ತೊಂಡೆ ಕಾಯಿ ಬಿತ್ತು ತಪ್ಪಲೆ ಮನೆಗೆ
ಹೋದ್ದು.
ಅಧ್ಯಾಪಕರ ತರಬೇತಿಗೆ ಸೇರುಲಪ್ಪಗ ಹತ್ತೆರೆ
ಆವುತ್ತು ಹೇಳಿ ಮಾಯಿಪ್ಪಾಡಿ ಶಾಲೆಗೆ ಸೇರಿದೆ. ಅಂಬಗ
ಅದು ಬುನಾದಿ ಶಿಕ್ಷಣ ತರಬೇತಿ ಶಾಲೆ ಆಗಿತ್ತು. ಹತ್ತರೆ ಇದ್ದ ಸಿರಿಬಾಗಿಲು, ಮಧೂರು,
ಸೂರಂಬೈಲು ತ್ತ ಪಟ್ಳ ಶಾಲಗೊಕ್ಕೂ ಎಂಗೊ ಕಲಿಶುಲೆ ಅಭ್ಯಾಸ ಮಾಡಲೆ ಹೋಯೆಕ್ಕು.
ಮಾಯಿಪ್ಪಾಡಿ ಶಾಲೆಲ್ಲಿಯೂ ಒಂದು ಮಾದರಿ ಶಾಲೆ ಇದ್ದು. ಬೇಸಿಕ್ ಟ್ರೈನಿಂಗ್ ಹೇಳುತ್ತವು.
ನಮ್ಮ ಉಡುಗೆ ತೊಡುಗೆ ಖದ್ದರ್ ಆಯೆಕ್ಕು ಹೇಳುವದು ಕಡ್ಡಾಯ ಆಗಿತ್ತು. ಈ ಮೇಲೆ ಹೇಳಿದ
ಶಾಲೆಗಳೂ ಮತ್ತೆ ಹತ್ತರಾಣ ಬೇರೆ ಕೆಲವು ಶಾಲೆಗಳ ಬೇಸಿಕ್ ಪ್ರೈಮರಿ ಶಾಲಗೊ ಆಗಿತ್ತು. ಈ
ಶಲಗೊಕ್ಕೆಲ್ಲ
ನೂಲುವಿಕೆ ಕಡ್ಡಾಯ. ನೂಲು ತೆಗವಲೆ ತಕಲಿ, ಚರಕ ಸರಕಾರಂದಲೇ ಕೊಟ್ಟಿತ್ತಿದ್ದವು. ೂಲು
ಮಾಡುಲೆ ಹತ್ತಿ ಕೂಡಾ ಎಂಗಳಲ್ಲಿಂದಲೇ ಎಲ್ಲ ಶಾಲಗೊಕ್ಕೂ ಅವು ಬಂದು ತೆಕ್ಕೊಂಡು
ಹೋಯೆಕ್ಕು. ಕೊಟ್ಟ ಹತ್ತಿಂದ ನೂಲು ತೆಗದು ತಿಂಗಳ ಕೊನೆಗೆ ಈ ಶಾಲಗೊ ಹುಂಡಿ ರೂಪಲ್ಲಿ
ತಂದು ಎತ್ತಸೆಕ್ಕು ಹೇಳುದು ಕಡ್ಡಾಯ.ಹಾಂಗೆ ತಂದು ಕೊಟ್ಟುಗೊಂಡಿತ್ತಿದ್ದವು ಕೂಡ.
ಶಾಲೆಲ್ಲಿ
ಎಂಗೊ ಕಲಿಶೆಕ್ಕಾದ್ದು ಚಟುವಟಿಕೆ ಮೂಲಕ ! ಜೀವನಲ್ಲಿ ನವಗೆ ಬದುಕ್ಕುಲೆ ಅಗತ್ಯವಾದ
ಚಟುವಟಿಕೆಗಳ( ಅಡಿಗೆ,ಬೇಸಾಯ, ಕೈಗಾರಿಕೆ, ಆಚಾರಿ ಕೆಲಸ ಕೂಡ) ಆಧರುಸಿ ಕ್ಲಾಸಿಲ್ಲೇ
ಮಕ್ಕೊಗೆ ವಿವರುಸಿಕ್ಕಿ ,ಪ್ರತ್ಯಕ್ಷ ಅವರತ್ರೇ ಮಾಡುಸೆಕ್ಕು.
ಭಾಷಾ ಪಾಠ,ಗಣಿತ,ವಿಜ್ಞಾನ, ಅಧ್ಯಯನ ಹೀಂಗೆ ಎಲ್ಲವನ್ನೂ ಚಟುವಟಿಕಗೆ ಸಮನ್ವಯಿಸಿ
ಕಲಿಶೆಕ್ಕು ಹೇಳುವದು ತತ್ವ.
ಗಾಂಧಿ ಅಜ್ಜಂದಾಗಿ ಇಡೀ ದೇಶಲ್ಲಿ ಈ ಕ್ರಮ ಇತ್ತು.ಆ ಕಾಲಲ್ಲಿದ್ದ ಎಂಟನೇ ಕ್ಲಾಸು
ಮುಗುದು ಶಾಲೆ ಬಿಟ್ಟೋನಿಂಗೆ ಸ್ವಂತ ಕಾಲ್ಲಿ ನಿಂಬ ಹಾಂಗೆ ಹೇಳಿದರೆ ಸ್ವಾವಲಂಬನಂದ ಇಪ್ಪ
ಹಾಂಗೆ ಆಯೆಕ್ಕು ಹೇಳುವ ತತ್ವ. ಈಗಾಣದ್ದೋ ಕ್ರುಷಿ ಆರಿಂಗೂ ಇಷ್ಟ ಇಲ್ಲೆ ಮಾಂತ್ರ
ಅಲ್ಲ, ಅದರ ನಂಬಿಗೊಂಡರೆ ಹೊಟ್ಟೆಯೂ ತುಂಬ. ಅಂಬಗ ಈ ಕಾಫಿಗೆ ಪ್ರಾಮುಖ್ಯತೆ ಇತ್ತಿಲ್ಲೆ.
ಮಕ್ಕೊ ಎಲ್ಲ ಷಾಯ ಕುಡಿವದು.ಅದಕ್ಕೆ ಕಾಯ ತಯಾರಿ ಒಂದು ಚಟುವಟಿಕೆ! ಕ್ಲಾಶಿಂಗೆ ಹೋದ
ಕೂಡ್ಳೇ
ಮಕ್ಕಳತ್ರೇ ಷಯ ಹೇಂಗೆ ತಯಾರು ಮಾಡುವದು ಹೇಳಿ ಎಲ್ಲ ಹೇಳುಸಿಕ್ಕಿ, ಬೇಕಾದ ಸಾಮಾನಿನ
ಪಟ್ಟಿ ಮಾಡಿತ್ತು. ಮಕ್ಕಳೇ ಹೋಗಿ ಸಾಮಾನು ತಪ್ಪದು. ಮಕ್ಕಳೇ ಕಷಾಯ ತಯಾರು ಮಾಡಿ
ಎಲ್ಲೋರೂ ಕುಡಿವದು. ಮಧ್ಯಾಹ್ನದ ವರೆಗಾಣ ಚಟುವಟಿಕೆ!
ಮತ್ತೆ ಮಧ್ಯಾಹ್ನ ಮೇಲೆ ಮಕ್ಕಳತ್ರೇ ಅದರ ಬಗ್ಗೆ ಪ್ರಶ್ನೆ ಉತ್ತರ
ಮತ್ತೊಂದು ಪ್ರಬಂಧ, ಎಷ್ಟು
ಖರ್ಚಾತು ಹೇಳಿ ಲೆಕ್ಕ. ಸಂಬಾರು ಜೀನಸಿಲ್ಲಿ ಏನೆಲ್ಲ ಶಕ್ತಿಗೊ ಇದ್ದು, ಎಲ್ಲೆಲ್ಲಿ
ಬೆಳೆತ್ತ? ಹೇಂಗೆ ಬೆಳೆಶುವದು ಹೀಂಗೆಲ್ಲ ಕಲಿಶುವ ಕ್ರಮಕ್ಕೆ "ಬೇಸಿಕ್ ಶಿಕ್ಷಣ"
ಹೇಳಿದರೆ ಬದುಕ್ಕುಲೆ ಮುಖ್ಯವಾಗಿ ಬೇಕಾದ ವಿದ್ಯಾಭ್ಯಾಸ ಹೇಳಿ ಇತ್ತು.ಅಂಬಗ ಅಲ್ಲಿಯಾಣ
ಶಾಲೆ ಹೆಡ್ಮಾಸ್ಟ್ರನೂ ತುಂಬ ಸ್ಟ್ರಿಕ್ಟ್! ಎಂಗೊ ಖಾದಿ ವಸ್ತ್ರಂಗಳನ್ನೇ
ಧರುಸೆಕ್ಕು,ತಿಂಗಳಿಂಗೊಂದರಿಯೂ ಊರಿಂಗೆ ಹೋಪಲಾಗ. ಅಡಿಗೆ, ಊಟ ಎಲ್ಲ ಅಲ್ಲಿಯೇ. ಅಲ್ಲಿಯೇ
ಎಂಗೊನಿಂಬಲೆ
ಬೇರೆ
ಕಟ್ಟಡಂಗಳೂ ಇತ್ತು. ಊಟಕ್ಕೊಂದು ಭೋಜನ ಶಾಲೆ.ಊಟ ತಿಂಡಿ ಎಲ್ಲ ಅಲ್ಲೇ. ಅದಕ್ಕ
ತಾಗಿಗೊಂಡು ಅಡಿಗೆ ಶಾಲೆ . ಎಂಗಳೇ ಒಂದೊಂದು ವಾರ ಒಂದೊಂದು ಪಂಗಡಂಗೊ ಅಡಿಗೆ ಮಾಡುವದು.
ಬಳುಸುಲೂ ಒಂದೊಂದು ಪಂಗಡ.ಪಾತ್ರೆ ತೊಳವಲೆ ಒಂದ ಪಂಗಡ ಹೀಂಗೆಲ್ಲ ಇತ್ತು.
ಉದಿಯಪ್ಪಗ
ಐದು ಗಂಟೆಗೆ ಎದ್ದು ಪ್ರಾರ್ಥನೆ ಆಗಿ ಬಂದರೆ ಮತ್ತೆ
ಹೆಜ್ಜೆ ಊಟ. ಹತ್ತು ಗಂಟೆಗೆ ಕ್ಲಾಸ್ ಶುರು. ಮಧ್ಯಾಹ್ನ ಊಟ ಮುಗಿಶಿ ಹೋದರೆ ಮದಲು
ಸೂತ್ರ ಯಜ್ಞ! ಹೇಳಿದರೆ ನೂಲು ಮಾಡುವದು ಮತ್ತೆ ಪಾಠಂಗೊ.ಮತ್ತೆ ಕಸ್ತಲೆ ಏಳು ಗಂಟೆಗೆ
ಮತ್ತೆ ಪ್ರಾರ್ತನೆ ಆದ ಮೇಲೆ ಹೆಡ್ಮಾಸ್ಟ್ರನದ್ದು ಏನಾದರೂ ಸೂಚನೆಗೊ ಇದ್ದರೆ ಹೇಳುವದು
ಎಲ್ಲ ಇತ್ತ. ಬೇಸಾಯಕ್ಕೆ ಗೆದ್ದೆಯೂ ಇತ್ತು. ಎಂಗಳಲ್ಲಿ ಹೂಟೆ ಗೊಂತಿದ್ದೋರ
ಹೂಡುವದು,ನೇಜಿ ನೆಡುವದು, ಬೇಳೆದ ಮೇಲೆ ಗೆದ್ದೆ ಕೊಯ್ವದು ಬಡುದು ಬತ್ ಕೇರುವದು ಕೊಇ
ಎಲ್ಲ
ಎಂಗಳೇ.ಕೊಇದಾಗಿ ತರಕಾರಿ ಬೆಳೆಶುವದೂ ಎಂಗಳೇ .ಕುಂಬ್ಳ ಕಾಯಿ ಸಾಕಾಗದ್ದರೆ ಕಾಸರಗೋಡು
ಪೇಟೆಂದ ಗಾಡಿಲ್ಲಿ ತಪ್ಪದು ಎಂಗಳೇ ಆಯೆಕ್ಕು. ಈ ಬಗ್ಗೆ ಏನಾದರೂ ಮಾಹಿತಿ ಹೇಳೆಕ್ಕಾದ್ದು
ಕೇಳೆಕ್ಕಾದ್ದು ಅಂಬಗಳೇಈ ಸಭೆಲ್ಲಿ ಆಯೆಕ್ಕು.
ಅಂಬಗಂಬಗ ಊರಿಂಗೆ ಹೋಯಕ್ಕಾದೋರು ಅಸೌಖ್ಯದ
ಕಾರವಾದರೆ ಆರೋಗ್ಯ
ಮಂತ್ರಿಯೆ ಒಪ್ಪಿಗೆ ತೆಕ್ಕೊಳ್ಳೆಕ್ಕು. ಕ್ಲಾಸ್ ಮಾಸ್ಟ್ರ ಒಪ್ಪೆಕ್ಕು.
ಇವರದ್ದೆಲ್ಲಶಿಫಾರಸು ತೆಕ್ಕೊಂಡ ಮೇಲೆ ಹೆಡ್ಮಾಸ್ಟ್ರನ ಒಪ್ಪಿಗೆ ಸಿಕ್ಕಿದರೆ ಮತ್ತೆ
ಊರಿಂಗೆ ಹೋಪಲಕ್ಕು.ಅತ್ಯಗತ್ಯ ಹೇಳಿದರೆ ಮನೆಲ್ಲಿ ಮದುವೆ, ಬೇರೆ ಅನುಪತ್ಯಂಗೊ ಇದ್ದು
ಹೇಳಿದರೂ ಆ ದಿನಕ್ಕೆ ಮಾಂತ್ರ ರಜೆ.ಒಬ್ಬ ಅವನ ಅಪ್ಪನ ತಿಥಿ ಮಾಡ್ಳೆ ಆನೇ ಹೋಯೆಕ್ಕಸ್ಟೆ
ಹೇಳಿದ್ದಕ್ಕೆ ಅದರ ಒಂದು ವಾರ ಮುಂದೆ ಹಾಕಿದರೆ ಎಂತ ಕೇಳುಗು!ಲೊಟ್ಟೆ ಕಾರಣ ಕೊಟ್ಟರೆ
ಎಂಗಳ ಪೈಕಿ ಕೆಲವು
ಜನ ಗುಟ್ಟಾಗಿ ಹೆಡ್ಮಾಸ್ಟ್ರನ ಕಾಂಬಲೆ ಹೋಗಿ ಚಾಡಿ ಹೇಳುವದೂ ಇದ್ದು. ಅದರೆಲ್ಲ ಕೇಳಿ
ಸಂಬಂಧ ಪಟ್ಟೋ ದಿನಿಗೇಳಿ ಬೈವದೂ ಇದ್ದು. ಸತ್ಯ ,ಶಾಂತಿ, ಅಹಿಂಸೆ ಹೇಳುವದು ಗಾಂಧಿ
ತತ್ವ! ಇದರ ಚಾಚೂ ತಪ್ಪದ್ದಿಪ್ಪ ಮನುಷ್ಯ ಎಂ
ಹೆಡ್ಮಾಸ್ಟ್ರ!. ಹಾಂಗ ಲೊಟ್ಟೆ ಹೇಳಿಯ ಹೋಯೆಕ್ಕಾಗಿತ್ತು. ಆದರೆ ಇದರೆಲ್ಲ
ತಪ್ಪುಸಿಗೊಂಡು ಊರಿಂಗೆ ಹೋಪಲೆ ಒಂದು ಕಾರಣ ಹುಡುಕ್ಕಿ ಸಿಕ್ಕಿದ್ದು ಹೀಂಗೆ ಒಬ್ಬಂಗೆ!
ಅಂದು
ಕಸ್ತಲೆ ಭಜನೆ ಎಲ್ಲ ಮುಗುದು ಈ
ವರ್ದ ತರಕಾರಿ ಎಂತರ ಎಲ್ಲ ಬೆಳೆಶುವದು ವಿಷಯ ಚರ್ಚೆಗೆ ಬಂತು.ಕುಂಬಳ ಕಾಯಿ ಹೆಚ್ಚು
ಬಿತ್ತು ಹಾಕಲಕ್ಕು ಹೇಳಿ ಒಬ್ಬ. ಮತ್ತೊಬ್ಬ ಖರ್ಚಿಂಗಿಪ್ಪ ಮಣಸು ನಾವೇ ಬೆಳೆಶುವೊ ಹೇಳಿ
ಮತ್ತೊಬ್ಬ. ಬದನೆ , ಅಲತ್ತೊಂಡೆ ಹೀಂಗೆ ಚಎಚೆ ಬೆಳತ್ತು. ಒಟ್ಟಿಂಗೆ ತೊಂಡೆ ಕಾಯಿ ಕೂಡಾ
ಹೆಚ್ಚು ನ್ಬುಡ ಸಂಪಾದುಸಿ ನೆಡುವದೋ ಹೇಳಿ ಇನ್ನೊಬ್ಬ . ಸರಿ ಮತ್ತೊಬ್ಬ ಹೇಳಿ ವಿಷಯವೇ
ಬೇರೆ. ಬಳ್ಳಿ ತಂದು ತಂಡು ಮಾಡಿ ನೆಡುವದರ ಬದಲು ತೊಂಡೆ ಬಿತ್ತು ಸಂಪಾದುಸಿದರೆ ತುಂಬ
ಬೆಳೆಶುಲಕ್ಕು. ಬಳ್ಳಿಯ ಹೊತ್ತೊಂಡು ಬಪ್ಪದರ ಬದಲು ಬಿತ್ತು ತಪ್ಪದೂ ಸಭ ಅಲ್ಲದೋ ಹೇಳಿ
ಕೇಳಿದ. " ಓಹೋ ! ತೊಂಡ ಬಿತ್ತೂ ಸಿಕ್ಕುತ್ತೋ? ಎನಗೆ ಗೊಂತೇ ಇಲ್ಲೆ. ಎನ್ನ ಲೆಕ್ಲ್ಲಿ
ಬಳ್ಳಿಯನ್ನೇ ನೆಟ್ಟು ಅದು ಚಿಗುರಿ ಬರೆಕ್ಕು. ಆನು ಇಂದು ಶುರು ಕೇಳಿದೆ. ತೊಂಡೆ ಬಿತ್ತು
ಸಿಕ್ಕುತ್ತು ಹೇಳಿ ಎನಗೆ ೊಂತಿಲ್ಲೆಪ್ಪ" ಹೇಳಿ ಇನ್ನೊಬ್ಬ ೇಳದ. " ಸೆರೆ ನೋಡಿ ಊಳಿ
ಹಾಕೆಕ್ಕು ಹೇಳುವದು" ಮರದ ಕೆಲಸ ಮಾಡುತ್ತ ಆಚಾರಿಗಳ ಪಾಠಡೊ!ಆ ಇನ್ನೊಬ್ಂಗೆ ಒಂದು ಕಾರಣ
ಸಿಕ್ಕಿತ್ತು ಊರಿಂಗೆ ಹೋಪಲ.ಎದ್ದು ನಿಂದು ಹೇಳಿದಡ. "ಏಕೆ ಸಿಕ್ಕುತ್ತಿಲ್ಲೆ? ೇಕಾದರೆ
ಎಂಗಳ ಊರಿಲ್ಲಿ ತೊಂಡೆ ಬೆಳೆಶುವೋರು ತುಂಬಾ ಜನ ಇದ್ದವು. ಆನು ಬೇಕಾದರೆ ಊರಿಂಗೆ ಹೋಗಿ
ತೊಂಡೆ ಬಿತ್ತು ತತ್ತೆ "ಹೇಳಿದಡ.
ಹೆಡ್ಮಾಸ್ಟ್ರ ಚರ್ಚೆಯ ಕೇಳಿಗೊಂಡೆ ಇದ್ದೋರು"ಸರಿ ಅಂಬಗ ನೀನು ಊರಿಂಗೆ ಹೋಗಿ ಬಿತ್ತು ತೆಕ್ಕೊಂಡು ಬಾ"
ಹೇಳಿ ಊರಿಂೆ
ಹೋಗಿ ಬಪ್ಪಲೆ ಅಂಬಗಳೇ ಒಪ್ಪಿಗೆ ಆತು.
ಮರದಿನ
ಉದಿಯಪ್ಪಗ ಎದ್ದು ಊರಿಂಗೆ ಹೆರಟೊನು ಒಂದು ವಾರದ ವರೆಗೆ ಪತ್ತೆ ಇಲ್ಲೆ! " ಏಕೆ ಬಯಿಂದ
ಇಲ್ಲೆ? ಹೇಳಿ ಹೆಡ್ಮಾಸ್ಟ್ರಂಗೆ ಇವಂದೇ ಯೋಚನೆ. ಇಂದು ಬಕ್ಕು ನಾಳಂಗೆ ತ್ತನಾಯಿಕ್ಕು
ಹೇಳಿ ಒಂದು ವಾರಕಳುದ ೇಲೆ ಬಂದನಡ ಅವ ಬೇಜಾರು ಮಾಡ್ಯೊಂಡು!." ಆನು ಊರೆಲ್ಲ ಸುತ್ತಿದೆ
ಆರತ್ರೂ ಬಿತ್ತು
ಸಿಕ್ಕಿತ್ತಿಲ್ಲೆ. ಕೆಲವು ಜನ ಹೇಳಿದವು "ಬಳ್ಳಿಯನ್ನೇ ನೆಟ್ಟು ಮಾಡೆಕ್ಕಾವುತ್ತು
ಹೇಳಿ ಎಲ್ಲೋರೂ ಹೇಳಿದವು" ಹೇಳಿ ಹೊಸ ಲೊಟ್ಟೆ ಹೇಳಿ ಮನಸ್ಸಿಲ್ಲೇ ನೆಗೆ ಮಾಡ್ಯೊಂಡಡೊ.
ಗೆಳೆಯರತ್ರೆ ಶುದ್ದಿಹೇಳಿ ಕೊಶಿ ಪಟ್ಟಡೊ.
ಇದಕ್ಕೊಂದೊಪ್ಪ!- ಹೆಚ್ಚು ಬುದ್ಧಿವಂತರಾದರೂ ಕೆಲವೊಂದರಿ ಅರಡಿಯದ್ದೆ ಸೋತು ಹೋವುತ್ತವು.
ಇದಕ್ಕೊಂದೊಪ್ಪ!- ಹೆಚ್ಚು ಬುದ್ಧಿವಂತರಾದರೂ ಕೆಲವೊಂದರಿ ಅರಡಿಯದ್ದೆ ಸೋತು ಹೋವುತ್ತವು.
No comments:
Post a Comment