Monday, December 7, 2015

shabarimaleyatre

                                  ಶಬರಿ ಮಲೆ ಯಾತ್ರೆ
     
 ಕೇರಳದ ಕೊಟ್ಟಾಯಂ ನಿಂದ ೩೦ ಮೈಲುಗಳ ದೂರದಲ್ಲಿ ಒಂದು ಎತ್ತರವಾದ ಮಲೆಯನ್ನು ಶಬರಿಮಲೆಯೆಂದು ಕರೆಯುವುದು ವಾದಿಕೆ ಹಿಂದೆ ಶ್ರೀರಾಮನಿಗಾಗಿ ಕಾಯುತ್ತಾ ಅವನು ಬಂದಾಗ ಅನಿಗೆ ನೈವೇದ್ಯವಾಗಿ ತಾನು ರುಚಿ ಇಷ್ಟವಾದ ಹಣ್ಣನ್ನೇ  ಕೂಟ್ಟ ಮಹಾಭಕ್ತೆ ಶಬರಿಯಿಂದಾಗಿ ಈ ಮಲೆ( ಬೆಟ್ಟ) ಶಬರೀ ಮಾಲೆಯೆಂಬ ಹೆಸರಿನಿಂದ ಪ್ರಸಿದ್ಧವಾಯಿತು. ಮುಂದೆ ಅವತಾರಿಯಗಿ ಬಂದ ಅಯ್ಯಪ್ಪ ಸ್ವಾಮಿಯು ನೆಲಸಿದ ಬೆಯ್ಯವೆಂದು ಅಯ್ಯಪ್ಪನ ಭಕ್ತರು ಇಲ್ಲಿಗೆ ಬರಲಾರಂಭಿಸಿದರು. ಮೊದಲೇನೋ ಬಹಳ ದೂರದಿಂದ ಗುಡ್ಡ ಬೆಟ್ಟೆಗಳನ್ನು ಹತ್ತಿ ಇಳಿದು ಕಾಲ್ನಡಿಗೆಯಿಂದಲೇ ಬಂದವರು ಕಾಡು ಮೃಗಗಳ ಬಾಯಿಗೆ ಬಿದ್ದುದೂ ಇದೆಯಂತೆ! ಅಷ್ಟು ದುರಗಮವಾದ ಈ ಬೆಟ್ತಕ್ಕೆ ಮತ್ತೆ ಸಾರಿಗೆ ಸೌಕರ್ಯ ಹೆಚ್ಚಾದಂತೆ ಬರುವ ಭಕ್ತರ  ಸಂಖ್ಯೆ ಹೆಚ್ಚಾಗಿ ಆದಾಯ ಹೆಚ್ಚು ಬರತೊಡಗಿದಾಗ ಭಕ್ತರ ಕಾಣಿಕೆ ಹಣವನ್ನು ನೋಡಿ ಸರಕಾರವಾ ಎಂಡೋಮೆಂಟ್  ಗೆ ಸೇರಿಸಿ ಇತ್ತೀಚೆಗೆ ಸೌಕರ್ಯ ಹೆಚ್ಚಾದುದರಿಂದ ದೇವಸ್ವಂ ಬೋರ್ಡಿಗೆ ತುಳಸೀ ಮಾಲೆ ವರ್ಷದಲ್ಲಿ ಕೋಟಿಗಟ್ಟಲೆ ಆದಾಯಬರತೊಡಗಿದೆ ಭಕ್ತರ ಅಪೇಕ್ಷೆಯಂತೆ ಅನ್ನದಾನವೂ ಶುರುವಾಗಿದೆ. ೪೧ ದಿನಗಲಲ್ಲಿ ಮದ್ಯ ಮಾಂಸಸೇವಿಸಬಾರದೆಂಬ ನಿಯಮ ಇಟ್ಟುಕೊಂಡು ಕೊರಳಿಗೆ ತುಳಸೀ ಮಾಲೆ ಗುರುಸ್ವಾಮಿಯಿಂದ ಹಾಕಿಸಿಕೊಂಡು ಬ್ರಹ್ಮಚರ್ಯ ಪಾಲಿಸುತ್ತಾ ಸ್ವಂತ ಅಡಿಗೆ ಊಟ ಮಾಡಿಕೊಂಡು ಗುಂಪಾಗಿಯೋ ಇರಬೇಕು. ಗುರುಸ್ವಾಮಿಯೊಂದಿಗೆ ಇರುಮುಡಿ  ಎಂದರೆ ಮೂರು ತೆಂಗಿನಕಾಯಿ, ಸ್ವಲ್ಪ ಅಕ್ಕಿ, ಒಂದು ಕಾಯಿಯಲ್ಲಿ ತುಂಬಿಸಲು ಸಾಕಷ್ಟು ತುಪ್ಪ ಇವುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ತಿಕೊಂಡು ತಲೆಯಲ್ಲಿ ಇಟ್ಟುಕೊಂಡು ಪ್ರ್ವತ ಏರಬೇಕು. ಈಗ ನಿಯಮ ಸ್ವಲ್ಪ ಸಡಿಲಿದೆಯಾದರೂ ಅದೇ ನಿಯಮವನ್ನು ಪಾಲಿಸುವವರೂ ಇದ್ದಾರೆ. ಬರೇ ಒಂದು ವಾರ ಮಾತ್ರ ಮಾಲೆ ಹಾಕಿಸಿಕೊಳ್ಳುವವರು ಇದ್ದಾರೆ. ಒಟ್ಟಾರೆ ಆ ಅವಧಿಯಲ್ಲಿ ಬ್ರಹ್ಮಚರ್ಯ ಪಾಲಿಸಬೇಕೆಂಬ ನಿಯಮದಂತೆ ಮಲೆಯ ಬುಡಕ್ಕೆ ಹೋಗಿ ಅಲ್ಲಿ ಕೆಳಗೆ ಪಂಬಾ ನದಿಯಲ್ಲಿ ಸ್ನಾನ ಮಾಡಿ ಅಲ್ಲೇ ಇರುವ ಗಣಪತಿ ದೇವಸ್ಥಾನದಲ್ಲಿ ಈಡುಗಾಯಿ ಒಡೆದು ಮಾಲೆ ಹಾಕಿಸಿಕೊಂಡು ಇರುಮುಡಿ ತಲೆಯಲ್ಲಿ  ಹೊತ್ತುಕೊಂಡು ಹೋಗುವವರು ಇದ್ದಾರೆ. ಮಾಲೆ ಹಾಕುವವರಿಗೆ ಬೇಕಾದ ಕಾಯಿ ತುಪ್ಪ ಎಲ್ಲ ಏ ಸಿಗುತ್ತದೆ. ವ್ರತ ಪಾಲಿಸುವವರಿಗೆ ಈಗ ತುಂಬ ಅನುಕೂಲ ವಿದ್ದುದ್ದರಿಂದ ಜನ ಬಹು ಸಖ್ಯೆಯಲ್ಲಿ ಬರುತ್ತಾರೆ. ಪ್ರತಿ ಸಂಕ್ರಮಣ ಬಾಗಿಲು ತೆರೆದರೆ  ನಾಲ್ಕೈದು ದಿನ ಬರುವವರಿಗೆ ವ್ಯವಸ್ಥೆ ಈಗ ಮಾಡಿದ್ದಾರೆ. ಅಂತೂ ಬಹಳ ಹಿಂದೆ ಇದ್ದ ನಿಯಮಗಳನ್ನು ಸಡಿಲಿಸಿ ಸುಲಭಗೊಳಿಸಿದ್ದು  ಮತ್ತು ಬರೇ ಆರೇಳು ಮೈಲು ಮಾತ್ರ ಮಲೆಯೇರಲು ಇರುವುದರಿಂದ ಜನ ಬರುತ್ತಾರೆ. ಮೊದಲು ೧೫ ಮೈಲು ಕಾಡಿನಲ್ಲಿ ಹಿಂಸ್ರ  ಮೃಗಗಳಿಗೆ ಆಹುತಿಯಾದುದೂ ಇದೆಯಂತೆ.
   ನಾನು ಎರಡು ಸಲ ಶಬರಿಮಲೆಗೆ ಹೋಗಿದ್ದೆನು ಒಮ್ಮೆ ಒಬ್ಬ ಗುರುಸ್ವಾಮಿಯೊಂದಿಗೆ ಹೋದರೆ ಇನ್ನೊಮ್ಮೆ ಮತ್ತೊಬ್ಬ ಗುರುಸ್ವಾಮಿಯೊಂದಿಗೆ . ಇನ್ನೊಮ್ಮೆ ನನ್ನ ಪತ್ನಿಗು ಶಬರಿ ಮಲೆ ಯಾತ್ರೆ ಮಾಡ ಬೇಕೆಂಬ ಆಸೆಯಾಯಿತು. ಮತ್ತೆ ನನಗು ಇನ್ನೊಮ್ಮೆ ಅಯ್ಯಪ್ಪನನ್ನು ಭೇಟಿ ಮಾಡಬೇಕೆಂಬ ಆಸೆಯಾಯಿತು  ನನ್ನ ಹೆಂಡತಿಯ ಗೆಳತಿಯರು ಕೆಲವರು ಹೋಗುವರೆಂದು ಗೊತ್ತಾಗಿದ್ದರಿಂದ ಅಲ್ಲಿಗೆ ಹೆಂಗುಸರೂ ಹೋಗಬಹುದು ಎಂಬ ವಿಷಯ ಗೊತ್ತಾಗಿದ್ದರಿಂದ ಪತ್ನಿಗೂ ಹೋಗಬೇಕೆಂಬ ಆಸೆ ಚಿಗುರಿತು ಹಾಗೆ ನನಗೂ ಆಕೆಯನ್ನು ಕರೆದುಕೊಂಡು ಹೋಗಲು ಅನುಕೂಲವು ಆಯಿತು. ಎಲ್ಲರು ಗಂಡುಸರೇ ಆದರೆ ಒಬ್ಬ ಹೆಂಗಸನ್ನು ಕರಕೊಂಡು ಹೋಗಲು ಕಷ್ಟವಲ್ಲವೇ?  ಪ್ರಾಯದ ಹೆಂಗುಸರು ಎಂದರೆ ಮುಟ್ತು ನಿಂತವರು ಐವತ್ತು ಕಳೆದವರಿಗೆ ಪ್ರವೇಶವಿದೆಯೆಂದು ಗೊತ್ತಾಗಿ ಒಂದು ದಿನ ನಾವೆಲ್ಲರೂ ಒಟ್ಟಾಗಿ ಸಂಜೆಯ ಮಲಬಾರ್ ಎಕ್ಸ್ ಪ್ರೆಸ್ಸಿಗೆ ಮೊದಲೇ ಸೀಟ್ ಬುಕ್ ಮಾಡಿಸಿಕೊಂಡಿದ್ದೆವು ಸಂಜೆ ಗಾಡಿ ಹತ್ತಿದವರು ಕೊಟ್ಟಾಯಂ ಸ್ಟೇಶನ್ನಿಗೆ ಗಾಡಿ ತಲಪಿದೊಡನೆ ನಾವು ಮೊದಲೇ ಬುಕ್ ಮಾಡಿದ್ದ ಗಾಡಿಯಲ್ಲಿ ಕೊಟ್ಟಾಯಮ್ಮಿನಿಂದ ಶಬರಿಮಲೆಗೆ ಹೊರಟೆವು. ಪೂರ್ವಾಹ್ನ ಶಬರಿ ಮಲೆಯ ಬುಡದಲ್ಲಿರುವ ನದೀಯಲ್ಲಿ ಸ್ನಾನ ಮಾಡಿ ಅಲ್ಲೇ ಮೇಲಿರುವ ಗಣಪತಿ ದೇವಸ್ಥಾನದಲ್ಲಿ ಮಾಲೆ ಹಾಖಿ ಇರುಮುಡಿ ಕಟ್ತಿಕೊಂಡು ಅಯ್ಯಪ್ಪನನ್ನು ಕೂಗಿಕೊಳ್ಳುತ್ತಾ ಮಲೆಯನ್ನೇರತೊಡಗಿದೆವು . ಗೆಳತಿಯರಿದ್ದುದರಿಂದ ನಮ್ಮವಳಿಗೂ ಮೊಡು ಧೈರ್ಯ ಬಂದಿದ್ದರೂ ಬಹಳ ಕಷ್ಟದಿಂದ ಗುಡ್ಡವೇರತೊಡಗಿದಳು. ನಮ್ಮ ಪೈಕಿ ವಯಸ್ಸಾದ ಹೆಂಗಸು ನಮ್ಮವಳು. ಅಂತೂ ಏಳೆಂಟು ಮೈಲು ದಾರಿಯನ್ನು ಏರಲು ಮೂರು ಗಂಟೆ ಬೇಕಾಯಿತು. ಸ್ವಲ್ಪ ತಡವಾದ್ದರಿಂದ ಮೇಲೇರಿದೊಡನೆ ಅಯ್ಯಪ್ಪನ ಮಂದಿರಕ್ಕೆ ಮೇಲೇರುವಾಗ ಸಿಕ್ಕುವ ಹದಿನೆಂಟು ಮೆಟ್ಟಲುಗಳನ್ನು  ಆ ಹೊತ್ತಿನಲ್ಲಿ ಹೆಚ್ಚು ಜನವಿಲ್ಲದುದರಿಂದ ನಿಧಾನವಾಗಿ ಮೇಲೇರಲು ಸಾಧ್ಯವಾಯಿತು. ಮೇಲೆ ಹತ್ತಬೇಕಾದರೆ ಅಲ್ಲೇ ಗೋಡೆಯೊಂದಕ್ಕೆ ಬರುವಾಗ ತಂದಿದ್ದ ಒಂದು ತೆಂಗಿನಕಾಯಿಯನ್ನು ಹೊಡೆದುಬಿಟ್ಟೆವು. ಆದು ಅಲ್ಲೇ ಬಿಡ್ಡಬೇಕಾದುದು. ಮತ್ತೆ ತಾನೆ ಮೆಟ್ಟಲೇರುವುದು! ಎಲ್ಲ ಬಂಗಾರದ ಮುಚ್ಚಿಗೆಯ ಮೆಟ್ಟಲುಗಳು ಸಂಜೆ ಈ ಮೆಟ್ಟಲುಗಳಿಗೆ ನಿತ್ಯವೂ ಪಡಿಒಪೂಜೆ ನಡೆಯಲಿದೆಯಂತೆ  ಅಯ್ಯಪ್ಪನ ದರ್ಶನವಾಗಲಿಲ್ಲ. ಅದರೆ ಉಳಕೊಳ್ಳಲು ಎರಡು ರೂಮ್ ಬುಕ್ ಮಾಡಿದ್ದರಿಂದ ಗಂಡುಸರು ಹೆಂಗಸರೆಂಬ ಭೇದವಿಲ್ಲದೆ ವಿಶ್ರಾಂತಿ ಪಡೆಯಲು ಹೋದೆವು. ಪ್ರಸಾದ ಊಟ ಸಿಕ್ಕದಿದ್ದರಿಂದ ಹೋಟೆಲಿನಲ್ಲಿ ಊಟ ಮಾಡಬೇಕಾಯಿತು. ಸಂಜೆ ಬೇಗನೆ ದೇವರ ದರ್ಶನಕ್ಕೆ ಹೋದೆವು ದರ್ಶನಕ್ಕೆ ತುಂಬಾ ಜನ ಬರುವುದರಿಂದ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಮಕರ ವಿಳಕ್ಕಿನ ಕಾಲದಲ್ಲಿಯೋ ಇತರ ಹಬ್ಬಗಳ ಕಲದಲ್ಲಿಯೋ ರಶ್ ಹೆಚ್ಚಿರುವುದರಿಂದ ದರ್ಶನ ಕಷ್ಟ ವೆಂದು ಸಂಕ್ರಮಣದ ನಂತರ ಹೋದುದಾದರೂ ಜನ ಸಂದಣಿ ಧಾರಾಳವಾಗಿತ್ತು. ಎಲ್ಲರೂ ನಮ್ಮಂತೆ ರಶ್ ತಪ್ಪಿಸಿಕೊಳ್ಳಲು ಆದಿವೇ ಬಂದಂತಿತ್ತು. ಅಂತೂ ಬಹಳ ಹೊತ್ತು ಸಾಲಿನಲ್ಲಿ ನಿಂತ ಮೇಲೆ ದರ್ಶನಕ್ಕೆ ಸಾಧ್ಯವಾದರೂ ಅಲ್ಲಿಯೂ ಜನಸಂದಣಿ ಹೆಚ್ಚಾಗಿದ್ದುದರಿಂದ ಹೆಚ್ಚು ಹೊತ್ತು ದೇವರನ್ನು ನೋಡಲು ಸಾಧ್ಯವಾಗಲಿಲ್ಲ. ಅಷ್ಟೆತ್ತರದ ಗುಡ್ಡದ ತುದಿಯಲ್ಲಿಯೂ ನೀರು  ಸಾಲದ್ದಕ್ಕೆ ದೇವಸ್ವಂ ಬೋರ್ಡಿನವರು ಕೆಳಗಿನಿಂದ ಪೈಪಿನ ಮೂಲಕ ನೀರು ತರಿಸಿ ಬಂದವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆಯಿದ್ದರೂ ಎಲ್ಲರಿಗೂ ಊಟ ಸಿಗುವುದು ಕಷ್ಟವಾಗುತ್ತದೆ. ಇನ್ನು ಹೆಚ್ಚು ರಶ್ ಇದ್ದ ಸಮಯದಲ್ಲಿ ಊಟ ಸಿಗುವುದಿಲ್ಲ. ಬೇಕಾದ ಪೋಲಿಸ್ ರಕ್ಷಣೆಯಿರುವುದರಿದ ಮಾತ್ರವಲ್ಲ ಅಲ್ಲಿ ಮದ್ಯಪಾನ ಮಾಡುವುದು ನಿಷೇಧವಾದುದರಿಂದ ಕೆಟ್ಟ ಜನರ ತೊಂದರೆಯಿಲ್ಲ.  ಯಾವ ಹೆದರಿಕೆಯೂ ಇಲ್ಲ. ಒಳಗೆ ತಲಪಿದೊಡನೆ ಬಂಗಾರದ ಕವಚ ಹೊಂದಿರುವ ಮಾಡು ಕಲಶ ಎಲ್ಲವೂ ಬಂಗಾರದ್ದೇ ಆಗಿರುವುದರಿಂದ ಸಾಕಷ್ಟು ಜಾಗ್ರತೆಯಿರಬೇಕಲ್ಲ!.ಅಲ್ಲಿಂದ ಈಚೆ ಬಂದರೆ ಮಾಳಿಗಮ್ಮ  ದೇವರ ಗುಡಿ  ಹಿಂದೆ ಅಯ್ಯಪ್ಪನನ್ನು ಮದುವೆಯಾಗಬೇಕೆಂದು ಬಯಸಿ ಬಂದು ಅವನಲ್ಲಿ ಕೇಳಿದಾಗ ಅಯ್ಯಪ್ಪನು " ಈ ಕ್ಷೇತ್ರಕ್ಕೆ ಚಿಕ್ಕ ಕನ್ಯೆಯರು ಬರುವುದು ನಿಂತ ಮೇಲೆ ನಿನ್ನ ಬಯಕೆಯನ್ನು ಪೂರೈಸುವೆಯೆಂದಿದ್ದನಂತೆ! ಆದರೆ ಜನ ಬರುವುದು ನಿಲ್ಲಲೂ ಇಒಲ್ಲ ಆಕೆಗೆ ಮದುವೆಯಾಗಲೂ ಇಲ್ಲ. ಈ ಗುಡಿಯ ಹತ್ತಿರ ಹೋದವರು ಒಂದು ತೆಂಗಿನಕಾಯಿ ( ಕಾಯಿ ಅಲ್ಲೇ ಕೊಡುತ್ತಾರೆ ) ಕಾಯಿಯನ್ನು ಉರುಳಿಸಿಕೊಂಡು ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುತ್ತಾರೆ. ಒಮ್ಮೆ ಜನ ಉರುಳಿಸಿ ಬಿಟ್ಟ ಕಾಯಿಗಳನ್ನು ಅಲ್ಲಿಂದ ದೇವಸ್ಥಾನ ಚಾಕರಿಯವರು ಗೋಣಿಗಳಲ್ಲಿ ಸಂಗ್ರಹಿಸಿ ಆಚೆ ಇಟ್ಟ್ಅರೆ  ಅಲ್ಲಿ ಕುಳಿತುಕೊಂಡವರು ಅದೇ ಕಾಯಿಗಳನ್ನು ಮತ್ತೆ ಬಂದವರಿಗೆ ಉರುಳಿಸಲು ಕೊಡುತ್ತಾರೆ ಹೀಗೆ ದೇವಸ್ಥಾನಕ್ಕೆ ಬಂದವರು ದೇವಿಯ ಕೋರಿಕೆಯನ್ನು ಈಡೆರಿಸುವಂತೆ ಕೇಳಿಕೊಂಡರೂ ಮಾತನಾಡದ ದೇವರು ಬಸ್ಂದವರಿ ಮುಗ್ಧಮನಸ್ಸನ್ನು ಹಣ ಒಟ್ತು ಮಾಡುವ ಕಾಯಕದಂತೆ ನಡೆಸುತ್ತಿರುತ್ತಾರೆ. ಜನರ ಮುಗ್ಧ ಮೂಢ ವಿಶ್ವಾಸವನ್ನು ಹೀಗೆ ಕ್ಶೇತ್ರವಾಸಿಗಳು ದುರ್ಬಳಕೆ ಂಆಡಿಕೊಳ್ಳುತ್ತಿದ್ದರೂ ನಂಬಿಕೆ ಮುಂದುವರಿಯುತ್ತಲೇ ಇದೆ!  ತಾಯಿಯ ಬಯಕ್ಕೆ ಈಡೇರಿಸುವಂತೆ ಬೇಡಿಕೊಂಡಾರೂ ಯಾರ ಬಯಕೆಯೂ ಈಡೇರದೆ ಆಕೆ ಬ್ರಹ್ಮಚಾರಿಣಿಯಾಗೇ ಇನ್ನೂ ಇದ್ದಾಳೆ. ಮಾಳಿಗಮ್ಮನ ದರ್ಷನ ಮುಗಿಸಿ ನಾವು ತಂದ ಇರುಮುಡಿಯನ್ನು ಅಯ್ಯಪ್ಪನ ಮಂದಿರದ ಒಂದು ಬದಿಯಲ್ಲಿ ಕುಳಿತುಕೊಂದು ಕಾಯಿಯೊಳಗೆ ತುಂಬಿಸಿದ ತುಪ್ಪವನ್ನು ಒಳಗೆ ಕೊಟ್ಟು, ತುಪ್ಪ ತುಂಬಿಸಿದ ಕಾಯಿಯನ್ನು ಕೆಳಗೆ ಒಂದು ಅಗ್ನಿ ಕುಂಡಕ್ಕೆ ಹಾಕಿದೆವು. ತುಂಬಾ ಆಳದಲ್ಲಿರುವ ಈ ಕುಂಡಕ್ಕೆ ಬಂದವರೆಲ್ಲ ಹಾಕಿದ ತೆಂಗಿನ ಕಾಯಿಯ ಬೆಂಕಿ ಆರದೆ ಯಾವಾಗಲೂ ಹೋಮ ಕುಂಡ ಧಗ ಧಗಿಸಿ ಉರಿಯುತ್ತಿರುತ್ತದೆ. ಅದಾಗಿ ನಾವು ಸಂಜೆಯ ಪಡಿಪೂಜೆ ನೋಡಲು ಹೋದೆವು. ಜನ ಈಗ ತುಂಬ ಸೇರಿದ್ದರು ನಾವು ಬರುವಾಗ ಇದ್ದ ಜನ ಕಡಿಮೆ ಈಗ ನೋಡಿದರೆ ಸಾವಿರಾರು ಸೇರಿದ್ದರು. ಜನರ ಎಡೆಯಲ್ಲಿ ನಾವು ಪಡಿಪೂಜೆ ನೋಡಿದೆವು ಅ ಹದಿನೆಂಟು ಮಟ್ತಲುಗಳಿಗೂ ಪೂಜೆಯಂತೆ! ಕೆಳಗಿನ ಮೆಟ್ಟಲಿನಲ್ಲಿ ಪೂಜಾರಿಗಳು ಆರತಿ ಪುಜೆಯ ಸಾಮಗ್ರಿಗಳೊಂದಿಗೆ ಬಂದರು ಪೂಜೆ ನೈವೇದ್ಯ ಆಗುತ್ತಿದ್ದಂತೆ ವಾದ್ಯ ಘೋಷಗಳು ಜೋರಾಗಿ ಧ್ವನಿಸುವುದರೊಂದಿಗೆ ಒಂದೊಂದೇ ಮೆಟ್ಟಲುಗಳಿಗೆ ಕ್ರಮದಂತೆ ಪೂಜೆ ಆರತಿ ಬೆಳಗಿದರು ಸುಮಾರು ಒಂದು ಗಂಟೆ ಜನ ಮನದಣಿಯೆ ಪೂಜೆ ನೋಡಿತ್ತಿರುವಂತೆ ಪೂಜೆ ಮುಗಿಯಿತು. ನಾವು ರಾತ್ರೆಯೂ ಹೋಟೆಲಿನಲ್ಲಿಯೇ ಊಟ ಮಾಡಿದೆವು. ರೂಮಿಗೆ ಹೋದರೆ ಮಲಗಲು ಚಾಪೆ ಮಾರ ಸಿಕ್ಕಿತು. ನಾವು ತಂದ ಬಟ್ಟೆ ಹಾಸಿಕೊಂಡು ಮಲಗಿದಷ್ಟಕ್ಕೆ ತುಂಬ ದಣಿದಿದ್ದುದರಿಂದ ನಿದ್ರೆ ಬೇಗ ಬಂತು  ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಹೋಟೆಲಿನಲ್ಲೇ ಉಪಾಹಾರವಾಯಿತು. ಮತ್ತೆ ದೇವರ ದರ್ಶನಕ್ಕೆ ಹೋದೆವು. ಆಗಲು ಹೆಚ್ಚು ಜನವಿದ್ದರೂ ದೇವರ ದರ್ಶನ ಮತ್ತೊಮ್ಮೆ ಆಯಿತು. ಪ್ರಸಾದವಾಗಿ ಸ್ವಲ್ಪ ತುಪ್ಪ ಸಿಕ್ಕಿತ್ತು. ಮತ್ತೆ ಅಲ್ಲಿ ತಂತ್ರಿಗಳನ್ನು ನೋಡಹೋದಾಗ ಅಲ್ಲಿಯೂ ಏನಾದರೂ ಕಾಣಿಕೆ ಹಾಖಿದರೆ ದಾರ ಪ್ರಸಾದ ಕೊಡುತ್ತಿದ್ದರು ಮತ್ತೆ ಸಾಲಿನಲ್ಲಿ ನಿಂತು ಅಪ್ಪ , ನೈಯಭಿಷೇಕದ ಪ್ರಸಾದ, ನೂರು ರೂಪಾಯಿಗೆ ಒಂದು ಸಿಹಿ ಪ್ರಸಾದ ಹೀಗೆ ಅಲ್ಲಿಯ ಪ್ರಸಾದ ತೆಕ್ಕೊಂಡು ಅಲ್ಲಿಂದ ಕೆಳಗಿದೆವು. ಕೆಳಗೆ ನಮ್ಮ ವಾಹನ ಬಂದಿತ್ತು. ವಾಹನವನ್ನೇರಿ ಕೊಟ್ಟಾಯಮ್ಮಿಗೆ ಬಂದೆವು. ಉಳಿದವರು ಗಾಡಿಯಲ್ಲಿ ಕನ್ಯಾಕುಮಾರಿಗೆ ಹೋಗುಬ ಯೋಜನೆಯಲ್ಲಿದ್ದರು. ನಾವು ತ್ರಿಶೂರಿಗೆ ಬಣ್ದೆವು. ಅಲ್ಲಿಂದ  ಪೊಂದು ವಾಹನ ಹಿಡಿದು ಛೋಟಾನಿಕ್ಕೆರೆ ಭಗವತಿಯ ದರ್ಶನಕ್ಕೆಂದು ಬಂದೆವು ಪುರಾತನ ದೇವಸ್ತ್ಃಅನ ದೇವಿಯನ್ನು ನೋಡಿ ಧನ್ಯರಾದ್ವು ಸ್ಟೇಶನಿಗೆ ಬಂದು ಗಾಡಿಯೇರಿ ಮಂಗಳೂರಿಗೆ ಬೆಳಿಗ್ಗೆ ತಲಪಿದಲ್ಲಿಗೆ ನಮ್ಮ ಶಬರಿಮಲೆ ಯಾತ್ರೆ ಮುಗಿಯಿತು.
ನಾವು ಬರುವಾಗ್

No comments:

Post a Comment