Monday, July 23, 2012

ಟ್ರೆತ್ಲೋನ್ ಮತ್ತು ಎಲೆಯಪ್ಪ



ಟ್ರೆಥ್ಲೊನ್ ಮತ್ತು ಎಲೆಯಪ್ಪ


.ಟ್ರೆಥ್ಲೋನ್
            ಅಮೇರಿಕದಲ್ಲಿ ಪ್ರಚಲಿತವಾಗಿರುವ ಮೂರು ಬಗೆಯ ಈ ಓಟಗಳನ್ನು ಟ್ರೆಥ್ಲೋನ್ ಎನ್ನುತ್ತಾರೆ. ಈಜುವುದು,ಸೈಕ್ಲಿಂಗ್ ಮತ್ತು ಓಟ ಸೇರಿರುತ್ತದೆ. ಸಾಮಾನ್ಯವಾಗಿ ರಜಾದಿನಗಳಲ್ಲಿ ಇಂತಹ ಸಾಹಸಮಯ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಮಾರಥೋನ್ ಓಟ (೪೦ ಕಿ ಮೀ ಓಡುವುದು)ಅದರ ಅರ್ಧ ಯಾ ಕಾಲು ಭಾಗದ ಓಟಗಳನ್ನೂ ನಡೆಸುತ್ತಿರುತ್ತಾರೆ.  ಇಲ್ಲಿಯ ಉತ್ಸಾಹಿಗಳು (ಮುದುಕರೂ ಕೂಡ) ಈ ಓಟಗಳಲ್ಲಿ ಭಾಗವಹಿಸುತ್ತಾರೆ. ಭಾಗವಹಿಸಿದ ಮೇಲೆ ಗೆಲ್ಲುವುದು ಮಾತ್ರ ಉದ್ದೇಶವಲ್ಲ; ಗುರಿಮುಟ್ಟುವುದು ಮುಖ್ಯ. ಪೂರೈಸಿದವರಿಗೆ ಪದಕಗಳನ್ನು ಕೊಡುವುದು ರೂಢಿ. ನನ್ನ  ಸಣ್ಣ ಮಗ ಮಾರಥೋನ್ ಓಟವನ್ನೂ ಪೂರೈಸಿದ್ದಾನೆ. ಮೊನ್ನೆ ಒಮ್ಮೆ ಸರೋವರವೊಂದರಲ್ಲಿ ಈಜುವ ಸಾಹಸವನ್ನೂ ಮಾಡಿದ್ದ. ಈಜುವುದನ್ನು ಅಭ್ಯಾಸ ಮಾಡಿದ್ದೇ ಇತ್ತೀಚೆಗೆ. ಭಾಗವಹಿಸುವ ಹುಮ್ಮಸ್ಸು  ಅವನದು. ಮೊನ್ನೆ ಇಲ್ಲಿ ನೂರು ಅಡಿಗಳಷ್ಟು ಆಳವಾದ ನದಿಯಲ್ಲಿ ಮುಕ್ಕಾಲು ಮೈಲಿನಷ್ಟು ಪ್ರವಾಹದ ಎದುರಾಗಿ ಮತ್ತು ನದಿಯ ಅಡ್ಡಕ್ಕೆ ಹೋಗಿ ಕೆಳಗೆ ಈಜ  ಬೇಕಿತ್ತು. ಈಜಿದ ಮೇಲೆ ೧೭ ಮೈಲು ಸೈಕ್ಲಿಂಗ್ ಮಾಡಬೇಕಿತ್ತು. ಮತ್ತೆ ಮೂರೂವರೆ ಮೈಲು ಓಡಿ, ಗುರಿಮುಟ್ಟಬೇಕಾದ್ದು ಅಗತ್ಯವಾಗಿತ್ತು. ಮೊದಲ ಸ್ಥಾನ ಪಡೆದವರಿಗೆ ಬಹುಮಾನವೂ ಇತ್ತು. ನನ್ನ ಮಗನು ಭಾಗವಹಿಸುವೆನೆಂದು ಹೆಸರು ಕೊಟ್ಟಿದ್ದ. ನಮಗೇನೋ ಅವನು ಸ್ಪರ್ಧೆಯಲ್ಲಿ ಭಾಗವಹಿಸುವುದು ಸುತರಾಂ ಇಷ್ಟವಿರಲಿಲ್ಲ. ಸಾಲದ್ದಕ್ಕೆ ರಾತ್ರಿ ಮಳೆ ಬಂದು ನದಿ ತುಂಬಿ ಹರಿಯುತ್ತಿತ್ತು. ಮಾತ್ರವಲ್ಲ ಸ್ವಲ್ಪ ಕೊಳೆ ಕಶ್ಮಲಗಳು ಮಳೆ ನೀರಿನೊಂದಿಗೆ ಸೇರಿಕೊಂಡಿತ್ತು. ಮನೆಯಿಂದ ೧೮ ಮೈಲು ದೂರವಿತ್ತು ಜಾಗ.ಇಲ್ಲಿಯವರಾದರೋ ಚೆನ್ನಾಗಿ ಅಭ್ಯಾಸ ಮಾಡಿದವರಿರುತ್ತಾರೆ. ಮಗನ ಉತ್ಸಾಹಕ್ಕೆ ತಣ್ಣೀರೆರಚಲು ಮನಸ್ಸಿಲ್ಲದೆ ಕಡೆಗೂ ನಾವೂ ಒಪ್ಪಿದೆವು. ಬೆಳಿಗ್ಗೆ ಆರೂವರೆ ಗಂಟೆಗೆ ಮನೆಯಿಂದ ಹೊರಟೆವು. ಅಲ್ಲಿ ಗೆ ತಲಪುವಾಗ ವಾಹನಗಳ ಒತ್ತಡವಿದ್ದುದರಿಂದ ಏಳೂಕಾಲು ಗಂಟೆಯಾಗಿತ್ತು.  ಬೆಳಿಗ್ಗೆ ಐದು ಗಂಟೆಗೇ ಬಂದಿದ್ದರಂತೆ ಜನ! ನಮ್ಮ ವಾಹನ ನಿಲ್ಲಿಸಲು ಒಂದು ಮೈಲು ದೂರದಲ್ಲಿ ಜಾಗ ಸಿಕ್ಕಿತು. ಮೊದಲೇ ಬಂದಿದ್ದ ವಾಹನಗಳು ತುಂಬಿದ್ದುದರಿಂದ ಎರಡು ಮೈಲು ದೂರದಲ್ಲಿ ವಾಹನ ನಿಲ್ಲಿಸಬೇಕಾಯಿತು. ಮಗನೇನೋ ಅಲ್ಲಿಂದ ಇಳಿದು ಸೈಕಲ್ಲಿನಲ್ಲಿ ಮುಂದೆ ಹೋದ. ಹೆಸರು ನಮೂದಿಸಿದ ಮೇಲೆ ಕೊಡುವ ಬೇಜನ್ನು ತೆಗೆದುಕೊಂಡು ಧರಿಸಿಕೊಳ್ಳಬೇಕಿತ್ತು ಅವನಿಗೆ. ನಾವು ಅಲ್ಲಿಂದ ಮುಂದೆ  ಒಂದು ಮೈಲಿನಷು ಬಸ್ಸಿನಲ್ಲಿಯೂ ಮತ್ತೆ ಒಂದು ಜೀಪಿನಲ್ಲಿಯೂ ಹೋದೆವು. ಸೊಸೆ ತುಂಬು ಗರ್ಭಿಣಿಯಾಗಿದ್ದುದರಿಂದ ನಡೆಯುವುದು ಕಷ್ಟವೆಂದು ಅವರನ್ನು  ಬೇಡಿಕೊಂಡದ್ದಕ್ಕೆ ವಾಹನ ಸಿಕ್ಕಿದ್ದು ಅನುಕೂಲವಾಯಿತು. ನಾವು ತಲಪಿದಾಗ ಮಗನು ಈಜುವುದಕ್ಕೆ ಹೋಗಿದ್ದಿರಬೇಕು. ಈಜಿ ಅಭ್ಯಾಸವಿಲ್ಲದಿದ್ದರೂ ಅವನ ಅದಮ್ಯ ಉತ್ಸಾಹ ಭಾಗವಹಿಸುವಂತೆ ಮಾಡಿತ್ತು. ಭಾಗವಹಿಸುವವರು ೧೫೦ ಡಾಲರ್ ಪ್ರವೇಶ ಧನ ಕೊಡ ಬೇಕಿತ್ತಾದರೂ ಮಗನಿಗೆ ಅವನು ಕೆಲಸ ಮಾಡುವ ಕಂಪೆನಿಯವರೇ ಹಣದ  ವ್ಯವಸ್ಥೆ ಮಾಡಿದ್ದರು.
            ೧೬ ವರ್ಷದವರಿಂದ ತೊಡಗಿ ೭೫ ವರ್ಷ ಪ್ರಾಯದ ಮುದುಕರೂ ಸ್ಪರ್ಧೆಯಲ್ಲಿ ಪಾಲುಗೊಂಡಿದ್ದರಂತೆ. ಎರಡು ಸಾವಿರಕ್ಕಿಂತಲೂ ಹೆಚ್ಚು ನೋಂದಾಯಿಸಿಕೊಂಡಿದ್ದರು. ಗಂಡುಸರೂ ಹೆಂಗುಸರೂ ಸ್ಪರ್ಧಾಳುಗಳು ಆಗಿದ್ದರು. ಒಬ್ಬ ಎರಡು ಕಾಲುಗಳಿಲ್ಲದವನೂ ಇನ್ನೊಬ್ಬ ಒಂದು ಕೈ ಇಲ್ಲದವನೂ ಭಾಗವಹಿಸಿದ್ದು ವಿಶೇಷವಾಗಿತ್ತು.ಅವರ ಉತ್ಸಾಹ ನಮ್ಮನ್ನು ಮೂಕಸಾಕ್ಷಿಗಳನ್ನಾಗಿಸಿತ್ತು. ಅದರೆ ಇಷ್ಟು ಜನರಲ್ಲಿ ಭಾರತೀಯ ಸ್ಪರ್ಧಾಳು ನನ್ನ ಮಗ ಮಾತ್ರವಾಗಿದ್ದುದು ಮತ್ತೊಂದು ವಿಶೇಷ! ಮಗ ಈಜಿ ನದಿಯಿಂದ ಮೇಲೆ ಬಂದ ಮೇಲೆಯೇ ನಾವು ಕಂಡುದು. ಈಜುವ ಜಾಗವು  ಸುತ್ತಲೂ ಮರಗಳಿಂದ ಸುತ್ತುವರಿದಿದ್ದ ಕಾರಣ ನಮಗೆ ಕಾಣಿಸುವುದಿಲ್ಲ. ಅವನನ್ನು ಕಂಡ ಮೇಲೆ ನಮಗೆ ಮನಸ್ಸಿಗೆ ಧೈರ್ಯವಾಯಿತು. ಹೆಮ್ಮೆಯೆನಿಸಿತು. ಯಾವುದೋ ಒಂದು ಹಳ್ಳಿಯ ಕೊಂಪೆಯಲ್ಲಿ ಹುಟ್ಟಿ ಬೆಳೆದವನೊಬ್ಬ ದೂರದ ನೀರಿನ ಆಳ ಹರವು ಅರಿಯದವನೊಬ್ಬ ಗುರಿ ಸಾಧಿಸಿದುದು ಅದ್ಭುತವಾಗಿತ್ತು. ಅವನು ಮತ್ತೆ ಹೇಳಿದ ತನ್ನ ಹುಚ್ಚು ಸಾಹಸದಲ್ಲಿ ಜೊತೆಗೆ ನೀವು ಇದ್ದುದರಿಂದ ಧೈರ್ಯ ಇಮ್ಮಡಿಯಾಗಿತ್ತು ಎಂದ. ಮತ್ತೆ ಸೈಕಲ್ ಸವಾರಿ ಮಾತ್ರ ಸ್ವಲ್ಪ  ವಿಳಂಬವಾಗಿ ಹೋಯಿತು. ಒಂದು ಲಟಾರಿ ಸೈಕಲ್ ಅವನದಾಗಿದ್ದುದರಿಂದ ತುಂಬ ಕಷ್ಟಪಡಬೇಕಾಯಿತು. ಎರಡು ಸಾವಿರ ಡಾಲರ್ ಬೆಲೆ ಬಾಳುವ ಸೈಕಲ್ ತಂದವರೂ ಇದ್ದರು. ಅದು ಓಡುವ ವೇಗ ಅದ್ಭುತವಾಗಿತ್ತು. ಇವನಲ್ಲಿದ್ದುದು ಸ್ಪರ್ಧೆಗಾಗಿ ತೆಗೆದದ್ದಲ್ಲ. ಒಂದು ಹಳತು ಸೈಕಲ್. ಅದನ್ನೂ ಮುಗಿಸಿ ಓಟವನ್ನೂ ಮುಗಿಸಿದವನನ್ನು ನೋಡಿದಾಗ ನಾವೆಲ್ಲ ಹೆಮ್ಮೆ ಪಟ್ಟೆವು ಇಂತಹ ಮಗನನ್ನು ಪಡೆದ ನಾವು ಭಾಗ್ಯವಂತರೆಂದು ನಮ್ಮ ಧನ್ಯತೆಗಾಗಿ ಪುಳಕಗೊಂಡೆವು. ಮೊಮ್ಮಗನಂತೂ ಹಿರಿ ಹಿರಿ ಹಿಗ್ಗಿ ಅಪ್ಪನನ್ನು ಅಪ್ಪಿ ಮುದ್ದಾಡಿದನು. ಸ್ಪರ್ಧೆಯಲ್ಲಿ ಗೆದ್ದವನು ೭೦ ಮಿನಿಟಿನಲ್ಲಿ ಪೂರೈಸಿದ ಗುರಿಯನ್ನು ಇವನು ಎರಡು ಗಂಟೆಯಲ್ಲಿ ಮುಗಿಸಿದ್ದಾದರೂ ಹೆಚ್ಚಿನ ಅಭ್ಯಾಸವಿಲ್ಲದೆ ಗುರಿಮುಟ್ಟಿದ್ದು ನಮಗೆ ಹೆಮ್ಮೆಯ ವಿಷಯವಾಗಿ ಕುಶಿಕೊಟ್ಟಿತು. ಮತ್ತೆ ಅವನ ಕಂಪೆನಿಯವರು ಇವರಿಗೆಲ್ಲ ಉಪಹಾರದ ವ್ಯವಸ್ಥೆ ಮಾಡಿದ್ದರು ನಮಗೂ ಸಿಕ್ಕಿತು. ಎಲ್ಲರೂ ಒಟ್ಟಾಗಿ ಅಲ್ಲಿಂದ ಹೊರಡುವಾಗ ಹನ್ನೊಂದು ಗಂಟೆ. ಆ ಮೇಲೆ ನಾವೆಲ್ಲರೂ ಮನೆಗೆ ಬಂದೆವು. ಅಮೇರಿಕ ಪ್ರವಾಸದಲ್ಲಿ ಚಿರಕಾಲ ಉಳಿಯಬಹುದಾದ ಈ ಸನ್ನಿವೇಶಕ್ಕೆ ಪ್ರತ್ಯಕ್ಷದರ್ಶಿಯನ್ನಾಗಿ ಮಾಡಿಬಿಟ್ಟ ನಮ್ಮ ಮಗ. ಇಲ್ಲಿಯವರಿಗೆ ಇದು ಅವರ ಹವ್ಯಾಸವದರೂ ನಮಗೆ ಹೊಸತಾಗಿತ್ತು
                            ಎಲೆ ಅಪ್ಪ.;- ಅಮೇರಿಕದಲ್ಲಿ ಕೆಲಸಕ್ಕಾಗಿ ಬಂದ ಭಾರತೀಯರು ಇಲ್ಲಿ ಅನ್ಯೋನ್ಯವಾ ಗಿ ಬಾಳುವೆ ನಡೆಸುತ್ತಿರುತ್ತಾರೆ. ವಾರದ ಕೊನೆಗೆ ಅವರೆಲ್ಲ ಸ್ವತಂತ್ರ ಹಕ್ಕಿಗಳು. ಬೇಕೆಂದಲ್ಲಿಗೆ ಹಾರಿ ಹೋಗಲು ಸ್ವತಂತ್ರರು. ಇಲ್ಲಿ ಕೆಲಸ ಮಾಡುವವರ ಹೆತ್ತವರು ಇವರನ್ನು ನೋಡಲೆಂದು ತಾತ್ಕಾಲಿಕ ವಿಸಾ ಅಥವಾ ಖಾಯಂ ಆಗಿ ಇರುವುದಾದರೆ ಗ್ರೀನ್ ಕಾರ್ಡ್ ಮಾಡಿಸಿಕೊಂಡು ಮಕ್ಕಳೊಡನೆ, ಮೊಮ್ಮಕ್ಕಳೊಡನೆ ಬೆರೆಯಲು ಸಂತೋಷ ಪಡುತ್ತಾರೆ. ಜೊತೆಗೆ ಹೀಗೆ ಬಂದವರನ್ನೂ  ಆಚೀಚೆ ಮನೆಯವರು ಆಗಾಗ ಊಟಕ್ಕೆ ಕರೆಯುತ್ತಿರುವುದು ವಾಡಿಕೆ. ಊರವರ ಜೊತೆ ಇದ್ದ ತೃಪ್ತಿ ಅವರದಾಗುವುದಂತೆ. ಹಗೆ ಊಟಕ್ಕೆ ನಾವೂ ಈ ಒಂದು ವರ್ಷದಲ್ಲಿ ಕೆಲವು ಮನೆಗಳಿಗೆ ಮಕ್ಕಳೊಡನೆ ಹೋಗಿದ್ದೆವು. ಮೊನ್ನೆ ಮೈಸೂರಿನವರೊಬ್ಬರ ಮನೆಗೆ ಹೋಗಿದ್ದೆವು.ಅವರ ಮಡದಿ ಮಂಗಳೂರಿನವಳಂತೆ. ಮೂಲ ಎಂದರೆ ಅವಳ ತಾಯಿಮನೆ ಕೇರಳದ ತಿರುವನಂತಪುರವಂತೆ. ೫ ವರ್ಶದ ಒಬ್ಬ ಗಂಡು ಮಗ ಮತ್ತು ಒಂದುವರ್ಷ ಪೂರೈಸಿದ ಹೆಣ್ಣು ಮಗು ಹೀಗಿತ್ತು ಅವರ ಕುಟುಂಬ. ಹೆಣ್ನು ಮಗುವಿನ ಪ್ರಥಮ ವರ್ಷಾಚರಣೆಯನ್ನು ಒಂದು ರೆಸ್ಟೋರೆಂಟ್ ನಲ್ಲಿ ತುಂಬ ಭರ್ಜರಿಯಾಗಿ ಮಾಡಿದ್ದರು. ಕೂಟಕ್ಕೆ ನಾವೂ ಹೋಗಿದ್ದೆವು.೬೦ ಜನಕ್ಕಿಂತಲು ಹೆಚ್ಚು ಜನಕ್ಕೆ ಊಟ ಹಾಕಿದ್ದರು.ಈ ದಿನ ಒಂದು ಸೌಹಾರ್ದ ಕೂಟ. ನಾವೂ ಮಂಗಳೂರವರೆಂಬ ಅಭಿಮಾನದಿಂದ ಕರೆದಿದ್ದರು. ನಾನು ನನ್ನ ಮಡದಿ,ಮಗ ಸೊಸೆ,ಮೊಮ್ಮಗ ಮತ್ತು ಸೊಸೆಯ ತಾಯಿ ಒಟ್ಟು ಆರು ಜನ ಅವರಿಗೆ ಅತಿಥಿಗಳು. ಊರಲ್ಲಿ ಕೂಡಾ ಅಂತಹ ಸತ್ಕಾರ ಸಿಕ್ಕಿರಲಿಲ್ಲ. ತಲಪುವಾಗಲೇ ಒಂದು ಗಂಟೆಯಾಗಿದ್ದುದರಿಂದ ಊಟಕ್ಕೇ ಕುಳಿತೆವು.ಮೊದಲು ಬಡಿಸಿದ್ದು,ಎಲೆಯಪ್ಪ ಎಂಬ ಹೆಸರಿನ ಶಾವಿಗೆಯನ್ನು. ಮತ್ತೆ ನಮ್ಮ ಮನೆಗಳಲ್ಲಿ ಮಾಡುವ ತರದ  ಮೇಲೋಗರ. ಅಚ್ಚ ಹವ್ಯಕ ಶೈಲಿಯ ಮೇಲೋಗರ ರುಚಿ ರುಚಿಯಾಗಿತ್ತು. ಸಾರು,ಹಪ್ಪಳ, ಮತ್ತೆ ಟೊಮೆಟೋದಿಂದ ಮಾಡಿದ ಗೊಜ್ಜು, ಸ್ಪೈನೇಚಿನಿಂದ ಮಾದಿದ ತಂಬುಳಿ,ಮೊಸರು, ಜೊತೆಗೆ ಅಪ್ಪೆ ಮಿಡಿ ಉಪ್ಪಿನ ಕಾಯಿ ತರ ತರದ ಪದಾರ್ಥಗಳನ್ನು ಕೂಡಿ ಉಂಡವರಿಗೆ ಊಖ್ಯವಗಿ ನನಗೆ ಹೊಟ್ಟೆ ಬಂದು ಮಡಿಲಲ್ಲಿ ಕುಳಿತದ್ದು ಗೊತ್ತಾದ ಮೇಲೆಯೇ ಎದ್ದದ್ದು. ಕುಳಿತು ಉಸಿರು ಬಿಡಬೇಕಾದರೆ ಮತ್ತೆ ಬಂತು ಕೇರಟ್ಟಿನ ಜೊತೆ ಕೇಸರಿ ಮತ್ತು ಗೇರುಬೀಜ ಹಾಕಿದ ಖೀರು ಕಂಡ ಮೇಲೆ ಬಿಡುವುದಕ್ಕಗುತ್ತದೆಯೇ! ತಯಾರಿಸಿದ ಮೇಲೆ ಒಂದು ಕಪ್  ಮಾತ್ರ ತಿಂದುದಾದರೂ ಬಾಯಿರುಚಿ ಮರೆಯುವಂತಿಲ್ಲ. ಮತ್ತೆ ತಾಂಬೂಲ ಹಾಕಿಕೊಳ್ಳುವಿರೋ ಎಂದೆಲ್ಲ ಊರಿನ ತರವೆ ಕೇಳಿದರು.    ಎಲೆ ಅಪ್ಪ,ಕೇರಳದಲ್ಲಿ ಕರೆಯುವ ಹೆಸರು. ಶಾವಿಗೆ ಮತ್ರ ನಮ್ಮೂರ ತರ ತಯಾರಿಸುವುದಲ್ಲ ಎಂದು ಸಂಯುಕ್ತ ಎಂಬ ಹೆಸರಿನ ಅಕೆ ಹೇಳಿದರು. ಮೂರು ಕಪ್ ಅಕ್ಕಿ ಹುಡಿಗೆ ನಾಲ್ಕು ಕಪ್ ನೀರು ಸೇರಿಸಿ ಸ್ವಲ್ಪ ರುಬ್ಬಿ ಗಟ್ತಿ ಹಿಟ್ಟನ್ನು ಚಕ್ಕುಲಿ ಮುಟ್ಟಿನಲ್ಲಿ ಶಾವಿಗೆಯ ಅಚ್ಚನ್ನುಪಯೋಗಿಸಿ ಇಡ್ಲಿಯಂತೆ  ತಟ್ಟೆಯಲ್ಲಿ ಹಾಕಿ ಇಡ್ಲಿ ಪಾತ್ರೆಯೊಳಗಿಟ್ಟು ಬೇಯಿಸುವುದು.  ಬೇಯಿಸುವುದು. ಬೇಯುವ ಹೊತ್ತಿಗೆ ಇಡ್ಲಿಯಂತೆ ಗರಿ ಗರಿಯಾಗಿ ಬಾಯಲ್ಲಿ ನೀರೂರುವಂತೆ ಕಾಣುತ್ತಿದೆ. ಕೇರಳದಲ್ಲಿ ಹೀಗೆ ಬೇಯಿಸುವ ತಿಂಡಿಯನ್ನು ಅಪ್ಪ ಎನ್ನುತ್ತಾರೆ.  ಇದನ್ನು ತಯಾರಿಸುವ ವಿಧಾನವನ್ನು ಕೇಳಿಕೊಂಡು ಬಂದ ನನ್ನ ಮಡದಿ ಮರುದಿ ಸಂಜೆಗೆ ಇದೇ ತಿಂಡಿಯನ್ನು ಮಾಡುವೆನೆಂದು ಪ್ರಯತ್ನಿಸಿ ನಮಗೆಲ್ಲ ತಿನಬಡಿಸಿದ್ದು ಆಕೆಯ ಸಾಧನೆ.ಬೆರೆ ಮನೆಗಳಿಗೆ ಹೋದಾಗ ತಿಂದ ಹೊಸ ತಿಂಡಿಯನ್ನು ಮಾಡುವ ವಿಧಾನವನ್ನು ಕೇಳಿಕೊಂಡು ಬಂದು ಪ್ರಯೋಗಿಸುವುದು ಅವಳ ಜಾಯಮನವಾಗಿ ನನಗು ಹೊಸ ತಿಂಡಿಗಳನ್ನು ತಿನ್ನುವ ಭಾಗ್ಯ ಆಗಾಗ ಬಂದೊದಗುತ್ತಿತ್ತು. ಊರಿಗೆ ಹೋದ ಮೇಲೆಯೂ ಹೊಸ ತಿಂಡಿಗಳನ್ನು ತಿಂದುಕೊಂಡಿರಬಹುದೆಂಬ ಆಸೆಯಲ್ಲಿದ್ದೇನೆ.

No comments:

Post a Comment