Sunday, March 3, 2013

ಸೌಭರಿ ಋಷಿಯ ಕತೆ

                                            ಸೌಭರಿಯ ಕತೆ
 ಭಾಗವತ ಕತೆ ಪರೀಕ್ಷಿತ್ ರಾಜಂಗೆ ಶುಕ ಮುನಿ ಹೇಳುತ್ತಿದ್ದಂತೆ ಒಬ್ಬ ಸೌಭರಿ ಹೇಳುವ   ಋಷಿಯ ಕತೆ ಹೇಳುತ್ತ.  ಸೌಭರಿ ಹೇಳುವ ಒಬ್ಬ ಋಷಿ ಕಾಡಿಲ್ಲಿ ತಪಸ್ಸು ಮಾಡುವಗ ಅವನ ತಪಸ್ಸಿಂಗೆ ತೊಂದರೆ ಆವುತ್ತು ಹೇಳಿ ಅವಂಗೆ ಹೊಸ ಆಲೋಚನೆ ಬಂತಡೊ. ಕಾಡಿಲ್ಲಿ ಕಾಡು ಪ್ರಾಣಿಗಳಂದಲೋ, ಅಥವಾ ಬೇರೆ ಇತರಜೀವಿಗಳಿಂದಲೋ ತಪಸ್ಸಿಂಗೆ ಅಡ್ಡಿ ಆಗದ್ದ ಹಾಂಗೆ, ಯಮುನಾ ನದಿ ಹತ್ತರಂಗೆ ಹೋದಡೊ. ನೀರಿನ ನೋಡಿದ್ೇ ತಡವು, ಹೊಸ ಆಲೋಚನೆ ಕಾರ್ಯರೂಪಕ್ಕೆ ಬಂತು. ತಪೋಶಕ್ತಿಂದ ನೀರಿನ ಒಳದಿಕ್ಕೆ ಆರಿಂಗ ಕಾಣದ್ ಹಾಂಗೆ ಬಹಳ ತಪಸ್ಸು ಮಾಡ್ಯೊಂಡಿಪ್ಪಗ ಅಕಸ್ಮಾತ್ ಒಂದು ದಿನಹೀಂಗೆ ಕಣ್ಣು ಒಡದು ನೋಡುವಗ, ಒಂದು ಮೀನು ತನ್ನ ಮರಿಗಳನ್ನೂ ಹೆಣ್ಣು ಮನನ್ನೂ ಕೂಡಿಗೊಂಡು ನೀರಿಲ್ಲಿ ಓಡಾಡುವದರ ಕಂಡಡೊ. ಗೆಂಡು ಹೆಣ್ಣು ಮೀನುಗೊ ಪರಸ್ಪರ ಮಿಲನ ಸುಖ ಅನುಭವುಸುವದು ಅವಣ್ಗೆ ಕಂಡತ್ತು. ಅದರ ನೋಡಿ ಅಪ್ಪಗ ಅವನ ಚಿತ್ತ ಚಂಚಲ ಅಪ್ಪಲೆ ಶುರುವಾತು. ಸಾಮಾನ್ಯ ಜಲಚರಂಗಳೂ ಸ್ತ್ರೀ ಸುಖವ ಅನುಭವುಸುವಗ ಮನಷ್ನಾಗಿ ಹುಟ್ತಿ ,ಬೇಕಾದ ಸುಖ ಅನುಭವುಸುಲೆ ಸಧ್ಯ ಇಲ್ಲೆಯೊ? ಪ್ರಾಣಿಗೊಕ್ಕೂ ಸುಖ ಅನುಭವಿಸೆಕ್ಕು ಹೇಳಿ ಕಾಂಬಗ ಮಾನವನಾಗಿ ಹುಟ್ಟಿ ವಿಷಯ ಸುಖ ಅನುಭವುಸದ್ದೆ ಇಪ್ಪದು ಹೆಡ್ಡುನ ಆವುತ್ತನ್ನೆ.ಅಂಬಗ ಈ ಸುಖ ಅನುಭವುಸೆಕ್ಕಾರೆ ತಾನು ಚೆಂದದ ಕೂಸಿನೆ ನೋಡಿ ಮದುವೆ ಅಯೆಕ್ಕು. ಷ್ಟು ಕಾಲ ತಪಸ್ಸು ಮಾಡಿ ಬೇಕಾದ ತಪೋಶಕ್ತಿ ಎನ್ನತ್ರೆ ಇಪ್ಪಗ ಬರೇ ಸಾಮಾನ್ಯ ಹುಡುಗಿಯ ಮದುವೆ ಅಪ್ಪದು ಬೇಡ. ಚೆಂದದ ರಾಜ ಕುಮಾರಿಯನ್ನೇ ಮದುವೆ ಅಯೆಕ್ಕು ಹೇಳಿ ಎಲ್ಲ ಯೋಚನೆ ಬಂತು. ಆಲೋಚನೆ ಮನಸ್ಸಿಂಗೆ ಹೊಕ್ಕರೆ ಮತ್ತೆ ಕೇಳೆಕ್ಕೊ! ಇನ್ನು ಸುಮ್ಮನೆ ಕೂಪದಕ್ಕೆ ಅರ್ಥ ಇಲ್ಲೆ ಹೇಳಿ ಹೆರಟಡೊ.ಕಾಮನೆ ಹುಟ್ಟಿದರೆ ಚಿಂತೆ ಹೇಳುವ ಹುಳು ಮನಸ್ಸಿನ ಕೊರಕ್ಕೊಂಡಿಕ್ಕಡೊ. ಚಿಂತೆ ತಡವಲೆಡಿಗಾತಿಲ್ಲೆ.ತಪಸ್ಸಿನ ಯೋಚನೆ ಒಂದರಿಯಂಗೆ ನಿಂದತ್ತು. ಬಂದ ಯೋಚನೆ ಕಾರ್ಯ ರೂಪಕ್ಕೆ ತರೆಕ್ಕು ಹೇಳಿ ಹೆರಟನಡೊ
ದಾರಿಲ್ಲಿ ಹೋಪಗ ಅಲ್ಲಿ ಇಲ್ಲಿ ಹುಡುಕ್ಕುವದೆಣ್ತಗೆ,ನಮ್ಮ ರಾಜ ಮಾಧಾತ ಇದ್ದಲ್ಲಿಂಗೆ ಹೋಗಿ ರಾಜ ಕುಮಾರಿ ಒಂದರ ಎನಗೆ ಕೊಡು ಹೇಳಿ ಕೇಳಿದರೆ ಕೊಡದ್ದಿಕ್ಕೊ.ಹೀಂಗೆ ಯೋಚನೆ ಮಾಡಿ ಅರಮನೆಗೇ ಹೋದಡೊ. ಮಾಂಧಾತ ರಾಜಂಗೆ ಐವತ್ತು ಮಗಳಕ್ಕಡೊ. ಎಲ್ಲ ಚೆಂದದೋವೆ.ಬಂಷಿಯ ಕಂಡು ರಾಜ ಅವನ ಉಪಚರಿಸಿಕ್ಕಿ, ಎನ್ನಂದ ಎಂತ ಆಯೆಕ್ಕು? ಹೇಳಿ ಕೇಳಿದಡೊ. ಸಾಮಾನ್ಯವಾಗಿ ಋಷಿಗಳ ತಪಸ್ಸಿಂಗೆ ಬಪ್ಪ ತೊಂದರೆಗಳ ಹೊಗಲಾಡಿಸೆಕ್ಕಾದ್ದು ರಾಜಧರ್ಮ. ಅವಕ್ಕೆ ಏನಾದರೂ ತೊಂದರೆ ಬಂದದರ ಆಯಾ ಊರಿನ ರಾಜವಿಚಾರುಸ ಪರಿಹರುಸೆಕ್ಕು. ಹಾಂಗೆ ಮಾಮೂಲಿಯ ಹಾಂಗೆ ಕೇಳಿದ್ದಕ್ಕೆ, ಎನಗೆ ಮದುವೆ ಆಯೆಕ್ಕು ಹೇಳಿ ಆಯಿದು.ನಿನ್ನ ಕೂಸುಗಳ ಪೈಕಿ ಎನಗೊಂದು ಕೂಸಿನ ಕೊಡು"ಹೇಳಿದಡೊ. ರಾಜಂಗೆ ಸುಮ್ಮನೆ ಕೇಳಿದೆ ಹೇಳಿ ಕಂಡತ್ತು. ಬಹಳ ಕಾಲ ತಪಸ್ಸು ಮಾಡಿ ಮುದುಕ್ಕನ ಹಾಂಗೆಗಡ್ದ ಮೀಸೆ ಬಿಟ್ಟುಗೊಂಡಿದ್ದ ಇವಂಗಗಳಕ್ಕಳ ಕೊಡುಲೆ ಅವಂಗೆ ಮನಸ್ಸು ಬಕ್ಕೊ! ಕೊಡದ್ದರೆ ಅವನ ಶಾಪಕ್ಕೆ ಎಂತ ಮಾಡುದು? ಒಟ್ಟಾರ ಕಾರ್ಯ ಕೆಟ್ಟತ್ತು. ಎಂತ ಮಾಡುವದು ಹೇಳಿಆಲೋಚನೆ ಮಾಡಿದಡೊ ಆ ರಾಜ. ಂಬಗ ಅವಂಗೂ ಒಂದ ಆಲೋಚನೆ ಹೊಳತ್ತು. ಕೂಡ್ಳೇ ಹೇಳಿದಡೋ " ಎನಗೆ ಐವತು ಖುಸುಗೊ ಇದ್ದವು,ಆರ ಆನು ಕೊಡಲಿ! ಮತ್ತೆ ಅವರ ಪೈಕಿ ಆರು ನಿನ್ನ ಷ್ಟ ಪಡುತ್ತವೋ ಅವರ ಮದುವೆ ಅಪ್ಪದಕ್ಕೆ ಅಡ್ಡಿಯಿಲ್ಲೆ. ಮತ್ತೆ " ನೀನು ಮದುವೆಯಾಗು ಹೇಳಿ ಆನು ಹೇಂಗೆ ಹೇಳುವದು? " ಹೇಳಿ ಒಬ್ಬನೂ ಒಪ್ಪದ್ದರೆ ತಪ್ಪು ಎನ್ನದಾವುತ್ತಿಲ್ಲೆನ್ನೆ ಹೇಳಿ ಹೇಳಿ ಉಪಾಯಂದ ತಪ್ಪುಸುಲೆ ನೋಡಿದಡೊ.
ಆದರೆ ಇವ ಬಿಡುತ್ತನೋ!ಎಷ್ಟಾದರೂ ತಪಸ್ವಿ ಅಲ್ಲದೋ?ತಪೋಶಕ್ತಿಂದ ತನ್ನ ರೂಪ ಕಾಂಬೋವಕ್ಕೆ ಚೆಂದ ಕಾಣದ್ದರೆ ತೊಂದರೆ ಆವುತ್ತನ್ನೆ. ಹೇಳಿ ಯೋಚನೆ ಬಂತು .ಕೂಡ್ಳೇ ಒಬ್ಬ ಚೆಂದದ ಮಾಣಿಯಾಗಿ ಅಂತಃಪುರಕ್ಕೆ ಹೋದಡೊ. ರಾಜಕುಮಾರಿಗಳ ಬಪ್ಪಲೆ ಹೇಳಿದವು. ಶುರುವಿಂಗೆ ಬಂದದು ಮತ್ತೆ ಬಂದದು ಮಾಂತ್ರ ಂದ ಐವತ್ತು ಕುಮಾರಿಯರೂ ಇವನ ರೂಪಕ್ಕೆ ಮರುಳಾಗಿ" ಎನಗೆ ಬೇಕು ಈ ರಾಜಕುಮಾರ ಹೇಳ್ಯೊಂಡು ಅವರೊಳದಿಕ್ಕೆ ಜಗಳವೇ ಶುರುವಾತು.ರಾಜಂಗೂ ಹೇಳಿ ಸೋತೆ ಹೇಳಿ ಕಂಡತ್ತು. ಅವ ಒಪ್ಪಿದ ಹಾಂಗೆ ಸ್ವಯಂವರ   ಪದ್ಧತಿಯ  ಕಾರಣ ಹೇಳಿ ತಪ್ಪುಸಿಗೊಂಬಲಕ್ಕು ಹೇಳಿ ಗ್ರೇಶಿತ್ತಿದ್ದ.ಈಗ ಐವತ್ತು ಕುಮಾರಿಗಳೂ ಎನಗೆ, ತನಗೆ ಹೇಳಿದ ಕಾರಣ ಎಲ್ಲ ಮಗಳಕ್ಕಳನ್ನೂ ಕೊಡೆಕ್ಕಾಗಿ ಬಂತು. ರಾಜಂಗೆ ಬೇರೆ ಯೋನೆ ಇಲ್ಲದ್ದೆ  ಮಗಳಕ್ಕಳ ಶಾಸ್ತ್ರೋಕ್ತ ಮದುವೆ ಮಾಡಿ ಕೊಟ್ಟ.ಮದುವೆ ಆದಮೇಲೆ ಗೆಂಡ ಇದ್ದಲ್ಲಿಂಗೆ ಒಟ್ಟಿಂಗೆ ಹೋಯೆಕ್ಕನ್ನೆ. ಕಾಡಿಲ್ಲಿ ಸಾಮಾನ್ಯ ಪರ್ಣ ಕುಟೀರಲ್ಲಿ ಇಪ್ಪಲಾವುತ್ತಿಲ್ಲೆ.ಅದಕ್ಕೆ ಋಷಿ ತನ್ನ ತಪಃ ಶಕ್ತಿಂದ ಐವತ್ತು ಹೆಂಡತ್ತಿಯೊಕ್ಕೊಗುದೆ ಒಂದೊಂದು ಅರಮನೆ,ಬೇಕಾದ ಕೆಲದೋರ ಎಲ್ಲ  ಬರುಸಿದ. ಐವತ್ತು ಕೂಸುಗಳತ್ರೂ ಸಮಾನ ಪ್ರೀತಿಂದ ಚೆಂದಕ್ಕೆ ಸುಖ ಸಂಸಾರ ಮಾಡ್ಯೊಂಡು ಐವತ್ತು ಸಾವಿರ ಮಕ್ಕಳನ್ನೂ ಪಡದಡೊ. ಸಂಸಾರ ಸುಖಕ್ಕೆ ಕಟ್ಟುಬಿದ್ದು,ಎಡಿಗಾದಷ್ಟು ಅನುಭವುಸಿದರೂ ಸಾಕಾಗದ್ದೆ ಸುಖ ಸಾಗರಲ್ಲಿ ಮುಳ್ಗೇಳುತ್ತಿದ್ದಂತೆ  ಕೆಲವು ಕಾಲ ಕಳುತ್ತಡೊ.
ಒಂದು ದಿನ ಹಾಂಗೆ ಒಬ್ಬನೇ ಕೂದುಗೊಂಡಿಪ್ಪಗ ಅವಂಗೆ ಯೋಚನೆ ಬಂತಡೊ. ಈ ಸುಖ ಎಲ್ಲ ನಿಜವಾಗಿಯೂ ಶಾಶ್ವತವೋ? ಇದ್ದರೆ ಎಲ್ಲಿ ವರೆಗೆ? ಇದಕ್ಕೆ ಎಂದಾದರೂ ಒಂದು ಅವಸಾನ ಇದ್ದನ್ನೆ. ಶಾಶ್ವತವಾಗಿ ಇದರಂದೆಲ್ಲ ದೂರ ಆಯೆಕ್ಕು ಹೇಳಿ ತಪಸ್ಸಿಂಗೆ ಹೆರಟೋನು ತಾನು. ಎಂತಗೆ ಹೀಂಗೆಲ್ಲ ಎನ್ನ ಯೋಚನೆ ಬದಲಿತ್ತು. ಎಲ್ಲ ಮಾಯೆ. ಮಾಯಾಪಾಶಕ್ಕೆ ಕಟ್ಟುಬಿದ್ದು ದಾರಿ ತಪ್ಪಿದೆ. ಎನ್ನ ಉದ್ದೇಶ ಅರ್ಧಲ್ಲೆ ದಾರಿ ತಪ್ಪಿದ ಕಾರಣ ಇನ್ನಾದರೂ ಜ್ಞಾನೋದಯ ಆತನ್ನೆ. ಇನ್ನು ಹೀಂಗಿಪ್ಪಲಾಗ.ಮೀನುಗಳ ಸಂಸಾರಸುಖ ಕಂಡು ಮಾರುಹೋಗಿ ಎನ್ನ ಜೀವನ ವ್ಯರಥವಾಗಿ ಹೋತು. ಇನ್ನಾದರೂ, ಈಗಲಾದರೂ ಎಚ್ಚರಿಕೆ ಆತನ್ನೆ ಹೇಳ್ಯೊಂಡು ಅಲ್ಲಿಂದೆದ್ದು ಮತ್ತೆ ತಪಸ್ಸಿಂಗೆ ಹೋದಾಡೊ.ಹೆಂಡತ್ತಿಯಕ್ಕಳೂ ಹಾಂಗೆ ಎಂಗಳೂ ತಪಸ್ಸು ಮಾಡೆಕ್ಕು ಹೇಳಿ ಊರು ಬಿಟ್ಟವಡೊ.ವಿಿ ತಪ್ಪುಸುಲೆ ಆರಿಂಗೂ ಎಡಿಯ ಹೇಳುವಕ್ಕೆ ಾಜಂಗೆ ಶುಕ ಮುನಿ ಈ ಒಂದು ಉದಾಹರಣೆ ಕೊಟ್ಟನಡ.ಚಿತ್ತ ಚಂಚಲವಾಗಿ ದಾರಿ ತಪ್ಪಿದ ಎಷಟೋ ಉದಾಹರಣಗೊ ಪುರಾಣ ಕತೆಲ್ಲಿ ಹೇಳುತ್ತವು.ಆದರೆ ಎಲ್ಲವೂ ದೇವರ ಮಾಯೆ ಹೇಳುವದು ಖಂಡಿತ

No comments:

Post a Comment