Friday, May 3, 2013

mosagarike

                                                                             ಮೋಸಗಾರಿಕೆ ಹೀಂಗೂ ಇರುತ್ತಡೊ  
ಮನನೆ ಮಗ ಓಫೀಸಿಂದ ಬಪಪಗಳೇ ತುಂಬ ಟೆನ್ಶನಿಲ್ಲಿ ಇತ್ತಿದ್ದ!. ಕೆಲಸ ಮುಗಿಶಿ ಐದೂವರೆ ಗಂಟೆಗೆಲ್ಲ ಓಫೀಸಿಂದ ಸೀದಾ ಮನಗೆ ಬಪ್ಪದು ಅವನ ಕ್ರಮ. ಅಂದುದೆ ಅದೇ ಹೊತ್ತಿಂಗೇ ಬಂದೋನು ಫೋನ್ ಹಿಡುಕ್ಕೊಂಡು ಸೊಫಲ್ಲಿ ಕೂದುಗೊಂಡ. ಆರತರೆಯೂ ಮಾತಾಡಿದ್ದ ಇಲ್ಲೆ.ಅಲ್ಲಿಂದ ಹೆಲೋ ಕೇಳಿದ ಮೇಲೆ ಇವನೂ ಹೆಲೋ ಹೇಳಿಕ್ಕಿ ಅವನ ಹೆಸರು ಹೇಳ್ವಗ ಓನ್ ಲೈನಿಂಗೆ ಬಂದ ಅವರತರೆ ಸಮಸ್ಯೆಯ ಹೇಳಿಗೊಂಡ. ಇಂದು ಎನಗೆ ಎರಡು ಮೈಲ್  ನಿಂಗಳ ಬೇಂಕಿಂದ ಬಂದಿತ್ತು. ಮದಲಾಣದ್ದರಲಲಿ ಎನನ ಎಕೌಂಟಿಂದ ೩೦೦ ಧಾಲರ್ ಆನು ತೆಗದದೆ ಹೇಳಿ ಇತತು. ಎರಡನೆದರಲ್ಲಿ ಲೆಕ್ಕಲ್ಲಿದ್ದ ಹಣ  ಎಲ್ಲ ತೆಗದ ಕಾರಣ ನಿನ್ನ ಎಕೌಂಟಿನ ಕ್ಲೋಸ್ ಮಾಧಿದ್ದೆಯೋ ಹೇಳಿಯೂ ಇತ್ತು. ಆನು ಹಣ ತೆಗದ್ದೂ ಇಲಲೆ, ಹಣ ತೆಗೆಯದ್ದೆ ,ಹಣ ತೆಗದ್ದೆ ಹೇಳಿಯೂ, ಎಕೌಂಟ್ ಕಲೋಸ್ ಮಾಡಿದ್ದೆ ಹೇಳಿಯೂ  ಎಂತಕೆ ಲೆಕ್ಕ ಕ್ಲೋಸ್ ಮಾಡಿದ್ದಿ ಹೇಳಿ ಕೇಳಿದ್ದಕ್ಕೆ ಬೇಂಕಿನ ಒಂದು ಲೇಡಿ ಕ್ಲಾರ‍್ಕ್ ಹೇಳುವದು  ಲೆಕ್ಕ ನೋಡುವಗ ಹಾಂಗೆ ಕಾಣುತತು.ಹಣ ತೆಗದ ಕಾರಣವೇ ಆಗಿಕಕು ಹೇಳಿ ಸಮಜಾಯಿಶಿ ಹೇಳಿತ್ತಡೊ.
     ಅದು ಓನ್ ಲೈನಿನ ಲೆಕ್ಕಾಚಾರಡೊ. ಬೇಂಕಿಲ್ಲಿ ಎಕೌಂಟ್ ಓಪನ್ ಮಾಡುಲೆ ಬೇಂಕಿಂಗೆ ನಾವು ಹೋಪದು ಬೇಡ. ಏಜೆಂಟ್ ನಮ್ಮ ಮನಗೇ ನಾವಿದ್ದಲ್ಲಿಗೆ ಬಂದು ಫೋರಂ ತುಂಬುಸಿ ದಸ್ಕತ ಹಾಕಿ, ಹಣ ಕೊಟ್ಟರೆ ಆತು.ನಮ್ಮ ಈ ಮೈಲ್ ಐ ಡಿ ಕೊಟ್ಟರೆ ಸಾಕು. ನಾವು ಅಂಗ್ಡಿಂದ ಸಾಮಾನು ಬೇಕಾದರೆ ಕೆಲವು ವಸ್ತುಗಳ ಪೋಸ್ಟ್ ಮೂಲಕ ತರುಸುತ್ತರೆ ಕಮ್ಮಿಲ್ಲಿ ಕೊಡುತ್ತವಡೊ.ಅದರ ಹಾಂಗೆ ಕಂಪೆನಿಂದ ನೇರ ತರುಸುವೋರಿಂಗೆ ಕ್ರಯ ಕಡಮ್ಮೆಯೂ ಇರುತ್ತಡೊ. ತರುಸುವೋರಿಂಗೆ ನಮ್ಮ ಎಕೌಂಟ್ ನಂಬ್ರಂದ ನೇರ ತೆಕಕೊಂಬಲಕ್ಕಡೊ.ಹಾಂಗೆ ತರುಸುವಗ ನಮ್ಮ ಪಾಸ್ ವರ‍್ಡ್ ಬೇರಾಂಗು ಗೊಂತಿಲ್ಲದ್ದಿಪ್ಪಗ  ಬೇರಾರೂ ಹಣ ತೆಗವಲೆಡಿಯ ಹೇಳ್ತ ಧೈರ‍್ಯ!.ಹಾಮಗೆ ಪೋಸ್ಟಿಲ್ಲಿ ತರುಸುವಗ ಮನೆಗೇ ವಸ್ತು ಸಿಕ್ಕುತ್ತನ್ನೆ. ಸುಲಭವೂ ಆವುತ್ತು. ಹೇಳಿ ಒಂದು ಲೆಕ್ಕದ ಖಾತೆ ತೆಗದಿತ್ತಿದ್ದಡೋ.ಅದೇ ಎಕೌಂಟಿಂದ ಈಗ ಹಣ ಕಳವಾದ್ದು.
ಆ ಗುಟ್ಟಿನ ಶಬ್ದ ಬೇಂಕಿನೋವಕ್ಕಾದರೆ ಕದಿವಲಕ್ಕಡೊ.ಅಂಬಗ ಹೀಂಗಿಪ್ಪ ಕಳವಾಯೆಕ್ಕಾದರೆ ಅವಕ್ಕೆ ಗೊಂತಿದ್ದೇ ಆಯೆಕ್ಕು ಹೇಳುವದು ಖಂಡಿತ!ಅದು ಗೊಂತಾಗಿಯೇ ಮಗ ಫೋನ್ ಮಾಡಿದ್ದು. ಅಲ್ಲಿಂದ ಸರಿಯಾದ ಉತ್ತರ ಬಂತಿಲ್ಲೆ ಮತ್ತೂ ಒತ್ತಾಯ ಮಾಡಿದ್ದಕ್ಕೆ ಆ ಲೇಡಿ ಬೇಂಕಿನ ಮೇನೇಜರಂಗೆ ಫೋನ್ ಕೊಟ್ಟಿರೆಕ್ಕು. ಸ್ವರ ಬೇರೆ ಗೆಂಡಿನದ್ದಾತಡೊ. ಮೇನೇಜರ ಸುಭಗ ಆವುತ್ತೇ ಹೇಳಿ ಮಗಂಗೆ" ಆನು ಅದರ ಚೆಕ್ ಮಾಡಿ ಹೇಳ್ತೆ" ಹೇಳಿ ಉತ್ತರ ಕೊಟ್ಟತ್ತು.
        ಫೋನಿಲ್ಲಿ ಅವರ ಬೇಂಕಿನ ಎಡ್ವರಟೈಸ್ಮೆಂಟ ಹೇಳುವದು ಕೇಳುತ್ತಾ ಇತ್ತು. ಕಾಲು ಗಂಟೆ ಆತು,ಅರ‍್ಧ ಗಂಟೆ ಆತು. ಮೇನೇಜರ ಮಾತಾಡಿದ್ದೇ ಇಲ್ಲೆ. ಮುಕ್ಕಾಲು ಗಂಟೆ ಒಂದು ಗಂಟೆ ಕಳುದು ಬೇಂಕಿನ ಬಾಗಿಲು ಹಾಕಲೂ ಆತು. ಅತ್ಲಾಗಿಂದ ಉತ್ತರ ಇಲ್ಲೆ.  ಮತ್ತು ಕಾಲು ಗಂಟೆ ಕಳಿವಗ ಫೋನ್ ತೆಕ್ಕೊಂಡು ಮಾತಾಡಿತ್ತಡ. " ನೀನು ಹೇಳುವದು ಸರಿ. ಏನೋ ತೊಂದರೆ ಆಯಿದು ಹೇಳಿ ಕಾಣುತ್ತು. ನಿನ್ನ ಹಣವ ಎಂಗೊ ಕೊಡುತ್ತೆಯೊ.ಕ್ಙಮಿಸೆಕ್ಕು. ಒಂದೆರಡು ದಿನಲ್ಲಿ ಹಣ ನಿನ್ನ ಲೆಕ್ಕಕ್ಕೆ ಜಮಾ ಆವುತ್ತು" ಹೇಳಿತ್ತಡೊ.
ಇದೊಂದು ಗೋಲ್ಮಾಲಿನ ಹಾಂಗಿಪ್ಪದಲ್ಲದೋ?ನಾವು  ಸುಮ್ಮನೇ ಕೂದರೆ ಹಣ ಹೋದ್ದು ನವಗೆ ಸಿಕ್ಕುಗೋ?ಅವುದೇ ನಾವು ಸುಮ್ಮನೆ ಕೂರುಗು ವಿಚಾರಿಸ್ಯೊಂಡು ಹೋಗ ಹೇಳಿ ಗ್ರೇಶಿಕ್ಕು. ಸಣ್ಣ  ಮೊತ್ತ ಆದರೂ ದೊಡ್ಡ ಮೊತ್ತ ಆದರೂ ಅವು ಹೀಂಗೆ ಮಾಡಿದರೆ ಜನರ ಹಣಂದಲೇ ಬೇಂಕ ತುಂಬ ಲಾಭ ಮಾಡುಗು. ಎಷ್ಟು ಜನರ ಹಣವ ನುಂಗಿ ನೀರು ಕುಡಿಶುತ್ತವೋ ಎಂತದೋ! ಭಾರತಲ್ಲಿ ಮಾಂತ್ರ ಅಲ್ಲ ವಿದೇಶಲ್ಲಿಯೂ ಮೋಸಗಾರಿಕೆ ನಡೆತ್ತು ಹೇಳುವದು ಗೊಂತಾತನ್ನೆ!
 ನಾವು ನಮ್ಮ ಸಣ್ಣ ಆದಾಯಂದ ಹೀಂಗೆ ಹಣ ಕಳಕ್ಕೊಂಡರೆ ವಿದೇಶಲ್ಲಿ ಮರ‍್ಯಾದೆ ಜೀವನ ಸಾಗುಸುವದು ತುಂಬ ಕಷ್ಟ.ಮದಲಾಣೋರ ಗಾದೆ ಇದ್ದು." ಕತ್ತಿ ದಾರೆಲ್ಲಿ ನಡವದು" ಅಸಿ ಧಾರಾವ್ರತ ಹೇಳಿ ಇದ್ದಡೊ.ರಾಜಕುಮಾರಿಯ ಮದುವೆ ಆದ ಮೇಲೆ ರಾಜ ಕುಮಾರಿ ಹೇಳಿದ ಹಾಂಗೆ ನೇಲುಸಿದ ಕತ್ತಿ ಅಡಿಲ್ಲಿ ಗಂಧ ತಳದ್ದಡೊ ಕಾಳಿ ದಾಸ ಆಯೆಕ್ಕಾರೆ!. ನಾವುದೆ ಹೊರ ಪ್ರಪಂಚಲ್ಲಿ, ಅಥವಾ ಒಳ ನಾಡಿಲ್ಲಿಯೂ ಹೀಂಗೆ ಜಾಗ್ರತೆ ಮಾಡಿಗೊಂಡರೆ ವ್ಯವಹಾರಲ್ಲಿ ಗೆಲ್ಲುಲಕ್ಕಷ್ಟೆ.
  ಬಾರತಲ್ಲಿಯೂ ಹಣ ಮಾಡುವ ಸುಲಭ ದಾರಿಯ ಹುಡುಕ್ಕಿಗೊಂಡ ಜನಂಗೊ ದುಡಿಯದ್ದೆ ಹಣ ಗಳುಸುಲೆ ಹೀಂಗೆಲ್ಲ ಮಾಡುವದು ಸಾಮಾನ್ಯ ಹೇಳುವದೂ ಗೊಂತಿದ್ದನ್ನೆ.                       

No comments:

Post a Comment