Wednesday, February 27, 2013

ಕೋಟಿ ಕಳ್ಳನೋ? ಕಳ್ಳ ಆದ್ದು ಹೇಂಗೆ?

                 ಕೋಟಿ ಕಳ್ಳನೋ  ಕಳ್ಳಆದ್ದು ಹೇಂಗೆ?
     ಎಂಗಳ ಜಾಗೆಲ್ಲೇ ಒಕ್ಕಲು ಕೂದೊಂಡು ಕೆಲಸ ಮಾಡ್ಯೊಂಡು ಇದ್ದ ಮನುಷ್ಯ ಕೋಟಿ ಹೇಳಿದರೆ.ಹೆಂಡತ್ತಿ ರಜ ಕೆಲಸಗಳ್ಳಿ. ಬತ್ತ ಮೆರಿವಲೋ, ಸೊಪ್ಪು ತಪ್ಪಲೋ ಹೇಳಿದರೆ ಬಾರ. ಕೋಟಿ ಮಾಂತ್ರ ಪಾಪ. ಹೆಚ್ಚು ಚುರುಕು ಅಲ್ಲದ್ದರೂ ನಿಧಾನಕ್ಕೆ ಹೇಳಿದ ಕೆಲಸ ಮಾಡುಗು. ಅಂಬಗ ಒಳ್ಳೆ ಕೆಲಸದೋವಕ್ಕೆ ಎರಡು ರುಪಾಯಿ ಸಂಬಳ ಆದರೆ ಜಾಗೆಲ್ಲೇ ಕೂದೊಂಡು ನಿತ್ಯ ಕೆಲಸ ಮಾಡುವ ಜನ ಆದಕಾರಣ ಒಂದೂವರೆ ರುಪಾಯಿ ಸಂಬಳ ಕೊಟ್ಟುಗೊಂಡಿತ್ತು. ಮದಲೆ ಹತ್ತರೆ ಒಂದು ಹೋಟ್ಳಿಲ್ಲಿ ಕೆಲಸ ಮಾಡ್ಯೊಂಡು ಇತ್ತದೋ. ಮದುವೆ ಆಗಿ ಒಂದು ಮಗು ಆದಮೇಲೆ ಎಂಗಳಲ್ಲಿಗೆ ಬಂದದು.ಕೆಲಸ ಮಾಡಿದ್ದು ಸರಿಯಾಗದ್ದರೆ ಏನಾದರೂ ಹೇಳಿದರೆ ಎದುರುತ್ತರ ಕೊಡುವ ಮನುಷಯ ಅಲ್ಲ. ಆನು ಅಂಬಗ ಮಾಯಿಪ್ಪಾಡಿಲ್ಲಿ ಅಧ್ಯಾಪಕರ ತರಬೇತಿಗೆ ಸೇರಿತ್ತಿದ್ದೆ. ವಾಕ್ಕೊಂದರಿ ಕೂಡಾ ಬಪ್ಪಲೆ ಬಿಡವು. ತಿಂಗಳಿಂಗೊಂದರಿಯೋ ಎರಡು ತಿಂಗಳಿಂಗೊಂದರಿಯೋ ಸರಿಯಾ ಕಾಣ ಕೊಟ್ಟು ಮನೆಗೆ ಬರೆಕ್ಕಾಗಿತ್ತು.ಬುನಾದಿ ಶಿಕ್ಷಣ ಹೇಳಿದರೆ ಕೆಲಸ ಮಾಡ್ಯೊಂಡುಕಲಿವದು. ಹತ್ತಿಯ  ಬತ್ತಿ ಮಾಡಿ ಚರಕಲ್ಲಿಯೋ ತಕಲಿಲ್ಲಿಯೋ ತಿಂಳಿಂಗೆ ಇಷ್ಟು ಗಂಡಿ ಹೇಳಿ ಕೊಡೆಕ್ಕಾವುತ್ತು. ಅಡಿಗೆ ಕೂಡಾ ಎಂಗಳೇ ಮಾಡ್ಯೊಂಡು ಊಟ ಉಣ್ಣೆಕ್ಕು. ಹೆಡ್ಮಾಷ್ಟ್ರನೂ ತುಂಬ ಸ್ಟ್ರಿಕ್ಟ್.ಅಪ್ಪಂಗೆ ಅಲ್ಲಿ ಇಲ್ಲಿ ,ನಂಬ್ರ ಹೇಳಿ ಯಾವಾಗಳೂ ಹೋಯೆಕ್ಕಾಗ್ಯೋಂಡಿತ್ತು. ಇರುಳು ಹತ್ತು ಗಂಟೆಗೋ ಮನೆಗೆ ಎತ್ತುಗು.ಮತ್ತೆ ಊಟ. ಅಂತೂ ಯಾವಾಗಳೂ ಬಿಸಿ.
ಅಂದುದಮನೆಗೆ ಬಂದು ಉಂಡೊಂಡಿಪ್ಪಗ ತೋಟಂದ ಆಚೆ ಮನೆಯೋರು ದಿನಿಗೇಳಿದವಡೊ. ಕೈತೊಳದು ಹೋಗಿ ನೋಡಿರೆ, ಆಚೆ ತೋಟ ಕಾವಲಿಂಗೆ ಬಂದೋರು, ಕೋಟಿಯ ತೋಟಲ್ಲಿ ಕಂಡವಡ. ಬಾಳೆ ಸರಪ್ಪು ಹರಿವ ಶಬ್ದ ಕೇಳಿಓಡಿ ಬಂದು ನೋಡುವಗ ಕಂಡದಡೊ. ಇರುಳು ತೋಟ ಕಾವ;ಲಿಂಗಂತೂ ಬಂದದಲ್ಲ. ಕದಿವಲೇ ಇರೆಕ್ಕು ಹೇಳಿ ಹೀಂಗೇ ಬಿಟ್ಟರೆ ಆಗ ಹಿಡುಕ್ಕೊಂಡೋಗಿ ಪೋಲಿಸಿಂಗೆ ಕೊಡೆಕ್ಕು ಹೇ:ಳಿದವಡೊ.ಕಳ್ಳ ಹೇಳುಲೆ ರುಜುವಾತು ಎಂತ ಇದ್ದು ಕೇಳಿದ್ದಕ್ಕೆ,ಆಚೀಚ ತೋಟದೋರೆಲ್ಲ ಒಟ್ಟು ಸೇರಿ ಆಲೋಚನೆ ಮಾಡಿದವಡೊ. ಅಂಬಗ ಅಕ್ಕೆ ಹೊಳದ್ದು, ಮರ ಹತ್ತಿ ನಾಲ್ಕೈದು ಕೊನೆ ಅಡಕ್ಕೆ ಆದರೂ ತೆಗವದು. ಕಳ್ಳನ ಹಿಡುಕ್ಕೊಂಡು ಅಡಕ್ಕೆಯನ್ನೂ ತೆಕ್ೊಂಡು, ಬದಿಯಡ್ಕ ಹೇಳಿರೆ ಹತ್ತು ಮೈಲು ನಡೆಯೆಕ್ಕು. ಕಳ್ಳನ ಹಿಡುಕ್ಕೊಂಡು ಹೋಪಗ ಮಾತಾಡಿದ್ದೇ ಇಲ್ಲೆಡೊ. ಎಷ್ಟೊಂದು ಪಾಪ ಹೇಳಿ ಯೋಚನೆ ಮಾಡುಲಕ್ಕನ್ನೆ.ಇರುಳೇ ಅಪ್ಪನೂ ಮತ್ತೊಂದು ಆಳೂ ಹೋವಡೊ. ಕಳ್ಳನ ಅಲ್ಲ ಒಪ್ಪುಸಿದವಡೊ. ಉದಿಯಾದರೆ ಹೇಂಗೆ ಹೇಳುವದು! ಅಂತೂ ಉದಿಯಪ್ಪಗ ಮನೆಗೆ ಂದವಡೊ.
ಮರದಿನ ಶುದ್ದಿ ಆದ್ದು ಹೇಂಗೆ ಹೇಳಿರೆ ಸಂಬಳ ಕೇಳುಲೆ ಬಂದದರ ತುಂಬಾ ಇರುಳು ವರೆಗೆ ಕಾಯಿಸಿ, ಸಂಬಳ ಕೇಳಿದ್ದಕ್ಕೆ ಕೋಪಲ್ಲಿ ನಾಲ್ಕು ಬಡುದು, ಸ್ಟೇಶನಿಂಗೆ ಕೊಂಡು ಹೋಯಿದವಡೊ ಹೇಳಿ. ಆ ಸಮಯಲ್ಲೆ ರಜ ಕಮ್ಯೂನಿಶ್ಟ್ ಪ್ರಭಾವ ಜಾಸ್ತಿ ಇತ್ತು. ಪಾಪದೋರ ಸುಮ್ಮನೆ ಕಳ್ಳ ಹೇಳಿ ಮಾಡಿ ರಿಮಾಂಡಿಂಗೆ ಕಳುಸಿದ್ದು ತಪ್ಪು.ಹೇಳಿತೂಂಡು ಲೀಡರುಗೊ ಎಲ್ಲ ಮನಗೆ ದಾಳಿ ಶುರು ಮಾಡಿದವಡೊ. ಎನ್ನ ದೊಡ್ಡಪ್ಪನೇ ನಾಲ್ಕು ಗುದ್ದು ಹಾಕದ್ದು. ಅದಕ್ಕೆ ಕಷಮೆ ಕೇಳುವದರೊಟ್ಟಿಂಗೆ ಒಂದು ಗುದ್ದಿಂಗೆ ಐನೂರು ರೂಪಾಯಿಯ ಹಾಂಗೆ ದಂಡ ಕೊಡೆಕ್ಕು ಹೇಳಿ ಕೇಳಿದವಡೊ. ದೊಡ್ಡಪ್ಪ ದಂಡ ಕೊಟ್ಟೂ ಆತು. ಇಬ್ರು ಸಾಕ್ಷಿದಾರರ ಕಕ್ಕೊಂಡು ಬರೆಕ್ಕು ಹೇಳಿದ ಕಾರಣ ಕೇಸ್ ದೋಡ್ಡ ಮಾಡುಲೆ ಸಲಹೆ ಕೊಟ್ಟೋರು ಅರುದೆ ಒಪ್ಪುತ್ತವಿಲ್ಲೆ. ಮ ಹತ್ತಿ ಅಡಕ್ಕೆ ತೆಗದವನ ಅಂಗುಡಿಗೆ ಬೀಗ ಹಾಕಿ ಬಂದರೆ ಕೊಲ್ಲೆವೆಯೋ ಹೇಳಿ ಬೆದರಿಕೆ ಹಾಕಿದವಡೊ.ಅಪ್ಪನೂ ಬದಿಯಡ್ಕಂದ ಬಪ್ಪಗ ದಾರಿಲ್ಲಿ ಕಾದು ಕೂದು ಸುಮ್ಮನೆ ಪಾಪ ಮನುಷ್ಯನ ಮೇಲೆ ಎಂತಗೆ ಹೀಂಗೆ ಕೇಸ್ ಮಾಡಿದ್ದು? ಕೇಸ್ ಹಿಂದೆ ತೆಗದು ಕೋಟಗೆ  ದಂಡ ಕೊಡೆಕ್ಕು ಹೇಳಿ ಜೋರೇ ಜೋರಡೊ.ಅಪ್ಪ ಅಕ್ಕೆ" ಈ ವಠಾರಲ್ಲಿ ಎನ್ನ ಗೊಂತಿಲ್ಲದ್ದೋರು ಆರುದೆ ಇಲ್ಲೆ.ಇಂತಹ ಅನ್ಯಾಯ ಮಾಡುವ ಬುದ್ಧಿ ಎನಗಿಲ್ಲೆ. ಆಚೆಮನೆ ತೋಟದೋರು ಎನ್ ತೋಟಲ್ಲಿ ಕಂಡದು. ಆ ವಿಷಯ ಕೋಟಿಯೂ ಒಪ್ಪುತ್ತನ್ನೆ. ಆನು ದಂವೂ ಕೊಡೆ. ಕೇನ್ನ ಹಂದೆ ತೆಕ್ಕೊಳ್ಳೆ. ನಿಂಗೊ ಮಾಡುವರ ಮಾಡಿ"ಹೇಳುವಗ ಅವರ ಪೈಕಿ ಒಬ್ಬ" ಇವ್ವು ಹಾಂಗಿಪ್ಪೋವಲ್ಲ.ಒಳ್ಳೆ ಜನ ಇವರ ಸುದ್ದಿಗೆ ಹೋಪದ ಸರಿಯಾವುತ್ತಿಲ್ಲೆ "ಹೇಳಿ ಮತ್ತೆ ಎಲ್ಲೋರುದೆ ಜಾಲಿಂದ ಅಕ್ಕೆ ಪೂಜಲೆ ಬಂದೋವು ಹಾಂಗೇ ಹೋದವಡ. ಈ ವಿಷ್ಲ್ಿ ಒಗ್ಣೆ ಹಾಕುಲು ಹೋಟ್ಳು ಮಡಿಕ್ಕೊಂಡಿದ್ವನೂ ಸೇರಿದಡ. ಕೋಟಿ ಕಳ್ಲತನ ಮಾಡುವ ಮನುಷ್ಯ ಅಲ್ಲ. ಅದರ ಸುಮ್ಮನೆ ಎಲ್ಲೋರೂ ಸುಮ್ಮನೆ ಕಳ್ಳ ಮಾಡಿದ್ದು" ಹೇಳುಲೆ ಶುರು ಮಾಡಿದಡೊ.ಅಂತೂ ಇಂತೂ ಅಪ್ಂಗೆ ಕಾರ ಕೊಟ್ಟದು ಪೋಲೀಸುಗೊ ಮಾಂತ್ರ. ಸಾಕ್ಷಿ ಹೇಳುಲೆ ಒಪ್ಪಿದೋರು ಎಂಗೊ ಹೇಳುತ್ತಿಲ್ಲೆಯೋ ಹೇಳಿದ್ಕ್ಕೆ ಕೋರ್ಟಿಂದ ಸಮನ್ಸ್ ಮಾಡುಸಿಪೋಲೀಸುಳೇ ಕಕ್ಕಂು ಹೋದವಡೊ.
        ಅಂತೂ ಆರು ತಿಂಗಳು ಓಡಾಡಿದ್ದಕ್ಕೆ. ಎರಡು ತಿಂಗಳು ದಿನ ವಾರ ವಾರ ಸ್ಟೇಶನಿಂಗೆ ಹೋಗಿ ದಸ್ಕತ್ ಕೊಟ್ಟಿಕ್ಕಿ ಬರೆಕ್ಕು ಹೇಳುವ ತೀರ್ಪು ಆಗಿತ್ತಡೊಇಲ್ಲಿ ಆನು ಕೇಳುವದು ಕೋಟಿ ಕಳ್ಳ ಆದ್ದು ಹೇಂಗೆ ಹೇಳಿ.ಇರುಳು ತೋಟಕ್ಕೆ ಬಪ್ಪಷ್ಟು ಧೈರ್ಯ ಇದ್ದ ಮನುಷ್ಯ ಅಲ್ಲ. ಧೈರ್ಯ ಎಲ್ಲಿಂದ ಆರು ಕೊಟ್ಟವು. ಕೇಸ್ ದೊಡ್ಡ ಮಾಡೆಕ್ಕು ಹೇಳಿದೋರು ಮರಹತ್ತಿ ಅಡಕ್ಕೆ ತೆಗದೋರು ಮತ್ತೆಂತಗೆ ತಪ್ಪುಸಿದ್ದು?ಎಲ್ಲೋರೂ ಸೇರಿ ಜೋರು ಮಾಡುತ್ತಿದ್ದರೆ ಮರ್ಯಾದಿ ಹೋಗಿ ಊರು ಬಿಟ್ಟೇ ಹೋಪಂತಹ ಮನುಷ್ಯ,ಧೈರ್ಯ ಮಾಡಿ ಬರೆಕ್ಕಾದರೆ ಬಹುಷಃಆರೋ ಹಿಂದಂದ ಬಲ ಇತ್ತಿದ್ದವು.ಹೇಳುವದು ಖಂಡಿತ.ಇಡೀ ಸಮಾಜವೇ ಬೆಂಬಲವಾಗಿ ಎಂಗಳ ವಿರುದ್ಧ ಎತ್ತಿ ಕಟ್ಟೆಕ್ಕು ಹೇಳುವ ಯೋಜನೆಯಿತ್ತು ಹೇಳಿ ಕಾಣುತ್ತು. ಎಂತ ಇದ್ದರೂ ದೇವರು ಮರ್ಯಾದೆ ಒಳಿಶಿದ.ಕಾಪಾಡಿದ ಎಲ್ಲೋರು ಕೈಬಿಟ್ಟರೂ ಅವ ಕೈಬಿಟ್ಟಿದಾ ಇಲ್ಲೆ
Reply Reply All Forward Forward
Reply Reply All Forward Forward

ಹೊಟ್ಟೆ ಕಿಚ್ಚು

  ಹೊಟ್ಟೆ ಕಿಚ್ಚು
ಮೇಗಣ ಬಾಳಿಕೆ,ಕೆಳಾಣ ಬಾಳಿಕೆ ಹತ್ತರೆ ಇಪ್ಪ ಮನಗೊ. ದೊಡ್ಡಕ್ಕೆ ದನಿಗೇಳಿದರೆ ಕೇಳುಗು.ಮದಲಿದ್ದೋರು ಎಂಗಳ ದಾಯಾದಿಗೊಡೊ. ಎಂಗೊ ಸಣ್ಣಾಗಿಪ್ಪಗಳೆ ಇದ್ದದು ಾವುದೇ ಎಂಗಳ ಕುಟುಂಬದೋೆ. ಮದಲಿದ್ದರಿಂಗು ಎಂಗೊಗೂ ಯಾವಾಗಳೂ ಜಗಳ ಇತ್ತಡೊ. ದುಬಾರಿ ಖರ್ಚು ಮಾಡಿ ಎಲ್ಲ ಳಕ್ಕೊಂಡು ಆಸ್ತಿಯ ರುವಳಕ್ಕೆ,ಆರುವಾರ ಮಾಡಿ ಕೊಟ್ತದು ಬಿಡುಸುಲೆ ಎಡಿಯದ್ದೆ ಜಾಗೆ ಮರುವಳಕ್ಖೇ ಆತಡೊ. ಅಂಬಗ ಇದ್ದೋರು ಮರುವಳದೋರ  ಒಕ್ಕಲುಗೊ.ಅವರ ಮಕ್ಕಳುದೇ ಎಂಗಳುದೇ ಒಟ್ಟಿಂಗೆ ಶಾಲಗೆ ಹೋಪದು.ಹತ್ತರೆ ಇದ್ದ ಶಾಲೆಲ್ಲಿ, ಐದನೇ ಕ್ಲಾಸ್ ವರೆಗೆ ಮಾಂತ್ರ ಆದ ಕಾರಣ ಮತ್ತೆ ಪೆರ್ಲಕ್ಕೋ ಮಂಜೇಶ್ವರಕ್ಕೋ ಹೋಯೆಕ್ಕಾಗಿ ಬಂತು.ತುಂಬ ಅನ್ಯೋನ್ಯವಾಗಿ ಇತ್ತಿದ್ದೆಯೋ.ರಜೆಲ್ಲಿ ಅವರ ಮನೆ ಜಾಲು ದೊಡ್ಡ ಇದ್ದ ಕಾರಣ ಆಡುಲೆ ಹೋಪದು ಅಲ್ಲಿಗೇ.ಹೋದರೆ ಸಾಂತತ್ತೆ ಹಪ್ಪಳ ಒಣಗುಸಿಗೊಂಡಿದ್ದರೆ ಸುಟ್ಟಾಕಿ ಎಂಗೊಗೂ ಕೊಡುಗು. ಜಾಲಿಲ್ಲಿ ಸಾಂತಾಣಿ ಒಣಗುಲೆ ಹಾಕಿದ್ದರೆ ಎಂಗೊ ಆಡಿಗೊಂಡಿಪ್ಪಗ ಒಂದೊಂದು ಹೆರ್ಕಿ ತಿಂಬದು.
   ಮನೆಲ್ಲಿ ದೊಡ್ಡೋರುದೇ ಹಾಂಗೆ ಕೆಳ ಬೈಲಿಂಗೆ ಹೋಪಗ ಅವಜಾಲಿಲ್ಲೇ ಹೋಯೆಕ್ಕು. ದಾರಿಲ್ಲಿ ಹೋಪಗ ಅವರ ಮಾತಾಡುಸಿಗೊಂಡೇ ಹೋಪದು. ಮಾಲಿಂಗಜ್ಜ ಇದ್ದರೆ ಒಳ ಜೆಗುಲಿಲ್ಲಿ ಕೂದು ರಜ ಶುದ್ದಿ ಮಾತಾಡಿಕ್ಕಿಯೇ ಕೆಳ ಹೋಪದು.ಮನೆಲ್ಲಿ ಗೆಂಡು ಮಕ್ಕೊ ಏನಾದರೂ ಇರುಳಿಂಗಪ್ಪಗ ಇಲ್ಲದ್ದರೆ ಮನೆಂದ ಅಜ್ಜಿ ಹೋಕು ಅಲ್ಲಿಗೆ ಸಂಗಾತಕ್ಕೆ.ಆ ಶುದ್ದಿ ಈ ಶುದ್ದಿ ಮಾತಾಡ್ಯೊಂಡು ಉದಿಯಪ್ಪಗ ಅಜ್ಜಿ ಮನಗೆ ಬಕ್ಕು. ಬೇಡುತ್ತೋವೋ ಅಪರಿಚಿತ ಜನಂಗಳೋ ಬಂದರ್ತೆ ಸಾಂತತ್ತೆಗೆ ಧೈರ್ಯಕ್ಕೆ ಅಜ್ಜಿ ಬೇಕು ಅವರತ್ರೆ ಮಾತಾಡುಲೆ.ಎಂತಾದರೂ ತೀಡಿ ಮಾಡಿದರೂ ಎಂಗಳ ಮನಗೆ ಅವುದೇ ತಂದು ಕೊಡುಗು. ಎಂಗಳೂ ಕೊಟ್ಟುಗೊಂಡಿತ್ತಿದ್ದೆಯೊ. ಎಂಗೊಗೆ ತಂಗೆ ಆವುತ್ತು.ಒಂದು ಕೂಸು ಅವರದ್ದು,ಶಾಲಗೆ ಹೋಪಗ ಸಂಗಾತಕ್ಕೆ ಎಂಗಳ ಒಟ್ಟಿಂಗೇ ಕಳುಸುವದು.
ಹೀಂಗೆ ಕೆಲವು ವರ್ಷ ಒಟ್ಟಿಂಗೆ ಕಳಿವಗ, ಎಂತ ಕಾರಣ ಗೊಂತಿಲ್ಲೆ. ಒಂದು ದಿನ ಕೆಳ ಬೈಲಿಂಗೆ ಹೋಪಗ ಅವರ ಬೆಶಿನೀರ ಕೊಟ್ಟಗೆಲ್ಲಿ ಅಂದಿರುಳು ಮೈಲುತುತ್ತು ನೀರಿಂಗೆ ಹಾಕಿದ್ದು ಉದಿಯಪ್ಪಗ ನೋಡುವಗ ಅಳಗೆ ಖಾಲಿ ಅಡೊ. ಅಂಬಗ ಎಲ್ಳೋರುದೇ ಮಣ್ಣಳಗೆಲ್ಲೇ ಮೈಲುತುತ್ತು ನೀರಿಂಗೆ ಹಾಕುವದು.ಅಳಗೆ ಮಾಂತ್ರ ತುಂಬ ಸಮಯ ಆದ ಮೇಲೆ ಅಡರುತ್ತನ್ನೆ! (ಚೆಂಬಿನ ಪಾತ್ರೆಲ್ಲೋ ಅಥವಾ ಬೇರೆ ಕೀಜಿ ಪಾತ್ರೆಲ್ಲಾದರೂ ಹಾಕಿದರೆ ಮೈಲುತುತ್ತು ಪಾತ್ರೆಯನ್ನೆ ಕರಗುಸುತ್ತಡೊ). ಹಾಂಗೆಂತಾರು ಆಯಿಕ್ಕು ಹೇಳಿದರೆ ನಂಬವು.ಅಂತೂ ಅಲ್ಲಿಂದ ಕೆಳ ಬೈಲಿಂಗೆ ಹೋಪಗ ಆಳುಗೊ ಹೇಳಿದವು"ಮೈಲುತುತ್ತು ನೀರು ಕಳವಾತುಂಡಿಗೆ,ಏರೋ ಮುಟ್ಟತಾಕ್ಳು ಆತುಪ್ಪೋಡು.ಕಂಡುತು ಕೊಂಡೋಂಡ ಬಜ್ಜೆಯಿಗು ರೋಗ ಬರಾಂದತ್ತೊ!ಅಂಚ ಮುಟ್ಟತಾಖ್ಳೇ ಕಂಡಿನೆ.ಏರು ಎಂದು ಅಂಜನ ಸೂತು ಆಣ್ಜೆ ಪಣ್ತುಂಡಿಗೆ" ಹೇಳಿ ಶುದ್ದಿಯೋ ಶುದ್ದಿ. ಆ ಮನೆಯೋರೇ ಎಂಗಳ ಮನೆಯೋರ ಮೇಲೆ ಎಂಗಳೇ ಕದ್ದದು ಹೇಳಿ ಕೂಡಾ ಹೇಳಿತ್ತಿದ್ದವಡೊ. ಆ ಬಂಟನೋ ಒಬ್ಬಂಗೆ ಮಾಟ ಮಡಗಿಕ್ಕಿ ಅವ ಹೋದರೆ ಇಂಥೋನೇ ನಿನಗೆ ಮಾಟ ಮಡಗಿದ್ದವು ಹೇಳಿ ಅಂಜನ ನೋಡಿ ಹೇಳುಗಡೊ. ಈ ವರ್ಷ ಅಡಕ್ಕೆ ಬೆಳೆ ಒಳ್ಳೆದಿತ್ತು. ಗೇಣಿ ಕೊಟ್ಟು ಒಳಿತ್ತಿತ್ತು. ಅದರ ಇಲ್ಲದ್ದೆ ಮಾಡಿದವು ಹೇಳಿ ಎಲ್ಲ ಗುಲ್ಳೇ ಗುಲ್ಲು. ಆದರೆ ಂಬುವ  ಮಾತಲ್ಲ ಹೇಳಿ ಆಳುಗೊ ಕೂಡಾ ಅವರ ತಮಾಶೆ ಮಾಡ್ಯೊಂಡಿತ್ತಿದ್ದವಡೊ.
ಎಲ್ಲ ಬಪ್ಪದು ಷಡ್ವೈರಿಗಳಲ್ಲೊಂದಾದ ಮತ್ಸರಂದ. ದೊಡ್ಡಪ್ಪ -ಅಪ್ಪ ಎಂಗ  ಳೊಳಗೆ ಪಾಲಾಗಿ ಬೇರೆ ಬೇರೆ ಇದ್ದರೂ ಹಗೆ ಹೆಚ್ಚಿಗೊಂಡೆ ಹೋಗಿಹೆರಿಯೋರು ಮಾಡಿದ ಜಾಗೆಲ್ಲಿ ಮುಕ್ಕಾಲಂಶ ಹೋದರೂ ಹೊಟ್ಟೆ ಕಿಚ್ಚು ಕಡಮ್ಮೆ ಅಗದ್ದೆ" ಅವಂಗೆ ಪಾಲಿಲ್ಲಿ ಹೆಚ್ಚು ಸಿಕ್ಕಿದ್ದು, ಅವನ ಉಂಬಲೆ ಬಿಡೆ ಹೇಳ್ಯೊಂಡು ಏನಾದರೂ ಸಿವಿಲ್ ವ್ಯಾಜ್ಯ ತಂದುಗೊಂಡೋ, ಗೇಣಿ ಒಕ್ಕಲು ಹೇಳಿದೋರ ಕಡೆ ಸೇರಿ ಅವಕ್ಕೆ ಸಹಾಯ ಮಾಡ್ಯೊಂಡೋ ಇದ್ದೋರು ದೊಡ್ಡಪ್ನ ಪಾರ್ಟಿಯೂ ಹಟಲ್ಲಿ ಮತ್ತೆ ಜಾಗೆ ಮಾರಿಕ್ಕಿ ಹೋದವು ಕೆಳಾಣ ಜಾಗೆಯ ಒಡೆಕ್ಕಾರಂಗೆ ಅರಧ ಜಾಗೆ ನಂಬ್ರ ಮಾಡಿ ಸಿಕ್ಕಿದರೂ ಮತ್ತೆ ಗೇಣಿ ಒಕ್ಕಲಿಂಗೆ ಕೊಟ್ಟು    ಒಕ್ಕಲು ಹಿತ ಮಸೂದೆ ಬಂದು ಅದುದೇ ಹೋತು.ಎಂಗೊ ಕಲ್ತು ಒಂದು ನೆಲಗೆ ಬಂದದು ಹಿತ ಅಗದ್ದೆಹುಳುಕ್ಕು ಮಾಡಿ ಕಳಕ್ಕೋಂಡವು. ಕಾಲಕ್ರಮಲ್ಲಿ ಮಕ್ಕೊ ವಿದೇಶಲ್ಲಿ ಇಪ್ಪಗ ಎಂಗೊ ಮಾಂತ್ರ ಊರಿಲ್ಲಿ ನಂಬಲಾಗದ್ದೆ ಜಾಗೆ ಮಾರಿಕ್ಕಿ ಮಂಗಳೂರಿಂಗೆ ಬಂದೆಯೊ.
ಪುರಾಣ ಕಾಲಲ್ಲೇ ಹೊಟ್ಟೆಕಿಚ್ಚಿನ ತಡವಲೆಡಿಯದ್ದೆ ಬಸುರನ್ನೆ ಪೊಜಕ್ಕಿಗೊಂಡದು ಗಾಂಧಾರಿ.ಮತ್ತೆ ವೇದವ್ಯಾಸನೋ ಆರೋ ಬಂದು ಮಾಂಸಮುದ್ದೆ ಜೋಡುಸಿ ನೂರಒಂದು ಮಕ್ಕೊ ಆದವು ಹೊಟ್ಟೆಕಿಚ್ಚಿಂದ ಅವರ ರಾಜ್ಯವನ್ನೇ ಅಪಹರಿದ್ದಕ್ಕೆ ಯುದ್ಧವೇ ಆತು.ಈಗಳೂ ದೇಶ ವಿದೇಶಂಗಳಲ್ಲಿ ಹೊಟ್ಟೆ ಕಿಚ್ಚಿನ ಸುಡುವಿಕೆಂದಒಬ್ಬಕ್ಕೊಬ್ಬ ತಾಂಟಿಗೊಂಡಿದ್ದವು. ಜಾತಸ್ಯ ಮರಣಂ ಧ್ರುವಂ ಹೇಳುವದು ಗೊಂತಿದ್ದರೂ ಇಂತಹ ಹಳೆ ಗೊಂತಿದ್ದೋರುದೇ ಹೊಟ್ಟೆ ಕಿಚ್ಚಿನ ತಣಿಶಿಗೊಂಬಲೆಡಿಯದ್ದೆ ಅಸಬಡಿತ್ತವು. ಎಲ್ಲ ದೇವರ ಮಾಯೆ ಹೇಳೆಕ್ಕಷ್ಟೆ! ಅವನ ಆಸೆಯೂ ಹೀಂಗೇ ಇದ್ದೋ ಏನೋ! ಎಲ್ಲ ಅವಂಗೇ ಬಿಡೆಕ್ಕಷ್ಟೆ.

ಕಳ್ಳ ಪತ್ರಡೆ ತಿಂದದು

                         ಕಳ್ಳ  ಪತ್ರಡೆ ತಿಂದದು
   ಜಾಲಿಲ್ಲಿ ಮಳೆಗಾಲಲ್ಲಿ ಮುಳ್ಳು ಸೌತೆ ಮಾಡುವದು ಕ್ರಮ.ವೈಶಾಖಲ್ಲಿ ಜಾಲ್ಲಿ ಅಡಕ್ಕೆ ಒಣಗುಸೆಕ್ಕಾರೆ, ಮಳೆಗಾಲಲ್ಲಿ ಜಾಲು ಜೋರು ಮಳೆ ಬಿದ್ದು ಕರಗಿ ಹೋಪಲಾಗ ಹೇಳಿ ಬಾಳೆ ಚಾಂಬಾರು, ಸೋಗೆ ಹೀಂಗೆಲ್ಲಾ ಹಾಕೆಕ್ಕಾವುತ್ತು.ಸಾಲಾಗಿ ಅಲ್ಲಲ್ಲಿ ಮಣ್ಣು ಹಾಕಿ ಸಾಲು ಮಾಡಿದರೆಮುಳ್ಳು ಸೌತೆ ಬೆಂಡೆ ,ದಾರ್ಳೆ ಹಿಂಗೆಲ್ಲ ಮಾಡುವದಿದ್ದು. ಆ ವರ್ಷವೂ ಜಾಲ್ಲಿ ಮಾದಿದ ಕೃಷಿ ಚೆನ್ನಾಗಿ ಬಂದಿತ್ತು. ಮುಳ್ಳು ಸೌತೆಯೂ ಗೆಂಟು ಗೆಂಟು ಮೆಡಿ ಬಿಟ್ಟಿತ್ತು. ಎಳತ್ತು ಮೆಡಿಯ ರಜ ಉಪ್ಪು ಕೂಡುಸಿ ತಿಂಬದಿದ್ದು. ರಜ ದೊಡ್ಡದಾದರೆ ಸಳ್ಳಿ ಹಾಲುವದುಮತ್ತೆ ಬೆಳದ ಮೇಲೆಕೊಟ್ಟಿಗೆ, ಪಾಯಸ ಹೀಂಗೆಲ್ಲ ಮಾಡಿ ತಿಂಬದು. ಒಟ್ಟಾರೆ ಮಳೆಗಾಲದ ಕೃಷಿ ಜಾಲ್ಲೇ ಆವುತ್ತು. ಅಂದುದೇ ಮುಳ್ಳುಸೌತೆ ಮೆಡಿ ತಿಂದುಗೊಂಡಿಪ್ಪಗ ಆಚೆ ಮನೆ ಅಣ್ಣ ಬಂದ. ಎಂಗೊ ಯಾವಾಗಲೂ ಅವರ ಮನೆಗೆ ಆನು,ಎಂಗಳ ಮನೆಗೆ ಅವ ಹೀಂಗೆ ಲೋಕಾಭಿರಾಮ ಮಾತಾಡಿಕ್ಕಿ ಹೋಪದು. ಹೀಂಗೆ ವಿಚಾರ ವಿನಿಮಯಂದ ಹೊಸ ಹೊಸ ಶುದ್ದಿಗೊ ಗೊಂತಾವುತ್ತು
  ಅಂದು ಅವನತ್ರೆ ದೊಡ್ಡ ಶುದ್ದಿಯೇ ಇತ್ತು." ನಿನ್ನೆ ಮೇಗಾಣ ಮನೆಲ್ಲಿ ಕಳವಾಯಿದಡೊ.ಬೇರೆ ಎಂತದೂ ಕೊಂಡು ಹೋಪಲೆ ಸಿಕ್ಕದ್ದೆ ಒಂದು ಅಟ್ಟಿನಳಗೆ ಮಾಂತ್ರ ಕೊಂಡು ಹೋಯಿದವಡೊ.ಅದುದೇ ಒಲೆ ಮೇಲೆ ಇದ್ದದರ!ಆ ಮನೆಲ್ಲಿ ಹೆಮ್ಮಕ್ಕೊ ಮಾಂತ್ರ ಅಂದು ಇದ್ದದು. ಬಹುಷಃ ಗೊಂತಾಗಿಯೇ ಬಂದದಿರೆಕ್ಕು. ಅಟ್ಟಿನಳಗೆಲ್ಲಿಯೂ ಪತ್ರಡೆ ಮಾಡಿ ಬೇವಲೆ ಇರುಳೇ ಮಡಿಗಿತ್ತಿದ್ದವಡೊ. ಬೇವಲೆ ಬೇಕಾದಷ್ಟು ಕಿಚ್ಚು ಹಾಕಿತ್ತಿದ್ದವಡೊ. ಕೊಂಡು ಹೋದವಕ್ಕೆ ಅಳಗೆ ಕೊಂಡು ಹೋಯೆಕ್ಕಾರೆ ಅಳಗೆಲ್ಲಿದ್ದ ಪತ್ರಡೆ ಅಡ್ಡಿ ಆತುಹೇಳಿ ಕಾಣುತ್ತು. ಮನೆಯೋವು ಮಾಡಿ ಮಡಗಿದ್ದು ಎಲ್ಲ ಇತ್ತಿಲ್ಲೆಡೊ ಬಹುಷಃ ಎಡಿಗಾದಷ್ಟು ತಿಂದು ಒಳುದ್ದರ ಬಿಟ್ಟಿಕ್ಕಿ ಹೋದ್ದದಾಗಿಕ್ಕು" ಹೇಳಿ ಹೊಸ ಶುದ್ದಿ ಹೇಳಿದ. ಎಂಗಳ ಆ ಮೂಲೆಲ್ಲಿ ಏಳೆಂಟು ಮನಗೊ. ಆ ಮನೆಯ ಹತ್ತರೆ ಬೇರೆ ಮನೆ ಇಲ್ಲೆ. ಹಾಂಗೆ ವಿಷಯ ಸರಿಯಾಗಿ ತಿಳುದೇ ಒಳಹೊಕ್ಕಿದವು. ಅಂದರೆ ಎನ್ನ ಬುದ್ಧಿ ಅಎತ ಮೇಲೆ ಆ ಮೂಲೆಲ್ಲಿ ಮನೆ ಹೊಕ್ಕದು ಅದು ಶುರುವೇ. ಪೋಲಿಸ್ ಕಂಪ್ಲೈಂಟ್ ಕೊಟ್ಟಿದವಡೊ.ಬಂದು ಒಳ ಎಲ್ಲ ನೋಡಿಕ್ಕಿ ಹೋಯಿದವು ಹೇಳುವ ಶುದ್ದಿಯನ್ನೂ ಹೇಳಿದ. ಹತ್ತರಾಣ ಮನೆಲ್ಲಿ ಹಾಂಗೆ ಕಳವದರೆ ಅದೂ ಹೊಸತ್ತು ಆಗಿಪ್ಪಗ ಅವಕ್ಕೆ ಸಾಂತ್ವನ ಹೇಳೆಕ್ಕಾದ್ದು ಧರ್ಮ ಅಲ್ಲದೋ? ಹಾಂಗೆ ಹೋಗಿ ಆತು. ಎರಡು ದಿನ ಕಳುದಪ್ಪಗ ಒಂದು ಕಳ್ಳ ಸಿಕ್ಕಿ ಬಿದ್ದಿದು ಹೇಳಿಯೂ ಗೊಂತಾತು. ನಾಲ್ಕು ಬಡುದು ಕೇಳುವಗ ಬೇರೆಂತದೂ ಸಿಕ್ಕದ್ದದಕ್ಕೆ ಒಂದು ಪಾತ್ರೆ ಮಾಂತ್ರ ಕೊಂಡು ಹೋದ್ದು ಹೇಳಿಯೋ ಎಂಗೊ ನಾಲ್ಕು ಜನ ಬಂದಿತ್ತಿದ್ದೆಯೋ ಹೇಳಿಯೋ ಒಪ್ಪಿತ್ತಡೊ.ಮತ್ತೆ ಎರಡು ದಿನಲ್ಲಿ ಒಳುದೋವುದೆ ಸಿಕ್ಕಿದವು . ಅವರ ಹೇಳಿಕೆ ಹೇಂಗೆ ಹೇಳಿದರೆ "ಪತ್ರಡೆ ಎಲ್ಲ ಹೆರ ಚೆಲ್ಲಿಕ್ಕಿ ಪಾತ್ರೆ ಮಾಂತ್ರ ಕೊಂಡೋಪೊ ಹೇಳುವಗ ಒಂದು ಮನುಷ್ಯ ಬೇಡ ಹೇಂಗಾದರೂ ಅಂತೆ ಇಡುಕ್ಕಿಕ್ಕಿ ಹೋಪದು ಬೇಡ. ನಿಂಗೊಗೆ ಬೇಡದ್ದರೆ ಎನಗೆ ಬೇಕು" ಹೇಳಿ ಹೊಟ್ಟೆ ತುಂಬ ಅವ ಒಬ್ಬನೇ ತಿಂದದಡೊ. ಒಳುದವಕ್ಕೆ ಹೆಸರೋ ರುಚಿಯೋ ಗೊಂತಿಲ್ಲೆ.ಈ ಮನುಷ್ಯ ಬ್ರಾಹ್ಮರ ಮನೆಗೊಕ್ಕೆ ಕೆಲಸಕ್ಕೆ ಹೋಗಿಪ್ಪಗ ಅದರ ಹೆಸರು ರುಚಿ ಎಲ್ಲ ಗೊಂತಿದ್ದ ಕಾರಣ ನೋಡಿ ಕೊದಿ ತಡೆಯದ್ದೆ ತಿಂದದಡೊ. ಆ ಮನುಷ್ಯ ಹಿಡಿವಲೆ ಸಿಕ್ಕಿದ್ದೂ ವಿಶೇಷ! ಪೋಲೀಸುಗಳ ಕಂಡಪ್ಪಗ ಗುಡ್ಡೆ ಗುಡ್ಡೆ ಓಡಿಹೋತಡೊ. ಪೋಲೀಸುಗೊ ಹತ್ತೆರೆ ಎತ್ತಿದವು ಹೇಳಿ ಅಪ್ಪಗ ಮಳೆನೀರಕಣಿಲ್ಲಿ ಉದ್ದಕ್ಕೆ ಮನುಗಿತ್ತಡೊ. ಆದರೂ ಪೋಲಿಸುಗೊಕ್ಕೆ ಗೊಂತಾಗಿ ಹಿಡುದವು.ನಾಲ್ಕಕ್ಕು ಆರು ತಿಂಗಳು ಅನುಭವಿಸೆಕ್ಕಾಗಿ ಬಂತು. ಶಿಕ್ಷೆ ಮುಗುದ ಮೇಲೆ ಊರಿಂಗೆ ಬಂದೋನು" ಜೈಲು ಶಿಕ್ಷೆ ಯಾವ ಮಜ ಇದ್ದು ವಾರ ವಾರ ಮಾಂಸದ ಊಟ, ಕೆಲಸ ಮಾಡಿದರೆ ಶಿಕ್ಷೆ ಮುಗುದಿಕ್ಕಿ ಬಪ್ಪಗ ಕೈಗೆ ಕಾಸೂ ಕೊಡುತ್ತವು" ಹೇಳಿ ಹೆಗ್ಗಳಿಕೆ ಹೇಳಿಗೊಂಡಿತ್ತಿದ್ದನಡೊ. ಆದರೆ ಎದುರಂದ ಹೇಳದ್ದರೂ "ಪತ್ರಡೆ"ಹೇಳುವ ಅನ್ವರ್ಥ ನಾಮ ಸಾವನ್ನಾರ ಎಂತಗೆ ಈಗ ಅವನ ಶುದ್ದಿ ತೆಗದರೆ ಪತ್ರಡೆ ಶುದ್ದಿಯೂ ಬಕ್ಕು.ಆನೆ ಕದ್ದರೂ ಕಳ್ಳ, ಅಡಕೆ ಕದ್ದರೂ ಕಳ್ಳ ಕಳ್ಳನೇ ಅಲ್ಲದೋ?

Reply Reply All Forward Forward
Reply Reply All Forward Forward WelcomeInboxNewFoldersMail Options
 

Sunday, February 24, 2013

ನೆನಪಿನ ಬುತ್ತಿ

         ನೆನಪಿನ ಬುತ್ತಿ
ಮನ್ನೆ ಒಂದು ದಿನ ಎನ್ನ ಗೆಳೆಯನೊಬ್ಬನೊಟ್ಟಿಂಗೆ ಮಾತಾಡಿಗೊಂಡಿಪ್ಪಗ ಅವನ ಗೆಳೆಯ ಒಬ್ಬ ಬಂದ. ಅವನ ಮಗಳ ಹೇಳಿಕೆ ಕಾಗದ ಕೊಡೆಕ್ಕಾಗಿತ್ತು ಅವಂಗೆ.ದೊಡ್ಡ ಮಗಳಿಂಗೆ ಮದುವೆ ಆಗಿತ್ತು. ಈಗ ಎರಡನೆ ಮಗಳ ಮದುವೆ. ಬೆಂಗಳೂರಿಲ್ಲಿ ಸೋಫ್ಟ್ ವೇರ್ ಇಂಜಿನೀಯರ್ ಅಡೊ ಮದಿಮ್ಮಾಯ. ಹೀಂಗೆ ಅವು ಇಬ್ರು ಶುದ್ದಿ ಮಾತಾಡಿಗೊಂಡಿಪ್ಪಗ ಅವನ ಕಾಂಬಲೆ ಬಂದದಲ್ಲದೋ! ಹೇಳಿ ಬಂದೋನ ಮೋರೆ ಆನು ನೋಡಿದ್ದು ಮತ್ತೆ. ಅವನುದೇ ಎನ್ನ ನೋಡಿದ್ದಾ ಇಲ್ಲೆ. ಆನು ಅವನ ಮೋರೆ ನೋಡುತ್ತೆ. ಎಲ್ಲಿಯೋ ನೋಡಿದ ನೆಂಪು! ಕೇಳಿಯೇ ಬಿಟ್ಟೆ. ಎನ್ನ ಗುರ್ತ ಇದ್ದೋ ಹೇಳಿ ಆನು ಕೇಳಿದ ಮೇಲೆ ಅವ ಎನ್ನ ಗಮನಿಸಿ ನೋಡಿದೋನು " ನೀವು ಬಾಳಿಕೆ ಸುಬ್ಬಣ್ನ ಭಟ್ತರಲ್ಲವೋ" ಕೇಳಿದ ಅಲ್ಲಿ ಬೇರೆ ಎರಡು ಜನ ಇತ್ತಿದ್ದವು. ಅವಕ್ಕೂ ಆಶ್ಚರ್ಯ! ಅವ ಎನ್ನ ಹೇಂಗೆ ಗುರ್ತ ಹಿಡುದ ಹೇಳಿ. " ಹೌದಲ್ಲ! ನಿಮಗೆ ಇವರನ್ನು ಮೊದಲೇ ಗೊತೋ? " ಹೇಳಿ ಅಲ್ಲಿದ್ದ ಮತ್ತೊಬ್ಬ ಕೇಳಿದ. ಕೇಳಿದೋನು,ಬಂದೋನ ದೊಡ್ಡ ಅಳಿಯನೇ ಆಗಿತ್ತಿದ್ದ. ಅವನನ್ನೂ ಎನಗೆ ಗೊಂತಿದ್ದು.
೩೬ ವರ್ಷ ಹಿಂದೆ ಆನು ಕೆಲಸ ಮಾಡ್ಯೊಂಡಿದ್ದ ಪೈವಳಿಕೆ ಶಾಲೆ ಪ್ರದೇಶಲ್ಲೇ ಪಂಚಾಯತ್ ಸ್ಬಂದಿ ಆಗಿದ್ದೋನು ಅವ. ಎರಡು ವರಷ ಮಾ॓ಂತ್ರ ಅವ ಅಲ್ಲಿದ್ದದು. ಮತ್ತೆ ಬೇರೆ ಅವನ ಊರಿಂಗೇ ವರ್ಗ ಆಗಿ ಹೋಗಿತ್ತಿದ್ದ. ಈಗ ಕೆಲಸಂದ ವಿರಾಮವೂ ಸಿಕ್ಕಿ ಹತ್ತು ವರ್ಷ ಕಳಾತು. ಎಲ್ಲೋರೂ ಅವಂಗೆ ಗುರ್ತದೋರೆ. ಒಂದರಿ ಪರಿಚಯ ಆದರೆ ಸಾಕು. ಮತ್ತೆ ಕಾಂಬಲೆ ಸಿಕ್ಕಿದರೆ ದಿನಿಗೇಳಿ ಮಾತಾಡುಸದ್ದೆ ಬಿಡ. ಎನಗೂ ಹಾಂಗಿದ್ದೋರತ್ರೆ ಮಾತಾಡುಲೆ ಇಷ್ಟ. ಅವರವರ ಸುಖ ಕಷ್ಟಂಗಳ ವಿಚಾರುಸಿ, ನಾವು ಬೇಜಾರಿಲ್ಲಿದ್ದರೆ ಅದಕ್ಕೆ ಪರಿಹಾರದ ಬಗ್ಗೆ ನವಗೆ ಆಲೋಚನೆ ಹೇಳುವದು, ಸಂತೋಷಲ್ಲಿದ್ದರೆ ತಾನೂ ಭಾಗಿಯಪ್ಪದು- ಹೀಂಗೆಲ್ಲ ಎಲ್ಲೋರತ್ರೂ ಒಳ್ಳೆದು ಅವಂಗೆ. ಎಲ್ಲೋರಿಂಗೂ ಅವನತ್ರೆ ಇಷ್ಟ. ಅಂದ್ರಾಣ ಗೆಳೆತನವ ಅವ ಮರದ್ದಾ ಇಲ್ಲೆ. ಬಾಕಿದ್ದೋರು ಕೆಲವು ಜನ ಅವಂಗೆ ಮತ್ತೆ ಕಾಂಬಲೆ ಸಿಕ್ಕಿ ಮಾತಾಡಿದ್ದೂ ಇದ್ದಡ. ಆನು ಮಾಂತ್ರ ಅಂದೇ ಕಂಡದು. ಆದರೆ ಇಲ್ಲಿ ಯೋಚನೆ ಮಾಡೆಕ್ಕಾದ್ದು ಅವನ ನೆನಪು ಶಕ್ತಿ. ಎಡೆಲ್ಲಿ ಕಾಣದ್ದ ಕಾರಣ ದೊಡ್ಡ ಮಗಳ ಮದುವಗೆ ಎನಗೆ ಹೇಳಿದ್ದ ಇಲ್ಲೆ ಬೇರೆ ಒಂದೆರಡು ಜನ ಹೋಗಿತ್ತಿದ್ದವಡೊ.ಅಂದು ಕಂಡದೇ  ಕಂಡದು. ಮತ್ತೆ ಅವ ಬಿಡನೇ ಬಿಡ. ಅಲ್ಲೇ ಹತ್ತರೆ ಅಳಿಯನ ಮನೆಗೆ ಮತ್ತೆ ಹೋಗಿ ಕರೆಯೋಲೆಯನ್ನೂ ಕೊಟ್ಟು, ಮದುವಗೆ ಬಾರದ್ದೆ ಕಳಿಯ ಹೇಳಿ ಒತ್ತಾಯ ಮಾಡಿದ. ಆನು ಅಮೇರಿಕಕ್ಕೆ ಬಪ್ಪದಕ್ಕೆ ಮೂರು ದಿನ ಮದಲೇ ಮದುವೆಯಾಗಿತ್ತು. ಹೋಗಿತ್ತಿದ್ೆ. ಅವಂಗೆ ಕೊಶಿಯೋ ಕೊಶಿ. ಅವನ ಮನೆಯೋರತ್ರೆ ಎನ್ನ ಕರಕ್ಕೊಂಡು ಹೋಗಿ ಪರಿಚಯ ಹೇಳಿ ೩೬ ವರ್ಷ ಕಳುದತ್ತು. ಎಂಗಳದ್ದು ಹಳೆ ಗೆಳೆತನ.ಹೇಳಿ ಅವನ ಹೆಂಡತ್ತಿಗೆ ಮಕ್ಕೊಗೆ ಪರಿಚಯ ಹೇಳಿದ. ಮತ್ತೆ ಅವರತ್ರೆ ಎನ್ನ ಹೊಗಳಿದ್ದೇ ಹೊಗಳಿದ್ದು. ಇವನೇ ಹೇಳಿದ ಕಾರಣ ಎನಗೆ ನೆಂಪಾದ್ದು ಹೇಳಿ ಎಂಗಳ ಗೆಳೆತನದ ಬಗ್ಗೆ ಹೇಳಿದ. ಮದುವಗೆ ಹೋದ್ದು ಕೊಶಿ ಆಗಿತ್ತು ಅವಂಗೆ.
    ಅವಂಗೂ ಎನಗೂ ಅವಿನಾಭಾವ ಸಂಬಂಧ ಉಂಟಪ್ಪಲೆ ಇನ್ನೊಂದು ಕಾರಣವೂ ಇದ್ದು. ಅವನ ಅಕ್ಕನ ಮಗ ಎಳೆ ಶಿಶುವಾಗಿಪ್ಪಗಳೇ ಅಬ್ಬೆ ತೀರಿ ಹೋದ ಕಾರಣ ಆ ಮಗುವಿಂಗೆ ಅಬ್ಬೆ ಹೇಳುಲೆ ಇವನ ಅಮ್ಮನೇ ಆಗಿತ್ತಡ. ಅಜ್ಜಿಯನ್ನೇ ಅಬ್ಬೆ ಹೇಳ್ಯೊಂಡು ಬೆಳದ್ದಡೊ ಆ ಮಾಣಿ. ಬೆಳೆದು ಎಂಟೊಂಬತ್ತು  ವರ್ಷ ಆದರೂ ಅಪ್ಪ ಇದ್ದಲ್ಲಿಂಗೆ ಬಯಿಂದಾ ಇಲ್ಲೆಡೊ. ಅವಂದ ದೊಡ್ಡೋರು ಮೂರು ಮಕ್ಕೊ ಇದ್ದರೂ ಈ ಮಾಣಿ ಅಖೈರಿಯವ ಆಗಿ ಅವನತ್ರೆ ಅಪ್ಪಂಗೆ ಪ್ರೀತಿ ಆದರೂ ಅವನ ನೋಡೆಕ್ಕಾರೆ ಅಲ್ಲಿಗೇ ಹೋಪದಡ. ಅವನ ಅಣ್ಣಂದ್ರನ್ನೇಮಾತಾಡುಸುವದು ಅಜ್ಜನ ಮನಗೆ ಹೋದರೆ ಮಾಂತ್ರ. ಅವರದ್ದು ದೊಡ್ಡ ಕುಟುಂಬ. ಹತ್ತ್ತಿಪ್ಪತ್ತು ಜನ ಇದ್ದವು ಆ ಮನೆಲ್ಲಿ. ಮಾಣಿ ಬಯಿಂದನೇ ಇಲ್ಲೆಡೊ. ಅಜ್ಜನ ಮನೆಯೇ ತನ್ನ ಮನೆ ಹೇಳಿ ಗ್ರೇಶಿತ್ತಿದ್ದಡೊ. ಶಾಲೆಗೆ ಹೋಪಲೂ ಬೇರೆ ಮಕ್ಕೊ ಇಲ್ಲದ್ದ ಕಾರಣ ಶಾಲಗೂ ಹೋಗಡ.
   ಆನು ಮಾಣಿಯ ಅಪ್ಪ ಈ ಶುದ್ದಿ ಎನ್ನ ಹತ್ತರೆ ಹೇಳಿದ. ಆನಂಬಗ ಅವರ ಮನೆಗೆ ಯಾವಾಗಲೂ ಹೋಯ್ಕೊಂಡಿತ್ತಿದ್ದೆ. ಅವರ ಮನೆಲ್ಲೇ ಇತ್ತಿದ್ದೆ ಹೇಳುಲಕ್ಕು. ಅಷ್ಟು ಸ್ನೇಹ ಅವನ ಅಪ್ಪಂಗೂ ಎನಗೂ ಇತ್ತು. ಈ ಶುದ್ದಿಯ ಎಲ್ಲ ಹೇಳಿ ಎಂತ ಮಾಡುವದು? ಹೇಂಗೆ ಮಾಡುಲಕ್ಕು. ಪ್ರಾಯ ಹತ್ತು ವರ್ಷ ಇನ್ನು ಶಾಲಗೆ ಸೇರುಸಲೆ ಅಕ್ಕೋ? ಹೇಂಗೆ ಹೇಳಿ ಕೇಳಿದ. ನಿಂಗೊ ಅವನ ಹೇಂಗಾದರೂ ಇಲ್ಲಿಗೆ ಕರಕ್ಕೊಂಡು ಬನ್ನಿ ಎನ್ನಂದಪ್ಪ ಪ್ರಯತ್ನ ಮಾಡುವೆ ಹೇಳಿದೆ. ಹೇಂಗೋ ಮನಸ್ಸು ಮಾಡಿದ ಮಾಣಿ ಮನಗೆ ಬಪ್ಪಲೆ. ಬಂದೋನ ಆನು ಹೇಂಗೋ ಒಪ್ಪುಸಿ ನಾಲ್ಕನೇ ಕ್ಲಾಸಿನ ವಾರ್ಷಿಕ ಪರೀಕ್ಷೆಗಪ್ಪಗ ಒಳುದ ಮಕ್ಕಳೊಟ್ಟಿಂಗೆ ಪರೀಕ್ಷೆ ಬರವ ಹಾಂಗೆ ಮಾಡಿದೆ. ಪರೀಕ್ಷೆಲ್ಲಿ ಪಾಸು ಹೇಳಿ ಮಾಡಿ ಐದನೇ ಕ್ಲಾಸಿಂಗೆ ಸೇರುಸಿದೆ.
ಮತ್ತೆ ಶುರುವಾತು ಅವನ ವಿದ್ಯಾಭ್ಯಾಸ! ಎಲ್ಲ ಕ್ಲಾಸುಗಳಲ್ಲಿಯೂ ಪಾಸು ಆಯ್ಕೊಂಡು ಹೋದಡೋ.ಆನು  ಅಲ್ಲಿಂದ ವರ್ಗ ಆಗಿ ಊರಿಂಗೆ ಹೇಳಿದರೆ ಪೈವಳಿಕೆಗೆ ಬಯಿಂದೆ. ಮತ್ತೆ ಆನು ಅವ ನೋಡಿದ್ದು ಕೆಲವು ವರ್ಷ ಕಳುದ ಮೇಲೆ ಹೇಳಿದರೆ ಅವನ ಮದುವೆ ಕಳುದು ಗೃಹ ಪ್ರವೇಶಕ್ಕೆ. ಇಪ್ಪತ್ತು ವರ್ಷವೇ ಕಳುದ್ದು. ಎನಗೊಂದು ಆಮಂತ್ರಣ ಬಂತು. ನೋಡುವಗ ಆ ಮಾಣಿಗೆ ಮದುವೆ ಬೆಂಗಳೂರಿಲ್ಲೇ ಕಳುದು ಗೃಹ ಪ್ರವೇಶ ಹೇಳಿ ಇತ್ತು. ಹಳೆ ನೆಂಪಿನ ಪುನರಾವರ್ತನೆ ಮಾಡುವದು ಹೇಳಿ ಹೋದೆ. ಆದರೆ  ಅಲ್ಲಿ ಹೋದರೆ ಕತೆಯೇ ಬೇರೆ. ಅವನ ಅಪ್ಪ ಇಪ್ಪಲ್ಲಿ ಅಲ್ಲ ಹ ಪ್ರವೇಶ. ತರವಾಡು ಮನೆಲ್ಲಾದಿಕ್ಕು ಹೇಳಿ ಅಲ್ಲಿಗೆ ಹೋದರೆ ಅಲ್ಲಿ ಅವನ ಅಪ್ಪ ಇಲ್ಲೆ. ಮಾಣಿ  ಡಿಗ್ರಿ ಮಾಡಿಕ್ಕಿ ಅವನ ಗೆಳೆಯನೊಟ್ಟಿಂಗೆ ಬ್ರೆಡ್ ಕಂಪೆನಿಲ್ಲಿ ಕೆಲಸಡೊ. ಅಪ್ಪ ಇದ್ದಲ್ಲಿಂಗೆ ಬಪ್ಪಲಿಲ್ಲೆಡೊ. ಅದಕ್ಕೆ ದೊಡ್ಡಪ್ಪನ ಮಗ ಅಣ್ಣ ಗೃಹ ಪ್ರವೇಶ ಮಾಡುಸಿಗೊಂಡದು. ಕತೆ ಎಲ್ಲ ಅಲ್ಲಿಗೆ ಹೋದ ಮೇಲೆ ಗೊಂತಾತು. ಎನ್ನ ಮೇಲೆ ಪ್ರೀತಿಲ್ಲಿ ಅಲ್ಲ ಕಾಗದ ಕಳುಸಿದ್ದು. ಅಪ್ಪ ಒಪ್ಪದ್ದರೂ ಆನು ಮದುವೆ ಆಗಿಗೊಂಡಿದೆ ಹೇಳುವದರ ತೋರುಸುಲೆ ಕರೆ ಕಳುಸಿದ್ದು ಅವ ಅಲ್ಲ. ಅಪ್ಪಚ್ಚಿಯ ಮೇಲೆ ಕೋಪಲ್ಲಿ ಅವನ ಮಗನ ಬುಟ್ಟಿಗೆ ಹಾಯ್ಕೊಂಡು ತಾನು ಒಳ್ಳೆಯೋನು ಹೇಳುಸಿಗೊಂಬಲೆ, ಅಪ್ಪಚ್ಚಿಯ ಜನ ಕೆಟ್ಟೋನು ಹೇಳುಸುಲೆ ಹೇಳುವದು ಮತ್ತೆ ಗೊಂತಾತು.
 ಕಾಲ ಬದಲಿದಂತೆ ಮನುಷ್ಯರೂ ಬದಲುತ್ತವು ನಿಜ. ಆದರೆ ಉಪಕಾರ ಸ್ಮರಣೆ ಇಲ್ಲದ್ದಾತನ್ನೆ. ಅಪ್ಪನತ್ರೇ ವಿರೋಧ ಕಟ್ಟಿಗೋಂಡನ್ನೇ ಹೇಳಿ ಬೇಜಾರಾತು. ಅಸಲಿಂಗೆ ಮದಿಮ್ಮಾಯಂಗೆ ಎನ್ನ ಗುರ್ತವೇ ಸಿಕ್ಕಿದ್ದಿಲ್ಲೆ. ಆದರೆ ಅವನ ಸೋದರ ಮಾವ.ಅವನೋ ಅವನ ಮನೆಯೋರೋ ಮದುವಗೋ ಗೃಹ ಪ್ರವೇಶಕ್ಕೋ ಹೋಯಿದವಿಲ್ಲೆಡೊ. ಸೋದರ ಮಾವನೇ ೩೬ ವರ್ಶ ಕಳುದು ಎನ್ನ ಗುರ್ತ ಹಿಡುದು ಮಗಳ ಮದುವಗೆ ಬಪ್ಪಲೆ ಹೇಳಿದ್ದು. ಅಪ್ಪನ ಗುಣವೋ ಒಡ ಹುಟ್ಟಿದೋರ ಗುಣವೋ ಅಜ್ಜನ ಮನೆಯೋರ ಗುಣವೋ ಮಾಣಿಗೆ ಒಳುದ್ದಿಲ್ಲೆ. ಸಹವಾಸ ದೋಷವೋ ಕಾಲದೋಷವೊ ಇಕ್ಕು.ಅಂತೂ ಹಳೆ ನೆಂಪು ನಮ್ಮ ಎಲ್ಲೆಲ್ಲಿಗೋ ಕೊಂಡೋವುತ್ತಿಉ.
ಮನುಷ್ಯಾನ ಜೀವನ ಹೇಳಿರೆ ಇಷ್ಟೆಯೋ ಹೇಳಿ ಕಾಣುತ್ತು. ಮಾಣಿಯ ಸೋದರ ಮಾವಂಗೆ ಅವನ ಅಳಿಯನ ಒಂದು ನೆಲಗೆ ತಪ್ಪಲೆ ಆನು ಸಹಾಯ ಮಾಡಿತ್ತಿದ್ದೆ ಹೇಳುವದು ಗೊಂತಿದ್ದು. ಎನ್ನ ಕಾಂಬಗ ಅದರ ಅವ ಹೇಳಿತ್ತಿದ್ದ. ಎನ್ನ ಕರ್ತವ್ಯ ಆನು ಮಾಡಿದ್ದೆ. ಅವನ ಅಪ್ಪಂಗೂ ಎದುರು ನಿಂದೋನು ಎನ್ನ ಮರದ್ದು ದೊಡ್ಡದಲ್ಲ. ಎಲ್ಲ ಕಾಲದ ಮಹಾತ್ಮೆ!

ಕಳೆದು ಹೋದ ಕಾಲದ ನೆನಪು

     ಕಳದು ಹೋದ ಕಾಲದ ನೆನೆಪು                                                                                                                                                                        ಎನ್ನ ಅಮ್ಮಂಗೆ ಐದು ಜನ ಅಣ್ಣಂದ್ರು. ಒಂದು ರೀತಿಲ್ಲಿ ಪಂಚ ಪಾಂಡವರ ಹಾಂಗೆ ಅವು. ಎನ್ನ ಅಮ್ಮ ಒಂದೇ ತಂಗಿ ಅವಕ್ಕೆ. ಹಾಂಗೆ ತಂಗೆಯತ್ರೆ ತುಂಬ ಪ್ರೀತಿ ಎಲ್ಲೋರಿಂಗು.ಅಜ್ಜಿ, ಅಜ್ಜನ ನೋಡಿದ ನೆಂಪು ಎನಗೆ ಬತ್ತಿಲ್ಲೆ. ಅಜ್ಜ ಮೊದಲೇ ಸತ್ತದು ಕಾಣ್ತು. ಅಜ್ಜಿ ಮತ್ತೆ ಎಂತಪ್ಪ ಸಿಹಿ ಮೂತ್ರ ರೋಗ ಜೋರಾಗಿ ಸತ್ತದಡೊ. ಅ ಕಾಲಲ್ಲಿ ಆ ವಠಾರಲ್ಲಿ ಡಾಕ್ಟ್ರಕ್ಕಳೇ ಇಲ್ಲ. ಏನಾದರೂ ಬೇಕಾದರೆ ದೂರದ ಪುತ್ತೂರಿಂದ ಕರಕ್ಕೊಂಡು ಬರೆಕ್ಕಡ.ಅಂತೂ ಶುಶ್ರೂಷೆ ಸರಿ ಆಗದ್ದೆ ಅಜ್ಜಿ ತೀರಿ ಹೋದ್ದದು ಹೇಳಿ ಒಬ್ಬ ಮಾವ ಹೇಳಿದ ನೆಂಪು.ಆನು,ಎನ್ನ ತಮ್ಮ ಅಜ್ನ ಮನೆಲ್ೇ ಹುಟ್ಟಿ ದೊಡ್ಡ ಆದ್ದಡೊ.ಹಾಂಗೆ ಎನ್ನ ಹುಟ್ಟೂರು ಅದೇ ಅಜ್ಜ ಮನೆ-ಪೈವಳಿಕೆ ಗ್ರಾಮ. ಎಂಗೊ ಸಣ್ಣಾಗಿಪ್ಪಗಳೇ ಒಬ್ಬ ಮಾವ ಪಾಲಾಗಿ ಬೇರೆ ಕೂದಿತ್ತಿದ್ದ. ಮದುವೆ ಆದ ಮೇಲೆ ಅಜ್ಜನತ್ರೆ ಪಾಲು ಕೇಳಿದ್ದಕ್ಕೆ ಅಂಬಗ ಬರೇ ಎರಡು ಮುಡಿ ಗೆದ್ದೆಯ ಕೋಪಲ್ಲಿ ಅಜ್ಜ ಕೊಟ್ಟದಡೊ. ಅವ ಮತ್ತೆ ಅವನ ಅತ್ತೆ ಮನೆಯೋರ ಸಹಾಯಂದ ಗೆದ್ದೆಯ ತೋಟ ಮಾಡಿ ಬೇರೆ ಜಾಗೆ ಕ್ರಯಕ್ಕೆ ತೆಗದು ಹೀಂಗೆಲ್ಲ ಮಾಡಿ ಊರಿಲ್ಲಿ ಒಬ್ಬ ಗಟ್ಟಿ ಕುಳ ಹೇಳಿ ಹೇಳುಸಿಗೊಂಡಿದ.ಆದರೆ ಅಮ್ಮ,ಅಪ್ಪ ಇದ್ದಲ್ಲಿಂಗೆ ಬಾರಡೊ.
ಅಜ್ಜ,ಅಜ್ಜಿ ತೀರಿಹೋದ ಮೇಲೆ ಒಳುದೋರೂ ದೊಡ್ಡಣ್ಣನತ್ರೆ ಸರಿಯಾಗದ್ದೆ ಪಾಲು ಕೇಳಿದವಡ. ಎಲ್ಲೋರ ಪೈಕಿ ಸಣ್ಣ ಮಾವಂಗೆ ಮದುವೆ ಆದ್ದೇ ಮತ್ತೆ. ಪಾಲಿನ ವ್ಯಾಜ್ಯ ಡವಗ ಇಬ್ರು ಮೆಬ ಿಟ್ಟಿತ್ತಿದ್ದವು. ಅಂಬಗ ಮದಲೇ ೆ ಬಿಟ್ಟು ಹೋದ ಮಾವ ಎರಡೇ ಮಾವನತ್ರೆ ಇವಕ್ಕೆ ಒಳ್ಳೆದು. ಅವನೇ ಸಣ್ನೊಂಗೆ ಮದುವೆ ಮಾಡುಸಿದ್ದಡೋ. ದೊಡ್ಡ ಮಾವ ಹಟವಾದಿ. ತಮ್ಮಂದ್ರಿಂಗೆ ಬಗ್ಗದ್ದೆ ಕೋರ್ಟಿಂದಲೇ ಪಾಲಾಯೆಕ್ಕಾಗಿ ಬಂತಡೊ.ಶುರುವಿಂಗೆ ದೊಡ್ಡ ಮಾವನೂ ಮೂರನೇ ಮಾವನೂ ಹತ್ತರೆ ಇತ್ತಿದ್ದವು. ದೊಡ್ಡಣ್ಣನ ಹತ್ತರೆ ಮಾಡ್ಯೊಂಡದು ಮೂರನೆ ಮಾವ. ಆದರೆ ಎರಡನೆ ಮಾವನೂ ಮೂರನೆ ಮಾವನೂ ಒಂದರಿ ಆ ಕಾಲಲ್ಲಿ ಒಟ್ಟಿಂಗೆ ಕಾಶಿಗೆ ಹೋಗಿತ್ತಿದ್ದವಡೊ. ಅಂಬಗ ಅವಕ್ಕೆ ಒಂದೇ ಬುದ್ಧಿ ಇತ್ತಡೊ.ಮತ್ತೆ ಅಜ್ಜನ ಕಾಲಲ್ಲೇ  ಹೋಕೂರಕ್ಕೆ ಬಿಟ್ಟಿದವಾಡೊ.ಸಣ್ಣ ಮಾವಂದ್ರು ಇಬ್ರು ಕೆಳ ಬೈಲ್ಲಿ ಒಕ್ಕಲು ಮನೆಲ್ಲಿ ಇತ್ತಿದ್ದವು.ಮೇಲೆ ತರವಾಡು ಮನೆಲ್ಲಿ ದೊಡ್ಡ ಮಾವ, ಹತ್ತರೆ ಮತ್ತೊಂದು ಮನೆಲ್ಲಿ ಮೂರನೆ ಮಾವ ಹೀಂಗೆ ಇತ್ತಿದ್ದವು. ಅಜ್ಜಿ,ಅಜ್ಜನ ತಿಥಿ ಎಲ್ಲ ಅಪ್ಪದು ದೊಡ್ಡ ಮಾವನಲ್ಲಿ. ಆ ಸಮಯಕ್ಕಪ್ಪಗ ಎಂಗಳಲ್ಲೂ ಪಾಲಾಗಿ ಒಂದೇ ಮನೆಲ್ಲಿ ಬೇರೆ ಬೇರೆ ಇತ್ತಿದ್ದೆಯೊ. ದೊಡ್ಡ ಮಾವ ಯಾವಾಗಳೂ ನಂಬ್ರ ಹೇಳ್ಯೊಂಡು ಕಾಸರಗೋಡಿಲ್ಲೇ ಇತ್ತಿದ್ದ. ಅಂಬಗ ಮನೆಗೆ ಬಂದು ಹೋಯೆಕ್ಕಾರೂ ಉದಿಯಪ್ಪಗ ಒಂದು ಟ್ರೈನ್ ಮಾಂತ್ರ ಇದ್ದದುಬಸ್ಸಿಲ್ಲಿ ಉಪ್ಪಳ ವರೆಗೆ ಹೋಗಿ, ಮತ್ತೆ ರೈಲಿಲ್ಲಿ ಕಾಸರಗೋಡಿಂಗೆ. ಬಂದು ಹೋಪಲೆ ಕಷ್ಟ ಆವುತ್ತು ಹೇಳಿ ಅಲ್ಲಿ ಬಂಗ್ಲೆ ಹೋಟ್ಲಿಲ್ಲಿ ಊಟ ಇರುಳು ಮನುಗುಲೆ ಜಾಗೆ. ರಜ ಹೆದರಿಕೆ ಜಾಸ್ತಿ ಅವಂಗೆ. ಎಲ್ಯಾದರೂ ನಂಬ್ರ ವಾಯಿದೆಗೆ ಎತ್ತದ್ದರೆ ಎಂಕ್ಕೋ ಹೇಳಿ ಹೆದರಿಕೆ!
ಮತ್ತೆ ಆ ಕಾಲಲ್ಲಿ ಒಂದೇ ಬಸ್ಸು ಇದ್ದದು ಉಪ್ಪಳಕ್ಕೆ ಹೋಪಲೆ. ಮತ್ತೆ ಪುತ್ತೂರಿಂಗೆ ಹೋಪಲುದೆ. ಅಡಕ್ಕೆ ಗಾಡಿಲ್ಲಿ ಕೊಂಡು ಹೋಪದು. ಅಸಿನಾರೆ ಬ್ಯಾರಿಯ ಅಂಗುಡಿಗೆ ಎತ್ತುಸಿದರೆ ಅಲ್ಲಿಂದ ಎತ್ತಿನ ಗಾಡಿಲ್ಲಿ ಮಂಗಳೂರಿಂಗೆ ಮಂಗಳೂರಿಂಗೆ ಕೊಂಡು ಹೋಗಿ ಬೇಕಾದ ಸಾಮಾನಿನ ಪಟ್ಟಿ ಕೊಟ್ಟರೆ ಬ್ಯಾರಿಯೇ ಬೆಲ್ಲ ಮತ್ತೆ ಬೇರೆ ಜೀನಸು ಸಾಮಾನು ತಂದು ಕೊಡುಗು. ಅಷ್ಟು ನಂಬಿಕೆ ಬ್ಯಾರಿಯ ಹತ್ತರೆ ಎಲ್ಲೋರಿಂಗುದೇ.ಬ್ಯಾರಿ ಆರಿಂಗೂ ಮೋಸ ಮಾಡಿದ ಕತೆ ಆನು ಕೇಳಿದ್ದಿಲ್ಲೆ.ಆಸು ಪಾಸಿನ ಬ್ರಾಹ್ಮರೆಲ್ಲ ಬ್ಯಾರಿಯತ್ರೆ ಹೇಳಿ ಬೇಕಾದ್ದರ ತರುಸಿಗೊಂಡಿತ್ತಿದ್ದವು. ಅಡಕ್ಕೆ ತುಂಬ ಇದ್ದರೆ ಕೆಲವು ಜನ ಗಾಡಿಲ್ಲೇ ಹೋಪದೂ ಇದ್ದು. ಹೋದರೆ ಆ ವರುಷಕ್ಕಿಪ್ಪ ಉಳ್ಳಾಲ ಬೆಲ್ಲ ತಂದು ಬೆಶಿಲಿಂಗೆ ಒಣಗುಸಿ ಚೆಂಬಿನಳಗೆಲ್ಲಿ ತುಂಬುಸಿ ಮಡಗಿದರೆ ಜನಂಗೊಕ್ಕೆ ಸಮಧಾನ. ಆಸರಪ್ಪಗ ಉಳ್ಳಾಲ ಅಚ್ಚು ಒಂದು ತಿಂದು ಒಂದು ಚೆಂಬು ನೀರು ಕುಡುದರೆ ಮ್ಯಾಹ್ನದ ಊಟದ ವರೆಗೆ ತೊಂದರೆ ಇಲ್ಲೆ. ಹಸರು ಪಾಯಸಕ್ಕೆ ಉಳ್ಳಾಲ ಬೆಲ್ಲ ಹಾಕಿದರೇ ರುಚಿ. ಕೆಲವು ಜನ ಬ್ಯಾರಿ ಅಂಗುಡಿಂದಲೇ ತಪ್ಪೋರೂ ಇದ್ದವು.ಏನಾದರೂ ಅನುಪತ್ಯ ಇದ್ದರೆ ಬ್ಯಾರಿ ಹತ್ತರೆಸಾಮಾನಿನ ಪಟ್ಟಿ ಕೊಟ್ಟರೆ ಆತು. ತಾಂದು ಅಂಗುಡಿಲ್ಲಿ ಮಡಗ್ಗು ಮನೆಗೆ ಹೊತ್ತು ತಂದರಾತು. ಮನೆ ಮಾಡು ಮುಳಿದೇ ಹೆಚ್ಚಾಗಿ. ಅಲ್ಲದ್ದರೆ ತೋಟಲ್ಲಿ ಸೋಗೆ ಸಿಕ್ಕುತ್ತಲ್ಲದೋ? ಅಪರೂಪಕ್ಕೆ ಮಂಗಳೂರು ಹಂಚಿನ ಮಾಡುದೇ ಇದ್ದು. ಎರಡನೇ ಮಾವ ಮಾಡಿಂಗೆ ಹಂಚು ತರುಸಿ ಹಾಕುಸಿದ್ದ.
    ಎಂಗಳ ಮನೆ ಹತ್ತರಂದ ರೈಲಿಂಗೆ ಹೋಪಲೆ ಉಪ್ಪಳ ವರೆಗೆ ನಡದೇ ಹೋಯೆಕ್ಕು. ಉದೆಕಾಲಕ್ಕೆ ಬೆಳ್ಳಿ ಮೂಡುವಗ ಮನೆಂದ ಹೆರಟರೆ ಸ್ಟೇಶನಿಂಗೆತ್ತುವಗ ಸರಿ ಆವುತ್ತು. ಕಾಸರಗೋಡಿಂಗೆ ನಡದೇ ಹೋಯ್ಕೊಂಡಿತ್ತಿದ್ದವು. ಯಾವ ಹೊಳಗೂ ಸಂಕ ಇಲ್ಲೆ. ಕೆಲವು ಜನ ರೈಲು ಸಮಯ ತಪ್ಪುಸಿ ರೈಲ್ವೇ ಸಂಕಲ್ಲೇ ದಾಂಟಿಗೊಂಡಿತ್ತಿದ್ದವು. ಅಲ್ಲದ್ದರೆ ಓಡವ ಕಾಯೆಕ್ಕು. ಮಂಗಳೂರಿಂಗೆ ವರೆಗೆ ಗಾಡಿ ಹೋಗಡೊ. ಉಳ್ಳಾಲ ಹೊಳೆ ದಾಂಟೆಕ್ಕನ್ನೆ ಅಲ್ಲಿಂದ ಲಾಂಚಿಲ್ಲಿ ಹೋಯೆಕ್ಕಾಗಿತ್ತಡೊ.ಸೀದಾ ಹೋಯೆಕ್ಕಾರೆ ರೈಲಿಲ್ಲಿ ಹೋಯೆಕ್ಕಡೊ.
ಎಂಗಳ ಮನೆ ಹತ್ತರೆ ಐದನೇ ಕ್ಲಾಸು ವರೆಗೆ ಶಾಲೆ ಇತ್ತು. ಮತ್ತೆ ಶಾಲಗೆ ಹೋಯೆಕ್ಕಾರೆ ಪೈವಳಿಕಗೆ ಹೋಪಲಕ್ಕು. ಅಪ್ಪ ಎನ್ನ ಶುರುವಿಂಗೆ ಪೆರ್ಲ ಶಾಲೆ ಒಳ್ಳೆದು ಹೇಳಿ ಸೇರುಸಿದವು. ಆದರೆ ದಿನಕ್ಕೆ ಮೂರು ಮೈಲು ನಡದು ಹೋಯೆಕ್ಕು. ಕ್ಟವ ಮನೆಲ್ಲಿ ಹೇಳಿಗೊಂಡದಕ್ಕೆ ನಾಲ್ಕನೆ ಮಾವ ಪೈವಳಿಕೆಗೆ ಬರಲಿ. ಎನ್ನ ಮನೆಂದ ಹೋಪಲಕ್ಕು ಹೇಳಿದ್ದಕ್ಕೆ ಪೆರ್ಲಂದ ಬಿಡುಸಿ ಪೈವಳಿಕೆಲ್ಲಿ ಸೇರಿದೆ.ಅಂಬಗ ಎಂಟನೆ ಕ್ಲಾಸು ವರೆಗೆ ಮಾಂತ್ರ ಅಲ್ಲಿದ್ದದು.ಮತ್ತೆ ವಿಟ್ಳವೋ ಮಂಜೇಶ್ವರಕ್ಕಕ್ಕೋ ಹೋಗಿ ವಿದ್ಯಾಭ್ಯಾಸ ಮುಗಿಶಿಕ್ಕಿ ಮತ್ತೆ ಮಾಯಿಪ್ಪಾಡಿಲ್ಲ್ ಮಷ್ಟಕ್ಕಳ ಟ್ರೈನಿಂಗ್ ಮುಗಿಶಿದ್ದು. ಎನ್ನ ತ್ತಿ ಜೀವನದ ೨೮ ವರ್ಂಗಳೂ ಪೈವಳಿಕೆಯೇ ಆಗಿ ಹೋತು. ಹಾಂಗೆ ಹುಟ್ಟಿದೂರಿಲ್ಲೇ ಕೆಲಸ ಮಾಡುವ ಯೋಗ!
ಆದರೆ ಕಲ್ತ ಶಾಲೆಲ್ಲೇ ಕೆಲಸ ಮಾಡುವ ಹಾಂಗೆ ಆದ್ದು ಎನ್ನ ಪುಣ್ಯ!.
ಹಾಂಗೆ ಪೈವಳಿಕೆಲ್ಲಿ ಕಲಿವಲೆ ಬಪ್ಪಲಾದ್ದು ಎನ್ನ ನಾಲ್ಕನೆ ಮಾವನಪೆಂದ.ಮಾವಂದ್ಸ್ರು ಐದು ಜನ ಇದ್ದರೂ ಮನೆಂದ ಶಾಲಗೆ ಹೋಪಲಕ್ಕು ಹೇಳಿ ಅನುಕೂಲ ಮಾಡಿ ಕೊಟ್ಟದು ಆ ಮಾವ! ಅವನೂ ಅವನ ವಿದ್ಯಾಭ್ಯಾಸ ಅರಧಲ್ಲಿ ನಿಲ್ಲುಸೆಕ್ಕಾಗಿ ಬಂದದು ಅವನ ದುರ್ಭಾಗ್ಯ! ನೀರ್ಚಾಲು ಮಹಾಜನ ಕಾಲೇಜಿಲ್ಲಿ ವಿದ್ವಾನ್ ಕಲ್ತುಗೊಂಡಿಪ್ಪಗಳೇ ಅಜ್ಜಿ, ಅಜ್ಜ ಇಬ್ರೂ ತೀರಿ ಹೋದ್ದು. ವಿದ್ವಾನ್ ಕಯ್ಯಾರು ರೈಗೊ ಮಾವನ  ಜೆತೆಲ್ಲಿ ಕಲ್ತುಗೊಂಡಿತ್ತಿದ್ದವಡೊ.ಮುಂದೆ ಕಾಯರ್ಕಟ್ಟೆಲ್ಲಿ ಹೈಸ್ಕೂಲು ಅಪ್ಪಲುದೇಕುಂಡೇರಿಯೋರೊಟ್ಟಿಂಗೆ ಸೇರಿ ಸಾರ್ವಜನಿಕಲ್ಲಿಯೂ ಕೈಜೋಡುಸಿತ್ತಿದ್ದ.ಸಂಸ್ತಲ್ಲಿ ಯುಂಬ ಜ್ಞಾನ ಇದ್ದು. ಹಾಂಗೆ ಎಲ್ಲ ಫೀಲ್ಡಿಲ್ಲಿಯೂ ತಾನು ಗೊತಿದ್ದೋನು ಹೇಳುವದರತೋರುಸಿಗೊಂಡಿತ್ತಿದ್ದ. ಮಾವಂದ್ರ ಪೈಕಿ ತಂಗೆ ಹತ್ರೂ, ತಂಗೆ ಮಕ್ಕಳತ್ರೂ ಹೆಚ್ಚು ಕಾಳಜಿ ಆ ಮಾವಂಗಿತ್ತು. ಈಗ ಎಲ್ಲ ಮಾವಂದ್ರೂ ಇಲ್ಲೆ.ಎರಡು ಮಾವಂದ್ರ ಮಕ್ಕೊ ಅಲ್ಲೇ ಇದ್ದವು. ಬಾಕಿದ್ದೋರು ಬೇರೆ ಬೇರೆ  ಬೆಂಗಳೂರಿಲ್ಲಿಯೋ ಇದ್ದವು. ಮಾವಂದ್ರು ಅಲ್ಲಿ ಇದ್ಷ್ಟು ಸಮಯ ಅಜ್ಜನ ಮನೆ ನೆಂಪು, ಪರಿಸರದ ನೆಂಪು ಮರದ್ದಿಲ್ಲೆ.ಕೆಲಸ ಮಾಡುವಗಳೂ ಅಲ್ಲಿದ್ದೋರೆಲ್ಲ ಎನಗೆ ಸಹಕಾರ ಕೊಟ್ಟಿದವು.ಎನಗೆ ಕಲಿಶಿಫ಼್ದ ಮಾಷ್ಟ್ರಕ್ಕಳೇ ಎನ್ನ ಸಹೋದ್ಯೋಗಿಗಳೂ ಆಗಿತ್ತಿದ್ದವು. ಎಂಗಳುದೇ ಬಾಳಿಕೆಲ್ಲಿ ಇಲ್ಲೆ. ಅಂದ್ರಾಣ ಪ್ರಯಾಣದ ಒದ್ದಾಟ, ಕಲಿವಲೆ ಪಟ್ಟ ಕ್ಟ, ಮದ್ದಿಂಗೆ ಪಟ್ಟ ಒದ್ದಾಟ ಎಲ್ಲ ಈಗ ದೂರವಾಯಿದು. ಮನೆಂದ ಹೆರಟ ಕೂಡ್ಳೇ ಬಸ್, ಅವಾ ಸ್ವಂತ ವಾಹನ ಇದ್ದೋರು ಜಾಲಿಂದಲೇ ಕಾರು ಹತ್ತಿ ಬೇಕಾದಲ್ಲಿಗೆ ಹೋಪಲಾವ್ತು. ಕಾಲ ಬದಲಾದ ಹಾಂಗೆ  ಎಲ್ಲವೂ ಬದಲಾಗಿ, ಅಂದ್ರಾಣದ್ದು ಒಂದು ಕೆಟ್ಟ ಕನಸೋ ಹೇಳಿ ತೋರುತ್ತು.

Wednesday, February 13, 2013

ಮಾವಿನ ಕಾಯಿ ಉಪ್ಪಿನ ಕಾಯಿ



ಮಾವಿನ ಕಾಯಿ

ಡಿಸೆಂಬರ್ ಬರೆಕ್ಕಾರೇ ಹೆಮ್ಮಕ್ಕೊ ಕೇಳುತ್ತವು
ನಿಂಗಳ ಮರ ಹೂಗು ಹೋಯಿದೋ ಹೇಂಗೆ?
ಜನವರಿ ಬಂದರೆ ಕೇಳೆಡ ಅವರ ಗಡಿಬಿಡಿ
ಕಂಡೋರತ್ರೆಲ್ಲ ಕೇಳುಗು ಮೆಡಿ ಸಿಕ್ಕುಗೋ ಹೇಳಿ
ಒಂದು ಸೇರು ಮೆಡಿಯಾದರೂ ಸಿಕ್ಕಿರೆ ಅವಕ್ಕೆ ಖುಶಿ
ಪೇಟೆಗೆ ಹೋವುತ್ತರೆ ನೆಂಪು ಮಾಡುಗು ಸಂತೆಲ್ಲಿ ಕೇಳುಲೆ
ನಮ್ಮದೆ ಮರಲ್ಲಿದ್ದರೆ ಕೇಳೆಡ ಅವರ ಸಂಭ್ರಮ
ಆದರೆ ಕೊಯ್ಯೆಕ್ಕಾರೆ ಬೇಕು ಮರ ಹತ್ತುವ ಆಳುಗೊ
ಕಾಂಬಲೆ ಸಿಕ್ಕಿದ ಆಳುಗಳತ್ರೆಲ್ಲ ಕೇಳುಗು
ಮೆಡಿ ದೊಡ್ಡದಪ್ಪಂದ ಮದಲೆ ಬುಕ್ ಮಾಡುತ್ತವು
ಆಳುಗಳತ್ತರೆ    ಕೊಯ್ವಲೆಡಿಗೋ ಹೇಳಿ
ಕೊಯ್ದಾದ ಮೇಲೆ ಮೆಣಸು ಸಾಸಮೆ ತರೆಕು ಹೇಳಿ
ಗಿರ್ಗಾಣ ಕೊಡುತ್ತವು ಅಂಗ್ಡಿಗೆ ಹೋಪಗ
ಮೆಣಸು ಒಣಗುಸಿ ಹೊಡಿ ಮಾಡುಸೆಕ್ಕು
ಸಾಸಮೆ ಅರಿಶಿ ಒಣಗುಸಿ ಹೊಡಿ ಮಾಡೆಕ್ಕು
ಅವರ ಗೌಜಿಯೋ ಗೌಜಿ ಮನೆಯೋರತ್ರೆ
ಮಕ್ಕಳತ್ರೆ ಮಾತಾಡುಲೇ ಪುರುಸೊತ್ತಿಲ್ಲೆ,
ಆಚೆಮನೆ ಅಕ್ಕನತ್ತರೆ ಶುದ್ದಿ ಮಾತಾಡುವದು
ಅಕ್ಕಂಗೆ ಮೆಣಸು ತಂದದೋ ಹೊಡಿಯೇ ತಂದದೋ?
ಅಕ್ಕಂದ ಮದಲೆ ಉಪ್ಪಿನಕಾಯಿ ಹಾಕೆಕ್ಕು ಹೇಳಿ
ಸೊಕ್ಕು ಬೇರೆ ಈಚೆ ಮನೆ ಅಕ್ಕಂಗೆ
ಸಮಯಕ್ಕೆ ಆಳುಗೊ ಬಾರದ್ರೆ ಮತ್ತೆ ಗಡಿಬಿಡಿ
ಹೋಗಿ ದಿನಗೇಳದ್ದಕ್ಕೆ ಮತ್ತೆ ಸಿಡಿಮಿಡಿ
ನಮಗೆ ಮಾಂತ್ರ ಕೊಯ್ದಾಗದ್ದೆ ಮಾವಿನ ಮಿಡಿ
ನಿತ್ಯ ಸಿಕ್ಕುಗು ಬೈಗಳ ಮುಡಿ ಮುಡಿ
ನಾವೇ ಮರ ಹತ್ತಿ ಕೊಯ್ದರೆ ಸಿಕ್ಕುಗು ನಮಗೆ
ಅವರ ಹೊಗಳಿಕೆಯ ಮಾತು ಅಡಿಗಡಿ
ಕಾಯಿ ಬೆಳದರೆ ಮತ್ತೆ ಕೆತ್ತಿ ಉಪ್ಪಿನ ಕಾಯಿ
ಹಸಿ ಕೆತ್ತೆ  ಬೇರೆ ಬೇಯಿಸಿದ ಕೆತ್ತೆ ಬೇರೆ,
ಇಡಿಕಾಯಿಯೂ ಇದ್ದು, ತಿಂಬಲೆ ಕೊಶಿ ಅವುತ್ತು,
ಕೆತ್ತೆ ತಿಂದು ನೀರು ಕುಡುದರೆ  ಹೊಟ್ಟೆ ತುಂಬುಗು,
ಕೆಪ್ಪಟೆ ಕೆತ್ತೆ ಎರಡು ತುಂಡು ಮಾಡೆಕ್ಕು,
ಕರೆ ಕೆತ್ತೆ ಹಾಂಗೇ ಇದ್ದರೆ ಸಾಕು
ಗೊರಟು ಮಾಂತ್ರ ಆರಿಂಗು ಬೇಡ
ಕೋಗಿಲೆ ತಿಂಬಲೆ ತುಂಬ ಕೊಶಿ
ಮಿಡಿ ತಿಂದರು ಅಕ್ಕು, ಮಜ್ಜಿಗೆ ಕೂಡುಸಿ ಉಂಡರೆ
ಬೇರೆ ಬೆಂದಿ ಗಿಂದಿ ಒಂದುದೆ ಬೇಡ,ಅದಕ್ಕೆ ಹೆಮ್ಮಕ್ಕೊ
ಊಟಕ್ಕಿಲ್ಲದ್ದ ಉಪ್ಪಿಕಾಯಿ ಹೇಳುತ್ತವು
ಹೊತ್ತಿಂಗೆ ಬಂದರೆ ಊಟ ಯಾವಾಗಳೊ ಬಂದರೆ
ಎಂತಗೆ ಊಟ ಕೊಡೆಕ್ಕು?ಅಪ್ಪೆ ಮಿಡಿ ಈಗ
ಸಿಕ್ಕುವದೆ ಕಷ್ಟ ಆದರೆ ಅದರ ರುಚಿ ಅದಕ್ಕೇ ಸರಿ
ಹಣ್ಣಿನ ರಸಾಯನ ಗ್ರೇಶುವಗ ಜೊಲ್ಲು ಸುರಿ
ಕಾಟು ಹಣ್ಣಿನ ಸಾಸಮೆ ಇದ್ದರೆ ಉಂಬಗ ಸುರಿ
ಹಣ್ಣಿ ಕಾಲ ಮುಗುದರೆ ತಿಂಬಲಕ್ಕು ಮಾಂಬ್ಳ
ಅಂತು ಮಾವಿನ ಮರಂದ ಸಂತೋಷದ ಚೊರಿ


Thursday, February 7, 2013

ಒಂದು ಪ್ರಾಸಂಗಿಕ ಅನುಭವ



MAzÀÄ ¥Áæ¸ÀAVPÀ C£ÀĨsÀªÀ
JAUÉÆ FUÀ ªÀµÀðPÉÆÌAzÀÄ ¸Àwð CªÉÄÃjPÀPÉÌ §gÉPÁÌvÀÄ. VæÃ£ï PÁqïð PÉÆlÖ ªÉÄÃ¯É JAUÉÆ ªÀµÀð°è DgÀÄ wAUÀ¼ÁzÀgÀÄ EgÀÄvÉÆÛà ºÉý £ÉÆÃqÀÄvÀÛªÀqÉÆ.¤®èzÀÝgÉ PÉÆlÖ ºÀ¸ÀÄgÀÄ PÁqïð  PÉãÀì¯ï ªÀiÁqÀÄvÀÛªÀqÉÆ. ºÁAUÉ ªÀÄ£Éß ºÉgÀqÀĪÀzÀPÉÌ ªÀÄzÀ¯É ¸ÉƸÉ0iÀÄ C¥Àà£À ªÀÄ£É0iÉÆÃgÀÄ, MAzÀj E°èUÉ §AzÀÄ ºÉÆÃV ºÉý ªÀÄzÀ¯Éà ºÉýwÛzÀݪÀÅ. F ¸Àwð ªÀÄzÁ®Ä ¸ÀtÚ ªÀÄUÀ£À ªÀÄ£ÉUÉ ºÉÆÃ¥ÀzÁVvÀÄÛ.«ªÀiÁ£ÀzÀ nPÉÃmï ªÀÄzÀ¯Éà ªÀÄPÉÆÌ PÀ¼ÀĹwÛzÀݪÀÅ. PÀ¼ÀĸÀĪÀzÉAvÀgÀ. E ªÉÄÊ¯ï ªÀiÁrzÀÝgÀ C½0iÀÄ qË£ï ¯ÉÆÃqï ªÀiÁr PÉÆnÖwÛzÀÝ. ºÉgÀqÀÄ¯É MAzÉgÀqÀÄ ¢£À ªÀÄzÀ¯É CeÉðAmï ºÉÆÃV §¥ÀàzÀÄ ºÉý ºÉgÀmÉ0iÉÆ.CªÀgÀ ªÀÄ£ÉUÉ ºÉÆÃ¥À¯É EgÀļÀÄ 8 UÀAmÉUÉ PÀqÉ0iÀÄ næ¥ï §¹ìAzÀÄ.CªÀgÀ ªÀÄ£É ºÀvÀÛgÉ ºÁ¯ïÖ DV ªÀÄgÀ¢£À GzÉPÁ®PÉÌ CzÉà §¹ìAUÉ ©qÉPÀÄÌ ¸ÉƸÉ0iÀÄ CtÚ£À ºÀvÀÛgÉ ºÉýwÛzÉÝ0iÉÆ.DzÀgÉ §¸ï ºÉgÀqÀĪÀUÀ¼Éà JAlƪÀgÉ DVvÀÄÛ.
        ºÉgÀqÀÄ®¥ÀàzÀ §¸ï vÀÄA§ d£À. PÀAqÀPÀÖgï nPÉmï PÉÆlÄÖUÉÆAqÀÄ »AzÀAzÀ¯É ªÀÄÄAzÉ ªÀÄÄAzÉ §gÀÄvÁÛ EvÀÄÛ.DzÀgÉ §¸ï  vÀÄA©zÀ d£ÀAUÉÆ zÀĪÁð¸À£É0iÀÄ£ÀÆß vÀÄA©¹wÛzÀݪÀÅ. PÀAqÀPÀÖgÀAUÉ CªÉ®è PÁ0iÀÄA VgÁQUÉÆ. CªÀÅ J¯Éè®è E½ªÀ°zÀÄÝ ºÉüÀĪÀzÀÄ UÉÆAwvÀÄÛ ºÉý PÁtÄvÀÄÛ.CªÀgÀvÀæAzÀ M¨ÉÆâ§â£À ªÀiÁvÁqÀĹ CªÀjAzÀ ¥ÉÊ¸É vÉPÉÆÌAqÀÄ ªÀÄÄAzÉ §¥Àà¯É ¨ÉÃgÉÆ§âAUÁzÀgÉ ¸ÁPÀÄ ¸ÁPÁªÀÅwÛvÀÄÛ. A®ègÉ PÉÆr ºÉýzÀgÉ £ÉÆÃmï PÉÆlÄÖ a®ègÉ E¯Éè ºÉüÀÄUÀÄ. DzÀgÉ ªÀiÁvÀÄ PÀvÉ PÉýzÀgÉ CªÀÅ M¨ÉÆâ§â£ÀÆ ¥ÀAZÁ¬ÄvÀ¸ÀÛgÉÃ.PÀÄqÀÄzÀ CªÀİAzÀ £Á®UÉ vÉZÀðzÉÝ ºÉüÀĪÀzÀÄ «gÀ¼ÀªÁVwۢݯÉè.M§â Kw ºÉýzÀgÉ E£ÉÆß§â ¥ÉæÃw ºÉüÀÄUÀÄ. vÁ£ÀÄ ¸Àj0iÀiÁV0iÉÄà ªÀiÁvÁqÀÄvÉÛ ºÉüÀĪÀzÀÄ CªÀgÀ ªÀiÁw£À ZÀºÀgɰè UÉÆAvÁVUÉÆArvÀÄÛ. DzÀgÉ §¸ï vÀÄA§ ªÀiÁvÀÄUÀ¼ÉÃ.M§â J£Àß ºÀvÀÛgÉ EzÉÆÝãÀÄ ºÀvÀÄÛ gÀÄ¥Á¬Ä £ÉÆÃlÄ PÉÆlÖ. 7gÀÄ¥Á¬Ä D0iÉÄPÁÌzÀÄÝ .JgÀqÀÄ gÀÄ¥Á¬Ä PÉÆlÖgÉ LzÀÄ gÀÄ¥Á¬Ä PÉÆqÀÄvÉÛ ºÉý PÀAqÀPÀÖgï ºÉýzÀgÉ, CªÀįÉÃjzÀ ªÀÄ£ÀĵÀå JgÀqÀÄ gÀÄ¥Á¬Ä ¥ÁªÀ°0iÀÄ DZÀ PÉÊAzÀ FZÀ PÉÊUÉ ¥ÀUÀjUÉÆAqÀÄ  ºÀÄqÀÄQÌUÉÆArwÛzÀÝ. CªÀ£À PÀtÂÚAUÉ CzÀÄ PÀAr¢¯Éè. ªÀÄvÉÛ PÀAqÀPÀÖgÀ£Éà CªÀ£À PÉÊAzÀ vÉPÉÆÌAqÀ. ¸ÀªÀĸÉå ¥ÀjºÁgÀ DvÀÄ. CªÀÅ J¯Éè°è E½0iÉÄPÁÌzÀÄÝ ºÉüÀĪÀzÀÄ PÀAqÀPÀÖgÀAUÉ UÉÆAwzÀÝ PÁgÀt C®è°è ¹Ãn H¢ E¼ÀIJUÉÆArwÛzÀÝ.
J£Àß »AzÁt ¹Ãn°è PÀÆzÀªÀ §¸ï ºÉgÀqÀĪÀUÀ¼Éà ±ÀÄgÀÄ ªÀiÁrzÀÝ ¥ÀAZÁ0iÀÄwUÉ ¸ÀÄ¢Ý PÀAqÀPÀÖgï «¸ïè ºÁQ E¼ÀıÀĪÀ ªÀgÉUÀÆ ªÀÄÄUÀĢݯÉè. ºÉýzÀgÀ£Éßà ªÀÄvÉÛ ªÀÄvÉÛ ºÉüÀĪÀzÀÄ.PÉý ¨ÉÆqÀÄvÀÄÛ.CAvÀÆ 9 UÀAmÉUÉ PÀqÉ0iÀÄ ¹Ö÷à°è E½ªÀUÀ C½0iÀÄ PÁj£ÀvÉæ PÁzÀÄUÉÆArwÛzÀÝ. ±ÀÄ¢Ý ºÉüÀĪÀUÀ EzÀÄ PÀqÉ0iÀiÁt næ¥ï PÀÄqÀÄPÀjAUÉ ªÀiÁAvÀæ E¥ÀàzÀÄ. ºÉaÑ£ÉÆÃªÉ®è ªÀÄzÀ¯Éà §A¢gÀÄvÀÛªÀÅ. J°è0iÀiÁzÀgÀÆ vÉÆÃl°è PÉ®¸À ªÀiÁrUÉÆÃArzÉÆÝÃgÀÄ,PÉ®¸À ©nÖQÌ E°èAzÀ G¦à£ÀAUÀrUÉ ºÉÆÃ¥À PÀqÉà næ¦àAUÉ ºÉÆÃV ºÉÆmÉÖ vÀÄA§ PÀÄqÀÄ¢QÌ PÉʰzÀÝ PÁ¸ÀÄ ªÀÄÄUÀÄzÀ ªÉÄÃ¯É »ÃAUÉ §vÀÛªÀÅ.§¹ìAUÉ PÉÆqÀÄ®Ä ¥ÉÊ¸É E®èzÀÝ¥Àà PÀæªÀĪÀÇ EzÀÄÝ. DgÁzÀgÀÆ UÀÄvÀðzÉÆÃgÀÄ CPÀ¸Áävï §¹ì°èzÀÝgÉ CªÀgÀ Q¸ÉUÉ SÉÆÃvÁ!.0iÀiÁªÀ gÁµÀÖç £Á0iÀÄPÀgÀÆ »ÃAVzÉÆÝÃgÀ GzÁÞgÀPÀÆÌ E¯Éè. ¥À0iÀiÁð0iÀĪÁV EªÀgÀ ZÉÆ°è vÉUÀªÉÇÃgÀ §UÉÎ0iÀÄÆ 0iÀiÁªÀ ¥ÉÃ¥Àgï, n «Ã PÀªÉÄAmïì E¯Éè. ºÉüÀĪÀzÀÄ ±ÀgÁ§Ä RgÁ§Ä, ªÀÄzÀå ¥Á£À ¤µÉÃzsÀ J®è vÉÆÃjPÉUÉ. ªÀÄqɸÁߣÀ ±ÉÆÃµÀuÉ ºÉüÀĪÉÇÃjAUÉ ¨ÉªÀgÀÄ ©aÑ zÀÄqÀÄzÉÆÃgÀ ªÀÄ£É ªÀÄPÉÆÌ G¥ÀªÁ¸À ©Ã¼ÀĪÀzÀÄ, ¸Á®zÀ ¸ÀĽUÉ ©Ã¼ÀĪÀzÀÄ ±ÉÆÃµÀuÉ ºÉý PÁtzÀÝ ºÁAUÉ zÉêÀgÉà ¥ÀgÀzÉ ºÁQzÀÝ£ÉÆÃ?