Tuesday, November 24, 2015

uppu

                                                            ಉಪ್ಪು
ಉಪ್ಪು  ಅಂದರೆ ಲವಣ  ಜೀವನಾಧಾರವಗಿದೆ. ಉಪ್ಪಿಲ್ಲದೆ ಊಟ್ಯವಿಲ್ಲ ಎಂದರೆ  ಬದುಕಲು ಆಹಾರ ಬೇಕು, ಆಹಾರ ತಿನ್ನಲು ರುಚಿಸಬೇಕಾದರೆ ಉಪ್ಪು ಬೇಕೇ ಬೇಕು .ಉಪ್ಪಿಲ್ಲವಾದರೆ ಊಟ ಸಪ್ಪೆ. ಸಪ್ಪೆ ಊಟ ಮಾಡುವವರೂ ಇದ್ದಾರೆ. ಆದರೆ ನಾಲಿಗೆಗೆ ರುಚಿ ಹತ್ತೆ ಬೇಕಾದರೆ ಉಪ್ಪು ಬೇಕು. ಉಪ್ಪಿನ ಪಥ್ಯವಿದ್ದವರು  ಕೂಡಾ ತುಂಬ ಕಡಿಮೆಯಾದರೂ ಉಪ್ಪು ಉಪಯೋಗಿಸುತ್ತಾರೆ. ನಾವು ತಿನ್ನುವ ಆಹಾರ,ನೀರು ಹಾಣ್ಣು ತರಕಾರಿಗಳಲ್ಲಿಯೂ ಲವಣಾಂಶ ಇದ್ದರೂ ಅವು ಜೀವನಕ್ಕೆ ಬೇಕೇ ಬೇಕಾದರೂ ನಾಲಿಗೆ ಬಯಸುವುದು ಈ ಉಪ್ಪನ್ನು.!ಉಪ್ಪು ಕೂಡಿಸದೆ ಮಾಡುವ ಊಟವೂ ಇಷ್ಟವಾಗುವುದಿಲ್ಲ. ಮತ್ತೆ ಕೆಲವರಿಗೆ ಪಾಯಸ ಬೆಲ್ಲ ಹಾಕಿ ಮಾಡಿದುದಾರೆ ಸ್ವಲ್ಪ ಉಪ್ಪು ಸೇರಿಸಿಕೊಂಡರೆ ಆ ರುಚಿಯೇ ಬೇರೆ.ಶ್ಃಅಡ್ರಸಗಳಲ್ಲಿ ಸೇರಿಕೊಂಡ ಈ ಉಪ್ಪು ರುಚಿಯಲ್ಲಿ ಪ್ರಾಡಾನ್ಯ ಪಡೆದಿದೆ.
ನಾವು ತಿನ್ನುವ ಉಪ್ಪು ಸಮುದ್ರದಿಂದ ದೊರಕುವುದು. ಸಮುದ್ರದ ನೀರನ್ನು ಇಂಗಿಸಿ ಉಪ್ಪು ತಯಾರಿಸುತ್ತಾರೆ. ಹಿನ್ನೀರು ಪ್ರದೇಶಗಳಲ್ಲಿ ಎಕ್ರೆಗಟ್ಟಲೆ ಜಾಗದಲ್ಲಿ ಉಪ್ಪು ನೀರನ್ನು ಭರತದ ಸಮಯಕ್ಕೆ ತುಂಬಿಸಿಕೊಂಡರೆ ಒಂದೆರಡು ದಿನಗಳಲ್ಲಿ ಸೂರ್ಯನ ಬಿಸಿಲಿಗೆ ನೀರು ಆವಿಯಾಗಿ ತಳದಲ್ಲಿ ಉಪ್ಪು ಮಾತ್ರ ಉಳಿಯುತ್ತದೆ. ಈ ಉಪ್ಪನ್ನು ಗೋಣಿ ಚೀಲಳಲ್ಲಿ ತುಂಬಿಸಿ ಮಾರಾಟ ಮಾಡುತ್ತಾರೆ. ಆಂಗ್ಲರ ಆಡಳಿತ ಕಾಲದಲ್ಲಿ ಉಪ್ಪು ತಯಾರಿಸಲು ಬಿಡುತ್ತಿರಲಿಲ್ಲವಂತೆ. ಇಂಗ್ಲೇಂಡಿನಿಂದ ಬರುವ ಹಡಗಿನಲ್ಲಿ( ಬರುವಾಗ ಈ ಸರಕು ತಂದರೆ ಹಿಂದಿರುಗುವಾಗ ಇಲ್ಲಿಯ ಬೆಲೆಬಾಳುವ  ಇಲ್ಲಿನ ಬೆಲೆಬಾಳುವ ಹತ್ತಿ ವಗೈರೆ ಕೊಂಡೊಇದು ಲಾಭ ಮಾಡುತ್ತಿದ್ದರು.ಇದನ್ನು ವಿರೋಧಿಸಿ ಉಪ್ಪಿನ ಸತ್ಯಾಗ್ರಹ ಗಂಧೀಜಿಯವರು  ಕೈಕೊಂಡದ್ದು ಚರಿತ್ರೆ.ಹೀಗೆ ತಯಾರಿಸಿದ ಉಪ್ಪಿನಲ್ಲಿ ಅಯೋಡಿನ್ ಕಡಿಮೆಯೆಂದು ಈಗ ಅಯೋಡೈಸ್ದ್ ಉಪ್ಪು ಮಾರುಕಟ್ಟೆಯಲ್ಲಿ ದೊರಕುವುದು ಸಾಮಾನ್ಯ ಉಪ್ಪಿಗೆ ಇಲ್ಲೂ ಗಿರಾಕಿ ಕಡಿಮೆಯಾಗಿದೆ! ಅರಕಾರವೇ ವ್ಯಾಪಾರಿಗಳ ಮುಸ್ಟಿಯಲ್ಲಿರುವಾಗ ಸಾಮಾನ್ಯರ ಮಾತಿಗೆ ಬೆಲೆ ಬರುವುದೇ? ನೈಜ ಉಪ್ಪಿನಲ್ಲಿರುವ ಖನಿಜಾಂಶಗಳು ಮಾರುಕಟ್ಟೆಯಲ್ಲಿ ದೊರಕುವ ಅಯೋಡೈಸ್ಡ್ ಉಪ್ಪಿನಲ್ಲಿ ಕಡಿಮೆಯಾಗಿರುವುದು.
     ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರೊಂದಿಗೆ ಹಲವಾರು ಜನ ಜೈಲು ಸೇರಿದ್ದರು.ಅಂದಿನ ದಿನಗಳಲ್ಲಿ ಜನರು ವಿದೇಶೀಯರ ವಿರುದ್ಧ ಒಂದಾಗಿದ್ದರು. ಈಗ ದೇಶೀಯರ ವಿರುದ್ಧ ಹೋರಾಡಬೇಕಾಗಿದೆ. ಸಮುದ್ರದ ನೀರಿನಲ್ಲಿಯೂ ಉಪ್ಪು ಹೇಗೆ ಬರುತ್ತದೆಯೆಂಬುದಕ್ಕೆ ಸಮುದ್ರಕ್ಕೆ ಬೇರೆ ನದಿಗಳಿಂದ ನೀರು ಹರಿದು ಬರುತ್ತದೆ. ಭೂಮಿಯಲ್ಲಿರುವ ಖನಿಜ ಲವಣಗಳು ಕರಗಿ ನೀರಾಗಿ ನದಿ ನೀರಿನೊಂದಿಗೆ ಸಾಗರ ಸೇರಿದರೆ ಅಲ್ಲೇ ಉಳಿಯುತ್ತದೆ. ವರ್ಷ ಒಟ್ಟಗಿ ಬರುವ ಖನಿಜ ಲವಣಗಳಿಂದ ಸಮುದ್ರದ ನೀರಿನಲ್ಲಿರುವ ಉಪ್ಪಿನ ಪ್ರಮಾಣ ಹೆಚ್ಚಾಗುತ್ತದೆ. ಒಂದು ನಿರ್ದಿಷ್ಟ ವರ್ಷದಿಂದ ಮತ್ತಿನ ವರ್ಷಕ್ಕೆ ಉಪ್ಪಿನ ಪ್ರಮಾಣ ಹೆಚ್ಚಾದುದನ್ನು ಲೆಕ್ಕ ಹಾಕಿದರೆ ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಾಗುತ್ತದೆಯೆಂದು ಗೊತ್ತಾಗುವುದಷ್ಟೆ!ಹಾಗಿ ಒಂದು ವರ್ಷದಲ್ಲಿ ಸರಾಸರಿ ಹೆಚ್ಚಾಗುವ ಉಪ್ಪಿನ ಪ್ರಮಾಣ ಲೆಕ್ಕ ಹಾಕಿದರೆ ಭೂಮಿಯ್ ಉತ್ಪತ್ತಿ, ಉಪ್ಪಿನ ಆಳ ಎತ್ತರಗಳನ್ನು ಲೆಕ್ಕ ಹಾಕಬಹುದೇನೋ!ಾಂತೂ ಸಮುದ್ರಕ್ಕೆ ಉಪ್ಪಿನ ಆಗಮನ ಬೇರೆಲ್ಲಿಂದಲೂ ಅಲ್ಲ ಭೂಮಿಯಿಂದಲೇ ಎಂಬುದು ಖಚಿತ.
ಉಪ್ಪಿನ ಸುದ್ದಿ ತೆಗೆಯುವಾಗ ಕೆಲವರು ನೈಜ ಸುದ್ದಿಗೆ ಉಪ್ಪು ಕಾರಸೇರಿಸಿ ಉತ್ಪ್ರೇಕ್ಷೆಯಿಂದ ಹೇಳುವುದಿದೆ. ಸುದ್ದಿ ವಿಶ್ಲೇಷಣೆ ಮಾಡುವವರು ನಿಜವಾದುದಲ್ಲವಾದರೂ ನಿಜವೆಂಬಂತೆ ಜನರನ್ನು ಮೋಸಗೊಳಿಸಲು ಉಪ್ಪು ಕಾರ ಸೇರಿಸಿ ದೊಡ್ಡದು ಮಾಡಿ ಹೇಳುತ್ತಾರೆ. ಮನುಷ್ಯ ಉಪ್ಪು ಹುಳಿ ಹಾಗೂ ಇತರ ರಸವಿಶೇಷಗಳನ್ನು ಇಷ್ಟಪಡುತ್ತಾನೆ. ಆದರೆ ಅತಿಯಾದರೆ ಅಮೃಅವೂ ವಿಷವಂತೆ. ಹಿತವಾಗಿ ಮಿತವಾಗಿ ತಿಂದರೆ ಮಾತ್ರ ರುಚಿಗೂ ಹಿತ.ಹೊಟ್ಟೆಗೂ ಹಿತ ಹೆಚ್ಚಾಗಿ ಬಿಟ್ಟಸ್ರೆ ರಕ್ತದ ಒತ್ತಡ,ಹಾಗೂ ಹೆಚ್ಚು ಸಕ್ಕರೆ ತಿಂದರೆ ಸಕ್ಕರೆ ಕಾಯಿಲೆ ಬರುವುದಲ್ಲವೇ? ಹಾಗೆಯೇ ನಮ್ಮ ನಡೆ ನುಡಿಗಳೂ ನಮ್ಮ ಹಿತಕ್ಕೂ ದೇಶದ ಹಿತಕ್ಕೂ ಬೇಕಲ್ಲವೇ?ನಿಜವಾಗಿ ಸತ್ಯ ಮಾರ್ಗದಲ್ಲಿ ನಡೆಯುವುದು ಆರೋಗ್ಯಕ್ಕೂ ಒಳ್ಳೆಯದು. ನಮ್ಮ ದೇಹವು ಬಹುಕಾಲ ಬಾಳಬಹುದು.
ಉಪ್ಪಿನಲ್ಲಿಯೂ ಬೇರೆ ಬೇರೆ ವಿಭಾಗಗಳಿವೆ. ಖನಿಜ ಉಪ್ಪು ಭೂಮಿಯಿಂದ ಅಗೆದು ತೆಗೆಯುವುದು. ಬಹಳ ಕಾಲದ ಹಿಂದೆ ಸಮುದ್ರವಾಗಿದ್ದ ಪ್ರದೇಶವಾಗಿದ್ದ ಭೂಭಾಗದಲ್ಲಿ ಅಗೆದು ತೆಗೆಯುವುದು. ಈ ಉಪ್ಪನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಬಿಡಾಲ ಲವಣ,ಸೈಂದುಪ್ಪು ಹ್ಹೀಗೆ ಹೆಸರುಗಳಿಂದ ಆಯುರ್ವೇದ ಪಂಡಿತರಿಗೆ ಚಿರಪರಿಚಿತ. ಸಾಮಾನ್ಯ ಉಪ್ಪು ಎಂದು ಕರೆಯುವುದು ಸಮುದ್ರದ ನೀರಿನಿಂದ ತೆಗೆದದ್ದು. ಹಿಂದೆ ಕಲ್ಲುಪ್ಪು ಕರಿಯುಪ್ಪು ಎಂದು ಕರೆಯುತ್ತಿದ್ದರು. ಈ ಉಪ್ಪನ್ನು ಗೋಣಿ ಚೀಲದಲ್ಲಿ ತುಂಬಿಸಿ ಮನೆ ಮನೆಗಳಿಗೆ ಕೊಂಡೊಯ್ಯುತಿದ್ದರು. ಮಕ್ಕಳನ್ನು ಬೆನ್ನ ಮೇಲೆ ಹಾಕಿ "ಉಪು ಬೇಣೊ ಬಟ್ಟೆಚ್ಚ "ಎಂದು ಆಡುತ್ತಿದ್ದರು ಈಗ ಇಂತಹ ಉಪ್ಪು ಕಾಣಸಿಗುವುದಿಲ್ಲ ಅಯೋಡೈಸ್ಡ್ ಉಪ್ಪು ಬೆಳ್ಳಗಿತ್ತದೆ.ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಮಾರುತ್ತಾರೆ. ಹಿಂದೆ ಹಿರಿಯರು ಚೀಲಗಳಲ್ಲಿ ತಂದ ಉಪ್ಪನ್ನು ದೋಣಿಯಾಕಾರದ ಮರಿಗೆಗಳಲ್ಲಿಯೋ ಗುಡಾಣಗಳಲ್ಲಿಯೋ ತುಂಬಿಸಿಡುತ್ತಿದ್ದರು. ಉಪಯೋಗಿಸುವಾಗ ತೊಳೆದ್ಯುವುದು ರೂಢಿ. ಈ ಉಪ್ಪನ್ನು ಕದಡಿ ಬೆಂಕಿಯಲ್ಲಿಟ್ಟು ಕುದಿಸಿ ಇಂಗಿಸಿದರ್ತೆ ಬಿಳಿಯುಪ್ಪು ಸಿಗುತ್ತಿತ್ತು. ಅದನ್ನ್ ಉಪ್ಪಿನಕಾಯಿಗೆ ಉಪಯೋಗಿಸುತ್ತಿದ್ದರು. ತೆಂಗಿನ ಮರಗಳಿಗೆ ಒಳನಾಡುಗಳಲ್ಲಿ ಬುಡಕ್ಕೆ ಹಾಕಿದರೆ ಹುಲುಸಾಗಿ ಬೆಳೆಯುತ್ತದೆ ಚೆನ್ನಾಗಿ ಕಾಯಿಗಳನ್ನು ಕೊಡುತ್ತದೆ. ಒಟ್ಟಾರೆ ಉಪ್ಪು ನಮಗೆ ಅವಿನಾಭಾವ ಸಂಬಂಧವುಳ್ಳದ್ದು.

havyaka sammelana

                ಅಮೇರಿಕಾಲ್ಲಿ ಹವ್ಯಕ ಸಮ್ಮೇಳನ

ಅಮೇರಿಕಾಲ್ಲಿ ಎನ್ನ ಮಕ್ಕೊ ಇಪ್ಪ ಕಾರಣ  ಬರೆಕ್ಕಾವುತ್ತು. ಈ ಸರ್ತಿ ಜೂನಿಲ್ಲಿ ಬಂದಿಪ್ಪಗ ಇಲ್ಲಿ ಹವ್ಯಕ ಸಮ್ಮೇಳನ ಹೇಳಿ ಗೊಂತಾತು. ಅಮೇರಿಕಾದ ವಾಶಿಂಗ್ ತನ್ ಡಿ ಸಿ ಲ್ಲಿಪ್ಪ ಚಿನ್ಮಯಸ್ ಮಿಶನ್ನಿನೋರ ಕಟ್ಟಡಲ್ಲಿ ಕಾರ್ಯಕ್ರಮ ಹೇಳಿಯೂ ಗೊಂತಾತು. ಎನ್ನ ಮಗ ಸೊಸೆ ಪುಳ್ಯಕ್ಕೊ ಕಾರ್ಯಕ್ರಮಲ್ಲಿ ಭಾಗವಹಿಸುಲೆ ಇತ್ತಿದ್ದವು.ಅಮೇರಿಕಾಲ್ಲಿಪ್ಪ ಹವ್ಯಕರು ಸೇರಿಗೊಂಡು ಎಲ್ಲ ಒಟ್ಟು ಸೇರುವ ಕಾರ್ಯಕ್ರಮ ಇದ್ದು. ದೂರ ದೂರಂದ ಮುನ್ನಾಣ ದಿನವೇ ಅಲ್ಲಿ ಬಂದು ಸೇರುತ್ತವು. ಅಮೇರಿಕಾ ಮಾತ್ರ ಅಲ್ಲ ಕೆನಡಂದಲೂ ಬತ್ತವು. ಒಟ್ಟಾರೆ ಉತ್ತರ ಅಮೇರಿಕಾ ಖಂಡಲ್ಲಿಪ್ಪ ಹವ್ಯಕರು ಆ ದಿನ ಇಲ್ಲಿ ಸೇರುತ್ತವು.ಹಾಂಗೆ ಈ ಸರ್ತಿ ಇಲ್ಲಿಗೆ ಬಂದಿಪ್ಪಗ ಸಮ್ಮೇಳನಕ್ಕೆ ಬಂದ ಹವ್ಯಕರ ಒಟ್ಟಾಗಿ ನೋಡುವ ಸಂದರ್ಭ ಒದಗಿತ್ತು. ಇಲ್ಲಿ ಕೆಲಸ ಮಾಡುವೋರಲ್ಲದ್ದೆ ಮಕ್ಕೊ, ಮತ್ತೆ ಊರಿಂದ ಬಂದ ಹವ್ಯಕರೂ ಸೇರಿ ಸಭಾಭನದೊಳ ಒಟ್ಟಾರೆ ಹವ್ಯಕರೇ ಸೇರಿದ ಅನುಪತ್ಯ! ಸಣ್ಣ ಮಕ್ಕೊ ಇಲ್ಲಿಯಾಣ ಇಒಂಗ್ಲಿಷೇ ಮಾತಾಡಿದರೆ, ಒಳುದೋರೆಲ್ಲ ಹೆಚ್ಚಾಗಿ ನಮ್ಮ ಭಾಷೆಯನ್ನೇ ಆಡುವ ಕಾರಣ ಒಟ್ಟಾರೆ ಊರಿನ ವಾತಾವರಣ!ಮಕ್ಕೊ ಹೆಮ್ಮಕ್ಕೊ, ಪ್ರಾಯದ ಮುದುಕ್ಕರೂ ಸೇರಿತ್ತಿದ್ದವು. ಇಲ್ಲಿಪ್ಪೋರೆಲ್ಲ ಅಂಕ್ಲ್ ಅಂಕ್ಲ್ ಹೇಳಿಗೊಂಡು ತುಂಬ ಮಾತಾದಿದವು. ಅವಕ್ಕೆ ಊರಿಂಗೆ ಹೋದರೆ ಮಾಂತ್ರ ನಮ್ಮೋರ ಕಾಂಬಲೆಡಿಗಷ್ಟೆ! ಹಾಂಗೆ ನಮ್ಮತ್ರೆ ಮಾತಾಡುಲೆ ಕೊಶಿ. ಮಕ್ಕೊಗೆ ಗುರ್ತ ಇದ್ದರೂ ಇಲ್ಲದ್ದರೂ ಎಲ್ಲಾ ನಮ್ಮೋರೇ ಹೇಳುವ ಭಾವನೆಯೊಟ್ಟಿಂಗೆ ಸೆಕೆಗಾಲದ ರಜೆಲ್ಲಿ ಮನೆಲ್ಲೇ ಕೂದು ಬೇಜಾರಪ್ಪಗ ಸಮಪ್ರಾಯದೋಟ್ಟಿಂಗೆ ಓಡಿ ಆಡುವ ಸಂಭ್ರಮ! ಉತ್ತರ ಕನ್ನಡದ ಹವ್ಯಕರೇ ಇಲ್ಲಿ ಜಾಸ್ತಿ ಆದ ಕಾರಣ ಕನ್ನಡಲ್ಲೇ ಮಾತಾಡೆಕ್ಕಾವುತ್ತಷ್ಟೇ! ಕೆನಡಾದ ಟೊರೋಂಟೋಲ್ಲಿಪ್ಪ ಎರ್ಡನೆ ಮಗನೋ  ಅವಂದ ತಮ್ಮ ಇಪ್ಪಲ್ಲಿಂಗೆ ಬಂದಿತ್ತಿದ್ದ. ಎಲ್ಲ ಒಟ್ಟಿಂಗೆ ಸಮ್ಮೇಳನಕ್ಕೆ ಹೆರಯೆಯೊ.
         ಅಮೇರಿಕಾಲ್ಲಿ ಎಲ್ಲಿಗೆ ಹೋವುತ್ತರೂ ಕಾರಿಲ್ಲಿಯೇ ಹೋಪದು.ಇಲ್ಲಿಯಾಣ ಮಾರ್ಗಂಗಳೂ ಒಳ್ಳೆದಿರುತ್ತು. ಜಿ ಪಿ ಯಸ್ ಹಾಕಿದರೆ ಎಲ್ಲಿಂದ ಎಲ್ಲಿ ವರೆಗೂ ಹ್ಫಲಕ್ಕು. ಅಂತೂ ಅಣ್ಣ ತಮ್ಮ ಇಬ್ರುದೆ ಒಟ್ಟಿಂಗೆ ಹೆರಟು ಹನ್ನೊಂದು ಗಂಟಗೆಲ್ಲ ಹೋಗಿ ಎತ್ತಿದೆಯೊ. ಒಂದು ಪಾರ್ಕಿಲ್ಲಿ ಬಂದೋರೆಲ್ಲ ಸೇರಿತ್ತಿದ್ದವು.ಆಸರಿಂಗೆ ನೀರು, ಬಚ್ಚಂಗಾಯಿ ಜ್ಯೂಸ್ ಎಲ್ಲ ಇತ್ತು. ಹೆಚ್ಚಿನೋವು ಸೇರಿದ ಮೇಲೆ ಒಬ್ಬಕ್ಕೊಬ್ಬನ ಪರಿಚಯ ಮಾಡಿಗೋಂಡತ್ತು.ಮತ್ತೆ ತಿಂಡಿ ಹಂಚೋಣ ಅವಕ್ಕವಕ್ಕೆ ಬೇಕಾದ್ದರ ತೆಕ್ಕೊಂಡು ಉಪಾಹಾರ ಮುಗಿಶಿ ಮತ್ತೆ ಮೊಸರನ್ನ ಹೀಂಗೆಲ್ಲ ಹೊಟ್ಟೆ ತಂಪು ಆದ ಮೇಲೆ ಎಲ್ಲೋರು ನಾಲ್ಕು ಗಾಂತಗೆ ಸಭಾಭವನಲ್ಲಿ ಸೇರುವದು ಪ್ರತಿನಿಧಿ ಬೇಜ್ ತೆಕ್ಕೊಂಡ ಮೇಲೆ ಉಪಾಹಾರ ಮುಗಿಶಿ ಅಪ್ಪಗ ಗಣಪತಿ ವಿಗ್ರಹವ ಪಲ್ಲಕಿಲ್ಲಿ ಕೂರುಸಿಗೊಂಡು ಮೆರವಣಿಗೆ ಒಳಂಗೆ ಪ್ರವೇಶ ಮತ್ತೆ ಪೂಜೆ ಪ್ರಾರ್ಥನೆ ಮುಗುದಮೇಲೆ ಕಾರ್ಯಕ್ರಮ ಶುರು.ಸ್ವಾಗತ ಮುಗುದ ಮೇಲೆ  ವಾರ್ಷಿಕ ವರದಿ ವಾಚನ! ಇಷ್ಟರ ವರೆಗೆ ಇನ್ನೂರು ಮುನ್ನೂರು ಆವುತ್ತಿದ್ದಲ್ಲಿ ಈ ಸರ್ತಿ ಐನೂರರಿಂದ ಮೇಲೆ ಜನಂಗೊ ಸೇರಿದ್ದು ಚರಿತ್ರೆಲ್ಲೇ ಹೊಸತ್ತಡೊ.ಇಲ್ಲಿಯಾಣ ಮಹಿಳೆ ಕನ್ನಡದ ಬಗ್ಗೆ ಸಂಶೋಧನೆ ನಡೆಸುಲೆ ಶಿಸಿಗೆ ಬಾಂದು ಇದ್ದತ್ತಡೊ! ಆಮಹಿಳೆ ಸೊವೆನೀರ್ ಉದ್ಘಾಟನೆ ಮಾಡಿದ ಮೇಲೆ,ಮನೋರಂಜನೆ ಶುರು.ಮಕ್ಕಳ ಡೇನ್ಸ್, ಕಿರುನಾಟಕ ಮಕ್ಕಳದ್ದೇ ಬಹಳ ಲಾಯಿಕ ಆಗಿತ್ತು. ಕೊಳಲು ವಾದನ,ಟೋರ್ಚ್ ಲೈಟಿನ ಬೆಳಕಿನ ಮೂಲಕ ನೆರಳು ನಾಟಕದ ಹಾಂಗೆ ಚಿತ್ರ ಬರದೂ ಒಬ್ಬ ತೋರುಸಿದ! ಇಬ್ರೂ ಬೆಂಗಳೂರಿನೊವೆ.ಮತ್ತೆ ಟೊರೊಂಟೋಂದ ಬಂದ ಹವ್ಯಕ ಬಂಡುಗೊ ಯಕ್ಷಗಾನ ರಂಗ ಕಟ್ಟಿದೋವು ಶಿವಕುಮಾರ ಚರಿತ್ರೆ ಹೇಳುವ ಯಕ್ಷಗಾನ! ಎನ್ನ ಮಗ ಪುಳ್ಳಿಯೂ ಮುಖ್ಯ ಪಾರ್ಟ್ ಮಾಡಿತ್ತಿದ್ದವು.ಇಷ್ಟಾದ ಮೇಲೆ ಅಂದ್ರಾಣ ಕಾರ್ಯಕ್ರಮ ಮುಗುತ್ತು.ಆನು ಒಬ್ಬ ಮಾತ್ರ ರೂಮಿಂಗೆ ಬಂದು ವಿಶ್ರಾಂತಿ ತೆಕ್ಕೊಂಡೆ. ಒಳುದೋವೆಲ್ಲ ಮತ್ತೆ ಬಂದವು ಅಂದ್ರಾಣ ಕಾರ್ಯಕ್ರಮ ಹೀಂಗೆ ಮುಗುತ್ತು. ಎಲ್ಲೆಲ್ಲಿಂದಲೋ ಬ<ದೋರ ಪರಿಚಯ ಆದ್ದು ಕೊಶಿ ಆತು .ಒಳ್ಳೆ ಒರಕ್ಕು.
  ಮರದಿನ ಉದಿಯಪ್ಪಗ ಒಳುದೋವು ಏಳುವಗ ಎಂಗಳ ಮೀಯಾಣ ಕೂಡ ಮುಗುದ್ದು. ಎಂಗೊ ಕೆಳ ಹೋಗಿ ಬ್ರಾಕ್ ಫಾಸ್ಟಿಂಗೆ ಹೋದೆಯೊ.ಸೀರಿಯಲ್,ಇಡ್ಲಿ ಚಟ್ಣಿ, ಬ್ರೆಡ್ ಹಾಲು ಚಾ ಎಲ್ಲ ಸಿಕ್ಕಿತು ಒಟ್ಟಿಂಗೆ ಹಣ್ಣುಗೊ ಬಾಳೆ ಹಣ್ಣು ಏಪ್ಲ್,ಬಚ್ಚಂಗಾಯಿ ಎಲ್ಲ ಇತ್ತು. ಮತ್ತೆ ಸಮ್ಮೇಳನಕ್ಕೆತ್ತಿಯಪ್ಪಗ ಇಡ್ಲಿ ಚಪಾತಿ ಕ್ಶೀರ್ ಇದ್ದಲ್ಲಿ ಕ್ಶೀರ ಮಾಂತ್ರ ಹೊಟ್ಟಗೆ ಸೇರಿತ್ತು ಅಲ್ಲಿ ಶಿವಪೂಜೆ ಎಲ್ಲೋರು ಒಟ್ಟಿಂಗೆ ರುದ್ರ ಹೇಳಿ ಅಭಿಷೇಕ ಮುಗುದು ಪೂಜೆ ಆಗಿ  ಮತ್ತೆ ಸಂಗೀತ ಕೊಳಲು ವಾದನ ಎಲ್ಲ ಮುಗುದು ಮಧ್ಯಾಹ್ನದ ಊಟ. ಮತ್ತೆ ರಜ ವಿಶ್ರಾಂತಿ ಕಳುದು ಗೄಪ್ ಡೇನ್ಸ್, ಹೀಂಗೆಲ್ಲ ಕಳುದು, ಮತ್ತೆ ಜೂನಿಯರ್ ಶಂಕರ್ ಮೇಜಿಕ್ ಶೋ. ಅದಾದ ಮೇಲೆ ಸಮೂಹ ಗಾನ, ಕುಣಿತ ಎಲ್ಲ ಕಳಿವಗ ರಾತ್ರೆ ೧೦ ಗಂಟೆ ಕಳುತ್ತು.ಎಡೆಲ್ಲಿ ಪುರುಸೊತ್ತು ಅಪ್ಪಗ ಊಟ ಮುಗಿಶಿಗೊಂಡತ್ತು..ಮತ್ತೆ ಎಲ್ಲೋರು ಸೇರಿಗೊಂಡು ಅಮೇರಿಕಾದ ಸ್ವಾತಂತ್ರ್ಯ ದಿನದ ಲೆಕ್ಕಲ್ಲೂ ಆತು ಕೊಶಿಲ್ಲಿ ಕೊಣುದ್ದೂ ಆತು, ಪಟಾಕಿ ಹೊಟ್ಟುಸಿಯೂ ಆತು ರೂಮಿಂಗೆ ಬಂದು ಮನುಗುವಗ ೧೧ ಗಂಟೆ ಉದ್ದಿಯಪ್ಪಗ ಮಿಂದು ಬ್ರೇಕ್ ಫಾಸ್ಟಿಂಗೆ ಬಂದಿಪ್ಪಗ ಜೂನಿಯ ಶಂಕರನೂ ಇತ್ತಿದ್ದ. ಅವನ ಭಾವಂದ್ರು ಎನ್ನ ಶಿಷ್ಯಕ್ಕೊ ಹೇಳಿ ಪರಿಚಯ ಅಪ್ಪಗ ಒಟ್ಟಿಂಗೆ ಫೊಟೊ ತೆಗದೂ ಆತು. ಅಲ್ಲಿಂದ ಹೆರಟು ಊರಿಂ ಹೇಳಿದರೆ ಮಗನ ಮನಗೆತ್ತುವಗ  ದಾರಿಲ್ಲಿ ಬಾಲ್ಟಿಮೋರಿನ ಬಂದರಿನ ಹತ್ತರೆ ಮಧ್ಯಾಹ್ನದ ಊಟವೂ ಊಟ ಮಾಡಿತ್ತು. ಹೊತ್ತೋಪಗ ೬ ಗಂತಗೆ ಮಗನ ಮನಗೆತ್ತಿತ್ತು/.
.

ktagalu

                 ವಿದೇಶಗಳಲ್ಲಿ ಕೂಟಗಳು
             ಉದ್ಯೋಗಾಕಾಂಕ್ಷಿಗಳಾಗಿ ಸ್ವದೇಶ ಬಿಟ್ಟು ಹೋಗಿರುವ ಭಾರತೀಯರು ಸ್ವಂತ ಮನೆ ಂಡಿಕೊಂಡು ಸಂಸಾರ ಸಾಗಿಸುತ್ತಿರುತ್ತಾರೆ, ವಾರದ ಐದೂ ದಿನಗಳಲ್ಲಿ ಕೆಲಸವಿರುವುದರಿಂದ ಅವರೆಲ್ಲ ತುಂಬ ಬಿಸಿಯಾಗಿದ್ದರೆ ವಾರದ ರಜೆಗಳಲ್ಲಿ ಅವರಿಗೆ ಮನೆವಾರ್ತೆಗೆ ಸಂಬಂಧಿಸಿದ ಕೆಲಸಗಳು! ಮಕ್ಕಳಿಗೆ ಹೆಚ್ಚಿನ ಮನೆಪಾಠಗಳು. ಬೇರೆ ಕಡೆಗಳಿಗೆ ಕರಕೊಂಡು ಹೋಗುವುದು, ಮತ್ತೆ ದಿನಾ ದೇವರನ್ನು ಮನಸ್ಸಿನಲ್ಲೇ ನೆನಸುವುದಾದರೆ ಈ ಎರಡು ದಿನಗಳಲ್ಲಿ ದೇವರ ಆರಾಧನೆಗೆಂದೇ ನಿರ್ಮಿಸಿದ ದೇವಸ್ಥಾನಗಳಿಗೆ ಹೋಗುವುದು,ಮಕ್ಕಳ ಜನ್ಮ ದಿನಗಳನ್ನು ಆಚರಿಸುವುದು, ಮತ್ತೆ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗುವುದು. ಅಂದರೆ  ಹೀಗೆ ಹೊರಗೆ ಹೋದರೆ ಮಕ್ಕಳಿಗೂ ದೇಶದ ಪರಿಚಯದೊಂದಿಗೆ ಶಿಷ್ಟಾಚಾರದ ಪರಿಚಯ- ಹೀಗೆಲ್ಲ. ಒಟ್ಟಾಗಿ ಎಲ್ಲಾ ದಿನಗಳಲ್ಲಿಯೂ ಜನರು ಯಾವಾಗಲೂ ಅವರವರ ಕೆಲಸದಲ್ಲಿಯೇ ತಲ್ಲೀನರಾಗಿರುತ್ತಾರೆ.ಮಕ್ಕಳಂತೂ ಬಾಯಿಗೆ ತುರುಕಿದರೆ ಮಾತ್ರ ಹೊಟ್ಟೆ ತುಂಬಿದರೂ ಗೊತ್ತಾಗದವರು!.ಎಲ್ಲ ತಂದೆ ತಾಯಿಯೇ ತಿನ್ನಿಸಿದರೆ ಮಾತ್ರ ಅವರ ಹೊಟ್ಟೆ ತುಂಬಿಸಿದ ಸಮಾಧಾನ ಹೆತ್ತವರಿಗೆ,.ಆಟಗಳಲ್ಲಿ ಮಗ್ನರಾದರೆ ಮಕ್ಕಳಿಗೆ ಬೇರೆ ಯಾವುದೂ ಬೇಡ. ಹೊಟ್ಟೆ ಹಸಿಯುತ್ತದೋ ಇಲ್ಲವೋ ಎಂಬುದನ್ನು ಅಪ್ಪ ಅಮ್ಮಂದಿರೇ ನೋಡಿಕೊಳ್ಳಬೇಕು. ಇಷ್ಟವಾದುದನ್ನು ಅಂದರೆ ಸೀರಿಯಲ್ಸ್ ಕೆಲವರು ತಿನ್ನುತಾರೆ. ಜಂಕ್ ಫುಡ್ ಮಾತ್ರ ಅವರೇ ಕೇಳಿ ತಿನ್ನುತ್ತಾರೆ. ಅಂತೂ ಶಾಲೆಗೆ ಮಕ್ಕಳನ್ನು ಕಳಿಸುವುದೆಂದರೆ ಬೆಳಿಗ್ಗೆ ತಾವು ಹೊರಡುದರೊಂದಿಗೆ ಅವರನ್ನೂ ತಿಂಡಿ ತಿನ್ನಿಸಿ. ಉಡುಗೆ ತೊಡಿಸಿ ಕರಕೊಂಡು ಹೋಗುವುದು. ದೊಡ್ಡ ಮಕ್ಕಳಾದರೆ ಬಸ್ಸಿನವರೆಗೆ ಕರಕೊಂಡು ಹೋಗಿ ಬಿಡುವುದು ಅಥವಾ ಶಾಲೆಗೇ ಕೊಂಡು ಹೋಗಿ ಬಿಡುವುದು ಹೀಗೆಲ್ಲ ಬೆಳಗ್ಗೆ ಏಳುವುದರೊಂದಿಗೆ ಬಿಸಿ ಶುರುವಾಗುತ್ತದೆ.
ಹೀಗೆ ಮಕ್ಕಳನ್ನು ಹೊರಡಿಸಿ ಕೆಲಸಕ್ಕೆಂದು ಹೊರಟರೆ ಸ್ವಂತ ವಾಹನಗಳಾದರೂ ಹೈವೇಗಳಲ್ಲಿ ವಾಹನಗಳ ಜಾಥಾ ಇರುತ್ತದೆ. ಎಲ್ಲಾ ಕೆಲಸದವರೂ ಹೊರಡುವ ಸಮಯ ಒಂದೇ ಆಗಿರುವುದರಿಂದ ದಾರಿಯುದ್ದಕ್ಕೂ ವಾಹನಗಳು! ಕಾಲು ಗಂಟೆಯಲ್ಲಿ ತಲಪಬಹುದಾದ ದೂರ ತಲುಪಲು ಕನಿಷ್ಠ ಮುಕ್ಕಾಲು ಗಂಟೆ ಬೇಕು!ಅಂತೂ ಆಫೀಸ್ ಬೇಗ ತಲುಪದಿದ್ದರೆ ತಮ್ಮ ವಾಹನಗಳನ್ನು ಪಾರ್ಕ್ ಮಾಡಲುಬಹಳ ದೂರ ನಿಲ್ಲಿಸಬೇಕಾಗಬಹುದು.ಹಾಗೆ ದೂರವಿಟ್ಟರೆ ಹಿಂದಿರುಗುವಾಗಲೂ ಆ ದೂರವನ್ನು ನಡೆದೇ ಬರಬೇಕು. ಎಂಟು ಗಂಟೆಯಷ್ಟು ಕೆಲಸವಾದರೂ ಕೊಟ್ಟ ಕೆಲಸ ಪ್ಪ್ರೊಜೆಕ್ಟುಗಳನ್ನು ಸಮಯಕ್ಕೆ ಒಪ್ಪಿಸಬೇಕು. ಹೆಚ್ಚು ಕಡಿಮೆಯಾಗಕೂಡದು.ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದೆಂದರೆ ಈ ಜನರಿಗೆ ಬಹಳ ಕಷ್ಟವೆನಿಸುವುದಾರೂ ಇವುಗಳನ್ನು ಮರೆಯಲೋ ಎಂಬಂತೆ ಹಾಗೂ ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿಗಳ ಅನುಭವಕ್ಕಾಗಿಯೂ, ಪರಸ್ಪರರ ಭೇಟಿಗಾಗಿಯೂ ಈ ಕೂಟಗಳನ್ನು ಏರ್ಪಡಿಸುತ್ತಾರೆ ಎಂದು ಹೇಳಬಹುದು.ಭಾರತೀಯ ಹಬ್ಬಗಳನ್ನೂ ಹೀಗೆ ಆಚರಿಸುತ್ತಾರೆ.
                     ಹುಟ್ಟು ಹಬ್ಬ , ಇತರ ಹಬ್ಬಗಳೊಂದಿಗೆ ಏನಾದರೂ ಕಾರಣ ಇಟ್ಟುಕೊಂಡು ನಡೆಸುವ ಇಂತಹ ಕೂಟಗಳು ಒಂದು ಕಡೆ ಸೇರಿ ಪರಸ್ಪರ ವಿಚಾರವಿನಿಮಯ ಮಾಡಿಕೊಳ್ಳುವ ಚಾವಡಿಯೂ ಆಗಬಹುದು. ಹೆಚ್ಚಾಗಿ ಯುವಕ ಯುವತಿಯರು ಒಟ್ಟುಗೂಡಿ ಹೀಗೆ ವಾರದ ಕೊನೆಗಳಲ್ಲಿ ಕೂಟಗಳನ್ನೇರ್ಪಡಿಸುವಾಗ ಮಕ್ಕಳಿಗೂ ಒಬ್ಬರಿಗೊಬ್ಬರು ಒಟ್ಟು ಸೇರಿ ಆಟವಾಡಿ ಸಂತೋಷಪಡಲು ಇಂತಹ ಕೂಟಗಳು ಅನುಕೂಲವಾಗುತ್ತದೆ. ವಾರದ ಕೆಲಸ ಮಾಡಿ ಬೇಸರ ಕಳೆಯಲು ಈ ಬಿಡು ದಿನಗಳು ಸಹಾಯಕ. ಊರು ದೇಶಗಳನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಬಂದವರಿಗೆ ಸ್ವಲ್ಪ ಬೇಸರ ಕಳೆಯಲು ಈ ಕೂಟಗಳು ಅನುಕೂಲವಾಗುತ್ತದೆ.
ಹುಟ್ಟು ಹಬ್ಬಗಳು ಹೆಚ್ಚಾಗಿ ಚಕ್ ಇ ಚೀಸ್ ನಲ್ಲಿ ,ಕೆಲವು ಇಂತಹ ಸಮಾರಂಭ ಏರ್ಪಡಿಸಲೆಂದೇ ಇರುವ ಹಾಲ್ ಗಳಲ್ಲಿ, ಅಥವಾ ಕೆಲವ ತಮ್ಮ ಮನೆಗಳಲ್ಲಿಯೇ ಏರ್ಪಡಿಸುತ್ತಾರೆ. ಇದಕ್ಕಾಗಿ ಸಾವಿರಾರು ಡಾಲರ್ ಖರ್ಚು ಮಾಡುವವರು ಇದ್ದಾರೆ. ಸುಲಭದಲ್ಲಿ ಇನ್ನು ಕೆಲವು ಪಾರ್ಕಗಳಲ್ಲಿ ಏರ್ಪಡಿಸಿದರೆ ಮಕ್ಕಳಿಗೇ ಆಡಲು ಅನುಕೂಲ!ಬಂದ ಮಕ್ಕಳಿಗೆ ಒಂದಿಷ್ಟು ಜ್ಯೂಸ್ ಮತ್ತೆ ಸ್ನೇಕ್ಸ್ ಗಳನ್ನು ಕೊಟ್ಟರೆ ಅವರ ಮನಸ್ಸು ಆಟಕ್ಕೆರ್ ಹೋಯಿತೆಂದರೆ ಮತ್ತೆ ಕೂಟಗಳಲ್ಲಿಯ ಊಟ ಅವರಿಗೆ ಬೇಕಾಗುವುದಿಲ್ಲ. ಮತ್ತೆ ಪಿಸ್ಸ ಇದ್ದರೆ ಅದನ್ನು ತಿಂದು ಜ್ಯೂಸ್ ಕುಡಿಯುತ್ತಾರೆ. ದೊಡ್ಡವರು ಸ್ನೇಕ್ಸ್ ತಿಂದ ಮೇಲೆ ಕೇಕ್ ಕಟ್ ಮಾಡುವುದು.ಎಲ್ಲರೂಬಂದ ಮೇಲೆ ಊಟ ನಡೆಯುತ್ತದೆ. ಹೆಚ್ಚಾಗಿ ಸಂಜೆಯೇ ನಡೆಯುವ ಕಾರಣ ಎಲ್ಲ ಮನೆಗೆ ತಲಪುವಾಗ ರಾತ್ರೆ ಹನ್ನೊಂದು ಅಥವಾ ಕೆಲವೊಮ್ಮೆ ಹನ್ನೆರಡು ಗಂಟೆಯಾದರೂ ಮಲಗಿ ನಿದ್ದೆ ಹೋದವರಿಗೆ ಮರುದಿನ ಕೆಲಸವಿಲ್ಲವಾದುದರಿಂದ ಬೆಳಿಗ್ಗೆ ಏಳುವಾಗ ಕಡಿಮೆಯೆಂದರೂ ಏಳು ಗಂಟೆಯಾಗುತ್ತದೆ.ಮಕ್ಕಳಿಗೂ ಅಷ್ಟೆ ಆಡಿ ಸುಸ್ತಾಗಿರುವುದರಿಂದ ಎಂಟು ಗಂಟೆಯ ವರೆಗೂ ಏಳುವುದಿಲ್ಲ.
ಇನ್ನು ದೀಪಳಿ ದಸರಾ, ಚೌತಿ ಹೀಗೆ  ಹಬ್ಬಗಳನ್ನು ಆಚರಿಸುವುದರಿಂದ ಮಕ್ಕಳಿಗೂ ಸ್ವಲ್ಪ ನಮ್ಮ ಪುರಾತನ ಸಂಸ್ಕೃತಿಗಳ ನೆನಪಾಗುತ್ತದೆ. ಊರಿನಲ್ಲಿರುವಾಗ ಪಟಾಕಿ ಸಿಡಿಮದ್ದುಗಳನ್ನು ಅಂಗಡಿಯಿಂದ ತಂದರೆ ದೀಪಾವಲಿ ಆಚರಣೆ ಮಕ್ಕಳಿಗೆ ಖುಶಿಯಾಉತ್ತದೆ.ಹೀಗೆ ಒಬ್ಬೊಬ್ಬರ ಸ್ವಂತ ಖರ್ಚಲ್ಲದೆ "ಪೋಡ್ಲೋಕ್" ಎಂತ ಒಬ್ಬೊಬ್ಬರು ಪರಸ್ಪರ ಮೊದಲೇ ಮಾತಾಡಿಕೊಂಡಂತೆ(ಅವರವರ ಮನೆಯಲ್ಲಿ ತಯಾರಿಸಿಕೊಂಡ ಮೊಸರನ್ನ, ಪುಳಿಯೋಗರೆ, ಪಾಯಸ, ಸ್ವೀಟ್, ಸಾಂಬಾರು, ಮೇಲೋಗರ ಹೀಗೆ ಒಂದೊಂದು ಪದಾರ್ಥಗಳನ್ನು ತಾವು ತರುತ್ತೇವೆ ಎಂದು ಒಪ್ಪಿಕೊಂಡಂತೆ ಬರುವಾಗ ತರುತ್ತಾರೆ. ಒಟ್ಟಾರೆ ಹನಿ ಕೂಡಿ ಹಳ್ಳವೆಂಬಂತೆ ಭರ್ಜರಿ ಊಟವಾದ ಮೇಲೆ ಮಿಕ್ಕುಳಿದುದನ್ನೂ ಪರಸ್ಪರ ಹಂಚಿಕೊಂಡು ವಿನಿಮಯ ಮಾಡಿಕೊಳ್ಳುತ್ತಾರೆ. ಇಲ್ಲಿ ಹೆಂಗುಸರು ಒಳಗೆ ಅಸೇರಿಕೊಂಡು ಅವರವರು ತಯಾರಿಸಿ ತಂದ ಪದಾರ್ಥಗಳ ಬಗ್ಗೆ ಪರಸ್ಪರ ಏನು ಹೇಗೆ ಎಂದೆಲ್ಲ ವಿಚಾರ ವಿಮರ್ಷೆ ಮಾಡುತ್ತಿದ್ದರೆ ಹೊರಗೆ ಗಂಡುಸರು ಬೇರೆ ರಾಜಕೀಯ ಅಥವಾ ಊರ ಸುದ್ದಿಗಳನ್ನು, ಕೆಲಸದ ಬಗ್ಗೆ ಮಾತಾಡಿಕೊಂಡಿರುತ್ತಾರೆ ಹೀಗೆ ಕೂಡಿ ಬಾಳಿದರೆ ಸ್ವರ್ಗ ಸುಖವೆಂಬಂತೆ ಸರಹದ್ದಿನಲ್ಲಿರುವವರು ಒಟ್ಟುಗೂಡುವ  ಕೂಟಗಳೇ ಇಲ್ಲಿ ನಡೆಯುವ ಕೂಟಗಳು. ಒಟ್ಟಾಗಿ ಊಟ ಮಾಡುವ ಕೂಟಕ್ಕೆ ಹೀಗೊಂದು ವ್ಯವಸ್ಥೆ! ಜನ್ಮದಿನಗಲ್ಲಾದರೆ ಕರೆದವನೆ ಎಲ್ಲ ಏರ್ಪಾಡು ಮಾಡುತ್ತಾನೆ. ಪೂಜೆ ವಗೈರೆಗಳಲ್ಲಿಯೂ ಕರೆದವನೇ ಏರ್ಪಾಡು ಮಾಡುತ್ತಾನೆ. ಮನೆಯಲ್ಲೇ ತಯಾರು ಮಾಡಲಾಗದುದನ್ನು ಹೋಟೆಲುಗಳಿಂದ ತರಿಸುತ್ತಾರೆ. ಚಪಾತಿ ಕೂಡ ತಯಾರಿಸಿಟ್ಟದ್ದನ್ನು ತಂದು ಆಗಲೇ ಬೇಯಿಸಲು ಬಂದವರು ಸಹಕರಿಸುತ್ತಾರೆ. ಒಟ್ಟಿನಲ್ಲಿ ಭರ್ಜರಿ ಊಟ ನಡೆಯುತ್ತದೆ. ಸ್ವದೇಶದಿಂದ ಮಕ್ಕಳನ್ನು ನೋಡ ಬರುವ ಹಿರಿಯರೂ ಪಾಲ್ಗೊಳ್ಳುತ್ತಾರೆ. ಹೀಗೆ ನಮ್ಮಂತಹ ಹಿರಿಯರನ್ನು ಕರೆಯಲೂ ಮರೆಯುವುದಿಲ್ಲ. ಕೆಲವರು ವಿಶೇಶ ಅಡಿಗೆಗಳನ್ನು ಹೋಟೆಲಿನಿಂದ ತರಿಸಿಕೊಳ್ಳುತ್ತಾರೆ. ಮಿಕ್ಕುಳಿದುದನ್ನೂ ಬಂದವರಿಗೆ ಹಂಚುತ್ತಾರೆ. ಒಟ್ಟಾರೆ ಈ ಕೂಟಗಳಲ್ಲಿ ವಾರದ ಏಕತಾನತೆಯನ್ನು ಹೀಗೆ ಮರೆಯುತ್ತಾರೆ. ಸೋಮವಾರ ಬಂದೊಡನೆ ಗಾಣದ ಎತ್ತಿನಂತೆ ದುಡಿಯುವವರಿಗೆ ಒಂದು ಸ್ವಲ್ಪ ಆರಾಮವಾಗಿರುವ ಕಾಲ. ಊಟ ಮುಗಿಸಿ ಹೊರಡುವಾಗ ಗಂಟೆ ರಾತ್ರೆ ಹನ್ನೆರಡಾದರು ಆಗ್ಬಹುದು. ಶನಿವಾರವೇ ಇದಕ್ಕೆ ಸೂಕ್ತವೆಂದು ಮರುದಿನ ಬೆಳಿಗ್ಗೆ ಹಾಯಾಗಿ ಎಂಟು ಗಂಟೆಯ ವರೆಗೂ ಎಲ್ಲವನ್ನೂ ಮರೆತು ನಿದ್ರಾಲೋಕದಲ್ಲಿ ವಿಹರಿಸುವುದೂ ಇವರ ಹವ್ಯಾಸ ವಲ್ಲ ಕೆಲಸ ಕಾರ್ಯಗಳ ನಂತರ ಪಡೆಯುವ ವಿರಾಮ್!
ಈ ಕೂಟಗಳಲ್ಲಿಯೂ ಹಲವು ವಿಧ . ಹಬ್ಬದ ಕೂಟಗಳನ್ನೂ ಪ್ರಾದೇಶಿಕ ಲೆಕ್ಕದಲ್ಲಿ  ಯೂ ಇಡೀ ಉತ್ತರ ಅಮೇರಿಕ ಖಂಡಕ್ಕೂ ವಿಸ್ತಾರಗೊಳ್ಳುತ್ತದೆ  ಬೇರೆ ಬೇರೆಭಾಷೆಗಳನ್ನಾಡುವ ಜನರು ಆಯಾ ಭಾಷೆಯ ಹೆಸರಿನಲ್ಲಿ ಕೂಟ ಏರ್ಪಡಿಸುವುದೂ ಇದೆ. ವಿಭಾಗವಾಗಿ,  ಕೆಲವು ಮತ ವಿಭಾಗದವರು ಒಂದಾಗಿ ನಡೆಸುವುದೂ ಇದೆ. ಉದಾ: ವರ ಮಹಾಲಕ್ಷ್ಮಿ ವ್ರತ, ತುಳಸಿ ಹಬ್ಬ ಹೀಗೆಲ್ಲ. ಇನ್ನು ಅರಸಿನ ಕುಂಕುಮ ಎಂದು ಹೆಂಗುಸರನ್ನು ಕರೆಯುವುದು ಅವರಿಗೆ ಬಾಗಿನ ಕೊಡುವುದು ಕೂಡಾ  ಇರುತ್ತದೆ. ಮಕ್ಕಳೂ ಜೊತೆಗೆ  ಅಮ್ಮಂದಿರ ಜೊತೆಗೆ ಬಂದರಾಗುತ್ತದೆ. ಆದರೆ ಗಂಡುಸರಿಗೆ ಕರೆಯಿರುವುದಿಲ್ಲ. ಕೂಡಾ ಆಚರಿಸುತ್ತಾರೆ. ದಕ್ಷಿಣದ ಕಡೆಯಲ್ಲಿ ಹಿಂದುಗಳೆಲ್ಲ ಒಂದು ದೇವಸ್ಥಾನಗಳಲ್ಲಿ ಕೂಡುವುದಾದರೆ ಬೇರೆ ಬೇರೆ ಸಬ್ ಡಿವಿಜನ್ ಗಳಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳ ,ಕನ್ನಡ ಭಾಷೆಗಳಣ್ಣಾಡುವವರು ಒಟ್ಟು ಸೇರುತ್ತಾರೆ .ಭಾರತೇಯರು ಹಿಂದಿ ರಾಷ್ಟ್ರ ಭಾಷೆಯಾದುದರಿಂದ ಭಾರತೇಯಸ್ರೆಲ್ಲ ಒಟ್ಟು ಸೇರುವುದೂ. ಇದೆ.ಭಾಷಾಭಿಮಾನಿಗಳು  ಜಾತ್ಯಭಿಮಾನಿಗಳು ಸೇರುವುದೂ ಇದೆ. ಎಲ್ಲ ದೈನಂದಿನ ಬದುಕಿನ ಜಂಜಾಟದಿಂದ ಮುಕ್ತಿ ಪಡೆಯುವುದಕ್ಕೆ ತಿದುಕೊಂಡ ಕೂಟಗಳು. ಸರಹದ್ದಿನ ಎಲ್ಲ ಕೂಟಗಳಲ್ಲಿ ಭಾಗವಹಿಸುವವರೂ ಇದ್ದಾರೆ. ಇನ್ನು ವಿವಿಧ ಆಟಗಳ ಪ್ರೇಮಿಗಳು,ಬೈಕ್ ರೈಡ್ ಮಾಡುವಸ್ನೇಹಿತರ ಕೂಟಗಳೂ ನಡೆಯುವುದಿದೆ.
ವಾಶಿಂಗ್ ಅನ್ ನಲ್ಲಿ ಒಂದು ಹವ್ಯಕ ಕೂಟಕ್ಕೆ ಹೋದತ್ರ್ ಅಮೇರಿಕದ ವಿವಿಧೆಡೆಗಳಿಂದ ಬಂದ ಬಂಧುಗಳು ಒಟ್ಟು ಸೇರಿ ಒಗ್ಗಟ್ಟನ್ನು ಅಲ್ಲ ಇಲ್ಲಿ ಮ್ನಮ್ಮತನವನ್ನು ತೋರಿಸುವುದಕ್ಕೋ ಎಂಬಂತೆ ಒಟ್ಟು ಸೇರುತ್ತಾರೆ.ಬಂಧುಗಳನ್ನೆಲ್ಲ ಒಂದು ಸೇರಿಸುವ ಒಟ್ಟಾಗಿ ಆಡಿ ನಲಿಯುವ, ಆ ನಲಿವಿನಲ್ಲಿ ಆನಂದಗೊಳ್ಳುವ ಇಲ್ಲಿಯ ನಿವಾಸಿಗಳನ್ನು ನೋಡುವಾಗ ಬದುಕನ್ನು ಹೀಗೆ ಒಟ್ಟಾಗಿ ಸಾಗಿಸುವ, ಒಟ್ಟಾಗಿ ಬೆರೆಯುವ  ಕೂಟಗಳನ್ನು ನೋಡುವಾಗ ಇಲ್ಲಿ ವಾಸಿಸುವವರ ಮೇಲೆ ಹೆಮ್ಮೆಯೆನಿಸುತ್ತದೆ.ಒಟ್ಟಿನಲ್ಲಿ ಐಕ್ಯತೆಯನ್ನು ಒಗ್ಗಟ್ಟನ್ನು ತೋರಿಸುವ ಇವರ ಮನೋಭಾವ ನೋಶ್ಡುವುದೂ ನಮಗೂ ಹೆಮ್ಮೆಯಲ್ಲವೇ!ಅಂತೂ ವಿದೇಶದಲ್ಲಿ ಊರಿನಿಂದ ದೂರದಲ್ಲಿದ್ದರೂ ಸಣ್ಣ ಪ್ರಾಯದ ಹೆಂಳೆಯರು ಈ ಸಮಾರಂಭಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ.