. ಬೇಕಾದ್ದನ್ನೆಲ್ಲ ಕೊಡಿಸುವುದು ಹೆತ್ತವರ ಕರ್ತವ್ಯವೆಂದು ತಿಳಿದುಕೊಂಡಿದ್ದಾರೆ. ಆಗಾಗ ಮನೆಗೆ ಬೇರೆ ಮನೆಯವರು ಸಂದರ್ಶಿಸುವಾಗ ಆ ಮನೆಯಲ್ಲಿ ಮಕ್ಕಳಿದ್ದರೆ ಹೊಸ ಆಟದ ಸಾಮಾನು ತಂದು ಕೊಡುವುದು ಪದ್ಧತಿಯಾಗಿದೆ.ಮೂರು ವರ್ಷದ ಮಕ್ಕಳೂ ಸೈಕಲ್ ಸವಾರಿ ಮಾಡಿವುದು, ಸ್ಕೂಟರ್ ಬಿಡುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೇರೆ ಬೇರೆ ಪ್ರೇಕ್ಷಣೀಯ ಜಾಗಗಳಿಗೆ ಕರಕೊಂಡು ಹೋಗುತ್ತಿರುತ್ತಾರೆ. ಮತ್ತೆ ದೊಡ್ಡ ದೊಡ್ಡ ಮೋಲ್ ಗಳಲ್ಲಿ ಮಕ್ಕಳ ಆಟಕ್ಕೇನೇ ಆಟದ ಜಾಗವಿರುತ್ತದೆ. ಮಕ್ಕಳನ್ನು ಆದಲು ಬಿಟ್ಟು ಒಬ್ಬ ಅಲ್ಲಿ ನಿಲ್ಲುವುದು ಮತ್ತೊಬ್ಬ ಬೇಕಾದ ಸಾಮಾನು ಕೊಂಡುಕೊಂಳ್ಳುವುದು ನಡೆಯುತ್ತದೆ. ಚಳಿಗಾಲದಲ್ಲಂತೂ ಗಂಟೆಕಟ್ಟಲೆ ಮೋಲ್ ನೊಳಗೆ ಇದ್ದುಬಿಡುವುದೂ ಇದೆ.ಚಿಕ್ಕ ಮಕ್ಕಳಿಗೆ ಈಜು ಕಲಿಸುವುದು,ಅಥವಾ ಸಂಗೀತ,ಗಿಟಾರ್ ಡಾನ್ಸ್ ಕರಾಟೆ ಕಲಿಸುವುದು ನಡೆಯುತ್ತದೆ.ಒಟ್ಟಾರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನವೂ ನಡೆಯುತ್ತದೆ.
ಗಿರಾಕಿಗಳನ್ನು ಆಕರ್ಶಿಸಲು ಮಕ್ಕಳಿಗೆ ಕೆಲವು ಕಡೆ ಮಕ್ಕಳ ಹಲವು ಬಗೆಯ ಆಟಗಳನ್ನೊಳಗೊಂಡ ಚೆಕ್ ಇ ಚೀಸ್ ಎಂಬ ಹಣ ಮಾಡುವ ದಂಧೆಯೂ ಇದೆ. ಮಕ್ಕಳು ಇದಕ್ಕೆ ಮುಗಿಬಿದ್ದು ಹೋಗುತ್ತಾರೆ. ಒಂದು ಆಟಕ್ಕೆ ಕಾಲು ಡಾಲರ್ ಒಳಗೆ ಹೋದ ಮಕ್ಕಳು ಹಿರಿಯರ ಬೊಕ್ಕಸಕ್ಕೆ ಏಳೆಂಟು ಡಾಲರಾದರೂ ಲೂಟಿ ಮಾಡುತ್ತಾರೆ. ಇನ್ನು ವಿವಿಧ ಆಟಗಳನ್ನೊಳಗೊಂಡ ರೈಡುಗಳೂ ಇವೆ. ಸೆಸಮೆ ಸ್ಟ್ರೀಟ್ ನಲ್ಲಿ ಅವಿರತವಾಗಿ ಇಂತಹ ಆಟಗಳನ್ನು ಆಡಲು ಮಕ್ಕಳು ಇಷ್ಟಪಡುತ್ತಾರೆ. ಕೆಲವು ರೈಡುಗಳಿಗೆ ದೊಡ್ಡವರು ಜೊತೆಯಲ್ಲಿಯೇ ಇರಬೇಕೆಂದಿದೆಯಾದರೂ ಮಕ್ಕಳಿಗೆ ತುಂಬಾ ಖೂಶಿ ತರುತ್ತದೆ. ಆ ಪ್ರದೇಶದಲ್ಲಿ ಯಾವಾಗಲೂ ಜನಸಂದಣಿಯಿರುತ್ತದೆ. ಕೆಲವು ಕಡೆ ನಮ್ಮಲ್ಲಿಯಂತೆ ತಾತ್ಕಾಲಿಕವಗಿ ಇಂತಹ ರೈಡುಗಳನ್ನು ಹಮ್ಮಿಕೊಳ್ಳುತ್ತಾರೆ. ಅಂತೂ ಸುದ್ದಿ ಮಕ್ಕಳಿಗೆ ಸಿಕ್ಕಿಬಿಟ್ಟರೆ ಕೇಳುವುದೇ ಬೇಡ. ಡಾಡಿ ನನ್ನನ್ನು ರೈಡುಗಳಿಗೆ ಕರಕೊಂಡುಹೋಗಿ ಎಂದು ಅಂಗಲಾಚುತ್ತಾರೆ. ಹೋದರೆ ಒಂದು ಆಟಕ್ಕೆ ಒಂದು ಡಾಲರ್ ಜೈಂಟ್ ವೀಲ್ ಮೊದಲಾದ ಆಟಗಳು ,ವಿಮನದಲ್ಲಿ ಕುಳಿತಂತೆ ಕುಳ್ಳಿರಿಸಿ ಎಂಟು ಹತ್ತು ಸುತ್ತು ತಿರುಗಿಸಿ ಇಳಿಸಿದರಾಯಿತು. ಮಖ್ಖಳೂ ಎರಡು ಮೂರು ರೈಡುಗಳಿಗೆ ಮೂರು ನಾಲ್ಕು ಡಾಲರ್ ಗಳಂತೆ ಹತ್ತಿಪ್ಪತ್ತು ಡಾಲರ್ ನಷ್ಟವೇ ಆಗುತ್ತದೆ. ಆದರೆ ಮಕ್ಕಳ ಉತ್ಸಾಹ, ಅದರಿಂದ ಅವರಿಗೊದಗುವ ಸಂತೃಪ್ತಿ ಹಿರಿಯರಿಗೆ ಹೆಮ್ಮೆಯೆನಿಸುತ್ತದೆ.
ಮೊನ್ನೆ ನಾವಿರುವ ನಗರದಲ್ಲಿ ಮಕ್ಕಳಿಗಾಗಿ ಒಂದು ವಿಶಿಷ್ಟ ಪ್ರದರ್ಶನ ಏರ್ಪಡಿಸಿದ್ದರು.ಅದುವೇ ಪುಟಾಣಿಗಳ ಹಬ್ಬ!ಸುದ್ದಿ ತಿಳಿದೊಡನೆ ಈ ಪ್ರದೇಶದಲ್ಲಿರುವ ಜನರೆಲ್ಲರೂ ಉತ್ಸಾಹದಿಂದ ಅವರವರ ಮಕ್ಕಳನ್ನು ಕರಕೊಂಡು ಹೊರಟರು. ಅದರಲ್ಲೂ ಧರ್ಮಾರ್ಥವಾದ ಕಾರಣ ಖರ್ಚಿಲ್ಲವಲ್ಲ೧ನಾವಿರುವಲ್ಲಿಂದ ಹತ್ತು ಮೈಲು ದೂರದಲ್ಲಿ ಪ್ರದರ್ಶನ ನಡೆಯುವುದೆಂದು ಗೊತ್ತಾಗಿ ನಾವೂ ಮೊಮ್ಮಗನನ್ನು ಕರಕೊಂಡು ಹೊರಟೆವು. ನಗರ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ವಿಶಲವಾದ ಬಯಲಲ್ಲಿರುವ ದೊಡ್ಡ ಕಟ್ಟಡದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ವಾಹನಗಳನ್ನು ನಿಲ್ಲಿಸುವುದಕ್ಕೂ ಪಾರ್ಕಿಂಗ್ ಜಾಗಗಳಿಲ್ಲ. ಎಲ್ಲೆಂದರಲ್ಲಿ ಸಾಲಾಗಿ ಶಿಸ್ತಿನಿಂದ ಸಾವಿರಾರು ವಾಹನಗಾಳು ನಿಂತಿದ್ದವು.ಹಾಗೆ ನಮಗೆ ಕಾರ್ ಪಾರ್ಕ್ ಮಾಡಿ ನಡೆಯಬೇಕಾಯಿತು. ಸಾವಿರಾರು ಜನ ಓಡಾಡುತ್ತಿದ್ದರು. ಒಳಗೆ ಪ್ರವೇಶ ಮಾಡಿದರೆ ಅಲ್ಲಿಯೂ ನೋಡುವುದಕ್ಕೆ ಜನ ಸಾಲುಗಟ್ಟಿ ನಿಂತಿದ್ದರು.ಒಂದು ಕಡೆ ವಿವಿಧ ಬಣ್ಣದ ಪೈಂಟಿಂಗ್ ನಡೇಯುತ್ತಿತ್ತು. ಮಕ್ಕಳೇ ಉತ್ಸಾಹದಿಂದ ಕೊಟ್ಟ ಪ್ಲೇಟಿಗೆ ಬಣ್ಣ ಕೊಡುತ್ತಿದ್ದರು.ಮೊಮ್ಮಗನಿಗಂತೂ ಕೂಶಿಯಾಗಿತ್ತು. ಮತ್ತೊಂದು ಕಡೆ ಅಲ್ಲೇ ಇಟ್ತಿದ್ದ ಕಾಗದಕ್ಕೆ ಬಣ್ಣ ಕೊಡುವುದು.ಬಣ್ನ ಕೊಟ್ಟ ಕಾಕ್ಕಳಿಗೇಮತ್ತೊಂದು ಕಡೆ ಹೆಲಿಕೋಪ್ಟರ್ ಅಂತೆ ಅತ್ತಿಂದಿತ್ತ ಸುತ್ತಾಡುತ್ತಿತ್ತು. ಕೋಷ್ಟ್ ಗಾರ್ಡಿನವರದಂತೆ ಆ ಪ್ರದರ್ಶನ ಒಮ್ದು ಮಕ್ಕಳಿಗೆ ಜಾರು ಬಂಡಿಯಿತ್ತು. ಬಹಳ ಎತ್ತರದಿಂದ ಜಾರುವ ವ್ಯವಸ್ಥೆಯಿತ್ತು. ಮೊಮ್ಮಗ ಮೂರು ನಾಲ್ಕು ಸಲ ಜಾರಿದ. ಕಗದಲ್ಲಿರುವ ಚಿತ್ರವನ್ನು ಅಲ್ಲೇ ಇಟ್ಟ ಕತ್ತರಿಯಿಂದ ಕತ್ತರಿಸಿ ಒಂದು ದಪ್ಪದ ರಟ್ಟಿನ ತುಂಡಿಗೆ ಅಂಟಿಸಿ ಎರಡು ಬದಿಯಲ್ಲಿಯೂ ಕಟ್ಟಿದ ನೂಲಿಅನ್ನು ತಿರುಗಿಸುವುದು ಹೀಗೆಲ್ಲ ತುಂಬಾ ಆಟಗಳಿದ್ದುವು ಈ ಎಲ್ಲ ಆಟಗಳಾಗುತ್ತಿದ್ದಂತೆಯೇ ಕೇಂಡಿ,ಜೋಳದ ಅರಳು ಮೊದಲಾದುವುಗಳು ಮಕ್ಕಳಿಗೆ ತಿನ್ನಲು ಸಿಗುತ್ತಿತ್ತು.ಕುಡಿಯುವುದಕ್ಕೆ ಹಣ್ಣಿನ ರಸ ಕೊಡುತ್ತಿದ್ದರು. ಒಂದೊಂದು ಕಂಪೆನಿಯವರು ಪ್ರಚಾರಕ್ಕಾಗಿ ಅವರ ಪ್ರೊಡಕ್ಟ್ ಗಳನ್ನು ತಂದಿದ್ದರು. ಎಲ್ಲ ಮಕ್ಕಳಿಗೆ ಸಂಬಂಧಪಟ್ಟುದು. ಮಕ್ಕಳಿಗೆ ಮಾತ್ರ ಬೆಳಿಗ್ಗೆ ಆರಂಭವಾದ ಶೋ ಮಧ್ಯಾಹ್ನ ಒಂದೂವರೆ ಘಂಟೆಯ ವರೆಗೆ ಖುಶಿ ಕೊಟ್ಟುದಂತೂ ನಿಜ. ಪ್ರದರ್ಶನದ ಅವಧಿ ಮುಗಿದೊಡನೆ ಕಟ್ಟಡಗಳು ಮಾತ್ರವೇ ಅಲ್ಲಿದ್ದುದು.
ವಿಶ್ವ ಮಾತೆಯರ ದಿನ
DZˎ
ªÀiÁvÉ0iÀÄgÀ ¢£À
¨sÁgÀwÃ0iÀÄ
¸ÀA¸ÀÌöÈw0iÀÄAvÉ ‘ªÀiÁvÀÈ zÉêÉÇà ¨sÀªÀ,¦vÀÈ zÉêÉÇà ¨sÀªÀ,
DZÁ0iÀÄð zÉêÉÇà ¨sÀªÀ’JAzÀÄ ªÉÆzÀ®Ä vÁ¬Ä0iÀÄ£ÀÄß ªÀÄvÉÛ
vÀAzÉ0iÀÄ£ÀÄß DªÉÄÃ¯É eÁÕ£À ©üPÉë ¤ÃqÀĪÀAvÀºÀ UÀÄgÀÄUÀ¼À£ÀÄß ¥ÀævÀåPÀë zÉêÀgÀ ¸ÁÜ£ÀzÀ°è PÀ°à¹PÉÆArzÁÝgÉ. £ÁªÉ®è
PÀ°0iÀÄÄwÛgÀĪÁUÀ UÀÄgÀÄUÀ¼ÀÄ ºÉýPÉÆlÖ ªÉÆzÀ® ¥ÁoÀ ‘vÁ¬Ä
zÉêÀgÉAzÀÄ d£ÀgÀÄ ¨Á0iÀÄ ©lÄÖ ¸ÁgÀÄwºÀgÀÄ,
vÁ¬Ä vÁ£É ªÉÆzÀ® UÀÄgÀĪÀÅ vÁ0iÀÄ ªÀÄgÉvÀ ¨Á®£ÉÆAzÀÄ £Á¬ÄVAvÀ QüÀÄ
ªÀÄ£ÀªÉ’JAzÀÄ
ºÉýPÉÆnÖzÀÝgÀÄ. vÁ¬ÄUÉ «±ÉõÀ ¸ÁÜ£ÀªÀ£ÀÄß
PÉÆqÀÄvÁÛ zÉêÀgÀ ¨sÀ0iÀĪÉà eÁÕ£ÀzÀ DgÀA¨sÀ’JAzÀÄ
ªÀÄPÀ̼À°è ¨sÀ0iÀÄ ¨sÀQÛ ªÀÄvÀÄÛ ±ÀæzÉÞUÀ¼À£ÀÄß PÀ°¸ÀÄwÛzÀÝgÀÄ. 0iÀiÁªÀ£ÉÃ
ªÀÄ£ÀĵÀå fë dUÀvÀÛ£ÀÄß £ÉÆÃqÀ¨ÉÃPÁzÀgÉ vÁ¬Ä0iÀÄ ºÉÆmÉÖ¬ÄAzÀ¯Éà ºÉÆgÀ
§gÀ¨ÉÃPÀ®èªÉÃ? ªÀÄPÀ̼À£ÀÄß ºÉgÀĪÀÅzÀÄ ªÀiÁvÀæªÀ®è M§â GvÀÛªÀÄ ¸ÀªÀiÁd fë0iÀÄ£ÁßV
ªÀiÁqÀĪÀ ºÉÆuÉUÁjPÉ DPÉ0iÀÄzÀ®èªÉÃ? ªÀåQÛvÀéªÀ£ÀÄß gÀƦ¸ÀĪÀ°è vÁ¬Ä0iÀÄ dªÁ¨ÁÝj zÉÆqÀØzÀÄ. ªÀÄUÀÄ«£À ¸ÀªÁðAVÃt
ªÀåQÛvÀé vÁ¬Ä0iÀÄ GzÀgÀ¢AzÀ¯ÉÃ
¤ªÀiÁðtªÁUÀvÉÆqÀUÀÄvÀÛzÉ JA§ÄzÀPÉÌ
zÉÊvÀå PÀįÉÆÃzÀãªÀ£ÁzÀ ¥ÀæºÁèzÀ£À UÀ©üðtÂ0iÀiÁVzÁÝUÀ vÁ¬Ä PÀ0iÀiÁzÀĪÀ£ÀÄß
ªÀÄĤ0iÀiÁ±ÀæªÀÄPÉÆÌ0iÀÄÄÝ ¨ÉÃPÁzÀ jÃw0iÀÄ°è G¥ÀzÉñÀ PÉÆlÄÖzÀjAzÀ¯Éà DvÀ ‘M§â
ºÀj ¨sÀPÀÛ£ÁV ©lÖ’ JAzÀÄ ¥ÀÅgÁt ºÉüÀÄvÀÛzÉ. MA§vÀÄÛ wAUÀ¼ÀÄ
PÁ® ºÉÆmÉÖ0iÀÄ°è ºÉÆvÀÄÛPÉÆAqÀÄ MzÀVzÀ D0iÀiÁ¸À ¥Àj±ÀæªÀÄUÀ¼À£ÀÄß ªÀÄÄAzÉ
ºÀÄlÄÖªÀ PÀAzÀªÀÄä£À £É£É¦£À°è ªÀÄgÉ0iÀÄĪÀ ¸ÀºÀ£Á UÀÄt vÁ¬Ä0iÀÄ°è EgÀĪÀ
PÁgÀt¢AzÀ¯Éà vÁ¬Ä0iÀÄ£ÀÄß zÉêÀgÉAzÀÄ d£À £ÀA§®Ä PÁgÀtªÀ®èªÉÃ? ‘¸ÀºÀ£Á zsÀjwæÃ’
0iÀiÁªÀÅzÉà PÀµÀÖUÀ¼À£ÀÄß ¸À»¹PÉƼÀÄîªÀ «±ÉõÀ UÀÄt DPÉ0iÀÄzÀAvÉ. ¨sÀÆ ªÀiÁvÉ
M¼Éî0iÀĪÀ£ÁßUÀ°Ã PÉlÖªÀgÀ£ÁßUÀ°Ã zsÀj¹PÉÆArgÀĪÀÅzÀjAzÀ¯Éà zsÀgÀtÂ0iÀiÁzÀ¼ÀÄ.
DPÉUÉ 0iÀiÁªÀÅzÉà ¨sÉÃzÀ ¨sÁªÀ«®èªÀµÉÖ!
§ºÀ¼À »AzÉ 0iÀÄÄzÀÞzÀ°è ¸ÀvÀÄÛ
ºÉÆÃzÀ ¸ÉʤPÀgÀ vÁ0iÀÄA¢gÀ ¨ÉøÀgÀ PÀ¼É0iÀÄ®Ä, ºÀÄvÁvÀägÁzÀ ¸ÉʤPÀgÀ
ªÀiÁvÉ0iÀÄgÀ ¢£ÀªÀ£ÀÄß DZÀj¸À®Ä CªÉÄÃjPÁzÀ°è vÉÆqÀVzÀgÀAvÉ. »ÃUÉ CªÉÄÃjPÁzÀ°è
CgÀA¨sÀªÁzÀ ¢£ÁZÀgÀuÉ «±ÀézÁzÀåAvÀ ªÀiÁvÉ0iÀÄgÀ ¢£ÀªÉAzÀÄ dUÀ¢éSÁåvÀªÁ¬ÄvÀAvÉ.
¸ÁªÀiÁ£ÀåªÁV FUÀ ªÉÄà wAUÀ¼À JgÀqÀ£Éà gÀ«ªÁgÀ «±Àé ªÀiÁvÉ0iÀÄgÀ ¢£ÀªÁVFUÀ
DZÀj¸ÀĪÀÅzÀÄ gÀÆrü0iÀiÁVzÉ. ««zsÀ gÁµÀÖçUÀ¼ÀÆ F ªÀiÁvÉ0iÀÄgÀ ¢£ÀªÀ£ÀÄß
DZÀj¸ÀÄvÁÛgÉ. ºÀqÉzÀ vÁ¬Ä0iÀi £É£À¥ÀÅ F MAzÀÄ ¢£À ªÀiÁvÀæ DZÀj¹zÀgÉ
ªÀiÁvÀȨsÀQÛ vÉÆÃj¹zÀAvÁ¬ÄvÉÃ? MªÉÄä ªÀiÁvÀæ C¢£À ‘ºÉæà
ªÀÄzÀ¸ïð qÉÃ’JAzÉÆqÀ£É
ªÀiÁvÀÈ ¨sÀQÛ vÀÄA© vÀļÀÄQzÀAvÁ¬ÄvÉÃ? zÉêÀ¸ÁÜ£ÀPÉÆÌà CxÀªÁ £ÉgɪÀÄ£É0iÀÄ°è
£ÀqÉ0iÀÄĪÀ ¥ÀÇeÉUÉ ºÉÆÃzÀ°è zÉʪÀ¨sÀPÀÛ£ÀUÀĪÀ£É? JA§ C£ÉÃPÀ ¥Àæ±ÉßUÀ¼ÀÄ
ªÀÄÄAzÉ §gÀÄvÀÛªÉ. UÀæºÀZÁgÀ zÉÆõÀ¤ªÁgÀuÉUÁV ºÉÆêÀÄ ¥ÀÇeÉ ªÀiÁr¸ÀĪÀÅzÀÄ
ªÁrPÉ. CzÀgÉ w½zÉà vÀ¥ÀÅöà ªÀiÁr ªÀÄvÉÛ ºÉÆêÀÄ ªÀiÁrzÀgÉ vÀ¥ÀÅöà ªÀÄÄaÑ
ºÉÆÃUÀĪÀÅzÉÃ? ‘¥À±ÁÑvÁÛ¥ÀªÉà ¥Áæ0iÀIJÑvÀÛ’J£ÀÄßvÁÛgÉ.
Cj0iÀÄzÉà ªÀiÁrzÀ vÀ¦àUÉ ¥Áæ0iÀIJÑvÀÛ J£ÀÄߪÀgÉà ºÉÆgÀvÀÄ UÉÆwÛzÉÝà EvÀgÀjUÉ
zÉÆæúÀªÁUÀ¯ÉAzÉà vÀ¥ÀÅöà ªÀiÁr ªÀÄvÉÛ ¥Áæ0iÀIJÑvÀÛªÁUÀ¯ÁgÀzÀ®èªÉÃ?
¨sÁgÀvÀzÀ°è ¸À£Áå¹UÀ¼ÀÆ vÁ0iÀÄA¢jUÉ
£ÀªÀĸÀÌj¸ÀĪÀgÀAvÉ. ±ÀAPÀgÁZÁ0iÀÄðgÀÄ ¸À£Áå¸À ¹éÃPÀj¸À®Ä vÁ¬Ä0iÀÄ M¦àUÉ
¥ÀqÉ0iÀÄ®Ä vÀÄA§ PÀµÀÖ¥ÀnÖzÀÝgÀAvÉ. CªÀgÀ£ÀÄß ªÉƸÀ¼É £ÀÄAUÀ®Ä §AzÀÄzÀÄ, ©lÄÖ
ºÉÆÃUÀ®Ä CªÀgÀ vÁ¬Ä ¸À£Áå¸À ¹éÃPÁgÀPÉÌ M¦àUÉ PÉÆlÄÖzÀÄ J®è CªÀgÀ fêÀ£ÀzÀ°è
MzÀVzÀ WÀl£É.vÁ¬ÄUÉ £À¢Ã¸ÀߣÀPÉÌ C£ÀÄPÀÆ®ªÁUÀ®Ä ªÀÄ£É0iÀÄ ªÀÄÄAzÉ0iÉÄà ¸ÀéuÁð
£À¢ ºÀj0iÀÄĪÀAvÉ ªÀiÁrzÀÄzÀÄ CªÀgÀ ¥ÀªÁqÀ. vÁ¬Ä0iÀÄ CawªÀÄ ¸ÀA¸ÁÌgÀPÁÌV CªÀgÀÄ
PÁ®nUÉ §A¢zÀÝgÀAvÉ. CªÀgÉà ºÉýzÁÝgÉ ‘PÉlÖ ªÀÄUÀ£ÉÆÃ
ªÀÄUÀ¼ÉÆà ºÀÄnÖzÀgÀÆ PÉlÖ vÁ0iÀÄA¢gÀÄ EgÀ¯ÁgÀ’gÉAzÀÄ.CAzÀgÉ
vÁ¬ÄUÉ CµÀÄÖ ¥ÁæªÀÄÄRåvɬÄvÀÄÛ DUÀ. UÁAzsÁj vÀ£Àß UÀ¨sÀðªÀ£ÀÄß
»ZÀÄQPÉÆArzÀݼÀAvÉ. CzÀPÉÌ MAzÀÄ ªÀÄUÀÄ ºÉÆÃV £ÀÆgÀ MAzÀÄ ªÀÄPÀ̼ÁV ºÉÆÃVvÀÄÛ.UÀ©üðtÂ
ºÉAUÀĸÀÄ ±ÀÄzÀÞ ªÀÄ£À¸À̼ÁVgÀ¨ÉÃPÉA§ÄzÀPÉÌ F GzÁºÀgÀuÉ PÉÆqÀÄvÁÛgÉ. FUÀ®Æ
«zÉñÀUÀ¼À°è ªÉÊzÀågÀÄ UÀ©üðtÂ0iÀÄjUÉ «±ÉõÀ vÀgÀ¨ÉÃw PÉÆqÀĪÀÅ¢zÉ0iÀÄAvÉ. F
¸ÀªÀÄ0iÀÄzÀ°èºÉZÀÄÑ PÉÆÃ¥À §gÀĪÀÅzÀÄ. ºÉZÀÄÑ ªÀiÁ£À¹PÀ MvÀÛqÀ¢A¢gÀĪÀÅzÀÄ
gÀPÀÛzÉÆvÀÛqÀPÉÌ PÁgÀtªÁUÀĪÀÅzÀAvÉ! ºÉtäPÀ̼À ¸ÀºÀ£Á ±ÀQÛ
UÀ©üðtÂ0iÀÄgÁVgÀĪÁUÀ w½0iÀħºÀÄzÀÄ. ¨ÉÃgÉ ªÀÄPÀ̽UÀÆ DPÉ vÁ¬Ä0iÀÄ ¦æÃw
vÉÆÃj¸ÀĪÀ zÉÆqÀØ UÀÄt EgÀ¨ÉÃPÀÄ.
FUÀ ªÀiÁvÀæ CªÉÄÃjPÁzÀ°è ªÀiÁvÀæªÀ®è
¨ÉÃgÉ gÁdåUÀ¼À°è0iÀÄÆ F «±Àé ªÀiÁvÉ0iÀÄgÀ ¢£ÀªÀ£ÀÄß vÀªÀÄä ªÁå¥ÁgÀ C©üªÀÈ¢ÞUÁV
D ¢£ÀUÀ¼À°è vÁ0iÀÄA¢jUÉ PÉÆqÀĪÀ ¨ºÀĪÀiÁ£ÀUÀ½UÉ «±ÉõÀ j0iÀiÁ¬Äw¬ÄzÉ0iÉÄAzÀÄ
¥ÀæZÁgÀ ªÀiÁr vÀªÀÄä GvÀà£ÀßUÀ½UÉ VgÁQUÀ¼À£ÀÄß ºÉaѸÀĪÀ ¢£ÀªÀ£ÁßV
ªÁå¥ÁjÃPÀgÀtUÉƽ¹zÁÝgÀAvÉ! ºÉvÀÛ ªÀÄPÀ̼ÀÆCµÉÖ. D MAzÀÄ ¢£À «±ÉõÀªÁV
vÁ0iÀÄA¢gÀ£ÀÄß «dÈA¨sÀuɬÄAzÀ UËgÀ«¹zÀgÉ vÀªÀÄä PÀvÀðªÀå C°èUÉ ªÀÄÄV¬ÄvÀÄ
JA§°èUÉ ªÀÄÄnÖzÁÝgÉ EA¢£À d£À! ¨sÁgÀvÀzÀ°è0iÀÄÆ ªÀÄPÀ̼À ¢£ÁZÀgÀuÉ D¢£ÀPÉÌ
ªÀiÁvÀæ ¹Ã«ÄvÀªÁzÀgÉ ¸ÁPÉÃ? ²PÀëPÀgÀ ¢£À MAzÉà ¢£À £É£ÉzÀgÉ ¸ÁPÉÃ?JA§
¥Àæ±ÉßUÀ½UÉ GvÀÛgÀ«®è. ªÀÄPÀ̼ÀÄ ªÀÄÄA¢£À d£ÁAUÀªÉAzÀÄ ºÉüÀÄvÁÛgÀµÉÖ. DzÀgÉ
ªÀÄÄAzÁ¼ÀÄUÀ½UÉ ªÀÄPÀ̼À PÀqÉUÉ UÀªÀÄ£À PÉÆqÀ®Ä ¥ÀÅÅgÀĸÉÆwÛ®è.ªÀÄÄA¢£À
¥ÀæeÉUÀ¼À£ÀÄß gÀƦ¸ÀĪÀ ²PÀëPÀjUÉÆAzÀÄ ¢£À ¤UÀ¢¥Àr¹zÀgÉ CªÀgÀ£ÀÄß UËgÀ«¹zÀAvÉ
JA§ ¨sÁªÀ£É d£ÀgÀ°zÉè. ªÀÄgÀÄ¢£À ªÀÄPÀ̼À ªÀÄÄAzÉ0iÉÄà ²PÀëPÀgÀ£ÀÄß ¤A¢¸ÀĪÀ
gÀPÀëPÀgÉà vÀÄA©gÀĪÁUÀ ªÀÄPÀ̽UÀÆ UÀÄgÀÄUÀ¼À ªÉÄÃ¯É ¨sÀQÛ ºÉÃUÉ
§gÀ¨ÉÃPÀÄ?MAzÀÄ ¸ÀªÀiÁdzÀ «©ü£Àß CAUÀUÀ¼À°è 0iÀiÁªÀÅzÀÄ ªÀÄÆRå JA§ feÁÕ¸É
¨ÉÃqÀ.PÉÊ0iÀÄ LzÀÄ ¨ÉgÀ¼ÀÄUÀ¼À°è J®èªÀÇ ªÀÄÄRåªÉà DVgÀĪÁUÀ0iÀiÁªÀ ¨ÉgÀ¼ÀÄ
JµÀÄÖ ªÀÄÄRå JA§ ªÁzÀ 0iÀiÁPÉ?0iÀiÁªÀ PÀtÄÚ ºÉÆÃzÀgÀÆ DUÀzÀÄ.
vÁ0iÀÄA¢gÀ ºÉÆuÉ zÉÆqÀØzÉAzÀÄ ºÉýzÀ
ªÉÄÃ¯É CAvÀºÀ vÀ0iÀÄA¢gÀ£ÀÄß
UËgÀ«¹ªÀÅzÀÆ £ÀªÀÄä ºÉÆuÉ0iÉÄà DVzÉ. F MAzÀÄ ¢£À ªÀiÁvÀæ «±ÉõÀªÁV UËgÀ«¹zÀgÉ
ªÀiÁvÀæ ¸Á®zÀÄ. ªÉÆ£Éß 0iÀiÁgÉÆà ¢£ÁZÀgÀuÉ §UÉÎ »ÃUÉ ºÉüÀĪÀÅzÀÄ PÉý¹vÀÄ. ‘£À£Àß
vÁ¬Ä0iÀÄÆ eÉÆvÉUÉà EgÀĪÀ PÁgÀt ¸ÀA¨sÀæªÀÄ¢AzÀ vÁ0iÀÄA¢gÀ ¢£ÀªÀ£ÀÄß DZÀj¹zÉÝãÉ
ªÀiÁvÀæªÀ®è CzÀÄ £À£ÀUÉ ºÉªÉÄä JA§ÄzÀÄ CªÀgÀ ºÉýPÉ. EzÀÄ ¸ÀAPÀÄavÀ
¨sÁªÀ£É0iÉÄA§ÄzÀÄ £À£Àß ªÉÊ0iÀÄÄQÛPÀ C©ü¥Áæ0iÀÄ. ªÀÄPÀ̼À£ÀÄß ºÉvÀÛªÀgÉ®ègÀÆ
vÁ0iÀÄA¢gÉÃ. CzÀgÀ°è CªÀgÀÄ EªÀgÀÄ JA§ ¨sÉÃzÀ«®è J®ègÀÆ UËgÀªÁºÀðgÉà DVzÁÝgÉ.
»ÃUÉ ºÉüÀĪÀªÀgÀÆ vÁ0iÀÄA¢gÉà DzÀgÉ CªÀgÀÆ UÉÆgÀªÀPÉÌ 0iÉÆÃUÀågÉà J®ègÀ£ÀÆß
¸ÁªÀÄÆ»PÀªÁV UËgÀ«¸À¨ÉÃPÀÄ.£À£Àß ¯ÉPÀÌzÀ°è ªÀÄÄA¢£À d£ÁAUÀ ¤ªÀiÁðtzÀ°è
ºÉAUÀ¼É0iÀÄgÀ ¥ÁvÀæ zÉÆqÀØzÀÄ. £ÀªÀÄUɯèjUÀÆ vÁ0iÀÄAzg ºÉvÀÛ vÁ¬Ä0iÀÄ®è¢zÀÝgÀÆ
ªÀiÁvÀÈ ¸ÀªÀiÁ£ÀgÀÄ. ºÉvÀÄÛ ªÀÄgÉ0iÀiÁzÀ vÁ0iÀÄA¢gÀ ªÀÄPÀ̽UÉ ¨ÉÃgÉ
ªÀiÁvÉ0iÀÄgÀÄ ºÁ®ÄtÂÚ¹ ¨É¼É¹zÀÆÝ EzÉ. vÁ¬Ä0iÉÄAzɤ¸À®Ä ¸À®» ¥ÉÇö¹zÀªÀgÀÆ
CºÀðgÁVzÁÝgÉ.CAvÀÆ vÁ0iÀÄA¢gÁUÀĪÀ ¨sÁUÀå ºÉtÄÚ ªÀÄPÀ̽UÉ ªÀiÁvÀæ EgÀĪÀÅzÀÄ.
CªÀgÉ®ègÀ£ÀÄß UËCgÀ«¸ÀÄzÀÄ F ¢£ÀzÀ°è CªÀ±ÀåªÁVzÉ. ºÉvÀÛ vÁ¬ÄUÉ ªÀiÁvÀæ
¹UÀ¨ÉÃPÁzÀ UËgÀªÀªÀ®èªÉAzÀÄ £À£Àß C¤¹PÉ. ¹Ûçà ¸ÁévÀAvÀæ÷åªÉAzÀÄ ¨sÁµÀt
©V0iÀÄĪÀªÀgɵÉÆÖà ªÀÄA¢ EzÁÝgÉ. ªÀiÁvÀÈ ¸ÀªÀiÁ£ÀgÀÄ JAzÀÄ ºÉýzÀªÀgÉÃ
E£ÉÆߪÉÄä CvÁåZÁgÀPÉÌ ¥Àæ0iÀÄw߸À§ºÀÄzÀÄ. J¯ÉèqÉ0iÀÄÆ ¸ÀªÀiÁ£ÀºÀQÌUÁV ºÉÆÃgÁl ªÁzÁlUÀ¼ÀÄ ZÀÄ£ÁªÀuÉ0iÀÄ ªÀgÉUÉ ªÀiÁvÀæ. D
PÁ®zÀ°è F MAzÀÄ ªÀiÁvÀÆ £É£À¦UÉ §gÀĪÀÅ¢®è. FUÀ®Æ ¨sÁgÀvÀzÀ°è zÀÄr0iÀÄĪÀ
ºÉAUÀĸÀgÀÄ UÀAqÀA¢gÀ D¸É0iÀÄAvÉ £ÀqÉ0iÀĨÉÃPÀÄ ºÉÆgÀvÀÄ ¸ÀévÀAvÀæ wêÀiÁð£ÀzÀ
ºÀPÀÌ£ÀÆß G½¹PÉÆAr®è. E°èUÉ vÁ0iÀÄA¢jUÉ D UÀAqÀĸÀgÀÄ JµÀÖgÀ ªÀÄnÖUÉ UËgÀªÀ
PÉÆqÀÄvÁÛgÉ JAzÀÄ w½0iÀħºÀÄzÀ®èªÉÃ?
Saturday, June 9, 2012
ನಮ್ಮ ಮೊದಲ ವಿದೇಶ ಪ್ರಯಾಣ
£ÀªÀÄä ªÉÆzÀ® «zÉñÀ ¥Àæ0iÀiÁt
£À£Àß ªÀÄƪÀgÀÄ ªÀÄPÀ̼À°è E§âgÀÄ CªÉÄÃjPÁzÀ°è PÉ®¸À ªÀiÁqÀÄwÛzÁÝgÉ. 2003gÀ°è
E§âgÀzÀÆ «ªÁºÀªÁVvÀÄÛ. E£ÉÆߧ⠪ÀÄUÀ ªÀÄAUÀ¼ÀÆgÀ¯Éèà PÉ®¸À ªÀiÁqÀÄwÛzÀÝ£ÀÄ.
CªÀ¤UÉ ªÉÆzÀ¯Éà ªÀÄzÀĪÉ0iÀiÁV MAzÀÄ ªÀÄUÀĪÀÇ EvÀÄÛ. £Á£ÀÄ ªÀiÁzsÀå«ÄPÀ ±Á¯Á
CzsÁå¥ÀPÀ£ÁVzÀݪÀ PÉ®¸À¢AzÀ ¤ªÀÈwÛ ºÉÆA¢zÉÝ. HgÀ°è0iÉÄà EzÀÝ ¸Àé®à d«ÄãÀ£ÀÄß
£ÉÆÃrPÉÆArzÉÝ. «zÉñÀzÀ°èzÀÝ ªÀÄPÀ̼ÀÄ £ÀªÀÄä£ÀÄß CªÀjzÀÝ°èUÉ §gÀ¨ÉÃPÉAzÀÄ
PÀgÉzÀgÀÄ. JgÀqÀÄ wAUÀ¼À ªÀÄnÖUÉ ºÉÆÃUÀĪÀÅzÉAzÀÄ ¤zsÀðj¹ M§â PÉ®¸ÀzÀªÀ£À£ÀÄß
ªÀÄ£É0iÀÄ°è EgÀĪÀAvÉ ºÉý £Á«§âgÀÆ ºÉÆgÀmÉà ©mÉÖªÀÅ. £ÀªÀÄUÉ £ÀªÀÄä
fêÀªÀiÁ£ÀzÀ°è ªÉÆzÀ® «zÉñÀ ¥Àæ0iÀiÁt. GV §Ar ¥Àæ0iÀiÁt ©lÖgÉ »ÃUÉ «ªÀiÁ£ÀzÀ°è PÀĽvÀÄ
¥Àæ0iÀiÁt ªÀiÁr UÉÆwÛ®. J®è ºÉƸÀzÀÄ. CzÀPÉÌ ªÀÄPÀ̼ÀÄ CªÉÄÃjPÁzÀ°è0iÉÄà EgÀĪÀ £À£Àß ¸ÉƸÉ0iÀÄ
aPÀ̪ÀÄä£À eÉÆvÉ ¥Àæ0iÀiÁt ªÀiÁqÀĪÀ ªÀåªÀ¸ÉÜ ªÀiÁrzÀÝgÀÄ. ªÀÄAUÀ¼ÀÆj¤AzÀ¯Éà CªÀgÀÄ eÉÆvÉVzÀÝgÀÄ. ¨ÉAUÀ¼ÀÆj¤AzÀ
«ªÀiÁ£À ºÀwÛ PÀĽvÀªÀgÀÄ ªÀÄÄA§¬Ä0iÀÄ°è
MªÉÄä E½0iÀĨÉÃQvÀÄÛ.C°è £Á¯ÉÌöÊzÀÄ WÀAmÉ PÁzÀÄ E£ÉÆßAzÀÄ «ªÀiÁ£ÀPÉÌ
ºÀvÀÛ¨ÉÃQvÀÄÛ. eÉÆvÉUÉ ¸ÀºÀ ¥Àæ0iÀiÁtÂPÀgÁV ¸ÉƸÉ0iÀÄ aPÀ̪ÀÄä EzÀÄÝzÀÄ vÀÄA§
¸ÀºÁ0iÀĪÁ¬ÄvÀÄ. £ÁªÀÅ ªÀiÁvÀæ DVzÀÝgÉ PÀµÀÖªÁUÀÄwÛvÀÄÛ.
ªÀÄÄA¨ÉʬÄAzÀ
Kgï EAr0iÀÄ «ªÀiÁ£ÀªÉÃjzÀ £ÀªÀÄUÉ ¥ÉÃj¸ï £À°è ¨ÉÃgÉÆAzÀÄ «ªÀiÁ£À
§zÀ°¸À¨ÉÃQvÀÄÛ. £ÀªÀÄUÉ J®èªÀÇ ºÉƸÀzÉà DVvÀÄÛ. £ÀªÀÄä zÉñÀzÉƼÀUÉà ºÉZÀÄÑ
zÀÆgÀ ºÉÆÃV UÉÆwÛ®è.CAvÀÆ £ÀªÀÄä ¥Àæ0iÀiÁt ¥ÉÃj¸ï ¤AzÀ®Æ ªÀÄÄAzÉ ¸ÁVvÀÄ. «ªÀiÁ£ÀzÀ°è
PÀĽvÀzÀÄÝ ªÀiÁvÀæ UÉÆvÀÄÛ. Hl ªÀUÉÊgÉ PÀĽvÀ°èUÉà §gÀÄwÛvÀÄÛ. DUÁUÀ PÀÄr0iÀÄ®Ä
dÆå¸ï PÉÆqÀÄwÛzÀÝgÀÄ. UÀUÀ£ÀPÉÌÃj ºÁgÁqÀÄwÛzÀÄÝzÀÄ UÉÆvÁÛUÀ¯Éà E®è. MlÄÖ 23
UÀAmÉUÀ¼À ¥Àæ0iÀiÁtªÉAzÀÄ ªÀÄPÀ̼ÀÄ ºÉýzÀÝgÀÄ. ¥ÉÃj¸ï £À°è «ªÀiÁ£ PɼÀV½0iÀÄĪÁUÀ K£ÉÆà ¨ÉAQ ¥ÉnÖUÉUÀ¼ÀAwzÀÝ PÀlÖqÀUÀ¼ÀÄ
PɼÀV½0iÀÄĪÁUÀ zÉÆqÀØzÁUÀÄvÁÛ PɼÀUÉ vÀ®¥ÀŪÁUÀ §ºÀ¼À zÉÆqÀØzÁV PÀAqÀĪÀÅ.¥ÉÃjù¤AzÀ
ªÀÄÄAzÀĪÀjzÀ «ªÀiÁ£À ¥Àæ0iÀiÁt CmÁèAnPï ¸ÀªÀÄÄzÀæ zÁn CªÉÄÃjPÁzÀ PÀqÉUÉ zsÁ«¸ÀÄwÛzÀÄÝzÀÄ
£ÀªÀÄUÉ ºÉÃUÉ UÉÆvÁÛUÀ¨ÉÃPÀÄ. «ªÀiÁ£À FUÀ £ÉªÁPï𠤯ÁÝtzÀ°è E½0iÀÄÄwÛzÉ JAzÀÄ
zsÀ餪ÀzsÀðPÀzÀ°è PÀgÉzÀÄ ºÉýzÁUÀ¯Éà E£ÀÄß £ÁªÀÅ «ªÀiÁ£À¢AzÀ
E½0iÀĨÉÃPÁVzÉ0iÉÄAzÀÄ UÉÆvÁÛ¬ÄvÀÄ. ¸Àj0iÀiÁzÀ ¸ÀªÀÄ0iÀÄPÉÌà ¤¯ÁÝtzÀ°è «ªÀiÁ£À
PɼÀV½¬ÄvÀÄ. C°èAzÀ ªÀÄÄAzÉ £ÀªÀÄä ªÀÄÄA¢£À ¥Àæ0iÀiÁtPÉÌ £ÀªÀÄä eÉÆvÉUÉ
0iÀiÁgÀÆ E®è. £ÀªÀÄä eÉÆvÉVzÀݪÀgÀÄ ¨ÉÃgÉ «ªÀiÁ£ÀzÀ°è CªÀjgÀĪÀ°èUÉ
ºÉÆÃUÀ¨ÉÃQvÀÄÛ. ºÁUÉ «ªÀiÁ£À¢AzÀ E½0iÀÄ®Ä £ÀªÀÄä ®UÉÃeï ºÉQÌPÉƼÀî®Ä C°è CªÀgÀ
¸ÀºÁ0iÀÄ ¹QÌvÀÄÛ.
MAzÀÄ UÀAmÉ PÀ¼ÉzÀÄ £ÁªÀÅ C°èAzÀ ¦mïì §Uïð UÉ ºÉÆÃUÀĪÀ «ªÀiÁ£ÀzÀ°è
ºÉÆÃUÀ¨ÉÃQvÀÄÛ. ºÁUÉ PÁ0iÀÄÄwÛzÀÝAvÉ
ªÉÄÊPï £À°è ‘¦mïì
§Uïð UÉ ºÉÆÃUÀĪÀ «ªÀiÁ£À PÉlÄÖ ºÉÆÃVzÉ. D «ªÀiÁ£ÀzÀ°è ºÉÆÃUÀĪÀ
¥Àæ0iÀiÁtÂPÀgÀ£ÀÄß ªÀiÁgÀ£É0iÀÄ ¢£À ¨É½UÉÎ 6 UÀAmÉ0iÀi «ªÀiÁ£ÀzÀ°è
PÉÆAqÀĺÉÆÃUÀ¯ÁUÀĪÀÅzÀÄ’
JAzÀÄ PÀgÉzÀÄ ºÉýzÀgÀÄ. ªÀÄUÀ£À ¥sÉÇÃ£ï £ÀA§gï EzÀÄÝzÀjAzÀ ¥sÉÇãÀ ªÀiÁr
«µÀ0iÀÄ w½¹zɪÀÅ. CªÀgÀÆ UÁ§j0iÀiÁVzÀÝgÀÄ. ¦mïì §Uï𠤯ÁÝtPÉÌ §AzÀÄ £ÁªÀÅ
§gÀĪÀÅ¢®èªÉAzÀÄ ªÀÄ£ÉUÉ ºÉÆÃVzÀÝgÀÄ. D ªÀgÉUÉ £ÀªÀÄä eÉÆvÉVzÀݪÀgÀÄ ¨ÉÃgÉ
«ªÀiÁ£ÀzÀ°è ºÉÆÃV0iÀiÁVzÉ. C¥ÀjavÀ ¸ÀܼÀzÀ°è £Á«§âgÀÄ ªÀiÁvÀæ. «ªÀiÁ£À
¤¯ÁÝtzÀ°è0iÉÄà ¨É¼ÀVΣÀ ªÀgÉUÉ ¤®ÄèªÀAvÁ¬ÄvÉÃ? K£ÀÄ ªÀiÁqÀ°? ¸Àj0iÀiÁV
¨sÁµÉ0iÀÄÆ §gÀĪÀÅ¢®è. DzÀgÀÆ PËAlgï £À°è ºÉÆÃV £Á£Éà ºÀgÀPÀÄ ªÀÄÄgÀÄPÀÄ EAVèµï
£À°è C¥ÀjavÀgÁzÀ £ÁªÀÅ ¨É¼ÀVΣÀ ªÀgÉUÉ K£ÀÄ ªÀiÁqÀ¨ÉÃPÀÄ? ºÉAUÀĸÀgÀÆ
eÉÆvÉVzÁÝgÉ JAzÉ®è ºÉýzÀÝPÉÌ MAzÀÄ ºÉÆÃmÉ°£À°è F ¢£À gÁwæ G¼ÀPÉƼÀÀÄzÀÄ.
C°èUÉ ºÉÆÃUÀĪÀ ªÁºÀ£À«zÉ. ¤ªÀÄä ®UÉÃeï vÉPÉÆÌAqÀÄ ºÉÆÃV gÁwæ C°èzÀÄÝ, ¨É½UÉÎ
CzÉà ªÁºÀ£ÀzÀ°è §¤ß JAzÀÄ ªÀåªÀ¸ÉÜ ºÉýzÀgÀÄ. ¸Àj ºÁUÉà CªÀgÀ ªÁºÀ£ÀzÀ°è ®UÉÃdÄ ¸ÀªÉÄÃvÀ gÀÆ«ÄUÉ
ºÉÆÃzɪÀÅ.
ºÉÆÃmÉð£À°è ªÀåªÀ¸ÉÜ ZÉ£ÁßVvÀÄÛ.
CzÀgÉƼÀUÉà £ÀªÀÄUÉ PÁ¦ü ªÀiÁr PÀÄrzÀÄPÉƼÀÀÄzÀÄ. DzÀgÉ C¥ÀjavÀ HgÀ°è
¨É¼ÀVΣÀ ªÀgÉUÉ EgÀĪÀÅzÀ®èªÉÃ? ºÉÃUÉÆà K£ÉÆÃ? JAzÀÄ K£É®è 0iÉÆÃZÀ£É §AzÀÄ
¤zÉÝ0iÉÄà §gÀ¯ÉÆ®èzÀÄ. D ¸ÀAzÀ¨sÀðªÀ£ÀÄß £É£É¹zÁUÀ ªÉÄÊ dĪÉÄä£ÀÄßvÀÛzÉ.C¥ÀjZvÀ
HgÀ°è £ÀªÀÄä ¥ÉÊQ0iÀĪÀgÀÄ 0iÀiÁgÀÆ E®è¢gÀĪÁUÀ £Á«§âgÉà EzÀÄÝzÀjAzÀ ¸Àé®à
CAfPÉ0iÀiÁzÀgÀÆ K£ÉÆà ºÀÄZÀÄÑ zsÉÊ0iÀÄð¢AzÀ ªÀÄ®VzɪÀÅ.J®è fêÀªÀiÁ£ÀzÀ ºÉƸÀ
C£ÀĨsÀªÀ! ¸Àé®à eÉÆA¥ÀÅ ºÀwÛzÀAvÁV JZÀÑgÀªÁzÁUÀ 5 UÀAmÉ PÀ¼É¢vÀÄÛ.
¸ÀªÀÄ0iÀÄPÉÌ ¸Àj0iÀiÁV ¤¯ÁÝtPÉÌ vÀ®¥À¨ÉÃPÀ®è! ªÀÄvÉÛ ¥ÀÅ£ÀB ®UÉÃeï ZÉPï E£ï DUÀ¨ÉÃPÀÄ. CzÀPÉÌ UÀr©r¬ÄAzÀ
¸ÁߣÀ ªÀÄÄV¹ PÁ¦ü ªÀiÁvÀæ ªÀiÁr PÀÄrzÀÄ ¤¯ÁÝtPÉÌ ºÉÆgÀmɪÀÅ.
®UÉÃeï ZÀPï E£ï ªÀiÁqÀĪÀ PÀæªÀÄ
ªÉÆzÀ¯Éà UÉÆwÛzÀÝjAzÀ CzÉ®è ¸Àj0iÀiÁ¬ÄvÀÄ. ªÀÄvÉÛ ªÀÄÄAzÉ £ÀªÀÄä ZÀPï E£ï
DUÀ¨ÉÃQvÀÄÛ. ¸Àj ªÀÄÄAzÉ ºÉÆÃzɪÀÅ. J®è ºÉƸÀvÉà DVvÀÄÛ. FUÁUÀ¯Éà UÀAmÉ
DgÀƪÀÄÄPÁÌ®Ä D¬ÄvÀÄ. £ÁªÀÅ ¸Á°£À°è ¤AvÀÄ ªÀÄÄAzÉ vÀ®¦zÁUÀ £À£ÀߣÉßãÉÆÃ
vÉÆAzÀgɬĮèzÉ ªÀÄÄAzÉ PÀ½¹zÀgÀÄ. £ÀÆå0iÀiÁPïð £À PÀlÖqÀ zsÀéA¸ÀªÁzÀ £ÀAvÀgÀ
«ªÀiÁ£À ¤¯ÁÝtUÀ¼À°è d£ÀgÀ£ÀÄß ¸ÁPÀµÀÄÖ eÁUÀævɬÄAzÀ M¼ÀUÉ ©qÀÄwÛzÀÝgÀÄ. £ÀªÀÄä
PÉÊaî, ªÁZÀÄ, ±ÀÆUÀ¼ÀÄ ¥Àæw0iÉÆAzÀ£ÀÆß mÉæÃ0iÀÄ°è ºÁQ ªÀÄÄAzÀPÉÌ PÀ½¸ÀÄvÁÛgÉ.
ªÀÄvÉÛ £ÁªÀÅ MAzÀÄ UÉÃl£ÀÄß zÁlĪÁUÀ
ªÉÄl¯ï ¢mÉPÀÖgï £ÀªÀÄä zÉúÀzÀ°è zsÀj¹zÀ
¯ÉÆúÀzÀ D¨sÀgÀt ªÀUÉÊgÉUÀ¼ÉãÁzÀgÀÆ EzÀÝ°è ¸ÉÊgÀ£ï ªÉƼÀUÀÄvÀÛzÉ. £À£Àß
Q«UÀ¼À°èzÀÝ D¨sÀgÀt CzÀPÉÌ UÉÆvÁÛV®èªÉÇà K£ÉÆÃ? ¸ÉÊgÀ£ï ªÉƼÀUÀ°®è. ºÁUÉ
ªÀÄÄAzÉ ºÉÆÃUÀ®Ä ©lÖgÀÄ. DZÉ ºÉÆÃV £ÀªÀÄä PÉÊaî,ªÁZÀÄ, ±ÀÆUÀ¼À£ÀÄß ºÉQÌPÉÆAqÀÄ
wgÀÄV £ÉÆÃrzÀgÉ eÉÆvÉUÉ ¥Àw߬Įè.
£À£Àß ªÀÄqÀ¢0iÀÄ£ÀÄß DPÉ ªÀÄÄAzÉ zÁlĪÁUÀ ¸ÉÊgÀ£ï ªÉƼÀV vÀqÉzÀÄzÀÄ
£À£Àß UÀªÀÄ£ÀPÉÌ §A¢gÀ°®è. ¸ÀA§AzsÀ¥ÀlÖªÀgÀÄ PÀÆqÀ¯Éà CªÀ¼À£ÀÄß PÉýzÀgÀÄ.
K£ÁzÀgÀÆ ¤ªÀÄä zÉúÀzÀ°è ¨ÉÃgÉãÁzÀgÀÆ ªÀ¸ÀÄÛUÀ¼ÀÄ EªÉ0iÉÄà JAzÀÄ PÉýzÀgÀÄ.
¨ÉÃgÉäzÉ ªÀÄtÄÚ. ¯ÁqÀ£ï ¸ÉÆáÃn¹zÀ ¨ÉÆÃA©¤AzÀ J®ègÀ ªÉÄïÉ0iÀÄÆ CªÀjUÉ ¸ÀA±À0iÀÄ!
ªÀÄvÉÛ CªÀ¼À£ÀÄß gÀÆ«Ä£ÉƼÀUÉ PÀgÀPÉÆAqÀÄ ºÉÆÃzÀgÀÄ. J®è ªÀÄÄnÖ £ÉÆrzÀgÀAvÉ.
K£ÀÆ E®è. ªÀÄvÀÆÛ PÉýzÁUÀ ¸ÉÆAlzÀ°è GrzÁgÀ«zÉ0iÉÄAzÀ¼ÀÄ. CzÀ£ÀÆß
£ÉÆÃqÀ¨ÉÃPÉAzÁ¬ÄvÀÄ. £ÉÆÃrzÀgÀÄ. ¥ÀgÀªÁV®è JAzÀÄ ªÀÄvÉÛ ©lÖgÀÄ. EµÉÖ®è DV
«ªÀiÁ£ÀzÀ UÉÃmï vÀ®¦zÁUÀ £ÁªÀÅ ºÉÆÃUÀ¨ÉÃPÁzÀ «ªÀiÁ£À CzÁUÀ¯Éà ºÉÆgÀlÄ
ºÉÆÃVvÀÄÛ. £ÁªÀÅ C¯Éèà ¨ÁQ!. DzÀgÉ £ÀªÀÄä ®UÉÃeï «ªÀiÁ£ÀzÀ°è ºÉÆÃV0iÀiÁVvÀÄÛ. £ÁªÀÅ
D «ªÀiÁ£ÀPÉÌ §gÀĪÀgÉAzÀÄ zÉÆqÀØ ªÀÄUÀ M¼ÀUÉ ®UÉÃeï PËAlgï UÉ §AzÀÄ £ÉÆÃrzÁUÀ
£ÀªÀÄä ºÉ¸ÀgÀÄ £ÀªÀÄÆ¢¹zÀ ®UÉÃeï CªÀ¤UÉ PÀArvÀÄ. JwÛPÉÆAqÀÄ ªÀÄ£ÉUÉ ºÉÆÃVzÀÝ£ÀÄ.
£ÁªÀÅ £ÉªÁPïð £À°è ¨ÁQ.
ªÀÄPÀ̼ÀÄ «ªÀiÁ£ÀzÀ PËAlgï UÉ
ªÀÄvÉÛ ¥sÉÇÃ£ï ªÀiÁr «ZÁj¹zÁUÀ ¸ÀAeÉ 6 UÀAmÉ0iÀÄ «ªÀiÁ£ÀzÀ°è £ÀªÀÄä£ÀÄß
PÉÆAqÀĺÉÆÃUÀĪÀÅzÉAzÀÄ ºÉýzÀgÀÄ. £ÀªÀÄä ¨ÉæÃPï ¥sÁ¸ïÖ ¤¯ÁÝtzÀ°è0iÉÄà D¬ÄvÀÄ.
¸ÀAeÉ0iÀÄ ªÀgÉUÉ K£ÀÄ ªÀiÁqÀĪÀÅzÀÄ? JAzÉ®è 0iÉÆÃa¸ÀÄwÛzÉݪÀÅ. ¤¯ÁÝtPÉÌ ºÀwÛgÀzÀ°è M§âgÀÄ GvÀÛgÀ
PÀ£ÀßqÀzÀªÀgÀAvÉ. CªÀgÀÄ £ÀªÀÄä ªÀÄPÀ̼À
UɼÉ0iÀÄgÀÆ, ¸ÀA§A¢üPÀgÀÆ DVzÀÝgÀÄ. CªÀgÀ£ÀÄß PÀgÉzÀÄ «µÀ0iÀÄ ºÉýzÀÝPÉÌ CªÀgÀÄ
£ÀªÀÄä£ÀÄß CªÀgÀ ªÀÄ£ÉUÉ PÀgÀPÉÆAqÀÄ ºÉÆÃUÀ®Ä M¦àzÀgÀÄ. CªÀgÀ ªÀÄ£É0iÀÄ°è CªÉÄÃjPÁzÀ ªÉÆzÀ® ¸ÁߣÀ, Hl
ªÀÄÄV¹ ¸ÀAeÉ0iÀÄ «ªÀiÁ£ÀPÉÌ vÀAzÀÄ ©qÀĪÀÅzÉAzÀÄ wêÀiÁð£ÀªÁ¬ÄvÀÄ. ¹ÃgÉ GlÖ
ºÉAUÀ¸ÀÄ EªÀ¼ÉƧâ¼Éà EzÀÄÝzÀjAzÀ CªÀgÀÄ £ÀªÀÄä£ÀÄß UÀÄgÀÄw¹ PÀgÉzÀgÀÄ. CªÀgÉÆqÀ£É CªÀgÀ ªÀÄ£ÉUÉ ºÉÆÃzɪÀÅ. ¸ÁߣÀ, Hl eÉÆvÉUÉ
¸Àé®à «±ÁæAw ªÀÄÄV¹ «ªÀiÁ£À ¤¯ÁÝtPÉÌ §AzɪÀÅ. ºÁUÉ £ÀªÀÄä «zÉñÀ ¥Àæ0iÀiÁtzÀ°è
£ÀªÀÄä£ÀÄß PÀgÉzÀÄ G¥ÀZÀj¹zÀ ªÉÆzÀ®
zÀA¥ÀwUÀ¼ÉAzÀÄ FUÀ®Æ £É£É¦¹PÉƼÀÄîvÉÛêÉ. ªÀÄvÉÛ ¸ÀAeÉ0iÀÄÆ ºÀªÁªÀiÁ£ÀzÀ
ªÉÊ¥ÀjÃvÀå¢AzÀ ¸Àé®à vÀqÀªÁV0iÉÄà ºÉÆgÀl «ªÀiÁ£À ¦mïì §Uïð vÀ®¦vÀÄ.ªÀÄPÀ̼ÀÄ
£ÀªÀÄä£ÀÄß PÁ0iÀÄÄwÛzÀÝgÀÄ. ¨ÉÃgÉ ®UÉÃeï E®èzÀ PÁgÀt ¨ÉÃUÀ ºÉÆgÀUÉ §AzɪÀÅ
J®ègÀÆ ¸ÀAvÉÆõÀ¢AzÀ £ÀªÀÄä C£ÀĨsÀªÀUÀ¼À£ÀÄß ºÉüÀÄvÀÛ ªÀÄUÀ£À J¥Ámïð ªÉÄAnUÉ
§AzɪÀÅ. ºÁUÉ ªÉÆzÀ® ¸À®ªÉà DzÀ F C£ÀĨsÀªÀ JAzÉAzÀÆ £É£À¦¸ÀĪÀAvÁ¬ÄvÀÄ. D UɼÉ0iÀÄgÀÄ
JAlÄ ªÀµÀð PÀ¼ÉzÀÄ ¨sÉnÖ0iÀiÁzÁUÀ £ÀªÀÄä zsÀ£ÀåªÁzÀUÀ¼À£ÀÄß ºÉý CA¢£À
C£ÀĨsÀªÀªÀ£ÀÄß ªÀÄvÉÆÛªÉÄä £É£É¹PÉÆAqɪÀÅ.
Subscribe to:
Posts (Atom)