Friday, March 22, 2013

ಸಾಮಾನ್ಯ ಜ್ಞಾನ ಅಂದು- ಇಂದು

     ಸಾಮಾನ್ಯ ಜ್ಞಾನ  ಅಂದು- ಇಂದು                               
                                                                                                                                                 ಅಂದು ಉದಿಯಪ್ಪಗಳೇ ಅಪ್ಪ ಮಿಂದು ಜಪ ಮಾಡಿಕ್ಕಿ, ನಿತ್ಯ ಪೂಜೆ ಬೇಗ ಮುಗಿಶಿತ್ತಿದ್ದವು. ಮನೆಂದ ರಜ ದೂರವೇ ಹೇಳುಲಕ್ಕು. ಒಂದೆರಡು ಮೈಲು ದೂರಲ್ಲಿದ್ದ ಒಬ್ಬ ರೈತ " ಉದಿಯಪ್ಪಗ ಬೇಗ ನಿಂಗಳ ಮನೆಗೆ ಬತ್ತೆ. ರಜ ಪಂಚಗವ್ಯ ಕೂಡಿ ಕೊಡೆಕ್ಕು" ಹೇಳಿತ್ತಿದ್ದ. ಆಸು ಪಾಸಿನ ಜನಂಗೊ ಒಂದೊಂದರಿ ಹೀಂಗೆ, ಬಂದು -ಮನೆ ಶುದ್ಧ ಮಾಡುಲೆ ಪಂಚಗವ್ಯ ಕೊಂಡೋಪದಿತ್ತು. ದಕ್ಷಿಣೆ  ತೆಕ್ಕೊಂಬಲಿಲ್ಲೆ, ಅಂತೆ ಒಂದು ಉಪಕಾರ ಅಷ್ಟೆ!   ಮತ್ತೆ  ಅವಕ್ಕೆ ಅಮೆ,ಸೂತಕ ಇದ್ದರೆ ನಾವು ಕೊಟ್ಟ ಪಂಚಗವ್ಯ ತಳುದರೆ ಮುಗುತ್ತು.ನಮ್ಮಲ್ಲಯೂ ಮಲಿಂಗೇ ಮೆಲ್ಲೇ ಹೆತ್ತರೆ ಶುದ್ದಿನ ಮಡ್ಯೋಳ್ತಿ ಬಂಮೈಲಿಗೆ ವಸ್ತ್ರಂಗಳ ಒಗದು ಶುದ ಮಾಡುವ ಕ್ರಮ ಇತ್ತಡೊ ಕೆಲವು ಮನೆಗಳಲ್ಲಿ.ಮತ್ತೆ ಭಟ್ರು ಬಂದು ಮನೆಯ ಪಂಚಗವ್ಯ ಕೂಡಿ ಶುದ್ಧ ಮಾಡಿದ ಮೇಲೆ ಜಾತ ಕರ್ಮ! ಆಳುಗೊಕ್ಕೆ ಪಂಚಾಂಗ ನೋಡಲೆ ಆಳುಗೊಕ್ಕೆ  ಗೊಂತಿಲ್ಲೆ. ಎತ್ತು ಕಟ್ಟುಲೆ,ಗೆದ್ದೆ ಬಿತ್ತುಲೆ ಮಗುವಿನ ತೊಟ್ಟಿಲ್ಲಿ ಹಾಕುಲೆ ಹೀಂಗೆಲ್ಲ ಒಳ್ಳೆ ದಿನ ಹೇಳೆಕ್ಕು. ಕೇಳ್ಯೊಂಡು ಬಪ್ಪದು ಎಂಗಳ ಮನೆಗೇ!ಬೇರೆ ಆರು ಹೇಳಿದರೂ ಅವಕ್ಕೆ ಸಮಾಧಾನ ಅಗ. ಪಂಚ ಗವ್ಯ ಕೊಟ್ಟ ಮೇಲೆಯೇ ಏನಾದರೂ ಹೊಟ್ಟಗೆ ಹಾಯ್ಕೊಂಡು ಅಪ್ಪ ಗೆದ್ದೆ ಕರೆಂಗೆ ಹೋಪದು. ಎಂಗಳ ಮಟ್ಟಿಂಗೂ ಹಾಂಗೆ ಸಣ್ಣ ಗಣ ಹೋಮ,ಶಿವ ಪೂಜೆ ದುರ್ಗಾ ನಮಸ್ಕಾರಪೂಜೆ ಎಲ್ಲ  ಅಪ್ಪನೇ ಸಧರುಸುವದು. ಮತ್ತೆ ಭಟ್ರ ಕಾಣೆಕ್ಕಾದರೆ ದೂರವೂ ಹೋಯೆಕ್ಕು. ಯಾವಗಲೂ ಅಲ್ಲಿ ಇಲ್ಲಿ ಹೋಪಲಿಪ್ಪ ಕಾರಣ ಭಟ್ರು ನಮಗೆ ಬೇಕಪ್ಪಗ ಸಿಕ್ಕುತ್ತವೂ ಇಲ್ಲೆ.
             ಪಂಚಾಂಗ-ತಿಥಿ,ವಾರ, ನಕ್ಷತ್ರ ,ಯೋಗ,ಕರಣ ಹೀಂಗೆ ಮುಖ್ಯವಾದರೂ ಒಟ್ಟಿಂಗೆ ರಾಹು ಕಾಲ ಗುಳಿಕ ಕಾಲ ಹೀಂಗೆಲ್ಲ ನೋಡಿ ಅವಕ್ೆ ಸಮಾಧಾನ ಅಪ್ಪ ಹಾಂಗೆ ಹೇಳೆಕ್ಕಾವುತ್ತು. ಎಂಗೊ ಶಾಲಗೆ ಸೇರುವದಕ್ಕೆ ಮದಲೆ ಮನೆಲ್ಲಿ ಸಂವತ್ಸರ,ಸೌರ ಮಾನ ಚಾಂದ್ರ ಮಾನೆ ಹೀಂಗೆ ತಿಂಗಳುಗಳ ಹೆಸರುಗಳ ಎಲ್ಲ ಅಮ್ಮನೇ ಹೇಳಿಕೊಟ್ಟಿತ್ತಿದ್ದವು. ಅಮ್ಮ ಪ್ರೈಮರಿ ಶಾಲಗೆ ಹೋಗಿದ್ದರಿಂದ ಲೆಕ್ಕ ಹೇಳುಲೂ ಮಗ್ಗಿ ಹೇಳುಸಲೂ ಗೊಂತಿತ್ತು.ಹೇಳುಸುಗು. ಶಾಲಗೆ ಹೋಪಲೆ  ಶುರುಮಾಡುವಗಳೇ ಇದೆಲ್ಲ ಗೊಂತಿತ್ತು. ಅಪ್ಪ ರಜ ಸಮಯ ಸಂಸ್ಕ್ರುತ ಓದಿದ್ದರಿಂದ ಪುರುಸೊತ್ತು ಇದ್ದರೆ  ಹೇಳಿ ಕೊಡುಗು.ಅಂದು ಶಾಲಗೆ ಹೋಪಗ ಮಗ್ಗಿ ಪುಸ್ತಕ ಬೇಕೇ ಬೇಕು. ಕೆಳಂದ ಮೇಲೆ, ಮೇಲಂದ ಕೆಳ ಲೆಕ್ಕ ಹೇಳುವದು, ಮಗ್ಗಿ ಹೇಳುವದು, ಮಗ್ಗಿ ಕೇಳಿದಲ್ಲಿ ಹೇಳುವದು ಎಲ್ಲ ಇತ್ತು. ಅಂತೂ ಶಾಲೆಲ್ಲಿ ಒಳುದ ಮಕ್ಕಳಿಂದ ಆನು ಮುಂದೆ ಇತ್ತಿದ್ದೆ.ಮಗ್ಗಿ ಕೇಳಿದಲ್ಲಿ ಹೇಳುಲೆ ಗೊಂತಿತ್ತು. ಹುಶಾರಿಪ್ಪ ಮಕ್ಕಳತ್ರೆ ಒಳುದೋರಿಂಗೆ ಮಗ್ಗಿ ಹೇಳುಸುಲೆ, ಲೆಕ್ಕ ತಪ್ಪೋ ಸರಿಯೋ ನೋಡುಲೆ ಎಂಗಳತ್ರೆ ಹೇಳಿಕ್ಕಿ, ಇನ್ನೊಂದು ಕ್ಲಾಸಿಂಗೆ ಮಾಸ್ಟ್ರ ಹೋಕು. ಮತ್ತೆ ಎನ್ನ ತಮ್ಮ ನೂ ಹುಷಾರಿತ್ತಿದ್ದ.

                    ಎನ್ನ ಅಜ್ಜಿ ಶಾಲಗೆ ಹೋಗಿಯೇ ಗೊಂತಿಲ್ಲೆ.ಆದರೆ ಸಂವತ್ಸರಂಗಳ ಹೆಸರು ಬಾಯಿ ಪಾಠ ಇತ್ತು. ಶಿವನ ಅಕ್ಷರ ಮಾಲಾ ಸ್ತೋತ್ರ, ಕೆಲವು ಹಾಡುಗೊ ಯಾವಾಗಲೂ ಹೇಳ್ಯೊಂಡಿಕ್ಕು. ಎನ್ನ ಅತ್ತೆಕ್ಕೊಗೆ ಓದುಲೆ ಬರವಲೆ ಗೊಂತಿಲ್ಲದ್ದರೂ ಹಬ್ಬ ಹರಿ ದಿನಂಗಳ ಬಗ್ಗೆ, ತಿಂಗಳು  ತಿಥಿ ವಾರ ನಕ್ತ್ರ ಒಟ್ಟಿಂಗೆ ಕೆಲವು ಹಾಡುಗೊ ಬಾಯಿ ಪಾ ಇಕ್ಕು.ಅಬ್ಬೆಕ್ಕೊಗೆ ಗೊಂತಿದ್ದರೆ ಮಕ್ಕೊಗೂ ಹಾಂಗೇ ಮುಂದುವರಿತ್ತು.ಮತ್ತೆ ಶಾಲೆಲ್ಲಿಯೂ, ಮಾಸ್ಟ್ರಕ್ಕೊ ಇದರೆಲ್ಲ ಕೇಳುಗು.ಮಕ್ಕೊ ಕಲಿವದು ಕಡ್ಡಾಯ ಆಗಿತ್ತು.
ಮತ್ತೆ ಆನು ಕಲಿಶುಲೆ ಹೆರಡುಲಪ್ಪಗ ಸಂವತ್ಸರ ,ತಿಂಗಳು ಎಲ್ಲ ಅಷ್ಟು ಕಡ್ಡಾಯ ಇತ್ತಿಲ್ಲೆ ಮನೆಲ್ಲಿ ಕಲ್ತರೆ ಮಾಂತ್ರ ಮಕ್ಕೊಗೆ ಗೊಂತಿಕ್ಕು. ಕಾಲ ಮುಂದುವರದ ಹಾಂಗೆ ಜೊಇಸಕ್ಕೊ ಹೇಳುವದು ಮುಹೂರ್ತವ ಅಂತೂ ಶಾಲೆಲ್ಲಿ ಉದ್ಯೋಗ, ಮತ್ತೆ , ವ್ಯವಹಾರಕ್ಕೆ ಬೇಕಾಗಿ ಇಂಗ್ಲಿಷ್ ತಿಂಗಳುಗೊ, ತಾರೀಕು ವಾರ ೊಂತಿದ್ದರೂ ಸಾಕು    ಹೇಳುವಲ್ಲಿಗೆ ಬಂತು. ಮತ್ತೆ  ತಾರೀಕು ಹೇಂಗಾದೂ ಕಾಲೆಂಡರ್ ನೋಡಿದರೆ ಎಲ್ಲ ಗೊಂತಾವುತ್ತು ಹೇಳುವಲ್ಲಿಗೆ ಬಂತು. ಬೇಂಕ್, ಅಥವಾ ಇತರ ಉದ್ಯೋಗಸ್ತರಿಂಗೂ ಈ ತಥಿ ವಾರ, ಹಿಂದೂ ತಿಂಗಳುಗೊ ಮರದೇ ಹೋತು.ಬೇಕಾಗಿ ಬಂದರೆ ಅಂಬಗಂಬಗ ತಾರೀಕು,ಮತ್ತೆ  ವಾರವ ನೋಡಿಗೊಂಬಲೆ ಕೈಗೆ ಕಟ್ಟಿದ ವಾಚಿನ ನೋಡಿದರೆ ಸಾಕಾವುತ್ತು. ಲೆಕ್ಕ ಮಾಡುಲೆ ರಡಿ ರೆಕೋನರ್ ಇದ್ದನ್ನೆ. ಲೆಕ್ಕ ಮಾಡಿ ತಲೆ ಬೆಶಿ ಮಾಡಿಗೊಂಬದು ಎಂತಕೆ! ಯಾಕೆ ಹೇಳಿದರೆ ಅದರ ಅಗತ್ಯ ಜನಂಗೊಕ್ಕೆ ಬಯಿಂದಿಲ್ಲೆ..
 ಪುರಾಣ ಪುಣ್ಯ ಕತೆ ಇಂಟರ್ನೆಟ್ ನೋಡಿದರೆ, ಆರು ಆರಿಂಗೆ ಎಂತ ಆಯೆಕ್ಕು, ಆರಿಂಗೆ ಎಂತ ಹೇಳಿದ್ದ? ಎಲ್ಲವೂ ಸಿಕ್ಕುತ್ತಾದ ಕಾರಣ ಸುಮ್ಮನೆ ತಲೆಲ್ಲಿ ತುಂಬುಸಿಗೊಳ್ಳೆಕ್ಕಾದ ಅಗತ್ಯ ಇಲ್ಲೆನ್ನೆ!.
               ಈಗೀಗ ಶಾಲೆಗಳೂ ಇಂಗ್ಲಿಷ ಮೀಡಿಯಮ್. ಅಪ್ಪನ ,ಅಮ್ಮನ ಡಾಡಿ, ಮಮ್ಮಿ ಹೇಳುವ ಸಂಸ್ಕಾರ ಮುಂದುವರಿತ್ತು. ಜನ್ಮ ದಿನಕ್ಕೆ ಕೇಂಡ್ಳ್ ಹೊತ್ತುಸಿದ್ದರ ಊದಿ ನನುಸುವ ಕ್ರಮ ನಡವಲೆ ಶುರು ಆದ ಮೇಲೆ ಹಳೆ ಸಂಸ್ಕಾರ ಮರದು ಹೋಪಲೆ ಶುರುವಾಯಿದು. ಏಕೆ ಕೇಳಿದರೆ ಕೆಲಸ ಹುಡುಕ್ಯೊಂಡು ವಿದೇಶಕ್ಕೆ ಹೋದರೆ ಅಲ್ಲಿ ಇದೆಲ್ಲ ಇಲ್ಲೆನ್ನೆ!  ವಿದೇಶಿ ಸಂರ್ಕಕ್ಕೆ ಅಗತ್ಯ ಇಪ್ಪ ವಿಯಂಗಳ ಮಾಂತ್ರ. ಎಲ್ಲ ವಿದೇಶಿ ಸಂಸ್ಕತಿಯೇ ಚಾಲ್ತಿಗೆ ಬಯಿಂದು.ಕಲಿಶುವ ಮಾಸ್ಟ್ರಕ್ಕೊಗೋ,ಮನೆಲ್ಲಿ ನಮ್ಮ ಸಂಸ್ಕಾರವ ಹೊಸತ್ತಾಗಿ ತರಬೇತಿ ಕೊಟ್ಟು ತಿಳಿಶೆಕ್ಕಾದ ಸಂದರ್ಭ ಬಯಿಂದು. ಹೆತ್ತೋರಿಂಗೋ  ಇದೆಲ್ಲ ಗೊಂತಿರುತ್ತಿಲ್ಲೆ.  ನಾವು ಹಿಂದುಗೊ ಹೇಳೆಕ್ಕಾರೂ,ಬ್ರಾಹ್ಮಣರು ಹೇಳೆಕ್ಕಾದರೂ ಅರ್ಹತೆಯ ಕಳಕ್ಕೊಳ್ಳುತ್ತಾ ಇದ್ದೋ ಹೇಳುವ ಸಂಶಯ ಉಂಟಾಯಿದು. ಶಾಲೆಲ್ಲಿ ಕಲಿಶುವದು ಕೂಡಾ ಜಾತ್ಯತೀತ ಹೇಳಿಗೊಂಡು ಷಟ್ರ ಗೀತೆಯನ್ಣೇ ವಿರುಸುೋರು ವೋಟಿಂಗೆ ಬೇಕಾಗಿ ಒಂದು ಜನಾಂಗವ  ತುಷ್ಟೀಕರುಸುಲೆ ಸರಕಾರವೇ ಪ್ರಯತ್ನ ಮಾಡೆಕ್ಕಾವುತ್ತು. ಇಲ್ಲದ್ದರೆ ಇನ್ನೊಂದರಿ ವೋಟಿಲ್ಲಿ ಗೆಲ್ಲುಲೆಡಿಯ.
         ಆದರೆ ಇತರ ಜನಾಂಗದೋವು ಮುಖ್ಯವಾಗಿ ಬ್ಯಾರಿಗೊ ಮದರಸಾಲ್ಲಿ ಅವರ ಸಂಸ್ಕಾರವ ಪ್ರತ್ಯೇಕವಾಗಿ ಹೇಳಿ ಕೊಡುವ ಕಾರಣ ಅವಕ್ಕೆ ಗೊಂತಿರುತ್ತು, ಕ್ರಿಶ್ಚನ್ ಗಳೂ,ಮುಸ್ಲೀಮರೂ ವಾರಕ್ಕೊಂದರಿ ಅವು ಪ್ರಾರ್ಥನಾ ಮಂದಿರಂಗಳಲ್ಲಿ ಸೇರುತ್ತವು. ವಿಮರ್ಶೆ ಮಾಡಿ ಬಿಟ್ಟು ಬೀಳ್ಚೆಗಳ ಸರಿ ಮಾಡಿಗೊಳ್ಳುತ್ತವು. ನಾವು ಪುರುಸೊತ್ತಪ್ಪಗ, ದೇವರ ನೆಂಪಪ್ಪಗ ದೇವಸ್ಥಾನಕ್ಕೆ ಹೋಪದಿದ್ದು. ನಮ್ಮ ಸಂಸ್ಕಾರಂಗನ್ನೂ ಒಳುದೋರ ಹಾಂಗೆ ದೇವಸ್ಥಾನಲ್ಲಿ ಹೇಳಿ ಮಾಡುಸಿಗೊಂಬಲೆ ಶುರುವಾಯಿದು.
ಹೀಂಗೇ ಮುಂದುವರುದರೆ ನಮ್ಮ ಜನಾಂಗದ ಸಂಸ್ಕಾರಂಗೊ ಇತಿಹಾಸದ ಪುಟ ಸೇರಿದರೂ ಆಶ್ಚರ್ಯ ಇಲ್ಲೆ.
ಈಗಲೇ ನಾವು ಎಚ್ಚತ್ತುಗೊಂಡು ರಜ ವಿದ್ಯಾವಂತರಾದೋರು ಪ್ರಯತ್ನ ಪಟ್ಟರೆ ಕೆಲವನ್ನಾದರೂ ಸರಿ ಮಾಡಲಕ್ಕು ಹೇಳಿ ಕಾಣುತ್ತು, ಒಬ್ಬನ ಇಬ್ರ ಪ್ರಯತ್ನ ಸಾಕಾಗ. ಸಾಮೂಹಿಕ ಕ್ರಾಂತಿಯೇ ನಡದರೆ ಸ್ವಲ್ಪ ಮಟ್ಟಿಂಗಾದರೂ ಸರಿಯಾದರ ನಮ್ಮ ಹೆರಿಯೋರಿಂಗೆ    ಸಮಾದಾನ ಅಕ್ಕು ಹೇಳಿ ಕಾಣುತ್ತು. ಸಮಾಜ ಹಿತಕ್ಕಾಗಿ  ಎಂತ ತ್ಯಾಗ ಮಾಡುಲೂ  ಸಿದ್ಧರಾಯೆಕ್ಕಾದ್ದು ನಮ್ಮ ಕರ್ತವ್ಯ ಅಲ್ಲದೋ? ಕೈಗೆ ಕೈ ಜೋಡುಸಿ ಅಪ್ಪ ಮಾನವ ಸರಪ್ಪುಳಿ, ಧರ್ಮವ ಕಾವಲೆ ಗುರು ಹೆರಿಯೋರ, ದೇವರ ಆಶೀರ್ವಾದ ಒಟ್ಟು ಸೇರಲಿ ಹೇಳಿ ಹಾರೈಕೆ.ಎಲ್ ಮದಲಾ ಃಆಂಗೆ ಆಯೆಕ್ಕು ಹೇಳುವದಲ್ಲ. ಹೊಸ ಸಧಾರಣೆಂದ "ಇದ್ದದೂ ಹೋತು ಮದ್ದಿನ ಗುಣಂದ" ಹೇಳಿ  ಅಪ್ಪಲಾಗ ಹೇಳುವದು ಎನ್ನ ಅಭಿಪ್ರಾಯ!

No comments:

Post a Comment