Monday, December 7, 2015

anna malai pravasa

                                  ಅಣ್ಣಾಮಲೈಗೆ ನಮ್ಮ ಪ್ರವಾಸ
 ಈ ಸಲ ನಮ್ಮ ಪ್ರವಾಸ ಅಣ್ಣಾಮಲೈಗೆ . ಶ್ರೀಂಅನ್ ಕೇಶವ ಭಟ್ಟರ ಮುಂದಾಳ್ತನದಲ್ಲಿ ತಮ್ಮಿಳ್ನಾಡಿನ ಅಣ್ಣಾಮಲೈಗೆ ಹೋಗುವುದೆಂದು ಯೋಚಿಸಿದಂತೆ ಮಂಗಳೂರಿನಿಂದ ಗಾಡಿ ಹತ್ತಿ ಕಾಟಪ್ಪಾಡಿ ಎಂಬ ಸ್ಟೇಶನ್ ವರೆಗೆ ಗಾಡಿಯಲ್ಲಿ ಹೋಗಬೇಕು. ಸಂಜೆ ನಾಲ್ಕೂವರೆಗೆ ಗಾಡಿ ಹತ್ತಿದವರು ಮರುದಿನ ಬೆಳಿಗ್ಗಿನ ಜಾವ ಐದೂವರೆಗೆ ಗಾಡಿ ತಲಪಿದೊಡನೆ ಕೆಳಗಿಳಿದು ಹೊರಗ್ರ್ ಬಂದಾಗ ನಾವು ಮೊದಲೇ ನಿಗದಿಪಡಿಸಿದಂತೆ ಮಿನಿ ಬಸ್ಸೊಂದು ನಮ್ಮನ್ನು ಕಾಯುತಿತ್ತು. ಗಾಡಿ ಹತ್ತಿದವರು ಒಂದು ಹೋಟೆಲಿಗೆ ಹೋಗಿ ಚಾ ಕುಡಿದು ನಮ್ಮ ಪ್ರಯಾಣ ಮುಂದುವರಿಸಿದೆವು . ಮೊದಲಿಗೆ ಜಲಕಂಠೇಶ್ವರ ದೇವಸ್ಥಾನಕ್ಕೆ ನಮ್ಮ ಭೇಟಿ! ಸುತ್ತಲೂ ನೀರಿನಿಂದಾವೃತವಾದ ಪುರಾತನ ದೇವಾಲಯ!ಕೆತ್ತನೆಕೆಲಸಗಳಿಂದ ರಚಿತವಾದ ಸುಂದರ ಗೋಪುರ ನಮ್ಮನ್ನು ಕೈಮಾಡಿ ಕರೆಯುತಿತ್ತು. ಒಳಗೆ ಹೊಕ್ಕೊಡನೆ ಮಹಾಗಣಪತಿಯ ಗುಡಿ.ಮುಂದೆ ಹೋದಾಗ ಗಣಪತಿ ಸುಬ್ರಹ್ಮಣ್ಯ, ಕಾಮೇಶ್ವರಿ ದುರ್ಗೆ, ನವಗ್ರಹಗಳದೇವಾಲಯಗಳಿವೆ . ಬಹಳ ಪುರಾತನ ದೇವಾಲಯ. ಒಳಗೆ ಜಲಕಂಠೇಶ್ವರನ ದೊಡ್ಡ ಶಿವಲಿಂಗವಿದೆ.ಎದುರಿಗೆ ಬಸವ ಪುರಾತನ ಶಿಲ್ಪಕಲಾವೈಭವದಿಂದ ಕಂಬಗಳು ಮಹಾದ್ವಾರದ ಹಿರಿದಾದ ಚಂದವಾದ ಬಾಗಿಲುಗಳು ಮನೋಹರವಾಗಿವೆ.ಇಲ್ಲಿಂದ ನಲುವತ್ತು ಕಿ ಮೀ ದೂರದಲ್ಲಿ ಟಿಪ್ಪು ಸುಲ್ತಾನ ಕಟ್ಟಿಸಿದ ಒಂದು ಕಿ ಮೀ ಉದ್ದ ಕೋಟೆಯಿದೆ ಬೆಟ್ಟದ ಮೇಲೆ ಕಟ್ಟಿದ ಈ ಕೋಟೆಯ ಅದರೊಳಗೆ ಷಣ್ಮುಖ ದೇವಾಲಯವಿದೆ,ದೇವಾಲಯವೇರಲು ಕಲ್ಲಿನದೇ ಮೆಟ್ಟಲುಗಳು ಒಳಗೆ ಹೊಕ್ಕೊಡನೆ ಗೋಪುರ ಕೊಡಿಮರ. ಮೆಟ್ಟಲೇರಿ ಹೋದರೆ ಷಣ್ಮುಖ ದೇವರ ಗುಡಿ. ಮೇಲೆ ನಿಂತರೆ ಕೆಳಗಿನ ದೃಶ್ಯ ನಯನ ಮನೋಹರ!
                ಈ ದೇವಸ್ಥಾನದ ಸ್ವಲ್ಪವೇ ದೂರದಲ್ಲಿ ಒಂದು ಕೋಟೆಯಿದೆ. ಒಳಗೆ ಹೋದರೆ ಬಹಳ ವಿಶಾಲವಾದ ಜಾಗ. ಒಳಗೆ ಹೋಗುತ್ತಲೇ ಮಲಗಿದ ಸ್ಥಿತಿಯಲ್ಲಿರುವ ಕುಬೇರ ದೇವ ಗಣಪತಿ .ಮುಂದೆ ಹೋದಾಗ ಢನ್ವಂತರಿ ಹೋಮದ ಕುಂಡ ಕೆಳಗೆ ಸ್ವಲ್ಪ ಆಳದಲ್ಲಿ ಹೋಮ ಕುಂಡವಿದೆ. ಬಂದವರು ಧನ್ವಂತರಿಯ ಸೇವೆಯ ರೂಪದಲ್ಲಿ ನವಧಾನ್ಯದೊಂದಿಗೆ ವನಸ್ಪತಿಗಳನ್ನು ಹೋಮಿಸಬಹುದು. ಆರೋಗ್ಯದ ಕ್ಷೇಮಕ್ಕೆ ಜನ ಧನ್ವಂತರಿ ದೇವರು ಹೋಮ ,ಪೂಜೆ ಮಾಡುತ್ತಾರೆ, ಅವನ ತೃಪ್ತಿಯಿಂದ ನಮ್ಮ ಆರೋಗ್ಯ ಸುಧಾರಿಸುವುದೆಣ್ವ್ಬ ಜನರಲ್ಲಿದೆ.ರೋಗನಿವಾರನಂತೆ ಈ ಧನ್ವಂತರಿ!ಮುಂದೆ ಹೋದರೆ ತುಂಬ ಶಿವಲಿಂಗಗಳು ಕಾಣಸಿಗುತ್ತವೆ. ಇಲ್ಲಿ ಧನ್ವಂತರಿಯ ಮುಖವಾದರೆ ಆ ವಿಗ್ರಹದ ಹಿಂದೆ ಗಣಪತಿಯ ವಿಗ್ರಹವಿದೆ ಮುಂದೆ ಕಾಮಾಕ್ಷಿ ಮತ್ತು ಮಹಿಷಮರ್ದಿನಿಯರ ವಿಗ್ರಹವಿದೆ.  ೪೬೮ ಸಾಲಂಕೃತ ಲಿಂಗಗಳು ಇಲ್ಲಿವೆ. ಹತ್ತಿರವೇ ಅನ್ನಪೂರ್ಣೇಶ್ವರಿಯ ದೇವಸ್ಥಾನ. ನೂರು ರುಪಾಯಿ ಕೊಟ್ಟು       ಚೀಟಿ ಮಾಡಿಸಿದರೆ ಒಂದು ಕಿಲೋ ದಷ್ಟು ಹೆಸರುಬೇಳೆ ಅಕ್ಕಿಯನ್ನು ಕೊಡುತ್ತಾರೆ. ನಾವು ಅಲ್ಲೇ ಇರುವ ಹುಂಡಿಗೆ ಅದನ್ನು ಹಾಕಬೇಕು. ಮುಂದೆ ಹೋದರೆ ವೃತ್ತಾಕಾರದ ಕಟ್ಟೆಯಿದೆ, ಅಲ್ಲಿ ೨೭ ನಕ್ಷತ್ರಗಳಿಗೆ ಬೇರೆ ಬೇರೆ ಮದ್ದಿನ ಗಿಡಗಳನ್ನು ನೆಟ್ಟುದು ಕಾಣುತ್ತದೆ. ಅವರವರ ನ್ಜನ್ಮ ನಕ್ಷತ್ರಗಳಿಗನುಸರಿಸಿ ಈ ಗಿಡಗಳನ್ನು ನೋಡ ಬಹುದು. ಆ ಮೇಲೆ ಸ್ವಲ್ಪ ದೂರದಲ್ಲಿ ಅಯ್ಯಪ್ಪನ ಗುಡಿಯಿದೆ. ಸಣ್ಣ ಬೆಟ್ಟದ ಮೇಲೆ ಮೆಟ್ಟಲುಗಳನ್ನೇರುತ್ತ ಹನುಮಂತಸ್ನ ವಿಗ್ರಹ ನೋಡಿದೆವು. ಹೀಗೆ ಹತ್ತು ಹಲವು ವಿಗ್ರಹಗಳು ಅಲ್ಲಲ್ಲಿವೆ. ಅಲ್ಲಿಯ ಛತ್ರಕ್ಕೆ ನಮ್ಮ ಅನ್ನದಾನ ಕಾಣೀಕೆ ಕೊಟ್ಟು ಪ್ರಸಾದ ಭೋಜನ ( ಚಿತ್ರಾನ್ನ, ಅನ್ನ ಸಾಂಬಾರು, ತೋವೆ ಎಲ್ಲ ಇತ್ತು ಊಟಕ್ಕೆ.ಹಿಂತಿರುಗಿ ನಾವು ಉಳಕೊಳ್ಳಲಿದ್ದ ವಸತಿಗೆ ಬಂದು ವಿಶ್ರಮಿಸಿದೆವು. ೫.೩೦ ಕ್ಕೆ ಮತ್ತೆ ಹೊರಟು ಅರ್ಧ ಕಿ ಮೀ ದೂರದಲ್ಲಿದ್ದ ವೆಲ್ಲೂರ್ ಎಂದು ಕರೆಯುವ ಜಾಗದಲ್ಲಿ ಒಂದು ಕರಿ ಶಿಲೆಯಲ್ಲಿ ಕಡೆದಯಲ್ಲಿ ಪದ್ಮಾಸನ ಹಾಕಿ ಕುಳಿತಿದ್ದ ಕರಿ ಕಲ್ಲಿನ ಮಹಾಲಕ್ಷ್ಮಿ ಮೂರ್ತಿ ಸುತ್ತಲೂ ಮರದ ಕಂಬಗಳಿಗೆ ಚಿನ್ನದ ತಗಡನ್ನು ಹೊದೆಸಿದ್ದು ಗೋಲ್ಡನ್ ಟೆಂಪ್ಲ್ ಎಂದು ಕರೆಯಲ್ಪಡುವ ದೇವಸ್ಥಾನಕ್ಕೆ ಹೋದೆವು. ದೊಡ್ಡ ದೇವಸ್ಥಾನ ಒಬ್ಬರು ಮಹಾಲಕ್ಷ್ಮಿ ಎಂದು ಕರೆಯುವ ಸ್ವಾಮಿಯೊಬ್ಬರಿಂದ ಕಟ್ಟಿಸಲ್ಪಟ್ಟ  ದೊಡ್ಡ ದೇವಾಲಯ ಜನ ತುಂಬ ಇದ್ದುದರಿಂದ ದರ್ಶನಕ್ಕೆ ಕಷ್ಟವಾಗಿ, ಕೊನೆಗೆ ಒಂದೆರಡು ಗಂಟೆಯ ನಂತರ ದರ್ಶನವಾಯಿತು. ಹತ್ತಿರದಿಂದ ನೋಡ ಬೇಕಾದರೆ ನೂರು ರೂ ಕೊಟ್ಟು ಚೀಟಿ ಮಾಡಿಸಬೇಕಂತೆ. ಎಲ್ಲೆಲ್ಲಿಯೂ ದೇವರರುಗಳಿಗೆ( ಅಸಲಿಗೆ ಅಲ್ಲಿಯ ಆಢಳಿತೆಗೆ ಹಣ ಮಾಡುವ ದಂಧೆ!  ಬೆಳಿಗ್ಗೆ ಬೇಗನೆ ಬಂದರೆ ಸ್ವಲ್ಪ ಹತ್ತಿರದಿಂದ ದೇವರನ್ನು ನೋಡಬಹುದು ಅಲ್ಲಿದ್ದವರು ಹೇಳಿದರು ಹಾಗೆ ಬೆಳಿಗ್ಗೆ ನಾಲ್ಕು ಗಂಟೆಗೇ ದೇವರ ದರ್ಶನಕ್ಕೆ ಬಂದು ನೂರು ರುಪಾಯಿ ಕೊಟ್ಟು ಒಳಗೆ ಹೋದರೂ ಬೇಗ ದರ್ಶನವಾಗಲಿಲ್ಲ. ಅಭಿಷೇಕಕ್ಕಾಗುವಾಗ ಒಳಗೆ ಬಿಟ್ಟರೂ ಹೆಚ್ಚು ಹೊತ್ತು ನೋಡಲು ಬಿಡಲಿಲ್ಲ. ಅಂತೂ ನೂರು ರುಪಾಯಿ ಕೊಟ್ಟು ಚೀಟಿ ಮಾಡಿಸಿ ಹತ್ತಿರದಿಂದ ದೇವರನ್ನು ನೋಡಿದ್ದೇವ ಎಂಬ ಸಂತೋಷದಿಂದ ಹೊರಗೆ ಬಂದೆವು , ನಮ್ಮ ವಸತಿಯಿದ್ದುದ್ದೂ ಅವರದೇ ವಸತಿ ನಿಲಯದಲ್ಲಿ! ಅಂತಹ ಕೆಲವಾರು ವಸತಿಗಳಿಂದ ಯಾತ್ರಿಗಳಾಗಿ ಬಂದವರ  ಬಾಡಿಗೆ ಹಣವೇ ಕೋಟಿಗಟ್ಟಲೆ ಆಗಬಹುದು. ಅವರೇ ಕೆಲವು ಕಾಲೇಜುಗಳನ್ನು ನಡೆಸುತಿದ್ದು ಅವುಗಳಿಂದಲೂ ಆದಾಯ ಆ ಸ್ವಾಮಿಗಿದೆ. ಎಲ್ಲ ದೇವರ ಮಹಿಮೆಯೋ ಕಾಲದ ಮಹಿಮೆಯೋ!ಆದರೆ ಇಷ್ಟು ದೊಡ್ಡ ಬಂಗಾರದ ದೇವಾಲಯ ಪ್ರಪಂಚದಲ್ಲೇ ಇಲ್ಲವೆಂದು ಹೇಳುತ್ತಾರೆ. ಅಂತೂ ಅಂತಹ ಹೆಸರುವಾಸಿ ದೇವಾಲಯ ನೋಡಿದ ಹೆಮ್ಮೆಯಿಂದ ಬೀಗುತ್ತ  ಪೊಂಗಲ್ ಪ್ರಸಾದ ತೆಕ್ಕೊಂಡು ಹೊರಗೆ ಬಂದು ರೂಮಿಗೆ ಬಂದೆವು.
ಅಲ್ಲಿಂದಬೆಳಗ್ಗೆ ಏಳೂವರೆ ಗಂಟೆಗೆ ಹೊರಟು ಬಸ್ಸಿನಲ್ಲಿ ಇನ್ನೊಂದು ನಮ್ಮ ಸ್ಥಳ ಅಣ್ಣಾ ಮಲೈ ಕಡೆಗೆ ಹೊರಟೆವು.ಒಂದು ಬಸ್ ಸ್ಟೇಂಡಿನಲ್ಲಿ ನಮ್ಮನ್ನು ಇಳಿಸಿದ ಬಸ್ಸಿನವನು ನಮ್ಮನು ಅಲ್ಲೇ ಬಿಟ್ಟು ಹೋದನು ಮತ್ತೆ ಸ್ವಲ್ಪ ಬಸ್ಸಿಗೆ ಕಾಯಬೇಕಾಗಿ ಬಂತು. ಕೆಲವು ಸರಕರಿ ಬಸ್ಸುಗಳು ಮಾತ್ರ ಅಲ್ಲಿಗೆ ಹೋಗುವುದಂತೆ. ಅಲ್ಲಿ ಶಿವನ ದೇಗುಲದಲ್ಲಿ ನಿಶ್ಶುಲ್ಕ ಭೋಜನವಿತ್ತು. ಸ್ವಲ್ಪ ಹೊತ್ತು ಕಾಯಬೇಕಾಗಿ ಬಂದರೂ ಊಟ ಚೆನ್ನಾಗಿತ್ತು. ಮತ್ತೆ ಸ್ವಲ್ಪ ವಿಶಾಂತಿ ತೆಕ್ಕೊಂಡು ಮಲೆಗೆ ಪರಿಕ್ರಮಣ ( ಬರಿಗಾಲಲ್ಲಿ ಆರೇಳು ಮೈಲುಗಳಷ್ಟು ನಡೆಯುವುದು. ಹೊರಡುವಾಗ ನಡೆದೇ ತೀರುತ್ತೇವೆಂದು ಹೊರಟು ಮುಂದೆ ಸಾಘಿದರೆ ನಡೆದಷ್ಟುಊ ಮುಗಿಯುವಿಲ್ಲ ಹೆಂಗುಸರೂ ಇದ್ದಿದ್ದರಿಂದ ಕೆಲವರಿಗೆ ಮುಂದೆ ನಡೆಯಲಾಗದಿದರಿಂದ ಕೆಲವು ರಿಕ್ಶಾ ಬಾಡಿಗೆಗೆ ಹಿಡಕೊಡು ದೇವಸ್ತ್ಃಅನದ ಕಡೆಗೆ ಹೊರಟೆವು ರಾತ್ರೆ ತುಂಬ ಆದುದರಿಂದ ವಸತಿಯ ಊಟ ಸಿಗಲಾರದೆಂದು ಹೋಟೆಲಲ್ಲಿ ಊಟ ಮಾಡಿಕೊಂಡಿದ್ದೆವು. ಊಟ ಮಾಡಿ ಮುಂದೆ ಹೊರಟರೆ ದೇವಾಲಲಯದ ಮಹಾದ್ವಾರ! ದೇವಾಲಯದೊಳಗೆ ಬರಲು ನಾಲ್ಕು ಕಡೆಗಳಿಂದಲೂ ದಾರಿಯಿದ್ದರೂ ಮೂಡು ಬಾಗಿಲು ದೊಡ್ಡದ್ದಾಗಿತ್ತು. ಒಳಗೆ ಹೊಕ್ಕೊಡನೆ ಒಂದು ಸಣ್ಣ ದೇವಾಲಯ ಅದು ಮೂಲ ದೇವಾಲಯವಂತೆ ಎಲ್ಲವೂ ಬಹಳ ಪುರ್ರಾತನ ಶೈಲಿಯ ರಚನೆ! ಪಶ್ಚಿಮ ಘಟ್ಟದ ಒಂದು ಬೆಟ್ಟ ಎಂದು ಹೇಳ ಬಹುದು ಈ ಅಣ್ಣ ಮಲೆ! ಇಡೀ ಬೆಟ್ಟವೇ ಶಿವ ಸಾನ್ನಿದ್ಧ್ಯವುಳ್ಳುದಂತೆ. ಒಟ್ಟಿನಲ್ಲಿ ಬಹಳ ದೊಡ್ಡ ದೇವಾಲಯ ದೇವರ ದರ್ಶನಕ್ಕೆ ತುಂಬಾ ಹೊತ್ತಾಗಬಹುದೆಂದು ಮರುದಿನ ಬೆಳಿಗ್ಗೆ ದರ್ಶನಕ್ಕೆ ಬರುವುದೆಂದು ಅಷ್ಟಕ್ಕೇ ಅಲ್ಲಿಂದ ಹಿಂದಿರುಗಿ ನಮ್ಮ ವಸತಿಗೆ ಬಂದೆವು. ರೂಮ್ ಚೆನ್ನಾಗಿತ್ತು. ರೂಮುಗಳೆಲ್ಲ ಆಶ್ರಮಕ್ಕೆ ಸೇರಿದ್ದು ಧರ್ಮಾರ್ಥ ವಾಗಿದ್ದರೂ ಏನೋ ನಮ್ಮ ಲೆಕ್ಕದ ಅನ್ನದಾನದ ಕಾಣಿಕೆಯನ್ನು ಬೇರೆ ಬೇರೆಯಾಗಿ ಕೊಟ್ಟೆವು. ಮತ್ತೆ ಬೆಳಗಿನ ಜಾವ ಬೇಗನೆ ಎದ್ದು ದೇವರ ದರ್ಶನಕ್ಕೆ ಹೊರಡಬೇಕು. ಆಶ್ರಮದಲ್ಲಿಯೇ ನಮಗೆ ಅವಲಕ್ಕಿ ಉಸುಲಿ ಮತ್ತು ಚಾ ಸಿಕ್ಕಿತು. ಅದನ್ನು ಕುಡಿದು ಹತ್ತಿರವೇ ಇದ್ದ ರಮಣ ಮಹರ್ಷಿಗಳ ಆಶ್ರಮಕ್ಕೆ ಹೋದೆವು.ಮೊದಲಿಗೆ ಒಂದು ಶಿವಾಲಯವಿದೆ. ಆ ಪ್ರದೇಶವೆಲ್ಲ ಬಹಳ ಶಾಂತ ಗಂಭೀರ.  ಹತ್ತಿರದಲ್ಲಿಯೇ ರಮಣ ಮಹರ್ಷಿಗಳ  ಧ್ಯಾನ ಮಂದಿರ. ರಮಣ ಮಹರ್ಷಿಗಳ  ವಿಗ್ರಹದ ಮುಂದೆ ಕುಳಿತು ಧ್ಯಾನ ಮಾಡುತ್ತಾರೆ ಎಲ್ಲವೂ ಮೌನವಾಗಿ ನಡೆಯುತ್ತದೆ. ಸ್ವಲ್ಪ ಹೊತ್ತು ಧ್ಯಾನಕ್ಕೆ ಕುಳಿತೆವು. ಹತ್ತಿರದಲ್ಲೇ ರಮಣ ಮಹರ್ಷಿಗಳ ಸಮಾಧಿ. ಅವರ ಪೂರ್ವಜರ ಸಮಾಧಿಯೂ ಅಲ್ಲಿದೆ. ಸಮೀಪವೇ ಒಂದು ದೊಡ್ಡ ಗೋಶಾಲೆ. ಈ ಪ್ರದೇಶ ನಮ್ಮನ್ನು ಹಿಂದಕ್ಕೆ ಎಂದರೆ ಪೂರ್ವಕಾಲದ  ಸ್ಮರಣೆಯನ್ನು ಮಾಡುತ್ತಿದ್ದವು.  ಎಕ್ರೆಗಟ್ಟಲೆ ಜಾಗವನ್ನು ಹೊಂದಿರುವ ಪ್ರದೇಶ  ಪ್ರಶಾಂತವಾಗಿತ್ತುರಮಣ ಮಹರ್ಷಿಗಳಿಗೆ ನಮೋ ನಮಃ ಮತ್ತೆ ಬರಿಗಾಲಲ್ಲಿಯೇ ಮೇಲೆ ಪರ್ವತ ಏರತೊಡಗಿದೆವು. ಮೆಟ್ಟಲುಗಳಿದ್ದುವು. ಸುಮಾರು ಮೂರು ನಡೆದು ಮೇಲೇರಿದೆವು. ಮೇಲೆ ನಿಂತು ನೋಡಿದರೆ ಇಡೀ ಅಣ್ಣಮಲೈ ನಗರವೇ ಕಾಣ ಬರುವುದು. ತುದಿಯಲ್ಲಿ ಒಂದು ಸ್ಕಂದ ಗುಹೆಯಿದೆ. ಇಲ್ಲಿ ಮೊದಲು ಮಹರ್ಷಿಗಳು ತಪಸ್ಸು ಮಾಡುತ್ತಿದ್ದರಂತೆಅಲ್ಲಿ ಅವರ ಭಾವಚಿತ್ರ, ಮತ್ತು ಕಲ್ಲಿನ ವಿಗ್ರಹವಿವೆ.ಇಲ್ಲಿ ನಿತ್ಯ ದೀಪ ಹಚ್ಚಿಡುತ್ತಾರೆ. ಗುಹೆಯ ಒಳಗೆ ಕುಳಿತು ಧ್ಯಾನ ಮಾಡುತ್ತಾರೆ. ಈ ಕಾಡಿನಲ್ಲಿ ಮಂಗಗಳು ಬಹಳ. ಹತ್ತಿರದಲ್ಲಿಯೇ ಮಹರ್ಷಿಗಳ ಅಮ್ಮನ ವಿಗ್ರಹವೂ ಇದೆ. ಮನೆಯಲ್ಲಿ ಹೇಳದೆ ಓಡಿಬಂದ ಮಗನನ್ನು ಹುಡುಕಿ ಬಂದು ಅವನೊಂದಿಗೆ ಅಲ್ಲಿಯೇ ಇದ್ದರಂತೆ ಅಮ್ಮ!ದಾರಿಯ ಇಕ್ಕೆಲಗಳಲ್ಲೂ ಕಾಡು. ಕೆಳಗಿಳಿದುಸ್ವಲ್ಪ ದುಸ್ತರವಾದ ದಾರಿಯಲ್ಲಿ ಬರುವಾಗ ಕಷ್ಟವಾದರೂ ಮಹರ್ಷಿಗಳನ್ನು ಸ್ಮರಿಸುತ್ತಾ ಕೆಳಗಿಳಿದೆವು. ಕೆಳಗಿಳಿಯುವಾಗಲೂ ಮೇಲೇರುವಾಗಲು ಅಲ್ಲಲ್ಲಿ ಸಣ್ನ ಸಣ್ನ ಶಿಲ್ಪ ಕಲಾಕೃತಿಗಳನ್ನು ಕಾನಬಹುದು. ಕೈಚಳಕದಿಂದ ಕೂಡಿದ ಅನೇಕ ಮೂರ್ತಿಗಳನ್ನು ಕಾಣ ಬಹುದು. ಕೆಳಗಿಳಿದು ಮೇಲೆ ನೋಡಲ್ಲು ಕಣ್ಣೆತ್ತುವಿದಿಲ್ಲ! ಕೆಳಗಿಳಿದು ಅರುಣಾಚಲ ದೇವಸ್ಥಾನಕ್ಕೆ ಬಂದೆವು. ಸುತ್ತಲೂ ಮೂವತ್ತು ಅಡಿ ಎತ್ತರದ ಗೋಪುರವಿದೆ ನಾಲ್ಕು ದ್ವಾರಗಳಲ್ಲಿ ಒಂದು ಮಹಾದ್ವಾರ! ಅಲ್ಲಲ್ಲಿ ದನ ಬಸವ ವಿಗ್ರಹಗಳನ್ನಿಟ್ಟಿದ್ದಾರೆ. ರಾಜಗೋಪುರವು ಬಹಳ ಎತ್ತರವಿದ್ದು  ಒಳಗೆ ಹೊಕ್ಕಾಗ ಒಂದು ದೊಡ್ಡ ಬಸವನ ವಿಗ್ರಹವು ನಮ್ಮನ್ನು ಒಳಗೆ ಸ್ವಾಗತಿಸುತ್ತದೆ. ಎಡಬದಿಯಲ್ಲಿ ದೊಡ್ಡದಾದಪುಷ್ಕರಿಣಿ ಕೆರೆ. ಬಲಬದಿಯಲ್ಲಿ ಸ್ಕಂದ. ಎಡ ಬದಿಯಲ್ಲಿ ಗಣಪತಿ ದೇವಸ್ಥಾನ. ಪ್ರಾಂಗಣದ ನಡುವೆ ದೊಡ್ದ ಧ್ವಜ ಸ್ಥಂಭ ಕರಿಶಿಲೆಯ ದೊಡ್ಡ ಕಂಬಗಳು ಕೆತ್ತನೆ ಕೆಲಸ್ದದಿಂದ ಮನ ಮೋಹಕವಾಗಿವೆ.ಮಧ್ಯಾಹ್ನ ೨.೩೦ಕ್ಕೆ ದೇವರ ದರ್ಶನವಾಯಿತು. ದಿನ ನಿತ್ಯ ಜನ ಸಾಗರವೆ ದೇವರ ದರ್ಶನಕ್ಕೆ ಬರುವುದರಿಂದ ಶಿವನನ್ನು ಹೆಚ್ಚು ಹೊತ್ತು ನೋಡಿಕೊಂಡಿರುವುದಕ್ಕೆ ಬಿಡುವುದಿಲ್ಲ. ನಾಲ್ಕು ಗಂಟೆಗೆ ಓಂ ಶಕ್ತಿ ತಂದದವರು ಕೆಂಪುಡುಗೆಯಲ್ಲಿ  ಬಂದಿದ್ದರು. ನೂರಾರು, ಸಾವಿರಾರು ಜನ ಅತ್ತಿಂದಿತ್ತ ಓಡಾಡುತಿರುತ್ತಾರೆ ಒಳಗೆ ಅಂಗಣದಲ್ಲಿ. ಮುಂದೆ ಹೋಗುವಾಗ ಸ್ವರ್ಣಖಚಿತ ಅರುಣಾಚಲೇಶ್ವರನ ವಿಗ್ರಹ! ಹಿಂದೆ ಇಲ್ಲಿಯೂ ರಮಣ ಮಹರ್ಷಿಗಳು ತಪಸ್ಸಿಗೆ ಕುಳಿತ ಜಾಗವಿದೆ. ತಪಸ್ಸಿಗೆ ಕುಳಿತವರಿಗೆ ಮೈಯೆಲ್ಲ ಹುಣ್ಣಗಿ ಹತ್ತಿರ ಬಂದವರಿಗೇ ವಾಸನೆ ಬರಿತ್ತಿದ್ದರೂ ಧ್ಯಾನದಲ್ಲಿದ ಅವರಿಗೆ ಗೊತ್ತಾಗಿಯೇ ಇಲ್ಲವಂತೆ!ಈ ಜಾಗ ಅಂಗಣ ನಾಲ್ಕು ಅಡಿ ಆಳದಲ್ಲಿದೆ. ಮಹಾನಂದಿಯ ಪಕ್ಕದಲ್ಲಿಯೇಇದೆ.ಇಲ್ಲಿಯೇ ಪಾತಾಳ ಗಂಗೆ ಎಂಬ ತೀರ್ಥ ಸ್ಥಳ ಕೆಳಗೆ ಮೆಟ್ಟಲಿಳಿದಿ ಝೋದಾಗ ಸಿಗುತ್ತದೆ ಅಲ್ಲಿ ಬಂದವರು ಸ್ನಾನ ಮಾಡಿ ಪಾವನರಾಗುತ್ತಾರೆ ಅಂತೂ ಈ ದೇವಸ್ಥಾನ ಪ್ರದೇಶ ರಮಣ ಮಹರ್ಷಿಗಳ ತಪೋಭೂಮಿಯಾಗಿದ್ದು ಅದರಿಂದಲೇ ತುಂಬಾ ಜನ ಇಲ್ಲಿಗೆ ಯಾತ್ರಾರ್ಥಿಗಳಗಿ ಬರುತ್ತಾರೆ  ಅಲ್ಲಿಂದ ಹೊರಗೆ ಬಂದು ನಮ್ಮ ವಸತಿಗೆ ಬಂದೆವು. ಮತ್ತೆ ನಮ್ಮೆಲ್ಲ ಸಾಮಗ್ರಿಗಳನ್ನು ಕಟ್ಟಿಕೊಂಡು ಎರಾತ್ರೆ ರೈಲು ಬಂಡಿಯಲ್ಲು ಬ್ತಿನ್ನಲು ಬೇಕಾಗುವುದೆಂದು ಸ್ವಲ್ಪ ತಿಂದು ಬೇರೆ ಕಟ್ಟಿಸಿಕೊಂಡು ಅಲ್ಲಿಯದೇ ಬಸ್ಸಿನಲ್ಲಿ ವೆಲ್ಲೂರಿಗೆ ಬಂದೆವು. ಅಲ್ಲಿಂದ ನಮ್ಮ ಕಾಟಪಾಡಿಗೆ ಬಂದು  ಅಲ್ಲಿ ಹೋಟೆಲಲ್ಲಿ ಊಟ ಮಾಡಿರೈಲು ಹತ್ತಿ ಕುಳಿತೆವು ಮರುದಿನ ಬೆಳಿಗ್ಗೆ ಹತ್ತು ಗಂತೆಗೆ ಮಂಗಳೂರು ತಲಪಿದೆವು. ಅಲ್ಲಿ ಇಲ್ಲಿ ತಿರುಗಿ ಆಯಾಸವಾದುದರಿಂದ ರೈಲಲ್ಲಿ ಸ್ವಲ್ಪ ನಿದ್ರೆ ಬಂದಿದ್ದರೂ ಯಾತ್ರೆ ಸವಿನೆನಪು ನಮ್ಮನ್ನು ಕುಶಿ ಕೊಟ್ಟಿತ್ತು

shabarimaleyatre

                                  ಶಬರಿ ಮಲೆ ಯಾತ್ರೆ
     
 ಕೇರಳದ ಕೊಟ್ಟಾಯಂ ನಿಂದ ೩೦ ಮೈಲುಗಳ ದೂರದಲ್ಲಿ ಒಂದು ಎತ್ತರವಾದ ಮಲೆಯನ್ನು ಶಬರಿಮಲೆಯೆಂದು ಕರೆಯುವುದು ವಾದಿಕೆ ಹಿಂದೆ ಶ್ರೀರಾಮನಿಗಾಗಿ ಕಾಯುತ್ತಾ ಅವನು ಬಂದಾಗ ಅನಿಗೆ ನೈವೇದ್ಯವಾಗಿ ತಾನು ರುಚಿ ಇಷ್ಟವಾದ ಹಣ್ಣನ್ನೇ  ಕೂಟ್ಟ ಮಹಾಭಕ್ತೆ ಶಬರಿಯಿಂದಾಗಿ ಈ ಮಲೆ( ಬೆಟ್ಟ) ಶಬರೀ ಮಾಲೆಯೆಂಬ ಹೆಸರಿನಿಂದ ಪ್ರಸಿದ್ಧವಾಯಿತು. ಮುಂದೆ ಅವತಾರಿಯಗಿ ಬಂದ ಅಯ್ಯಪ್ಪ ಸ್ವಾಮಿಯು ನೆಲಸಿದ ಬೆಯ್ಯವೆಂದು ಅಯ್ಯಪ್ಪನ ಭಕ್ತರು ಇಲ್ಲಿಗೆ ಬರಲಾರಂಭಿಸಿದರು. ಮೊದಲೇನೋ ಬಹಳ ದೂರದಿಂದ ಗುಡ್ಡ ಬೆಟ್ಟೆಗಳನ್ನು ಹತ್ತಿ ಇಳಿದು ಕಾಲ್ನಡಿಗೆಯಿಂದಲೇ ಬಂದವರು ಕಾಡು ಮೃಗಗಳ ಬಾಯಿಗೆ ಬಿದ್ದುದೂ ಇದೆಯಂತೆ! ಅಷ್ಟು ದುರಗಮವಾದ ಈ ಬೆಟ್ತಕ್ಕೆ ಮತ್ತೆ ಸಾರಿಗೆ ಸೌಕರ್ಯ ಹೆಚ್ಚಾದಂತೆ ಬರುವ ಭಕ್ತರ  ಸಂಖ್ಯೆ ಹೆಚ್ಚಾಗಿ ಆದಾಯ ಹೆಚ್ಚು ಬರತೊಡಗಿದಾಗ ಭಕ್ತರ ಕಾಣಿಕೆ ಹಣವನ್ನು ನೋಡಿ ಸರಕಾರವಾ ಎಂಡೋಮೆಂಟ್  ಗೆ ಸೇರಿಸಿ ಇತ್ತೀಚೆಗೆ ಸೌಕರ್ಯ ಹೆಚ್ಚಾದುದರಿಂದ ದೇವಸ್ವಂ ಬೋರ್ಡಿಗೆ ತುಳಸೀ ಮಾಲೆ ವರ್ಷದಲ್ಲಿ ಕೋಟಿಗಟ್ಟಲೆ ಆದಾಯಬರತೊಡಗಿದೆ ಭಕ್ತರ ಅಪೇಕ್ಷೆಯಂತೆ ಅನ್ನದಾನವೂ ಶುರುವಾಗಿದೆ. ೪೧ ದಿನಗಲಲ್ಲಿ ಮದ್ಯ ಮಾಂಸಸೇವಿಸಬಾರದೆಂಬ ನಿಯಮ ಇಟ್ಟುಕೊಂಡು ಕೊರಳಿಗೆ ತುಳಸೀ ಮಾಲೆ ಗುರುಸ್ವಾಮಿಯಿಂದ ಹಾಕಿಸಿಕೊಂಡು ಬ್ರಹ್ಮಚರ್ಯ ಪಾಲಿಸುತ್ತಾ ಸ್ವಂತ ಅಡಿಗೆ ಊಟ ಮಾಡಿಕೊಂಡು ಗುಂಪಾಗಿಯೋ ಇರಬೇಕು. ಗುರುಸ್ವಾಮಿಯೊಂದಿಗೆ ಇರುಮುಡಿ  ಎಂದರೆ ಮೂರು ತೆಂಗಿನಕಾಯಿ, ಸ್ವಲ್ಪ ಅಕ್ಕಿ, ಒಂದು ಕಾಯಿಯಲ್ಲಿ ತುಂಬಿಸಲು ಸಾಕಷ್ಟು ತುಪ್ಪ ಇವುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ತಿಕೊಂಡು ತಲೆಯಲ್ಲಿ ಇಟ್ಟುಕೊಂಡು ಪ್ರ್ವತ ಏರಬೇಕು. ಈಗ ನಿಯಮ ಸ್ವಲ್ಪ ಸಡಿಲಿದೆಯಾದರೂ ಅದೇ ನಿಯಮವನ್ನು ಪಾಲಿಸುವವರೂ ಇದ್ದಾರೆ. ಬರೇ ಒಂದು ವಾರ ಮಾತ್ರ ಮಾಲೆ ಹಾಕಿಸಿಕೊಳ್ಳುವವರು ಇದ್ದಾರೆ. ಒಟ್ಟಾರೆ ಆ ಅವಧಿಯಲ್ಲಿ ಬ್ರಹ್ಮಚರ್ಯ ಪಾಲಿಸಬೇಕೆಂಬ ನಿಯಮದಂತೆ ಮಲೆಯ ಬುಡಕ್ಕೆ ಹೋಗಿ ಅಲ್ಲಿ ಕೆಳಗೆ ಪಂಬಾ ನದಿಯಲ್ಲಿ ಸ್ನಾನ ಮಾಡಿ ಅಲ್ಲೇ ಇರುವ ಗಣಪತಿ ದೇವಸ್ಥಾನದಲ್ಲಿ ಈಡುಗಾಯಿ ಒಡೆದು ಮಾಲೆ ಹಾಕಿಸಿಕೊಂಡು ಇರುಮುಡಿ ತಲೆಯಲ್ಲಿ  ಹೊತ್ತುಕೊಂಡು ಹೋಗುವವರು ಇದ್ದಾರೆ. ಮಾಲೆ ಹಾಕುವವರಿಗೆ ಬೇಕಾದ ಕಾಯಿ ತುಪ್ಪ ಎಲ್ಲ ಏ ಸಿಗುತ್ತದೆ. ವ್ರತ ಪಾಲಿಸುವವರಿಗೆ ಈಗ ತುಂಬ ಅನುಕೂಲ ವಿದ್ದುದ್ದರಿಂದ ಜನ ಬಹು ಸಖ್ಯೆಯಲ್ಲಿ ಬರುತ್ತಾರೆ. ಪ್ರತಿ ಸಂಕ್ರಮಣ ಬಾಗಿಲು ತೆರೆದರೆ  ನಾಲ್ಕೈದು ದಿನ ಬರುವವರಿಗೆ ವ್ಯವಸ್ಥೆ ಈಗ ಮಾಡಿದ್ದಾರೆ. ಅಂತೂ ಬಹಳ ಹಿಂದೆ ಇದ್ದ ನಿಯಮಗಳನ್ನು ಸಡಿಲಿಸಿ ಸುಲಭಗೊಳಿಸಿದ್ದು  ಮತ್ತು ಬರೇ ಆರೇಳು ಮೈಲು ಮಾತ್ರ ಮಲೆಯೇರಲು ಇರುವುದರಿಂದ ಜನ ಬರುತ್ತಾರೆ. ಮೊದಲು ೧೫ ಮೈಲು ಕಾಡಿನಲ್ಲಿ ಹಿಂಸ್ರ  ಮೃಗಗಳಿಗೆ ಆಹುತಿಯಾದುದೂ ಇದೆಯಂತೆ.
   ನಾನು ಎರಡು ಸಲ ಶಬರಿಮಲೆಗೆ ಹೋಗಿದ್ದೆನು ಒಮ್ಮೆ ಒಬ್ಬ ಗುರುಸ್ವಾಮಿಯೊಂದಿಗೆ ಹೋದರೆ ಇನ್ನೊಮ್ಮೆ ಮತ್ತೊಬ್ಬ ಗುರುಸ್ವಾಮಿಯೊಂದಿಗೆ . ಇನ್ನೊಮ್ಮೆ ನನ್ನ ಪತ್ನಿಗು ಶಬರಿ ಮಲೆ ಯಾತ್ರೆ ಮಾಡ ಬೇಕೆಂಬ ಆಸೆಯಾಯಿತು. ಮತ್ತೆ ನನಗು ಇನ್ನೊಮ್ಮೆ ಅಯ್ಯಪ್ಪನನ್ನು ಭೇಟಿ ಮಾಡಬೇಕೆಂಬ ಆಸೆಯಾಯಿತು  ನನ್ನ ಹೆಂಡತಿಯ ಗೆಳತಿಯರು ಕೆಲವರು ಹೋಗುವರೆಂದು ಗೊತ್ತಾಗಿದ್ದರಿಂದ ಅಲ್ಲಿಗೆ ಹೆಂಗುಸರೂ ಹೋಗಬಹುದು ಎಂಬ ವಿಷಯ ಗೊತ್ತಾಗಿದ್ದರಿಂದ ಪತ್ನಿಗೂ ಹೋಗಬೇಕೆಂಬ ಆಸೆ ಚಿಗುರಿತು ಹಾಗೆ ನನಗೂ ಆಕೆಯನ್ನು ಕರೆದುಕೊಂಡು ಹೋಗಲು ಅನುಕೂಲವು ಆಯಿತು. ಎಲ್ಲರು ಗಂಡುಸರೇ ಆದರೆ ಒಬ್ಬ ಹೆಂಗಸನ್ನು ಕರಕೊಂಡು ಹೋಗಲು ಕಷ್ಟವಲ್ಲವೇ?  ಪ್ರಾಯದ ಹೆಂಗುಸರು ಎಂದರೆ ಮುಟ್ತು ನಿಂತವರು ಐವತ್ತು ಕಳೆದವರಿಗೆ ಪ್ರವೇಶವಿದೆಯೆಂದು ಗೊತ್ತಾಗಿ ಒಂದು ದಿನ ನಾವೆಲ್ಲರೂ ಒಟ್ಟಾಗಿ ಸಂಜೆಯ ಮಲಬಾರ್ ಎಕ್ಸ್ ಪ್ರೆಸ್ಸಿಗೆ ಮೊದಲೇ ಸೀಟ್ ಬುಕ್ ಮಾಡಿಸಿಕೊಂಡಿದ್ದೆವು ಸಂಜೆ ಗಾಡಿ ಹತ್ತಿದವರು ಕೊಟ್ಟಾಯಂ ಸ್ಟೇಶನ್ನಿಗೆ ಗಾಡಿ ತಲಪಿದೊಡನೆ ನಾವು ಮೊದಲೇ ಬುಕ್ ಮಾಡಿದ್ದ ಗಾಡಿಯಲ್ಲಿ ಕೊಟ್ಟಾಯಮ್ಮಿನಿಂದ ಶಬರಿಮಲೆಗೆ ಹೊರಟೆವು. ಪೂರ್ವಾಹ್ನ ಶಬರಿ ಮಲೆಯ ಬುಡದಲ್ಲಿರುವ ನದೀಯಲ್ಲಿ ಸ್ನಾನ ಮಾಡಿ ಅಲ್ಲೇ ಮೇಲಿರುವ ಗಣಪತಿ ದೇವಸ್ಥಾನದಲ್ಲಿ ಮಾಲೆ ಹಾಖಿ ಇರುಮುಡಿ ಕಟ್ತಿಕೊಂಡು ಅಯ್ಯಪ್ಪನನ್ನು ಕೂಗಿಕೊಳ್ಳುತ್ತಾ ಮಲೆಯನ್ನೇರತೊಡಗಿದೆವು . ಗೆಳತಿಯರಿದ್ದುದರಿಂದ ನಮ್ಮವಳಿಗೂ ಮೊಡು ಧೈರ್ಯ ಬಂದಿದ್ದರೂ ಬಹಳ ಕಷ್ಟದಿಂದ ಗುಡ್ಡವೇರತೊಡಗಿದಳು. ನಮ್ಮ ಪೈಕಿ ವಯಸ್ಸಾದ ಹೆಂಗಸು ನಮ್ಮವಳು. ಅಂತೂ ಏಳೆಂಟು ಮೈಲು ದಾರಿಯನ್ನು ಏರಲು ಮೂರು ಗಂಟೆ ಬೇಕಾಯಿತು. ಸ್ವಲ್ಪ ತಡವಾದ್ದರಿಂದ ಮೇಲೇರಿದೊಡನೆ ಅಯ್ಯಪ್ಪನ ಮಂದಿರಕ್ಕೆ ಮೇಲೇರುವಾಗ ಸಿಕ್ಕುವ ಹದಿನೆಂಟು ಮೆಟ್ಟಲುಗಳನ್ನು  ಆ ಹೊತ್ತಿನಲ್ಲಿ ಹೆಚ್ಚು ಜನವಿಲ್ಲದುದರಿಂದ ನಿಧಾನವಾಗಿ ಮೇಲೇರಲು ಸಾಧ್ಯವಾಯಿತು. ಮೇಲೆ ಹತ್ತಬೇಕಾದರೆ ಅಲ್ಲೇ ಗೋಡೆಯೊಂದಕ್ಕೆ ಬರುವಾಗ ತಂದಿದ್ದ ಒಂದು ತೆಂಗಿನಕಾಯಿಯನ್ನು ಹೊಡೆದುಬಿಟ್ಟೆವು. ಆದು ಅಲ್ಲೇ ಬಿಡ್ಡಬೇಕಾದುದು. ಮತ್ತೆ ತಾನೆ ಮೆಟ್ಟಲೇರುವುದು! ಎಲ್ಲ ಬಂಗಾರದ ಮುಚ್ಚಿಗೆಯ ಮೆಟ್ಟಲುಗಳು ಸಂಜೆ ಈ ಮೆಟ್ಟಲುಗಳಿಗೆ ನಿತ್ಯವೂ ಪಡಿಒಪೂಜೆ ನಡೆಯಲಿದೆಯಂತೆ  ಅಯ್ಯಪ್ಪನ ದರ್ಶನವಾಗಲಿಲ್ಲ. ಅದರೆ ಉಳಕೊಳ್ಳಲು ಎರಡು ರೂಮ್ ಬುಕ್ ಮಾಡಿದ್ದರಿಂದ ಗಂಡುಸರು ಹೆಂಗಸರೆಂಬ ಭೇದವಿಲ್ಲದೆ ವಿಶ್ರಾಂತಿ ಪಡೆಯಲು ಹೋದೆವು. ಪ್ರಸಾದ ಊಟ ಸಿಕ್ಕದಿದ್ದರಿಂದ ಹೋಟೆಲಿನಲ್ಲಿ ಊಟ ಮಾಡಬೇಕಾಯಿತು. ಸಂಜೆ ಬೇಗನೆ ದೇವರ ದರ್ಶನಕ್ಕೆ ಹೋದೆವು ದರ್ಶನಕ್ಕೆ ತುಂಬಾ ಜನ ಬರುವುದರಿಂದ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಮಕರ ವಿಳಕ್ಕಿನ ಕಾಲದಲ್ಲಿಯೋ ಇತರ ಹಬ್ಬಗಳ ಕಲದಲ್ಲಿಯೋ ರಶ್ ಹೆಚ್ಚಿರುವುದರಿಂದ ದರ್ಶನ ಕಷ್ಟ ವೆಂದು ಸಂಕ್ರಮಣದ ನಂತರ ಹೋದುದಾದರೂ ಜನ ಸಂದಣಿ ಧಾರಾಳವಾಗಿತ್ತು. ಎಲ್ಲರೂ ನಮ್ಮಂತೆ ರಶ್ ತಪ್ಪಿಸಿಕೊಳ್ಳಲು ಆದಿವೇ ಬಂದಂತಿತ್ತು. ಅಂತೂ ಬಹಳ ಹೊತ್ತು ಸಾಲಿನಲ್ಲಿ ನಿಂತ ಮೇಲೆ ದರ್ಶನಕ್ಕೆ ಸಾಧ್ಯವಾದರೂ ಅಲ್ಲಿಯೂ ಜನಸಂದಣಿ ಹೆಚ್ಚಾಗಿದ್ದುದರಿಂದ ಹೆಚ್ಚು ಹೊತ್ತು ದೇವರನ್ನು ನೋಡಲು ಸಾಧ್ಯವಾಗಲಿಲ್ಲ. ಅಷ್ಟೆತ್ತರದ ಗುಡ್ಡದ ತುದಿಯಲ್ಲಿಯೂ ನೀರು  ಸಾಲದ್ದಕ್ಕೆ ದೇವಸ್ವಂ ಬೋರ್ಡಿನವರು ಕೆಳಗಿನಿಂದ ಪೈಪಿನ ಮೂಲಕ ನೀರು ತರಿಸಿ ಬಂದವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆಯಿದ್ದರೂ ಎಲ್ಲರಿಗೂ ಊಟ ಸಿಗುವುದು ಕಷ್ಟವಾಗುತ್ತದೆ. ಇನ್ನು ಹೆಚ್ಚು ರಶ್ ಇದ್ದ ಸಮಯದಲ್ಲಿ ಊಟ ಸಿಗುವುದಿಲ್ಲ. ಬೇಕಾದ ಪೋಲಿಸ್ ರಕ್ಷಣೆಯಿರುವುದರಿದ ಮಾತ್ರವಲ್ಲ ಅಲ್ಲಿ ಮದ್ಯಪಾನ ಮಾಡುವುದು ನಿಷೇಧವಾದುದರಿಂದ ಕೆಟ್ಟ ಜನರ ತೊಂದರೆಯಿಲ್ಲ.  ಯಾವ ಹೆದರಿಕೆಯೂ ಇಲ್ಲ. ಒಳಗೆ ತಲಪಿದೊಡನೆ ಬಂಗಾರದ ಕವಚ ಹೊಂದಿರುವ ಮಾಡು ಕಲಶ ಎಲ್ಲವೂ ಬಂಗಾರದ್ದೇ ಆಗಿರುವುದರಿಂದ ಸಾಕಷ್ಟು ಜಾಗ್ರತೆಯಿರಬೇಕಲ್ಲ!.ಅಲ್ಲಿಂದ ಈಚೆ ಬಂದರೆ ಮಾಳಿಗಮ್ಮ  ದೇವರ ಗುಡಿ  ಹಿಂದೆ ಅಯ್ಯಪ್ಪನನ್ನು ಮದುವೆಯಾಗಬೇಕೆಂದು ಬಯಸಿ ಬಂದು ಅವನಲ್ಲಿ ಕೇಳಿದಾಗ ಅಯ್ಯಪ್ಪನು " ಈ ಕ್ಷೇತ್ರಕ್ಕೆ ಚಿಕ್ಕ ಕನ್ಯೆಯರು ಬರುವುದು ನಿಂತ ಮೇಲೆ ನಿನ್ನ ಬಯಕೆಯನ್ನು ಪೂರೈಸುವೆಯೆಂದಿದ್ದನಂತೆ! ಆದರೆ ಜನ ಬರುವುದು ನಿಲ್ಲಲೂ ಇಒಲ್ಲ ಆಕೆಗೆ ಮದುವೆಯಾಗಲೂ ಇಲ್ಲ. ಈ ಗುಡಿಯ ಹತ್ತಿರ ಹೋದವರು ಒಂದು ತೆಂಗಿನಕಾಯಿ ( ಕಾಯಿ ಅಲ್ಲೇ ಕೊಡುತ್ತಾರೆ ) ಕಾಯಿಯನ್ನು ಉರುಳಿಸಿಕೊಂಡು ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುತ್ತಾರೆ. ಒಮ್ಮೆ ಜನ ಉರುಳಿಸಿ ಬಿಟ್ಟ ಕಾಯಿಗಳನ್ನು ಅಲ್ಲಿಂದ ದೇವಸ್ಥಾನ ಚಾಕರಿಯವರು ಗೋಣಿಗಳಲ್ಲಿ ಸಂಗ್ರಹಿಸಿ ಆಚೆ ಇಟ್ಟ್ಅರೆ  ಅಲ್ಲಿ ಕುಳಿತುಕೊಂಡವರು ಅದೇ ಕಾಯಿಗಳನ್ನು ಮತ್ತೆ ಬಂದವರಿಗೆ ಉರುಳಿಸಲು ಕೊಡುತ್ತಾರೆ ಹೀಗೆ ದೇವಸ್ಥಾನಕ್ಕೆ ಬಂದವರು ದೇವಿಯ ಕೋರಿಕೆಯನ್ನು ಈಡೆರಿಸುವಂತೆ ಕೇಳಿಕೊಂಡರೂ ಮಾತನಾಡದ ದೇವರು ಬಸ್ಂದವರಿ ಮುಗ್ಧಮನಸ್ಸನ್ನು ಹಣ ಒಟ್ತು ಮಾಡುವ ಕಾಯಕದಂತೆ ನಡೆಸುತ್ತಿರುತ್ತಾರೆ. ಜನರ ಮುಗ್ಧ ಮೂಢ ವಿಶ್ವಾಸವನ್ನು ಹೀಗೆ ಕ್ಶೇತ್ರವಾಸಿಗಳು ದುರ್ಬಳಕೆ ಂಆಡಿಕೊಳ್ಳುತ್ತಿದ್ದರೂ ನಂಬಿಕೆ ಮುಂದುವರಿಯುತ್ತಲೇ ಇದೆ!  ತಾಯಿಯ ಬಯಕ್ಕೆ ಈಡೇರಿಸುವಂತೆ ಬೇಡಿಕೊಂಡಾರೂ ಯಾರ ಬಯಕೆಯೂ ಈಡೇರದೆ ಆಕೆ ಬ್ರಹ್ಮಚಾರಿಣಿಯಾಗೇ ಇನ್ನೂ ಇದ್ದಾಳೆ. ಮಾಳಿಗಮ್ಮನ ದರ್ಷನ ಮುಗಿಸಿ ನಾವು ತಂದ ಇರುಮುಡಿಯನ್ನು ಅಯ್ಯಪ್ಪನ ಮಂದಿರದ ಒಂದು ಬದಿಯಲ್ಲಿ ಕುಳಿತುಕೊಂದು ಕಾಯಿಯೊಳಗೆ ತುಂಬಿಸಿದ ತುಪ್ಪವನ್ನು ಒಳಗೆ ಕೊಟ್ಟು, ತುಪ್ಪ ತುಂಬಿಸಿದ ಕಾಯಿಯನ್ನು ಕೆಳಗೆ ಒಂದು ಅಗ್ನಿ ಕುಂಡಕ್ಕೆ ಹಾಕಿದೆವು. ತುಂಬಾ ಆಳದಲ್ಲಿರುವ ಈ ಕುಂಡಕ್ಕೆ ಬಂದವರೆಲ್ಲ ಹಾಕಿದ ತೆಂಗಿನ ಕಾಯಿಯ ಬೆಂಕಿ ಆರದೆ ಯಾವಾಗಲೂ ಹೋಮ ಕುಂಡ ಧಗ ಧಗಿಸಿ ಉರಿಯುತ್ತಿರುತ್ತದೆ. ಅದಾಗಿ ನಾವು ಸಂಜೆಯ ಪಡಿಪೂಜೆ ನೋಡಲು ಹೋದೆವು. ಜನ ಈಗ ತುಂಬ ಸೇರಿದ್ದರು ನಾವು ಬರುವಾಗ ಇದ್ದ ಜನ ಕಡಿಮೆ ಈಗ ನೋಡಿದರೆ ಸಾವಿರಾರು ಸೇರಿದ್ದರು. ಜನರ ಎಡೆಯಲ್ಲಿ ನಾವು ಪಡಿಪೂಜೆ ನೋಡಿದೆವು ಅ ಹದಿನೆಂಟು ಮಟ್ತಲುಗಳಿಗೂ ಪೂಜೆಯಂತೆ! ಕೆಳಗಿನ ಮೆಟ್ಟಲಿನಲ್ಲಿ ಪೂಜಾರಿಗಳು ಆರತಿ ಪುಜೆಯ ಸಾಮಗ್ರಿಗಳೊಂದಿಗೆ ಬಂದರು ಪೂಜೆ ನೈವೇದ್ಯ ಆಗುತ್ತಿದ್ದಂತೆ ವಾದ್ಯ ಘೋಷಗಳು ಜೋರಾಗಿ ಧ್ವನಿಸುವುದರೊಂದಿಗೆ ಒಂದೊಂದೇ ಮೆಟ್ಟಲುಗಳಿಗೆ ಕ್ರಮದಂತೆ ಪೂಜೆ ಆರತಿ ಬೆಳಗಿದರು ಸುಮಾರು ಒಂದು ಗಂಟೆ ಜನ ಮನದಣಿಯೆ ಪೂಜೆ ನೋಡಿತ್ತಿರುವಂತೆ ಪೂಜೆ ಮುಗಿಯಿತು. ನಾವು ರಾತ್ರೆಯೂ ಹೋಟೆಲಿನಲ್ಲಿಯೇ ಊಟ ಮಾಡಿದೆವು. ರೂಮಿಗೆ ಹೋದರೆ ಮಲಗಲು ಚಾಪೆ ಮಾರ ಸಿಕ್ಕಿತು. ನಾವು ತಂದ ಬಟ್ಟೆ ಹಾಸಿಕೊಂಡು ಮಲಗಿದಷ್ಟಕ್ಕೆ ತುಂಬ ದಣಿದಿದ್ದುದರಿಂದ ನಿದ್ರೆ ಬೇಗ ಬಂತು  ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಹೋಟೆಲಿನಲ್ಲೇ ಉಪಾಹಾರವಾಯಿತು. ಮತ್ತೆ ದೇವರ ದರ್ಶನಕ್ಕೆ ಹೋದೆವು. ಆಗಲು ಹೆಚ್ಚು ಜನವಿದ್ದರೂ ದೇವರ ದರ್ಶನ ಮತ್ತೊಮ್ಮೆ ಆಯಿತು. ಪ್ರಸಾದವಾಗಿ ಸ್ವಲ್ಪ ತುಪ್ಪ ಸಿಕ್ಕಿತ್ತು. ಮತ್ತೆ ಅಲ್ಲಿ ತಂತ್ರಿಗಳನ್ನು ನೋಡಹೋದಾಗ ಅಲ್ಲಿಯೂ ಏನಾದರೂ ಕಾಣಿಕೆ ಹಾಖಿದರೆ ದಾರ ಪ್ರಸಾದ ಕೊಡುತ್ತಿದ್ದರು ಮತ್ತೆ ಸಾಲಿನಲ್ಲಿ ನಿಂತು ಅಪ್ಪ , ನೈಯಭಿಷೇಕದ ಪ್ರಸಾದ, ನೂರು ರೂಪಾಯಿಗೆ ಒಂದು ಸಿಹಿ ಪ್ರಸಾದ ಹೀಗೆ ಅಲ್ಲಿಯ ಪ್ರಸಾದ ತೆಕ್ಕೊಂಡು ಅಲ್ಲಿಂದ ಕೆಳಗಿದೆವು. ಕೆಳಗೆ ನಮ್ಮ ವಾಹನ ಬಂದಿತ್ತು. ವಾಹನವನ್ನೇರಿ ಕೊಟ್ಟಾಯಮ್ಮಿಗೆ ಬಂದೆವು. ಉಳಿದವರು ಗಾಡಿಯಲ್ಲಿ ಕನ್ಯಾಕುಮಾರಿಗೆ ಹೋಗುಬ ಯೋಜನೆಯಲ್ಲಿದ್ದರು. ನಾವು ತ್ರಿಶೂರಿಗೆ ಬಣ್ದೆವು. ಅಲ್ಲಿಂದ  ಪೊಂದು ವಾಹನ ಹಿಡಿದು ಛೋಟಾನಿಕ್ಕೆರೆ ಭಗವತಿಯ ದರ್ಶನಕ್ಕೆಂದು ಬಂದೆವು ಪುರಾತನ ದೇವಸ್ತ್ಃಅನ ದೇವಿಯನ್ನು ನೋಡಿ ಧನ್ಯರಾದ್ವು ಸ್ಟೇಶನಿಗೆ ಬಂದು ಗಾಡಿಯೇರಿ ಮಂಗಳೂರಿಗೆ ಬೆಳಿಗ್ಗೆ ತಲಪಿದಲ್ಲಿಗೆ ನಮ್ಮ ಶಬರಿಮಲೆ ಯಾತ್ರೆ ಮುಗಿಯಿತು.
ನಾವು ಬರುವಾಗ್

Tuesday, November 24, 2015

uppu

                                                            ಉಪ್ಪು
ಉಪ್ಪು  ಅಂದರೆ ಲವಣ  ಜೀವನಾಧಾರವಗಿದೆ. ಉಪ್ಪಿಲ್ಲದೆ ಊಟ್ಯವಿಲ್ಲ ಎಂದರೆ  ಬದುಕಲು ಆಹಾರ ಬೇಕು, ಆಹಾರ ತಿನ್ನಲು ರುಚಿಸಬೇಕಾದರೆ ಉಪ್ಪು ಬೇಕೇ ಬೇಕು .ಉಪ್ಪಿಲ್ಲವಾದರೆ ಊಟ ಸಪ್ಪೆ. ಸಪ್ಪೆ ಊಟ ಮಾಡುವವರೂ ಇದ್ದಾರೆ. ಆದರೆ ನಾಲಿಗೆಗೆ ರುಚಿ ಹತ್ತೆ ಬೇಕಾದರೆ ಉಪ್ಪು ಬೇಕು. ಉಪ್ಪಿನ ಪಥ್ಯವಿದ್ದವರು  ಕೂಡಾ ತುಂಬ ಕಡಿಮೆಯಾದರೂ ಉಪ್ಪು ಉಪಯೋಗಿಸುತ್ತಾರೆ. ನಾವು ತಿನ್ನುವ ಆಹಾರ,ನೀರು ಹಾಣ್ಣು ತರಕಾರಿಗಳಲ್ಲಿಯೂ ಲವಣಾಂಶ ಇದ್ದರೂ ಅವು ಜೀವನಕ್ಕೆ ಬೇಕೇ ಬೇಕಾದರೂ ನಾಲಿಗೆ ಬಯಸುವುದು ಈ ಉಪ್ಪನ್ನು.!ಉಪ್ಪು ಕೂಡಿಸದೆ ಮಾಡುವ ಊಟವೂ ಇಷ್ಟವಾಗುವುದಿಲ್ಲ. ಮತ್ತೆ ಕೆಲವರಿಗೆ ಪಾಯಸ ಬೆಲ್ಲ ಹಾಕಿ ಮಾಡಿದುದಾರೆ ಸ್ವಲ್ಪ ಉಪ್ಪು ಸೇರಿಸಿಕೊಂಡರೆ ಆ ರುಚಿಯೇ ಬೇರೆ.ಶ್ಃಅಡ್ರಸಗಳಲ್ಲಿ ಸೇರಿಕೊಂಡ ಈ ಉಪ್ಪು ರುಚಿಯಲ್ಲಿ ಪ್ರಾಡಾನ್ಯ ಪಡೆದಿದೆ.
ನಾವು ತಿನ್ನುವ ಉಪ್ಪು ಸಮುದ್ರದಿಂದ ದೊರಕುವುದು. ಸಮುದ್ರದ ನೀರನ್ನು ಇಂಗಿಸಿ ಉಪ್ಪು ತಯಾರಿಸುತ್ತಾರೆ. ಹಿನ್ನೀರು ಪ್ರದೇಶಗಳಲ್ಲಿ ಎಕ್ರೆಗಟ್ಟಲೆ ಜಾಗದಲ್ಲಿ ಉಪ್ಪು ನೀರನ್ನು ಭರತದ ಸಮಯಕ್ಕೆ ತುಂಬಿಸಿಕೊಂಡರೆ ಒಂದೆರಡು ದಿನಗಳಲ್ಲಿ ಸೂರ್ಯನ ಬಿಸಿಲಿಗೆ ನೀರು ಆವಿಯಾಗಿ ತಳದಲ್ಲಿ ಉಪ್ಪು ಮಾತ್ರ ಉಳಿಯುತ್ತದೆ. ಈ ಉಪ್ಪನ್ನು ಗೋಣಿ ಚೀಲಳಲ್ಲಿ ತುಂಬಿಸಿ ಮಾರಾಟ ಮಾಡುತ್ತಾರೆ. ಆಂಗ್ಲರ ಆಡಳಿತ ಕಾಲದಲ್ಲಿ ಉಪ್ಪು ತಯಾರಿಸಲು ಬಿಡುತ್ತಿರಲಿಲ್ಲವಂತೆ. ಇಂಗ್ಲೇಂಡಿನಿಂದ ಬರುವ ಹಡಗಿನಲ್ಲಿ( ಬರುವಾಗ ಈ ಸರಕು ತಂದರೆ ಹಿಂದಿರುಗುವಾಗ ಇಲ್ಲಿಯ ಬೆಲೆಬಾಳುವ  ಇಲ್ಲಿನ ಬೆಲೆಬಾಳುವ ಹತ್ತಿ ವಗೈರೆ ಕೊಂಡೊಇದು ಲಾಭ ಮಾಡುತ್ತಿದ್ದರು.ಇದನ್ನು ವಿರೋಧಿಸಿ ಉಪ್ಪಿನ ಸತ್ಯಾಗ್ರಹ ಗಂಧೀಜಿಯವರು  ಕೈಕೊಂಡದ್ದು ಚರಿತ್ರೆ.ಹೀಗೆ ತಯಾರಿಸಿದ ಉಪ್ಪಿನಲ್ಲಿ ಅಯೋಡಿನ್ ಕಡಿಮೆಯೆಂದು ಈಗ ಅಯೋಡೈಸ್ದ್ ಉಪ್ಪು ಮಾರುಕಟ್ಟೆಯಲ್ಲಿ ದೊರಕುವುದು ಸಾಮಾನ್ಯ ಉಪ್ಪಿಗೆ ಇಲ್ಲೂ ಗಿರಾಕಿ ಕಡಿಮೆಯಾಗಿದೆ! ಅರಕಾರವೇ ವ್ಯಾಪಾರಿಗಳ ಮುಸ್ಟಿಯಲ್ಲಿರುವಾಗ ಸಾಮಾನ್ಯರ ಮಾತಿಗೆ ಬೆಲೆ ಬರುವುದೇ? ನೈಜ ಉಪ್ಪಿನಲ್ಲಿರುವ ಖನಿಜಾಂಶಗಳು ಮಾರುಕಟ್ಟೆಯಲ್ಲಿ ದೊರಕುವ ಅಯೋಡೈಸ್ಡ್ ಉಪ್ಪಿನಲ್ಲಿ ಕಡಿಮೆಯಾಗಿರುವುದು.
     ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರೊಂದಿಗೆ ಹಲವಾರು ಜನ ಜೈಲು ಸೇರಿದ್ದರು.ಅಂದಿನ ದಿನಗಳಲ್ಲಿ ಜನರು ವಿದೇಶೀಯರ ವಿರುದ್ಧ ಒಂದಾಗಿದ್ದರು. ಈಗ ದೇಶೀಯರ ವಿರುದ್ಧ ಹೋರಾಡಬೇಕಾಗಿದೆ. ಸಮುದ್ರದ ನೀರಿನಲ್ಲಿಯೂ ಉಪ್ಪು ಹೇಗೆ ಬರುತ್ತದೆಯೆಂಬುದಕ್ಕೆ ಸಮುದ್ರಕ್ಕೆ ಬೇರೆ ನದಿಗಳಿಂದ ನೀರು ಹರಿದು ಬರುತ್ತದೆ. ಭೂಮಿಯಲ್ಲಿರುವ ಖನಿಜ ಲವಣಗಳು ಕರಗಿ ನೀರಾಗಿ ನದಿ ನೀರಿನೊಂದಿಗೆ ಸಾಗರ ಸೇರಿದರೆ ಅಲ್ಲೇ ಉಳಿಯುತ್ತದೆ. ವರ್ಷ ಒಟ್ಟಗಿ ಬರುವ ಖನಿಜ ಲವಣಗಳಿಂದ ಸಮುದ್ರದ ನೀರಿನಲ್ಲಿರುವ ಉಪ್ಪಿನ ಪ್ರಮಾಣ ಹೆಚ್ಚಾಗುತ್ತದೆ. ಒಂದು ನಿರ್ದಿಷ್ಟ ವರ್ಷದಿಂದ ಮತ್ತಿನ ವರ್ಷಕ್ಕೆ ಉಪ್ಪಿನ ಪ್ರಮಾಣ ಹೆಚ್ಚಾದುದನ್ನು ಲೆಕ್ಕ ಹಾಕಿದರೆ ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಾಗುತ್ತದೆಯೆಂದು ಗೊತ್ತಾಗುವುದಷ್ಟೆ!ಹಾಗಿ ಒಂದು ವರ್ಷದಲ್ಲಿ ಸರಾಸರಿ ಹೆಚ್ಚಾಗುವ ಉಪ್ಪಿನ ಪ್ರಮಾಣ ಲೆಕ್ಕ ಹಾಕಿದರೆ ಭೂಮಿಯ್ ಉತ್ಪತ್ತಿ, ಉಪ್ಪಿನ ಆಳ ಎತ್ತರಗಳನ್ನು ಲೆಕ್ಕ ಹಾಕಬಹುದೇನೋ!ಾಂತೂ ಸಮುದ್ರಕ್ಕೆ ಉಪ್ಪಿನ ಆಗಮನ ಬೇರೆಲ್ಲಿಂದಲೂ ಅಲ್ಲ ಭೂಮಿಯಿಂದಲೇ ಎಂಬುದು ಖಚಿತ.
ಉಪ್ಪಿನ ಸುದ್ದಿ ತೆಗೆಯುವಾಗ ಕೆಲವರು ನೈಜ ಸುದ್ದಿಗೆ ಉಪ್ಪು ಕಾರಸೇರಿಸಿ ಉತ್ಪ್ರೇಕ್ಷೆಯಿಂದ ಹೇಳುವುದಿದೆ. ಸುದ್ದಿ ವಿಶ್ಲೇಷಣೆ ಮಾಡುವವರು ನಿಜವಾದುದಲ್ಲವಾದರೂ ನಿಜವೆಂಬಂತೆ ಜನರನ್ನು ಮೋಸಗೊಳಿಸಲು ಉಪ್ಪು ಕಾರ ಸೇರಿಸಿ ದೊಡ್ಡದು ಮಾಡಿ ಹೇಳುತ್ತಾರೆ. ಮನುಷ್ಯ ಉಪ್ಪು ಹುಳಿ ಹಾಗೂ ಇತರ ರಸವಿಶೇಷಗಳನ್ನು ಇಷ್ಟಪಡುತ್ತಾನೆ. ಆದರೆ ಅತಿಯಾದರೆ ಅಮೃಅವೂ ವಿಷವಂತೆ. ಹಿತವಾಗಿ ಮಿತವಾಗಿ ತಿಂದರೆ ಮಾತ್ರ ರುಚಿಗೂ ಹಿತ.ಹೊಟ್ಟೆಗೂ ಹಿತ ಹೆಚ್ಚಾಗಿ ಬಿಟ್ಟಸ್ರೆ ರಕ್ತದ ಒತ್ತಡ,ಹಾಗೂ ಹೆಚ್ಚು ಸಕ್ಕರೆ ತಿಂದರೆ ಸಕ್ಕರೆ ಕಾಯಿಲೆ ಬರುವುದಲ್ಲವೇ? ಹಾಗೆಯೇ ನಮ್ಮ ನಡೆ ನುಡಿಗಳೂ ನಮ್ಮ ಹಿತಕ್ಕೂ ದೇಶದ ಹಿತಕ್ಕೂ ಬೇಕಲ್ಲವೇ?ನಿಜವಾಗಿ ಸತ್ಯ ಮಾರ್ಗದಲ್ಲಿ ನಡೆಯುವುದು ಆರೋಗ್ಯಕ್ಕೂ ಒಳ್ಳೆಯದು. ನಮ್ಮ ದೇಹವು ಬಹುಕಾಲ ಬಾಳಬಹುದು.
ಉಪ್ಪಿನಲ್ಲಿಯೂ ಬೇರೆ ಬೇರೆ ವಿಭಾಗಗಳಿವೆ. ಖನಿಜ ಉಪ್ಪು ಭೂಮಿಯಿಂದ ಅಗೆದು ತೆಗೆಯುವುದು. ಬಹಳ ಕಾಲದ ಹಿಂದೆ ಸಮುದ್ರವಾಗಿದ್ದ ಪ್ರದೇಶವಾಗಿದ್ದ ಭೂಭಾಗದಲ್ಲಿ ಅಗೆದು ತೆಗೆಯುವುದು. ಈ ಉಪ್ಪನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಬಿಡಾಲ ಲವಣ,ಸೈಂದುಪ್ಪು ಹ್ಹೀಗೆ ಹೆಸರುಗಳಿಂದ ಆಯುರ್ವೇದ ಪಂಡಿತರಿಗೆ ಚಿರಪರಿಚಿತ. ಸಾಮಾನ್ಯ ಉಪ್ಪು ಎಂದು ಕರೆಯುವುದು ಸಮುದ್ರದ ನೀರಿನಿಂದ ತೆಗೆದದ್ದು. ಹಿಂದೆ ಕಲ್ಲುಪ್ಪು ಕರಿಯುಪ್ಪು ಎಂದು ಕರೆಯುತ್ತಿದ್ದರು. ಈ ಉಪ್ಪನ್ನು ಗೋಣಿ ಚೀಲದಲ್ಲಿ ತುಂಬಿಸಿ ಮನೆ ಮನೆಗಳಿಗೆ ಕೊಂಡೊಯ್ಯುತಿದ್ದರು. ಮಕ್ಕಳನ್ನು ಬೆನ್ನ ಮೇಲೆ ಹಾಕಿ "ಉಪು ಬೇಣೊ ಬಟ್ಟೆಚ್ಚ "ಎಂದು ಆಡುತ್ತಿದ್ದರು ಈಗ ಇಂತಹ ಉಪ್ಪು ಕಾಣಸಿಗುವುದಿಲ್ಲ ಅಯೋಡೈಸ್ಡ್ ಉಪ್ಪು ಬೆಳ್ಳಗಿತ್ತದೆ.ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಮಾರುತ್ತಾರೆ. ಹಿಂದೆ ಹಿರಿಯರು ಚೀಲಗಳಲ್ಲಿ ತಂದ ಉಪ್ಪನ್ನು ದೋಣಿಯಾಕಾರದ ಮರಿಗೆಗಳಲ್ಲಿಯೋ ಗುಡಾಣಗಳಲ್ಲಿಯೋ ತುಂಬಿಸಿಡುತ್ತಿದ್ದರು. ಉಪಯೋಗಿಸುವಾಗ ತೊಳೆದ್ಯುವುದು ರೂಢಿ. ಈ ಉಪ್ಪನ್ನು ಕದಡಿ ಬೆಂಕಿಯಲ್ಲಿಟ್ಟು ಕುದಿಸಿ ಇಂಗಿಸಿದರ್ತೆ ಬಿಳಿಯುಪ್ಪು ಸಿಗುತ್ತಿತ್ತು. ಅದನ್ನ್ ಉಪ್ಪಿನಕಾಯಿಗೆ ಉಪಯೋಗಿಸುತ್ತಿದ್ದರು. ತೆಂಗಿನ ಮರಗಳಿಗೆ ಒಳನಾಡುಗಳಲ್ಲಿ ಬುಡಕ್ಕೆ ಹಾಕಿದರೆ ಹುಲುಸಾಗಿ ಬೆಳೆಯುತ್ತದೆ ಚೆನ್ನಾಗಿ ಕಾಯಿಗಳನ್ನು ಕೊಡುತ್ತದೆ. ಒಟ್ಟಾರೆ ಉಪ್ಪು ನಮಗೆ ಅವಿನಾಭಾವ ಸಂಬಂಧವುಳ್ಳದ್ದು.

havyaka sammelana

                ಅಮೇರಿಕಾಲ್ಲಿ ಹವ್ಯಕ ಸಮ್ಮೇಳನ

ಅಮೇರಿಕಾಲ್ಲಿ ಎನ್ನ ಮಕ್ಕೊ ಇಪ್ಪ ಕಾರಣ  ಬರೆಕ್ಕಾವುತ್ತು. ಈ ಸರ್ತಿ ಜೂನಿಲ್ಲಿ ಬಂದಿಪ್ಪಗ ಇಲ್ಲಿ ಹವ್ಯಕ ಸಮ್ಮೇಳನ ಹೇಳಿ ಗೊಂತಾತು. ಅಮೇರಿಕಾದ ವಾಶಿಂಗ್ ತನ್ ಡಿ ಸಿ ಲ್ಲಿಪ್ಪ ಚಿನ್ಮಯಸ್ ಮಿಶನ್ನಿನೋರ ಕಟ್ಟಡಲ್ಲಿ ಕಾರ್ಯಕ್ರಮ ಹೇಳಿಯೂ ಗೊಂತಾತು. ಎನ್ನ ಮಗ ಸೊಸೆ ಪುಳ್ಯಕ್ಕೊ ಕಾರ್ಯಕ್ರಮಲ್ಲಿ ಭಾಗವಹಿಸುಲೆ ಇತ್ತಿದ್ದವು.ಅಮೇರಿಕಾಲ್ಲಿಪ್ಪ ಹವ್ಯಕರು ಸೇರಿಗೊಂಡು ಎಲ್ಲ ಒಟ್ಟು ಸೇರುವ ಕಾರ್ಯಕ್ರಮ ಇದ್ದು. ದೂರ ದೂರಂದ ಮುನ್ನಾಣ ದಿನವೇ ಅಲ್ಲಿ ಬಂದು ಸೇರುತ್ತವು. ಅಮೇರಿಕಾ ಮಾತ್ರ ಅಲ್ಲ ಕೆನಡಂದಲೂ ಬತ್ತವು. ಒಟ್ಟಾರೆ ಉತ್ತರ ಅಮೇರಿಕಾ ಖಂಡಲ್ಲಿಪ್ಪ ಹವ್ಯಕರು ಆ ದಿನ ಇಲ್ಲಿ ಸೇರುತ್ತವು.ಹಾಂಗೆ ಈ ಸರ್ತಿ ಇಲ್ಲಿಗೆ ಬಂದಿಪ್ಪಗ ಸಮ್ಮೇಳನಕ್ಕೆ ಬಂದ ಹವ್ಯಕರ ಒಟ್ಟಾಗಿ ನೋಡುವ ಸಂದರ್ಭ ಒದಗಿತ್ತು. ಇಲ್ಲಿ ಕೆಲಸ ಮಾಡುವೋರಲ್ಲದ್ದೆ ಮಕ್ಕೊ, ಮತ್ತೆ ಊರಿಂದ ಬಂದ ಹವ್ಯಕರೂ ಸೇರಿ ಸಭಾಭನದೊಳ ಒಟ್ಟಾರೆ ಹವ್ಯಕರೇ ಸೇರಿದ ಅನುಪತ್ಯ! ಸಣ್ಣ ಮಕ್ಕೊ ಇಲ್ಲಿಯಾಣ ಇಒಂಗ್ಲಿಷೇ ಮಾತಾಡಿದರೆ, ಒಳುದೋರೆಲ್ಲ ಹೆಚ್ಚಾಗಿ ನಮ್ಮ ಭಾಷೆಯನ್ನೇ ಆಡುವ ಕಾರಣ ಒಟ್ಟಾರೆ ಊರಿನ ವಾತಾವರಣ!ಮಕ್ಕೊ ಹೆಮ್ಮಕ್ಕೊ, ಪ್ರಾಯದ ಮುದುಕ್ಕರೂ ಸೇರಿತ್ತಿದ್ದವು. ಇಲ್ಲಿಪ್ಪೋರೆಲ್ಲ ಅಂಕ್ಲ್ ಅಂಕ್ಲ್ ಹೇಳಿಗೊಂಡು ತುಂಬ ಮಾತಾದಿದವು. ಅವಕ್ಕೆ ಊರಿಂಗೆ ಹೋದರೆ ಮಾಂತ್ರ ನಮ್ಮೋರ ಕಾಂಬಲೆಡಿಗಷ್ಟೆ! ಹಾಂಗೆ ನಮ್ಮತ್ರೆ ಮಾತಾಡುಲೆ ಕೊಶಿ. ಮಕ್ಕೊಗೆ ಗುರ್ತ ಇದ್ದರೂ ಇಲ್ಲದ್ದರೂ ಎಲ್ಲಾ ನಮ್ಮೋರೇ ಹೇಳುವ ಭಾವನೆಯೊಟ್ಟಿಂಗೆ ಸೆಕೆಗಾಲದ ರಜೆಲ್ಲಿ ಮನೆಲ್ಲೇ ಕೂದು ಬೇಜಾರಪ್ಪಗ ಸಮಪ್ರಾಯದೋಟ್ಟಿಂಗೆ ಓಡಿ ಆಡುವ ಸಂಭ್ರಮ! ಉತ್ತರ ಕನ್ನಡದ ಹವ್ಯಕರೇ ಇಲ್ಲಿ ಜಾಸ್ತಿ ಆದ ಕಾರಣ ಕನ್ನಡಲ್ಲೇ ಮಾತಾಡೆಕ್ಕಾವುತ್ತಷ್ಟೇ! ಕೆನಡಾದ ಟೊರೋಂಟೋಲ್ಲಿಪ್ಪ ಎರ್ಡನೆ ಮಗನೋ  ಅವಂದ ತಮ್ಮ ಇಪ್ಪಲ್ಲಿಂಗೆ ಬಂದಿತ್ತಿದ್ದ. ಎಲ್ಲ ಒಟ್ಟಿಂಗೆ ಸಮ್ಮೇಳನಕ್ಕೆ ಹೆರಯೆಯೊ.
         ಅಮೇರಿಕಾಲ್ಲಿ ಎಲ್ಲಿಗೆ ಹೋವುತ್ತರೂ ಕಾರಿಲ್ಲಿಯೇ ಹೋಪದು.ಇಲ್ಲಿಯಾಣ ಮಾರ್ಗಂಗಳೂ ಒಳ್ಳೆದಿರುತ್ತು. ಜಿ ಪಿ ಯಸ್ ಹಾಕಿದರೆ ಎಲ್ಲಿಂದ ಎಲ್ಲಿ ವರೆಗೂ ಹ್ಫಲಕ್ಕು. ಅಂತೂ ಅಣ್ಣ ತಮ್ಮ ಇಬ್ರುದೆ ಒಟ್ಟಿಂಗೆ ಹೆರಟು ಹನ್ನೊಂದು ಗಂಟಗೆಲ್ಲ ಹೋಗಿ ಎತ್ತಿದೆಯೊ. ಒಂದು ಪಾರ್ಕಿಲ್ಲಿ ಬಂದೋರೆಲ್ಲ ಸೇರಿತ್ತಿದ್ದವು.ಆಸರಿಂಗೆ ನೀರು, ಬಚ್ಚಂಗಾಯಿ ಜ್ಯೂಸ್ ಎಲ್ಲ ಇತ್ತು. ಹೆಚ್ಚಿನೋವು ಸೇರಿದ ಮೇಲೆ ಒಬ್ಬಕ್ಕೊಬ್ಬನ ಪರಿಚಯ ಮಾಡಿಗೋಂಡತ್ತು.ಮತ್ತೆ ತಿಂಡಿ ಹಂಚೋಣ ಅವಕ್ಕವಕ್ಕೆ ಬೇಕಾದ್ದರ ತೆಕ್ಕೊಂಡು ಉಪಾಹಾರ ಮುಗಿಶಿ ಮತ್ತೆ ಮೊಸರನ್ನ ಹೀಂಗೆಲ್ಲ ಹೊಟ್ಟೆ ತಂಪು ಆದ ಮೇಲೆ ಎಲ್ಲೋರು ನಾಲ್ಕು ಗಾಂತಗೆ ಸಭಾಭವನಲ್ಲಿ ಸೇರುವದು ಪ್ರತಿನಿಧಿ ಬೇಜ್ ತೆಕ್ಕೊಂಡ ಮೇಲೆ ಉಪಾಹಾರ ಮುಗಿಶಿ ಅಪ್ಪಗ ಗಣಪತಿ ವಿಗ್ರಹವ ಪಲ್ಲಕಿಲ್ಲಿ ಕೂರುಸಿಗೊಂಡು ಮೆರವಣಿಗೆ ಒಳಂಗೆ ಪ್ರವೇಶ ಮತ್ತೆ ಪೂಜೆ ಪ್ರಾರ್ಥನೆ ಮುಗುದಮೇಲೆ ಕಾರ್ಯಕ್ರಮ ಶುರು.ಸ್ವಾಗತ ಮುಗುದ ಮೇಲೆ  ವಾರ್ಷಿಕ ವರದಿ ವಾಚನ! ಇಷ್ಟರ ವರೆಗೆ ಇನ್ನೂರು ಮುನ್ನೂರು ಆವುತ್ತಿದ್ದಲ್ಲಿ ಈ ಸರ್ತಿ ಐನೂರರಿಂದ ಮೇಲೆ ಜನಂಗೊ ಸೇರಿದ್ದು ಚರಿತ್ರೆಲ್ಲೇ ಹೊಸತ್ತಡೊ.ಇಲ್ಲಿಯಾಣ ಮಹಿಳೆ ಕನ್ನಡದ ಬಗ್ಗೆ ಸಂಶೋಧನೆ ನಡೆಸುಲೆ ಶಿಸಿಗೆ ಬಾಂದು ಇದ್ದತ್ತಡೊ! ಆಮಹಿಳೆ ಸೊವೆನೀರ್ ಉದ್ಘಾಟನೆ ಮಾಡಿದ ಮೇಲೆ,ಮನೋರಂಜನೆ ಶುರು.ಮಕ್ಕಳ ಡೇನ್ಸ್, ಕಿರುನಾಟಕ ಮಕ್ಕಳದ್ದೇ ಬಹಳ ಲಾಯಿಕ ಆಗಿತ್ತು. ಕೊಳಲು ವಾದನ,ಟೋರ್ಚ್ ಲೈಟಿನ ಬೆಳಕಿನ ಮೂಲಕ ನೆರಳು ನಾಟಕದ ಹಾಂಗೆ ಚಿತ್ರ ಬರದೂ ಒಬ್ಬ ತೋರುಸಿದ! ಇಬ್ರೂ ಬೆಂಗಳೂರಿನೊವೆ.ಮತ್ತೆ ಟೊರೊಂಟೋಂದ ಬಂದ ಹವ್ಯಕ ಬಂಡುಗೊ ಯಕ್ಷಗಾನ ರಂಗ ಕಟ್ಟಿದೋವು ಶಿವಕುಮಾರ ಚರಿತ್ರೆ ಹೇಳುವ ಯಕ್ಷಗಾನ! ಎನ್ನ ಮಗ ಪುಳ್ಳಿಯೂ ಮುಖ್ಯ ಪಾರ್ಟ್ ಮಾಡಿತ್ತಿದ್ದವು.ಇಷ್ಟಾದ ಮೇಲೆ ಅಂದ್ರಾಣ ಕಾರ್ಯಕ್ರಮ ಮುಗುತ್ತು.ಆನು ಒಬ್ಬ ಮಾತ್ರ ರೂಮಿಂಗೆ ಬಂದು ವಿಶ್ರಾಂತಿ ತೆಕ್ಕೊಂಡೆ. ಒಳುದೋವೆಲ್ಲ ಮತ್ತೆ ಬಂದವು ಅಂದ್ರಾಣ ಕಾರ್ಯಕ್ರಮ ಹೀಂಗೆ ಮುಗುತ್ತು. ಎಲ್ಲೆಲ್ಲಿಂದಲೋ ಬ<ದೋರ ಪರಿಚಯ ಆದ್ದು ಕೊಶಿ ಆತು .ಒಳ್ಳೆ ಒರಕ್ಕು.
  ಮರದಿನ ಉದಿಯಪ್ಪಗ ಒಳುದೋವು ಏಳುವಗ ಎಂಗಳ ಮೀಯಾಣ ಕೂಡ ಮುಗುದ್ದು. ಎಂಗೊ ಕೆಳ ಹೋಗಿ ಬ್ರಾಕ್ ಫಾಸ್ಟಿಂಗೆ ಹೋದೆಯೊ.ಸೀರಿಯಲ್,ಇಡ್ಲಿ ಚಟ್ಣಿ, ಬ್ರೆಡ್ ಹಾಲು ಚಾ ಎಲ್ಲ ಸಿಕ್ಕಿತು ಒಟ್ಟಿಂಗೆ ಹಣ್ಣುಗೊ ಬಾಳೆ ಹಣ್ಣು ಏಪ್ಲ್,ಬಚ್ಚಂಗಾಯಿ ಎಲ್ಲ ಇತ್ತು. ಮತ್ತೆ ಸಮ್ಮೇಳನಕ್ಕೆತ್ತಿಯಪ್ಪಗ ಇಡ್ಲಿ ಚಪಾತಿ ಕ್ಶೀರ್ ಇದ್ದಲ್ಲಿ ಕ್ಶೀರ ಮಾಂತ್ರ ಹೊಟ್ಟಗೆ ಸೇರಿತ್ತು ಅಲ್ಲಿ ಶಿವಪೂಜೆ ಎಲ್ಲೋರು ಒಟ್ಟಿಂಗೆ ರುದ್ರ ಹೇಳಿ ಅಭಿಷೇಕ ಮುಗುದು ಪೂಜೆ ಆಗಿ  ಮತ್ತೆ ಸಂಗೀತ ಕೊಳಲು ವಾದನ ಎಲ್ಲ ಮುಗುದು ಮಧ್ಯಾಹ್ನದ ಊಟ. ಮತ್ತೆ ರಜ ವಿಶ್ರಾಂತಿ ಕಳುದು ಗೄಪ್ ಡೇನ್ಸ್, ಹೀಂಗೆಲ್ಲ ಕಳುದು, ಮತ್ತೆ ಜೂನಿಯರ್ ಶಂಕರ್ ಮೇಜಿಕ್ ಶೋ. ಅದಾದ ಮೇಲೆ ಸಮೂಹ ಗಾನ, ಕುಣಿತ ಎಲ್ಲ ಕಳಿವಗ ರಾತ್ರೆ ೧೦ ಗಂಟೆ ಕಳುತ್ತು.ಎಡೆಲ್ಲಿ ಪುರುಸೊತ್ತು ಅಪ್ಪಗ ಊಟ ಮುಗಿಶಿಗೊಂಡತ್ತು..ಮತ್ತೆ ಎಲ್ಲೋರು ಸೇರಿಗೊಂಡು ಅಮೇರಿಕಾದ ಸ್ವಾತಂತ್ರ್ಯ ದಿನದ ಲೆಕ್ಕಲ್ಲೂ ಆತು ಕೊಶಿಲ್ಲಿ ಕೊಣುದ್ದೂ ಆತು, ಪಟಾಕಿ ಹೊಟ್ಟುಸಿಯೂ ಆತು ರೂಮಿಂಗೆ ಬಂದು ಮನುಗುವಗ ೧೧ ಗಂಟೆ ಉದ್ದಿಯಪ್ಪಗ ಮಿಂದು ಬ್ರೇಕ್ ಫಾಸ್ಟಿಂಗೆ ಬಂದಿಪ್ಪಗ ಜೂನಿಯ ಶಂಕರನೂ ಇತ್ತಿದ್ದ. ಅವನ ಭಾವಂದ್ರು ಎನ್ನ ಶಿಷ್ಯಕ್ಕೊ ಹೇಳಿ ಪರಿಚಯ ಅಪ್ಪಗ ಒಟ್ಟಿಂಗೆ ಫೊಟೊ ತೆಗದೂ ಆತು. ಅಲ್ಲಿಂದ ಹೆರಟು ಊರಿಂ ಹೇಳಿದರೆ ಮಗನ ಮನಗೆತ್ತುವಗ  ದಾರಿಲ್ಲಿ ಬಾಲ್ಟಿಮೋರಿನ ಬಂದರಿನ ಹತ್ತರೆ ಮಧ್ಯಾಹ್ನದ ಊಟವೂ ಊಟ ಮಾಡಿತ್ತು. ಹೊತ್ತೋಪಗ ೬ ಗಂತಗೆ ಮಗನ ಮನಗೆತ್ತಿತ್ತು/.
.

ktagalu

                 ವಿದೇಶಗಳಲ್ಲಿ ಕೂಟಗಳು
             ಉದ್ಯೋಗಾಕಾಂಕ್ಷಿಗಳಾಗಿ ಸ್ವದೇಶ ಬಿಟ್ಟು ಹೋಗಿರುವ ಭಾರತೀಯರು ಸ್ವಂತ ಮನೆ ಂಡಿಕೊಂಡು ಸಂಸಾರ ಸಾಗಿಸುತ್ತಿರುತ್ತಾರೆ, ವಾರದ ಐದೂ ದಿನಗಳಲ್ಲಿ ಕೆಲಸವಿರುವುದರಿಂದ ಅವರೆಲ್ಲ ತುಂಬ ಬಿಸಿಯಾಗಿದ್ದರೆ ವಾರದ ರಜೆಗಳಲ್ಲಿ ಅವರಿಗೆ ಮನೆವಾರ್ತೆಗೆ ಸಂಬಂಧಿಸಿದ ಕೆಲಸಗಳು! ಮಕ್ಕಳಿಗೆ ಹೆಚ್ಚಿನ ಮನೆಪಾಠಗಳು. ಬೇರೆ ಕಡೆಗಳಿಗೆ ಕರಕೊಂಡು ಹೋಗುವುದು, ಮತ್ತೆ ದಿನಾ ದೇವರನ್ನು ಮನಸ್ಸಿನಲ್ಲೇ ನೆನಸುವುದಾದರೆ ಈ ಎರಡು ದಿನಗಳಲ್ಲಿ ದೇವರ ಆರಾಧನೆಗೆಂದೇ ನಿರ್ಮಿಸಿದ ದೇವಸ್ಥಾನಗಳಿಗೆ ಹೋಗುವುದು,ಮಕ್ಕಳ ಜನ್ಮ ದಿನಗಳನ್ನು ಆಚರಿಸುವುದು, ಮತ್ತೆ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗುವುದು. ಅಂದರೆ  ಹೀಗೆ ಹೊರಗೆ ಹೋದರೆ ಮಕ್ಕಳಿಗೂ ದೇಶದ ಪರಿಚಯದೊಂದಿಗೆ ಶಿಷ್ಟಾಚಾರದ ಪರಿಚಯ- ಹೀಗೆಲ್ಲ. ಒಟ್ಟಾಗಿ ಎಲ್ಲಾ ದಿನಗಳಲ್ಲಿಯೂ ಜನರು ಯಾವಾಗಲೂ ಅವರವರ ಕೆಲಸದಲ್ಲಿಯೇ ತಲ್ಲೀನರಾಗಿರುತ್ತಾರೆ.ಮಕ್ಕಳಂತೂ ಬಾಯಿಗೆ ತುರುಕಿದರೆ ಮಾತ್ರ ಹೊಟ್ಟೆ ತುಂಬಿದರೂ ಗೊತ್ತಾಗದವರು!.ಎಲ್ಲ ತಂದೆ ತಾಯಿಯೇ ತಿನ್ನಿಸಿದರೆ ಮಾತ್ರ ಅವರ ಹೊಟ್ಟೆ ತುಂಬಿಸಿದ ಸಮಾಧಾನ ಹೆತ್ತವರಿಗೆ,.ಆಟಗಳಲ್ಲಿ ಮಗ್ನರಾದರೆ ಮಕ್ಕಳಿಗೆ ಬೇರೆ ಯಾವುದೂ ಬೇಡ. ಹೊಟ್ಟೆ ಹಸಿಯುತ್ತದೋ ಇಲ್ಲವೋ ಎಂಬುದನ್ನು ಅಪ್ಪ ಅಮ್ಮಂದಿರೇ ನೋಡಿಕೊಳ್ಳಬೇಕು. ಇಷ್ಟವಾದುದನ್ನು ಅಂದರೆ ಸೀರಿಯಲ್ಸ್ ಕೆಲವರು ತಿನ್ನುತಾರೆ. ಜಂಕ್ ಫುಡ್ ಮಾತ್ರ ಅವರೇ ಕೇಳಿ ತಿನ್ನುತ್ತಾರೆ. ಅಂತೂ ಶಾಲೆಗೆ ಮಕ್ಕಳನ್ನು ಕಳಿಸುವುದೆಂದರೆ ಬೆಳಿಗ್ಗೆ ತಾವು ಹೊರಡುದರೊಂದಿಗೆ ಅವರನ್ನೂ ತಿಂಡಿ ತಿನ್ನಿಸಿ. ಉಡುಗೆ ತೊಡಿಸಿ ಕರಕೊಂಡು ಹೋಗುವುದು. ದೊಡ್ಡ ಮಕ್ಕಳಾದರೆ ಬಸ್ಸಿನವರೆಗೆ ಕರಕೊಂಡು ಹೋಗಿ ಬಿಡುವುದು ಅಥವಾ ಶಾಲೆಗೇ ಕೊಂಡು ಹೋಗಿ ಬಿಡುವುದು ಹೀಗೆಲ್ಲ ಬೆಳಗ್ಗೆ ಏಳುವುದರೊಂದಿಗೆ ಬಿಸಿ ಶುರುವಾಗುತ್ತದೆ.
ಹೀಗೆ ಮಕ್ಕಳನ್ನು ಹೊರಡಿಸಿ ಕೆಲಸಕ್ಕೆಂದು ಹೊರಟರೆ ಸ್ವಂತ ವಾಹನಗಳಾದರೂ ಹೈವೇಗಳಲ್ಲಿ ವಾಹನಗಳ ಜಾಥಾ ಇರುತ್ತದೆ. ಎಲ್ಲಾ ಕೆಲಸದವರೂ ಹೊರಡುವ ಸಮಯ ಒಂದೇ ಆಗಿರುವುದರಿಂದ ದಾರಿಯುದ್ದಕ್ಕೂ ವಾಹನಗಳು! ಕಾಲು ಗಂಟೆಯಲ್ಲಿ ತಲಪಬಹುದಾದ ದೂರ ತಲುಪಲು ಕನಿಷ್ಠ ಮುಕ್ಕಾಲು ಗಂಟೆ ಬೇಕು!ಅಂತೂ ಆಫೀಸ್ ಬೇಗ ತಲುಪದಿದ್ದರೆ ತಮ್ಮ ವಾಹನಗಳನ್ನು ಪಾರ್ಕ್ ಮಾಡಲುಬಹಳ ದೂರ ನಿಲ್ಲಿಸಬೇಕಾಗಬಹುದು.ಹಾಗೆ ದೂರವಿಟ್ಟರೆ ಹಿಂದಿರುಗುವಾಗಲೂ ಆ ದೂರವನ್ನು ನಡೆದೇ ಬರಬೇಕು. ಎಂಟು ಗಂಟೆಯಷ್ಟು ಕೆಲಸವಾದರೂ ಕೊಟ್ಟ ಕೆಲಸ ಪ್ಪ್ರೊಜೆಕ್ಟುಗಳನ್ನು ಸಮಯಕ್ಕೆ ಒಪ್ಪಿಸಬೇಕು. ಹೆಚ್ಚು ಕಡಿಮೆಯಾಗಕೂಡದು.ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದೆಂದರೆ ಈ ಜನರಿಗೆ ಬಹಳ ಕಷ್ಟವೆನಿಸುವುದಾರೂ ಇವುಗಳನ್ನು ಮರೆಯಲೋ ಎಂಬಂತೆ ಹಾಗೂ ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿಗಳ ಅನುಭವಕ್ಕಾಗಿಯೂ, ಪರಸ್ಪರರ ಭೇಟಿಗಾಗಿಯೂ ಈ ಕೂಟಗಳನ್ನು ಏರ್ಪಡಿಸುತ್ತಾರೆ ಎಂದು ಹೇಳಬಹುದು.ಭಾರತೀಯ ಹಬ್ಬಗಳನ್ನೂ ಹೀಗೆ ಆಚರಿಸುತ್ತಾರೆ.
                     ಹುಟ್ಟು ಹಬ್ಬ , ಇತರ ಹಬ್ಬಗಳೊಂದಿಗೆ ಏನಾದರೂ ಕಾರಣ ಇಟ್ಟುಕೊಂಡು ನಡೆಸುವ ಇಂತಹ ಕೂಟಗಳು ಒಂದು ಕಡೆ ಸೇರಿ ಪರಸ್ಪರ ವಿಚಾರವಿನಿಮಯ ಮಾಡಿಕೊಳ್ಳುವ ಚಾವಡಿಯೂ ಆಗಬಹುದು. ಹೆಚ್ಚಾಗಿ ಯುವಕ ಯುವತಿಯರು ಒಟ್ಟುಗೂಡಿ ಹೀಗೆ ವಾರದ ಕೊನೆಗಳಲ್ಲಿ ಕೂಟಗಳನ್ನೇರ್ಪಡಿಸುವಾಗ ಮಕ್ಕಳಿಗೂ ಒಬ್ಬರಿಗೊಬ್ಬರು ಒಟ್ಟು ಸೇರಿ ಆಟವಾಡಿ ಸಂತೋಷಪಡಲು ಇಂತಹ ಕೂಟಗಳು ಅನುಕೂಲವಾಗುತ್ತದೆ. ವಾರದ ಕೆಲಸ ಮಾಡಿ ಬೇಸರ ಕಳೆಯಲು ಈ ಬಿಡು ದಿನಗಳು ಸಹಾಯಕ. ಊರು ದೇಶಗಳನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಬಂದವರಿಗೆ ಸ್ವಲ್ಪ ಬೇಸರ ಕಳೆಯಲು ಈ ಕೂಟಗಳು ಅನುಕೂಲವಾಗುತ್ತದೆ.
ಹುಟ್ಟು ಹಬ್ಬಗಳು ಹೆಚ್ಚಾಗಿ ಚಕ್ ಇ ಚೀಸ್ ನಲ್ಲಿ ,ಕೆಲವು ಇಂತಹ ಸಮಾರಂಭ ಏರ್ಪಡಿಸಲೆಂದೇ ಇರುವ ಹಾಲ್ ಗಳಲ್ಲಿ, ಅಥವಾ ಕೆಲವ ತಮ್ಮ ಮನೆಗಳಲ್ಲಿಯೇ ಏರ್ಪಡಿಸುತ್ತಾರೆ. ಇದಕ್ಕಾಗಿ ಸಾವಿರಾರು ಡಾಲರ್ ಖರ್ಚು ಮಾಡುವವರು ಇದ್ದಾರೆ. ಸುಲಭದಲ್ಲಿ ಇನ್ನು ಕೆಲವು ಪಾರ್ಕಗಳಲ್ಲಿ ಏರ್ಪಡಿಸಿದರೆ ಮಕ್ಕಳಿಗೇ ಆಡಲು ಅನುಕೂಲ!ಬಂದ ಮಕ್ಕಳಿಗೆ ಒಂದಿಷ್ಟು ಜ್ಯೂಸ್ ಮತ್ತೆ ಸ್ನೇಕ್ಸ್ ಗಳನ್ನು ಕೊಟ್ಟರೆ ಅವರ ಮನಸ್ಸು ಆಟಕ್ಕೆರ್ ಹೋಯಿತೆಂದರೆ ಮತ್ತೆ ಕೂಟಗಳಲ್ಲಿಯ ಊಟ ಅವರಿಗೆ ಬೇಕಾಗುವುದಿಲ್ಲ. ಮತ್ತೆ ಪಿಸ್ಸ ಇದ್ದರೆ ಅದನ್ನು ತಿಂದು ಜ್ಯೂಸ್ ಕುಡಿಯುತ್ತಾರೆ. ದೊಡ್ಡವರು ಸ್ನೇಕ್ಸ್ ತಿಂದ ಮೇಲೆ ಕೇಕ್ ಕಟ್ ಮಾಡುವುದು.ಎಲ್ಲರೂಬಂದ ಮೇಲೆ ಊಟ ನಡೆಯುತ್ತದೆ. ಹೆಚ್ಚಾಗಿ ಸಂಜೆಯೇ ನಡೆಯುವ ಕಾರಣ ಎಲ್ಲ ಮನೆಗೆ ತಲಪುವಾಗ ರಾತ್ರೆ ಹನ್ನೊಂದು ಅಥವಾ ಕೆಲವೊಮ್ಮೆ ಹನ್ನೆರಡು ಗಂಟೆಯಾದರೂ ಮಲಗಿ ನಿದ್ದೆ ಹೋದವರಿಗೆ ಮರುದಿನ ಕೆಲಸವಿಲ್ಲವಾದುದರಿಂದ ಬೆಳಿಗ್ಗೆ ಏಳುವಾಗ ಕಡಿಮೆಯೆಂದರೂ ಏಳು ಗಂಟೆಯಾಗುತ್ತದೆ.ಮಕ್ಕಳಿಗೂ ಅಷ್ಟೆ ಆಡಿ ಸುಸ್ತಾಗಿರುವುದರಿಂದ ಎಂಟು ಗಂಟೆಯ ವರೆಗೂ ಏಳುವುದಿಲ್ಲ.
ಇನ್ನು ದೀಪಳಿ ದಸರಾ, ಚೌತಿ ಹೀಗೆ  ಹಬ್ಬಗಳನ್ನು ಆಚರಿಸುವುದರಿಂದ ಮಕ್ಕಳಿಗೂ ಸ್ವಲ್ಪ ನಮ್ಮ ಪುರಾತನ ಸಂಸ್ಕೃತಿಗಳ ನೆನಪಾಗುತ್ತದೆ. ಊರಿನಲ್ಲಿರುವಾಗ ಪಟಾಕಿ ಸಿಡಿಮದ್ದುಗಳನ್ನು ಅಂಗಡಿಯಿಂದ ತಂದರೆ ದೀಪಾವಲಿ ಆಚರಣೆ ಮಕ್ಕಳಿಗೆ ಖುಶಿಯಾಉತ್ತದೆ.ಹೀಗೆ ಒಬ್ಬೊಬ್ಬರ ಸ್ವಂತ ಖರ್ಚಲ್ಲದೆ "ಪೋಡ್ಲೋಕ್" ಎಂತ ಒಬ್ಬೊಬ್ಬರು ಪರಸ್ಪರ ಮೊದಲೇ ಮಾತಾಡಿಕೊಂಡಂತೆ(ಅವರವರ ಮನೆಯಲ್ಲಿ ತಯಾರಿಸಿಕೊಂಡ ಮೊಸರನ್ನ, ಪುಳಿಯೋಗರೆ, ಪಾಯಸ, ಸ್ವೀಟ್, ಸಾಂಬಾರು, ಮೇಲೋಗರ ಹೀಗೆ ಒಂದೊಂದು ಪದಾರ್ಥಗಳನ್ನು ತಾವು ತರುತ್ತೇವೆ ಎಂದು ಒಪ್ಪಿಕೊಂಡಂತೆ ಬರುವಾಗ ತರುತ್ತಾರೆ. ಒಟ್ಟಾರೆ ಹನಿ ಕೂಡಿ ಹಳ್ಳವೆಂಬಂತೆ ಭರ್ಜರಿ ಊಟವಾದ ಮೇಲೆ ಮಿಕ್ಕುಳಿದುದನ್ನೂ ಪರಸ್ಪರ ಹಂಚಿಕೊಂಡು ವಿನಿಮಯ ಮಾಡಿಕೊಳ್ಳುತ್ತಾರೆ. ಇಲ್ಲಿ ಹೆಂಗುಸರು ಒಳಗೆ ಅಸೇರಿಕೊಂಡು ಅವರವರು ತಯಾರಿಸಿ ತಂದ ಪದಾರ್ಥಗಳ ಬಗ್ಗೆ ಪರಸ್ಪರ ಏನು ಹೇಗೆ ಎಂದೆಲ್ಲ ವಿಚಾರ ವಿಮರ್ಷೆ ಮಾಡುತ್ತಿದ್ದರೆ ಹೊರಗೆ ಗಂಡುಸರು ಬೇರೆ ರಾಜಕೀಯ ಅಥವಾ ಊರ ಸುದ್ದಿಗಳನ್ನು, ಕೆಲಸದ ಬಗ್ಗೆ ಮಾತಾಡಿಕೊಂಡಿರುತ್ತಾರೆ ಹೀಗೆ ಕೂಡಿ ಬಾಳಿದರೆ ಸ್ವರ್ಗ ಸುಖವೆಂಬಂತೆ ಸರಹದ್ದಿನಲ್ಲಿರುವವರು ಒಟ್ಟುಗೂಡುವ  ಕೂಟಗಳೇ ಇಲ್ಲಿ ನಡೆಯುವ ಕೂಟಗಳು. ಒಟ್ಟಾಗಿ ಊಟ ಮಾಡುವ ಕೂಟಕ್ಕೆ ಹೀಗೊಂದು ವ್ಯವಸ್ಥೆ! ಜನ್ಮದಿನಗಲ್ಲಾದರೆ ಕರೆದವನೆ ಎಲ್ಲ ಏರ್ಪಾಡು ಮಾಡುತ್ತಾನೆ. ಪೂಜೆ ವಗೈರೆಗಳಲ್ಲಿಯೂ ಕರೆದವನೇ ಏರ್ಪಾಡು ಮಾಡುತ್ತಾನೆ. ಮನೆಯಲ್ಲೇ ತಯಾರು ಮಾಡಲಾಗದುದನ್ನು ಹೋಟೆಲುಗಳಿಂದ ತರಿಸುತ್ತಾರೆ. ಚಪಾತಿ ಕೂಡ ತಯಾರಿಸಿಟ್ಟದ್ದನ್ನು ತಂದು ಆಗಲೇ ಬೇಯಿಸಲು ಬಂದವರು ಸಹಕರಿಸುತ್ತಾರೆ. ಒಟ್ಟಿನಲ್ಲಿ ಭರ್ಜರಿ ಊಟ ನಡೆಯುತ್ತದೆ. ಸ್ವದೇಶದಿಂದ ಮಕ್ಕಳನ್ನು ನೋಡ ಬರುವ ಹಿರಿಯರೂ ಪಾಲ್ಗೊಳ್ಳುತ್ತಾರೆ. ಹೀಗೆ ನಮ್ಮಂತಹ ಹಿರಿಯರನ್ನು ಕರೆಯಲೂ ಮರೆಯುವುದಿಲ್ಲ. ಕೆಲವರು ವಿಶೇಶ ಅಡಿಗೆಗಳನ್ನು ಹೋಟೆಲಿನಿಂದ ತರಿಸಿಕೊಳ್ಳುತ್ತಾರೆ. ಮಿಕ್ಕುಳಿದುದನ್ನೂ ಬಂದವರಿಗೆ ಹಂಚುತ್ತಾರೆ. ಒಟ್ಟಾರೆ ಈ ಕೂಟಗಳಲ್ಲಿ ವಾರದ ಏಕತಾನತೆಯನ್ನು ಹೀಗೆ ಮರೆಯುತ್ತಾರೆ. ಸೋಮವಾರ ಬಂದೊಡನೆ ಗಾಣದ ಎತ್ತಿನಂತೆ ದುಡಿಯುವವರಿಗೆ ಒಂದು ಸ್ವಲ್ಪ ಆರಾಮವಾಗಿರುವ ಕಾಲ. ಊಟ ಮುಗಿಸಿ ಹೊರಡುವಾಗ ಗಂಟೆ ರಾತ್ರೆ ಹನ್ನೆರಡಾದರು ಆಗ್ಬಹುದು. ಶನಿವಾರವೇ ಇದಕ್ಕೆ ಸೂಕ್ತವೆಂದು ಮರುದಿನ ಬೆಳಿಗ್ಗೆ ಹಾಯಾಗಿ ಎಂಟು ಗಂಟೆಯ ವರೆಗೂ ಎಲ್ಲವನ್ನೂ ಮರೆತು ನಿದ್ರಾಲೋಕದಲ್ಲಿ ವಿಹರಿಸುವುದೂ ಇವರ ಹವ್ಯಾಸ ವಲ್ಲ ಕೆಲಸ ಕಾರ್ಯಗಳ ನಂತರ ಪಡೆಯುವ ವಿರಾಮ್!
ಈ ಕೂಟಗಳಲ್ಲಿಯೂ ಹಲವು ವಿಧ . ಹಬ್ಬದ ಕೂಟಗಳನ್ನೂ ಪ್ರಾದೇಶಿಕ ಲೆಕ್ಕದಲ್ಲಿ  ಯೂ ಇಡೀ ಉತ್ತರ ಅಮೇರಿಕ ಖಂಡಕ್ಕೂ ವಿಸ್ತಾರಗೊಳ್ಳುತ್ತದೆ  ಬೇರೆ ಬೇರೆಭಾಷೆಗಳನ್ನಾಡುವ ಜನರು ಆಯಾ ಭಾಷೆಯ ಹೆಸರಿನಲ್ಲಿ ಕೂಟ ಏರ್ಪಡಿಸುವುದೂ ಇದೆ. ವಿಭಾಗವಾಗಿ,  ಕೆಲವು ಮತ ವಿಭಾಗದವರು ಒಂದಾಗಿ ನಡೆಸುವುದೂ ಇದೆ. ಉದಾ: ವರ ಮಹಾಲಕ್ಷ್ಮಿ ವ್ರತ, ತುಳಸಿ ಹಬ್ಬ ಹೀಗೆಲ್ಲ. ಇನ್ನು ಅರಸಿನ ಕುಂಕುಮ ಎಂದು ಹೆಂಗುಸರನ್ನು ಕರೆಯುವುದು ಅವರಿಗೆ ಬಾಗಿನ ಕೊಡುವುದು ಕೂಡಾ  ಇರುತ್ತದೆ. ಮಕ್ಕಳೂ ಜೊತೆಗೆ  ಅಮ್ಮಂದಿರ ಜೊತೆಗೆ ಬಂದರಾಗುತ್ತದೆ. ಆದರೆ ಗಂಡುಸರಿಗೆ ಕರೆಯಿರುವುದಿಲ್ಲ. ಕೂಡಾ ಆಚರಿಸುತ್ತಾರೆ. ದಕ್ಷಿಣದ ಕಡೆಯಲ್ಲಿ ಹಿಂದುಗಳೆಲ್ಲ ಒಂದು ದೇವಸ್ಥಾನಗಳಲ್ಲಿ ಕೂಡುವುದಾದರೆ ಬೇರೆ ಬೇರೆ ಸಬ್ ಡಿವಿಜನ್ ಗಳಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳ ,ಕನ್ನಡ ಭಾಷೆಗಳಣ್ಣಾಡುವವರು ಒಟ್ಟು ಸೇರುತ್ತಾರೆ .ಭಾರತೇಯರು ಹಿಂದಿ ರಾಷ್ಟ್ರ ಭಾಷೆಯಾದುದರಿಂದ ಭಾರತೇಯಸ್ರೆಲ್ಲ ಒಟ್ಟು ಸೇರುವುದೂ. ಇದೆ.ಭಾಷಾಭಿಮಾನಿಗಳು  ಜಾತ್ಯಭಿಮಾನಿಗಳು ಸೇರುವುದೂ ಇದೆ. ಎಲ್ಲ ದೈನಂದಿನ ಬದುಕಿನ ಜಂಜಾಟದಿಂದ ಮುಕ್ತಿ ಪಡೆಯುವುದಕ್ಕೆ ತಿದುಕೊಂಡ ಕೂಟಗಳು. ಸರಹದ್ದಿನ ಎಲ್ಲ ಕೂಟಗಳಲ್ಲಿ ಭಾಗವಹಿಸುವವರೂ ಇದ್ದಾರೆ. ಇನ್ನು ವಿವಿಧ ಆಟಗಳ ಪ್ರೇಮಿಗಳು,ಬೈಕ್ ರೈಡ್ ಮಾಡುವಸ್ನೇಹಿತರ ಕೂಟಗಳೂ ನಡೆಯುವುದಿದೆ.
ವಾಶಿಂಗ್ ಅನ್ ನಲ್ಲಿ ಒಂದು ಹವ್ಯಕ ಕೂಟಕ್ಕೆ ಹೋದತ್ರ್ ಅಮೇರಿಕದ ವಿವಿಧೆಡೆಗಳಿಂದ ಬಂದ ಬಂಧುಗಳು ಒಟ್ಟು ಸೇರಿ ಒಗ್ಗಟ್ಟನ್ನು ಅಲ್ಲ ಇಲ್ಲಿ ಮ್ನಮ್ಮತನವನ್ನು ತೋರಿಸುವುದಕ್ಕೋ ಎಂಬಂತೆ ಒಟ್ಟು ಸೇರುತ್ತಾರೆ.ಬಂಧುಗಳನ್ನೆಲ್ಲ ಒಂದು ಸೇರಿಸುವ ಒಟ್ಟಾಗಿ ಆಡಿ ನಲಿಯುವ, ಆ ನಲಿವಿನಲ್ಲಿ ಆನಂದಗೊಳ್ಳುವ ಇಲ್ಲಿಯ ನಿವಾಸಿಗಳನ್ನು ನೋಡುವಾಗ ಬದುಕನ್ನು ಹೀಗೆ ಒಟ್ಟಾಗಿ ಸಾಗಿಸುವ, ಒಟ್ಟಾಗಿ ಬೆರೆಯುವ  ಕೂಟಗಳನ್ನು ನೋಡುವಾಗ ಇಲ್ಲಿ ವಾಸಿಸುವವರ ಮೇಲೆ ಹೆಮ್ಮೆಯೆನಿಸುತ್ತದೆ.ಒಟ್ಟಿನಲ್ಲಿ ಐಕ್ಯತೆಯನ್ನು ಒಗ್ಗಟ್ಟನ್ನು ತೋರಿಸುವ ಇವರ ಮನೋಭಾವ ನೋಶ್ಡುವುದೂ ನಮಗೂ ಹೆಮ್ಮೆಯಲ್ಲವೇ!ಅಂತೂ ವಿದೇಶದಲ್ಲಿ ಊರಿನಿಂದ ದೂರದಲ್ಲಿದ್ದರೂ ಸಣ್ಣ ಪ್ರಾಯದ ಹೆಂಳೆಯರು ಈ ಸಮಾರಂಭಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ.

Friday, May 3, 2013

vyavaharada korate

                      ವ್ಯವಹಾರ ಜ್ಞಾನದ ಕೊರತೆಯೋ ಅಲ್ಲ ಅವ್ಯವಸ್ತೆಯೋ?                                                                                                                                                                                              ಅಂದು ಮನೆಗೆ ಬಂದೆತ್ತುವಗ ಪೋಸ್ಟ್ ಆಫಿಸಿನ ಒಂದು ಚೀಟಿ ಕಂಡತ್ತು. ಎನ್ನ ಹೆಸರಿಲ್ಲಿ ಒಂದು ರಿಜಿಸ್ತ್ರಿ ಇದ್ದು, ಓಫೀಸಿಂಗೆ ಹೋಗಿ ಅದರ ತೆಕ್ಕೊಳ್ಳೆಕ್ಕು ಹೇಳಿ ಇತ್ತು. ಈಗ ಅವು ಮನೆಗೆ ತಂದು ಕೊಡುಲೆ ಇಲ್ಲೆನ್ನೆ!.ಸರಿ ಮರದಿನ ಉದಿಯಪ್ಪಗ ಪೋಸ್ಟ್ ಓಫಿಸಿಂಗೆ ಎನ್ನ ಸವಾರಿ ಹೋತು.ಪೋಸ್ಟ್ ಮಾಸ್ಟ್ರನತ್ರೆ ಕೇಳಿದೆ. ಅವ ಒಂದು ದೊಡ್ಡ ಕವರು ತೋರುಸಿ, ಎಕ್ನೋಲೆಜ್ ಮೆಂಟಿಂಗೆ ದಸ್ಕತು ತೆಕ್ಕೊಂಡು ಕವರಿನ ಕೊಟ್ಟ. ಕವರು ತೆರದು ನೋಡುವಗ ಸ್ಟೇಟ್ ಬೇಂಕಿಂದ ಕಳಿಸಿಕೊಟ್ಟ ಚೆಕ್ ಪುಸ್ತಕ! ಮದಲೊಂದರಿ ಬೇಂಕಿಂಗೆ ಹೋಗಿಪ್ಪಗ ಚೆಕ್ ಪುಸ್ತಕ ಬೇಕೋ ಕೇಳಿತ್ತಿದ್ದವು.ಬೇರೆ ಸಿಂಡಿಕೇಟ್ ಬೇಂಕಿಲ್ಲಿ ಎನ್ನ ಎಕೌಂಟ್ ಇದ್ದು. ಅಲ್ಲಿ ಚೆಕ್ ಪುಸ್ತಕಕ್ಕೆ ಬೇರೆ ಪೈಸೆ ತೆಕ್ಕೊಂಬಲಿಲ್ಲೆನ್ನೆ!.ಸರಿ ಒಂದು ಪುಸ್ತಕ ಕೊಡಿ ಹೇಳಿದೆ. ಪುಸ್ತಕ ಬೇಕು ಹೇಳಿದರೆ ಎಂಗೊ ಚೆನ್ನೈಂದ ತರುಸೆಕ್ಕಸ್ಟೆ.ಎಂಗೊ ಅಲ್ಲಿಗೆ ಬರಕ್ಕೊಂಡರೆ ಅವು ನಿಂಗಳ ಮನಗೇ ಕಳಿಸಿ ಕೊಡುತ್ತವು,ಹೇಳಿದವು.ಅಂದು ಎನಗೆ ಸಿಕ್ಕಿದ ಪುಸ್ತಕ ಚೆನ್ನೈಂದಲೇ ಬಂದದು! ಇಷ್ಟು ಜಾಗ್ರತೆ ಇದ್ದೋ ಹೇಳಿ ಆಶ್ಚರ್ಯ ಆತು. ಆಗಲಿ ಮನೆಗೇ ಕಳುಸಿದವನ್ನೇ.ಒಳ್ಳೆದಾತು ಹೇಳಿ ಗ್ರೇಶಿದೆ.
ಆನು ಹೆಚ್ಚಾಗಿ ಏ ಟಿ ಯಂ ದಲೇ ಹಣ ತೆಕ್ಕೊಂಬದು. ಸ್ಟೇಟ್ ಬೇಂಕಿಂಗೆ ಹೋಪದು. ಅಲ್ಲಿ ಕ್ಯೂ ನಿಂದು ಕಾದು ಕೂಪದಕ್ಕೆ ಅವೇ ಮಾಡಿದ ಅನುಕೂಲತೆ ಅಲ್ಲದೋ ಈ ಸವಲತ್ತು! ಒಂದು ವರ್ಷ ಕಳುದ್ದು. ಆನು ಎಡೆಲ್ಲಿ ಬೇಂಕಿಂಗೆ ಹೋಯಿದೇ ಇಲ್ಲೆ.ಒಂದರಿ ಪಾಸ್ ಪುಸ್ತಕ ತೆಕ್ಕೊಂಡು ಪುಸ್ತಕಲ್ಲಿ ಲೆಕ್ಕ ಎಂಟರ್ ಮಾಡಿಸಿಗೊಳ್ಳೆಕ್ಕು ಹೇಳಿ ಬೇಂಕಿಂಗೆ ಹೋದೆ. ಎಕೌಂಟಿಲ್ಲಿ ಹಣ ಎಶ್ಟಿದ್ದು ಹೇಳಿ ಗೊಂತಪ್ಪದು ಮತ್ತೆಯೇ ಅಲ್ಲದೋ ಗೊಂತಪ್ಪದು! ಪುಸ್ತಕ ಕೊಟ್ಟಪ್ಪಗ ಅಲ್ಲಿದ್ದ ಗುಮಾಸ್ತ ನಿಂಗಳ ಲೆಕ್ಕಲ್ಲಿ ಹಣ ಏನೂ ಒಳಿಯದ್ದ ಕಾರಣ, ಲೆಕ್ಕವ ಕ್ಲೋಸ್ ಮಾಡಿಗೊ<ಡಿದ್ದು. ಮಿನಿಮಮ್ ಇಲ್ಲದ್ದಕ್ಕೆ ಲೆಕ್ಕ ಕ್ಲೋಸ್ ಆಯಿದು ಹೇಳಿದವು. ಏಕಪ್ಪ ಹಾಂಗಾತು ಹೇಳಿ ಎನಗೆ ಆಶ್ಚರ್ಯ. ಎನ್ನ ಬಾಯಿ ಲೆಕ್ಕಲ್ಲಿ ಅವರ ಮಿನಿಮಮ್ ಹಣ ಒಂದು ಸಾವಿರಕ್ಕಿಂತ ಹೆಚ್ಚು ಇರೆಕ್ಕಾತು. ಏಕೆ ಹೀಂಗಾತಪ್ಪ ಹೇಳಿ ಆಶ್ಚರ್ಯ ಆತು. ಕೇಳಿದೆ. ಅವು ಲೆಕ್ಕ ತೋರುಸಿದವು.
         ಏ ಟ್ ಯಂ ಕಾರ್ಡಿನ ಲೆಕ್ಕಲ್ಲಿ ಹಣ ಕಳೆತ್ತವು ಹೇಳಿ ಗೊಂತಾದ್ದು ಅಂಬಗ ಎನಗೆ! ಮಾಂತ್ರ ಅಲ್ಲ ಚೆಕ್ ಪುಸ್ತಕಕ್ಕೂ ಹಣ ಕಳೆತ್ತವು ಹೇಳುವದು ಆ ಮೇಲೆ ಗೊಂತಾತು .ಹೀಂಗೆಲ್ಲ ಮಾಡಿ ಮಿನಿಮಮ್ ಇಲ್ಲೆ ಹೇಳಿ ಮಾಡ್ತ್ತಿದ್ದವು. ಮತ್ತೆ ತಿಂಗಳಿಂಗೊಂದರಿ ಮಿನಿಮಮ್ ಇಲ್ಲದ್ದ ಲೆಕ್ಕಲ್ಲಿ ಲೆಕ್ಕಲ್ಲಿದ್ದ ಹಣಂದಲೇ ಕಳದವು. ಅಂತೂ ಹೀಂಗೆಲ್ಲ ಕೂಡುಸಿ ಕಳದು ಲೆಕ್ಕಲ್ಲಿದ್ದ ಹಣವೆಲ್ಲ ಮುಗುದು ಆನು ಹೋದ್ದಕ್ಕೆ ಮತ್ತೆ ಹಣ ಕೊಡೆಕ್ಕಾಗಿ ಬಯಿಂದಿಲ್ಲೆ.ಬೇಜಾರು ಮಾಡ್ಯೊಂಡು ಮನಗೆ ಬಂದೆ. ಇದ್ದದ್ದೂ ಹೋಯಿತು ಮದ್ದಿನ ಗುಣಂದ. ಸುರಕ್ಷಿತವಾಗಿಪ್ಪಲೆ ಬೇಂಕಿಲ್ಲಿ ಮಡಗುವದು. ಆದರೆ ಇಲ್ಲಿ ಇಲ್ಲಿ ಬೇಂಕಿಲ್ಲಿ ಮಡಗಿದ ಹಣ ಬೇಂಕಿನ ಲೆಕ್ಕಲ್ಲೇ ಹೋತು.
     ಇಲ್ಲಿ ಎನ್ನ ತಪ್ಪೋ ಅಲ್ಲ ಬೇಂಕಿನ ಉದ್ಯೋಗಸ್ತ ತಪ್ಪೋ ಎನಗೆ ಗೊಂತಿಲ್ಲೆ. ಪ್ರತಿ ತಿಂಗಳ ಲೆಕ್ಕ ಮಾಡುವಗ ಅನ್ಯಾಯವಾಗಿ ಒಬ್ಬನ ಹಣ ನಷ್ಟ ಮಾಡುವದೆಂತಗೆ! ಗಿರಾಕಿಗೊಕ್ಕೆ ತಿಳಿಶಿಕ್ಕಾದ್ದು ಅವರ ಧರ್ಮ ಹೇಳಿ ಗ್ರೇಶುತ್ತೆ. ಅಂತೇ ಕೂಡುಸಿ ಕಳದು ಹಾಕುವಗ  ಅವು ಮನಸ್ಸು ಮಾಡಿದರೆ ಪಾರ್ಟಿಗೆ ವಿಷಯ ತಿಳಿಶುಲೆ ಇಪ್ಪತ್ತೈದು ಪೈಸೆಯ ಕಾರ್ಡ್ ಸಾಕು. ಗಿರಾಕಿಗೆ ತಿಳಿಶುತ್ತಿತರೆ ಹಣ ಲೆಕ್ಕಲ್ಲಿ ಒಳಿತ್ತೀತು. ಎನಗೆ ಎಚ್ಚರಿಗೆ ಅಪ್ಪಗ ಉದಿ ಆಯಿದು! ಅಥವಾ ಚೆಕ್ ಪುಸ್ತಕಕ್ಕೆ ಹಣ ವಜಾ ಆವುತ್ತು ಹೇಳುವ ವಿಷಯ ಎನ್ನ ಹತ್ತರೆ ಪುಸ್ತಕ ಬೇಕೋ ಕೇಳಿದ ಗುಮಾಸ್ತಂಗೆ ಹೇಳುಲಾವುತ್ತಿತ್ತು. ಅಥವಾ ಆನು ಕೇಳೆಕ್ಕಾತೋ ಎಂತದೋ?
        ನಮ್ಮ ಸುರಕ್ಷಿತಕ್ಕೆ ಬೇಂಕಿಲ್ಲಿ ಮಡಗಿದರೂ ಹಣ ನಮಗೆ ತಿಳಿಶದ್ದೆ ತೆಗವಲಾವುತ್ತು ಹೇಳಿ ಆದರೆ, ಅಥವಾ ಈ ಸಣ್ಣ ಮೊತ್ತಕ್ಕೆ ಕೋರ್ಟಿಂಂಗೆ ಹೋದರೂ ನಮ್ಮ ಕಡೆಲ್ಲಿ ನ್ಯಾಯ ಸಿಕ್ಕುಗೋ? ನಾವು ತೆಗದ ಲೋನಿನ ಬಗ್ಗೆ ನೋಟಿಸ್ ಕೊಡುವಂತೆ ಇದರನ್ನೂ ತಿಳಿಶೆಕ್ಕಾದ ಜವಾಬ್ದಾರಿ ಅವರದ್ದಾದರೂ ಅದಕ್ಕೆ ನಾವು ತುಂಬ ಕಷ್ಟ ಪಡೇಕ್ಕಕ್ಕು ಹೇಳಿ ಕಾಣುತ್ತು.
          ಕೆನರ ಬೇಂಕಿಲ್ಲಿ ಮದಲಿಂದಲೇ ಎನ್ನ ಎಕೌಂಟ್ ಇದ್ದು. ಏನೋ ಸ್ವಲ್ಪ ಹಣ "ಪುಚ್ಚೆ ಹೇಲು ಹುಗುದು ಹಾಕಿದಂಗೆ"ಹೇಳುಲಕ್ಕು ಹೆಚ್ಚು ಹಣ ಇಲ್ಲೆ. ಇಪ್ಪಗ ಹಾಕಿದರೆ ಬೇಕಪ್ಪಗ ತೆಕ್ಕೊಂಬಲಕ್ಕನ್ನೆ!ಮತ್ತೊಂದರಿ ಅಲ್ಲಿಯೂ ಹೀಂಗೆ ಆಗಿತ್ತು. ಚೆಕ್ ಪುಸ್ತಕಕ್ಕೆ ಹಣ ಕಳದ್ದು ಅಲ್ಲ. ಬೇರೆ ಕಾರಣಕ್ಕೆ ಮಿನಿಮಮ್ ಇಲ್ಲೆ ಹೇಳಿಯೋ ಎಂತದೋ ಕಾರಣಕ್ಕೆ ಎರಡೆರಡು ಸರ್ತಿ ಹಣ ವಜಾ ಆಗಿತ್ತು. ಮೇನೇಜರನ ಹತ್ತರೇ ಕೇಳೆಕ್ಕಾಗಿ ಬಂತು. ಕ್ಲಾರ್ಕ್ ಗೊ ಗಣ್ಯ ಮಾಡುತ್ತವಿಲ್ಲೆ. ಮೇನೇಜರ್ ಗುರ್ತದೋನು. ಅವನತ್ರೆ ಕೇಳಿದ್ದಕ್ಕೆ ಲೆಕ್ಕ ಎಲ್ಲ ಸರಿಯಾಗಿ ನೋಡಿ ಎನ್ನ ಮಾತು ಸರಿ ಹೇಳಿ ಅವಂಗೆ ತೋರಿತ್ತು. ನಿಂಗೆ ಬೇಜಾರು ಮಾಡೆಡಿ. ಅದರ ಸರಿ ಮಾಡುವೊ. ಒಂದೆರಡಿ ದಿನ ಕಳುದುಬನ್ನಿಹೇಳಿದ. ಮತ್ತೆ ಹೋದೆ. ಗುಮಾಸ್ತನ  ದಿನಿಗೇಳಿ ಲೆಕ್ಕ ಸರಿ ಮಾಡಿ ಕೊಡುಲೆ ಹೇಳಿದ ಮೇನೇಜರ್.
           ಇಲ್ಲಿ ಈ ಎರಡು ಸಂದರ್ಭಲ್ಲಿ    ಎನಗಾದ ಅನುಭವಲ್ಲಿ,ಗುರ್ತ ಇದ್ದ ಕಾರಣ ಒಂದು ಬೇಂಕಿಲ್ಲಿ ಲೆಕ್ಕ ಸರಿಯೂ ಆತು.ಗುರ್ತ ಇಲ್ಲದ್ದ ಕಾರಣ  ಮತ್ತೊಂದು ಬೇಂಕಿಲ್ಲಿ  ಲೆಕ್ಕಲ್ಲಿದ್ದ ಹಣವೇ ಹೋತು.ಯಾವದು ಸರಿ ಯಾವದು ತಪ್ಪು! ಗುರ್ತ ಇಲ್ಲದ್ದದು ತಪ್ಪೋ? ಅಥವಾ ಸಾರ್ವಜನಿಕ ವ್ಯವಸ್ತೆಲ್ಲಿ ಗುರ್ತವೇ ಬೇಕಾವುತ್ತೋ ಎನಗೆ ಗೊಂತಾವುತ್ತಿಲ್ಲೆ!ಇಲ್ಲಿ ಸಣ್ಣ ಮೊತ್ತವ ಹೇಳಿದ್ದಾದರೂ ದೊಡ್ಡ ಮೊತ್ತವಾದರೂ ಮಕ್ಕಳ ಪೇಪರ್ ತಿದ್ದುವಗ ಒಬ್ಬನ ಮಾರ್ಕಿನ ಇನ್ನೊಬ್ಬಂಗೆ ಹಾಕಿದ ಹಾಂಗೆ ಆದರೆ ಗಿರಾಕಿಗಳ ಒದ್ದಾಟ ಅನುಭವುಸೋವಕ್ಕೇ ಗೊಂತು.
ಉದ್ಯೋಗ ಸಿಕ್ಕುವ ವರೆಗೆ  ಮನುಷ್ಯನ ಅವಸ್ತೆ ಒಂದಾದರೆ ಸಿಕ್ಕಿದ ಮೇಲೆ ಅವನ ಗತ್ತೇ ಬೇರೆ!
                            ಎಲ್ಲೋರಿಂಗೂ ಹೀಂಗೆ ಅನುಭವ ಆಗದ್ದರೂ ಬೆರಳೆಣಿಕೆಯೋರಿಂಗೆ ಶನಿ  ಸುತ್ತಿದೋರಿಂಗೆ ಮಾಂತ್ರ ಆಗಿಕ್ಕು.ಕ್ಯೂ ನಿಂದೊಂಡಿಪ್ಪಗ ಒಬ್ಬನ ಬೇಗ ಕಳುಸೆಕ್ಕು ಹೇಳಿ ಆದರೆ ಕೇಶಿಲ್ಲಿ ಕೂದೋನು ಅವನ ದಿನಿಗೇಳಿ ಹಣ ಲೆಕ್ಕ ಮಾಡಿ ಕೊಡುವದಿದ್ದು. ಆರಾರು ಆಕ್ಷೇಪ ಹೇಳಿರೆ" ಅವ ಆಗಳೇ ಬಂದು ಕ್ಯೂ ನಿಂದೊಂಡು ಇದ್ದೋನು ಈಗ ಬಂದದು.ಹೋಪಗ ಹೇಳಿಕ್ಕಿ ಹೋದ್ದದು ಹೇಳಿ ಉತ್ತರ ಕೊಡುತ್ತವು.ಇಲ್ಲಿಯೂ ಸಾಮಾಜಿಕ ನ್ಯಾಯ ಇದ್ದೋ?ಒಟ್ಟಾರೆ ಯಾವುದೇ ಆಫೀಸಿಂಗೆ ಹೋಪಗಳೂ ಅಲ್ಲಿಯಾಣೋರ ಬೇಕಾದ ಹಾಂಗೆ ಮಾತಾಡಿ ಕಿಸೆ ಹಾಯ್ಕೊಂಡರೆ ಆಯೆಕ್ಕಾದ ಕೆಲಸ ಸಲೀಸಾಗಿ ಅಕ್ಕು.ಬಾಯಿ ಇದ್ದೋನು ಹೇಳಿರೆ ಸಂಬ<ಧ ಪಟ್ಟೋರತ್ರೆ ಬೇಕಾದ ಹಾಂಗೆ ಮಾತಾಡುಲೆ ಗೊಂತಿದ್ದರೆ ಅವನ ಕೆಲಸ ಆಗಿಯೇ ಹೋವುತ್ತು. ಆನು ನೇರ ಮಾರ್ಗಲ್ಲೇ ಹೋವ್ತೋನು ಹೇಳ್ಯೊಂಡಿದ್ದರೆ ಒಂದೇ ಸರ್ತಿಲ್ಲಿ ಅಪ್ಪ ಕೆಲಸ ಮತ್ತೆ ಮತ್ತೆ ಹೋಯೆಕ್ಕಾಗಿ ಬತ್ತು.ಮನ್ನೆ ಹೀಂಗಾತು.
ತಾಲೂಕು ಒಫಿಸಿಲ್ಲಿ ಎನಗೆ ಒಂದು ಕೆಲಸ ಆಯೆಕ್ಕಾತು. ಮನೆ ತೆಗದ ಜಾಗೆಯ ಆ ಟಿ ಸಿ ಒಂದುವರೆ ವರ್ಷ ಕಳುದರೂ ಸಿಕ್ಕಿತ್ತಿದ್ದಿಲ್ಲೆ. ಹೋಗಿ ಕೇಳಿದ್ದಕ್ಕೆ, ಎಂಗೊಗೆ ಅದರ ಕೋಪಿ ಇನ್ನೂ ಬಯಿಂದಿಲ್ಲೆ ಹೇಳಿದವು.ರಿಜಿಸ್ತ್ರಿ ಓಫಿಸಿಲ್ಲಿ ಕೇಳಿದ್ದಕ್ಕೆ ಎಂಗೊ ಅಂದಂದೇ ಕಳುಸುತ್ತೆಯೊ.ಸಿಕ್ಕಿದ್ದಿಲ್ಲೆ ಹೇಳಿದರೆ ಬೇರೊಂದು ಕೋಪಿ ತಂದು ಕೊಡಿ ಕಳುಸುತ್ತೆಯೊ ಹೇಳಿದವು. ಅಂಬಗಳೇ ಡಾಕ್ಯುಮೆಂಟಿನ ಕೋಪಿ ಕೊಟ್ಟು ದಸ್ಕತ್ತು ಹಾಕುಸಿ ತಂದು ಕೊಟ್ಟೆ. ಎರಡು ವಾರ ಕಳುದು ಹೋಪಲೆ ಹೇಳಿದವು. ಹೋದೆ. ಅದರ ವಿಲೇಜಿಂಗೆ ಕಳುಸುತ್ತೆಯೊ ಅಲ್ಲಿಂದ ರಿಪೋರ್ಟ್ ಬಂದ ಮೇಲೆ ಕೊಡುತ್ತೆಯೋ ಹೇಳಿದವು. ಒಂದು ತಿಂಗಳು ಕಳುದರೂ ಶುದ್ದಿ ಇಲ್ಲೆ. ಒಂದು ತಿಂಗಳು ಕಳುದ ಮೇಲೆ ಮನೆ  ಮುಂದೆ ಒಂದು ಚೀಟಿ ಕಂಡತ್ತು. ವಿಲೇಜಿಂಗೆ ಬಂದು ಅನುಭವ ಕೊಡೆಕ್ಕು ಹೇಳಿ ಇತ್ತು. ಅನುಭವ ಹೇಳಿದರೆ ಅವರ ಕಾಣಿಕೆ ಆಗಿಕ್ಕು! ಆನು ಹೋಯಿದಿಲ್ಲೆ. ಆರ್ ಟಿ ಸಿ ಸಿಕ್ಕಿದ್ದಿಲ್ಲೆ. ಎನಗೆ ನಗರ ಸಭೆಯ ಖಾತೆ ಸಿಕ್ಕಿತ್ತು.ಹಾಂಗೆ ಸುಮ್ಮನಿದ್ದೆ.ಇನ್ನು ಮತ್ತೊಂದರಿ ಹೋಗಿ ಕೇಳಿದರೆ ಎಂತ ಹೇಳುತ್ತವು ನೋಡೆಕ್ಕಷ್ಟೆ!
ಮತ್ತೊಂದರಿ ಆನು ಬೇಂಕಿಲ್ಲಿ ಒಂದು ಚೆಕ್  ಎನ್ನ ಎಕೌಂಟಿಂಗೆ ಹಾಕುಲೆ ಕೊಟ್ಟಿತ್ತಿದ್ದೆ. ಅದು ಶನಿವಾರ ಆಗಿತ್ತು.ಹತ್ತು ಗಂಟೆಗೇನೋ ಕೊಟ್ಟದು. ಹೊತ್ತೋಪಗ ಎನಗೆ ಫೋನ್ ಬಂತು. ನಿಂಗೊ ಕೊಟ್ಟ ಚೆಕಿಲ್ಲಿ ಹಣ ಲೆಕ್ಕಲ್ಲಿಲ್ಲೆನ್ನೆ! ಎಂತ ಮಾಡೆಕ್ಕು ಹೇಳಿ ಕೇಳಿದವು. ಅದಕ್ಕೆ ಆನು " ಚೆಕ್ಕಿನ ಕಳುಸೆಡಿ. ಎನಗೆ ಚೆಕ್ ಕೊಟ್ಟೋನತ್ರೆ ಕೇಳಿ ಸೋಮವಾರ ಹೇಳುತ್ತೆ ಅಲ್ಲಿ ವರೆಗೆ ಪೆಂಡಿಂಗ್ ಮಡಗಿ ಹೇಳಿದೆ. ಮತ್ತೆ ಆ ಪಾರ್ಟಿಗೆ ಫೋನ್ ಮಾಡುವಗ ಅವನೂ ಆನು ಎನ್ನ ಬೇಂಕಿಲ್ಲಿ ಕೇಳುತ್ತೆ ಹೇಳಿ ಸೋಮವಾರ ಹೋದಡೊ. ಏನೋ ಒಂದು ಕ್ಲೆರಿಫ಼ಿಕೇಶನ್ ಇತ್ತು. ಅದರ ಸರಿ ಮಾಡಿ ಕೊಟ್ಟವು. ಎರಡು ದಿನಲ್ಲಿ ಎನ್ನ ಹಣ ಎನ್ನ ಲೆಕ್ಕಕ್ಕೆ ಬಂತು.ಬೇಂಕಿನೋವು ಫೋನ್ ಮಾಡಿದ ಕಾರಣ ಸಮಸ್ಯೆ ಸರಿ ಆಗಿತ್ತು. ಇಲ್ಲಿ ಮಾನವೀಯತೆಯೂ ಕೆಲಸ ಮಾಡಿದ್ದು ಹೇಳುವದು ಎನ್ನ ಅಭಿಪ್ರಾಯ..
                          ಬೇಂಕಿಂಗ್ ವ್ಯವಸ್ತೆಯೇ ತನಗೆ ತಿಂಬಲೆ ಕೊಡುವದು ಹೇಳುವ ನೆಂಪು ಉದ್ಯೋಗಸ್ತರಿಂಗೆ ಇರುತ್ತಿದ್ದರೆ ಸಾರ್ವಜನಿಕರಿಂಗೆ ತೊಂದರೆ ಅಕ್ಕೋ!

karmanye vadhikaraste

                                                               ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಭಗವದ್ಗೀತೆಲ್ಲಿ ಶ್ರೀಕೃಷ್ಣ ಅರ್ಜುನಂಗೆ ಹೇಳಿದ್ದು ಹೀಂಗಲ್ಲದೋ! ಯುದ್ಧ ಮಾಡುಲೆ ಮನಸ್ಸಾಗದ್ದೆ ಬಿಲ್ಲು ಬಾಣಂಗಳ ಕೆಳ ಮಡಗಿಪ್ಪಗ ಅವಂಗೆ ದೇವರು ಅಪ್ಪಣೆ ಕೊಟ್ಟದು ಹೀಗೆನ್ನೆಅಲ್ಲಿ ಅರ್ಜುನಂಗ ಹೇಳಿದ್ದಾದರೂ ಎಲ್ಲೋರಿಂಗೂ ಅನ್ವಯಿಸುವ ಬುದ್ಧಿ ಮಾತುದೇ ಆವುತ್ತನ್ನೆ!
   .ಈ ಭೂಮಿಲ್ಲಿ ಹುಟ್ಟಿ ಬಂದ ಆರುದೇ ಅವರವರ ಕರ್ತವ್ಯವ ಮಾಡಿಯೇ ತೀರೆಕ್ಕು. ಅಂತೇ ತಿಂದು ತಿರುಗುವೋವು ಇಲ್ಲೆ ಹೇಳಿ ಅಲ್ಲ. ಕರ್ತವ್ಯದ ಬಗ್ಗೆ ತಿಳುದೋರು ಇದಕ್ಕೆ ತಪ್ಪುಲೆ ಗೊಂತಿಲ್ಲೆ. ನಮ್ಮ ಮುಖ್ಯ ಅಗತ್ಯಂಗೊ ಯಾವುದು? ಅಶನ ವಸನ ವಸತಿ ಈ ಮೂರು ಇಲ್ಲದ್ದೆ ಮರ್ಯಾದೆಲ್ಲಿ ಬದುಕ್ಕುಲೆಡಿಯ.ಕರ್ಮ ಮಾರ್ಗವ ಅನುಸರುಸುವ ಕರ್ಮ ಜೀವಿಗೊ ನಾವಪ್ಪಗ ಅನ್ಯಥಾ ಯೋಚನೆ ಮಾಡುಲಿದ್ದೋ?
ನಾವು ಬದುಕ್ಕೆಕ್ಕಾರೆ, ನಮ್ಮ ದೇಹ ಹೇಳುವ ಯಂತ್ರ ಕಾರ್ಯವೆಸಗೆಕ್ಕಾರೆ ಯಂತ್ರಕ್ಕೆ ಪೆಟ್ರೋಲ್ ಹೇಂಗೋ ಹಾಂಗೆಹೊಟ್ಟಗೂ ಇಂಧನ ಹಾಕೆಕ್ಕನ್ನೆ. ಇಂಧನವಾಗಿ ನಾವು ಉಪಯೋಗುಸುವ ಆಹಾರದ ವಿಷಯಲ್ಲಿ ಸ್ವಾವಲಂಬನೆ ಮದಲು ಇದ್ದತ್ತು. ಈಗ ಎಲ್ಲ ಅಂಗ್ಡಿಲ್ಲಿ ಸಿಕ್ಕುತ್ತು. ಉದ್ಯೋಗ ಇದ್ದರೆ ದುಡ್ಡು ಕೊಟ್ಟು ತೆಕ್ಕೊಂಬಲಕ್ಕು. ಆದರೆ ಎಲ್ಲದಕ್ಕೂ ಇನ್ನೊಬ್ಬನ ಅವಲಂಬುಸೆಕ್ಕಾಗಿ ಬತ್ತು. ಉಂಡ ಉಪ್ಪಿನ ಕೆಲಸ ಹೇಳಿ  ರಜ ಭೂಮಿ ಇದ್ದೋರು ಬ್ರ್ವರು ಸುರಿಸಿ ಕೆಲಸ ಮಾಡಿದರೆ ದೇಹ ಶ್ರಮಂದ ವ್ಯಾಯಾಮವೂ ಸಿಕ್ಕಿದ ಹಾಂಗೆ ಆವುತ್ತು. ಒಟ್ಟಿಂಗೆ ಬೇಕಾದ್ದರ ಬೆಳದ್ದೆ ಹೇಳುವ ತೃಪ್ತಿಯೂ ಬತ್ತು.ಮತ್ತೆ ಉಡುವ ವಸ್ತ್ರ, ಇಪ್ಪಲೊಂದು ಮನೆ ಇಷ್ಟು ಇದ್ದರೆ ಜೀವನಕ್ಕೆ ಸಾಕಲ್ಲದೋ! ಮುಂಬದು ಒಂದು ಕಡೆಲ್ಲಿ ,ಮನುಗುವದು ಇನ್ನೊಂದು ಕಡೆಲ್ಲಿ ಅಪ್ಪಲಾಗ! ಸ್ವಾವಲಂಬನೆ ಮುಖ್ಯ.
 ಇಲ್ಲಿ ನಮ್ಮ ಕಾಲ ಮೇಲೆ ನಿಂಬ ವಿಷಯಲ್ಲಿ ಸಣ್ಣಾಗಿಪ್ಪಗ ತೊಡಗಿ ಏನಾದರೊಂದು ಸ್ವಂತ ಸಂಪಾದನೆ ಮಾಡಿಗೊಂಬ ವರೆಗೆ ಅಮ್ಮ ಅಪ್ಪನ ಹೆರಿಯೋರ ಆಶ್ರಯಿಸಿಗೊಂಡರೆ ಮತ್ತೆ ನಮ್ಮ ಕಾಲಿಲ್ಲಿ ನಿಂಬ ಆದಹಾಂಗೆ ಆದಮೇಲೆ ಎಲ್ಲವನ್ನೂ ನಾವೇ ಹೊಂದುಸಿಗೊಳ್ಳೆಕ್ಕಾವುತ್ತು. ಇಲ್ಲಿ ವರೆಗೆ ಪೋಷಣೆ ಮಾಡಿದೋರು ಮುದುಕರಾದರೆ ಅವಕ್ಕೆ ಗೈವಲೆಡಿತ್ತಿಲ್ಲೆ. ಆರೋಗ್ಯವೂ ಹಾಳಾದರೆ ನಮ್ಮನ್ನೇ ಅವಲಂಬಿಸಿರೆಕ್ಕಾವುತ್ತು. ಅವರ ನೋಡಿಗೊಂಬದು ನಮ್ಮ ಧರ್ಮ!.ನಮ್ಮಂದ ಹೆಚ್ಚು ಅವಕ್ಕೆ ಸೌಕರ್ಯ ಮಾಡಿಕೊಟ್ಟರೆ, ಅವಕ್ಕೂ ಸಮಾಧಾನ, ನವಗೂ ಕೃತಜ್ಞತೆ ಇದ್ದ ಹಾಂಗೆ ಆವುತ್ತು.ಅದು ನಮ್ಮ ಧರ್ಮವೂ ಅಪ್ಪು.
ಜವಾಬ್ದಾರಿ ಬಂದದರ ಸಮರ್ಥವಾಗಿ ನಿಭಾಯಿಸಿಗೊಂಡು ಹೋಪಲೂ ಚಾಕಚಕ್ಯತೆಯೂ ಬೇಕು. ನಾವು ಹೆರಿಯೋರ ನೋಡಿಗೊಂಬ ಹೊಣೆಗಾರಿಕೆಯ ನೋಡಿಗೋಬದರ ನಮ್ಮ ಮಕ್ಕಳು ನೋಡಿ ಕಲಿತ್ತವು. ಇದು ತಲೆ ತಲಾಂತರಂದ ನಡಕ್ಕೊಂಡ ರೀತಿ. ನಮ್ಮ ಕರ್ತವ್ಯ ಧರ್ಮ!.ದೇಹಲ್ಲಿ ಕೈ ಕಾಲುಗಳಿಂದ ಹೆಚ್ಚು ತಲೆಯು ಬೇಕನ್ನೆ. ಎಲ್ಲೋರನ್ನೂ ಸೆಲ್ಲವನ್ನೂ ಸಮಧರುಸಿಗೊಂಡು ಹೋಪದು ಹೇಳಿದರೆ ತುಂಬ ಕಷ್ಟದ ಕೆಲಸ! ನಮ್ಮ ಹಾಂಗೆ ಕುಟುಂಬ ಜವಾಬ್ದಾರಿ ಸಹಧರ್ಮಿಣಿಗೂ ಬೇಕಾವುತ್ತು. ಹೀಂಗೆಲ್ಲ ಒಟ್ಟೊಟ್ಟಿಂಗೆ ಜೊತೆ ಜೊತೆಯಾಗಿ ಹೋಪಗ ಒಬ್ಬಕ್ಕೊಬ್ಬ ಸಮಜಾಯಿಸಿಗೊಂಡು ಹೋದರೆ ಕುಟುಂಬ ಜೀವನ, ನಮ್ಮ ಜೀವನ ಯಾತ್ರೆ ಸುಖವಾಗಿಕ್ಕು. ದೇಹದ ಬ್ಯಾವುದೇ ಅಂಗಕ್ಕೆ ತೊಂದರೆ ಆದರೂ ದೇಹದ ಇತರ ಭಾಗಂಗೊಕ್ಕೂ ಅದರ ನೋವು ಚಿಂತೆ ಇರುತ್ತನ್ನೆ.ಕುಟುಂಬಲ್ಲಿ ಆರೊಬ್ಬಂಗೆ ಸೌಖ್ಯ ಇಲ್ಲದ್ದೆ ಆದರೂ ಎಲ್ಲೋರಿಂಗೂ ಬೇಜಾರಾವುತ್ತಿಲ್ಲೆಯೋ? ಆಯೆಕ್ಕು. ಅದನ್ನೇ ಬೇನೆ ಬೇಸರಿಕೆಲ್ಲಿ ಸಮಾನ ಭಾವನೆ ಬಂದರೆ ಸಮಾಧಾನ ಸಂತೈಕೆ ಇದ್ದರೆ ಕುಟುಂಬ ಹಾಲುಂಡ ಸುಖ ಜೀವನ ತಕ್ಕು.
         ಭೂಮಿಲ್ಲಿ ಹುಟ್ಟಿ ಬಂದ ನಾವು ಮತ್ತೆ ಮತ್ತೆ ಹುಟ್ಟಿ ಸಾಯುತ್ತು ಹೇಳುವದರ ಜ್ಞಾನಿಗೊ ಹೇಳಿದ್ದವು. ಪ್ರಕೃತ ಇಪ್ಪ ನಾವು ಹೊಂದಿಗೊಂಡು ಬದುಕ್ಕಿದರೆ ಜೀವ ಕಷ್ಟ ಹೇಳಿ ತೋರ!ಒಬ್ಬ ಕೂದು ತಿಂಬದು ಒಳುದೋರು ದುಡಿವದು ಹೇಳಿ ಅಪ್ಪಲಾಗ. ಒಬ್ಬೊಬ್ಬ ಒಂದೊಂದು ಕೆಲಸ ಮಾಡಿದರೆ ಕೆಲಸ ಹೇಳುವದು ಹೂವೆತ್ತಿದ ಹಾಂಗಾವುತ್ತಿಲ್ಲೆಯೋ? ನೆಟ್ಟು ಬೆಳೆಶಿದೋವಕ್ಕೆ ಹೂಗು ಕೊಇವಲೆ ಮನಸ್ಸು ಬಾರ! ಬಾಕಿದ್ದೋರಿಂಗೆ ಆಚಿಂತ ಇದ್ದೋ? ಈ ಭೂಮಿಲ್ಲಿ ಹುಟ್ಟಿ ಬಂದ ಮೇಲೆ ಇಲ್ಲಿ ನಾವು ಮಾಡೆಕ್ಕಾದ ಕರ್ಮಂಗೊಕ್ಕೆ ಮಾಂತ್ರ ಹಕ್ಕುದಾರರು. ಆರಿಂಗೋ ಬೇಕಾಗಿ ಅಲ್ಲ ನವಗೆ ಬೇಕಾಗಿ ನಾವು ಮಾಡಿದ್ದರ ನಾವು ತಿಂತು. ಮಾಡಿದ್ದುಣ್ಣೋ ಮಹಾರಾಯ ಹೇಳಿದ ಹಾಂಗೆ! ಜೀರೆಕ್ಕಿ ಬಿತ್ತಿ ಓಮ ಬೆಳವಲೆಡಿಗೊ? ಹಿಂದಾಣೋರು ಹೇಳಿದ್ದೂ ಹಾಂಗೆ ದುಡುದು ತಿನ್ನು ಹೇಳಿ. ಕೂದು ತಿಂಬೋರಿಂಗೆ ತಂದದು ಮುಗಿವನ್ನಾರ ನಿಶ್ಚಿಂತೆ! ಮತ್ತೆ ಹುಡುಕ್ಕುಲೆ ಹೋಯೆಕ್ಕು. ಅದರಿಂದಲೇ ಕೆಲಸಲ್ಲಿ ಉದಾಶಿನಂದ ಆರೋ ಬೆಳದ್ದರ, ಕೂಡಿ ಮಡಗಿದ್ದರ ಕದ್ದು ಕೊಂಡು ಹೋಪದು. ಪಾಪದ ಫಲವೂ ಒಟ್ಟಿಂಗೆ ಅವಕ್ಕೆ ಗೊಂತಿಲ್ಲದ್ದ ಹಾಂಗೆ ಅವಕ್ಕೆ ಸಿಕ್ಕುತ್ತು.
      ಪ್ರತಿಯೊಂದು ಜೀವ ರಾಶಿಗೂ ಒಂದೊಂದು ಪಾಸ್ ಬುಕ್ ಇರುತ್ತಡೊ. ಅದರಲ್ಲಿ ನಾವು ನಮ್ಮ ಜೀವನಲ್ಲಿ ಮಾಡಿದ ಒಳ್ಳೆ ಕೆಲಸಂಗೊ ಪುಣ್ಯ ಫಲವನ್ನೂ ಕೆಟ್ತ ಕೆಲಸಂಗೊ ಪಾಪದ ಫಲವನ್ನೂ ನಮ್ಮ ಲೆಕ್ಕಕ್ಕೆ ಸೇರುಸಲಿದ್ದಡೊ. ಪುಣ್ಯ ಕಾರ್ಯಂಗಳಿಂದ ಬಪ್ಪ ಲಾಭವೋ ಕೆಟ್ಟ ಕಾರ್ಯಂಗಳಿಂದ ಬಪ್ಪ ಪಾಪದ ಲೆಕ್ಕಲ್ಲಿ ಹೆಚ್ಚು ಕಡಮ್ಮೆ ಆಗಡೊ. ಎರಡು ಫಲಂಗಳನ್ನೂ ಅನುಭವಿಸುವ ಹಕ್ಕು ಮಾಂತ್ರ ಪ್ರತಿಯೊಬ್ಬಂಗೂ ಇದ್ದಡೊ.ಅಂತೂ ಜನ್ಮಾಂತರದ ಪುಣ್ಯ ಕೆಲಸಂಗೊ ನವಗೇ ಮತ್ತಾಣ ಜನ್ಮಲ್ಲಿ ಐಹಿಕ ಸುಖ ಭೋಗ ನೆಮ್ಮದಿ, ದುಃಖಂಗಳ ಕೊಡುವದು ಹೇಳಿದರೆ ಎಲ್ಲ ಚಾಚೂ ತಪ್ಪದ್ದೆ ಅವಂಗವಂಗೆ ಅನುಭವಿಸುವ ಯೋಗ ಬಂದೇ ತೀರುತ್ತಡೋ. ಪ್ರತ್ಯಕ್ಷ ಪರೋಕ್ಷ ಫಲಂಗೊ ನವಗೆ ಗೊಂತಿಲ್ಲದ್ದೆ ಅನುಭವಕ್ಕೆ ಬಪ್ಪದು . ಅದನ್ನೇ ಪರೋಕ್ಷವಾಗಿ ಎಲ್ಲ ಕರ್ಮ ಫಲಂಗಳ ಕೊಟ್ಟೇ ತೀರುತ್ತ. ಬಾಕಿಮಾಡುತ್ತ ಇಲ್ಲೆ ಹೇಳುವದು ತಾತ್ಪರ್ಯ!
ಕರ್ಮ ಮ್ಡುವದು ನಮ್ಮ ಧರ್ಮ. ಫಲಾಫಲ ಅದು ದೇವರಿಂಗೆ ಬಿಟ್ಟದು! ದೇವರು ಒಂದು ಅವ್ಯಕ್ತ ಶಕ್ತಿ. ಎಲ್ಲವನ್ನೂ ಸೃಷ್ಟಿ ಮಾಡಿಕ್ಕಿ ನಮ್ಮನ್ನೂ ಸೃಷ್ಟಿ ಮಾಡಿದೋನು ಅವ. ಮಕ್ಕೊಗೆ ಆಟದ ಸಾಮಾನು ತಂದು ಕೊಟ್ಟು ಅವರಷ್ಟಕ್ಕೆ ಬಿಟ್ಟರೆ ಎಂತ ಮಾಡುತ್ತವು ಗೊಂತಿದ್ದನ್ನೆ. ಕೆಲವು ಮಕ್ಕೊ ಬೇರೆ ಮಕ್ಕಳ ಸೇರುಸ್ಯೊಂಡು ಆಡುಗು. ಇನ್ನು ಹತ್ತರೆ ಬಂದೋರ ಬೈದು ಅಟ್ಟುವ ಮಕ್ಕಳೂ ಇದ್ದವು. ಅಂತೆ ಎನ್ನತ್ರೆ ಹೇಳಿ ಆಡ್ಲರಡಿಯದ್ದೆಯೋ. ಉದಾಶೀನಂದಲೋ ಜಾಗ್ರತೆ ಮಾಡ್ಳೋ ಸುಮ್ಮನೆ ಚೆಂದ ನೋಡ್ಯೋಂಡೋ ಇಪ್ಪ ಮಕ್ಕಳೂ ಇಕ್ಕು. ನಾವು ಆಡಿದ್ದು ಸರಿ ಆಯಿದು. ಅವ ತಪ್ಪು ಆಡಿದ್ದ. ಅವಂಗೆಂತದೂ ಗೊಂತಿಲ್ಲೆ ಹೇಳಿಯೋ ಬೇರೆಯೋರ ನೋಡಿ ತಮಾಶೆ ಮಾಡುವೋವೂ ಇಕ್ಕು. ಒಬ್ಬಕ್ಕೊಬ್ಬನ ತಾಂಟುಸಿ ಹಾಕಿ ಜಗಳ ಮಾಡುವದರ ನೋಡಿ ಸಂತೋಷ ಪಡುವೋರೂ ಇಕ್ಕು. ಆದರೆ ಮೆಚ್ಚುವದು ಆರ್ತ ಹೇಳುವದು ಪ್ರಶ್ನೆ. ಮನೆಯೊಳದಿಕ್ಕೇ ಇಪ್ಪ ( ಈಗ ಕೂಡು ಕುಟುಂಬ ಇಲ್ಲೆನ್ನೆ)ಬೇರೆ ಮನೆಂದ ಮಕ್ಕಳೋಟ್ಟಿಂಗೆ ಹೇಂಗಿರುತ್ತವು ಹೇಳುವದರ ನೋಡಿ ನಮ್ಮ ಮಕ್ಕಳ ಚಾಕಚಕ್ಯತೆಯ ಮೆಚ್ಚಿಗೊಂಡರೆ ಸಾಲ! ನಿಜವಾದ ಮಾನವ ಧರ್ಮವ ಪಾಲುಸುವ ಮಕ್ಕಳ ಸಣ್ಣಾಗಿಪ್ಪಗಳೇ ನೋಡಿದರೆ ಗೊಂತಕ್ಕಡೊ. ಬೆಳೆಯ ಗುಣ ಮೊಳಕೆಲ್ಲಿ" ಗೊಂತಾವುತ್ತನ್ನೆ. ಅವರವರ ಹಣೆ ಬರಹವ ತಿದ್ದುಲೆಡಿಯದ್ದರೂ ಏನಾದರೂ ಸಣ್ಣ ಮಟ್ಟಿನ ರಿಪೇರಿ ಮಾಡಿದರೆ  ಮುಂದಾಣ ಸಮಾಜ ಒಳ್ಳೆದಕ್ಕೋ ಏನೋ!