Monday, July 23, 2012

ಜನ್ಮ ದಿನದ ಕೂಟ

                        ಜನ್ಮ ದಿನದ ಕೂಟ
        ಹುಟ್ಟು ಹಬ್ಬ ಆಚರಿಸುವದು ಈಗ ಸಾಮಾನ್ಯ. ನಮ್ಮೂರಿಲ್ಲಿ  ಜನ್ಮ ದಿನಾಚರಣೆ ಹೇಳುವದು ಈಗ ಚಾಲ್ತಿಲ್ಲಿದ್ದರೂ ಮದಲು ಇತ್ತಿಲ್ಲೆ. ಹುಟ್ಟು ಹಬ್ಬದ ದಿನ ಮನೆಲ್ಲೇ ಭಟ್ರ ಬಪ್ಪಲೆ ಹೇಳಿ ಏನಾದರೂ ವಿಶೇಷ ಪೂಜೆ ಮಾಡುವದೋ, ಅಥವಾ ಹತ್ತರೆ ದೇವಸ್ಥಾನ ಇದ್ದರೆ ಅಲ್ಲಿಗೆ ಹೋಪದೋ ಮಾಡುವದು ಇದ್ದತ್ತು. ಈಗ ನಮ್ಮೂರಿಲ್ಲಿಯೂ ಅದೇ ಪ್ರಾಯದ ನೆರೆಕರೆಲ್ಲಿಪ್ಪ ಮಕ್ಕಳನ್ನೂ ಮನೆಗೆ ಬಪ್ಪಲೆ ಹೇಳುವದು,  ಕೇಕ್ ಕಟ್ ಮಾಡುವದು ಮೇಣದ ಬತ್ತಿ ಹೊತ್ತುಸುವದು ಎಲ್ಲ ಶುರುವಾಯಿದು. ನಿಜಕ್ಕೂ ಈ ಸಂಪ್ರದಾಯ ಇತ್ತೀಚೆಗೆ ವಿದೇಶಿಗರ ಸಂಪರ್ಕಂದಲೇ ಆದ್ದಿರೆಕ್ಕು. ದೀಪ ಹೊತ್ತುಸಿ ಊದಿ ನಂದುಸುವದು ನಮ್ಮ ಧಾರ್ಮಿಕ ಭಾವನೆಗೆ ವಿರೋಧವಾವುತ್ತಾದರೂ, ಜನಂಗೊ ಅದು ಮೂಢನಂಬಿಕೆ ಹೇಳಿ ಬಾಯಿ ಮುಚ್ಚುಸುತ್ತವು. ಎಲ್ಲ ಕಾಲಕ್ಕೆ ತಕ್ಕ ಕೋಲ! ಒಳುದೋರೆಲ್ಲ ಮಾಡಿ ಸಂತೋಷ ಪಡುವಗ, ನಾವುದೇ ಮಾಡದ್ದರೆ ಮಕ್ಕೊಗೂ ಕೊರತ್ತೆಯಾಗಿ ಕಾಣುತ್ತು. ರಾಜಕೀಯ ನಾಯಕಂಗೊಅವರ ದೊಡ್ಡಸ್ತಿಕೆಯ ತೋರುಸಿಗೊಂಬಲೆ ಭಾರೀ ಗೌಜಿಲ್ಲಿ ಆಚರುವದಿದ್ದು. ಸರಕಾರದ ಹೇಳಿದರೆ ಜನರ ಹಣವ, ಬೇಕಾದಷ್ಟು ತಿಂದು ಕೊಬ್ಬಿದ ಮುಂದಾಳುಗೊ, ಅವರ ಶ್ರೀಮಂತಿಕೆಯ ತೋರುಸುಲೆ ಸಾವಿರಾರು ಜನಂಗೊಕ್ಕೆ ಅನ್ನದಾನ, ವಸ್ತ್ರದಾನ ಹೇಳಿ ಮಾಡಿಕ್ಕಿ ಮತ್ತೆ ಆ ಖರ್ಚಿನ ಸಾರ್ವಜನಿಕ ಫಂಡಿಂದ ಭರ್ತಿ ಮಾಡ್ಯೊಳ್ಳುತ್ತವು. ಇದರ ನಾವು ಮಾತಾಡಿ ಪ್ರಯೋಜನ ಇಲ್ಲೆ. ಅಧಿಕಾರ ಸಿಕ್ಕುವನ್ನಾರ ಜನಂಗಳ ಕೈಕಾಲು ಹಿಡುದು ಮತ್ತೆ ಇತ್ಲಾಗ್ಯಂಗೆ ತಿರುಗಿಯೂ ನೋಡವು. ಆದರೆ ವಿದೇಶಲ್ಲಿ ಹುಟ್ಟು ಹಬ್ಬವ ಗೌಜಿಲ್ಲಿ ಆಚರಿಸುವುದರಲ್ಲಿಯೂ ಒಂದು ವಿಶಿಷ್ಟತೆ ಕಂಡತ್ತು.
    ಅಮೇರಿಕಲ್ಲಿ ಆನಿಪ್ಪಗ, ಹತ್ತಿಪ್ಪತ್ತು ಹೀಂಗಿಪ್ಪ ಹುಟ್ಟು ಹಬ್ಬಂಗೊಕ್ಕೆ ಆನು ಹೋಗಿತ್ತಿದ್ದೆ. ಅಮೇರಿಕಲ್ಲಿ ಉದ್ಯೋಗ ಮಾಡ್ಯೊಂಡಿಪ್ಪ ಭಾರತೀಯರು, ಒಬ್ಬಕ್ಕೊಬ್ಬ ಸಂಪರ್ಕ ಮಡಿಕ್ಕೊಂಬಲೆ ಈ ಹುಟ್ಟು ಹಬ್ಬವೂ ಸಹಾಯ ಅವುತ್ತು. ಊರು ಬಿಟ್ಟು ದೂರಲ್ಲಿಪ್ಪವಕ್ಕೆ, ಉದ್ಯೋಗದ ಎಡೆಲ್ಲಿ ಮನಸ್ಸಂತೋಷಕ್ಕಾಗಿ ಪರಸ್ಪರ ಒಟ್ಟು ಸೇರಿಗೊಂಡು,ಕೊಶಿಪಡುತ್ತವು. ಕೆಲವು ಜನ ಅವರ ಮಕ್ಕಳ ಎರಡನೆಯ ಹೇಳಿದರೆ ಹುಟ್ಟಿ ಒಂದು ವರ್ಷ ಕಳುದ ಮೇಲೆ ಕೊಶಿಲ್ಲಿ ಹೆಚ್ಚು ಭರ್ಜರಿಯಾಗಿ ಆಚರುಸುತ್ತವು. ಕೆಲವು ಜನ ಅವರವರ ಮನೆಲ್ಲಿ, ಇನ್ನು ಕೆಲವು ಜನ ಕೆಲವು ರೆಸ್ಟೋರೆಂಟ್ ಗಳಲ್ಲಿ ಊಟದ ವ್ಯವಸ್ಥೆಯೂ ಮಾಡುತ್ತವು . ಐವತ್ತು ಅರುವತ್ತು ಜನ ಸೇರುವದೂ ಇದ್ದು. ಅರುವತ್ತು ಮೈಲು ದೂರಂದಲೂ ಬಂದು ಸೇರುತ್ತವು. ಅದೇ ಪ್ರಾಯದ ಮಕ್ಕಳೂ ಒಟ್ಟು ಸೇರಿ ಆಡುವದು, ಪಿಸ್ಸ ತಿಂಬದು, ಹೀಂಗೆಲ್ಲ. ದೂರಂದ ಬಂದೋರಿಂಗೆ ಆಸರಿಂಗೆ ಹೇಳಿಯೋ, ಎಪಿಟೈಸರ್ ಹೇಳಿಯೋ ಸಣ್ಣ ಪಾರ್ಟಿ, ಬಂದ ಕೂಡಲೇ ಇರುತ್ತು. ಮಕ್ಕಳೂ ಜ್ಯೂಸ್ ಮತ್ತೆ ಕುರು ಕುರು ತಿಂಡಿ ತಿಂದಿಕ್ಕಿ ಆಡಿಗೊಂಡು ಇರುತ್ತವು. ದೊಡ್ಡಾದೋರು, ಸ್ನೇಕ್ಸ್ ತಿಂದು ಜ್ಯೂಸ್ ಕುಡಿತ್ತವು. ಮತ್ತೆ ಒಂದೊಂದು ಶುದ್ದಿ ಮಾತಾಡ್ಯೊಂಡು ಇರುತ್ತವು. ಮತ್ತೆ ಊಟ. ಆದಮೇಲೆ ಕೇಕ್ ಕಟ್ ಮಾಡುವದು ಆದ ಮೇಲೆ , ಕೇಕ್ ಎಲ್ಲೋರು ತಿಂದಿಕ್ಕಿ ಸಭೆ ಬಿರಿತ್ತು. ಮುಖ್ಯವಾಗಿ ಹೀಂಗಿಪ್ಪ ಹೆಳೆಲ್ಲಿ ಒಟ್ಟುಸೇರಿ ವಿಚಾರ ವಿನಿಮಯ ಮಾಡ್ಯೊಂಡು, ಜೀವನದ ಸುಖವ ಸವುಕ್ಕೊಂಡು ಸುಖವಾಗಿ ಇಪ್ಪದರ ನೋಡಿದರೆ ನಮಗೂ ಕೊಶಿ ಆವುತ್ತು.  ಇಲ್ಲಿಪ್ಪ ನಮ್ಮ ಮಕ್ಕಳೊಟ್ಟಿಂಗೆ ನಾವಿದ್ದರೆ ನಮಗೂ ಊರು ಬಿಟ್ಟು ದೂರದ ಒಂದು ರಾಜ್ಯಲ್ಲಿ ಇದ್ದೆಯೊ ಹೇಳುವ ಚಿಂತೆಯೂ ಇರುತ್ತಿಲ್ಲೆ. ಜೀವನ ಸುಖವ ಅನುಭವಿವ ಭಾಗ್ಯ ವಿದೇಶಂಗಲಲ್ಲಿಪ್ಪೋವಕ್ಕೆ ಇದ್ದು ಹೇಳಿರೆ ತಪ್ಪಲ್ಲ. ನಮ್ಮ ದೇಶಲ್ಲಿ ಪೇಪರ್ ನೋಡಿದರೆ ಸಿಕ್ಕುವ ಶುದ್ದಿಗೊ, ಅಲ್ಲಲ್ಲಿ ನಡವ ಗಲಾಟಗೊ,ರಾಜಕೀಯ ಡೊಂಬರಾಟಂಗೊ ತಪ್ಪಿದರೆ ಬೇರೆಂತದೂ ಇಲ್ಲೆ. ವಿದೇಶಲ್ಲಿಪ್ಪೋವಕ್ಕೆ ಒಂದು ರೀತಿಲ್ಲಿ ಅವರ ಕೆಲಸ ಮತ್ತು ಕುಟುಂಬದ ಯೋಚನೆ ಬಿಟ್ಟರೆ ಬೇರೆ ಚಿಂತೆ ಇರುತ್ತಿಲ್ಲೆ. ಅದಕ್ಕೆ ಹೀಂಗೆ ಒಟ್ಟು ಸೇರುವಗ ಅವರ ಕೆಲಸದ ಶುದ್ದಿ, ಮತ್ತೆ ಮಕ್ಕಳ ಶುದ್ದಿ, ಮತ್ತೆ ವಾರದ ಕೊನೆಗೆ ಎಲ್ಲಿಗಾದರೂ ಪ್ರವಾಸ ಹೋದ ಶುದ್ದಿ ಹೀಂಗೆಲ್ಲ ಮಾತಾಡುಲೆ ಇದೇ ಸಮಯ. ಇಂಡಿಯಕ್ಕೆ ಹೋಯಿದೆಯೊ? ಊರಿಲ್ಲೆಲ್ಲ ಎಂತ ಆಡುತ್ತವು? ಇದರ ಎಲ್ಲ ಮಾತಾಡುವಗ ಎಡೆಲ್ಲಿ ಕೇಳಿಗೊಳ್ಳುತ್ತವು.ಸಣ್ಣ ಪುಟ್ಟ ಕಾಯಿಲೆಗೊಕ್ಕೆ ಇನ್ಶೂರೆನ್ಸ್ ಚಿಕಿತ್ಸಾ ಸೌಲಭ್ಯ ಕೊಡುತ್ತು. ವರ್ಷಕ್ಕೊಂದರಿ ನಮ್ಮ ಬಪ್ಪಲೆ ಹೇಳಿ ಚೆಕಪ್ ಮಾಡಿ ಆರೋಗ್ಯದ ಮಟ್ಟಿಂಗೆ ಸಲಹೆ ಕೊಡುತ್ತವು. ಮತ್ತೆ ಸಾಧ್ಯವಾದರೆ ಆಧ್ಯಾತ್ಮಿಕ ಚಿಂತೆ ಮಾಡುಲೂ ಎಡೆ ಇದ್ದು. ಬೇರೆ ಬೇರೆ ದೇವಸ್ಥಾನಂಗಳಲ್ಲಿ ಕೂಟ ಕೂಡುವದೂ ಇದ್ದು. ಅಲ್ಲದ್ದರೆ ಅಲ್ಲಲ್ಲಿ ಟೆನ್ನಿಸ್ ಕೋರ್ಟ್ ಗೊ ಮತ್ತೆ ಕ್ಲಬ್ ಗೊ ಇರುತ್ತು.ಮನಸ್ಸಿಂಗೂ ದೇಹಕ್ಕೂ ಆರೋಗ್ಯ ಕಪಾಡುಲೆ ಬೇರೆಂತ ಬೇಕು!
        ಒಂದು ವರ್ಷಂದಲೂ ಹೆಚ್ಚು ಸಮಯಂದ ಹೀಂಗಿಪ್ಪ ಕೂಟಕ್ಕೆ ಹೋದರೂ ಇಂದ್ರಾಣದ್ದು ಬಹುಶಃ ಈ ಸರ್ತಿ ಅಖೈರಿಯ ಕೂಟ ಹೇಳಿ ಕಾಣುತ್ತು. ಕಾಸರಗೋಡಿನ ಕುಳೂರಿನವಡೊ.ಗೋಪಾಲಣ್ನ ಹೇಳಿ ಹೆಸರು.ಇಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಲ್ಲಿದ್ದವು. ಒಂದು ಕೂಸು ಒಬ್ಬ ಮಾಣಿ ಹೀಂಗೆ ಎರಡು ಮಕ್ಕೊ ಅವಂಗೆ. ಹುಡುಗಿ ಸಣ್ಣದು. ಆರು ವರ್ಷ ಕಳುದು ಏಳನೆಯ ಜನ್ಮ ದಿನದ ಕೂಟಕ್ಕೆ ಐದಾರು ಮನೆಯೋರ ಬಪ್ಪಲೆ ಹೇಳಿ ಶನಿವಾರ ಹೊತ್ತೋಪಗ ಈ ಕೂಟ ಇತ್ತು. ಬಂದೋರೆಲ್ಲ ಹವೀಕರೇ. ಮಾತಾಡಿ ನೋಡುವಗ ಎಲ್ಲೋರುದೆ ಸಂಬಂಧಿಕರೇ ಆಗಿತ್ತಿದ್ದವು. ಬಂದೋರಲ್ಲಿ ಕೆಲವು ಜನಂಗಳ ಒಂದೆರಡು ಸರ್ತಿ ಅವರ ಭೇಟಿಯಾಗಿತ್ತು. ಹೀಂಗಿಪ್ಪ ಕೂಟಂಗಳ ವ್ಯವಸ್ಥೆ ಮಾಡುವದು ಮುಖ್ಯವಾಗಿ ಒಬ್ಬಕ್ಕೊಬ್ಬನ ಸಂಪರ್ಕ ಹೆಚ್ಚಪ್ಪಲೆ ಒಳ್ಳೆದಾವುತ್ತುಎನ್ನ ಎರಡನೆಯ ಮಗನ ಮಗಳು ಪುಳಿಯೂ ಎಂಗಳೊಟ್ಟಿಂಗೆ ಇತ್ತು. ಸಣ್ಣ ಮಗನ ಮಗನೂ ಸೇರಿ ಹತ್ತು ಮಕ್ಕೊ ಇತ್ತಿದ್ದವು. ಮಕ್ಕೊ ಎಲ್ಲ ಹೀಂಗಿಪ್ಪ ಕೂಟಂಗಳಲ್ಲಿ ಕಾಂಬಲೆ ಸಿಕ್ಕಿದೋವೇ. ಒಬ್ಬಕ್ಕೊಬ್ಬಂಗೆ ಪರಿಚಯ ಇತ್ತು. ಹೊಸಬ್ಬೆತ್ತಿ ಹೇಳಿರೆ ಟೊರೊಂಟೋಂದ ಬಂದಿದ್ದ ಪುಳ್ಳಿ ಮಾಂತ್ರ. ಮಕ್ಕೊ ಕಂಡ ಕೂಡಲೇ ಒಬ್ಬಕ್ಕೊಬ್ಬನ ದಿನಿಗೇಳ್ಯೊಂಡು ಜಾಗೆ ಇದ್ದಲ್ಲಿ ಕೂದು ಆಟವೋ ಮೇಲೆ ಉಪ್ಪರಿಗ್ಗೆ ಹತ್ತಿ ಇಳುದು ಮಾಡುವದೋ ಎಂತೆಲ್ಲ ಆಟ ಆಡುಲೆ ಶುರು ಮಾಡಿರೆ ದಿನಿಗೇಳಿರೆ ಕೇಳ ಅವಕ್ಕೆ. ತಿಂಬಲೂ ಒತ್ತಾಯಲ್ಲಿ ತಿನಿಸೆಕ್ಕು.ತುಂಬ ಸಂತೋಷಲ್ಲಿ ಇತ್ತಿದ್ದವು. ಮಕ್ಕೊಗೆ ಬೇಕಪ್ಪ ಆಟದ ಸಾಮಾನು ಪ್ರತಿ ಮನೆಲ್ಲೂ ಇರುತ್ತು. ಆಡುವ ಕ್ರಮವೂ ಅವಕ್ಕೆ ಗೊಂತಿರುತ್ತು.ಎಡೆಯೆಡೆಲ್ಲಿ ಜಗಳ ಬಂದರೂ ಮತ್ತೆ ರಾಜಿ ಆಗ್ಯೊಳ್ಳುತ್ತವು. ಸಾಲದ್ದದಕ್ಕೆ ಈ ಸಮಯಲ್ಲೇ ಅವರ ಸೆಕೆಗಾಲದ ರಜೆಯೂ ಇದ್ದು. ಆಟದ ಸಾಮಾನುಗಳ ಒಬ್ಬಕ್ಕೊಬ್ಬ ಹಂಚಿಗೊ<ಡು ಜಗಳ ಇಲ್ಲದೆ ಆಡುತ್ತವು. ಅವರ ಆಟ ನೋಡುಲೇ ಚೆಂದ. ಬಂದೋರಲ್ಲಿ ಒಬ್ಬ ೮೯ ವರ್ಷ ಪ್ರಾಯದೋನು ಎನ್ನ ಗುರ್ತ ಮಾಡ್ಯೊಂಡು "ನಾವು ಸೀನಿಯರ್ ಸಿಟಿಸನ್ಸ್ ಅಲ್ಲದೋ ಇಲ್ಲಿಯೆ ಮಾತಾಡ್ಯೊಂಡಿಪ್ಪ ಹೇಳಿ ಮಾತಾಡ್ಯೊಂಡಿದ್ದವು. ಅವರ ಮಗಳ ಮಗಳು ಅಮೇರಿಕಲ್ಲಿ ಡಾಕ್ಟರಡೊ. ಅಳಿಯನೂ ಡಾಕ್ಟರೇ ಅಪ್ಪು. ಆದರೆ ಅವು  ಅಜ್ಜನನ್ನೂ ಮಾವ ಅತ್ತೆಯನ್ನೂ ಇಲ್ಲಿ ಬಿಟ್ಟಿಕ್ಕಿ ಹೋಗಿತ್ತವು. ಮತ್ತೆ ಮನೆಯೋನ ದೊಡ್ಡ ಮಾವನ ಹೆಂಡತ್ತಿ. ಉಕ್ಕಿನಡ್ಕದ ಹೆಮ್ಮಕ್ಕೊ. ಮತ್ತೆ ನೋಡುವಗ ಅವರ ಅಜ್ಜನ ಮನೆ ಎಂಗಳ ಬಾಳಿಕೆ ಹತ್ರೆ ಆಗಿತ್ತು. ಹಾಂಗೆ ಮಾತಾಡುಲೆ ತುಂಬ ಅನುಕೂಲ ಆತು. ಹೋದ ಕೂಡಲೇ ಗೋಧಿ ರೊಟ್ಟಿಯೋ,ಚಿಪ್ಸೋ, ಹೀಂಗೆಲ್ಲ ತಿಂಬಲೆ ಮತ್ತೆ ಕುಡಿವಲೆ ಜ್ಯೂಸ್ ಕೊಟ್ಟವು.ಒಂದರ್ಧ ಘಂಟೆ ಕಳುದು ಮಕ್ಕಳ ಬರುಸಿ ಪಿಸ್ಸ ಕುಡಿವಲೆ ಜ್ಯೂಸ್ ಎಲ್ಲ ಕೊಟ್ಟವು. ಈ ಸಮಯಲ್ಲಿ ಸೂರ್ಯ ಕಂತುವಗಳೇ ಎಂಟೂವರೆ ಗಂಟೆ ಲ್ಕಳಿತ್ತು. ಮತ್ತೆ ಊಟದ ವ್ಯವಸ್ಥೆ ಎಲ್ಲ ಮನೆದೇ ಆಡಿಗೆ. ಊರಿಲ್ಲಿ ನೆರೆಕರೆಂಗೆ ಹೋದ ಹಾಂಗೆ . ಆದರೆ ದೂರ ಮಾಂತ್ರ ಮಗನ ಮನೆಂದ ಒಂದೂವರೆ ಗಂಟೆ ದಾರಿ. ಮೇಜಿ ಮೇಲೆ ಸಾರು ಸಾಂಬಾರು, ಮೇಲಾರ.ತಂಬುಳಿ,ಚಟ್ಣಿ. ಮಾವಿನ ಹಣ್ಣಿನ ರಸಾಯನ, ಹಸರು ಪಾಯಸ,ಚಪಾತಿ, ಎರಡು ಬಗೆ ಪಲ್ಯ,ಅನ್ನ, ಮೊಸರು ಹೀಂಗೆಲ್ಲ ಮಡಗಿತ್ತಿದ್ದವು. ಅಂತೂ ಊಟ ಗಡದ್ದಾಗಿತ್ತು. ಸ್ವೀಟ್ ಸೆವೆನ್ ಕಪ್ ಕೂಡಾ ಇತ್ತು. ಬೇಕಾದ್ದರ ಅವವು ಪೇಪರ್ ತಟ್ಟೆಗೆ ಹಾಯ್ಕೊಂಡು ಆಚಿಕೆ ಮೇಜಿನ ಹತ್ತರೆ ಕೂದು ತಿಂದೊಂಬದು.ಎನಗೆ ಶನಿವಾರ ಒಂದೇ ಹೊತ್ತು ಊಟ . ಅದಕ್ಕೆ ಎರಡು ಚಪಾತಿ ತೆಕ್ಕೊಂಡು ಒಂದು ಕಪ್ಪಿಲ್ಲಿ ರಸಾಯನವೂ ಹಾಯ್ಕೊಂಡು ತಿಂಬಲೆ ಶುರು ಮಾಡಿದೆ. ಸಾರು ಕಪ್ಪಿಲ್ಲಿ ತಂದು ಕುಡುದೆ.ಪಾಯಸವನ್ನೂ ತಿಂದೆ. ಎನ್ನ ಊಟ ಅಷ್ಟಕ್ಕೆ ಆತು. ಎಲ್ಲೋರೂ ಮತಾಡ್ಯೊಂಡು ಒಂದರ್ಧ ಗಂಟೆಲ್ಲಿ  ಊಟ ಕಳಾತು. ಎಲ್ಲೋರದ್ದೂ ಊಟ ಮುಗುದ ಮೇಲೆ ಇನ್ನೊಂದು ಹಾಲಿಲ್ಲಿ ಉದ್ದದ ಮೇಜಿತ್ತು ಅದರಲ್ಲಿ ಎರಡು ಕೇಕ್ ತಂದು ಮಡಗಿದವು. ಮಗಲ ಹತ್ತರೆ ಕೇಕ್ ಕಟ್ ಮಾಡುಲೆ ಹೇಳಿದವು. ಅಲ್ಲಿದ್ದ ಮಕ್ಕೊ ಎಲ್ಲ ಒಂದು ಕಾಗದ ಟೊಪ್ಪಿ ಮಡಿಕ್ಕೊಂಡಿಪ್ಪಗ ಫೋಟೋ ತೆಗೆದವು. ಹೇಪ್ಪಿ ಬರ್ತ್ ಡೇ ಹೇಳಿದವು. ಮತ್ತೆ ಕೇಕಿನ ತುಂಡು ತುಂಡು ಮಾಡಿ ಎಲ್ಲೋರೂ ತಿಂದೆಯೋ. ಇಷ್ಟೆಲ್ಲ ಆಗಿ ಮುಗಿವಗ ಒಂಬತ್ತೂವರೆ ಗಂಟೆ. ಮತ್ತೆ ಬಂದೋರಿಂಗೆಲ್ಲ ವಿದಾಯ ಹೇಳಿಕ್ಕಿ ಮನೆಂದ ಹೆರಡುವಗ ಗಂಟೆ ಹತ್ತು ಕಳುದ್ದು. ಒಂದು ಗಂತೆಲ್ಲಿ ಮನಗೆ ಎತ್ತಿದೆಯೋ.ರಾತ್ರಿಯಾದರೂ ವಾಹನಂಗೊ ಸಾರಿಗಟ್ಟಿ ಹೋಯ್ಕೊಂಡಿದ್ದ ಕಾರಣ,ವಾಹನ ಓಡುಸುಲೆ ಕಷ್ಟ ಆದರೂ,ಮಗ ವೆಗವ ಹೊಂದಿಸಿಗೊಂಡು ಮನೆಗೆ ಎತ್ತುವಗ ಹನ್ನೊಂದೂವರೆ. ಇಲ್ಲಿಯಾಣವಕ್ಕೆ ರಾತ್ರಿ ಹಗಲಿನ ವ್ಯತ್ಯಾಸ ಗೊಂತಿಲ್ಲೆಯೊ ಏನೋ! ಮಾಎಗವೂ ಒಳ್ಳೆದಿಪ್ಪ ಕಾರಣ ನಿರ್ಭೀತಿಂದ ಹೆಮ್ಮಕ್ಕೊ ಆದರೂ ಒಂದೂರಿಂದ ಇನ್ನೊಂದು ಊರಿಂಗೆ ವಹನ ಓಡುಸ್ಯೊಂಡು ಹೋಪದು ನೋಡುವಗ ತುಂಬ ಕೊಶಿ ಅವುತ್ತು. ಭಯೋತ್ಪಾದನೆ, ಒಂದು ಸಮುದಾಯಕ್ಕೆ ಮಾಂತ್ರ ರಕ್ಷಣೆ ಕೊಡುವ ಸಂಪ್ರದಾಯ ಓಟಿನ ಆಟಂಗೊ ನಮ್ಮ ದೇಶಲ್ಲಿ ಮುಂದುವರಿತ್ತಾ ಇಪ್ಪದು ಕಾಂಬಗ ನಾಚಿಕೆ ಅವುತ್ತು. ಧಾರ್ಮಿಕತೆ ಒಂದಿಷ್ಟು ಇದ್ದರೂ ನೈತಿಕತೆ, ಭ್ರಷ್ಟಾಚಾರ ಬಿಟ್ಟಿಕ್ಕುಲೆ ಒಂದು ಸಮುದಾಯಕ್ಕೆ ಇನ್ನೂ ಇಷ್ಟ ಇಲ್ಲೆ ಹೇಳಿ ಕಾಣುತ್ತು. ರಾಮ ರಾಜ್ಯ ಹೇಳಿ ಕನಸು ಕಂಡಿದ್ದೋನೊಬ್ಬ ಸತ್ತು ಹೋಯಿದ. ಮತ್ತೆ ಆರೂ ಹುಟ್ಟಿದ್ದವಿಲ್ಲೆ. ಮುಂದೆ ಯಾವಗಲೋ ಹುಟ್ಟಿ ಬಂದು ದೇಶವ ಮುಕ್ತಗೊಳುಸಿದರೆ ಮತ್ತಾದರೂ ಒಳ್ಳೆದಕ್ಕೋ ಏನೋ? ಆದಿನ ಬೇಗ ಬರಲಿ ಹೇಳಿ ಕೇಳಿಗೊಳ್ಳುತ್ತೆ.

No comments:

Post a Comment